Homeಮುಖಪುಟ4 ದಿನಗಳ ಟೆಸ್ಟ್ ನಿಯಮಗಳೇನು? ವಿರೋಧವೇಕೆ?

4 ದಿನಗಳ ಟೆಸ್ಟ್ ನಿಯಮಗಳೇನು? ವಿರೋಧವೇಕೆ?

- Advertisement -
- Advertisement -

ಟೆಸ್ಟ್ ಪಂದ್ಯ ಕ್ರಿಕೆಟ್‍ನ ಪರಿಶುದ್ಧ ರೂಪ. ಇದು ಕ್ರಿಕೆಟ್‍ನ ಆತ್ಮವೂ ಹೌದು. ಕ್ರಿಕೆಟ್ ಆಟಗಾರರ ಅಸಲಿ ತಾಕತ್ತನ್ನು ಹೊರತರುವ ಮಾದರಿ. ಆದ್ರೆ ಇದೀಗ ಈ ಟೆಸ್ಟ್‍ನ ಸ್ವರೂಪವನ್ನೇ ಬದಲಿಸಲು ಐಸಿಸಿ ಮುಂದಾಗಿದೆ. ಟೆಸ್ಟ್ ಪಂದ್ಯಗಳನ್ನು ಐದು ದಿನಗಳ ಬದಲಿಗೆ ನಾಲ್ಕು ದಿನಕ್ಕೆ ಸೀಮಿತಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚಿಂತನೆ ನಡೆಸಿದೆ. ಆದ್ರೆ ಐಸಿಸಿಯ ಈ ಕಲ್ಪನೆಗೆ ಕ್ರಿಕೆಟ್ ಪ್ರಪಂಚದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಏನಿದು 4 ದಿನಗಳ ಟೆಸ್ಟ್? ನಿಯಮಗಳೇನು?

ಟೆಸ್ಟ್ ಪಂದ್ಯಗಳನ್ನು ಐದು ದಿನಗಳ ಬದಲಿಗೆ ನಾಲ್ಕು ದಿನಕ್ಕೆ ಸೀಮಿತಗೊಳಿಸುವ ಐಸಿಸಿ ಕಲ್ಪನೆಯ ಈ ಪಂದ್ಯದಲ್ಲಿ ನೂತನ ನಿಯಮಗಳು ಅನ್ವಯವಾಗಲಿವೆ. 5 ದಿನಗಳ ಪಂದ್ಯಗಳಲ್ಲಿ ಪ್ರತಿ ದಿನ 90 ಓವರ್‍ಗಳ ಆಟ ನಡೆಯಲಿದ್ದು, ‘4 ದಿನಗಳ ಟೆಸ್ಟ್’ನಲ್ಲಿ ದಿನಕ್ಕೆ 98 ಓವರ್‍ಗಳ ಆಟವನ್ನು ನಿಗದಿಪಡಿಸಲಾಗಿದೆ.

ಪಂದ್ಯದಲ್ಲಿ ಒಟ್ಟಾರೆ 392 ಓವರ್ ಆಟಕ್ಕೆ ಅವಕಾಶವಿದ್ದು, 5 ದಿನಗಳ ಟೆಸ್ಟ್’ಗಳಿಗಿಂತ 58 ಓವರ್ ಕಡಿಮೆ ಆಟ ನಡೆಯಲಿದೆ. ದಿನವೊಂದರಲ್ಲಿ 90ರ ಬದಲು 98 ಓವರ್ ಪೂರ್ಣಗೊಳಿಸಬೇಕಿರುವ ಕಾರಣ, ಹೆಚ್ಚುವರಿ 8 ಓವರ್‍ಗಾಗಿ ದಿನದಾಟವನ್ನು ಅರ್ಧಗಂಟೆ ಹೆಚ್ಚಿಸಲಾಗುತ್ತದೆ. ಮೊದಲೆರಡು ಅವಧಿಗಳನ್ನು 2 ಗಂಟೆ ಬದಲು 2 ಗಂಟೆ 15 ನಿಮಿಷ ನಡೆಸುವುದಾಗಿ ಐಸಿಸಿ ತಿಳಿಸಿದೆ.

ವಿರೋಧ ಯಾಕೆ ಸ್ವಾಮಿ?

