Homeಅಂಕಣಗಳುಕಾರ್ಮಿಕ ಹಿತದ ಕಾನೂನುಗಳಿಗೆ ಎಳ್ಳು ನೀರು ಬಿಡಲು ಸರ್ಕಾರವೇ ಮುಂದಾಗಿರುವುದು ಜನದ್ರೋಹದ ಕೃತ್ಯ

ಕಾರ್ಮಿಕ ಹಿತದ ಕಾನೂನುಗಳಿಗೆ ಎಳ್ಳು ನೀರು ಬಿಡಲು ಸರ್ಕಾರವೇ ಮುಂದಾಗಿರುವುದು ಜನದ್ರೋಹದ ಕೃತ್ಯ

- Advertisement -
- Advertisement -

ಸಾಮಾಜಿಕ-ರಾಜಕೀಯ ವ್ಯಾಖ್ಯಾನಕಾರ ಪ್ರೊ.ಯೋಗೇಂದ್ರ ಯಾದವ್ ಅವರು ಈ ವ್ಯಥೆಯ ವಿದ್ಯಮಾನವನ್ನು ಸರ್ಕಾರಿ ಕೃಪಾಪೋಷಿತ ಒತ್ತೆಯಾಳು ಪ್ರಹಸನ ಎಂದು ಬಣ್ಣಿಸಿದ್ದಾರೆ. ಮಹಾನಗರಗಳ ಆರ್ಥಿಕ ಚಟುವಟಿಕೆಗಳ ದೈತ್ಯಚಕ್ರವನ್ನು ತಿರುಗಿಸಲೆಂದು ವಲಸೆ ಕಾರ್ಮಿಕರನ್ನು ಕೈಗಾರಿಕೋದ್ಯಮಗಳ ಒತ್ತೆಯಾಳುಗಳನ್ನಾಗಿ ಕೈವಶ ಮಾಡಿಕೊಳ್ಳಲಾಗುತ್ತಿದೆ. ಈ ಕ್ರೂರ ಮಸಲತ್ತಿನಲ್ಲಿ ಸರ್ಕಾರವೇ ಮುಖ್ಯ ಪಾತ್ರಧಾರಿ. ನೈತಿಕ ದಿಕ್ಸೂಚಿಯನ್ನೇ ಕಳೆದುಕೊಂಡಿರುವ ಸಮಾಜ, ಅಶ್ಲೀಲ ಹಂತ ತಲುಪಿರುವ ವರ್ಗ ಅಸಮಾನತೆಗಳು, ಪಾಶ್ರ್ವವಾಯುಪೀಡಿತ ರಾಜಕಾರಣ ಹಾಗೂ ನಂಜುಭರಿತ ಮೀಡಿಯಾ ಸರ್ಕಾರದೊಂದಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಕೈ ಕಲೆಸಿರುವ ಅಪರಾಧಿಗಳು.

ಲಾಕ್ ಡೌನ್ ಕಾರಣ ನೇರವಾಗಿ ಉದ್ಯೋಗ ಕಳೆದುಕೊಂಡಿರುವವರ ಸಂಖ್ಯೆ 12 ಕೋಟಿಗೂ ಅಧಿಕ. ಈ ಪೈಕಿ ವಲಸೆ ಕಾರ್ಮಿಕರು ನಾಲ್ಕು ಕೋಟಿ ಮಂದಿ. ತ್ರಿಶಂಕುಗಳಾಗಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರ ಸ್ಥಿತಿಗತಿಗಳ ಕುರಿತು SWAN (Stranded Workers Action Network) ನಡೆಸಿದ ಸಮೀಕ್ಷೆಯಲ್ಲಿ ಹೊರಬಿದ್ದಿರುವ ಅಂಶಗಳು ಸಮಾಜದ ಆತ್ಮಸಾಕ್ಷಿಯನ್ನೂ ಚುಚ್ಚಿಲ್ಲ, ಇತ್ತ ಸರ್ಕಾರದ ಕಣ್ಣನ್ನೂ ತೆರೆಸಿಲ್ಲ. ದೀನದಲಿತರ ಪಾಲಿಗೆ ಸರ್ಕಾರದ ಕಣ್ಣುಗಳು ಶಾಶ್ವತವಾಗಿ ಕುರುಡಾಗಿವೆ ಎಂಬ ಹಳೆಯ ಸತ್ಯವನ್ನು ಈ ಪ್ರಹಸನ ಮತ್ತೊಮ್ಮೆ ಬಯಲಿಗೆಳೆದಿದೆ.

