2017ರ ಗೋರಖ್ಪುರ್ ಬಿಆರ್ಡಿ ಆಸ್ಪತ್ರೆ ದುರಂತ ಪ್ರಕರಣದ ಆರೋಪಿ ಡಾ. ಕಫೀಲ್ ಖಾನ್ ಅವರನ್ನು ಮುಂಬರುವ ಉತ್ತರ ಪ್ರದೇಶ ಎಂಎಲ್ಸಿ ಚುನಾವಣೆಯಲ್ಲಿ ಡಿಯೋರಿಯಾ-ಕುಶಿನಗರ ಕ್ಷೇತ್ರದಿಂದ ಸಮಾಜವಾದಿ ಪಕ್ಷವು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದೆ.
ಕಫಿಲ್ ಖಾನ್ ಅವರು ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಎಸ್ಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ವಕ್ತಾರ ರಾಜೇಂದ್ರ ಚೌಧರಿ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಗೋರಖ್ಪುರ ಮತ್ತು ಮುಜಾಫರ್ಪುರಗಳು ಏಕೆ ಮರುಕಳಿಸುತ್ತಲೇ ಇರಲಿವೆ?
ಈ ಮಧ್ಯೆ ಕಫೀಲ್ ಖಾನ್ ಅವರು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದು, ಅವರ ಭೇಟಿಯ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಅವರು, “ಗೌರವಾನ್ವಿತ ಮಾಜಿ ಮುಖ್ಯಮಂತ್ರಿ ಅಖಲೇಶ್ ಯಾದವ ಸರ್ ಅವರನ್ನು ಭೇಟಿ ಮಾಡಿ ಅವರಿಗೆ ‘ದಿ ಗೋರಖ್ಪುರ್ ಹಾಸ್ಪಿಟಲ್ ಟ್ರಾಜಿಡಿ’ ಪುಸ್ತಕದ ಪ್ರತಿಯನ್ನು ನೀಡಿದೆ” ಎಂದು ಬರೆದಿದ್ದಾರೆ.
Met with Honourable Former Chief Minister Shri @yadavakhilesh sir and presented him a copy of #TheGorakhpurHospitalTragedy 🙏 pic.twitter.com/B22rGgTv97
— Dr Kafeel Khan (@drkafeelkhan) March 15, 2022
ಕಳೆದ ವರ್ಷ ನವೆಂಬರ್ನಲ್ಲಿ, ಉತ್ತರ ಪ್ರದೇಶ ಸರ್ಕಾರವು ಗೋರಖ್ಪುರದ ಬಾಬಾ ರಾಘವ್ ದಾಸ್ (BRD) ವೈದ್ಯಕೀಯ ಕಾಲೇಜಿನ ಶಿಶುವೈದ್ಯ ಡಾ. ಕಫೀಲ್ ಖಾನ್ ಅವರ ಸೇವೆಯನ್ನು ಕೊನೆಗೊಳಿಸಿದೆ. 2017 ರ ಆಗಸ್ಟ್ನಲ್ಲಿ ಅಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹಲವಾರು ಮಕ್ಕಳು ಸಾವನ್ನಪ್ಪಿದ್ದರು.
ಕಫಿಲ್ ಖಾನ್ ಅವರನ್ನು ಸರ್ಕಾರವು ಸಿಎಎ ವಿರೋಧಿ ಸಭೆಯಲ್ಲಿ ಭಾಷಣ ಮಾಡಿದ್ದಕ್ಕಾಗಿ ಬಂಧಿಸಿತ್ತು.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿಗಳಿವರು!
ಇದೊಂದು ಬಹಳ ಒಳ್ಳೆಯ ಕೆಲಸ.