Homeಮುಖಪುಟಆಪತ್ತಿನ ಕತೆಗಳು-ಕತ್ತಿಯವರಿಗೇಕೆ ಬೈತೀರಿ…ಪಾಪ | ರಾಜಾರಾಮ್ ತಲ್ಲೂರು ಬರಹ

ಆಪತ್ತಿನ ಕತೆಗಳು-ಕತ್ತಿಯವರಿಗೇಕೆ ಬೈತೀರಿ…ಪಾಪ | ರಾಜಾರಾಮ್ ತಲ್ಲೂರು ಬರಹ

ಸನ್ಮಾನ್ಯ ಪ್ರಧಾನಮಂತ್ರಿಗಳು ಮೊನ್ನೆ ಎಂಎಸ್‌ಪಿ ಥಾ; ಎಂಎಸ್‌ಪಿ ಹೈ; ಎಂಎಸ್‌ಪಿ ರಹೇಗಾ ಅಂದಿದ್ದರಲ್ವಾ? ಅವರು ಸತ್ಯ ಹೇಳಿದ್ದಾರೆ. ಆದರೆ, ಈ ಕ್ರೊನಾಲಜಿ ಸ್ವಲ್ಪ … ಸಮಝೀಯೆ…!

- Advertisement -
- Advertisement -

ಕೇಂದ್ರ ಸರ್ಕಾರದ ಕೃಷಿ ನೀತಿಯ ಅಂತಿಮ ಪರಿಣಾಮಗಳಲ್ಲಿ ಸಚಿವ ಕತ್ತಿಯವರ ಪ್ರಕಟಣೆಯೂ ಒಂದು. ಕೃಷಿ-ಆಹಾರ ಸಬ್ಸಿಡಿಗಳಿಂದ ಕೈತೊಳೆದುಕೊಳ್ಳುವ ಪ್ರಯತ್ನದ ಭಾಗ ಇದು. ಅಷ್ಟೇ.

ಸನ್ಮಾನ್ಯ ಪ್ರಧಾನಮಂತ್ರಿಗಳು ಮೊನ್ನೆ ‘ಎಂಎಸ್‌ಪಿ ಥಾ; ಎಂಎಸ್‌ಪಿ ಹೈ; ಎಂಎಸ್‌ಪಿ ರಹೇಗಾ’ ಅಂದಿದ್ದರಲ್ವಾ? ಅವರು ಸತ್ಯ ಹೇಳಿದ್ದಾರೆ. ಆದರೆ, ಈ ಕ್ರೊನಾಲಜಿ ಸ್ವಲ್ಪ … ಸಮಝೀಯೆ…!

  • ಎಪಿಎಂಸಿಗಳಿಂದ ಹೊರಗೆ ಖರೀದಿಗೆ ಅವಕಾಶ ಕೊಟ್ಟಾಗ, ಎಪಿಎಂಸಿಗಳು ನಿಧಾನಕ್ಕೆ ಅಪ್ರಸ್ತುತಗೊಳ್ಳುತ್ತವೆ. ಅಲ್ಲಿ ಎಂಎಸ್‌ಪಿ ಕೊಟ್ಟು ಅತಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವವರು ಯಾರು ಗೊತ್ತೆ? ಕೇಂದ್ರ ಸರ್ಕಾರದ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಯಾನೆ ಎಫ್‌ಸಿಐ.
  • ಎಫ್‌ಸಿಐ ತಾನು ಸಂಗ್ರಹಿಸಿ ಉಗ್ರಾಣಗಳಲ್ಲಿರಿಸಿದ ಆಹಾರಧಾನ್ಯಗಳನ್ನು ಪಡಿತರ ವಿತರಣೆಯ ಮೂಲಕ ವಿತರಿಸಲು ರಾಜ್ಯಸರ್ಕಾರಗಳ ಪಡಿತರ ವ್ಯವಸ್ಥೆಗೆ ಬಿಡುಗಡೆ ಮಾಡುತ್ತದೆ.

ಇದನ್ನೂ ಓದಿ: ಹೊಸ ಕೃಷಿ ಕಾನೂನುಗಳ ಹಿನ್ನೆಲೆ ಏನು? ಯಾಕಾಗಿ ಇವು ಈಗ ತಲೆ ಎತ್ತಿವೆ?

