Homeಮುಖಪುಟಕಾಂಗ್ರೆಸ್‌ನೊಡನೆ ಶಿವಸೇನೆ ಮೈತ್ರಿಗೆ ಬೇಸೆತ್ತು ರಾಜಿನಾಮೆ ನೀಡಿದ ಕಾರ್ಯಕರ್ತ...

ಕಾಂಗ್ರೆಸ್‌ನೊಡನೆ ಶಿವಸೇನೆ ಮೈತ್ರಿಗೆ ಬೇಸೆತ್ತು ರಾಜಿನಾಮೆ ನೀಡಿದ ಕಾರ್ಯಕರ್ತ…

- Advertisement -
- Advertisement -

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿದ್ದಕ್ಕೆ ಬೇಸರಗೊಂಡ ಕಾರ್ಯಕರ್ತನೊಬ್ಬ ರಾಜಿನಾಮೆ ನೀಡಿದ ವಿದ್ಯಾಮಾನ ಮಂಗಳವಾರ ರಾತ್ರಿ ಜರುಗಿದೆ.

ಶಿವಸೇನೆಯ ರಮೇಶ್ ಸೋಲಂಕಿ ತಮ್ಮ ರಾಜೀನಾಮೆಯನ್ನು ಟ್ವಿಟ್ಟರ್‌ನಲ್ಲಿ ಘೋಷಿಸಿದ್ದಾರೆ. “ನಾನು ಬಿವಿಎಸ್ /ಯುವಸೇನಾ ಮತ್ತು ಶಿವಸೇನಾದ ನನ್ನ ಗೌರವಾನ್ವಿತ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಮುಂಬೈ, ಮಹಾರಾಷ್ಟ್ರ ಮತ್ತು ಹಿಂದೂಸ್ತಾನದ ಜನರಿಗೆ ಕೆಲಸ ಮಾಡಲು ಮತ್ತು ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಉದ್ಧವ್‌ ಠಾಕ್ರೆ ಮತ್ತು ಆದಿತ್ಯಾ ಠಾಕ್ರೆಯವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ.

“ನನ್ನ ಪ್ರಜ್ಞೆ ಮತ್ತು ಸಿದ್ಧಾಂತವು ಕಾಂಗ್ರೆಸ್ ಜೊತೆ ಕೆಲಸ ಮಾಡಲು ನನಗೆ ಅವಕಾಶ ನೀಡುವುದಿಲ್ಲ. ನಾನು ಅರೆಮನಸ್ಸಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಬಹಳ ಹೆಮ್ಮೆಯ ಹಿಂದೂ ಭಾರತೀಯ ರಾಷ್ಟ್ರೀಯವಾದಿ ಎಂದು ತನ್ನನ್ನು ಟ್ವಿಟ್ಟರ್‌ನಲ್ಲಿ ಪರಿಚಯಿಸಿಕೊಂಡಿರುವ ಅವರು ಯುವ ಶಿವಸೇನೆಯಲ್ಲಿ  ತೊಡಗಿಸಿಕೊಂಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಎಪಿ ನಾಯಕರಿಂದ ಪ್ರತಿಭಟನೆ; ದೆಹಲಿ ಬಿಜೆಪಿ ಕೇಂದ್ರ ಕಚೇರಿಗೆ ಬಿಗಿ ಭದ್ರತೆ

0
ಎಎಪಿಯ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ಇಲ್ಲಿನ ಬಿಜೆಪಿ ಪ್ರಧಾನ ಕಚೇರಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀನ್ ದಯಾಳ್...