Homeದಲಿತ್ ಫೈಲ್ಸ್ತಮಿಳುನಾಡು: ‘ದನದ ಮಾಂಸ’ ಇಲ್ಲದ ಅಂಬೂರ್‌ ಬಿರಿಯಾನಿ ಹಬ್ಬ; ದಲಿತರಿಂದ ವ್ಯಾಪಕ ಟೀಕೆ

ತಮಿಳುನಾಡು: ‘ದನದ ಮಾಂಸ’ ಇಲ್ಲದ ಅಂಬೂರ್‌ ಬಿರಿಯಾನಿ ಹಬ್ಬ; ದಲಿತರಿಂದ ವ್ಯಾಪಕ ಟೀಕೆ

ತಮಿಳುನಾಡು ಸರ್ಕಾರ ಅಂಬೂರು ಬಿರಿಯಾನಿ ಹಬ್ಬ ಆಯೋಜಿಸಿ, ‘ದನ ಹಾಗೂ ಹಂದಿ’ ಮಾಂಸಗಳಿಗೆ ನಿಷೇಧ ಹೇರಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ.

- Advertisement -
- Advertisement -

ತಮಿಳುನಾಡು ಸರ್ಕಾರ ಆಯೋಜಿಸಿರುವ ಅಂಬೂರ್ ಬಿರಿಯಾನಿ ಹಬ್ಬದಲ್ಲಿ ದನದ ಮಾಂಸ ಮತ್ತು ಹಂದಿ ಮಾಂಸವನ್ನು ನಿಷೇಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಕಾರ್ಯಕ್ರಮದ ಆವರಣದಲ್ಲಿ ದನದ ಮಾಂಸ ಮತ್ತು ಹಂದಿಮಾಂಸವನ್ನು ತಿರುಪತ್ತೂರ್ ಜಿಲ್ಲಾಧಿಕಾರಿಗಳು ನಿಷೇಧಿಸಲು ನಿರ್ಧರಿಸಿದ ನಂತರ ಅಂಬೂರ್‌ ಬಿರಿಯಾನಿ ಹಬ್ಬ ವ್ಯಾಪಕ ಟೀಕೆಗೆ ಒಳಗಾಗಿದೆ. ವಿಶಿಷ್ಠ ಹಾಗೂ ರಾಜ್ಯದ್ಯಾಂತ ಜನಪ್ರಿಯಯವಾಗಿರುವ ಅಂಬೂರ್ ಬಿರಿಯಾನಿಗೆ ಅಂಬೂರು ಪಟ್ಟಣ ಹೆಸರಾಗಿದೆ.

ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ ಅಂಬೂರ್ ಬೀಫ್‌ ಬಿರಿಯಾನಿಯನ್ನು ಆಹಾರೋತ್ಸವದಿಂದ ಹೊರಗಿಡಲಾಗಿದೆ. ಕಾರ್ಯಕ್ರಮದ ಆವರಣದಲ್ಲಿ ದನ ಹಾಗೂ ಹಂದಿಯ ಬಿರಿಯಾನಿಯನ್ನು ಬ್ಯಾನ್‌ ಮಾಡುವ ಮೂಲಕ ಜಿಲ್ಲಾಧಿಕಾರಿ ಅಮರ್ ಕುಶ್ವಾಹ ವಿವಾದ ಸೃಷ್ಟಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಂಬೂರಿನಲ್ಲಿ ಬೀಫ್ ಬಿರಿಯಾನಿ ಜನಪ್ರಿಯವಾಗಿದೆ. ಹಂದಿ ಮಾಂಸದ ಬಿರಿಯಾನಿ ಅಪರೂಪವೆನ್ನಬಹುದು. ಆದರೆ ಗೋಮಾಂಸ ಹಾಗೂ ಹಂದಿ ಮಾಂಸ ಎರಡನ್ನೂ ನಿಷೇಧಿಸಿ ಬ್ಯಾಲೆನ್ಸ್ ಮಾಡಲಾಗಿದೆ ಎಂದು ಸಮರ್ಥಿಸಲಾಗುತ್ತಿದೆ.

