Homeಮುಖಪುಟಕವಿತೆಯೆಂಬ ಗುಬ್ಬಿಯ ಮೇಲೆ ಪ್ರಭುತ್ವವೆಂಬ ಹದ್ದಿನ ದಾಳಿ..

ಕವಿತೆಯೆಂಬ ಗುಬ್ಬಿಯ ಮೇಲೆ ಪ್ರಭುತ್ವವೆಂಬ ಹದ್ದಿನ ದಾಳಿ..

- Advertisement -
- Advertisement -

ಪ್ರಭುತ್ವ ಮತ್ತು ಮೂಲಭೂತವಾದ ಎರಡೂ ಅಪಾಯಕಾರಿಗಳೇ ಆಗಿವೆ. ಇವು ಒಂದಕ್ಕೊಂದು ಕೈಜೋಡಿಸಿದರೆ, ಪರಸ್ಪರ ಅಪ್ಪಿಕೊಂಡರೆ ಆಗುವ ಅನಾಹುತಗಳಿಗೆ ಕೊನೆಯೇ ಇಲ್ಲ. ಅದೀಗ ಭಾರತದಲ್ಲಿ ಸಂಭವಿಸುತ್ತಿದೆ. ಪ್ರಭುತ್ವ ಹದ್ದಿನಂತೆ, ಮೂಲಭೂತವಾದ ಡ್ಯಾಗನಂತೆ. ಇವೆರಡೂ ಕೂಡ ರಕ್ಕಸನಂತೆ ಎರಗುವ ಗುಣ ಹೊಂದಿವೆ. ಒಂಟಿ ಸಿಗುವ ಅಥವಾ ಗುಂಪಿನಿಂದ ಚೆಲ್ಲಾಪಿಲ್ಲಿಯಾದ ಪ್ರಾಣಿಗಳು ಬಹುಬೇಗ ಬಲಿಯಾಗುತ್ತವೆ.

ಪ್ರಭುತ್ವವೂ ಕೂಡ ಸಾಮಾನ್ಯರ ಮೇಲೆ ಹಾಗೆಯೇ ಎರಗುತ್ತದೆ. ನಿರುಪದ್ರವಿ ಗುಬ್ಬಿಯ ಮೇಲೆ ಹದ್ದು ಬಂದೆರಗುವಂತೆ ಪ್ರಭುತ್ವ ನಿರುಪ್ರದವಿ ಕವಿಗಳ ಮೇಲೆ ಕ್ರೂರ ದೃಷ್ಟಿ ಬೀರಿದೆ. ಕ್ರೌರ್ಯದ ಹಲ್ಲುಗಳಡಿ ಸಿಕ್ಕಿಸಿಕೊಂಡು ಜಗಿಯತೊಡಗಿದೆ. ಯಕಶ್ಚಿತ್ ಕವಿತೆಯೊಂದು ಪ್ರಭುತ್ವ ನಡೆಸುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳನ್ನು ಪ್ರಶ್ನಿಸಿತು ಎಂಬ ಕಾರಣಕ್ಕೆ ಕವಿಯನ್ನು ದೇಶದ್ರೋಹಿಯಂತೆ ಬಿಂಬಿಸಿ ಕಾರಾಗೃಹಕ್ಕೆ ಅಟ್ಟಿದೆ.

