Homeಅಂಕಣಗಳುಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..

ಎಲೆಮರೆಯಿಂದ: ಬ್ಯಾರಿ ಮಹಿಳಾ ಶಿಕ್ಷಣ ಸಾಗಿ ಬಂದ ಕವಲುದಾರಿ..

- Advertisement -
- Advertisement -

ಇತ್ತೀಚೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ’ಮರಕೊಗಾವಾತೊ ಬ್ಯಾರಿಙ’ (ಮರೆಯಲಾಗದ ಬ್ಯಾರಿಗಳು) ಎಂಬ ಗ್ರಂಥವನ್ನು ಹೊರತರುವ ನಿಟ್ಟಿನಲ್ಲಿ ಗತಿಸಿದ ಬ್ಯಾರಿ ಸಾಧಕರ ಕುರಿತಾದ ಬರಹಗಳನ್ನು ಆಹ್ವಾನಿಸಿತ್ತು. ಅಗಲಿದ ಮಹನೀಯರ ಪೈಕಿ ಬ್ಯಾರಿ ಮಹಿಳಾ ಸಾಧಕಿಯರನ್ನು ಗುರುತಿಸುವುದು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಕಾರಣ ಅಂದು ಬ್ಯಾರಿ ಮಹಿಳೆಯರ ಪ್ರತಿಭೆ ನಾಲ್ಕು ಗೋಡೆಗಳ ಮಧ್ಯೆ ಬಚ್ಚಿಟ್ಟುಕೊಂಡು ಉರಿವ ಒಲೆಯ ಮುಂದೆ ಉರಿದು ಬೂದಿಯಾಗುತ್ತಿತ್ತು.

ಪಟ್ಟಿಗೆ ಪಟ್ಟಿ ಬೆಳೆಯುತ್ತಾ ಹೋದ ಬ್ಯಾರಿ ಪುರುಷರ ಮಧ್ಯೆ ಬೆರಳೆಣಿಕೆಯ ಬ್ಯಾರಿ ಮಹಿಳೆಯರ ಹೆಸರು ಮಾತ್ರ ಸೇರಿಕೊಂಡಿತ್ತು. ಅದರಲ್ಲಿದ್ದವರು ನಾಟಿ ವೈದ್ಯೆ ಮತ್ತು ಸೂಲಗಿತ್ತಿಯರು ಮಾತ್ರ. ಎಲ್ಲಾದರೂ ಅಪರೂಪದ ಮಹಿಳಾ ಸಾಧಕಿಯರು ಸಿಗಬಹುದೇ ಎಂದು ಹಿರಿಯ ಬ್ಯಾರಿ ಸ್ತ್ರೀಯೊಬ್ಬರನ್ನು ಭೇಟಿಯಾಗಿ ಕೆದಕಿದೆ. ಹೌದೌದು, ಕಟ್ಟಿಗೆ ಒಲೆಯನ್ನು ಶ್ರಮ ಪಟ್ಟು ಉರಿಸಿ, ತುಂಬು ಕುಟುಂಬಕ್ಕೆ ಅನ್ನ ಬೇಯಿಸಿ ಹಾಕುವುದು, ಹೊಲ ಗದ್ದೆಗಳಲ್ಲಿ ದುಡಿಯುವುದು, ಮನೆಗೆಲಸ, ಮಕ್ಕಳು ಇವೇ ನಮ್ಮ ಜಗತ್ತಾಗಿತ್ತು. ಇನ್ನು ಮನೆ ಹಿರಿಯರ ಮುಂದೆ ನಮ್ಮ ಮಾತಿಗೆಲ್ಲಿ ಬೆಲೆಯಿತ್ತು. ಮಹಿಳೆಯರೆಂದರೆ ಮುಸುರೆ ತಿಕ್ಕಲು, ಚಾಕರಿ ಮಾಡಲಿಕ್ಕಿರುವವರೆಂಬ ಭಾವನೆ ಅವರಿಗಿತ್ತು. ಎರಡಕ್ಷರ ಕಲಿಯಬೇಕೆಂಬ ಆಸೆ ಮನಸ್ಸಿನಲ್ಲಿದ್ರೂ ಆಡುವ ವಯಸ್ಸಿನಲ್ಲಿ ನನ್ನಪ್ಪ ಆಡು ಮೇಯಿಸಲು ಕಳಿಸಿದ್ದರು. ಅವರಿಗೂ ವಿದ್ಯೆಯಿರಲಿಲ್ಲ.

