Homeಕರ್ನಾಟಕಭಕ್ತಾದಿಗಳ ಗಮನಕ್ಕೆ... ನಾಗೇಶ್ ಹೆಗಡೆಯವರ ಬರಹ

ಭಕ್ತಾದಿಗಳ ಗಮನಕ್ಕೆ… ನಾಗೇಶ್ ಹೆಗಡೆಯವರ ಬರಹ

ನೀರಿನ ಮಿತಬಳಕೆ ಮತ್ತು ಮರುಬಳಕೆಯ ಕುರಿತು ಇಲ್ಲಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ.

- Advertisement -
- Advertisement -

ಧರ್ಮಸ್ಥಳದ ‘ಖಾವಂದರು’ ಎಂದು ಭಕ್ತಾದಿಗಳಿಂದ ಕರೆಸಿಕೊಳ್ಳುವ ವೀರೇಂದ್ರ ಹೆಗ್ಗಡೆಯವರು, ಒಂದು ವಿಶೇಷ ಪತ್ರ ಬರೆದಿದ್ದಾರೆ. ಆ ಹಿನ್ನೆಲೆಯಲ್ಲಿ ಪತ್ರಕರ್ತ, ಪರಿಸರ ಕಾಳಜಿಯುಳ್ಳ ತಜ್ಞ ನಾಗೇಶ್ ಹೆಗಡೆಯವರು ಬರೆದಿದ್ದನ್ನು, ಬಳಸಿಕೊಳ್ಳಲು ನಮಗೆ ಅನುಮತಿ ನೀಡಿದ್ದಾರೆ.

ಭಕ್ತಾದಿಗಳ ಗಮನಕ್ಕೆ….
ತುಸು ಜಾಸ್ತಿ ಜನ ಈ ಪೋಸ್ಟ್ ನೋಡಲಿ ಎಂಬ ಉದ್ದೇಶದಿಂದ ಈ ಶಿರೋನಾಮೆ.
ಆಗಿದ್ದೇನೆಂದರೆ, ಧರ್ಮಸ್ಥಳದ ಬಳಿ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ತೀವ್ರ ಅಭಾವವಾಗಿದೆ. ಅದಕ್ಕೇ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಒಂದು ಪ್ರಕಟನೆ ಹೊರಡಿಸಿದ್ದಾರೆ. “ಆದುದರಿಂದ ಭಕ್ತಾದಿಗಳು ಮತ್ತು ಪ್ರವಾಸಿಗಳು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ಕೋರುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಇದೇ ಪ್ರಕಟನೆ ಹೀಗೆ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು: “ಆದುದರಿಂದ ನೀರಿನ ಮಿತಬಳಕೆ ಮತ್ತು ಮರುಬಳಕೆಯ ಕುರಿತು ಇಲ್ಲಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಮುಡಿ ಕೊಡುವ ಭಕ್ತರೂ ಕೇವಲ ಒಂದು ಬಕೆಟ್ ನೀರಿನಲ್ಲಿ ಸ್ನಾನ ಮಾಡಬಹುದು. ಬಳಸಿದ ನೀರನ್ನು ಮತ್ತೆ ಶುದ್ಧೀಕರಿಸಿ ಮರುಬಳಕೆ ಮಾಡುವ ವಿಧಾನಗಳನ್ನೂ ಇಲ್ಲಿ ತೋರಿಸುವ ಯೋಜನೆ ಇದೆ. ಅದು ಜಾರಿಗೆ ಬರಲು ತುಸು ತಡವಾಗಬಹುದು. ಸದ್ಯಕ್ಕೆ ನೀರನ್ನು ಮಿತವಾಗಿ ಬಳಸಲು ಬಲ್ಲವರಿಗಷ್ಟೇ ಇಲ್ಲಿ ಸ್ವಾಗತವಿದೆ’’.

ಅಭಾವದ ದಿನಗಳಲ್ಲಿ ನೀರನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಸಿ ಹೇಳುವ ಅತ್ಯಮೂಲ್ಯ ಅವಕಾಶ ಇದಾಗಿತ್ತು. ಸರಕಾರವೇ ವಿವಿಧ ಜಿಲ್ಲೆಗಳಲ್ಲಿ ಆ ಕೆಲಸವನ್ನು ಕೈಗೊಳ್ಳಬೇಕಿತ್ತು. ಸಿಂಗಪುರದಲ್ಲಿ, ಚರಂಡಿ ನೀರನ್ನೂ ಹೇಗೆ ಶುದ್ಧೀಕರಿಸಿ ಕುಡಿಯಲು ಬಳಸುತ್ತಾರೆ, ನಮೀಬಿಯಾದ ಪ್ರವಾಸಿ ನಗರ ವಿಂಡ್ಹೋಕ್ ಮತ್ತು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಗಳಲ್ಲಿ ಜನರು ನೀರಿನ ತೀವ್ರ ಅಭಾವವನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದರ ಬಗ್ಗೆ ಟಿವಿ ಚಾನೆಲ್ ಗಳಲ್ಲಿ ಪ್ರೈಮ್ ಟೈಮ್ ನಲ್ಲಿ ಸರಕಾರಿ ಖರ್ಚಿನಲ್ಲಿ ತಜ್ಞರ ಚರ್ಚೆ ಏರ್ಪಡಿಸಬಹುದಿತ್ತು. ಅಧಿಕಾರಿಗಳೇನೊ ಉಷ್ಟ್ರಪಕ್ಷಿಗಳಾಗಿದ್ದಾರೆ. ಸರಕಾರದ ಮುಖ್ಯಸ್ಥರಂತೂ ನೀರನ್ನು ಮರೆತು ಚಿನ್ನದ ರಥ, ರೆಸಾರ್ಟ್, ದೇಗುಲ, ಮಂದಿರಗಳ ಸುತ್ತು ಹೊಡೆಯುತ್ತಿದ್ದಾರೆ. ಧರ್ಮಸ್ಥಳವೂ ಈ ದಿನಗಳಲ್ಲಿ ಭಕ್ತರನ್ನು ಕೈಬಿಟ್ಟರೆ ಹೇಗೆ?