ಈ ಹಬ್ಬವು ಮೇ 12ರಂದು ಆರಂಭವಾಗಿದ್ದು, ಮೇ 14 ರವರೆಗೆ ಮುಂದುವರಿಯುತ್ತದೆ. ಬಿರಿಯಾನಿಗೆ ಹೆಸರಾಗಿರುವ ಈ ಊರು ತಿರುಪತ್ತೂರ್ ಜಿಲ್ಲೆಯಲ್ಲಿದೆ. ತಮಿಳುನಾಡು ಮೂಲದ ಪರಿಮಳಯುಕ್ತ ಸೀರಗ ಸಾಂಬಾ ಅಕ್ಕಿಯ ಬಳಕೆಯ ಕಾರಣ ಈ ಬಿರಿಯಾನಿ ಶೈಲಿಯು ರಾಜ್ಯಾದ್ಯಂತ ಜನಪ್ರಿಯವಾಗಿದೆ.

ಇದನ್ನೂ ಓದಿರಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ಅಂಬೂರು ಬೀಫ್‌ ಬಿರಿಯಾನಿಗೆ ನಿಷೇಧ ಹೇರಿರುವುದು ದಲಿತ ಮತ್ತು ಇತರ ಅನೇಕ ದಮನಿತ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಮುದಾಯಗಳಲ್ಲಿ ಗೋಮಾಂಸವು ಪ್ರಧಾನ ಆಹಾರವಾಗಿದೆ.

ದ್ರಾವಿಡ ಮಾದರಿಗೆ ವಿರುದ್ಧ

ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಉಪ ಪ್ರಧಾನ ಕಾರ್ಯದರ್ಶಿ ವನ್ನಿ ಅರಸು ಸೇರಿದಂತೆ ಪ್ರಸಿದ್ಧ ಬರಹಗಾರರು, ರಾಜಕೀಯ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ. ಬಿರಿಯಾನಿ ಹಬ್ಬದಲ್ಲಿ ಗೋಮಾಂಸ ನಿಷೇಧವು ಸಾಮಾಜಿಕ ನ್ಯಾಯ ಮತ್ತು ಪ್ರಸ್ತುತ ಅಧಿಕಾರದಲ್ಲಿರುವ ಡಿಎಂಕೆ ಮುಂದಾಳತ್ವದ ‘ದ್ರಾವಿಡ ಮಾದರಿ’ಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ, “ಎರಡು ಗುಂಪುಗಳಿವೆ. ಒಬ್ಬರು ಹಂದಿ ಬಿರಿಯಾನಿ ಕೇಳಿದರೆ ಮತ್ತೊಬ್ಬರು ಬೀಫ್ ಬಿರಿಯಾನಿ ಕೇಳುತ್ತಾರೆ. ಹಿಂದೂಗಳು ಹಾಗೂ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಾರದೆಂಬ ಕಾರಣದಿಂದ ಎರಡನ್ನೂ ನಿಷೇಧಿಸಿದ್ದೇವೆ” ಎಂದಿರುವುದಾಗಿ ‘ದಿ ನ್ಯೂಸ್‌ ಮಿನಿಟ್’ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಈ ಹಬ್ಬದಲ್ಲಿ ತಯಾರಿಸಲಾಗುವ ಅಂಬೂರ್‌ ಬಿರಿಯಾನಿಯು ಕೇವಲ ಕುರಿ, ಕೋಳಿ ಮತ್ತು ಮೀನುಗಳಿಗೆ ಸೀಮಿತವಾಗಿದೆ. ಬಿರಿಯಾನಿಯನ್ನು ಉಚಿತವಾಗಿ ನೀಡುವುದಿಲ್ಲ. ಜನರು ಅದನ್ನು ಖರೀದಿಸಬೇಕಾಗುತ್ತದೆ. ದನ ಅಥವಾ ಹಂದಿಮಾಂಸ ಬೇಕಾದರೆ ಹಬ್ಬದ ಆವರಣದಿಂದ ಹೊರಗೆ ಇರುವ ಅಂಗಡಿಯಲ್ಲಿ ಖರೀದಿಸಬಹುದು” ಎಂದಿದ್ದಾರೆ.

