Homeಮುಖಪುಟಕವಿತೆಯೆಂಬ ಗುಬ್ಬಿಯ ಮೇಲೆ ಪ್ರಭುತ್ವವೆಂಬ ಹದ್ದಿನ ದಾಳಿ..

ಕವಿತೆಯೆಂಬ ಗುಬ್ಬಿಯ ಮೇಲೆ ಪ್ರಭುತ್ವವೆಂಬ ಹದ್ದಿನ ದಾಳಿ..

- Advertisement -
- Advertisement -

ಪ್ರಭುತ್ವ ಮತ್ತು ಮೂಲಭೂತವಾದ ಎರಡೂ ಅಪಾಯಕಾರಿಗಳೇ ಆಗಿವೆ. ಇವು ಒಂದಕ್ಕೊಂದು ಕೈಜೋಡಿಸಿದರೆ, ಪರಸ್ಪರ ಅಪ್ಪಿಕೊಂಡರೆ ಆಗುವ ಅನಾಹುತಗಳಿಗೆ ಕೊನೆಯೇ ಇಲ್ಲ. ಅದೀಗ ಭಾರತದಲ್ಲಿ ಸಂಭವಿಸುತ್ತಿದೆ. ಪ್ರಭುತ್ವ ಹದ್ದಿನಂತೆ, ಮೂಲಭೂತವಾದ ಡ್ಯಾಗನಂತೆ. ಇವೆರಡೂ ಕೂಡ ರಕ್ಕಸನಂತೆ ಎರಗುವ ಗುಣ ಹೊಂದಿವೆ. ಒಂಟಿ ಸಿಗುವ ಅಥವಾ ಗುಂಪಿನಿಂದ ಚೆಲ್ಲಾಪಿಲ್ಲಿಯಾದ ಪ್ರಾಣಿಗಳು ಬಹುಬೇಗ ಬಲಿಯಾಗುತ್ತವೆ.

ಪ್ರಭುತ್ವವೂ ಕೂಡ ಸಾಮಾನ್ಯರ ಮೇಲೆ ಹಾಗೆಯೇ ಎರಗುತ್ತದೆ. ನಿರುಪದ್ರವಿ ಗುಬ್ಬಿಯ ಮೇಲೆ ಹದ್ದು ಬಂದೆರಗುವಂತೆ ಪ್ರಭುತ್ವ ನಿರುಪ್ರದವಿ ಕವಿಗಳ ಮೇಲೆ ಕ್ರೂರ ದೃಷ್ಟಿ ಬೀರಿದೆ. ಕ್ರೌರ್ಯದ ಹಲ್ಲುಗಳಡಿ ಸಿಕ್ಕಿಸಿಕೊಂಡು ಜಗಿಯತೊಡಗಿದೆ. ಯಕಶ್ಚಿತ್ ಕವಿತೆಯೊಂದು ಪ್ರಭುತ್ವ ನಡೆಸುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳನ್ನು ಪ್ರಶ್ನಿಸಿತು ಎಂಬ ಕಾರಣಕ್ಕೆ ಕವಿಯನ್ನು ದೇಶದ್ರೋಹಿಯಂತೆ ಬಿಂಬಿಸಿ ಕಾರಾಗೃಹಕ್ಕೆ ಅಟ್ಟಿದೆ.

