- Advertisement -
- Advertisement -
ಟಾಲಿವುಡ್ನಲ್ಲಿ ಹಾಸ್ಯ ಸಿನಿಮಾಗಳ ನಾಯಕ ನಟ ಅಲ್ಲರಿ ನರೇಶ್ ಈ ಬಾರಿ ಹೊಸ ರೀತಿಯ ಪ್ರಯೋಗಾತ್ಮಕ ಸಿನೆಮಾ ಮಾಡಲು ಹೊರಟಿದ್ದಾರೆ.
ಅಲ್ಲರಿ ನರೇಶ್ ನಟನೆಯ ಸಿನಿಮಾ ಅಂದರೆ ಹಾಸ್ಯ ಇದ್ದೇ ಇರುತ್ತದೆ ಎಂಬಷ್ಟು ಖ್ಯಾತಿ ಪಡೆದಿರುವ ಈ ನಟನ ಹೊಸ ಪ್ರಯೋಗ ಚಿತ್ರರಂಗದ ಗಮನ ಸೆಳೆದಿದೆ. ಕಿತಕಿತಲು, ಎವಡಿಗೋಲ ವಾಡಿದೆ ಸುಡಿಗಾಡು ಸಿನೆಮಾಗಳ ಮೂಲಕ ಸಿನಿರಸಿಕರಿಗೆ ಹತ್ತಿರವಾಗಿರುವ ನರೇಶ್ “ನಾಂದಿ” ಎಂಬ ಸಿನೆಮಾ ಮಾಡುತ್ತಿದ್ದು, ಸಿನೆಮಾದ ಮೊದಲ ಪೋಸ್ಟರನಲ್ಲಿ ಬೆತ್ತಲೆಯಾಗಿ ನೇತು ಹಾಕಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾ ಸಾಮಾಜಿಕ ನೆಲೆಗಟ್ಟಿನ ಮೇಲಿನ ಕ್ರೈಂ ಡ್ರಾಮವಾಗಿದ್ದು, ನರೇಶ್ ಈ ಸಿನೆಮಾದಲ್ಲಿ ಇಂದೆಂದೂ ಕಾಣಿಸಿಕೊಳ್ಳದ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನೆಮಾ ತಂಡ ಹೇಳಿಕೊಂಡಿದೆ. ಈ ಸಿನೆಮಾವನ್ನು ವಿಜಯ್ ಕನಕಮೇಡಲ ನಿರ್ದೇಶನ ಮಾಡುತ್ತಿದ್ದಾರೆ.