Homeಕರ್ನಾಟಕಮೈತ್ರಿ ಸರ್ಕಾರ ಪತನಕ್ಕೆ ಯಡಿಯೂರಪ್ಪನವರೊಂದಿಗೆ ಸಿದ್ದರಾಮಯ್ಯ ಸಾಥ್: ಸಂದರ್ಶನದಲ್ಲಿ ದೇವೇಗೌಡರ ಆರೋಪ

ಮೈತ್ರಿ ಸರ್ಕಾರ ಪತನಕ್ಕೆ ಯಡಿಯೂರಪ್ಪನವರೊಂದಿಗೆ ಸಿದ್ದರಾಮಯ್ಯ ಸಾಥ್: ಸಂದರ್ಶನದಲ್ಲಿ ದೇವೇಗೌಡರ ಆರೋಪ

- Advertisement -
- Advertisement -

ಕಳೆದ ಒಂದೂವರೆ ವರ್ಷದಿಂದ ಯಾವುದೇ ವಿವಾದಾತ್ಮಕ ಹೇಳಿಕೆ ಕೊಡದೇ ಅಂತರ ಕಾಯ್ದುಕೊಂಡಿದ್ದ ಮಾಜಿ ಪ್ರಧಾನಿ ದೇವೆಗೌಡರು ಈಗ ಮೈತ್ರಿ ಸರ್ಕಾರದ ಪತನದ ನಂತರ ಅದರ ಹೊಣೆಯನ್ನು ಸಿದ್ದರಾಮಯ್ಯನವರ ತಲೆಗೆ ಕಟ್ಟಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ತಿರುವು ತೆಗೆದುಕೊಳ್ಳಬಹುದಾದ ವಿಷಯವಾಗಿದೆ. ದಿ ಹಿಂದು ಪತ್ರಿಕೆಯ ಶರತ್ ಎಸ್. ಶ್ರೀವತ್ಸ ರವರು ದೇವೇಗೌಡರವರೊಂದಿಗೆ ನಡೆಸಿದ ಸಂದರ್ಶನವನ್ನು ಕನ್ನಡ ಓದುಗರಿಗಾಗಿ ನಿಖಿಲ್ ಕೋಲ್ಪೆಯವರು ಅನುವಾದಿಸಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ

ಕೃಪೆ: ದಿ ಹಿಂದು
ಅನುವಾದ: ನಿಖಿಲ್ ಕೋಲ್ಪೆ

ಪ್ರಶ್ನೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಎಡವಟ್ಟಾದುದು ಎಲ್ಲಿ?

ಕಾಂಗ್ರೆಸ್‌ನ ಉದ್ದೇಶ ಬಿಜೆಪಿಯನ್ನು ಹೊರಗಿಡುವುದಾಗಿತ್ತು; ಆದರೆ, ಸಿದ್ದರಾಮಯ್ಯ ಈ ನಿರ್ಧಾರಕ್ಕೆ ಒಗ್ಗಿಕೊಳ್ಳಲಿಲ್ಲ. ಸ್ಪರ್ಧೆ ಅವರ ಮತ್ತು ಎಚ್.ಡಿ. ಕುಮಾರಸ್ವಾಮಿ ನಡುವೆ ಇತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ನೋಡುವುದು ಅವರಿಗೆ ಕಷ್ಟವಾಗಿತ್ತು. ಅವರಿಗೆ ನೋವಾಗಿತ್ತು, ಸಿಟ್ಟೂ ಬಂದಿತ್ತು. ಮೈಸೂರಿನಲ್ಲಿ (ಚಾಮುಂಡೇಶ್ವರಿ) ತನ್ನ ಸೋಲಿನ ಬಳಿಕ ಜೆಡಿಎಸ್ ಪಕ್ಷವನ್ನು ನಾಶಗೊಳಿಸುವ ಅವರ ನಿರ್ಧಾರ ಇನ್ನಷ್ಟು ಬಲವಾಯಿತು.