ಪ್ರಭುತ್ವದ ದೌರ್ಜನ್ಯ, ದಬ್ಬಾಳಿಕೆ ಇಂದಿನದೇನೂ ಅಲ್ಲ. ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವವರ ಮೇಲೆ ಕತ್ತಿ ಮಸೆಯುತ್ತಲೇ ಬರುತ್ತಿದೆ. ಕರ್ನಾಟಕದಲ್ಲಿ ಸತ್ಯ ಹೇಳಿದ್ದಕ್ಕಾಗಿ ಪ್ರಭುತ್ವಗಳು ಕೃತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಹಿರಿಯ ಸಂಶೋಧಕರಾಗಿದ್ದ ಎಂ.ಎಂ. ಕಲ್ಬುರ್ಗಿಯವರ ‘ಮಾರ್ಗ’, ಕವಿ ಎಚ್.ಎಸ್.ಶಿವಪ್ರಕಾಶ್ ಬರೆದ ನಾಟಕ ‘ಮಹಾಚೈತ್ರ’, ಪಿ.ವಿ. ನಾರಾಯಣರ ‘ಧರ್ಮಕಾರಣ’, ಲೇಖಕ ಬಂಜಗೆರೆ ಜಯಪ್ರಕಾಶ್ ವಿರಚಿತ ‘ಆನುದೇವ ಹೊರಗಣವನು’ ಕೃತಿಗಳು ಸತ್ಯದ ಬೆಳಕು ಚೆಲ್ಲಿದವು. ಇದೇ ಕಾರಣಕ್ಕೆ ಮೂಲಭೂತವಾದಿ ಶಕ್ತಿಗಳು ಪ್ರಭುತ್ವದ ಮೇಲೆ ಒತ್ತಡ ತಂದು ಜನರ ಓದಿಗೆ ದೊರಕದಂತೆ ನೋಡಿಕೊಂಡವು. ಈ ನಾಲ್ಕು ಕೃತಿಗಳಲ್ಲಿ ಬಸವಣ್ಣ ಮತ್ತು ಚನ್ನಬಸವಣ್ಣನ ಹುಟ್ಟು ಕುರಿತು ಸತ್ಯವನ್ನು ಹೊರಹಾಕಿದ್ದು ಮೂಲಭೂತವಾದ ಶಕ್ತಿಗಳಿಗೆ ಸಹಿಸಲಾಗಲಿಲ್ಲ. ಪ್ರಭುತ್ವದೊಂದಿಗೆ ಕೈಜೋಡಿಸಿ ಕವಿಗಳು, ನಾಟಕಕಾರರನ್ನು ಕಷ್ಟಕ್ಕೆ ಸಿಲುಕಿಸಿದವು.

ಈಗ ಕವಿತೆಯೊಂದು ಪ್ರಭುತ್ವಕ್ಕೆ ಪ್ರಶ್ನೆ ಕೇಳಿದೆ. ಜನರ ಗುರುತನ್ನು ಕೇಳುವ ಪ್ರಭುತ್ವಕ್ಕೆ ತನ್ನ ಗುರುತನ್ನು ಕೇಳಿದರೆ ತಪ್ಪೇನು? ಪ್ರಭುತ್ವದ ತಪ್ಪ ನಡೆಗಳನ್ನು ಪ್ರಶ್ನಿಸುವುದು ಪ್ರತಿಯೊಬ್ಬ ಪ್ರಜೆಯ ಸಂವಿಧಾನಬದ್ದ ಮೂಲಭೂತ ಹಕ್ಕು. ಪ್ರಭುತ್ವದ ಚುಕ್ಕಾಣಿ ಹಿಡಿದವರು ಕೂಡ ನಮ್ಮ ನಡುವಿನಿಂದಲೇ ಹೋಗಿರುವುದು. ನಾವು ಮತ ಚಲಾವಣೆ ಮಾಡದಿದ್ದರೆ ಪ್ರಭುತ್ವದ ಗುಡಿಯಲ್ಲಿ ಕೂರಲು ಆಗುತ್ತಿರಲಿಲ್ಲ ಎಂಬುದನ್ನು ಅವರು ನೆನಪು ಇಟ್ಟುಕೊಳ್ಳಬೇಕು. ಪ್ರಭುತ್ವದ ದಾಖಲೆಗಳು ಮುಖ್ಯವಲ್ಲವೇ? ಪ್ರಭುತ್ವ ಯಾರಿಂದ ಆಯ್ಕೆಗೊಳ್ಳುತ್ತದೋ ಅವರನ್ನೇ ಅನುಮಾನದಿಂದ ನೋಡುವುದಾದರೆ ಸಾಮಾನ್ಯ ಪ್ರಜೆಯೂ ಕೂಡ ಶಂಕೆ ವ್ಯಕ್ತಪಡಿಸುವುದರಲ್ಲಿ ತಪ್ಪಿಲ್ಲ. ಪ್ರಶ್ನೆ ಮಾಡುವುದರಲ್ಲಿ ತಪ್ಪಿಲ್ಲ. ಹಾಗಂತ ಪ್ರಭುತ್ವವನ್ನು ಪ್ರಶ್ನೆ ಮಾಡಿದ ಎಂಬ ಒಂದೇ ಕಾರಣಕ್ಕೆ ಕವಿಯನ್ನೇ ಜೈಲಿಗಟ್ಟುವುದು ನ್ಯಾಯಸಮ್ಮತವೇ? ಇದು ಪ್ರಭುತ್ವದ ತರವಲ್ಲದ, ಸಹಜವಲ್ಲದ ನಡವಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ.

