Homeಅಂಕಣಗಳುಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..

ಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..

- Advertisement -
- Advertisement -

ಇತ್ತೀಚೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ’ಮರಕೊಗಾವಾತೊ ಬ್ಯಾರಿಙ’ (ಮರೆಯಲಾಗದ ಬ್ಯಾರಿಗಳು) ಎಂಬ ಗ್ರಂಥವನ್ನು ಹೊರತರುವ ನಿಟ್ಟಿನಲ್ಲಿ ಗತಿಸಿದ ಬ್ಯಾರಿ ಸಾಧಕರ ಕುರಿತಾದ ಬರಹಗಳನ್ನು ಆಹ್ವಾನಿಸಿತ್ತು. ಅಗಲಿದ ಮಹನೀಯರ ಪೈಕಿ ಬ್ಯಾರಿ ಮಹಿಳಾ ಸಾಧಕಿಯರನ್ನು ಗುರುತಿಸುವುದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಕಾರಣ ಅಂದು ಬ್ಯಾರಿ ಮಹಿಳೆಯರ ಪ್ರತಿಭೆ ನಾಲ್ಕು ಗೋಡೆಗಳ ಮಧ್ಯೆ ಬಚ್ಚಿಟ್ಟುಕೊಂಡು ಉರಿವ ಒಲೆಯ ಮುಂದೆ ಉರಿದು ಬೂದಿಯಾಗುತ್ತಿತ್ತು.

ಪಟ್ಟಿಗೆ ಪಟ್ಟಿ ಬೆಳೆಯುತ್ತಾ ಹೋದ ಬ್ಯಾರಿ ಪುರುಷರ ಮಧ್ಯೆ ಬೆರಳೆಣಿಕೆಯ ಬ್ಯಾರಿ ಮಹಿಳೆಯರ ಹೆಸರು ಮಾತ್ರ ಸೇರಿಕೊಂಡಿತ್ತು. ಅದರಲ್ಲಿದ್ದವರು ನಾಟಿ ವೈದ್ಯೆ ಮತ್ತು ಸೂಲಗಿತ್ತಿಯರು ಮಾತ್ರ. ಎಲ್ಲಾದರೂ ಅಪರೂಪದ ಮಹಿಳಾ ಸಾಧಕಿಯರು ಸಿಗಬಹುದೇ ಎಂದು ಹಿರಿಯ ಬ್ಯಾರಿ ಸ್ತ್ರೀಯೊಬ್ಬರನ್ನು ಭೇಟಿಯಾಗಿ ಕೆದಕಿದೆ. ಹೌದೌದು, ಕಟ್ಟಿಗೆ ಒಲೆಯನ್ನು ಶ್ರಮ ಪಟ್ಟು ಉರಿಸಿ, ತುಂಬು ಕುಟುಂಬಕ್ಕೆ ಅನ್ನ ಬೇಯಿಸಿ ಹಾಕುವುದು, ಹೊಲ ಗದ್ದೆಗಳಲ್ಲಿ ದುಡಿಯುವುದು, ಮನೆಗೆಲಸ, ಮಕ್ಕಳು ಇವೇ ನಮ್ಮ ಜಗತ್ತಾಗಿತ್ತು. ಇನ್ನು ಮನೆ ಹಿರಿಯರ ಮುಂದೆ ನಮ್ಮ ಮಾತಿಗೆಲ್ಲಿ ಬೆಲೆಯಿತ್ತು. ಮಹಿಳೆಯರೆಂದರೆ ಮುಸುರೆ ತಿಕ್ಕಲು, ಚಾಕರಿ ಮಾಡಲಿಕ್ಕಿರುವವರೆಂಬ ಭಾವನೆ ಅವರಿಗಿತ್ತು. ಎರಡಕ್ಷರ ಕಲಿಯಬೇಕೆಂಬ ಆಸೆ ಮನಸ್ಸಿನಲ್ಲಿದ್ರೂ ಆಡುವ ವಯಸ್ಸಿನಲ್ಲಿ ನನ್ನಪ್ಪ ಆಡು ಮೇಯಿಸಲು ಕಳಿಸಿದ್ದರು. ಅವರಿಗೂ ವಿದ್ಯೆಯಿರಲಿಲ್ಲ.

