HomeಮುಖಪುಟCOW-ACTION ವರದಿ: ಗಾಯ್ ಪರೀಕ್ಷಾ ಕ್ಯಾನ್ಸಲ್, ಗಾಯ್‌ವಾಲಾ ಗಾಯಬ್!

COW-ACTION ವರದಿ: ಗಾಯ್ ಪರೀಕ್ಷಾ ಕ್ಯಾನ್ಸಲ್, ಗಾಯ್‌ವಾಲಾ ಗಾಯಬ್!

- Advertisement -
- Advertisement -

‘ಇದೇ ಫೆಬ್ರವರಿ 25ರಂದು ನಡೆಯಬೇಕಾಗಿದ್ದ ಗಾಯ್ ಪರೀಕ್ಷಾ (ಗೋ-ಪರೀಕ್ಷೆ) ರದ್ದು ಮಾಡಿದ್ದಕ್ಕೆ ಪರೀಕ್ಷೆಗೆ ನೋಂದಾಯಿಸಿದ್ದ ಐದುವರೆ ಲಕ್ಷ ಜನರಲ್ಲದೇ ಅವರ ಕುಟುಂಬಗಳ ಸದಸ್ಯರು ನೊಂದಿದ್ದಾರೆ ಎಂದು COW-ACTION ಪೋರ್ಟಲ್ ವರದಿ ಮಾಡಿದೆ.

‘ನೋಡಿ, ನಾನು ಹಸುವನ್ನು ಹತ್ತಿರದಿಂದ ಎಂದೂ ನೋಡಿಲ್ಲ. ಆದರೆ, ಕಾಮಧೇನು ಆಯೋಗ್ ಹಸುವಿನ ಪ್ರಾಮುಖ್ಯತೆ ಕುರಿತು ಪ್ರಕಟಿಸಿದ್ದ ಸಿಲಬಸ್ ನೋಡಿದ ನಂತರ ಈ ಪರೀಕ್ಷೆಗೆ ಹಾಜರಾಗಲೇಬೇಕು ಅನಿಸಿತು’ ಎಂದು ಧಾರವಾಡದ ವಂದನಾ ಹೇಳಿದ್ದಾರೆ.

‘ಹಸುವಿನ ಸೆಗಣಿಯಲ್ಲಿ ವಿಕಿರಣ ಶಕ್ತಿ ಇರುವ ಬಗ್ಗೆ ನಮ್ಮ ಕಣ್ಣು ತೆರೆಸಿದ ಕಾಮಧೇನು ಆಯೋಗಕ್ಕೆ ನಾವು ಋಣಿಯಾಗಿದ್ದೇವೆ. ಈ ಸಲ ನನ್ನ ಮಗ ಗೋವಿಂದನ ಜೊತೆಗೆ ನಾನೂ ಪರೀಕ್ಷೆಗೆ ನೊಂದಾಯಿಸಿದ್ದೆ. ಆದರೆ ದೇಶದ್ರೋಹಿಗಳ ಅಪಪ್ರಚಾರದಿಂದ ಈ ಐತಿಹಾಸಿಕ ಪರೀಕ್ಷೆ ರದ್ದಾಗಿದ್ದನ್ನು ನಾನು ಖಂಡಿಸುತ್ತೇನೆ’ ಎಂದು ದಾವಣಗೆರೆಯ ಗೃಹಿಣಿ ಬಿಂದಕ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಏನೇನು ಪ್ರಶ್ನೆ ಬರಬಹುದು ಎಂದೆಲ್ಲ ಗೆಸ್ ಮಾಡಿದ್ದ ನಾವು ಅದಕ್ಕಾಗಿ ತಯ್ಯಾರಿ ನಡೆಸಿದ್ದೆವು. ನಮ್ಮ ಯುನಿವರ್ಸಿಟಿಯ ಖಾಲಿ ಜಾಗಗಳಲ್ಲಿ ಮಲಗುವ ಹಸುಗಳ ಬಳಿ ಹೋಗಿ ಸ್ಟಡಿ ಮಾಡಿದ್ದೆವು. ಮೊದಲೆಲ್ಲ ಸೆಗಣಿ ಹಸಿರು ಬಣ್ಣದ್ದು ಎಂದು ತಿಳಿದಿದ್ದೆವು. ಪರೀಕ್ಷೆ ಮಾಡಿದಾಗ, ಸೆಗಣಿ ಕಂದು ಮಿಶ್ರಿತ ಹಸಿರು, ಹಸಿರು ಮಿಶ್ರಿತ ಕಪ್ಪು… ಹೀಗೆ ಡಿಫರಂಟ್ ಕಲರ್ ಹೊಂದಿರುವುದನ್ನು ಗಮನಿಸಿದೆವು’ ಎಂದು ಬೆಂಗಳೂರು ವಿವಿಯ ಮನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಪ್ರಗ್ಯಾ ಹೇಳಿದ್ದಾರೆ.