ಸಿರಾಜ್ ಬಿಸರಳ್ಳಿ ಬರೆದದ್ದು ಒಂದೇ ಒಂದು ಕವನ. ಪುಸ್ತಕವನ್ನಲ್ಲ. ಪ್ರಶ್ನಿಸಿದ್ದು ಪ್ರಭುತ್ವವನ್ನು. ಭಾರತವೇ ನಕಲಿ ದಾಖಲೆಗಳ ತವರು ಆಗಿರುವಾಗ ಪ್ರಭುತ್ವದ ದಾಖಲೆಗಳನ್ನು ಕೇಳಿದ್ದು ತಪ್ಪಲ್ಲ. ಪ್ರಭುತ್ವದ ಕೈಕೆಳಗೆ ಮೂಲಭೂತವಾದ ಕೆಲಸ ಮಾಡುತ್ತದೆ. ಅದೇ ಮೂಲಭೂತವಾದ ಪ್ರಭುತ್ವದ ಮೇಲೆ ಒತ್ತಡ ಹೇರಿತು. ಕವಿಗೆ ಸಂಕಟವನ್ನು ತಂದೊಡ್ಡಿತು. ಕವಿ ಒಳಗಿದ್ದಾರೆ. ಕವಿತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ. ಕವಿಯ ದೇಹ ಸರಳುಗಳ ಹಿಂದಿದೆ. ಮನಸ್ಸು ವಿಶ್ವವ್ಯಾಪಿ ಹರಡಿಕೊಳ್ಳುತ್ತಿದೆ. ಕವಿತೆಯ ಧ್ವನಿ ಪ್ರತಿಧ್ವನಿಸುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವ ಮನಸ್ಸುಗಳನ್ನು ಹೆಚ್ಚಿಸುತ್ತಲೇ ಹೋಗುತ್ತಿದೆ. ಭಾಷೆ, ಧರ್ಮ, ಜಾತಿ, ಪ್ರದೇಶವನ್ನು ಮೀರಿ ಬೆಳೆಯುತ್ತಿದೆ. ಅದನ್ನು ತಡೆಯಲು ಪ್ರಭುತ್ವದಿಂದ ಸಾಧ್ಯವಿಲ್ಲ. ಪ್ರಶ್ನಿಸುವ ಎಲ್ಲರನ್ನು ಬಂಧಿಸಲು ಸಾಧ್ಯವೇ? ಬಹುಜನರನ್ನು ಬಂಧಿಸುವುದು ಗಾಳಿಯನ್ನು ಹಿಡಿದಿಟ್ಟಂತೆ. ಪ್ರಭುತ್ವ ತನ್ನ ದೇಹ-ಮನಸ್ಸನ್ನು ಬದಲಿಸುತ್ತಲೇ ಹೋದರೆ ಕವಿ ಪ್ರಶ್ನಿಸುತ್ತಲೇ ಇರುತ್ತಾನೆ ಎಂಬುದು ಪ್ರಭುತ್ವಕ್ಕೆ ಅರ್ಥವಾಗಬೇಕು.