ಹೆಣ್ಮಕ್ಕಳು ಶಾಲೆ ಕಲಿಯುವುದು ನಮ್ಮ ಧರ್ಮಕ್ಕೆ ವಿರುದ್ಧವಾದುದು ಎಂಬ ವಾದ ಅವರದಾಗಿತ್ತು. ಓಟಿನ ದಿನ ಮಾತ್ರ ನಾನು ಶಾಲೆಯ ಮೆಟ್ಟಿಲು ಹತ್ತುತ್ತಿದ್ದುದು ಎಂದು ಜೋರಾಗಿ ನಗುತ್ತಾ, ನಿನಗೆ ಸೂಲಗಿತ್ತಿಯರು, ನಾಟಿ ವೈದ್ಯೆಯರು ಬಿಟ್ಟರೆ ಬೇರೆ ಯಾರೂ ಸಿಗಲಿಕ್ಕಿಲ್ಲ ಮಗಾ ಎಂದರು. ಬ್ಯಾರಿ ಮುಸ್ಲಿಮ್ ಹೆಣ್ಮಕ್ಕಳ ಈಗಿನ ಶೈಕ್ಷಣಿಕ ಪ್ರಗತಿಯನ್ನೂ, ಸಾಧನೆಗಳನ್ನೂ ಗಮನಿಸುವಾಗ ಹೆಣ್ಮಕ್ಕಳ ಶಿಕ್ಷಣದ ಮಹತ್ವವನ್ನು ಬ್ಯಾರಿ ಸಮುದಾಯವು ತಡವಾಗಿಯಾದರೂ ಅರ್ಥೈಸಿಕೊಂಡಿತು ಎನ್ನುವುದೇ ಸಮಾಧಾನದ ಸಂಗತಿ.

ಬ್ಯಾರಿ ಗಂಡುಮಕ್ಕಳೇ ಶಾಲೆಯ ಹೊಸ್ತಿಲು ತುಳಿಯದಿದ್ದ ಕಾಲದಲ್ಲಿ ಮನೆಯೊಳಗೆ ಯಾವುದೇ ಸ್ಥಾನಮಾನ ದಕ್ಕದ ಹೆಣ್ಮಕ್ಕಳು ಮನೆಯಿಂದ ಹೊರಗಿಳಿದು ಶಿಕ್ಷಣ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಹೆಣ್ಮಕ್ಕಳು ಮನೆಯಿಂದ ಹೊರಗಿಳಿದರೆ ಹಾಳಾಗುತ್ತಾರೆ, ಕುಟುಂಬದ ಮಾನ ಮರ್ಯಾದೆ ಹೋಗುತ್ತದೆ ಎಂಬ ಭಯವೂ, ಅಜ್ಞಾನವೂ ಹಿರಿಯರಲ್ಲಿತ್ತು.

ಧಾರ್ಮಿಕ ಶಿಕ್ಷಣ ನೀಡಲು ಇಸ್ಲಾಮೀ ವಿದ್ವಾಂಸರು ಕೇರಳದಿಂದ ಮಂಗಳೂರಿಗೆ ಬರುತ್ತಿದ್ದುದರಿಂದ ಧಾರ್ಮಿಕವಾಗಿ ಕರ್ನಾಟಕದ ಇತರ ಭಾಗಗಳಿಗಿಂತ ಬ್ಯಾರಿ ಮುಸ್ಲಿಮರು ಮಲಬಾರ್‌ಗೆ ಹೆಚ್ಚು ನಿಕಟರಾಗಿದ್ದರು.

ಮಲಬಾರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್ ಉಲಮಾಗಳು ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದರು. ಗಾಂಧೀಜಿಯವರು ಬ್ರಿಟಿಷರನ್ನು ಬಹಿಷ್ಕರಿಸುವ ಸಲುವಾಗಿ ಉಪ್ಪಿನ ಸತ್ಯಾಗ್ರಹವನ್ನು ಕೈಗೊಂಡಂತೆ, ಖಾದಿಯನ್ನು ಉತ್ತೇಜಿಸಿದಂತೆ ಈ ಉಲಮಾಗಳೂ ಬ್ರಿಟಿಷರನ್ನು ಭಾರತದಿಂದ ಓಡಿಸುವ ಸಲುವಾಗಿ ಅವರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಫತ್ವಾ ಹೊರಡಿಸಿದರು. ಇದು ಯಾವ ಮಟ್ಟಕ್ಕೆ ತಲುಪಿತೆಂದರೆ ಉಲಮಾಗಳನ್ನು ಅನುಸರಿಸುವವರೆಲ್ಲರೂ ಇಂಗ್ಲಿಷ್ ಭಾಷೆ ಹಾಗೂ ಅವರ ಶಿಕ್ಷಣ ನೀತಿಯನ್ನು ವಿರೋಧಿಸಿದರು.

ಬ್ಯಾರಿ ಮುಸ್ಲಿಮರು ಅಕ್ಷರ ವಂಚಿತರಾಗಲು ಇದೂ ಒಂದು ಕಾರಣವೆನ್ನಬಹುದು.

ಯಾವಾಗ ಇಲ್ಲಿನ ಮುಸ್ಲಿಮರಲ್ಲಿ ಗಲ್ಫ್ ಉದ್ಯೋಗಿಗಳ ಸಂಖ್ಯೆ ಏರತೊಡಗಿತೋ ಆಗ ಹೆಣ್ಮಕ್ಕಳಿಗೂ ನಾಲ್ಕಕ್ಷರ ತಿಳಿದಿರಬೇಕು ಎಂಬ ಪ್ರಜ್ಞೆ ಮನೆ ಹಿರಿಯರಲ್ಲಿ ಮೂಡತೊಡಗಿತು. ದೂರದೂರಿನ ಗಂಡನಿಗೆ ಪತ್ರ ಬರೆಯಲೋ, ಓದಲೋ ಅಂಚೆ ಪೇದೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ಬ್ಯಾರಿ ಸಮುದಾಯವು ಮಹಿಳೆಯರಿಗೂ ಅಲ್ಪ ಸ್ವಲ್ಪ ಶಿಕ್ಷಣ ನೀಡಲು ಮುಂದೆ ಬಂತು. ಆದಾಗ್ಯೂ ಬೀಡಿಯ ಸೂಪು ಮಡಿಲಿಗೇರಿಸುವುದನ್ನು ತಪ್ಪಿಸಲು ಆ ದಿನಗಳಲ್ಲಿ ಮಹಿಳೆಯರಿಂದ ಸಾಧ್ಯವಾಗಲೇ ಇಲ್ಲ. ತಮಾಷೆಯ ವಿಚಾರವೇನೆಂದರೆ, ಮನೆ ಹಿರಿಯರು ವೈದ್ಯರು ಬರೆದುಕೊಟ್ಟ ಔಷಧಿ ಚೀಟಿಯನ್ನು ಮನೆ ಹೆಣ್ಮಕ್ಕಳಿಗೆ ತೋರಿಸಿ ಏನು ಮದ್ದು ಬರೆದಿರುವರೆಂದು ಓದಿ ಹೇಳಲು ಹೇಳುತ್ತಿದ್ದರಂತೆ. ಗೊತ್ತಿಲ್ಲವೆಂದರೆ ಮತ್ತೆ ಶಾಲೆಗೆ ಹೋಗಿ ಕಲಿತದ್ದಾದರೂ ಏನು ಎಂದು ಗದರಿಸುತ್ತಿದ್ದರಂತೆ. ಕೆಲವೊಂದು ವೈದ್ಯರು ಬರೆದ ಚೀಟಿಯನ್ನು ವಿದ್ಯಾವಂತರಿಂದಲೇ ಓದಲಾಗುವುದಿಲ್ಲ, ಇನ್ನು ಎರಡನೇ ತರಗತಿ ಹೆಚ್ಚೆಂದರೆ ಐದನೇ ತರಗತಿಯವರೆಗೆ ಓದಿದ ಅವರೆಲ್ಲಿ ಓದಬೇಕು!