ಪ್ರಶ್ನೆ: ಸಮ್ಮಿಶ್ರ ಸರಕಾರದ ವೈಫಲ್ಯಕ್ಕೆ ನೀವು ಸಿದ್ದರಾಮಯ್ಯ ಒಬ್ಬರನ್ನೇ ಹೊಣೆಮಾಡುತ್ತೀರಾ?

ಮೈತ್ರಿ ಸರಕಾರದ ಕುರಿತು ನಿರ್ಧಾರಕ್ಕೆ ಬರುವ ಮೊದಲು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ಜೊತೆ ಸಮಾಲೋಚನೆ ನಡೆಸಿರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ನನ್ನ ಮತ್ತು ನನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯ ಹೊಣೆ ಎಂದು ಅವರ ಸ್ವಂತ ಬೆಂಬಲಿಗರೇ (ಬಂಡುಕೋರ ಕಾಂಗ್ರೆಸಿಗರು) ಬಹಿರಂಗವಾಗಿ ಹೇಳಿದ್ದಾರೆ. ನಮ್ಮ ವಿರುದ್ದ ಕೆಲಸ ಮಾಡಿದ ಕಾಂಗ್ರೆಸಿಗರಿಗೆ ಅವರು ನೋಟೀಸು ನೀಡಿದ್ದರೆಯೆ? ಕಾಂಗ್ರೆಸ್ ಒಳಗೆಯೇ ಈಗ ಸಿದ್ದರಾಮಯ್ಯರನ್ನು ಪ್ರಶ್ನಿಸಬಲ್ಲವರಾಗಲೀ, ಅವರ ವಿರುದ್ದ ಸ್ಪರ್ಧಿಸುವವರಾಗಲೀ ಯಾರೂ ಇಲ್ಲ.

ಪ್ರಶ್ನೆ: ಅವರು ಅದನ್ನು ಮಾಡಿದ್ದಾದರೂ ಏಕೆ?

ಸಿದ್ದರಾಮಯ್ಯ ಅವರ ಗುರಿ ಎಂದರೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ, ತಾನು ಪ್ರತಿಪಕ್ಷದ ನಾಯಕನಾಗುವುದು. ಅವರು ಮತ್ತು ಯಡಿಯೂರಪ್ಪ ಹಿಂದೆ ಜೊತೆಯಲ್ಲಿ ಕೆಲಸ ಮಾಡಿದ್ದಿದೆ. ಬಳ್ಳಾರಿಗೆ ಪಾದಯಾತ್ರೆ (ಅಕ್ರಮ ಗಣಿಗಾರಿಕೆ ವಿರುದ್ಧ) ಹೋದದ್ದು ಬಿಟ್ಟರೆ, ಪ್ರತಿಪಕ್ಷ ನಾಯಕರಾಗಿ ಅವರು ಬೇರೇನು ಮಾಡಿದ್ದಾರೆ? ಯಡಿಯೂರಪ್ಪ ಸರಕಾರದ ವಿರುದ್ಧ ಹೋರಾಟ ಮಾಡಿದವರು ಯಾರು? ನಿಜವಾದ ಹೋರಾಟಗಾರ ಕುಮಾರಸ್ವಾಮಿ. ಸಿದ್ದರಾಮಯ್ಯ ಕೇವಲ ಮೆಲ್ನೋಟಕ್ಕೆ ಮಾತ್ರ ಇದ್ದಂತೆ ತೋರಿಸಿದರು.

ಪ್ರಶ್ನೆ: ಆದರೆ ಅವರು ಒಂದು ದಶಕಕ್ಕೂ ಹಿಂದೆ ಪಕ್ಷದಿಂದ ಹೊರಹೋದಾಗಿನಿಂದಲೇ ಜೆಡಿಎಸ್‌ಗೆ ವಿರೋಧವಿದ್ದಾರೆ ಅಲ್ಲವೇ?

