Homeಮುಖಪುಟಆಪತ್ತಿನ ಕತೆಗಳು-ಕತ್ತಿಯವರಿಗೇಕೆ ಬೈತೀರಿ…ಪಾಪ | ರಾಜಾರಾಮ್ ತಲ್ಲೂರು ಬರಹ

ಆಪತ್ತಿನ ಕತೆಗಳು-ಕತ್ತಿಯವರಿಗೇಕೆ ಬೈತೀರಿ…ಪಾಪ | ರಾಜಾರಾಮ್ ತಲ್ಲೂರು ಬರಹ

ಸನ್ಮಾನ್ಯ ಪ್ರಧಾನಮಂತ್ರಿಗಳು ಮೊನ್ನೆ ಎಂಎಸ್‌ಪಿ ಥಾ; ಎಂಎಸ್‌ಪಿ ಹೈ; ಎಂಎಸ್‌ಪಿ ರಹೇಗಾ ಅಂದಿದ್ದರಲ್ವಾ? ಅವರು ಸತ್ಯ ಹೇಳಿದ್ದಾರೆ. ಆದರೆ, ಈ ಕ್ರೊನಾಲಜಿ ಸ್ವಲ್ಪ … ಸಮಝೀಯೆ…!

- Advertisement -
- Advertisement -

ಕೇಂದ್ರ ಸರ್ಕಾರದ ಕೃಷಿ ನೀತಿಯ ಅಂತಿಮ ಪರಿಣಾಮಗಳಲ್ಲಿ ಸಚಿವ ಕತ್ತಿಯವರ ಪ್ರಕಟಣೆಯೂ ಒಂದು. ಕೃಷಿ-ಆಹಾರ ಸಬ್ಸಿಡಿಗಳಿಂದ ಕೈತೊಳೆದುಕೊಳ್ಳುವ ಪ್ರಯತ್ನದ ಭಾಗ ಇದು. ಅಷ್ಟೇ.

ಸನ್ಮಾನ್ಯ ಪ್ರಧಾನಮಂತ್ರಿಗಳು ಮೊನ್ನೆ ‘ಎಂಎಸ್‌ಪಿ ಥಾ; ಎಂಎಸ್‌ಪಿ ಹೈ; ಎಂಎಸ್‌ಪಿ ರಹೇಗಾ’ ಅಂದಿದ್ದರಲ್ವಾ? ಅವರು ಸತ್ಯ ಹೇಳಿದ್ದಾರೆ. ಆದರೆ, ಈ ಕ್ರೊನಾಲಜಿ ಸ್ವಲ್ಪ … ಸಮಝೀಯೆ…!

  • ಎಪಿಎಂಸಿಗಳಿಂದ ಹೊರಗೆ ಖರೀದಿಗೆ ಅವಕಾಶ ಕೊಟ್ಟಾಗ, ಎಪಿಎಂಸಿಗಳು ನಿಧಾನಕ್ಕೆ ಅಪ್ರಸ್ತುತಗೊಳ್ಳುತ್ತವೆ. ಅಲ್ಲಿ ಎಂಎಸ್‌ಪಿ ಕೊಟ್ಟು ಅತಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವವರು ಯಾರು ಗೊತ್ತೆ? ಕೇಂದ್ರ ಸರ್ಕಾರದ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಯಾನೆ ಎಫ್‌ಸಿಐ.
  • ಎಫ್‌ಸಿಐ ತಾನು ಸಂಗ್ರಹಿಸಿ ಉಗ್ರಾಣಗಳಲ್ಲಿರಿಸಿದ ಆಹಾರಧಾನ್ಯಗಳನ್ನು ಪಡಿತರ ವಿತರಣೆಯ ಮೂಲಕ ವಿತರಿಸಲು ರಾಜ್ಯಸರ್ಕಾರಗಳ ಪಡಿತರ ವ್ಯವಸ್ಥೆಗೆ ಬಿಡುಗಡೆ ಮಾಡುತ್ತದೆ.

ಇದನ್ನೂ ಓದಿ: ಹೊಸ ಕೃಷಿ ಕಾನೂನುಗಳ ಹಿನ್ನೆಲೆ ಏನು? ಯಾಕಾಗಿ ಇವು ಈಗ ತಲೆ ಎತ್ತಿವೆ?