ಹೀಗೆ ಒಮ್ಮೆ ತೆರೆದ ಅವಕಾಶದ ಬಾಗಿಲನ್ನು ಬ್ಯಾರಿ ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡರು. ಹಂತಹಂತವಾಗಿ ಪ್ರಗತಿ ಸಾಧಿಸಿದ ಶಿಕ್ಷಣವು ಏಳನೇ ತರಗತಿಯವರೆಗೆ ಬಂದು ನಿಂತಿತು. ಆ ಹೊತ್ತಿಗಾಗಲೇ ಬ್ಯಾರಿ ತಾಯಂದಿರು ನಮ್ಮ ಮಕ್ಕಳು ನಮ್ಮಂತಾಗಬಾರದು, ಅವರು ಶಿಕ್ಷಣದಿಂದ ವಂಚಿತರಾಗಬಾರದು. ಹೆಣ್ಮಕ್ಕಳು ಅಡುಗೆ ಕೋಣೆಯೊಳಗೆ ಬಂಧಿಯಾಗಬಾರದು ಎಂಬ ಗಟ್ಟಿ ನಿರ್ಧಾರ ತಾಳಿದ್ದರು.

1989ರಲ್ಲಿ ಸಮುದಾಯದ ಶೈಕ್ಷಣಿಕ ಅಭ್ಯುದಯಕ್ಕಾಗಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ’ಜಮಿಯ್ಯತುಲ್ ಫಲಾಹ್’ ಸಂಸ್ಥೆಯು ಸಮುದಾಯದ ಮನವೊಲಿಸಿ ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿತು. ಸುಮಾರು ಹತ್ತು ವರ್ಷಗಳ ಬಳಿಕ ಅದರ ಫಲ ದೊರಕತೊಡಗಿತು. 2005ರಲ್ಲಿ ಸ್ಥಾಪನೆಗೊಂಡ ಟಿ.ಆರ್.ಎಫ್ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಯಲ್ಲಿ ಕುಳಿತು ಬೀಡಿಕಟ್ಟುತ್ತಿದ್ದ ಹೆಣ್ಮಕ್ಕಳಲ್ಲಿ ಮತ್ತೆ ಹೊಸ ಕನಸನ್ನು ಬಿತ್ತಿ ಅವರಿಗೆ ನೇರ ಎಸ್‌ಎಸ್‌ಎಲ್‌ಸಿ/ ಪಿಯುಸಿ ತರಬೇತಿಯನ್ನು ನೀಡುವ ಸಲುವಾಗಿ ಮರಳಿ ಬಾ ಶಾಲೆಗೆ ಯೋಜನೆಯನ್ನು ಹಾಕಿ ಯಶಸ್ವಿಯಾಯಿತು.