ಹೆಣ್ಮಕ್ಕಳು ಶಾಲೆ ಕಲಿಯುವುದು ನಮ್ಮ ಧರ್ಮಕ್ಕೆ ವಿರುದ್ಧವಾದುದು ಎಂಬ ವಾದ ಅವರದಾಗಿತ್ತು. ಓಟಿನ ದಿನ ಮಾತ್ರ ನಾನು ಶಾಲೆಯ ಮೆಟ್ಟಿಲು ಹತ್ತುತ್ತಿದ್ದುದು ಎಂದು ಜೋರಾಗಿ ನಗುತ್ತಾ, ನಿನಗೆ ಸೂಲಗಿತ್ತಿಯರು, ನಾಟಿ ವೈದ್ಯೆಯರು ಬಿಟ್ಟರೆ ಬೇರೆ ಯಾರೂ ಸಿಗಲಿಕ್ಕಿಲ್ಲ ಮಗಾ ಎಂದರು. ಬ್ಯಾರಿ ಮುಸ್ಲಿಮ್ ಹೆಣ್ಮಕ್ಕಳ ಈಗಿನ ಶೈಕ್ಷಣಿಕ ಪ್ರಗತಿಯನ್ನೂ, ಸಾಧನೆಗಳನ್ನೂ ಗಮನಿಸುವಾಗ ಹೆಣ್ಮಕ್ಕಳ ಶಿಕ್ಷಣದ ಮಹತ್ವವನ್ನು ಬ್ಯಾರಿ ಸಮುದಾಯವು ತಡವಾಗಿಯಾದರೂ ಅರ್ಥೈಸಿಕೊಂಡಿತು ಎನ್ನುವುದೇ ಸಮಾಧಾನದ ಸಂಗತಿ.

ಬ್ಯಾರಿ ಗಂಡುಮಕ್ಕಳೇ ಶಾಲೆಯ ಹೊಸ್ತಿಲು ತುಳಿಯದಿದ್ದ ಕಾಲದಲ್ಲಿ ಮನೆಯೊಳಗೆ ಯಾವುದೇ ಸ್ಥಾನಮಾನ ದಕ್ಕದ ಹೆಣ್ಮಕ್ಕಳು ಮನೆಯಿಂದ ಹೊರಗಿಳಿದು ಶಿಕ್ಷಣ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಹೆಣ್ಮಕ್ಕಳು ಮನೆಯಿಂದ ಹೊರಗಿಳಿದರೆ ಹಾಳಾಗುತ್ತಾರೆ, ಕುಟುಂಬದ ಮಾನ ಮರ್ಯಾದೆ ಹೋಗುತ್ತದೆ ಎಂಬ ಭಯವೂ, ಅಜ್ಞಾನವೂ ಹಿರಿಯರಲ್ಲಿತ್ತು.

ಧಾರ್ಮಿಕ ಶಿಕ್ಷಣ ನೀಡಲು ಇಸ್ಲಾಮೀ ವಿದ್ವಾಂಸರು ಕೇರಳದಿಂದ ಮಂಗಳೂರಿಗೆ ಬರುತ್ತಿದ್ದುದರಿಂದ ಧಾರ್ಮಿಕವಾಗಿ ಕರ್ನಾಟಕದ ಇತರ ಭಾಗಗಳಿಗಿಂತ ಬ್ಯಾರಿ ಮುಸ್ಲಿಮರು ಮಲಬಾರ್‌ಗೆ ಹೆಚ್ಚು ನಿಕಟರಾಗಿದ್ದರು.

ಮಲಬಾರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್ ಉಲಮಾಗಳು ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದರು. ಗಾಂಧೀಜಿಯವರು ಬ್ರಿಟಿಷರನ್ನು ಬಹಿಷ್ಕರಿಸುವ ಸಲುವಾಗಿ ಉಪ್ಪಿನ ಸತ್ಯಾಗ್ರಹವನ್ನು ಕೈಗೊಂಡಂತೆ, ಖಾದಿಯನ್ನು ಉತ್ತೇಜಿಸಿದಂತೆ ಈ ಉಲಮಾಗಳೂ ಬ್ರಿಟಿಷರನ್ನು ಭಾರತದಿಂದ ಓಡಿಸುವ ಸಲುವಾಗಿ ಅವರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಫತ್ವಾ ಹೊರಡಿಸಿದರು. ಇದು ಯಾವ ಮಟ್ಟಕ್ಕೆ ತಲುಪಿತೆಂದರೆ ಉಲಮಾಗಳನ್ನು ಅನುಸರಿಸುವವರೆಲ್ಲರೂ ಇಂಗ್ಲಿಷ್ ಭಾಷೆ ಹಾಗೂ ಅವರ ಶಿಕ್ಷಣ ನೀತಿಯನ್ನು ವಿರೋಧಿಸಿದರು.

ಬ್ಯಾರಿ ಮುಸ್ಲಿಮರು ಅಕ್ಷರ ವಂಚಿತರಾಗಲು ಇದೂ ಒಂದು ಕಾರಣವೆನ್ನಬಹುದು.

ಯಾವಾಗ ಇಲ್ಲಿನ ಮುಸ್ಲಿಮರಲ್ಲಿ ಗಲ್ಫ್ ಉದ್ಯೋಗಿಗಳ ಸಂಖ್ಯೆ ಏರತೊಡಗಿತೋ ಆಗ ಹೆಣ್ಮಕ್ಕಳಿಗೂ ನಾಲ್ಕಕ್ಷರ ತಿಳಿದಿರಬೇಕು ಎಂಬ ಪ್ರಜ್ಞೆ ಮನೆ ಹಿರಿಯರಲ್ಲಿ ಮೂಡತೊಡಗಿತು. ದೂರದೂರಿನ ಗಂಡನಿಗೆ ಪತ್ರ ಬರೆಯಲೋ, ಓದಲೋ ಅಂಚೆ ಪೇದೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ಬ್ಯಾರಿ ಸಮುದಾಯವು ಮಹಿಳೆಯರಿಗೂ ಅಲ್ಪ ಸ್ವಲ್ಪ ಶಿಕ್ಷಣ ನೀಡಲು ಮುಂದೆ ಬಂತು. ಆದಾಗ್ಯೂ ಬೀಡಿಯ ಸೂಪು ಮಡಿಲಿಗೇರಿಸುವುದನ್ನು ತಪ್ಪಿಸಲು ಆ ದಿನಗಳಲ್ಲಿ ಮಹಿಳೆಯರಿಂದ ಸಾಧ್ಯವಾಗಲೇ ಇಲ್ಲ. ತಮಾಷೆಯ ವಿಚಾರವೇನೆಂದರೆ, ಮನೆ ಹಿರಿಯರು ವೈದ್ಯರು ಬರೆದುಕೊಟ್ಟ ಔಷಧಿ ಚೀಟಿಯನ್ನು ಮನೆ ಹೆಣ್ಮಕ್ಕಳಿಗೆ ತೋರಿಸಿ ಏನು ಮದ್ದು ಬರೆದಿರುವರೆಂದು ಓದಿ ಹೇಳಲು ಹೇಳುತ್ತಿದ್ದರಂತೆ. ಗೊತ್ತಿಲ್ಲವೆಂದರೆ ಮತ್ತೆ ಶಾಲೆಗೆ ಹೋಗಿ ಕಲಿತದ್ದಾದರೂ ಏನು ಎಂದು ಗದರಿಸುತ್ತಿದ್ದರಂತೆ. ಕೆಲವೊಂದು ವೈದ್ಯರು ಬರೆದ ಚೀಟಿಯನ್ನು ವಿದ್ಯಾವಂತರಿಂದಲೇ ಓದಲಾಗುವುದಿಲ್ಲ, ಇನ್ನು ಎರಡನೇ ತರಗತಿ ಹೆಚ್ಚೆಂದರೆ ಐದನೇ ತರಗತಿಯವರೆಗೆ ಓದಿದ ಅವರೆಲ್ಲಿ ಓದಬೇಕು!