ಸಿದ್ದರಾಮಯ್ಯ ಜೆಡಿಎಸ್‌ಗೆ ಹಾನಿ ಮಾಡಲು ಬಯಸುತ್ತಾರೆ ಎಂಬುದು ಹೊಸ ವಿಷಯವಲ್ಲ. 2016ರ ರಾಜ್ಯಸಭಾ ಚುನಾವಣೆಯ ವೇಳೆ ನಮ್ಮ ಎಂಟು ಶಾಸಕರನ್ನು ಅವರು ಹೊತ್ತೊಯ್ದಿದ್ದರು. ವಾಸ್ತವವಾಗಿ ನಮ್ಮ ಪಕ್ಷಕ್ಕೆ ಹಾನಿ ಮಾಡುವ ಅವರ ಕಾರ್ಯಾಚರಣೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನೆರವಿನೊಂದಿಗೆ 2004ರಲ್ಲಿಯೇ ಆರಂಭವಾಗಿತ್ತು. ಅಹಿಂದ ಸಮಾವೇಶಗಳಲ್ಲಿ ಎನ್. ಧರಂಸಿಂಗ್ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗಲೂ ಕಾಂಗ್ರೆಸ್ ನಾಯಕರು ನನ್ನ ಮೇಲೆ ದಾಳಿ ನಡೆಸಿದರು; ಮತ್ತಾಗ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿದ್ದರು. ಇದು ಜೆಡಿಎಸ್‌ನಿಂದ ಅವರ ಉಚ್ಛಾಟನೆಗೆ ಕಾರಣವಾಯಿತು….

ನಾನು 1996ರಲ್ಲಿ ಪ್ರಧಾನಮಂತ್ರಿ ಆಗಲು ದಿಲ್ಲಿಗೆ ಹೋದಾಗ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಅವರು ಕೋಪಗೊಂಡಿದ್ದರು; ಮತ್ತೊಮ್ಮೆ 2004ರಲ್ಲಿ ಸಮ್ಮಿಶ್ರ ಸರಕಾರ ರಚನೆಯಾದಾಗ. 2004ರಲ್ಲಿ ನಾನು ಅವರನ್ನು ಮುಖ್ಯಮಂತ್ರಿ ಮಾಡಲು ಎಷ್ಟೊಂದು ಪ್ರಯತ್ನಪಟ್ಟೆ ಎಂಬುದನ್ನು ಕಾಂಗ್ರೆಸ್‌ನ ತಾತ್ಕಾಲಿಕ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅವರಿಗಾಗಿ ನಾನು- ತನ್ನನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಬೇಕೆಂಬ ಎಸ್.ಎಂ. ಕೃಷ್ಣ ಅವರ ಮನವಿಯನ್ನೂ ಒಪ್ಪಿಕೊಂಡಿರಲಿಲ್ಲ.

ಪ್ರಶ್ನೆ: ಪರಿಣಾಮ ಏನಾಗಿತ್ತು?

ನಮ್ಮನ್ನು ನಾಶಮಾಡಲು ಅವರು ಮಾಡಿದ ಪ್ರಯತ್ನದ ಪರಿಣಾಮವಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಬಲ 130ರಿಂದ 79ಕ್ಕೆ ಕುಸಿಯಿತು. ಶಾದಿಭಾಗ್ಯ ಮತ್ತು ಬಾಕಿ ಎಲ್ಲಾ ಭಾಗ್ಯಗಳಿಗೆ ಏನಾಯಿತು? ಅಹಿಂದಕ್ಕೆ ಏನಾಯಿತು? ಅವರಿಂದ ತಪ್ಪುದಾರಿಗಿಳಿದ ರಾಹುಲ್ ಗಾಂಧಿ ನಮ್ಮನ್ನು ಹಾಸನದಲ್ಲಿ ಬಿಜೆಪಿಯ ಬಿ. ಟೀಮ್ ಎಂದು ಕರೆದರು. ಪರಿಣಾಮವಾಗಿ ಹಾಸನ ಬಿಜೆಪಿ ಪರವಾಯಿತು ಮತ್ತು ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಮೊದಲ ಬಾರಿಗೆ 14 ಸ್ಥಾನಗಳನ್ನು ಗೆದ್ದಿತು. ಇವತ್ತು ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿ ನುಸುಳಲು ಪ್ರಯತ್ನಿಸುತ್ತಿದೆ ಎಂದರೆ, ಮತ್ತೆ ಅವರ ಕಾರಣದಿಂದ. ಅವರು ಪರೋಕ್ಷವಾಗಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯನ್ನು (ಸುಮಲತಾ) ಮಂಡ್ಯದಲ್ಲಿ ಬೆಂಬಲಿಸಿದರು.

