ಟ್ಯಾಂಕರ್ ಮಣಿಸಿದ ಟ್ರಾಕ್ಟರುಗಳು!
ಟ್ಯಾಂಕರ್ v/s ಟ್ರಾಕ್ಟರ್
ಕೊನೆಗೂ…
ಕೊಲ್ಲುವ ಟ್ಯಾಂಕರ್ ಗಳ ದರ್ಪವನ್ನು
ಪೊರೆಯುವ ಟ್ರಾಕ್ಟರ್ ಗಳು
ಮಣಿಸಿದವು…
ಮೋದಾನಿ ಅಂಡ್ ಕಂಪನಿಗಳ
ಪ್ರಭುತ್ವ ವನ್ನು
ಇಂಡಿಯನ್ ರಿಪಬ್ಲಿಕ್
ಸೋಲಿಸಿತು…
ಮನ್ ಕಿ ಬಾತಿನ
ಮೋಸವನ್ನು
ಜನ್ ಕಿ ಮಾತು
ವಿಫಲಗೊಳಿಸಿತು…
ಮನುತಂತ್ರವನ್ನು
ಗಣತಂತ್ರ ಧಿಕ್ಕರಿಸಿ
ಜನಗಣಮನ ಗೆದ್ದಿತು…
ಏಕೆಂದರೆ,
ಮೋದಾನಿ ಕಂಪನಿಯ
ಸರ್ವಾಧಿಕಾರಿ ಸಿಇಒ ಮಹಾಶಯರೇ,
ನೀವು, ನಿಮ್ಮಂಥವರೂ ಎಂದಿಗೂ ಅರಿಯಲಾಗದ ಸರಳ ಸತ್ಯ ಒಂದಿದೆ…
ಕವಿ ಕ್ಯಾಸ್ಟಿನೋ ಹೇಳುವಂತೆ:
ನಿನ್ನ ಕೈಯಲ್ಲಿ ಬಂದೂಕು
ನನ್ನ ಹೊಟ್ಟೆಯಲ್ಲಿ ಹಸಿವು
ನನಗೆ ಹಸಿವಾಗುತ್ತಿದೆಯೆಂದೇ
ನಿನ್ನ ಕೈಯಲ್ಲಿ ಬಂದೂಕು
ನಿನ್ನ ಕೈಯಲ್ಲಿ ಬಂದೂಕಿರುವುದರಿಂದಲೇ
ನನ್ನ ಹೊಟ್ಟೆಯಲ್ಲಿ ಹಸಿವು
ನಿನ್ನ ಕೈಯಲ್ಲಿ ಬಂದೂಕಿರಬಹುದು..
ಅದರೊಳಗೆ
ಸಾವಿರಾರು ಗುಂಡುಗಳೂ ಇರಬಹುದು…
ಅವೆಲ್ಲವನ್ನೂ ನೀನು
ಈ ಬಡಕಲು ದೇಹದೊಳಗೆ ತೂರಿಬಿಡಲೂಬಹುದು..
ನನ್ನನ್ನು
ಒಂದಲ್ಲ,
ಹತ್ತಲ್ಲ,
ಸಾವಿರ ಸಾರಿ
ಕೊಂದುಹಾಕಲೂ ಬಹುದು
ಆದರೆ
ನಿನಗಿಂತ ನಾನೇ ಬಲಶಾಲಿ, ಪ್ರಬಲ ಶಸ್ತ್ರಧಾರಿ..
“ಏಕೆಂದರೆ…
ನಿನ್ನ ಬಳಿ ಬಂದೂಕಿದೆ…
ನನ್ನ ಬಳಿ ಹಸಿವಿದೆ…
ಕೇವಲ ಹಸಿವಿದೆ”
-ಶಿವಸುಂದರ್
ಇದನ್ನೂ ಓದಿ: 700 ಕ್ಕೂ ಹೆಚ್ಚು ರೈತರ ಸಾವು ಮತ್ತು ಲಖಿಂಪುರ್ ಖೇರಿ ಹತ್ಯಾಕಾಂಡ ತಡೆಯಬಹುದಿತ್ತು: ಸಂಯುಕ್ತ ಕಿಸಾನ್ ಮೋರ್ಚಾ