ಬೆಂಗಳೂರಿನಲ್ಲಿ ಪ್ರಮಥರ ಗಣಮೇಳದಲ್ಲಿ ರಾಜಕೀಯ ನಾಯಕರೊಬ್ಬರು ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಬಿಜ್ಜಳ ಇದ್ದಂತೆ. ಮುರುಘಾ ಮಠದ ಅಧ್ಯಕ್ಷರಾದ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮಿಗಳು ಸಾಕ್ಷಾತ್ ಬಸವಣ್ಣ ಇದ್ದಂತೆ ಎಂದರು. ಆ ಮುಖಂಡರ ಮನಸ್ಸಿಗೆ ಹಾಗೆ ಅನ್ನಿಸಿರಬಹುದು. ಇಲ್ಲಿರುವ ಪ್ರಶ್ನೆಯೆಂದರೆ. ಹನ್ನೆರಡನೇ ಶತಮಾನದ ಬಿಜ್ಜಳನ ಕಾಲದಲ್ಲಿ ಬಸವಣ್ಣನಿಗೆ ರಾಜಪ್ರಭುತ್ವವನ್ನು ಪ್ರಶ್ನಿಸುವ ಅಧಿಕಾರ ನೀಡಿದ್ದ. ಶರಣರು ಮುಕ್ತ ವಚನಗಳನ್ನು ಹೇಳಬಹುದಿತ್ತು., ಈಗಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೋಲಿಸಿದರೆ ಅಂದು ನೂರಕ್ಕೆ ನೂರರಷ್ಟು ಮುಕ್ತ ವಾತಾವರಣವಿತ್ತು. ಮೂಲಭೂತವಾದಿ ಮನಸ್ಸುಗಳು ಬಿಜ್ಜಳನ ಮೇಲೆ ಒತ್ತಡ ತಂದರೂ ಅದಕ್ಕೆ ಬಿಜ್ಜಳ ಮಣಿಯಲಿಲ್ಲ. ಶರಣರು ಸ್ವತಂತ್ರರು. ಆದರೆ ಈಗಿನ ಬಿಜ್ಜಳ (ಯಡಿಯೂರಪ್ಪ ) ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಎಲ್ಲಿದೆ. ಸಿರಾಜ್ ಬಿಸರಳ್ಳಿ ಕವನ ಕೇಳಿಸಿಕೊಂಡ ಮೂಲಭೂತವಾದಿಯೊಬ್ಬ ಪ್ರಭುತ್ವದ ಮೇಲೆ ಒತ್ತಡ ಹೇರುತ್ತಿದ್ದಂತೆ ಬಂಧನ ಮಾಡಲಾಗಿದೆ. ಆಧುನಿಕ ಬಸವಣ್ಣನೆಂದು ಆ ಮುಖಂಡರಿಂದ ಕರೆಸಿಕೊಂಡಿರುವ ಮುರುಘಾ ಮಠದ ಪೀಠಾಧ್ಯಕ್ಷರಿಗೆ ಪ್ರಭುತ್ವವನ್ನು ಪ್ರಶ್ನಿಸಿ ಎದುರು ಹಾಕಿಕೊಳ್ಳುವ ಶಕ್ತಿ ಇದೆಯೇ? ಖಂಡಿತ ಇಲ್ಲ.

ಪ್ರಭುತ್ವದ ದಂಡಿಸುವ ಕೆಲಸಕ್ಕೆ ಕವಿ ನಲುಗಿಹೋಗಿದ್ದಾನೆ. ಧರ್ಮದ ಆಧಾರದ ಮೇಲೆಯೇ ದೂರುಗಳು ದಾಖಲಾಗುತ್ತಿವೆ. ಮೂಲಭೂತವಾದಿಗಳು ಮತ್ತು ಪ್ರಭುತ್ವ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಬೆದರಿಸುವ ಕೆಲಸಗಳು ನಡೆಯುತ್ತಿರುವಂತೆ ಕಾಣುತ್ತಿದೆ. ಜೆ.ಎನ್.ಯು ವಿವಿಯಲ್ಲಿ ಉಮರ್ ಖಾಲಿದ್, (ನಜೀಬ್ ಏನಾಗಿದ್ದಾನೋ ಗೊತ್ತಿಲ್ಲ) ಕವಿತೆ ಬರೆದದ್ದಕ್ಕಾಗಿ ಸಿರಾಜ್, ರಾಜಾ ಭಕ್ಷಿ, ಎನ್.ಆರ್.ಸಿ ವಿರುದ್ದ ಹೋರಾಟ ಮಾಡಿದ್ದಕ್ಕಾಗಿ ಡಾ.ಕಾಫೀಲ್ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗಿದೆ. ಶಾಹೀನ್ ಶಾಲೆಯಲ್ಲಿ ನಾಟಕ ಪ್ರದರ್ಶಿಸಿದ್ದಕ್ಕಾಗಿ ಶಾಲೆಯ ಮಕ್ಕಳ ವಿರುದ್ದ, ಅವರ ಪೋಷಕರ ವಿರುದ್ಧ, ಮುಖ್ಯೋಪಾಧ್ಯಾಯರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸುವ ಮತ್ತು ಬಂಧಿಸುವ ಮೂಲಕ ಪ್ರಶ್ನಿಸುವ ಹಾಗೂ ಪ್ರತಿಭಟಿಸುವವರನ್ನು ಭಯದಲ್ಲಿ ಇಡಲು ಪ್ರಭುತ್ವ ಯತ್ನಿಸುತ್ತಲೇ ಇದೆ. ಇದು ಸಮಾಜದಲ್ಲಿ ಪ್ರತಿರೋಧವನ್ನು ಹೆಚ್ಚು ಮಾಡುತ್ತದೆಯೇ ಹೊರತು ದ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಇದನ್ನು ಪ್ರಭುತ್ವ ಅರ್ಥಮಾಡಿಕೊಂಡರೆ ಒಳಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...