ಪ್ರಭುತ್ವದ ದೌರ್ಜನ್ಯ, ದಬ್ಬಾಳಿಕೆ ಇಂದಿನದೇನೂ ಅಲ್ಲ. ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವವರ ಮೇಲೆ ಕತ್ತಿ ಮಸೆಯುತ್ತಲೇ ಬರುತ್ತಿದೆ. ಕರ್ನಾಟಕದಲ್ಲಿ ಸತ್ಯ ಹೇಳಿದ್ದಕ್ಕಾಗಿ ಪ್ರಭುತ್ವಗಳು ಕೃತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಹಿರಿಯ ಸಂಶೋಧಕರಾಗಿದ್ದ ಎಂ.ಎಂ. ಕಲ್ಬುರ್ಗಿಯವರ ‘ಮಾರ್ಗ’, ಕವಿ ಎಚ್.ಎಸ್.ಶಿವಪ್ರಕಾಶ್ ಬರೆದ ನಾಟಕ ‘ಮಹಾಚೈತ್ರ’, ಪಿ.ವಿ. ನಾರಾಯಣರ ‘ಧರ್ಮಕಾರಣ’, ಲೇಖಕ ಬಂಜಗೆರೆ ಜಯಪ್ರಕಾಶ್ ವಿರಚಿತ ‘ಆನುದೇವ ಹೊರಗಣವನು’ ಕೃತಿಗಳು ಸತ್ಯದ ಬೆಳಕು ಚೆಲ್ಲಿದವು. ಇದೇ ಕಾರಣಕ್ಕೆ ಮೂಲಭೂತವಾದಿ ಶಕ್ತಿಗಳು ಪ್ರಭುತ್ವದ ಮೇಲೆ ಒತ್ತಡ ತಂದು ಜನರ ಓದಿಗೆ ದೊರಕದಂತೆ ನೋಡಿಕೊಂಡವು. ಈ ನಾಲ್ಕು ಕೃತಿಗಳಲ್ಲಿ ಬಸವಣ್ಣ ಮತ್ತು ಚನ್ನಬಸವಣ್ಣನ ಹುಟ್ಟು ಕುರಿತು ಸತ್ಯವನ್ನು ಹೊರಹಾಕಿದ್ದು ಮೂಲಭೂತವಾದ ಶಕ್ತಿಗಳಿಗೆ ಸಹಿಸಲಾಗಲಿಲ್ಲ. ಪ್ರಭುತ್ವದೊಂದಿಗೆ ಕೈಜೋಡಿಸಿ ಕವಿಗಳು, ನಾಟಕಕಾರರನ್ನು ಕಷ್ಟಕ್ಕೆ ಸಿಲುಕಿಸಿದವು.

ಈಗ ಕವಿತೆಯೊಂದು ಪ್ರಭುತ್ವಕ್ಕೆ ಪ್ರಶ್ನೆ ಕೇಳಿದೆ. ಜನರ ಗುರುತನ್ನು ಕೇಳುವ ಪ್ರಭುತ್ವಕ್ಕೆ ತನ್ನ ಗುರುತನ್ನು ಕೇಳಿದರೆ ತಪ್ಪೇನು? ಪ್ರಭುತ್ವದ ತಪ್ಪ ನಡೆಗಳನ್ನು ಪ್ರಶ್ನಿಸುವುದು ಪ್ರತಿಯೊಬ್ಬ ಪ್ರಜೆಯ ಸಂವಿಧಾನಬದ್ದ ಮೂಲಭೂತ ಹಕ್ಕು. ಪ್ರಭುತ್ವದ ಚುಕ್ಕಾಣಿ ಹಿಡಿದವರು ಕೂಡ ನಮ್ಮ ನಡುವಿನಿಂದಲೇ ಹೋಗಿರುವುದು. ನಾವು ಮತ ಚಲಾವಣೆ ಮಾಡದಿದ್ದರೆ ಪ್ರಭುತ್ವದ ಗುಡಿಯಲ್ಲಿ ಕೂರಲು ಆಗುತ್ತಿರಲಿಲ್ಲ ಎಂಬುದನ್ನು ಅವರು ನೆನಪು ಇಟ್ಟುಕೊಳ್ಳಬೇಕು. ಪ್ರಭುತ್ವದ ದಾಖಲೆಗಳು ಮುಖ್ಯವಲ್ಲವೇ? ಪ್ರಭುತ್ವ ಯಾರಿಂದ ಆಯ್ಕೆಗೊಳ್ಳುತ್ತದೋ ಅವರನ್ನೇ ಅನುಮಾನದಿಂದ ನೋಡುವುದಾದರೆ ಸಾಮಾನ್ಯ ಪ್ರಜೆಯೂ ಕೂಡ ಶಂಕೆ ವ್ಯಕ್ತಪಡಿಸುವುದರಲ್ಲಿ ತಪ್ಪಿಲ್ಲ. ಪ್ರಶ್ನೆ ಮಾಡುವುದರಲ್ಲಿ ತಪ್ಪಿಲ್ಲ. ಹಾಗಂತ ಪ್ರಭುತ್ವವನ್ನು ಪ್ರಶ್ನೆ ಮಾಡಿದ ಎಂಬ ಒಂದೇ ಕಾರಣಕ್ಕೆ ಕವಿಯನ್ನೇ ಜೈಲಿಗಟ್ಟುವುದು ನ್ಯಾಯಸಮ್ಮತವೇ? ಇದು ಪ್ರಭುತ್ವದ ತರವಲ್ಲದ, ಸಹಜವಲ್ಲದ ನಡವಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ.

