Homeಅಂತರಾಷ್ಟ್ರೀಯಥಾಯ್ಲೆಂಡ್: ಗುಂಡಿನ ದಾಳಿಯಲ್ಲಿ 34 ಜನರ ಹತ್ಯೆ, ತನಗೂ ಗುಂಡು ಹಾರಿಸಿಕೊಂಡ ಮಾಜಿ ಪೊಲೀಸ್

ಥಾಯ್ಲೆಂಡ್: ಗುಂಡಿನ ದಾಳಿಯಲ್ಲಿ 34 ಜನರ ಹತ್ಯೆ, ತನಗೂ ಗುಂಡು ಹಾರಿಸಿಕೊಂಡ ಮಾಜಿ ಪೊಲೀಸ್

- Advertisement -
- Advertisement -

ಥಾಯ್ಲೆಂಡ್ ನ ಈಶಾನ್ಯ ಪ್ರಾಂತ್ಯದಲ್ಲಿನ ಮಕ್ಕಳ ಆರೈಕೆ ಕೇಂದ್ರಕ್ಕೆ ನುಗ್ಗಿದ ಮಾಜಿ ಪೊಲೀಸ್ ಮನಬಂದಂತೆ ಗುಂಡು ಹಾರಿಸಿ 22 ಮಕ್ಕಳು ಸೇರಿದಂತೆ 34 ಜನರನ್ನು ಹತ್ಯೆಗೈದಿದ್ದಾನೆ. ಅಲ್ಲದೆ ತನ್ನ ಹೆಂಡಂತಿ ಮಕ್ಕಳನ್ನು ಕೊಂದು, ತನಗೂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ ವರ್ಷ ಪೊಲೀಸ್ ಕೆಲಸದಿಂದ ಹೊರಬಂದಿದ್ದ ವ್ಯಕ್ತಿಯು ಇಂದು ಮಧ್ಯಾಹ್ನ ಊಟದ ಸಮಯದಲ್ಲಿ ಬಂದೂಕು ಧರಿಸಿ ಮಕ್ಕಳ ಹಾರೈಕೆ ಕೇಂದ್ರಕ್ಕೆ ನುಗ್ಗಿದ್ದಾನೆ. ಮೊದಲು 8 ತಿಂಗಳ ಗರ್ಭಿಣಿ ಶಿಕ್ಷಕಿ ಸೇರಿ 5-6 ಸಿಬ್ಬಂದಿಗೆ ಗುಂಡು ಹಾರಿಸಿ ಕೊಂದಿದ್ದಾನೆ. ಆನಂತರ 2 ವರ್ಷದ ಮಕ್ಕಳ ಮೇಲೂ ಗುಂಡಿನ ಮಳೆಗೆರೆಯಲಾಗಿದೆ ಎನ್ನಲಾಗಿದೆ.

ಉತೈ ಸಾವನ್ ಈಶಾನ್ಯ ಪ್ರಾಂತ್ಯದ ನಾಂಗ್ ಬುವಾ ಲ್ಯಾಂಫುದಲ್ಲಿನ ಮಕ್ಕಳ ಹಾರೈಕೆ ಕೇಂದ್ರದಲ್ಲಿ ಈ ಅಮಾನುಷ ಘಟನೆ ನಡೆದಿದೆ. ಘಟನೆ ಕುರಿತು ಥಾಯ್ಲೆಂಡ್ ಪ್ರಧಾನಿ ಪ್ರಯುತ್ ಚಾನ್ ಒಚಾ ಕಳವಳ ವ್ಯಕ್ತಪಡಿಸಿದ್ದಾರೆ.

ಮೊದಲು ಆರೋಪಿಯ ಪತ್ತೆಗಾಗಿ ಹಲವು ತಂಡಗಳನ್ನ ರಚಿಸಲಾಗಿತ್ತು. ಆದರೆ ಆರೋಪಿ ಪಾನ್ಯಾ ಕಾಮ್ರಾಬ್ ಎಂಬಾತ ತನಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂತರ ತಿಳಿದುಬಂದಿದೆ.