SWAN ಸಮೀಕ್ಷೆಯ ಪ್ರಕಾರ ಶೇ.78ರಷ್ಟು ವಲಸೆ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯಲ್ಲಿ ಸಂಬಳ ಸಿಕ್ಕಿಲ್ಲ. ಶೇ.82ರಷ್ಟು ಮಂದಿಗೆ ಸರ್ಕಾರದಿಂದ ಯಾವುದೇ ಬಗೆಯ ದಿನಸಿ ದೊರೆತಿಲ್ಲ. ಶೇ.64ರಷ್ಟು ಕಾರ್ಮಿಕರ ಜೇಬುಗಳಲ್ಲಿ ಉಳಿದಿದ್ದ ಹಣ ನೂರು ರುಪಾಯಿಗೂ ಕಡಿಮೆ. ಯಾವ ಆಸರೆಯೂ ಇಲ್ಲದೆ ಹಸಿದು ಕಂಗೆಟ್ಟವರು ಸಾಯುವುದಿದ್ದರೂ ಅದು ಸ್ವಂತ ಊರಿನಲ್ಲೇ ಎಂದು ಹಂಬಲಿಸುವುದು ಅಪರಾಧವೇ? ಕೋಟಿ ಮಂದಿಗೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ನೋಂದಣಿ ಮಾಡಿಸಿಕೊಂಡಿದ್ದಾರೆ.

ತಾನು ಚಹಾ ಮಾರಿದ ಬಡವನೆಂದು ಹೇಳಿಕೊಳ್ಳುತ್ತಲೇ ಸುಖ ಸುಪ್ಪತ್ತಿಗೆಗಳಲ್ಲಿ ಓಲಾಡುವ ಪ್ರಧಾನಮಂತ್ರಿಯವರು ಬಡ ಕಾರ್ಮಿಕರನ್ನು ಲೆಕ್ಕಕ್ಕೇ ಇಡದಿರುವುದು ಅತ್ಯಂತ ಸೋಜಿಗದ ಮತ್ತು ಆಘಾತಕಾರಿ ಅಂಶ. ಈ ವಿಶಾಲ ದೇಶದಲ್ಲಿ ಕೋಟ್ಯಂತರ ವಲಸೆ ಕಾರ್ಮಿಕರು ನಾನಾ ರಾಜ್ಯಗಳಲ್ಲಿ ಹೊಟ್ಟೆಪಾಡಿಗಾಗಿ ಹರಡಿ ಹಬ್ಬಿದ್ದಾರೆ. ಆರ್ಥಿಕ ಚಟುವಟಿಕೆಯ ರಥಚಕ್ರಗಳನ್ನು ತಿರುಗಿಸುತ್ತಿದ್ದಾರೆ ಎಂಬ ಕಿಂಚಿತ್ ಅರಿವು ಅವರಿಗೆ ಇದ್ದಿದ್ದರೆ ಲಾಕ್ ಡೌನ್ ಅನ್ನು ಯೋಜಿಸಿಕೊಂಡು ಘೋಷಿಸುತ್ತಿದ್ದರು. ಟ್ರಂಪ್‍ಗೆ ರತ್ನಗಂಬಳಿ ಹಾಸಲೆಂದು, ಮಧ್ಯಪ್ರದೇಶದ ಸರ್ಕಾರ ಕೆಡವಲೆಂದು ಕರೋನಾ ಮಹಾಮಾರಿಯನ್ನು ನಿರ್ಲಕ್ಷಿಸಿದ್ದು ಸರ್ಕಾರದ ಅಪರಾಧ. ಇಲ್ಲವಾದರೆ ಲಾಕ್ ಡೌನನ್ನು ಮುಂಚಿತವಾಗಿಯೇ ಯೋಜಿಸಿ ವಲಸೆ ಕಾರ್ಮಿಕರು ಬಯಸಿದರೆ ಅವರ ರಾಜ್ಯಗಳು- ಊರುಗಳಿಗೆ ಮರಳಲು ವಾರದೊಪ್ಪತ್ತು ಅವಕಾಶ ಕಲ್ಪಿಸಬಹುದಿತ್ತು. ಸರ್ಕಾರದ ಈ ಬೇಜವಾಬ್ದಾರಿತನಕ್ಕೆ ಕೋಟ್ಯಂತರ ಕಾರ್ಮಿಕರು ಯಾಕೆ ಬೆಲೆ ತೆರಬೇಕಿತ್ತು? ಲಾಕ್ ಡೌನ್ ಘೋಷಣೆಗೆ ಮುನ್ನ ಮೋದಿಯವರು ನೀಡಿದ ಕಾಲಾವಕಾಶ ನಾಲ್ಕು ದಿನಗಳಲ್ಲ, ಬದಲಾಗಿ ಕೇವಲ ನಾಲ್ಕು ತಾಸುಗಳು!