ಇದನ್ನೂ ಓದಿರಿ: ಸುರಕೋಡ: ಮಠಕ್ಕೆ ಪ್ರವೇಶಿಸಿದ ದಲಿತರ ಮೇಲೆ ಹಲ್ಲೆ; 23 ಸವರ್ಣೀಯರ ವಿರುದ್ಧ ಎಫ್‌ಐಆರ್‌

ಹಬ್ಬಕ್ಕೆ ಸಂಬಂಧಿಸಿದಂತೆ ಬಂದಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, “ಇದು ಸವರ್ಣೀಯ ಅಥವಾ ದಮನಿತ ಸಮುದಾಯಗಳ ಸಮಸ್ಯೆಯಲ್ಲ. ನಾನು ಗೋಮಾಂಸ ಅಥವಾ ಹಂದಿ ಮಾಂಸದ ವಿರೋಧಿಯಲ್ಲ. ಜನರು ತಮಗೆ ಬೇಕಾದುದನ್ನು ತಿನ್ನಲಿ. ಜನರು ನನ್ನೊಂದಿಗೆ ಕುಳಿತು ತಮಗೆ ಬೇಕಾದುದನ್ನು ತಿನ್ನಬಹುದು. ಜನಸಂಖ್ಯೆಯ 0.5% ಜನರು ಮಾತ್ರ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ನಾನು ಅಧಿಕಾರಿಯಾಗಿ, ಉಳಿದ 99.5% ಬಗ್ಗೆ ಯೋಚಿಸಬೇಕಾಗಿದೆ. ಯಾವುದೇ ವಿವಾದಗಳು ನಡೆಯುವುದನ್ನು ನಾನು ಬಯಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಅಂಬೂರು ಮೂಲದ ದಲಿತ ಕವಿ ಯಲನ್ ಆಠಿ ಅವರು ಜಿಲ್ಲಾಧಿಕಾರಿಯವರ ಹೇಳಿಕೆಯನ್ನು ಖಂಡಿಸಿದ್ದು, “ಬೀಫ್ ಬಿರಿಯಾನಿ ಇಲ್ಲದೆ ಅಂಬೂರ್ ಬಿರಿಯಾನಿ ಇಲ್ಲ. ನೀವು ಅಂಬೂರಿಗೆ ಬಂದರೆ, ದನದ ಬಿರಿಯಾನಿ ಅಂಗಡಿಗಳ ಪ್ರಮಾಣವನ್ನು ನೀವೇ ನೋಡಬಹುದು. ಅಂಬೂರಿನಲ್ಲಿ ಬಿರಿಯಾನಿ ಸ್ಟಾಲ್ ನೋಡದೆ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ” ಎಂದಿದ್ದಾರೆ.

“ಅಂಬೂರು ಪಟ್ಟಣವು ಚರ್ಮದ ಉದ್ಯಮ ಕೇಂದ್ರವಾಗಿದೆ. ಇಲ್ಲಿನ ಬಹುಪಾಲು ಜನರು ಕಾರ್ಮಿಕ ವರ್ಗದವರಾಗಿದ್ದಾರೆ. ಅವರ ಜೀವನವು ಈ ಉದ್ಯಮವನ್ನು ಅವಲಂಬಿಸಿದೆ. ಒಂದು ಪ್ಲೇಟ್ ಮಟನ್ ಬಿರಿಯಾನಿಯ ಬೆಲೆ ಸುಮಾರು 225 ರೂ., ಬೀಫ್ ಬಿರಿಯಾನಿಯ ಬೆಲೆ 50 ರಿಂದ 70 ರೂ” ಎಂದು ವಿವರಿಸಿದ್ದಾರೆ.