ಹೀಗೆ ಒಮ್ಮೆ ತೆರೆದ ಅವಕಾಶದ ಬಾಗಿಲನ್ನು ಬ್ಯಾರಿ ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡರು. ಹಂತಹಂತವಾಗಿ ಪ್ರಗತಿ ಸಾಧಿಸಿದ ಶಿಕ್ಷಣವು ಏಳನೇ ತರಗತಿಯವರೆಗೆ ಬಂದು ನಿಂತಿತು. ಆ ಹೊತ್ತಿಗಾಗಲೇ ಬ್ಯಾರಿ ತಾಯಂದಿರು ನಮ್ಮ ಮಕ್ಕಳು ನಮ್ಮಂತಾಗಬಾರದು, ಅವರು ಶಿಕ್ಷಣದಿಂದ ವಂಚಿತರಾಗಬಾರದು. ಹೆಣ್ಮಕ್ಕಳು ಅಡುಗೆ ಕೋಣೆಯೊಳಗೆ ಬಂಧಿಯಾಗಬಾರದು ಎಂಬ ಗಟ್ಟಿ ನಿರ್ಧಾರ ತಾಳಿದ್ದರು.

1989ರಲ್ಲಿ ಸಮುದಾಯದ ಶೈಕ್ಷಣಿಕ ಅಭ್ಯುದಯಕ್ಕಾಗಿ ಮಂಗಳೂರಿನಲ್ಲಿ ಸ್ಥಾಪನೆಗೊಂಡ ’ಜಮಿಯ್ಯತುಲ್ ಫಲಾಹ್’ ಸಂಸ್ಥೆಯು ಸಮುದಾಯದ ಮನವೊಲಿಸಿ ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿತು. ಸುಮಾರು ಹತ್ತು ವರ್ಷಗಳ ಬಳಿಕ ಅದರ ಫಲ ದೊರಕತೊಡಗಿತು. 2005ರಲ್ಲಿ ಸ್ಥಾಪನೆಗೊಂಡ ಟಿ.ಆರ್.ಎಫ್ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಯಲ್ಲಿ ಕುಳಿತು ಬೀಡಿಕಟ್ಟುತ್ತಿದ್ದ ಹೆಣ್ಮಕ್ಕಳಲ್ಲಿ ಮತ್ತೆ ಹೊಸ ಕನಸನ್ನು ಬಿತ್ತಿ ಅವರಿಗೆ ನೇರ ಎಸ್‌ಎಸ್‌ಎಲ್‌ಸಿ/ ಪಿಯುಸಿ ತರಬೇತಿಯನ್ನು ನೀಡುವ ಸಲುವಾಗಿ ಮರಳಿ ಬಾ ಶಾಲೆಗೆ ಯೋಜನೆಯನ್ನು ಹಾಕಿ ಯಶಸ್ವಿಯಾಯಿತು.