ಸುಮಾರು 25 ವರ್ಷಗಳ ಹಿಂದೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡಯವರಿಗೆ ನಾನೊಂದು ಪತ್ರ ಬರೆದಿದ್ದೆ. “ಭಕ್ತರು ತಿಂದು ಬಿಸಾಕಿದ ಊಟದ ಎಲೆಗಳ ತ್ಯಾಜ್ಯ ಹತ್ತು ಕಿಲೊಮೀಟರ್ ವರೆಗೂ ವಿಸ್ತರಿಸಿದೆ. ಅದೇ ತ್ಯಾಜ್ಯವನ್ನು ಬಯೊಡೈಜೆಸ್ಟರ್ ಮೂಲಕ ಸಂಸ್ಕರಿಸಿದರೆ ಅಡುಗೆ ಅನಿಲವೂ ಸಿಗುತ್ತದೆ, ಉತ್ತಮ ಕಾಂಪೋಸ್ಟ್ ಕೂಡ ಸಿಗುತ್ತದೆ” ಎಂದು ಅಂತರ್ದೇಶೀ ಪತ್ರದಲ್ಲಿ ಬರೆದಿದ್ದೆ. ಅದಕ್ಕೆ ಅವರು ತಕ್ಷಣ ಸ್ಪಂದಿಸಿ, “ಈ ವ್ಯವಸ್ಥೆ ಅಳವಡಿಸಲು ಸಿದ್ಧರಿದ್ದೇವೆ, ಮಾರ್ಗದರ್ಶನ ಎಲ್ಲಿ ಸಿಗುತ್ತದೆ?” ಎಂದು ನನಗೆ ಬರೆದಿದ್ದರು. ಈಗ ಅಲ್ಲಿ ತ್ಯಾಜ್ಯ ಸಂಸ್ಕರಣೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ಇದೇ ಉತ್ಸಾಹದಲ್ಲಿ ನೀರಿನ ನಿರ್ವಹಣೆಯ ತಂತ್ರಜ್ಞಾನವನ್ನೂ ಜಾರಿಗೆ ತರಬೇಕಾದ ತುರ್ತು ಅಲ್ಲಿ ಬಂದಿದೆ. ನೀರಿನ ಮಿತಬಳಕೆ, ಮರುಬಳಕೆ ಹಾಗೂ ನದಿಮರುಪೂರಣ ವ್ಯವಸ್ಥೆಯ ಪ್ರಾತ್ಯಕ್ಷಿಕೆ ನಮ್ಮ ಜನರಿಗೆ ತೀರ ಅಗತ್ಯವಾಗಿದೆ. (ದಶಕಗಳಿಂದ ಬತ್ತಿ ಹೋಗಿದ್ದ ನದಿಯನ್ನು ಮತ್ತೆ ಸಜೀವಗೊಳಿಸಿದ ಉದಾಹರಣೆ ರಾಜಸ್ತಾನದಲ್ಲಿದೆ). ಎಲ್ಲಕ್ಕಿಂತ ಮುಖ್ಯವಾಗಿ ನೇತ್ರಾವತಿಯ ನದಿಯನ್ನು ತಿರುಗಿಸುವ (ಎತ್ತಿನ ಹೊಳೆ) ಯೋಜನೆಯ ಭವಿಷ್ಯದ ಫಲಾನುಭವಿಗಳೆನಿಸಿದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಭಕ್ತರಿಗೆ ಧರ್ಮಸ್ಥಳದಲ್ಲಿ ಈ ದಿನಗಳಲ್ಲೇ ನೀರಿನ ಮಿತಬಳಕೆಯ ಪ್ರಾತ್ಯಕ್ಷಿಕೆ ಕೊಡುವುದು ಒಳ್ಳೆಯದು!

ಹರಕೆ, ಪೂಜೆಗೆಂದು ಬರುವ ಎಮ್ಮೆಲ್ಲೆ, ಎಂಪಿ, ಮಂತ್ರಿಗಣಕ್ಕೆ ಕಡ್ಡಾಯವಾಗಿ ಇಂಥ ಪ್ರಾತ್ಯಕ್ಷಿಕೆಗಳನ್ನು ಮೊದಲು ತೋರಿಸಿ ಆಮೇಲೆ ದೇವರ ದರ್ಶನ ಮಾಡಿಸಬೇಕು. ನೇತ್ರಾವತಿ ನದಿಮೂಲವನ್ನು ದುಃಸ್ಥಿತಿಗೆ ತಂದ ಮರಳು ಗಣಿಗಾರಿಕೆ, ಹೆದ್ದಾರಿ ವಿಸ್ತರಣೆ, ಅರಣ್ಯನಾಶಗಳ ದೊಡ್ಡ ದೊಡ್ಡ ಚಿತ್ರಗಳು ಮಂತ್ರಿಗಳ ಸ್ನಾನದ ಮನೆಯಲ್ಲಿ ಇರಬೇಕು. ಅರ್ಧ ಬಕೆಟ್ ನೀರಲ್ಲಿ ಗಣ್ಯರು ಸ್ನಾನ ಮಾಡುವುದು ಭಕ್ತಾದಿಗಳ ಗಮನಕ್ಕೂ ಬರುವಂತಿರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...