Homeಮುಖಪುಟಚುನಾವಣಾ ಆಯೋಗದಿಂದ ಶೋಕಾಸ್ ನೋಟಿಸ್‌; 'ನಿಮ್ಮದು ಬಿಜೆಪಿಯ ಅಧೀನ ಸಂಸ್ಥೆಯೇ..’ ಎಂದು ಕಿಡಿಕಾರಿದ ಅತಿಶಿ

ಚುನಾವಣಾ ಆಯೋಗದಿಂದ ಶೋಕಾಸ್ ನೋಟಿಸ್‌; ‘ನಿಮ್ಮದು ಬಿಜೆಪಿಯ ಅಧೀನ ಸಂಸ್ಥೆಯೇ..’ ಎಂದು ಕಿಡಿಕಾರಿದ ಅತಿಶಿ

- Advertisement -
- Advertisement -

ದೆಹಲಿ ಸಚಿವೆ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ಅವರಿಗೆ ಚುನಾವಣಾ ಆಯೋಗವು ಶುಕ್ರವಾರ ಶೋಕಾಸ್ ನೋಟಿಸ್ ನೀಡಿದ್ದಕ್ಕೆ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. “ಚುನಾವಣಾ ಸಂಸ್ಥೆಯು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧೀನ ಸಂಸ್ಥೆಯೇ “ಎಂದು ಪ್ರಶ್ನಿಸಿರುವ ಅವರು, “ಚುನಾವಣಾ ಆಯೋಗದ ಸೂಚನೆಯನ್ನು ನಾನು ಮೇಲ್‌ನಲ್ಲಿ ಸ್ವೀಕರಿಸುವ ಮೊದಲೇ ಬಿಜೆಪಿಯು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ” ಎಂದು ಅವರು ಆರೋಪ ಮಾಡಿದ್ದಾರರೆ.

“ಏಪ್ರಿಲ್ 4 ರಂದು ನಡೆದ ಸುದ್ದಿಗೋಷ್ಠಿ ವಿವಾರವಾಗಿ ಏಪ್ರಿಲ್ 5 ರಂದು ಬೆಳಿಗ್ಗೆ 11:15 ಕ್ಕೆ, ಸುದ್ದಿ ವಾಹಿನಿಗಳು ಅತಿಶಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಸುದ್ದಿ ಮಾಡಿವೆ. ಆದರೆ, ಸುದ್ದಿಯ ಅರ್ಧ ಗಂಟೆಯ ನಂತರ ನನಗೆ ನೋಟಿಸ್ ಸಿಕ್ಕಿತು. ಇದರರ್ಥ ಬಿಜೆಪಿಯು ಮೊದಲು ಚುನಾವಣಾ ಆಯೋಗದ ಸೂಚನೆಯನ್ನು ಮಾಧ್ಯಮಗಳಲ್ಲಿ ಹಾಕುತ್ತದೆ. ಅದರ ನಂತರ, ನನಗೆ ನೋಟೀಸ್ ಬರುತ್ತದೆ… ಚುನಾವಣಾ ಆಯೋಗವು ಬಿಜೆಪಿಯ ಅಂಗಸಂಸ್ಥೆಯಾಗಿದೆಯೇ ಎಂಬುದು ನನ್ನ ಪ್ರಶ್ನೆ” ಎಂದು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ, ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ನಂತರ ಚುನಾವಣಾ ಸಂಸ್ಥೆ ಕೇಂದ್ರ ಏಜೆನ್ಸಿಗಳಿಗೆ ಏಕೆ ನೋಟಿಸ್ ನೀಡಲಿಲ್ಲ ಎಂದು ಅತಿಶಿ ಪ್ರಶ್ನಿಸಿದ್ದಾರೆ.

ಪಕ್ಷಾತೀತವಾಗಿ ನಡೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತಲೆಬಾಗಬೇಡಿ ಎಂದು ಅವರು ಹೇಳಿದರು.

ವ್ಯಕ್ತಿಯೊಬ್ಬರ ಮೂಲಕ ಬಿಜೆಪಿಯು ತನ್ನನ್ನು ತಮ್ಮ ಪಕ್ಷಕ್ಕೆ ಸೇರಲು ಸಂಪರ್ಕಿಸಿದೆ ಎಂಬ ಆಕೆಯ ಹೇಳಿಕೆಗಳನ್ನು ಅನುಸರಿಸಿ ಚುನಾವಣಾ ಆಯೋಗವು ಅತಿಶಿಗೆ ಶೋಕಾಸ್ ನೋಟಿಸ್ ನೀಡಿತು. ಅವರು ಇತರ ಮೂವರು ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ರಾಘವ್ ಚಡ್ಡಾ ಮತ್ತು ದುರ್ಗೇಶ್ ಪಾಠಕ್ ಅವರೊಂದಿಗೆ ಬಿಜೆಪಿಗೆ ಸೇರದಿದ್ದಲ್ಲಿ ಇಡಿಯಿಂದ ಬಂಧಿಸಲ್ಪಡುವ ಮುಂದಿನ ಸಾಲಿನಲ್ಲಿ ಇರುವುದಾಗಿ ಅವರು ಹೇಳಿದ್ದರು.

ಬಿಜೆಪಿ ದೂರು ಆಧರಿಸಿ, ಚುನಾವಣಾ ಆಯೋಗವು ನೋಟಿಸ್‌ ನೀಡಿದದ್ದು, “ನೀವು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ ಮಂತ್ರಿ ಮತ್ತು ರಾಷ್ಟ್ರೀಯ ಪಕ್ಷದ ನಾಯಕಿ. ಮತದಾರರು ತಮ್ಮ ನಾಯಕರು ಸಾರ್ವಜನಿಕ ವೇದಿಕೆಯಿಂದ ಏನು ಹೇಳಿದರೂ ನಂಬುತ್ತಾರೆ ಮತ್ತು ಆ ಅರ್ಥದಲ್ಲಿ, ಅವರು ನೀಡಿದ ಹೇಳಿಕೆಗಳು ಪ್ರಚಾರದ ಭಾಷಣದ ಮೇಲೆ ಪರಿಣಾಮ ಬೀರುತ್ತವೆ’ ಎಂದು ಹೇಳಿದೆ.

ಇದನ್ನೂ ಓದಿ; ಎಸ್‌ಸಿ ಪಟ್ಟಿಯಿಂದ ಲಂಬಾಣಿ, ಬೋವಿ, ಕೊರಮ, ಕೊರಚರನ್ನು ಕೈಬಿಡುವಂತೆ ಮನವಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ನೋಟಿಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...