ಉತ್ತಮ ಗುಣಮಟ್ಟದ ಶಿಕ್ಷಣವು ಹೆತ್ತವರು ತನ್ನ ಮಕ್ಕಳಿಗೆ ಕೊಡುವ ಅತ್ಯಮೂಲ್ಯ ಉಡುಗೊರೆಯಾಗಿದೆ ಎಂದಿದ್ದಾರೆ ಪ್ರವಾದಿ ಮುಹಮ್ಮದ್(ಸ.ಅ). ಕುರ್‌ಆನ್ ಅವತೀರ್ಣಗೊಂಡಾಗ ಬಂದ ಮೊದಲ ಪದವೇ ’ಇಖ್‌ರಅ’ (ಓದು) ಎಂಬುದಾಗಿದೆ. ಈ ವಚನದ ಅರ್ಥವನ್ನು ಸರಿಯಾಗಿ ಗ್ರಹಿಸಿ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಒಂದೊಮ್ಮೆ ಸೋತಿದ್ದ ಉಲಮಾ ವರ್ಗವೇ ಇಂದು ಮಹಿಳೆಯರಿಗಾಗಿ ಸಾಲು ಸಾಲಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ಕ್ರಾಂತಿಯ ದೀವಟಿಗೆ ಹಿಡಿದಿದೆ.

ಯಾವಾಗ ಬ್ಯಾರಿ ಹುಡುಗಿಯರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ಉತ್ತುಂಗಕ್ಕೇರತೊಡಗಿದರೋ ಅದು ಮೇಲ್ಜಾತಿಯವರ ಕಣ್ಣಿಗೆ ಕುಕ್ಕತೊಡಗಿತು. ಸುಮಾರು ಹದಿನೆಂಟು ವರ್ಷಗಳ ಹಿಂದೆ ವಾರ್ತಾಭಾರತಿ ಪತ್ರಿಕೆಯ ರಂಗ ಪ್ರವೇಶ ಎಲೆಮರೆಯ ಪ್ರತಿಭಾನ್ವಿತ ಬ್ಯಾರಿ ಹೆಣ್ಮಕ್ಕಳನ್ನು, ರ್‍ಯಾಂಕ್ ವಿಜೇತರನ್ನು ಮುಖ್ಯವಾಹಿನಿಗೆ ಪರಿಚಯಿಸಿತು. ರ್‍ಯಾಂಕುಗಳೆಂದರೆ ಮೇಲ್ಜಾತಿಯ ಸ್ವತ್ತೆಂಬ ನಂಬಿಕೆಯನ್ನು ಬ್ಯಾರಿ ಹುಡುಗಿಯರು ಹುಸಿಗೊಳಿಸಿದರು. ತಮಗೆ ಪ್ರತಿಸ್ಪರ್ಧಿಗಳು ಹುಟ್ಟಿದ್ದನ್ನು ಕಂಡು ಅವರಿಗೆ ಸಹಿಸಲಾಗಲೇ ಇಲ್ಲ. ನಾನು ಪ್ರಾಥಮಿಕ ತರಗತಿಯಲ್ಲಿ ಕಲಿಯುತ್ತಿದ್ದಾಗ ನನಗೊಬ್ಬಳು ಬ್ರಾಹ್ಮಣ ಗೆಳತಿಯಿದ್ದಳು. ಪ್ರತೀ ಬಾರಿ ಪರೀಕ್ಷೆಯಲ್ಲಿ ಅವಳಿಗಿಂತ ಒಂದೆರಡು ಅಂಕಗಳ ಅಂತರದಲ್ಲಿ ನಾನು ತರಗತಿಗೆ ಮೊದಲಿಗಳಾಗುತ್ತಿದ್ದೆ. ಇದನ್ನು ಸಹಿಸದ ಬ್ರಾಹ್ಮಣ ಶಿಕ್ಷಕಿಯೊಬ್ಬರು ನಂತರದ ದಿನಗಳಲ್ಲಿ ಅವಳಿಗೆ ಪರೀಕ್ಷೆಯಲ್ಲಿ ಉತ್ತರಗಳನ್ನು ಹೇಳಿಕೊಟ್ಟು ತರಗತಿಗೆ ಮೊದಲಿಗಳನ್ನಾಗಿ ಮಾಡಿದ ಘಟನೆ ನನ್ನ ಮನಸ್ಸಿನಿಂದ ಮಾಸುವುದೇ ಇಲ್ಲ. ಇದು ನನ್ನ ವೈಯಕ್ತಿಕ ಅನುಭವ.

