Homeಕರ್ನಾಟಕಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ

ಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ

ಈ ಎಲ್ಲಾ ಸಮಸ್ಯೆಗಳಿಗೂ ವ್ಯವಸ್ಥೆಯೇ ಕಾರಣ. ಒಂದಲ್ಲ ಒಂದು ದಿನ ಜನ ತಿರುಗಿ ಬೀಳ್ತಾರೆ. ಆ ದಿನಕ್ಕೆ ತುಂಬಾ ದೂರವಿಲ್ಲ. ಕೊರೊನಾ ಸಮಯದಲ್ಲಿ ಜನ ಹೆಚ್ಚು ಮಾತಾನಾಡುತ್ತಿದ್ದಾರೆ.

- Advertisement -
- Advertisement -

ನಾವು ಮನುಷ್ಯರಾಗಿ ಬದುಕುವುದು ಯಾವಾಗ…? ಮನುಷ್ಯ ಮನುಷ್ಯನನ್ನು ಯಾವ ಜಾತಿ, ಊರು ಎಂದು ಪ್ರಶ್ನಿಸದೇ ಮನುಷ್ಯ ಎಂದು ನೋಡಿ ಬದುಕುವುದು ಯಾವಾಗ..? ಎಲ್ಲ ಸರಿ ಇದೆ ಎಂದುಕೊಂಡೆ ಬದುಕಬೇಕೆ…? ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ…? ಮಾತನಾಡಬಾರದೇ…? ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿರುವುದು ಕನ್ನಡದ ಖ್ಯಾತ ನಟ ಸತೀಶ್ ನಿನಾಸಂ.

ಖಾಸಗಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರ ಸ್ನೇಹಿತ, ದಿವಂಗತ ನಟ ಸಂಚಾರಿ ವಿಜಯ್ ಬಗ್ಗೆ ಮಾತನಾಡುತ್ತಾ, ಸಮಾಜದಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ. ಜಾತಿ ವ್ಯವಸ್ಥೆಯಿಂದ ಮನುಷ್ಯ ಅನುಭವಿಸುವ ನೋವು, ಅವಮಾನಗಳ ಕುರಿತು ಮಾತನಾಡುತ್ತಾ ‘ಇದೇ ಸಮಾಜ ಮಾಡಿದ ಅವಮಾನ, ನೋವಿನಿಂದ ನಟ ಸಂಚಾರಿ ವಿಜಯ್ ಯಾತನೆ ಅನುಭವಿಸಬೇಕಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’ಸಮಾಜದಲ್ಲಿ ಶಿಕ್ಷಣ ಪಡೆದರೂ ಮನುಷ್ಯನಲ್ಲಿ ಯಾವ ಬದಲಾವಣೆಯಾಗಿದೆ? ಪ್ರಾಣಿಗಳಲ್ಲಿ ಆಗಿರುವ ಬೆಳವಣಿಗೆ ಮನುಷ್ಯನಲ್ಲಿಲ್ಲ. ಸಮಾಜ ಯಾವಾಗ ಬದಲಾಗುತ್ತದೆ…? ಎಲ್ಲ ಸರಿಯಿದೆ ಎಂದು ಮುಚ್ಚಿಟ್ಟುಕೊಳ್ಳುವುದು ಸರಿಯಲ್ಲ. ಈಗ ವಿಜಿಯನ್ನು ಕರ್ನಾಟಕದ ಹೆಮ್ಮೆ ಎನ್ನುವಾಗ, ಆತನಿಗೆ ನಾವು ಕೊಟ್ಟ ಅವಮಾನಗಳನ್ನು, ನೋವನ್ನು ನೆನಪಿಸಿಕೊಳ್ಳಬೇಕು. ಇವತ್ತು ಅವರಿಲ್ಲ ಎಂದು ಕಣ್ಣೀರಿಡುವಾಗ ಅದಕ್ಕೆ ನಾವು ಕೂಡ ಕಾರಣ ಎಂಬುದನ್ನು ತಿಳಿಯಬೇಕು. ಈ ಸಮಾಜ, ವ್ಯವಸ್ಥೆ ಕಾರಣ ಕೂಡ ಆತನಿಲ್ಲದಕ್ಕೆ ಕಾರಣ’ ಎಂದು ನಟ ಸತೀಶ್ ನಿನಾಸಂ ಹೇಳಿದ್ದಾರೆ.