ಮೆಕ್ಸಿಕೊದಲ್ಲಿ ಗುಂಡಿನ ದಾಳಿ: ಮೇಯರ್ ಸೇರಿ 18 ಸಾವು

ಮೆಕ್ಸಿಕೊದ ಗೆರೆರೊ ಪ್ರಾಂತ್ಯದಲ್ಲಿ ಅಪರಿಚಿತ ಮುಸುಕುಧಾರಿ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಅಲ್ಲಿನ ಮೇಯರ್, ಅವರ ತಂದೆ ಸೇರಿ 18ರನ್ನು ಹತ್ಯೆಗೈಯ್ಯಲಾಗಿದೆ.

ಸ್ಯಾನ್ ಮಿಗುಲ್ ಟೊಟೊಲ್ಯಾಪನ್ ನಗರದ ಮೇಯರ್ ಕೊನ್ರಾಡೊ ಮೆಂಡೊಜಾ ಮತ್ತು ಅವರ ತಂದೆ ಹಾಗೂ ಮಾಜಿ ಮೇಯರ್ ಅವರನ್ನು ಸಹ ಕೊಲೆಗೈಯಲಾಗಿದೆ. ಕೊಲೆ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ಭಾರತ ಐಕ್ಯತಾ ಯಾತ್ರೆ ವಿರುದ್ಧ ಆಕ್ಷೇಪಾರ್ಹ ಸುದ್ದಿ ರೂಪದ ಜಾಹೀರಾತು ನೀಡಿದ ಬಿಜೆಪಿ: ತೀವ್ರ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ರೀತಿಯ ಘಟನೆಗಳನ್ನು ಓದಿದ ಮೇಲೆ ಭಯ, ಆತಂಕವಾಗುತ್ತಿದೆ. ಸತ್ತವರಿಗಾಗಿ ಮನಸು ಮಿಡಿಯುತ್ತಿದೆ. ಯಾಕೆ ಈ ತರದ ಪೈಶಾಚಿಕ ಕೃತ್ಯಗಳು ನಡೆಯುತ್ತಿವೆ ಎಂಬುದು ಸಹ ತಿಳಿಯುತ್ತಿಲ್ಲ. ಇಂತಹ ಕೃತ್ಯವೆಸಗಲು ವ್ಯಕ್ತಿಯ ಮಾನಸಿಕ ಸ್ಥಿತಿ ಏನಾದರೂ ಕಾರಣವಿರಬಹುದೆ? ಯಾಕೆ, ಆತ ಈ ತರ ಹಸುಗೂಸುಗಳನ್ನು ಕೊಂದನು? ದೇವರಲ್ಲಿ ನಂಬಿಕೆ ಕುಸಿದರೆ ಪರವಾಗಿಲ್ಲ. ಸಂಬಂಧಗಳಲ್ಲಿ, ಮಾನವೀಯತೆಯಲ್ಲಿ ನಂಬಿಕೆಗಳು ಕುಸಿದಾಗ ಇಂತಹ ಕೃತ್ಯಗಳು ನಡೆಯುತ್ತವೇನೋ ಅನಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾರೊಬ್ಬರ ಬಗ್ಗೆಯೂ ಕಾಳಜಿ ತೆಗೆದುಕೊಳ್ಳಲಾಗದಷ್ಟು ಪ್ರಪಂಚದ ಶಿಕ್ಷಣ ವ್ಯವಸ್ಥೆ ನಿರ್ಮಾಣವಾಗಿಬಿಟ್ಟಿದೆ. ಹಾಗಾಗಿ ತಾವುಗಳು ಈ ಸುದ್ಧಿಯನ್ನು ಪ್ರಕಟಿಸಿದ ಮೇಲೆ ಆತನ ಮಾನಸಿಕ ಸ್ಥಿತಿ ಕೌಟಂಬಿಕ ಸ್ಥಿತಿ ಬಗ್ಗೆ ವರದಿ ನೀಡಿದರೆ, ನಮ್ಮ ಶಿಕ್ಷಣದ ಗುಣ ಮಟ್ಟದ ಬಗ್ಗೆ ಚಿಂತನೆ ನಡೆಸಿ ಆರೋಗ್ಯಯುಕ್ತ ಸಮಾಜದ ನಿರ್ಮಾಣಕ್ಕೆ ದಾರಿಯಾಗಬಹುದು.

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...