ಸಿರಾಜ್ ಬಿಸರಳ್ಳಿ ಬರೆದದ್ದು ಒಂದೇ ಒಂದು ಕವನ. ಪುಸ್ತಕವನ್ನಲ್ಲ. ಪ್ರಶ್ನಿಸಿದ್ದು ಪ್ರಭುತ್ವವನ್ನು. ಭಾರತವೇ ನಕಲಿ ದಾಖಲೆಗಳ ತವರು ಆಗಿರುವಾಗ ಪ್ರಭುತ್ವದ ದಾಖಲೆಗಳನ್ನು ಕೇಳಿದ್ದು ತಪ್ಪಲ್ಲ. ಪ್ರಭುತ್ವದ ಕೈಕೆಳಗೆ ಮೂಲಭೂತವಾದ ಕೆಲಸ ಮಾಡುತ್ತದೆ. ಅದೇ ಮೂಲಭೂತವಾದ ಪ್ರಭುತ್ವದ ಮೇಲೆ ಒತ್ತಡ ಹೇರಿತು. ಕವಿಗೆ ಸಂಕಟವನ್ನು ತಂದೊಡ್ಡಿತು. ಕವಿ ಒಳಗಿದ್ದಾರೆ. ಕವಿತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ. ಕವಿಯ ದೇಹ ಸರಳುಗಳ ಹಿಂದಿದೆ. ಮನಸ್ಸು ವಿಶ್ವವ್ಯಾಪಿ ಹರಡಿಕೊಳ್ಳುತ್ತಿದೆ. ಕವಿತೆಯ ಧ್ವನಿ ಪ್ರತಿಧ್ವನಿಸುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವ ಮನಸ್ಸುಗಳನ್ನು ಹೆಚ್ಚಿಸುತ್ತಲೇ ಹೋಗುತ್ತಿದೆ. ಭಾಷೆ, ಧರ್ಮ, ಜಾತಿ, ಪ್ರದೇಶವನ್ನು ಮೀರಿ ಬೆಳೆಯುತ್ತಿದೆ. ಅದನ್ನು ತಡೆಯಲು ಪ್ರಭುತ್ವದಿಂದ ಸಾಧ್ಯವಿಲ್ಲ. ಪ್ರಶ್ನಿಸುವ ಎಲ್ಲರನ್ನು ಬಂಧಿಸಲು ಸಾಧ್ಯವೇ? ಬಹುಜನರನ್ನು ಬಂಧಿಸುವುದು ಗಾಳಿಯನ್ನು ಹಿಡಿದಿಟ್ಟಂತೆ. ಪ್ರಭುತ್ವ ತನ್ನ ದೇಹ-ಮನಸ್ಸನ್ನು ಬದಲಿಸುತ್ತಲೇ ಹೋದರೆ ಕವಿ ಪ್ರಶ್ನಿಸುತ್ತಲೇ ಇರುತ್ತಾನೆ ಎಂಬುದು ಪ್ರಭುತ್ವಕ್ಕೆ ಅರ್ಥವಾಗಬೇಕು.