‘ಪಂಚಗವ್ಯ-ಅಂದರೆ ಹಸುವಿನ ಸೆಗಣಿ, ಮೂತ್ರ ಇವೆಲ್ಲ ಆರೋಗ್ಯವರ್ಧಕ ಎನ್ನಲಾಗಿದೆ. ನಿಮ್ಮ ಸ್ವಂತ ಅಭಿಪ್ರಾಯವೇನು?’ ಎಂದು ಹಲವರನ್ನು COW-ACTION ಪ್ರಶ್ನಿಸಿದೆ.
‘ಖಂಡಿತ, ಆರೋಗ್ಯವರ್ಧಕಗಳು.. ನಾನು ಟೆಸ್ಟ್ ಮಾಡಲು 15 ದಿನದಿಂದ ದಿನಕ್ಕೆ ಮೂರು ಹೊತ್ತು 10 ಎಂಎಲ್ ಗೋಮೂತ್ರ ಸೇವಿಸುತ್ತಿದ್ದೇನೆ… ಫುಲ್ ರಿಲ್ಯಾಕ್ಸ್ ಆಗಿದ್ದೇನೆ’ ಎಂದು ಸುಳ್ಯದ ರಾಮಚಂದ್ರಭಟ್ಟರು ತಿಳಿಸಿದ್ದಾರೆ.

‘ಸೂರ್ಯನ ಕಿರಣಗಳನ್ನು ಡುಬ್ಬದಲ್ಲಿ ಹಿಡಿದು ಇಟ್ಟುಕೊಂಡು ಚಿನ್ನವನ್ನೇ ಉತ್ಪಾದಿಸುವ ಹಸುವಿನ ಪಂಚಗವ್ಯ ಅದ್ಭುತ… ಹಸುವಿನ ಮೂತ್ರ ನೋಡಿದ್ದೀರಾ? ಅದು ಹಳದಿ ಬಣ್ಣ ಇರಲು ಕಾರಣ, ಅದರಲ್ಲಿ ಚಿನ್ನದ ಅಂಶವಿರುತ್ತದೆ’ ಎಂದು ಮೈಸೂರಿನ ಬಿಎಸ್‌ಸಿ ವಿದ್ಯಾರ್ಥಿ ಅಕುಲ್ ಅಭಿಪ್ರಾಯಪಟ್ಟಿದ್ದಾರೆ,

‘ಜ್ವರಪೀಡಿಯ ಮನುಷ್ಯನ ಮೂತ್ರವೂ ಹಳದಿ ಇರುತ್ತಲ್ಲ’ ಎಂದು ಕೊಂಕು ನುಡಿಯುವವರ ಬಗ್ಗೆ ಕಿಡಿ ಕಾರಿರುವ ಬೀದರ್‌ನ ಗಂಗಾ, ‘ಛೇ, ಮಾನವ ಮೂತ್ರವನ್ನು ನಮ್ಮ ಗೋಮಾತೆಯ ಮೂತ್ರಕ್ಕೆ ಹೋಲಿಸಿತ್ತಾರಲ್ಲ? ದೆಹಲಿ ಆಗಿದ್ದರೆ ದೇಶದ್ರೋಹ ಕೇಸ್ ಜಡಿದು ಒಳಗೆ ಹಾಕುತ್ತಿದ್ದರು’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಈಗ ಕಾಮಧೇನು ಆಯೋಗ್‌ನ ಅಧ್ಯಕ್ಷ ವಲ್ಲಭ್‌ಭಾಯ್ ಕಥಿರಿಯಾ ಯಾರ ಫೋನನ್ನು ರಿಸೀವ್ ಮಾಡುತ್ತಿಲ್ಲ. ‘ಗಾಯ್‌ವಾಲಾ ಗಾಯಬ್’ ಎಂಬ ಟೀಕೆಗೆ ಸ್ಪಷ್ಟೀಕರಣ ನೀಡಿರುವ COW-ACTION ಪೋರ್ಟಲ್, ಕಥಿರಿಯಾ ಅವಧಿ ಫೆ. 20ಕ್ಕೆ ಮುಗಿದಿದೆ. ಗಾಯ್ ಪರೀಕ್ಷಾ ರದ್ದಾಗಿದ್ದಕ್ಕೆ ನೊಂದಿರುವ ಅವರು, ಹಿಮಾಲಯದ ತಪ್ಪಲಿನಲ್ಲಿ ಐದಾರು ಗೋಮಾತೆಯರೊಂದಿಗೆ ಗೋ-ತಪಸ್ ನಡೆಸುತ್ತಿದ್ದಾರೆ ಎಂದು ಹೇಳಿದೆ.