ಉತ್ತಮ ಗುಣಮಟ್ಟದ ಶಿಕ್ಷಣವು ಹೆತ್ತವರು ತನ್ನ ಮಕ್ಕಳಿಗೆ ಕೊಡುವ ಅತ್ಯಮೂಲ್ಯ ಉಡುಗೊರೆಯಾಗಿದೆ ಎಂದಿದ್ದಾರೆ ಪ್ರವಾದಿ ಮುಹಮ್ಮದ್(ಸ.ಅ). ಕುರ್‌ಆನ್ ಅವತೀರ್ಣಗೊಂಡಾಗ ಬಂದ ಮೊದಲ ಪದವೇ ’ಇಖ್‌ರಅ’ (ಓದು) ಎಂಬುದಾಗಿದೆ. ಈ ವಚನದ ಅರ್ಥವನ್ನು ಸರಿಯಾಗಿ ಗ್ರಹಿಸಿ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಒಂದೊಮ್ಮೆ ಸೋತಿದ್ದ ಉಲಮಾ ವರ್ಗವೇ ಇಂದು ಮಹಿಳೆಯರಿಗಾಗಿ ಸಾಲು ಸಾಲಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯ ದೀವಟಿಗೆ ಹಿಡಿದಿದೆ.

ಯಾವಾಗ ಬ್ಯಾರಿ ಹುಡುಗಿಯರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ಉತ್ತುಂಗಕ್ಕೇರತೊಡಗಿದರೋ ಅದು ಮೇಲ್ಜಾತಿಯವರ ಕಣ್ಣಿಗೆ ಕುಕ್ಕತೊಡಗಿತು. ಸುಮಾರು ಹದಿನೆಂಟು ವರ್ಷಗಳ ಹಿಂದೆ ವಾರ್ತಾಭಾರತಿ ಪತ್ರಿಕೆಯ ರಂಗ ಪ್ರವೇಶ ಎಲೆಮರೆಯ ಪ್ರತಿಭಾನ್ವಿತ ಬ್ಯಾರಿ ಹೆಣ್ಮಕ್ಕಳನ್ನು, ರ್‍ಯಾಂಕ್ ವಿಜೇತರನ್ನು ಮುಖ್ಯವಾಹಿನಿಗೆ ಪರಿಚಯಿಸಿತು. ರ್‍ಯಾಂಕುಗಳೆಂದರೆ ಮೇಲ್ಜಾತಿಯ ಸ್ವತ್ತೆಂಬ ನಂಬಿಕೆಯನ್ನು ಬ್ಯಾರಿ ಹುಡುಗಿಯರು ಹುಸಿಗೊಳಿಸಿದರು. ತಮಗೆ ಪ್ರತಿಸ್ಪರ್ಧಿಗಳು ಹುಟ್ಟಿದ್ದನ್ನು ಕಂಡು ಅವರಿಗೆ ಸಹಿಸಲಾಗಲೇ ಇಲ್ಲ. ನಾನು ಪ್ರಾಥಮಿಕ ತರಗತಿಯಲ್ಲಿ ಕಲಿಯುತ್ತಿದ್ದಾಗ ನನಗೊಬ್ಬಳು ಬ್ರಾಹ್ಮಣ ಗೆಳತಿಯಿದ್ದಳು. ಪ್ರತೀ ಬಾರಿ ಪರೀಕ್ಷೆಯಲ್ಲಿ ಅವಳಿಗಿಂತ ಒಂದೆರಡು ಅಂಕಗಳ ಅಂತರದಲ್ಲಿ ನಾನು ತರಗತಿಗೆ ಮೊದಲಿಗಳಾಗುತ್ತಿದ್ದೆ. ಇದನ್ನು ಸಹಿಸದ ಬ್ರಾಹ್ಮಣ ಶಿಕ್ಷಕಿಯೊಬ್ಬರು ನಂತರದ ದಿನಗಳಲ್ಲಿ ಅವಳಿಗೆ ಪರೀಕ್ಷೆಯಲ್ಲಿ ಉತ್ತರಗಳನ್ನು ಹೇಳಿಕೊಟ್ಟು ತರಗತಿಗೆ ಮೊದಲಿಗಳನ್ನಾಗಿ ಮಾಡಿದ ಘಟನೆ ನನ್ನ ಮನಸ್ಸಿನಿಂದ ಮಾಸುವುದೇ ಇಲ್ಲ. ಇದು ನನ್ನ ವೈಯಕ್ತಿಕ ಅನುಭವ.