ಇದನ್ನೂ ಓದಿ: 10 ರಲ್ಲಿ8 ಭಾರತೀಯ ಅಮೆರಿಕನ್ನರು ಮೇಲ್ಜಾತಿ ಅಥವಾ ಸಾಮಾನ್ಯ ಜಾತಿಯೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ – ಸಮೀಕ್ಷೆ

’ನಾವು ಮನುಷ್ಯರಾಗಿ ಬದುಕುವುದು ಯಾವಾಗ…? ಮನುಷ್ಯ ಮನುಷ್ಯನನ್ನು ಯಾವ ಜಾತಿ, ಊರು ಎಂದು ಪ್ರಶ್ನಿಸದೇ ಮನುಷ್ಯ ಎಂದು ನೋಡಿ ಬದುಕುವುದು ಯಾವಾಗ..? ಎಲ್ಲ ಸರಿ ಇದೆ ಎಂದುಕೊಂಡೆ  ಬದುಕುವುದು ಎಷ್ಟು ದಿನ….? ನನ್ನಿಂದ ತಪ್ಪಾಗಿದೆ..ನಿಮ್ಮಿಂದ ತಪ್ಪಾಗಿದೆ. ಸರಿ ಪಡಿಸಿಕೊಳ್ಳೋಣ’ ಎಂದಿದ್ದಾರೆ.

’ಸಮಾಜದಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕಾ…? ಮಾತನಾಡಬಾರದ…? ನಾವು 21ನೇ ಶತಮಾನದಲ್ಲಿ, ಈ ಕಾಲದಲ್ಲಿಯೂ ಎಲ್ಲಾ ರೀತಿಯಲ್ಲಿ ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಮುಂದುವರೆದರೂ ಮನುಷ್ಯತ್ವದ ವಿಚಾರದಲ್ಲಿ ಪ್ರಾಣಿಗಳಿಗಿಂತ  ಹಿಂದಿದ್ದೇವೆ. ಮನುಷ್ಯನಲ್ಲಿ ಕೆಟ್ಟ, ಕೊಳಕು, ವಿಷ ತುಂಬಿದ ಮನಸ್ಸು ಇದೆ’ ಎಂದು ಜಾತಿ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ.

’ಜಾತಿ ವಿಷಯದಲ್ಲಿ ಸಂಚಾರಿ ವಿಜಯ್ ತುಂಬಾ ನೋವುಗಳನ್ನು ಅನುಭವಿಸಿದ್ದಾರೆ. ಇದರಲ್ಲಿ ಸುಳ್ಳು ಇಲ್ಲ. ಈ ಬಗ್ಗೆ ವೇದಿಕೆ, ಸಮಯ ಸಿಗಲಿ ಎಳೆ ಎಳೆಯಾಗಿ ಆತನಿಗಾದ ನೋವು, ಅವಮಾನಗಳನ್ನು ತಿಳಿಸುತ್ತೇನೆ. ಆತ ಮಾತನಾಡಲು ಹೆದರುತ್ತಿದ್ದ. ಏಕೆಂದರೆ ಸಮಾಜದಲ್ಲಿ ಅಂತಹ ಪರಿಸ್ಥತಿ ಇದೆ. ಆದರೆ, ನಾನು ಮಾತನಾಡುತ್ತೇನೆ. ಏನಾದರೂ ಆಗಲಿ ಎದುರಿಸುತ್ತೇನೆ’ ಎಂದಿದ್ದಾರೆ.

’ನಮ್ಮ ಸಮಸ್ಯೆಳ ಬಗ್ಗೆ, ನಮಗಾಗಿರುವ ನೋವುಗಳ ಬಗ್ಗೆ ಮಾತನಾಡಿದರೆ, ಒಂದು ವರ್ಗಕ್ಕೆ ನಮ್ಮನ್ನು ಸೀಮಿತಗೊಳಿಸುವುದು, ಇದೊಂದು ಬೇರೆ ವರ್ಗ ಅಂತ ಪಕ್ಕಕ್ಕೆ ಇಡುವುದು ಮಾಡ್ತಾರೆ. ಆತನ ಸಿನಿಮಾಗಳನ್ನು ನೋಡಬೇಡಿ, ಅವನು ಸರಿಯಿಲ್ಲ. ಅವನು ಹೀಗೆಯೇ ಎಂದು ಹೇಳುತ್ತಾರೆ. ನನ್ನ ವಿರುದ್ಧ ಮಾತಾಡುವವರನ್ನು ಮತ್ತೊಂದು ಕೆಟಗರಿ ಮಾಡುತ್ತಾರೆ. ಆದರೆ, ಇವರು ಯಾಕೆ ಮಾತನಾಡುತ್ತಿದ್ದಾರೆ ಎಂಬುದನ್ನು ವಿಚಾರ ಮಾಡುವುದಿಲ್ಲ’ ಎಂದು ಸಮಸ್ಯೆಗಳ ಬಗ್ಗೆ ಮಾತನಾಡುವವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಮನಸ್ಥಿತಿ ಕುರಿತು ಟೀಕಿಸಿದ್ದಾರೆ.

