ಹರಿಯಾಣದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾರವರ ಪ್ರದರ್ಶನ ರದ್ದುಗೊಳಿಸಿದ VHP ವಿರುದ್ಧ ಕಡಿಕಾರಿರುವ ಅವರು ‘ನಾನು ಹಿಂದೂ ವಿರೋಧಿಯೆಂಬುದುಕ್ಕೆ ಪುರಾವೆ ತೋರಿಸಿ’ ಎಂದು ಸವಾಲು ಹಾಕಿದ್ದಾರೆ.
ಸೆಪ್ಟಂಬರ್ 17 ಮತ್ತು 18 ರಂದು ಗುರ್ಗಾವ್ನ ಸೆಕ್ಟರ್ 29ರಲ್ಲಿನ ಸ್ಟುಡಿಯೊ ಎಕ್ಸ್ಒ ಬಾರ್ನಲ್ಲಿ ಕುನಾಲ್ ಕಮ್ರಾರವರ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಬಜರಂಗದಳ ಮತ್ತು VHP ಕುನಾಲ್ ಕಮ್ರಾರನ್ನು ಹಿಂದೂ ದೇವತೆಗಳನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ಮೂಲಕ ಒತ್ತಡ ತಂದಿದ್ದರೆ ಪರಿಣಾಮವಾಗಿ ಪ್ರದರ್ಶನ ರದ್ದಾಗಿದೆ.
ಈ ಕುರಿತು VHPಗೆ ಬಹಿರಂಗ ಪತ್ರ ಬರೆದಿರುವ ಕುನಾಲ್ ಕಮ್ರಾ, “ನಾನುಗಿಂತ VHPಗಿಂತ ದೊಡ್ಡ ಹಿಂದೂ. ಏಕೆಂದರೆ ನಿಮ್ಮ ರೀತಿ ಜನರಲ್ಲಿ ಭಯ ಹುಟ್ಟಿಸಿ, ಬೆದರಿಕೆ ಹಾಕಿ ಗಳಿಸಿದ ಹಣದಿಂದ ಜೀವನ ನಡೆಸುತ್ತಿಲ್ಲ” ಎಂದು ಕಿಡಿಕಾರಿದ್ದಾರೆ.
ನಾನು ಹೆಮ್ಮಯಿಂದ, ಜೋರಾಗಿ ಜೈ ಶ್ರೀ ಸೀತಾ-ರಾಮ್, ಜೈ ರಾಧ ಕೃಷ್ಣ ಎಂದು ಘೋಷಣೆ ಕೂಗುತ್ತೇನೆ. ನೀವು ನಿಜವಾದ ಭಾರತದ ಮಕ್ಕಳೆ ಆಗಿದ್ದರೆ ಗೋಡ್ಸೆ ಮುರ್ದಾಬಾದ್ ಎಂದು ಘೋಷಣೆ ಕೂಗುವಿರಾ? ಕೂಗಿದಿದ್ದರೆ ನೀವು ದೊಡ್ಡ ಹಿಂದೂ ವಿರೋಧಿಗಳು ಮತ್ತು ಭಯೋತ್ಪಾದನೆ ಬೆಂಬಲಿಗರು ಎಂದು ಕುನಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಡ್ಸೆಯನ್ನು ದೇವರೆಂದು ಪರಿಗಣಿಸುತ್ತೀರೆಂದು ನನ್ನ ಬಳಿ ಹೇಳಬೇಡಿ. ಅದು ನಿಜವಾದರೆ ನೀವು ಮುಂದಕ್ಕೂ ನನ್ನ ಪ್ರದರ್ಶನಗಳನ್ನು ರದ್ದುಗೊಳಿಸಿ. ಈ ಪರೀಕ್ಷೆಯಲ್ಲಿ ನಾನು ಸಂತೋಷದಿಂದ ಗೆದ್ದುಬರುತ್ತೇನೆ ಮತ್ತು ನಿಮಗಿಂತ ದೊಡ್ಡ ಹಿಂದೂ ಎಂದು ನಿರೂಪಿಸುತ್ತೇನೆ. ನಾನು ಕಷ್ಟಪಟ್ಟು ಗಳಿಸಿದ ಹಣದಿಂದ ಜೀವನ ನಡೆಸುತ್ತಿದ್ದೇನೆ ಹೊರತು ನಿಮ್ಮ ರೀತಿ ಜನರನ್ನು ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡುತ್ತಿಲ್ಲ. ಇದೊಂದು ನಿಮ್ಮ ಕಾಯಿಲೆಯಾಗಿದೆ ಎಂದು ಅವರು ಬರೆದಿದ್ದಾರೆ.