ಅಲ್ಲಿಯವರೆಗೆ ನಿಮ್ಮ ಹೆಣ್ಮಕ್ಕಳೇಕೆ ಶಾಲೆ ಕಲಿಯುತ್ತಿಲ್ಲ ಎಂದು ಕೇಳುತ್ತಿದ್ದವರಿಗೆ, ಆಧುನಿಕ ಶಿಕ್ಷಣ ರಂಗದಲ್ಲಿ ಆಕೆ ತನ್ನ ಹೆಜ್ಜೆ ಗುರುತು ಮೂಡಿಸತೊಡಗಿದಾಗ ಸ್ಕಾರ್ಫ್, ಬುರ್ಖಾ ಕಣ್ಣು ಕುಕ್ಕತೊಡಗಿತು. ಆ ಮೂಲಕ ಅವಳ ಮನೋಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವೂ ನಡೆಯಿತು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಅವಳಿಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಛಾಪು ಮೂಡಿಸತೊಡಗಿದ್ದಾಳೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ ಶೇ.50ರಷ್ಟು ಮಂದಿ ತಮ್ಮ ಹೆಣ್ಮಕ್ಕಳನ್ನು ಕಾಲೇಜುಗಳಿಗೆ ಕಳಿಸುವ ಉದ್ದೇಶ ಮದುವೆಗೆ ಉತ್ತಮ ಸಂಬಂಧ ಕೂಡಿ ಬರಲಿ ಎಂದಾಗಿದೆ. ಸಂಬಂಧ ಕೂಡಿಬರುವ ತನಕ ಹೆಣ್ಮಕ್ಕಳು ಕಲಿಯಲಿ ಎನ್ನುವವರೂ ಇದ್ದಾರೆ. ಈ ಕಾರಣದಿಂದಾಗಿ ಪರೀಕ್ಷೆ ಬರೆಯುವ ಮುನ್ನ ಅರ್ಧಕ್ಕೇ ಶಿಕ್ಷಣವನ್ನು ಮೊಟಕುಗೊಳಿಸಿ ವೈವಾಹಿಕ ಜೀವನಕ್ಕೆ ಕಾಲಿಡುವ ಹೆಣ್ಮಕ್ಕಳೂ ಇದ್ದಾರೆ. ಶಿಕ್ಷಣ ಪಡೆಯುವುದರ ಉದ್ದೇಶ ಇದೊಂದೇ ಆಗಿರಬಾರದು. ಕಲಿತು ಉದ್ಯೋಗ ಗಿಟ್ಟಿಸಿಕೊಂಡ ಹೆಣ್ಣು, ಮದುವೆಯ ನಂತರ ಕೆಲಸ ಬಿಟ್ಟರೆ ಅವಳನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡು ಹೆಣ್ಮಕ್ಕಳು ಎಷ್ಟು ಕಲಿತರೂ ಅಷ್ಟೇ, ಕೊನೆಗೂ ಒಲೆಯ ಮುಂದೆ ನಿಲ್ಲಲೇಬೇಕು ಎಂಬ ನಿಲುವು ತಾಳಿಬಿಡುತ್ತಾರೆ. ಹೊರಗಡೆ ದುಡಿಯುವುದು ಆಕೆಯ ಆಯ್ಕೆಯೇ ಹೊರತು ಅದು ಕಡ್ಡಾಯವೇನಲ್ಲ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ.

ಈ ನಿಟ್ಟಿನಲ್ಲಿ ನಮ್ಮೊಳಗೆ ಇನ್ನಷ್ಟು ಬದಲಾವಣೆಯ ಅಗತ್ಯವಿದೆ.


ಇದನ್ನೂ ಓದಿ: ಎಲೆಮರೆಯಿಂದ: ತಳ ಮಟ್ಟದ ಆರ್ಥಿಕ ಸ್ವಾವಲಂಬನೆ ಮತ್ತು ಮಂಗಳೂರಿನ ಟಿ.ಆರ್.ಎಫ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...