ಇದನ್ನೂ ಓದಿ: ಮೇಲ್ಜಾತಿ ಹುಡುಗಿಗೆ ಮೊಬೈಲ್‌ ನೀಡಿದ್ದಕ್ಕೆ ದಲಿತ ಯುವಕರ ತಲೆ ಬೋಳಿಸಿ, ಎಂಜಲು ತಿನ್ನಿಸಿದ ಅಮಾವೀಯ ಘಟನೆ

’ಮನುಷ್ಯ ತಾನೇ ಶ್ರೇಷ್ಠ ಎಂಬುದನ್ನು ಎಲ್ಲಿಯವರೆಗೆ ಬಿಡುವುದಿಲ್ಲವೂ ಅಲ್ಲಿಯವರೆಗೆ ಮನುಷ್ಯ ಉದ್ದಾರ ಆಗುವುದಿಲ್ಲ. ಮನುಷ್ಯನ ಕೊಳಕು ಮನಸ್ಥಿತಿ ಬದಲಾಗಲ್ಲ. ಭೂಮಿ ನಾಶವಾಗುತ್ತಿರುವುದು ಮನುಷ್ಯನಿಂದಲೇ, ಮನುಷ್ಯ ನಾಶವಾಗುತ್ತಿರುವುದು ಮನುಷ್ಯನಿಂದಲೇ. ಪ್ರಕೃತಿ, ಪ್ರಾಣಿಗಳಿಂದ ಅಲ್ಲ’ ಎಂದು ಒತ್ತಿ ಹೇಳಿದ್ದಾರೆ.

’ಈ ಎಲ್ಲಾ ಸಮಸ್ಯೆಗಳಿಗೂ ವ್ಯವಸ್ಥೆಯೇ ಕಾರಣ. ಒಂದಲ್ಲ ಒಂದು ದಿನ ಜನ ತಿರುಗಿ ಬೀಳ್ತಾರೆ. ಆ ದಿನಕ್ಕೆ ತುಂಬಾ ದೂರವಿಲ್ಲ. ಕೊರೊನಾ ಸಮಯದಲ್ಲಿ ಜನ ಹೆಚ್ಚು ಮಾತಾನಾಡುತ್ತಿದ್ದಾರೆ. ಈಗಾಗಲೇ ಜನ ತಿರುಗಿ ಬಿದ್ದಿದ್ದಾರೆ. ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದರೇ ನನ್ನನ್ನು ನಾಳೆ ಸಾಯಿಸಬಹುದು. ನಿಮ್ಮನ್ನು ನಾಡಿದ್ದು, ಆದರೆ ಮಾತನಾಡುವುದನ್ನು ಮಾತನಾಡಬೇಕು’ ಎಂದು ಸತೀಶ್ ನಿನಾಸಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸತೀಶ್ ನಿನಾಸಂ ಅವರ ಹೇಳಿಕೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನಿನಾಸಂ ಅವರ ಅಭಿಪ್ರಾಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ನನ್ನನ್ನು 4 ಗಂಟೆಗಳ ಕಾಲ ಪ್ರಶ್ನಿಸಲಾಯಿತು, ಹೋರಾಟ ಮುಂದುವರಿಯುತ್ತದೆ: ನಟ ಚೇತನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ಜಾತಿ ವ್ಯವಸ್ಥೆ ಒಂದು ಸಮಾಜಕ್ಕೆ ಅಂಟಿಕೊಂಡ ರೋಗ. ನನ್ನ ಜಾತಿಗೆ ಅವಮಾನ ನಿನ್ನ ಜಾತಿಗೆ ಅವಮಾನ ಮತ್ತೊಂದು ಜಾತಿಯ ವ್ಯಕ್ತಿ ಮಾತುಗಳು ಅಡಿದಾಗ ಕೆಲವು ಜನರು ವಿರೊದ ಮಾತುಗಳು ಅಡುತ್ತಾರೆ. ಆದರೆ ತನ್ನ ಜಾತಿಯ ಜನರು ಮತ್ತೊಂದು ಜಾತಿಯ ವ್ಯಕ್ತಿ ಬಗ್ಗೆ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುವ ಬಗ್ಗೆ ಮಾತುಗಳು ಅಡುತ್ತಿಲ್ಲಾ. ಯಾವುದೇ ಜಾತಿಯ ವ್ಯಕ್ತಿ ಜಾತಿವಾದಿ ಮಾಡಿದರು ಅವನು ಕೊಳಕು ಮನಸ್ಸಿನ ವ್ಯಕ್ತಿ . ಆಗುತ್ತಾನೆ ಭಾರತೀಯ ಜಾತಿ ವ್ಯವಸ್ಥೆ ಹೊಗದ ಹೊರತು ಭಾರತ ಎಷ್ಟೇ ಅಭಿವೃದ್ಧಿ ಆದರು ಅದು ವ್ಯರ್ಥ ಅನಿಸುತ್ತದೆ. ದಯವಿಟ್ಟು ಸಮ ಸಮಾಜ ಕಲ್ಯಾಣ ಸಮಾಜ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಕೈ ಜೊಡಿಸೊಣ

