ಮಧ್ಯಪ್ರದೇಶದಲ್ಲಿ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮಧ್ಯಪ್ರದೇಶದ ಬಿಜೆಪಿ ಮುಖಂಡ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನಕಲಿಯಾಗಿದೆ ಎಂದು ಹೇಳುವ ಪತ್ರಕ್ಕೆ ಬಲವಂತವಾಗಿ ಯುವಕನ ತಂದೆಯಿಂದ ಸಹಿ ಮಾಡಿಸಿಕೊಂಡಿದ್ದಾನೆ. ಈ ಪತ್ರ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
Kartavya Done By BJP IN #KartavyaKaal
The child who was urinated on is a Tribal.
After peeing, Pravesh Shukla, representative of #BJP MLA in MP's Sidhi district, got the boy's father to sign an affidavit that the video was fake. The #BJP government in #MadhyaPradesh is doing… pic.twitter.com/RE1iNnwihQ— তন্ময় l T͞anmoy l (@tanmoyofc) July 4, 2023
ವೀಡಿಯೋದಲ್ಲಿ ಸೆರೆಹಿಡಿಯಲಾದ ಘಟನೆ 2020ರಲ್ಲಿ ನಡೆದಿದೆ ಎಂಬುದನ್ನು ಬಲಿಪಶು ದೃಢಪಡಿಸಿದ್ದಾರೆ ಎಂದು ಸಿಧಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಡಿಎಲ್ ಎಸ್ಪಿ) ಅಂಜುಲತಾ ಪಟ್ಲೆ ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಅವರು ಜುಲೈ 3ರಂದು ಆ ಬುಡಕಟ್ಟು ಸಮುದಾಯದ ಯುವಕನ ಮನೆಗೆ ತೆರಳಿ ಯುವಕನ ತಂದೆಗೆ ಒತ್ತಡ ಹೇರಿ, ”ವೀಡಿಯೊ ನಕಲಿಯಾಗಿದೆ ಎಂದು ಬರೆದಿರುವ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಪಾಟ್ಲೆ ಹೇಳಿದ್ದಾರೆ.
”ಈ ಘಟನೆ ನಡೆದದ್ದು 2020ರಲ್ಲಿ ಆದರೆ ನನಗೆ ದಿನಾಂಕ ಅಥವಾ ತಿಂಗಳು ತನಗೆ ನೆನಪಿಲ್ಲ” ಎಂದು ಬಲಿಪಶು ಪೊಲೀಸರಿಗೆ ತಿಳಿಸಿದ್ದಾರೆ.
”ಪ್ರವೇಶ್ ಜೊತೆಗಿದ್ದ ವ್ಯಕ್ತಿಯೊಬ್ಬರು ಮೊದಲು ಆತನ ಮೇಲೆ ಮೂತ್ರ ಮಾಡಲು ಪ್ರಯತ್ನಿಸಿದರು ಆದರೆ ಪ್ರವೇಶ್ ಅವರನ್ನು ತಡೆದು, ತಾವೇ ಮೂತ್ರ ವಿಸರ್ಜನೆ ಮಾಡಿದ್ದಾರೆ” ಎಂದು ಅವರು ಹೇಳಿದರು.
ಘಟನೆ ನಡೆದಾಗ ಪ್ರವೇಶ್ ಶುಕ್ಲಾ ಅವರೊಂದಿಗೆ ಇತರ ಮೂವರು ಇದ್ದರು ಎಂದು ತಿಳಿದುಬಂದಿದೆ. ಆ ಮೂವರನ್ನೂ ನಾವು ವಿಚಾರಣೆ ಮಾಡುತ್ತೇವೆ” ಎಂದು ಪಟ್ಲೆ ಹೇಳಿದರು.
ಇದನ್ನೂ ಓದಿ: ಆದಿವಾಸಿ ಯುವಕನ ಮೇಲೆ ಮೂತ್ರ ಪ್ರಕರಣ ಬಿಜೆಪಿಯ ದ್ವೇಷದ ಅಸಹ್ಯಕರ ಮುಖವಾಗಿದೆ: ರಾಹುಲ್ ಗಾಂಧಿ
ಮಂಗಳವಾರ ತಡರಾತ್ರಿ ಪ್ರವೇಶ್ ಶುಕ್ಲಾ ಅವರನ್ನು ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪೊಲೀಸರಿಗೆ ತಿಳಿಸಿದ ನಂತರ ಅವರನ್ನು ಬಂಧಿಸಲಾಯಿತು.
ಬಿಜೆಪಿ ಆಡಳಿತದಲ್ಲಿ ಆದಿವಾಸಿಗಳು ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಿವೆ ಎಂದು ಹೇಳುವ ಮೂಲಕ ಆಡಳಿತಾರೂಢ ಬಿಜೆಪಿಯನ್ನು ಕೆಣಕಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ.
”ಬಿಜೆಪಿ ಆಡಳಿತದಲ್ಲಿ ಆದಿವಾಸಿ ಸಹೋದರ ಸಹೋದರಿಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಮಧ್ಯಪ್ರದೇಶದ ಬಿಜೆಪಿ ನಾಯಕನ ಅಮಾನವೀಯ ಅಪರಾಧದಿಂದ ಇಡೀ ಮಾನವೀಯತೆ ತಲೆತಗ್ಗಿಸುವಂತೆ ಮಾಡಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
भाजपा राज में आदिवासी भाइयों और बहनों पर अत्याचार बढ़ते ही जा रहे हैं।
मध्यप्रदेश में एक भाजपा नेता के अमानवीय अपराध से सारी इंसानियत शर्मसार हुई है।
यह भाजपा का आदिवासियों और दलितों के प्रति नफ़रत का घिनौना चेहरा और असली चरित्र है!
— Rahul Gandhi (@RahulGandhi) July 5, 2023
ಇದು ಆದಿವಾಸಿಗಳು ಮತ್ತು ದಲಿತರ ಮೇಲಿನ ಬಿಜೆಪಿಯ ದ್ವೇಷದ ಅಸಹ್ಯಕರ ಮುಖ ಮತ್ತು ನೈಜ ಸ್ವರೂಪ ಎಂದು ಅವರು ಹೇಳಿದ್ದಾರೆ.