HomeಮುಖಪುಟCOW-ACTION ವರದಿ: ಗಾಯ್ ಪರೀಕ್ಷಾ ಕ್ಯಾನ್ಸಲ್, ಗಾಯ್‌ವಾಲಾ ಗಾಯಬ್!

COW-ACTION ವರದಿ: ಗಾಯ್ ಪರೀಕ್ಷಾ ಕ್ಯಾನ್ಸಲ್, ಗಾಯ್‌ವಾಲಾ ಗಾಯಬ್!

- Advertisement -
- Advertisement -

‘ಇದೇ ಫೆಬ್ರವರಿ 25ರಂದು ನಡೆಯಬೇಕಾಗಿದ್ದ ಗಾಯ್ ಪರೀಕ್ಷಾ (ಗೋ-ಪರೀಕ್ಷೆ) ರದ್ದು ಮಾಡಿದ್ದಕ್ಕೆ ಪರೀಕ್ಷೆಗೆ ನೋಂದಾಯಿಸಿದ್ದ ಐದುವರೆ ಲಕ್ಷ ಜನರಲ್ಲದೇ ಅವರ ಕುಟುಂಬಗಳ ಸದಸ್ಯರು ನೊಂದಿದ್ದಾರೆ ಎಂದು COW-ACTION ಪೋರ್ಟಲ್ ವರದಿ ಮಾಡಿದೆ.

‘ನೋಡಿ, ನಾನು ಹಸುವನ್ನು ಹತ್ತಿರದಿಂದ ಎಂದೂ ನೋಡಿಲ್ಲ. ಆದರೆ, ಕಾಮಧೇನು ಆಯೋಗ್ ಹಸುವಿನ ಪ್ರಾಮುಖ್ಯತೆ ಕುರಿತು ಪ್ರಕಟಿಸಿದ್ದ ಸಿಲಬಸ್ ನೋಡಿದ ನಂತರ ಈ ಪರೀಕ್ಷೆಗೆ ಹಾಜರಾಗಲೇಬೇಕು ಅನಿಸಿತು’ ಎಂದು ಧಾರವಾಡದ ವಂದನಾ ಹೇಳಿದ್ದಾರೆ.

‘ಹಸುವಿನ ಸೆಗಣಿಯಲ್ಲಿ ವಿಕಿರಣ ಶಕ್ತಿ ಇರುವ ಬಗ್ಗೆ ನಮ್ಮ ಕಣ್ಣು ತೆರೆಸಿದ ಕಾಮಧೇನು ಆಯೋಗಕ್ಕೆ ನಾವು ಋಣಿಯಾಗಿದ್ದೇವೆ. ಈ ಸಲ ನನ್ನ ಮಗ ಗೋವಿಂದನ ಜೊತೆಗೆ ನಾನೂ ಪರೀಕ್ಷೆಗೆ ನೊಂದಾಯಿಸಿದ್ದೆ. ಆದರೆ ದೇಶದ್ರೋಹಿಗಳ ಅಪಪ್ರಚಾರದಿಂದ ಈ ಐತಿಹಾಸಿಕ ಪರೀಕ್ಷೆ ರದ್ದಾಗಿದ್ದನ್ನು ನಾನು ಖಂಡಿಸುತ್ತೇನೆ’ ಎಂದು ದಾವಣಗೆರೆಯ ಗೃಹಿಣಿ ಬಿಂದಕ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಏನೇನು ಪ್ರಶ್ನೆ ಬರಬಹುದು ಎಂದೆಲ್ಲ ಗೆಸ್ ಮಾಡಿದ್ದ ನಾವು ಅದಕ್ಕಾಗಿ ತಯ್ಯಾರಿ ನಡೆಸಿದ್ದೆವು. ನಮ್ಮ ಯುನಿವರ್ಸಿಟಿಯ ಖಾಲಿ ಜಾಗಗಳಲ್ಲಿ ಮಲಗುವ ಹಸುಗಳ ಬಳಿ ಹೋಗಿ ಸ್ಟಡಿ ಮಾಡಿದ್ದೆವು. ಮೊದಲೆಲ್ಲ ಸೆಗಣಿ ಹಸಿರು ಬಣ್ಣದ್ದು ಎಂದು ತಿಳಿದಿದ್ದೆವು. ಪರೀಕ್ಷೆ ಮಾಡಿದಾಗ, ಸೆಗಣಿ ಕಂದು ಮಿಶ್ರಿತ ಹಸಿರು, ಹಸಿರು ಮಿಶ್ರಿತ ಕಪ್ಪು… ಹೀಗೆ ಡಿಫರಂಟ್ ಕಲರ್ ಹೊಂದಿರುವುದನ್ನು ಗಮನಿಸಿದೆವು’ ಎಂದು ಬೆಂಗಳೂರು ವಿವಿಯ ಮನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಪ್ರಗ್ಯಾ ಹೇಳಿದ್ದಾರೆ.

