Homeಕರ್ನಾಟಕಭೈರಪ್ಪಾ, ಆಲಯದಿಂದ ಬಯಲಿಗೆ ಬಾರಪ್ಪ: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

ಭೈರಪ್ಪಾ, ಆಲಯದಿಂದ ಬಯಲಿಗೆ ಬಾರಪ್ಪ: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

- Advertisement -
- Advertisement -

‘‘ದೇಶದಲ್ಲಿ ಸುಮಾರು 35 ಸಾವಿರ ದೇವಾಲಯಗಳು ಒಡೆದು ಛಿದ್ರವಾಗಿವೆ. ಅವುಗಳನ್ನು ಮರುನಿರ್ಮಾಣ ಮಾಡಿ ಮೂಲ ವಾರಸುದಾರರಿಗೆ ಒಪ್ಪಿಸುವಂತಹ ಕಾನೂನನ್ನು ಸಂಸತ್ತು‌ ರೂಪಿಸಲಿ’’ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, “ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನವದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಪಂಜಾಬಿಗಳು ಮಾತ್ರ. ಈ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಕಮ್ಯುನಿಷ್ಟ್‌ ಪಕ್ಷಗಳು ಕೊಳಕು ರಾಜಕೀಯ ಮಾಡುತ್ತಿವೆ” ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಮೋದಿಯವರ ಅಹಂ ದೊಡ್ಡದೋ, ರೈತಶಕ್ತಿ ದೊಡ್ಡದೋ ತೀರ್ಮಾನವಾಗಲಿದೆ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶದ ಜೊತೆಗೆ ಟ್ರೋಲ್‌ಗೂ ಒಳಗಾಗಿದ್ದಾರೆ. ವೈಚಾರಿಕ ಲೇಖಕ ಯೋಗೇಶ್ ಮೇಷ್ಟ್ರು, ಭೈರಪ್ಪಾ, ಆಲಯದಿಂದ ಬಯಲಿಗೆ ಬಾರಪ್ಪ ಎಂದು ವ್ಯಂಗ್ಯ ವ್ಯಕ್ತಪಡಿಸಿದ್ದು, “ದೇಶದಲ್ಲಿ 35 ಸಾವಿರ ದೇವಾಲಯಗಳು ಒಡೆದು ಛಿದ್ರವಾಗಿವೆ ಎಂಬುದು ಭೈರಪ್ಪನವರ ಲೆಕ್ಕ. ಇದೇ ದೇಶದಲ್ಲಿ ಕೋಟ್ಯಾಂತರ ಹೃದಯಗಳು ಈ ದೇವಾಲಯದ ರಾಜಕಾಣದಲ್ಲಿ ಛಿದ್ರವಾಗಿರುವುದು ನನಗೆ ಪಕ್ಕ. ದೇವಾಲಯಗಳನ್ನು ಮರು ನಿರ್ಮಾಣ ಮಾಡಿ ಅವುಗಳ ಮೂಲ ವಾರಸುದಾರರಿಗೆ ಒಪ್ಪಿಸುವ ಕಾನೂನಲ್ಲ ಪಾರ್ಲಿಮೆಂಟ್ ಮಾಡಬೇಕಾಗಿರುವುದು, ಮನಸುಗಳನ್ನು ಸ್ವಸ್ಥಗೊಳಿಸಿ, ಹೃದಯಗಳನ್ನು ಬೆಚ್ಚಗಿಡುವ ಜರೂರತ್ತು ಎಲ್ಲರಿಗಿರುವುದು” ಎಂದು ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಸಾಹಿತಿ ವಿ. ಆರ್‌. ಕಾರ್ಪೇಂಟರ್‌ ಅವರು, ಲೈಂಗಿಕತೆ ಮತ್ತು ಸ್ವಾರ್ಥಳನ್ನೇ ತನ್ನ ಕಾದಂಬರಿಗಳಲ್ಲಿ ತುಂಬಿ ಬರೆದ, ಮಾನವೀಯತೆಯ ಲವಶೇಷವಿಲ್ಲದ ಭೈರಪ್ಪ ಒಬ್ಬ ತೃತೀಯ ದರ್ಜೆಯ ಲೇಖಕ ಎಂದು ಆಕ್ರೋಶ ವ್ಯಕ್ತಪಡಿಸಿ, “ಐದರಿಂದ ಆರು ಕೋಟಿ ಜನಸಂಖ್ಯೆ ಇರುವ ನಿಮ್ಮ ಜಾತಿಯ ಜನಕ್ಕೆ ಬರೀ 35000 ಟೆಂಪಲ್‌ಗಳ? ಭೈರಪ್ಪ ತುಂಬಾ ಕಂಜೂಸ್ ಅನಿಸ್ತಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು

ಶರಣು ಚಕ್ರಸಾಲಿ ಅವರು, “ಎಸ್ ಎಲ್ ಭೈರಪ್ಪ ಅವರು ತಮ್ಮ ಶವಪೆಟ್ಟಿಗೆಗೆ ತಾವೇ ಕೊನೆ ಮೊಳೆ ಹೊಡೆದುಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿದೆ. ಒಬ್ಬ ಲೇಖಕರಾಗಿ ಇಷ್ಟು ಲಜ್ಜಗೇಡಿ ಬದುಕನ್ನು ಬದುಕಬಾರದು. ಇವರ ಬಗ್ಗೆ ಇರುವ ಸಣ್ಣ ಗೌರವ ಕೂಡ ಇವತ್ತು ಮನಸ್ಸಿನಿಂದ ಮಾಯವಾಯಿತು” ಎಂದು ಬರೆದಿದ್ದಾರೆ.

ಸಂವಾದ ಕಾಲೇಜಿನ ಯೂತ್ ಮೇಂಟರ್‌ ಆಗಿರುವ ರುಕ್ಮಿಣಿ ನಾಗಣ್ಣನವರ್‌ ಅವರು, “ಬದುಕೋಕೆ ಮೂಲಭೂತವಾಗಿ ಬೇಕಿರೋದು ಮಂದಿರ, ಮಸೀದಿ, ಚರ್ಚುಗಳ ನಿರ್ಮಾಣವಲ್ಲ. ತಲೆ ಮೇಲೊಂದು ಸೂರು, ಬೆಚ್ಚನೆಯ ಬಟ್ಟೆ, ಹೊದಿಕೆ, ಶುದ್ಧ ಗಾಳಿ, ನೀರು. ಶಿಕ್ಷಣ ಅನ್ನೋ ಫ್ಯಾಕ್ಟ್ರರಿಯಲ್ಲಿ ವರ್ಷ ವರ್ಷ ಲಕ್ಷಾಂತರ ಯುವಜನರು ಡಿಗ್ರಿ ಪಡ್ಕೊಂಡ್ ನಿರುದ್ಯೋಗದ ಸಮಸ್ಯೆಯಿಂದ ತಮ್ಮೊಳಗಿನ ಆತ್ಮವಿಶ್ವಾಸವನ್ನೇ ಉಡುಗಿಸಿಕೊಂಡು ಕೈಚಲ್ಲಿ ಕೂತಿದ್ದಾರೆ. ಇಷ್ಟದ ಓದಿಲ್ಲ, ಓದಿಗೆ ತಕ್ಕನಂಥ ಉದ್ಯೋಗ ಇಲ್ಲ. ಉದ್ಯೋಗಕ್ಕೆ ತಕ್ಕದಾದ ಸಂಬಳ ಇಲ್ಲ. ಘನತೆ ಇದ್ಯಾ? ಪ್ರತಿವರ್ಷ ಎಸ್.ಎಸ್.ಎಲ್.ಸಿ ಪಾಸಾದ ಯುವಜನರಿಗೆ ಕರಿಯರ್ ಮಾರ್ಗದರ್ಶನ ಇಲ್ಲ. ಹರೆಯದಲ್ಲಿ ಅವರು ಅವರದ್ದೇ ಆದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ, ಗೊಂದಲಗಳಿಂದ ಒದ್ದಾಡ್ತಾ ಇದ್ದಾರೆ. ಇಂಥವನ್ನೆಲ್ಲ ಬಿಟ್ಟು… ಇನ್ನೇನೋ ಮಾತಾಡ್ತೀರಲ್ಲ ತಾತ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ

ಸಾಮಾಜಿಕ ಕಾರ್ಯಕರ್ತ ನಾಗರಾಜ್ ಮೈತ್ರಿ ಅವರು, “ಕೊನೆಯ ಬಾರಿ ಇವರಿಗೆ ಮಿಸ್ ಆಗಿದೆ. ಈ ಸಲಾ ಪಕ್ಕಾ ಇವರಿಗೆ ಕೊಡುತ್ತಾರೆ ಎಂದು ತೋರುತ್ತದೆ. ವರ್ಷದ ಮೊದಲ ವಾರದಲ್ಲೆ ಇವರು ಬ್ಯಾಟಿಂಗ್ ಪ್ರಾರಂಭಿಸಿದ್ದಾಲ್ಲ, ಅದಕ್ಕಾದರೂ ಕೊಡುತ್ತಾರೆ” ಎಂದು, ಜ್ಞಾನಪೀಠಕ್ಕಾಗಿ ಎಸ್‌.ಎಲ್. ಭೈರಪ್ಪ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಸೂಚಿಸಿದ್ದಾರೆ.

ಮೌರ್ಯಾಸ್ ಅವರು, “ಶಾಲೆ ನಿರ್ಮಾಣವಾಗಲಿ ಅನ್ನೋದು ಬಿಟ್ಟು ದೇವಸ್ಥಾನ ನಿರ್ಮಾಣವಾಗಲಿ ಎಂದು ಹೇಳುತ್ತಿರುವ ಸಾಹಿತಿ ಭೈರಪ್ಪ ಇನ್ನೂ ಆಧುನಿಕ ಜಗತ್ತಿಗೆ ಬಂದಿಲ್ಲವೆಂಬುದೇ ದುರಂತ. ಇವರೆಂತಹ ಸಾಹಿತಿ ಎಂಬುದು ಆರ್ಥವಾಗುತ್ತಿದೆ” ಎಂದು ಬರೆದಿದ್ದಾರೆ.

ವಿಠಲ್ ವಗ್ಗನ್ ಅವರು ,”ಶಾಲೆಗಳನ್ನು ಕಟ್ಟಿ ವಿದ್ಯಾವಂತರನ್ನು ಸೃಷ್ಟಿ ಮಾಡಿ ಎಂದು ಸಲಹೆ ಕೊಡದ S. L. ಭೈರಪ್ಪ. ಗುಡಿಗಳನ್ನು ಕಟ್ಟಿ ಭಿಕ್ಷುಕರನ್ನು ಮತ್ತು ಅಂಧ ಭಕ್ತರನ್ನು ಹೆಚ್ಚಿಸಿ ಎಂದು ಸಲಹೆ ಕೊಡುವ ಮನುವ್ಯಾದಿ ಯಾವ ಸೀಮೆ ಸಾಹಿತಿ ?” ಎಂದು ಬರೆದಿದ್ದಾರೆ.

ಗುರುಪ್ರಸಾದ್ ಅವರು, “ಭೈರಪ್ಪನವರಿಗೆ ಇನ್ನೂ ಯಾಕ ಯಾರು ದೇವಸ್ತಾನ ಕಟ್ಟಿಲ್ಲ. ಕಟ್ಟಿಬುಡ್ರೋ ಬೇಗ, ಟ್ರಂಪ್‌ಗೆ ಕಟ್ಟಿದ್ದೀರಂತೆ” ಎಂದು ಬಿಜೆಪಿ ಅಭಿಮಾನಿಗಳನ್ನು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಮೀಸಲಾತಿ ವಿರೋಧಿ-ಮೀಸಲಾತಿ ಹೆಚ್ಚಳ ಬೇಡಿಕೆಯ ರಾಜಕೀಯದ ನಡುವೆ ಸವಲತ್ತು ಉಳಿಸಿಕೊಳ್ಳುವ ಮಸಲತ್ತು!

ಇದನ್ನೂ ಓದಿ: ಮಹಿಷಾಸುರ ತೋಡಾ ಬುಡಕಟ್ಟಿನವನೇ? ನಾಗ ಕುಲದವನೇ? ಬೌದ್ಧ ಅರಸನೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ನಗೆಯು ಬರುತಿದೆ ನನಗೆ ಈ ಲೇಖನಗಳನ್ನೆಲ್ಲ ನೋಡಿ
    ಅಪ್ಪಟ ಎಡಪಂಥೀಯ/ದೇಶವಿರೋಧಿ ಆಲೋಚನೆಗಳ ವಿವಿಧ ರಾಗಗಳ ಮೇಳಗಳ ಪ್ರಲಾಪ ಎಂದೆನಿಸುತ್ತಿದೆ
    ಮನಸ್ಸಾಕ್ಷಿ ಯೇ ಕಾಣುತ್ತಿಲ್ಲ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...