ನನ್ನ ಇದುವರೆಗಿನ ಕಾಮಿಡಿ ಶೋಗಳಲ್ಲಿ ಹಿಂದೂ ದೇವರನ್ನು ನಿಂದಿಸಿರುವ, ಅವಹೇಳನ ಮಾಡಿರುವ ಪುರಾವೆಗಳಿದ್ದರೆ, ಆ ವಿಡಿಯೋಗಳಿದ್ದರೆ ನನಗೆ ತೋರಿಸಿ. ನಾನು ಸರ್ಕಾರಗಳನ್ನು ಅಣಕ ಮಾಡುತ್ತೇನೆ, ನೀವು ಸರ್ಕಾರದ ಚಮಚಗಳಾಗಿದ್ದರೆ ನಿಮಗೆ ನೋವಾಗುವುದಕ್ಕೆ ಅರ್ಥವಿದೆ. ಆದರೆ ಇದರಲ್ಲಿ ಹಿಂದೂ ಧರ್ಮವನ್ನು ಏಕೆ ಎಳೆದು ತರುತ್ತೀರಿ ಎಂದು ಕಮ್ರಾ ಪ್ರಶ್ನಿಸಿದ್ದಾರೆ.
मेरा जवाब @VHPDigital pic.twitter.com/J9Ah8ad5ur
— Kunal Kamra (@kunalkamra88) September 11, 2022
ಬಾರ್ ಮಾಲೀಕರಿಗೆ ಬೆದರಿಕೆ ಹಾಕಿದ್ದಕ್ಕೆ ನನ್ನ ಪ್ರದರ್ಶನ ರದ್ದುಗೊಂಡಿದೆ. ಹಾಗಾಗಿ ನಾನು ಅವರನ್ನು ದೂಷಿಸುವುದಿಲ್ಲ. ಅವರು ತಮ್ಮ ವ್ಯವಹಾರ ಮಾಡುತ್ತಿದ್ದಾರೆ ಅಷ್ಟೆ. ಅವರು ಈ ಗೂಂಡಾಗಳೊಂದಿಗೆ ವ್ಯವಹರಿಸಲು ಸಾಧ್ಯವೇ? ಅವರು ಪೊಲೀಸರ ಬಳಿ ಸಹ ಹೋಗಲು ಸಾಧ್ಯವಿಲ್ಲ. ಒಂದು ವೇಳೆ ಹೋದರೂ ಸಹ ಪೊಲೀಸರು ದಯವಿಟ್ಟು ಪ್ರದರ್ಶನ ರದ್ದುಗೊಳಿಸಿ ಎಂದು ಮನವಿ ಮಾಡುತ್ತಾರೆ ಅಷ್ಟೆ. ಏಕೆಂದರೆ ಇಡೀ ವ್ಯವಸ್ಥೆಯ ನಿಮ್ಮ ಜೊತೆ ಇದೆ ಎಂದು VHP ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ‘ವಿಶ್ವಗುರು’ ನುಡಿಯಲ್ಲಿ ಆಗಿ ನಡೆಯಲ್ಲಿ ತಪ್ಪಬಹುದೆ?
ಕುನಾಲ್ ಕಮ್ರಾ ಅವರಿಗೆ ಜಯ ದೊರಕಲಿ.
ಕುನಲ್ ಕಂಬ್ರ ನಿಜವಾದ ದೇಶಭಕ್ತರು ಅವರಿಗೆ ನಿಜವಾಗಿಯೂ ಜಯವಾಗಲೇಬೇಕು