‘ಪಂಚಗವ್ಯ-ಅಂದರೆ ಹಸುವಿನ ಸೆಗಣಿ, ಮೂತ್ರ ಇವೆಲ್ಲ ಆರೋಗ್ಯವರ್ಧಕ ಎನ್ನಲಾಗಿದೆ. ನಿಮ್ಮ ಸ್ವಂತ ಅಭಿಪ್ರಾಯವೇನು?’ ಎಂದು ಹಲವರನ್ನು COW-ACTION ಪ್ರಶ್ನಿಸಿದೆ.
‘ಖಂಡಿತ, ಆರೋಗ್ಯವರ್ಧಕಗಳು.. ನಾನು ಟೆಸ್ಟ್ ಮಾಡಲು 15 ದಿನದಿಂದ ದಿನಕ್ಕೆ ಮೂರು ಹೊತ್ತು 10 ಎಂಎಲ್ ಗೋಮೂತ್ರ ಸೇವಿಸುತ್ತಿದ್ದೇನೆ… ಫುಲ್ ರಿಲ್ಯಾಕ್ಸ್ ಆಗಿದ್ದೇನೆ’ ಎಂದು ಸುಳ್ಯದ ರಾಮಚಂದ್ರಭಟ್ಟರು ತಿಳಿಸಿದ್ದಾರೆ.

‘ಸೂರ್ಯನ ಕಿರಣಗಳನ್ನು ಡುಬ್ಬದಲ್ಲಿ ಹಿಡಿದು ಇಟ್ಟುಕೊಂಡು ಚಿನ್ನವನ್ನೇ ಉತ್ಪಾದಿಸುವ ಹಸುವಿನ ಪಂಚಗವ್ಯ ಅದ್ಭುತ… ಹಸುವಿನ ಮೂತ್ರ ನೋಡಿದ್ದೀರಾ? ಅದು ಹಳದಿ ಬಣ್ಣ ಇರಲು ಕಾರಣ, ಅದರಲ್ಲಿ ಚಿನ್ನದ ಅಂಶವಿರುತ್ತದೆ’ ಎಂದು ಮೈಸೂರಿನ ಬಿಎಸ್‌ಸಿ ವಿದ್ಯಾರ್ಥಿ ಅಕುಲ್ ಅಭಿಪ್ರಾಯಪಟ್ಟಿದ್ದಾರೆ,

‘ಜ್ವರಪೀಡಿಯ ಮನುಷ್ಯನ ಮೂತ್ರವೂ ಹಳದಿ ಇರುತ್ತಲ್ಲ’ ಎಂದು ಕೊಂಕು ನುಡಿಯುವವರ ಬಗ್ಗೆ ಕಿಡಿ ಕಾರಿರುವ ಬೀದರ್‌ನ ಗಂಗಾ, ‘ಛೇ, ಮಾನವ ಮೂತ್ರವನ್ನು ನಮ್ಮ ಗೋಮಾತೆಯ ಮೂತ್ರಕ್ಕೆ ಹೋಲಿಸಿತ್ತಾರಲ್ಲ? ದೆಹಲಿ ಆಗಿದ್ದರೆ ದೇಶದ್ರೋಹ ಕೇಸ್ ಜಡಿದು ಒಳಗೆ ಹಾಕುತ್ತಿದ್ದರು’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಈಗ ಕಾಮಧೇನು ಆಯೋಗ್‌ನ ಅಧ್ಯಕ್ಷ ವಲ್ಲಭ್‌ಭಾಯ್ ಕಥಿರಿಯಾ ಯಾರ ಫೋನನ್ನು ರಿಸೀವ್ ಮಾಡುತ್ತಿಲ್ಲ. ‘ಗಾಯ್‌ವಾಲಾ ಗಾಯಬ್’ ಎಂಬ ಟೀಕೆಗೆ ಸ್ಪಷ್ಟೀಕರಣ ನೀಡಿರುವ COW-ACTION ಪೋರ್ಟಲ್, ಕಥಿರಿಯಾ ಅವಧಿ ಫೆ. 20ಕ್ಕೆ ಮುಗಿದಿದೆ. ಗಾಯ್ ಪರೀಕ್ಷಾ ರದ್ದಾಗಿದ್ದಕ್ಕೆ ನೊಂದಿರುವ ಅವರು, ಹಿಮಾಲಯದ ತಪ್ಪಲಿನಲ್ಲಿ ಐದಾರು ಗೋಮಾತೆಯರೊಂದಿಗೆ ಗೋ-ತಪಸ್ ನಡೆಸುತ್ತಿದ್ದಾರೆ ಎಂದು ಹೇಳಿದೆ.