‘ಎರಡು ವರ್ಷದಲ್ಲಿ 750 ಕೋಟಿ ಬಜೆಟ್ ಅನ್ನು ಕಾಮಧೇನು ಆಯೋಗ್ ಏನು ಮಾಡಿತು?’ ಎಂದು ಹಿರಿಯ ನಾಗರಿಕರೊಬ್ಬರು ಕೇಳಿದ ಪ್ರಶ್ನೆಗೆ COW-ACTION ಉತ್ತರಿಸಿದ್ದು, ‘ನೋಡಿ ತಾತ, ಗೋಮಾತೆಯ ಬಗ್ಗೆ ಎಷ್ಟೊಂದು ಪ್ರಚಾರ ಮಾಡಲಾಗಿದೆ…. ಎಷ್ಟೊಂದು ಜಾಹಿರಾತು ನೀಡಲಾಗಿದೆ… ಎಷ್ಟೋ ಗೋರಕ್ಷಕರಿಗೆ ನಗದು ಬಹುಮಾನ ನೀಡಲಾಗಿದೆ’ ಎಂದು ವಿವರಿಸಿದೆ.
ಆಯೋಗ್‌ನ ಕಚೇರಿಯಿಂದ ನಾವು ಎಗರಿಸಿದ ಡಾಕ್ಯುಮೆಂಟ್ ಒಂದರ ಪ್ರಕಾರ, ಗೋ-ಪರೀಕ್ಷೆಗೆ ಸಿದ್ಧವಾಗಿದ್ದ ಪ್ರಶ್ನೆಗಳ ಸ್ಯಾಂಪಲ್ ಹೀಗಿವೆ:

1. ಮಗುವೊಂದು ಹೇಳುವ ವಾಕ್ಯವಿದು. ಇದರಲ್ಲಿ ಯಾವುದು ಸರಿ?
ಎ. ‘ಯವ್ವಾ ಆಕಳ ಸೆಗಣಿ ಹಾಕೈತಿ ನೋಡ್ಬೆ’
ಬಿ. ’ಅಮ್ಮಾ, ಹಸು ಸೆಗಣಿ ಹಾಕಿದೆ’
ಸಿ. ‘ಅಮ್ಮ, ಗೋಮಾತೆ ಪಂಚಗವ್ಯದ ಘನ ಪದಾರ್ಥವನ್ನು ಧರೆಗೆ ಇಳಿಸಿದ್ದಾಳೆ. ವಿಕಿರಣ ಹೊರಹೊಮ್ಮುತ್ತಿದೆ ಅಮ್ಮ’
ಡಿ. ‘ಬೇ ಯವ್ವಾ ಆಕ್ಳ ಹೇತೈತಿ ನೋಡು’

ಪರೀಕ್ಷೆ ರದ್ದಾಗಿದ್ದರೂ ಮುಂದೆ ನಡೆಯಲಿದೆಯಂತೆ. ಈಗಲೇ ತಯ್ಯಾರಿ ಶುರು ಮಾಡಿ ಭಕ್ತರೇ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಮದ್ದೂರು ಪೌರಕಾರ್ಮಿಕ ಆತ್ಮಹತ್ಯೆ ಪ್ರಕರಣ: ಇಬ್ಬರು ಪುರಸಭೆ ಅಧಿಕಾರಿಗಳ ಅಮಾನತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...