ಈ ಬೇಜವಾಬ್ದಾರಿ ಘೋಷಣೆಯ ನಂತರ ಕಾರ್ಮಿಕರಿಗೊಂದು ಕನಿಷ್ಠ ಭದ್ರತೆ ಒದಗಿಸುವ ಕೆಲಸವನ್ನಾದರೂ ಮಾಡಬೇಕಿತ್ತು. ಆದರೆ ಈ ಕೋಟ್ಯಂತರ ಕಾರ್ಮಿಕರು ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ನಡೆದುಕೊಂಡಿತು ಮೋದಿ ಸರ್ಕಾರ. ಅಂತಹ ಜೀವಿಗಳು ನಮ್ಮ ನಡುವೆ ಇದ್ದಾರೆಂದೂ, ಹಸಿವು ನಿದ್ರೆ ನೀರಡಿಕೆಗಳು ಅವರನ್ನೂ ಬಾಧಿಸುತ್ತವೆಂದೂ ಸರ್ಕಾರ ಮತ್ತು ಸಮಾಜ ಗಮನಿಸಿದ್ದು ಅವರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೆದ್ದಾರಿಗಳಿಗೆ ಇಳಿದಾಗಲೇ. ಆಗಲೂ ಅವರ ಘನತೆಯನ್ನು ಕಾಲಕಸವಾಗಿ ಕಾಣಲಾಯಿತು. ಅಂದು ಶುರುವಾದ ಪೊಲೀಸರ ಲಾಠಿ ಬೂಟುಗಳ ಹೊಡೆತಗಳು, ಅಮ್ಮ ಅಕ್ಕ ಪತ್ನಿಯ ಪ್ರಸ್ತಾಪಿಸಿ ಬೈಯ್ಯುವ ಕೆಟ್ಟ ಬೈಗಳು ಈಗಲೂ ನಿಂತಿಲ್ಲ. ಯಾವ ಅಪರಾಧಕ್ಕೆ ಅವರಿಗೆ ಇಂತಹ ಶಿಕ್ಷೆ?

ಆತ್ಮನಿರ್ಭರತೆ ಅಥವಾ ಸ್ವಾವಲಂಬನೆಯ ಪಾಠವನ್ನು ಪ್ರಧಾನಿ ಹೇಳಿದ್ದಾರೆ. ಆದರೆ ತಮ್ಮನ್ನು ಸದಾ ತುಳಿದು ಅಂಚಿಗೆ ಅಟ್ಟುತ್ತಿರುವ ಅಸಮಾನ ವ್ಯವಸ್ಥೆಯ ವಿರುದ್ಧ ನಿರ್ಗತಿಕ ಶ್ರಮಿಕ ವರ್ಗ ತನ್ನ ಅಸ್ತಿತ್ವಕ್ಕಾಗಿ ಸೆಣೆಸುತ್ತಲೇ ಬಂದಿದೆ. ಅದು ಆರಂಭದಿಂದಲೂ ಸ್ವಾವಲಂಬಿ. ಅಳಿದುಳಿದ ತನ್ನ ಪಾಪಪ್ರಜ್ಞೆಯನ್ನು ತೊಳೆದುಕೊಳ್ಳಲು ಈ ವರ್ಗಕ್ಕೆ ಭಿಕ್ಷೆಯ ಕಾಸು ಎಸೆಯುತ್ತ ಬಂದಿರಬಹುದು ಸರ್ಕಾರಗಳು.

ಈ ದೇಶದ ಬಂಡವಾಳಶಾಹಿ ಕಾರ್ಪೊರೇಟ್ ವಲಯಕ್ಕೆ ವರ್ಷ ವರ್ಷ ಬಜೆಟ್ಟಿನಲ್ಲಿ ಬಿಟ್ಟುಕೊಡಲಾಗುವ ಲಕ್ಷಾಂತರ ಕೋಟಿ ತೆರಿಗೆಗಳಿಗೆ ಹೋಲಿಸಿದರೆ ಶ್ರಮಿಕ ವರ್ಗಕ್ಕೆ ಸರ್ಕಾರ ನೀಡುವುದು ಬಿಡಿಗಾಸಲ್ಲದೆ ಇನ್ನೇನೂ ಅಲ್ಲ. ಮನೆಗಳಿಗೆ ಮರಳಲು ಈ ಜನವರ್ಗ ರೇಲುಗಾಡಿಯ ಟಿಕೆಟ್ ದರವನ್ನು ಕಾಸಿಗೆ ಕಾಸು ತೆತ್ತು ಭರಿಸಿದೆ ಎಂಬುದು ನೆನಪಿರಲಿ.