  • ಕೇಂದ್ರ ಸರ್ಕಾರ ತನ್ನ ಆಹಾರ ಸಬ್ಸಿಡಿ ಕಡಿತ ಕಾರ್ಯಕ್ರಮದ ಭಾಗವಾಗಿ ಎಫ್‌ಸಿಐಗೆ ನೀಡುವ ಸಬ್ಸಿಡಿ ಕಡಿಮೆ ಮಾಡಿದಾಗ, ಸಹಜವಾಗಿಯೇ ಅದು ಪಡಿತರಕ್ಕೆಂದು ಖರೀದಿಸುವ ಆಹಾರಧಾನ್ಯಗಳ ಪ್ರಮಾಣ ಕಡಿಮೆ ಆಗುತ್ತಾ ಬರುತ್ತದೆ. (ಚಿತ್ರದಲ್ಲಿ ಸಬ್ಸಿಡಿ ಶೇಕಡಾವಾರು ಈ ಸರ್ಕಾರದ ಅವಧಿಯಲ್ಲಿ ಕುಸಿಯುತ್ತಾ ಬಂದಿರುವ ಪ್ರಮಾಣವನ್ನು ಗಮನಿಸಿ)

  • ಆಗ ಸಹಜವಾಗಿಯೇ ರಾಜ್ಯ ಸರ್ಕಾರಗಳು ತಮ್ಮ ಆಹಾರ ಪಡಿತರ ವಿತರಣಾ ವ್ಯವಸ್ಥೆಯ ಗಾತ್ರವನ್ನು ಸಂಕುಚಿಸಬೇಕಾಗುತ್ತದೆ. ಅದನ್ನೇ ಕತ್ತಿಯವರು ಹೇಳಿದ್ದು. ಟಿವಿ-ಫ್ರಿಡ್ಜು ಇತ್ಯಾದಿ ಇರುವವರಿಗೆಲ್ಲ ಬಿಪಿಎಲ್ ಕಾರ್ಡು ಯಾಕೆ ಎಂದು. ಅವರೀಗ ಜನಕ್ಕೆ ಸಿಟ್ಟು ಬಂದಿದೆ ಎಂದು ತೀರ್ಮಾನವನ್ನು ಹಿಂತೆಗೆದುಕೊಂಡರೂ ಕೂಡ ಅದು ಗವಾಕ್ಷೀಲಿ ಹಿಂದಿರುಗೋದು ಖಂಡಿತಾ!
  • ಈ ಬಾರಿ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಎಫ್‌ಸಿಐನ ಸಾಲದ ಹೊಂಡ ಭರ್ತಿ ಮಾಡಲು ಈ ಬಾರಿಯ ಫುಡ್ ಸಬ್ಸಿಡಿಯನ್ನು ವ್ಯಯಿಸಲಾಗುವುದು ಎಂದು ಹೇಳಿದ್ದಾರೆ. ಅಂದರೆ, ಎಫ್‌ಸಿಐ ಹೆಚ್ಚಿನಂಶ ತನ್ನ ಹೊಂಡಗಳನ್ನು ಮುಚ್ಚಿಕೊಂಡು ದುಂಡಗಾಗಿ, ಖಾಸಗೀಕರಣಕ್ಕೆ ಸಿದ್ಧವಾಗುತ್ತಿದೆ. ಯಾವುದೋ ಒಂದು ಆನಿ ಕಂಪನಿಯ ಖಾಸಗಿ ಸಿಲೊ ಆಗಲು ತಯಾರಾಗುತ್ತಿದೆ.
  • ಹೀಗೆ, ಒಟ್ಟಿನಲ್ಲಿ ಎಪಿಎಂಸಿ ಅಪ್ರಸ್ತುತವಾದರೆ, ಎಂಎಸ್‌ಪಿ ಇದ್ದೂ ಸತ್ತಂತೆ; ಎಂಎಸ್‌ಪಿ ಸತ್ತರೆ ಎಫ್‌ಸಿಐ ಸತ್ತಂತೆ; ಎಫ್‌ಸಿಐ ಸತ್ತರೆ ಆಹಾರ ಪಡಿತರ ವಿತರಣಾ ವ್ಯವಸ್ಥೆ ಸತ್ತಂತೆ. ನಾನು ಅರ್ಥ ಮಾಡಿಕೊಂಡಂತೆ, ಇದು ಸಂಪೂರ್ಣ ಚಿತ್ರ.

ಒಟ್ಟಿನಲ್ಲಿಸರ್ಕಾರದ್ದು ಬಡವರ ನಿರ್ಮೂಲನಾ ಕಾರ್ಯಕ್ರಮ!

ಇದನ್ನೂ ಓದಿ: ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...