‘ಎರಡು ವರ್ಷದಲ್ಲಿ 750 ಕೋಟಿ ಬಜೆಟ್ ಅನ್ನು ಕಾಮಧೇನು ಆಯೋಗ್ ಏನು ಮಾಡಿತು?’ ಎಂದು ಹಿರಿಯ ನಾಗರಿಕರೊಬ್ಬರು ಕೇಳಿದ ಪ್ರಶ್ನೆಗೆ COW-ACTION ಉತ್ತರಿಸಿದ್ದು, ‘ನೋಡಿ ತಾತ, ಗೋಮಾತೆಯ ಬಗ್ಗೆ ಎಷ್ಟೊಂದು ಪ್ರಚಾರ ಮಾಡಲಾಗಿದೆ…. ಎಷ್ಟೊಂದು ಜಾಹಿರಾತು ನೀಡಲಾಗಿದೆ… ಎಷ್ಟೋ ಗೋರಕ್ಷಕರಿಗೆ ನಗದು ಬಹುಮಾನ ನೀಡಲಾಗಿದೆ’ ಎಂದು ವಿವರಿಸಿದೆ.
ಆಯೋಗ್‌ನ ಕಚೇರಿಯಿಂದ ನಾವು ಎಗರಿಸಿದ ಡಾಕ್ಯುಮೆಂಟ್ ಒಂದರ ಪ್ರಕಾರ, ಗೋ-ಪರೀಕ್ಷೆಗೆ ಸಿದ್ಧವಾಗಿದ್ದ ಪ್ರಶ್ನೆಗಳ ಸ್ಯಾಂಪಲ್ ಹೀಗಿವೆ:

1. ಮಗುವೊಂದು ಹೇಳುವ ವಾಕ್ಯವಿದು. ಇದರಲ್ಲಿ ಯಾವುದು ಸರಿ?
ಎ. ‘ಯವ್ವಾ ಆಕಳ ಸೆಗಣಿ ಹಾಕೈತಿ ನೋಡ್ಬೆ’
ಬಿ. ’ಅಮ್ಮಾ, ಹಸು ಸೆಗಣಿ ಹಾಕಿದೆ’
ಸಿ. ‘ಅಮ್ಮ, ಗೋಮಾತೆ ಪಂಚಗವ್ಯದ ಘನ ಪದಾರ್ಥವನ್ನು ಧರೆಗೆ ಇಳಿಸಿದ್ದಾಳೆ. ವಿಕಿರಣ ಹೊರಹೊಮ್ಮುತ್ತಿದೆ ಅಮ್ಮ’
ಡಿ. ‘ಬೇ ಯವ್ವಾ ಆಕ್ಳ ಹೇತೈತಿ ನೋಡು’

ಪರೀಕ್ಷೆ ರದ್ದಾಗಿದ್ದರೂ ಮುಂದೆ ನಡೆಯಲಿದೆಯಂತೆ. ಈಗಲೇ ತಯ್ಯಾರಿ ಶುರು ಮಾಡಿ ಭಕ್ತರೇ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಮದ್ದೂರು ಪೌರಕಾರ್ಮಿಕ ಆತ್ಮಹತ್ಯೆ ಪ್ರಕರಣ: ಇಬ್ಬರು ಪುರಸಭೆ ಅಧಿಕಾರಿಗಳ ಅಮಾನತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...