ಸಮಾನತೆಯ ಆಧಾರದ ಮೇಲೆ ಕಟ್ಟಲಾದ ಸಮಾಜಗಳಲ್ಲಿ ಬಂಡವಾಳದ ಹೆಗಲನ್ನು ಬೆವರು ಸವಾರಿ ಮಾಡಬೇಕು. ಆದರೆ ವಾಸ್ತವವಾಗಿ ಬೆವರಿನ ಬಡ ಹೆಗಲುಗಳು ಬಂಡವಾಳದ ಒಜ್ಜೆಯಡಿ ತತ್ತರಿಸಿವೆ.

ದೇಶದ 45 ಕೋಟಿ ಕಾರ್ಮಿಕರ ಪೈಕಿ ಸಂಘಟಿತ ವಲಯದ ಶ್ರಮಿಕರ ಸಂಖ್ಯೆ ಕೇವಲ 1.10 ಕೋಟಿ. ಉಳಿದವರಿಗೆ ಕಾಯಿದೆ ಕಾನೂನುಗಳ ರಕ್ಷಣೆ ಇಲ್ಲ. ಈಗ ಮಹಾಮಾರಿಯ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು, ಸಂಘಟಿತ ವಲಯದ ಕಾರ್ಮಿಕರಿಗೂ ಕಾನೂನು ರಕ್ಷಣೆಯ ನೆರಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕಾರ್ಮಿಕ ಕಾನೂನುಗಳನ್ನು ಕಾರ್ಮಿಕರ ಹಿತದ ವಿರುದ್ಧ ಬಗ್ಗಿಸಲಾಗುತ್ತಿದೆ. ಈಗಾಗಲೆ ಜರ್ಝರಿತಗೊಂಡಿರುವ ಶ್ರಮಿಕ ಶಕ್ತಿಯ ಹೊಟ್ಟೆ ಮತ್ತು ಬೆನ್ನುಗಳ ಮೇಲೆ ಬಾರಿಸಲಾಗುತ್ತಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯಿದೆ, ಜೀತದಾಳು ಪದ್ಧತಿ ರದ್ದು ಕಾಯಿದೆ ಹಾಗೂ ಸಕಾಲಕ್ಕೆ ಕೂಲಿ ಪಾವತಿ ಮಾಡುವ ಕಾನೂನನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಮಿಕ ರಕ್ಷಣಾ ಕಾಯಿದೆ ಕಾನೂನುಗಳನ್ನು ಉತ್ತರಪ್ರದೇಶ ಸರ್ಕಾರ ಮೂರು ವರ್ಷಗಳ ಕಾಲ ರದ್ದು ಮಾಡಿದೆ. ಗುಜರಾತ್ ಸರ್ಕಾರ 1,200 ದಿನಗಳ ಕಾಲ ಈ ಕಾಯಿದೆಗಳಿಂದ ಕೈಗಾರಿಕೆಗಳಿಗೆ ವಿನಾಯಿತಿ ಘೋಷಿಸಿದೆ. ಹಾಲಿ ಎಂಟು ತಾಸುಗಳ ದುಡಿಮೆ ಹನ್ನೆರಡು ತಾಸುಗಳಿಗೆ ಹೆಚ್ಚಲಿದೆ. ಮಧ್ಯಪ್ರದೇಶ ಸರ್ಕಾರ ಮುಂದಿನ ಸಾವಿರ ದಿನಗಳ ಅವಧಿಯಲ್ಲಿ ಅರಂಭಿಸುವ ಕೈಗಾರಿಕೆಗಳಿಗೆ ಎಲ್ಲ ಕಾರ್ಮಿಕ ಕಲ್ಯಾಣ ಕಾನೂನುಗಳಿಂದ ವಿನಾಯಿತಿ ನೀಡಿದೆ.

ರಾಜಸ್ತಾನ, ಪಂಜಾಬ್, ಮಧ್ಯಪ್ರದೇಶ, ಹರಿಯಾಣ ಇದೇ ಹಾದಿ ತುಳಿದಿವೆ. ಮುಂಬರುವ ದಿನಗಳಲ್ಲಿ ಕರ್ನಾಟಕವೂ ಸೇರಿದಂತೆ ಹೆಚ್ಚು ಹೆಚ್ಚು ರಾಜ್ಯಗಳು ಈ ಸಾಲನ್ನು ಸೇರಲಿವೆ.

ಬಡ ಕಾರ್ಮಿಕ ವರ್ಗವನ್ನು ಬಂಡವಾಳಕ್ಕೆ ಒತ್ತೆಯಾಳಾಗಿ ಇರಿಸಲು ಸರ್ಕಾರವೇ ಮುಂದಾಗಿರುವುದು ವಿಕಟ ವಿಡಂಬನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...