ಅಲ್ಲಿಯವರೆಗೆ ನಿಮ್ಮ ಹೆಣ್ಮಕ್ಕಳೇಕೆ ಶಾಲೆ ಕಲಿಯುತ್ತಿಲ್ಲ ಎಂದು ಕೇಳುತ್ತಿದ್ದವರಿಗೆ, ಆಧುನಿಕ ಶಿಕ್ಷಣ ರಂಗದಲ್ಲಿ ಆಕೆ ತನ್ನ ಹೆಜ್ಜೆ ಗುರುತು ಮೂಡಿಸತೊಡಗಿದಾಗ ಸ್ಕಾರ್ಫ್, ಬುರ್ಖಾ ಕಣ್ಣು ಕುಕ್ಕತೊಡಗಿತು. ಆ ಮೂಲಕ ಅವಳ ಮನೋಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವೂ ನಡೆಯಿತು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಅವಳಿಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಛಾಪು ಮೂಡಿಸತೊಡಗಿದ್ದಾಳೆ. ಈ ಎಲ್ಲಾ ಬೆಳವಣಿಗೆಯ ನಡುವೆಯೂ ಶೇ.50ರಷ್ಟು ಮಂದಿ ತಮ್ಮ ಹೆಣ್ಮಕ್ಕಳನ್ನು ಕಾಲೇಜುಗಳಿಗೆ ಕಳಿಸುವ ಉದ್ದೇಶ ಮದುವೆಗೆ ಉತ್ತಮ ಸಂಬಂಧ ಕೂಡಿ ಬರಲಿ ಎಂದಾಗಿದೆ. ಸಂಬಂಧ ಕೂಡಿಬರುವ ತನಕ ಹೆಣ್ಮಕ್ಕಳು ಕಲಿಯಲಿ ಎನ್ನುವವರೂ ಇದ್ದಾರೆ. ಈ ಕಾರಣದಿಂದಾಗಿ ಪರೀಕ್ಷೆ ಬರೆಯುವ ಮುನ್ನ ಅರ್ಧಕ್ಕೇ ಶಿಕ್ಷಣವನ್ನು ಮೊಟಕುಗೊಳಿಸಿ ವೈವಾಹಿಕ ಜೀವನಕ್ಕೆ ಕಾಲಿಡುವ ಹೆಣ್ಮಕ್ಕಳೂ ಇದ್ದಾರೆ. ಶಿಕ್ಷಣ ಪಡೆಯುವುದರ ಉದ್ದೇಶ ಇದೊಂದೇ ಆಗಿರಬಾರದು. ಕಲಿತು ಉದ್ಯೋಗ ಗಿಟ್ಟಿಸಿಕೊಂಡ ಹೆಣ್ಣು, ಮದುವೆಯ ನಂತರ ಕೆಲಸ ಬಿಟ್ಟರೆ ಅವಳನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡು ಹೆಣ್ಮಕ್ಕಳು ಎಷ್ಟು ಕಲಿತರೂ ಅಷ್ಟೇ, ಕೊನೆಗೂ ಒಲೆಯ ಮುಂದೆ ನಿಲ್ಲಲೇಬೇಕು ಎಂಬ ನಿಲುವು ತಾಳಿಬಿಡುತ್ತಾರೆ. ಹೊರಗಡೆ ದುಡಿಯುವುದು ಆಕೆಯ ಆಯ್ಕೆಯೇ ಹೊರತು ಅದು ಕಡ್ಡಾಯವೇನಲ್ಲ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ.

ಈ ನಿಟ್ಟಿನಲ್ಲಿ ನಮ್ಮೊಳಗೆ ಇನ್ನಷ್ಟು ಬದಲಾವಣೆಯ ಅಗತ್ಯವಿದೆ.


ಇದನ್ನೂ ಓದಿ: ಎಲೆಮರೆಯಿಂದ: ತಳ ಮಟ್ಟದ ಆರ್ಥಿಕ ಸ್ವಾವಲಂಬನೆ ಮತ್ತು ಮಂಗಳೂರಿನ ಟಿ.ಆರ್.ಎಫ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...