ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ಅವರು ಹೃದಾಯಾಘಾತದಿಂದ ಮತಪಟ್ಟ ಘಟನೆ ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಸ್ಪಂದನಾ ತನ್ನ ಕುಟುಂಬದೊಂದಿಗೆ ಥೈಲ್ಯಾಂಡ್ನಲ್ಲಿ ವಿಹಾರಕ್ಕೆ ತೆರಳಿದ್ದರು. ವೈದ್ಯರ ಪ್ರಕಾರ ಕಡಿಮೆ ರಕ್ತದೊತ್ತಡದಿಂದ ಹೃದಯಾಘಾತವಾಗಿದೆ ಎಂದು ಹೇಳಲಾಗಿದೆ. ನಟನ ಪತ್ನಿಯ ಪಾರ್ಥಿವ ಶರೀರ ನಾಳೆ ಬೆಂಗಳೂರಿಗೆ ಬರಲಿದೆ ಎನ್ನಲಾಗಿದೆ. ಪಾರ್ಥಿವ ಶರೀರದ ಆಗಮನದ ನಂತರ ಇತರ ವಿಧಿವಿಧಾನಗಳನ್ನು ನಡೆಸಲು ಕುಟುಂಬ ಸಿದ್ಧತೆಯನ್ನು ನಡೆಸಿದೆ.
ಸ್ಪಂದನಾ ಅವರು ಬೆಂಗಳೂರಿನ ನಿವಾಸಿಯಾಗಿದ್ದು, ಮಾಜಿ ಎಸಿಪಿ ಬಿಕೆ ಶಿವರಾಂ ಅವರ ಪುತ್ರಿಯಾಗಿದ್ದಾರೆ.ಇದೀಗ ಅವರ ಮೃತದೇಹವನ್ನು ವಾಪಾಸ್ಸು ತರಲು ಬ್ಯಾಂಕಾಕ್ ಗೆ ವಿಜಯ್ ರಾಘವೇಂದ್ರ ಅವರ ಕುಟುಂಬ ತೆರಳಿದೆ.ಮೃತದೇಹವನ್ನು ಭಾರತಕ್ಕೆ ತರಲು ಅಗತ್ಯ ದಾಖಲೆಗಳನ್ನು ಸಿದ್ಧತೆ ಮಾಡಲಾಗುತ್ತಿದೆ.
ಇವರು ನಟ ರಾಘವೇಂದ್ರ ಅವರ ಜೊತೆ 2007ರಲ್ಲಿ ವಿವಾಹವಾಗಿದ್ದರು.ಸ್ಪಂದನಾ 2016 ರಲ್ಲಿ ತೆರೆಕಂಡ ರವಿಚಂದ್ರನ್ ಅವರ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದರು, ಇದರ ಜೊತೆಗೆ ಸ್ಪಂದನಾ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು.
ಇದನ್ನು ಓದಿ: ಉತ್ತರಪ್ರದೇಶ: 70 ವರ್ಷದ ವ್ಯಕ್ತಿಯ ಗುಂಪು ಹತ್ಯೆ