ಐಸಿಸಿಯ ಪ್ರಸ್ತಾವನೆ ಮೇಲ್ನೋಟಕ್ಕೆ ಸರಿ ಅನಿಸಿದರೂ, ಇದು ಕ್ರಿಕೆಟ್ ಆತ್ಮವನ್ನು ವಿರೂಪಗೊಳಿಸುವ ಪ್ರಯತ್ನ ಎನ್ನಲಾಗುತ್ತಿದೆ. ನಾಲ್ಕು ದಿನಗಳ ಟೆಸ್ಟ್ ಪಂದ್ಯ ಕ್ರಿಕೆಟ್ ಸ್ವರೂಪಕ್ಕೆ ವಿರುದ್ಧವಾದದ್ದು, ಇದು ಕ್ರಿಕೆಟ್‍ನ ಶುದ್ಧ ರೂಪವನ್ನು ಹಾಳು ಮಾಡುತ್ತದೆ ಎಂದು ಕ್ರಿಕೆಟ್ ದಿಗ್ಗಜರು ವಾದಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ಅನ್ನು ನಾಲ್ಕು ದಿನಗಳಿಗೆ ಇಳಿಸಿದರೇ ಟೆಸ್ಟ್, ಅದರ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಹಾಗೂ ಯುವ ಕ್ರಿಕೆಟಿಗರ ಮೇಲೆ ಇದು ವ್ಯತಿರಿಕ್ತ ಪ್ರಭಾವ ಬೀರುತ್ತದೆ ಎಂದು ಮಾಜಿ ಕ್ರಿಕೆಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ದೇವರಿಂದಲೂ ವಿರೋಧ!

“ಕ್ರಿಕೆಟ್‍ನ ಅತೀ ಶುದ್ಧ ರೂಪವೆಂದರೆ ಟೆಸ್ಟ್ ಪಂದ್ಯ. ಇದನ್ನು ಹದಗೆಡಿಸಬಾರದು. ನೀವು ಟಿ20ಯನ್ನು ಜಾರಿ ಮಾಡಿದಿರಿ, ಏಕದಿನ ತಂದಿರಿ, ಟಿ10 ಬಂತು. 100 ಎಸೆತಗಳ ಕ್ರಿಕೆಟ್ ಕೂಡ ಬಂತು. ಆದರೆ ಟೆಸ್ಟ್ ಕ್ರಿಕೆಟನ್ನು ಮಾತ್ರ ಬದಲಾಯಿಸಲು ಹೋಗಬೇಡಿ’ ಎಂದು ಸಚಿನ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟನ್ನು 4 ದಿನಗಳಿಗೆ ಇಳಿಸುವುದರಿಂದ ಆಟ ತನ್ನ ಸೊಬಗು ಕಳೆದುಕೊಳ್ಳಲಿದೆ. ‘ಟೆಸ್ಟ್ ಕ್ರಿಕೆಟ್‍ನ ಪ್ರೀತಿಸುವ ಅಭಿಮಾನಿಯಾಗಿ ಹೇಳುತ್ತಿದ್ದೇನೆ. ಆಟದ ಮಾದರಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಪಂದ್ಯವನ್ನು 4 ದಿನಗಳಿಗೆ ಇಳಿಸಿದರೆ, ಆಟಗಾರರು ಟೆಸ್ಟ್ ಕ್ರಿಕೆಟನ್ನು ನೋಡುವ ದೃಷ್ಟಿಯೇ ಬದಲಾಗಲಿದೆ’ ಎಂದು 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ 4 ದಿನಗಳ ಟೆಸ್ಟ್ ಬೇಡ ಎಂಬ ಧಾಟಿಯಲ್ಲಿ ಮಾತಾಡಿದ್ದಾರೆ. ಐಸಿಸಿ ನಿರ್ಧಾರ ಕ್ರಿಕೆಟ್ ಆತ್ಮವಾಗಿರುವ ಟೆಸ್ಟ್ ಕ್ರಿಕೆಟ್ ಸ್ವರೂಪಕ್ಕೆ ವಿರುದ್ಧವಾದದ್ದು ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಐಸಿಸಿ ವಾದವೇನು?

ಫಲಿತಾಂಶಕ್ಕೆ ಹೆಚ್ಚಿನ ಆದ್ಯತೆ: ಟೆಸ್ಟ್ ಕ್ರಿಕೆಟ್‍ಗೆ ಹೊಸ ರೂಪ ನೀಡಲು ಪ್ರಯೋಗಗಳನ್ನು ನಡೆಸುತ್ತಿರುವ ಐಸಿಸಿ, ಫಾಲೋ ಆನ್ ನಿಯಮವನ್ನು 200 ರನ್‍ಗಳಿಂದ 150ಕ್ಕಿಳಿಸಿದೆ. ಫಲಿತಾಂಶಕ್ಕೆ ಒತ್ತು ನೀಡುವ ತಂಡಗಳಿಗೆ ಈ ನಿಯಮ ಅನುಕೂಲವಾಗಲಿದೆ ಎಂದು ಐಸಿಸಿ ತಿಳಿಸಿದೆ. ಇನ್ನುಳಿದಂತೆ 5 ದಿನಗಳ ಟೆಸ್ಟ್ ನಿಯಮಗಳೆಲ್ಲವೂ ಅನ್ವಯವಾಗುತ್ತದೆ.