ಪ್ರಶ್ನೆ: ಇತ್ತೀಚೆಗೆ ನೀವವರನ್ನು ಸಂಪರ್ಕಿಸಲು ಯತ್ನಿಸಿದ್ದೀರಾ?

ನನ್ನನ್ನು ನಂಬಿ,  ಮೈತ್ರಿ ಸರಕಾರ ಆದ ಮೇಲೆ ನಾನು ಅವರಲ್ಲಿ ಹೋಗಿ, ಎರಡು ಸಲ ರಾಜ್ಯದಲ್ಲಿ ಜಂಟಿ ಯಾತ್ರೆ ಮಾಡೋಣ ಎಂದು ವಿನಂತಿದೆ. ಹಿಂದಿನದ್ದು ಮರೆಯೋಣ ಎಂದೆ. ಆದರೂ ಏನೂ ಆಗಲಿಲ್ಲ.

ಪ್ರಶ್ನೆ: ಸದ್ಯಕ್ಕೆ ಕಾಂಗ್ರೆಸ್ ಜೊತೆ ನಿಮ್ಮ ಹೊಂದಾಣಿಕೆ ಏನು? ಒಂದುವೇಳೆ ಉಪಚುನಾವಣೆ ನಡೆದರೆ, ಎರಡೂ ಪಕ್ಷಗಳು ಜೊತೆಗೆ ಬರುತ್ತವೆಯೆ?

ಕಾಂಗ್ರೆಸ್ ಜೊತೆ ಯಾವುದೇ ಸಂಪರ್ಕ ಇಲ್ಲ. ಕುಮಾರಸ್ವಾಮಿ ಕೂಡಾ ಹಾಗೆ ಮಾಡುತ್ತಾರೆ ಎಂದು ನನಗನಿಸುವುದಿಲ್ಲ. ಸಿದ್ದರಾಮಯ್ಯ ಹೇಳುವುದೇನೆಂದರೆ ದೇವೇಗೌಡರ ಜೊತೆ ಹೋಗಿ ತಾವು ಸೋತೆವು ಎಂದು. (ನಗು) ಯಾವುದೇ ಸ್ಥಳೀಯ ನಾಯಕರು ಮಾತನಾಡಲು ಸಿದ್ಧರಿಲ್ಲ. ಸಿದ್ದರಾಮಯ್ಯ ಅವರು ಬಲಪ್ರದರ್ಶನ ಮಾಡಲು ಬಯಸುತ್ತಿದ್ದಾರೆ. ಆದರೆ, ಸೋನಿಯಾ ಗಾಂಧಿಯವರು ಉಪಚುನಾವಣೆಯಲ್ಲಿ ಸ್ಥಾನ ಹಂಚಿಕೆ ವಿಷಯ ಮಾತನಾಡಿದರೆ, ಅದು ಬೇರೆಯೇ ವಿಷಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ? ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿಯುತ್ತಿತಾ ತಿಳಿದುಕೊಂಡಿರುವಂತಿದೆ…family politics dangerous to democracy

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...