“ಹಿಂದೂಗಳ ಭಾವನೆ ಮುಖ್ಯವಾದರೆ, ದಲಿತರ ಭಾವನೆಗಳ ಬಗ್ಗೆ ಏನು ಹೇಳುತ್ತಾರೆ? ನಾನು ಚಿಕನ್ ಅಥವಾ ಮಟನ್ ತಿನ್ನುವುದಿಲ್ಲ. ಹಾಗಾದರೆ ಸರ್ಕಾರ ನಡೆಸುತ್ತಿರುವ ಆ ಉತ್ಸವದಲ್ಲಿ ನನಗೆ ಅವಕಾಶವಿದೆಯೇ ಅಥವಾ ಇಲ್ಲವೇ? ನಾನು ಈ ಸಮಾಜದ ಪ್ರಜೆಯೇ ಅಥವಾ ಅಲ್ಲವೇ? ಚರ್ಮದ ಉದ್ಯಮದಲ್ಲಿ ಕೆಲಸ ಮಾಡುವ ಬಹುಪಾಲು ಜನರು ದಲಿತರು ಅಥವಾ ಮುಸ್ಲಿಮರು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿರಿ: ದಲಿತ- ಮುಸ್ಲಿಂ ದಂಪತಿ ಪ್ರಕರಣ: ಕೊನೆಯವರೆಗೂ ರಾಜು ನೆನಪಲ್ಲೇ ಬದುಕುವೆ- ಅಶ್ರಿನ್‌

ಬೀಫ್ ಬಿರಿಯಾನಿಗೆ ಹೆಸರುವಾಸಿಯಾಗಿರುವ ಅಂಬೂರಿನಲ್ಲಿರುವ ರೆಸ್ಟೊರೆಂಟ್‌ವೊಂದರ ಬಗ್ಗೆ ಹೇಳುತ್ತಾ ಕವಿ ಯಲನ್‌, “ಆ ಅಂಗಡಿಯೊಂದರಲ್ಲಿ ದಿನಕ್ಕೆ 200 ಕಿಲೋ ಗೋಮಾಂಸ ಬಿರಿಯಾನಿ ಮಾರಾಟವಾಗುತ್ತದೆ. ಹಂದಿಮಾಂಸವನ್ನು ನಿಷೇಧಿಸುವ ಕ್ರಮವು ಕಣ್ಣೊರಿಸುವ ತಂತ್ರವಾಗಿದೆಯಷ್ಟೇ. ಹಂದಿ ಬಿರಿಯಾನಿಯನ್ನು ಯಾರು ಕೇಳಿದ್ದಾರೆ? ಆದರೆ ಜನರು ಹಂದಿಮಾಂಸವನ್ನು ಬಯಸಿದರೆ, ಅದನ್ನು ಸಹ ತಿನ್ನಲಿಬಿಡಿ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಧಿಕಾರಿಯ ನಡೆಯನ್ನು ಖಂಡಿಸಿ ವಿಸಿಕೆಯ ವನ್ನಿ ಅರಸು ಟ್ವೀಟ್ ಮಾಡಿದ್ದು, “ನಿರ್ದಿಷ್ಟ ಸಮುದಾಯದ ಆಹಾರವನ್ನು ಹೊರಗಿಟ್ಟು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ದ್ರಾವಿಡ ಮಾದರಿಯನ್ನು ಕಡೆಗಣಿಸಿದ್ದಾರೆ. 75% ಜನರು ಸೇವಿಸುವ ದನದ ಮಾಂಸವನ್ನು ಮೇ 12, 13 ಮತ್ತು 14 ರಂದು ನಡೆಯುವ ಬಿರಿಯಾನಿ ಹಬ್ಬದಲ್ಲಿ ಒಳಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...