  • ಕೇಂದ್ರ ಸರ್ಕಾರ ತನ್ನ ಆಹಾರ ಸಬ್ಸಿಡಿ ಕಡಿತ ಕಾರ್ಯಕ್ರಮದ ಭಾಗವಾಗಿ ಎಫ್‌ಸಿಐಗೆ ನೀಡುವ ಸಬ್ಸಿಡಿ ಕಡಿಮೆ ಮಾಡಿದಾಗ, ಸಹಜವಾಗಿಯೇ ಅದು ಪಡಿತರಕ್ಕೆಂದು ಖರೀದಿಸುವ ಆಹಾರಧಾನ್ಯಗಳ ಪ್ರಮಾಣ ಕಡಿಮೆ ಆಗುತ್ತಾ ಬರುತ್ತದೆ. (ಚಿತ್ರದಲ್ಲಿ ಸಬ್ಸಿಡಿ ಶೇಕಡಾವಾರು ಈ ಸರ್ಕಾರದ ಅವಧಿಯಲ್ಲಿ ಕುಸಿಯುತ್ತಾ ಬಂದಿರುವ ಪ್ರಮಾಣವನ್ನು ಗಮನಿಸಿ)

  • ಆಗ ಸಹಜವಾಗಿಯೇ ರಾಜ್ಯ ಸರ್ಕಾರಗಳು ತಮ್ಮ ಆಹಾರ ಪಡಿತರ ವಿತರಣಾ ವ್ಯವಸ್ಥೆಯ ಗಾತ್ರವನ್ನು ಸಂಕುಚಿಸಬೇಕಾಗುತ್ತದೆ. ಅದನ್ನೇ ಕತ್ತಿಯವರು ಹೇಳಿದ್ದು. ಟಿವಿ-ಫ್ರಿಡ್ಜು ಇತ್ಯಾದಿ ಇರುವವರಿಗೆಲ್ಲ ಬಿಪಿಎಲ್ ಕಾರ್ಡು ಯಾಕೆ ಎಂದು. ಅವರೀಗ ಜನಕ್ಕೆ ಸಿಟ್ಟು ಬಂದಿದೆ ಎಂದು ತೀರ್ಮಾನವನ್ನು ಹಿಂತೆಗೆದುಕೊಂಡರೂ ಕೂಡ ಅದು ಗವಾಕ್ಷೀಲಿ ಹಿಂದಿರುಗೋದು ಖಂಡಿತಾ!
  • ಈ ಬಾರಿ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಎಫ್‌ಸಿಐನ ಸಾಲದ ಹೊಂಡ ಭರ್ತಿ ಮಾಡಲು ಈ ಬಾರಿಯ ಫುಡ್ ಸಬ್ಸಿಡಿಯನ್ನು ವ್ಯಯಿಸಲಾಗುವುದು ಎಂದು ಹೇಳಿದ್ದಾರೆ. ಅಂದರೆ, ಎಫ್‌ಸಿಐ ಹೆಚ್ಚಿನಂಶ ತನ್ನ ಹೊಂಡಗಳನ್ನು ಮುಚ್ಚಿಕೊಂಡು ದುಂಡಗಾಗಿ, ಖಾಸಗೀಕರಣಕ್ಕೆ ಸಿದ್ಧವಾಗುತ್ತಿದೆ. ಯಾವುದೋ ಒಂದು ಆನಿ ಕಂಪನಿಯ ಖಾಸಗಿ ಸಿಲೊ ಆಗಲು ತಯಾರಾಗುತ್ತಿದೆ.
  • ಹೀಗೆ, ಒಟ್ಟಿನಲ್ಲಿ ಎಪಿಎಂಸಿ ಅಪ್ರಸ್ತುತವಾದರೆ, ಎಂಎಸ್‌ಪಿ ಇದ್ದೂ ಸತ್ತಂತೆ; ಎಂಎಸ್‌ಪಿ ಸತ್ತರೆ ಎಫ್‌ಸಿಐ ಸತ್ತಂತೆ; ಎಫ್‌ಸಿಐ ಸತ್ತರೆ ಆಹಾರ ಪಡಿತರ ವಿತರಣಾ ವ್ಯವಸ್ಥೆ ಸತ್ತಂತೆ. ನಾನು ಅರ್ಥ ಮಾಡಿಕೊಂಡಂತೆ, ಇದು ಸಂಪೂರ್ಣ ಚಿತ್ರ.

ಒಟ್ಟಿನಲ್ಲಿಸರ್ಕಾರದ್ದು ಬಡವರ ನಿರ್ಮೂಲನಾ ಕಾರ್ಯಕ್ರಮ!

ಇದನ್ನೂ ಓದಿ: ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...