2023ರಿಂದ 2031ರ ನಡುವಿನ ಕ್ರಿಕೆಟ್ ಋತುಗಳಲ್ಲಿ ಟೆಸ್ಟ್ ಪಂದ್ಯಗಳನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸುವುದರಿಂದ ಹೆಚ್ಚು ಜಾಗತಿಕ ಮಟ್ಟದ ಟೂರ್ನಿಗಳು, ಬಿಸಿಸಿಐ ಬೇಡಿಕೆಯಂತೆ ಮತ್ತಷ್ಟು ದ್ವಿಪಕ್ಷೀಯ ಸರಣಿಗಳ ಆಯೋಜನೆ, ವಿಶ್ವದಾದ್ಯಂತ ನಡೆಯುವ ಟಿ20 ಲೀಗ್‍ಗಳ ಪ್ರಸರಣ ಹಾಗೂ 5 ದಿನಗಳ ಪಂದ್ಯಗಳ ಆಯೋಜನೆಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಸದ್ಯ ಚಾಲ್ತಿಯಲ್ಲಿರುವ 2015-2023ರ ಅವಧಿಯಲ್ಲಿ 5 ದಿನಗಳ ಬದಲಿಗೆ 4 ದಿನಗಳ ಟೆಸ್ಟ್ ಪಂದ್ಯಗಳನ್ನು ನಡೆಸಿದರೆ 335 ದಿನಗಳು ಉಳಿಯುತ್ತಿದ್ದವು ಎಂದು ಐಸಿಸಿ ಅಂದಾಜಿಸಿದೆ.

ಐಸಿಸಿಯ ಬೆಂಬಲಕ್ಕೆ ಮಂಡಳಿಗಳು!

ನಾಲ್ಕು ದಿನಗಳ ಟೆಸ್ಟ್ ಪ್ರಸ್ತಾವದ ಬಗ್ಗೆ ಈಗಾಗಲೇ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಮಧ್ಯೆ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಐಸಿಸಿಯ ಬೆಂಬಲಕ್ಕೆ ನಿಂತಿವೆ. ಆದ್ರೆ ಆಸ್ಟೇಲಿಯಾದ ಮಾಜಿ ಹಾಗೂ ಹಾಲಿ ಕ್ರಿಕೆಟ್ ಆಟಗಾರರು, ಐಸಿಸಿ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹೊಸ ಯೋಜನೆಯಲ್ಲ

4 ದಿನಗಳ ಟೆಸ್ಟ್ ಹೊಸ ಯೋಜನೆ ಏನಲ್ಲ. ಈ ವರ್ಷ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳು 4 ದಿನಗಳ ಪಂದ್ಯವನ್ನು ಆಡಿದ್ದವು. ಈ ಹಿಂದೆ 2017ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಸಹ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.

ಬಿಸಿಸಿಐ ರೆಡ್ ಸಿಗ್ನಲ್

ನಾಲ್ಕು ದಿನಗಳ ಟೆಸ್ಟ್ ಮ್ಯಾಚ್ ನಡೆಸುವ ಬಗ್ಗೆ ಬಿಸಿಸಿಐ ರೆಡ್ ಪರ-ವಿರೋಧ ವಾದಗಳ ಮಧ್ಯೆ ಐಸಿಸಿಯ ಕ್ರಿಕೆಟ್ ಸಮಿತಿಯು ಮಾರ್ಚ್‍ನಲ್ಲಿ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ಪ್ರಸ್ತಾವದ ಕುರಿತು ಚರ್ಚೆ ನಡೆಸಲು ಸಿದ್ಧತೆ ನಡೆಸಿದೆ. ದುಬೈನಲ್ಲಿ ಮಾರ್ಚ್ 27 ರಿಂದ 31 ರ ತನಕ ನಡೆಯುವ ಮುಂದಿನ ಸುತ್ತಿನ ಐಸಿಸಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಮಾಜಿ ಕ್ರಿಕೆಟಿಗ, ಕ್ರಿಕೆಟ್ ಸಮಿತಿಯ ಅಧ್ಯಕ್ಷ ಅನಿಲ್ ಕುಂಬ್ಳೆ ಹೇಳಿದ್ದಾರೆ. ಈ ಕ್ರಿಕೆಟ್ ಸಮಿತಿಯಲ್ಲಿ ಆಂಡ್ರೂ ಸ್ಟ್ರಾಸ್, ರಾಹುಲ್ ದ್ರಾವಿಡ್, ಮಹೇಲ ಜಯವರ್ಧನೆ ಹಾಗೂ ಶಾನ್ ಪೋಲಾಕ್ ಇದ್ದಾರೆ.

ಇತ್ತ ವಿಶ್ವದ ಅತ್ಯಂತ ಶ್ರೀಮಂತ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿ ಪ್ರಸ್ತಾವಕ್ಕೆ ರೆಡ್ ಸಿಗ್ನಲ್ ನೀಡಲು ಸಜ್ಜಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...