ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಕೈಜೋಡಿಸಿದ್ದಕ್ಕೆ ಬೇಸರಗೊಂಡ ಕಾರ್ಯಕರ್ತನೊಬ್ಬ ರಾಜಿನಾಮೆ ನೀಡಿದ ವಿದ್ಯಾಮಾನ ಮಂಗಳವಾರ ರಾತ್ರಿ ಜರುಗಿದೆ.
ಶಿವಸೇನೆಯ ರಮೇಶ್ ಸೋಲಂಕಿ ತಮ್ಮ ರಾಜೀನಾಮೆಯನ್ನು ಟ್ವಿಟ್ಟರ್ನಲ್ಲಿ ಘೋಷಿಸಿದ್ದಾರೆ. “ನಾನು ಬಿವಿಎಸ್ /ಯುವಸೇನಾ ಮತ್ತು ಶಿವಸೇನಾದ ನನ್ನ ಗೌರವಾನ್ವಿತ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಮುಂಬೈ, ಮಹಾರಾಷ್ಟ್ರ ಮತ್ತು ಹಿಂದೂಸ್ತಾನದ ಜನರಿಗೆ ಕೆಲಸ ಮಾಡಲು ಮತ್ತು ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಉದ್ಧವ್ ಠಾಕ್ರೆ ಮತ್ತು ಆದಿತ್ಯಾ ಠಾಕ್ರೆಯವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ.
My Resignation
I am resigning from my respected post in BVS/YuvaSena and @ShivSena
I thank @OfficeofUT and Adibhai @AUThackeray for giving me opportunity to work and serve the people of Mumbai, Maharashtra and Hindustan pic.twitter.com/I0uIf13Ed2— Ramesh Solanki (@Rajput_Ramesh) November 26, 2019
“ನನ್ನ ಪ್ರಜ್ಞೆ ಮತ್ತು ಸಿದ್ಧಾಂತವು ಕಾಂಗ್ರೆಸ್ ಜೊತೆ ಕೆಲಸ ಮಾಡಲು ನನಗೆ ಅವಕಾಶ ನೀಡುವುದಿಲ್ಲ. ನಾನು ಅರೆಮನಸ್ಸಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಬಹಳ ಹೆಮ್ಮೆಯ ಹಿಂದೂ ಭಾರತೀಯ ರಾಷ್ಟ್ರೀಯವಾದಿ ಎಂದು ತನ್ನನ್ನು ಟ್ವಿಟ್ಟರ್ನಲ್ಲಿ ಪರಿಚಯಿಸಿಕೊಂಡಿರುವ ಅವರು ಯುವ ಶಿವಸೇನೆಯಲ್ಲಿ ತೊಡಗಿಸಿಕೊಂಡಿದ್ದರು.