  2. ಭಾರತದ ಅಭಿವೃದ್ಧಿ ಅಂದರೆ ಸಮ ಸಮಾಜದ ನಿರ್ಮಾಣ.
    ಬಸವಾದಿ ಶರಣರ ಬಯಸಿದ ಸಮಾಜ.
    ಬುದ್ಧ ಬಯಸಿದ ಸಮಾಜ.
    ಪೆರಿಯಾರ್ ಬಯಸಿದ ಸಮಾಜ.
    ನಾನು ಮಾತ್ರ ಶೈಕ್ಷಣಿಕ ಭಾರತ ಬಯಸುತ್ತೆನೆ.
    ಮಾನವೀಯ ಮೌಲ್ಯಗಳನ್ನು ಹೊಂದಿರುವ ಭಾರತ ಬಯಸುತ್ತೇನೆ.
    ಪ್ರತಿ ವ್ಯಕ್ತಿ ಜಾತಿಯ ಮುಕ್ತಿ ಪಡೆಯಲು ಪ್ರಯತ್ನ ಮಾಡಬೇಕು.
    ಇವನಾರವ ಇವ ನಮ್ಮವ ಅನ್ನುವ ಸಮಾಜ ನಿರ್ಮಾಣ ಮಾಡಬೇಕು.
    ಪ್ರತಿಯೊಂದು ವಿದ್ಯಾವಂತ ವ್ಯಕ್ತಿ ಸಮಾಜದ ಜಾತಿ ವ್ಯವಸ್ಥೆ ನಾಶಕ್ಕೆ ಪ್ರಯತ್ನ ಮಾಡಬೇಕು

  3. ನೀನಾಸಂ ಸತೀಶ್ ರವರ ನಿಲುವು ಸ್ವಾಗತಾರ್ಹ. ನಾವು ಕೊಚ್ಚೆಗುಂಡಿಯಲ್ಲಿ ಬದುಕುತ್ತಿದ್ದರೂ, “ಇದೇ ಸ್ವರ್ಗ” ಎಂದು ಸುಳ್ಳು ಹೇಳಿಕೊಂಡು ಎಷ್ಟು ದಿನ ತಾನೇ ಬದುಕಲು ಸಾದ್ಯ? ಸತ್ಯವನ್ನು ಒಂದಲ್ಲಾ ಒಂದು ದಿನ ಹೇಳಬೇಕಾಗಿದೆ.

  4. ಹನ್ನೆರಡನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಯಾವ ರೀತಿ ಇತ್ತೊ ಇವತ್ತಿಗೂ ಅದೇ ರೀತಿ ಇದೆ. ಯಾವುದೇ ಬದಲಾವಣೆ ಆಗಿಲ್ಲ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...