ಬೆಂಗಳೂರಿನಲ್ಲಿ ಪ್ರಮಥರ ಗಣಮೇಳದಲ್ಲಿ ರಾಜಕೀಯ ನಾಯಕರೊಬ್ಬರು ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಬಿಜ್ಜಳ ಇದ್ದಂತೆ. ಮುರುಘಾ ಮಠದ ಅಧ್ಯಕ್ಷರಾದ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮಿಗಳು ಸಾಕ್ಷಾತ್ ಬಸವಣ್ಣ ಇದ್ದಂತೆ ಎಂದರು. ಆ ಮುಖಂಡರ ಮನಸ್ಸಿಗೆ ಹಾಗೆ ಅನ್ನಿಸಿರಬಹುದು. ಇಲ್ಲಿರುವ ಪ್ರಶ್ನೆಯೆಂದರೆ. ಹನ್ನೆರಡನೇ ಶತಮಾನದ ಬಿಜ್ಜಳನ ಕಾಲದಲ್ಲಿ ಬಸವಣ್ಣನಿಗೆ ರಾಜಪ್ರಭುತ್ವವನ್ನು ಪ್ರಶ್ನಿಸುವ ಅಧಿಕಾರ ನೀಡಿದ್ದ. ಶರಣರು ಮುಕ್ತ ವಚನಗಳನ್ನು ಹೇಳಬಹುದಿತ್ತು., ಈಗಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೋಲಿಸಿದರೆ ಅಂದು ನೂರಕ್ಕೆ ನೂರರಷ್ಟು ಮುಕ್ತ ವಾತಾವರಣವಿತ್ತು. ಮೂಲಭೂತವಾದಿ ಮನಸ್ಸುಗಳು ಬಿಜ್ಜಳನ ಮೇಲೆ ಒತ್ತಡ ತಂದರೂ ಅದಕ್ಕೆ ಬಿಜ್ಜಳ ಮಣಿಯಲಿಲ್ಲ. ಶರಣರು ಸ್ವತಂತ್ರರು. ಆದರೆ ಈಗಿನ ಬಿಜ್ಜಳ (ಯಡಿಯೂರಪ್ಪ ) ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿದೆ. ಸಿರಾಜ್ ಬಿಸರಳ್ಳಿ ಕವನ ಕೇಳಿಸಿಕೊಂಡ ಮೂಲಭೂತವಾದಿಯೊಬ್ಬ ಪ್ರಭುತ್ವದ ಮೇಲೆ ಒತ್ತಡ ಹೇರುತ್ತಿದ್ದಂತೆ ಬಂಧನ ಮಾಡಲಾಗಿದೆ. ಆಧುನಿಕ ಬಸವಣ್ಣನೆಂದು ಆ ಮುಖಂಡರಿಂದ ಕರೆಸಿಕೊಂಡಿರುವ ಮುರುಘಾ ಮಠದ ಪೀಠಾಧ್ಯಕ್ಷರಿಗೆ ಪ್ರಭುತ್ವವನ್ನು ಪ್ರಶ್ನಿಸಿ ಎದುರು ಹಾಕಿಕೊಳ್ಳುವ ಶಕ್ತಿ ಇದೆಯೇ? ಖಂಡಿತ ಇಲ್ಲ.

ಪ್ರಭುತ್ವದ ದಂಡಿಸುವ ಕೆಲಸಕ್ಕೆ ಕವಿ ನಲುಗಿಹೋಗಿದ್ದಾನೆ. ಧರ್ಮದ ಆಧಾರದ ಮೇಲೆಯೇ ದೂರುಗಳು ದಾಖಲಾಗುತ್ತಿವೆ. ಮೂಲಭೂತವಾದಿಗಳು ಮತ್ತು ಪ್ರಭುತ್ವ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಬೆದರಿಸುವ ಕೆಲಸಗಳು ನಡೆಯುತ್ತಿರುವಂತೆ ಕಾಣುತ್ತಿದೆ. ಜೆ.ಎನ್.ಯು ವಿವಿಯಲ್ಲಿ ಉಮರ್ ಖಾಲಿದ್, (ನಜೀಬ್ ಏನಾಗಿದ್ದಾನೋ ಗೊತ್ತಿಲ್ಲ) ಕವಿತೆ ಬರೆದದ್ದಕ್ಕಾಗಿ ಸಿರಾಜ್, ರಾಜಾ ಭಕ್ಷಿ, ಎನ್.ಆರ್.ಸಿ ವಿರುದ್ದ ಹೋರಾಟ ಮಾಡಿದ್ದಕ್ಕಾಗಿ ಡಾ.ಕಾಫೀಲ್ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗಿದೆ. ಶಾಹೀನ್ ಶಾಲೆಯಲ್ಲಿ ನಾಟಕ ಪ್ರದರ್ಶಿಸಿದ್ದಕ್ಕಾಗಿ ಶಾಲೆಯ ಮಕ್ಕಳ ವಿರುದ್ದ, ಅವರ ಪೋಷಕರ ವಿರುದ್ಧ, ಮುಖ್ಯೋಪಾಧ್ಯಾಯರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸುವ ಮತ್ತು ಬಂಧಿಸುವ ಮೂಲಕ ಪ್ರಶ್ನಿಸುವ ಹಾಗೂ ಪ್ರತಿಭಟಿಸುವವರನ್ನು ಭಯದಲ್ಲಿ ಇಡಲು ಪ್ರಭುತ್ವ ಯತ್ನಿಸುತ್ತಲೇ ಇದೆ. ಇದು ಸಮಾಜದಲ್ಲಿ ಪ್ರತಿರೋಧವನ್ನು ಹೆಚ್ಚು ಮಾಡುತ್ತದೆಯೇ ಹೊರತು ದ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಇದನ್ನು ಪ್ರಭುತ್ವ ಅರ್ಥಮಾಡಿಕೊಂಡರೆ ಒಳಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...