Homeಅಂಕಣಗಳುಕಳೆದುಹೋದ ದಿನಗಳುಕಾಫಿ ಬೆಳೆಗಾರರರಿಗೆ ಅತ್ಯಂತ ಅವಶ್ಯವಿದ್ದ ಸಹಕಾರಿ ಸಂಸ್ಥೆಯೊಂದರ ಅವಸಾನ

ಕಾಫಿ ಬೆಳೆಗಾರರರಿಗೆ ಅತ್ಯಂತ ಅವಶ್ಯವಿದ್ದ ಸಹಕಾರಿ ಸಂಸ್ಥೆಯೊಂದರ ಅವಸಾನ

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ – 13

90ರ ದಶಕದ ಕೊನೆಯ ಭಾಗದಿಂದಲೇ ಕಾಫಿ ಬೆಳೆಗೆ ಸಂಕಷ್ಟಗಳು ಪ್ರಾರಂಭವಾಗಿದ್ದವು. ಕಾಫಿಯ ಮುಕ್ತ ಮಾರಾಟಕ್ಕೆ ಅನುಮತಿ ದೊರೆತು ಅದರಿಂದಾಗಿ ತಮಗೆ ಉತ್ತಮ ಬೆಳೆ ದೊರೆಯುತ್ತಿದೆ ಎಂದು ಬೆಳೆಗಾರರರು ಸಂಭ್ರಮಿಸುತ್ತಿರುವಾಗಲೇ ಕಾಫಿಯ ಬೆಲೆ ಇಳಿಕೆಯ ಹಾದಿಯಲ್ಲಿತ್ತು. ಇದರೊಂದಿಗೆ ಪ್ರಕೃತಿಯೂ ಮುನಿಸಿಕೊಂಡಂತಿತ್ತು. ಸತತವಾಗಿ ಮೂರು ವರ್ಷಗಳಕಾಲ ಕಾಫಿ ವಲಯದಲ್ಲಿ ಅತಿಕಡಿಮೆ ಮಳೆಯಾಯಿತು. ಅದರ ಪರಿಣಾಮ ಹೇಗಿತ್ತೆಂದರೆ ಕಡಿಮೆ ಮಳೆಯಾಗುವ ಹಲವಾರು ಪ್ರದೇಶಗಳ ಅರೆಬಿಕಾ ತೋಟಗಳು ನೀರಿಲ್ಲದೆ ಒಣಗಿ ಹೋದವು. ಮೂರನೆಯ ವರ್ಷದ ಬೇಸಗೆಯಲ್ಲಿ ನೀರಿಲ್ಲದೆ ಹೇಮಾವತಿ ನದಿ ತನ್ನ ಹರಿವನ್ನೇ ನಿಲ್ಲಿಸಿತ್ತು! ಅಲ್ಲಲ್ಲಿ ಕಾಡಾನೆಗಳ ಹಾವಳಿಗಳು ಪ್ರಾರಂಭವಾಗಿದ್ದವು.

ಇವೆಲ್ಲ ಸಮಸ್ಯೆಗಳ ನಡುವೆಯೇ ಕಾಫಿ ಬೆಳೆಗಾರರ ಸಂಸ್ಥೆಯಾದ ಕೊಮಾರ್ಕ್ ತನ್ನ ಆಂತರಿಕ ಸಮಸ್ಯೆಗಳಿಂದ ತತ್ತರಿಸುತ್ತಿತ್ತು.

ಆಧುನಿಕ ತಂತ್ರಜ್ಞಾನವೂ ಕೂಡಾ ಸರಿಯಾದ ಬಳಕೆಯ ವಿಧಾನ ಮತ್ತು ಅದರ ಬಗೆಗಿನ ಸ್ಪಷ್ಟ ತಿಳುವಳಿಕೆಗಳು ಇಲ್ಲದೆ ಹೋದ ಸಂದರ್ಭದಲ್ಲಿ ಹೇಗೆ ವ್ಯಾವಹಾರಿಕವಾಗಿ ದುಬಾರಿಯಾಗಿಯೂ ಅನಾಹುತಕ್ಕೆ ಕಾರಣವೂ ಆಗಬಲ್ಲದೆಂಬುದಕ್ಕೆ ಕೊಮಾರ್ಕ್‌ನ ವ್ಯವಹಾರಗಳು ಉದಾಹರಣೆಯಾದವು.

ಕೊಮಾರ್ಕ ಸಂಸ್ಥೆಯನ್ನು ನಡೆಸಲು ವೃತ್ತಿಪರ ವ್ಯಕ್ತಿಗಳನ್ನು ನೇಮಿಸಿಕೊಂಡಾಗಿತ್ತು. ಮೊದಲಿಗೆ ಸಂಸ್ಥೆಯ ನಿರ್ದೇಶಕ ಮಂಡಳಿಯು ಸರ್ಕಾರದಿಂದ ಎರವಲು ಸೇವೆಗಾಗಿ ಕೇಳಿದ ಹಲವು ಜನ ಸಮರ್ಥ ಐ ಎ ಎಸ್ ಅಧಿಕಾರಿಗಳನ್ನು ಸರ್ಕಾರ ಬಿಟ್ಟುಕೊಡಲು ನಿರಾಕರಿಸಿತು. ನಂತರ ಐ.ಎ.ಎಸ್ ಅಧಿಕಾರಿಗಳ ಹುಡುಕಾಟವನ್ನು ಬಿಟ್ಟು ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್‌ನಲ್ಲಿ ಉನ್ನತ ಶಿಕ್ಷಣ ಪಡೆದ ಹಿರಿಯ ವ್ಯಕ್ತಿಯೊಬ್ಬರನ್ನು ಕೊಮಾರ್ಕ್‌ಗೆ ಕರೆತರಲಾಯಿತು. ಅವರು ಇಡೀ ಕಚೇರಿಯನ್ನು ಆಧುನಿಕ ಮತ್ತು ವೃತ್ತಿಪರವಾಗಿಸುವ ನಿಟ್ಟಿನಲ್ಲಿ ಕೆಲಸಮಾಡಿ ಇನ್ನೂ ಐವರು ತಜ್ಞರನ್ನು ನೇಮಿಸಿಕೊಂಡರು.

ಇಷ್ಟೆಲ್ಲ ಇದ್ದರೂ ಮೊದಲಿನ ವರ್ಷ ನಡೆಸಿದ ವ್ಯಾಪಾರದ ಕ್ರಮ ಮತ್ತು ನಿಯಮಗಳನ್ನು ಎರಡನೆಯ ವರ್ಷ ಬದಲಾವಣೆ ಮಾಡಿಕೊಂಡಾಗ ಅದಕ್ಕೆ ತಕ್ಕಂತೆ ಕಂಪ್ಯೂಟರ್ ಗಳಲ್ಲಿ ಸರಿಯಾಗಿ ಬದಲಾವಣೆ ಮಾಡಿಕೊಳ್ಳಲು ಅವರು ವಿಫಲರಾದದದ್ದು ಮಾತ್ರವಲ್ಲಿ ಅದನ್ನು ಗಮನಿಸಿದೆ ಹೋದದ್ದು ದುರಂತಕ್ಕೆ ಕಾರಣವಾಯಿತು.

ಕೊಮಾರ್ಕ್ ಸಂಸ್ಥೆ ನಿರಂತರವಾಗಿ ಕಾಫಿಯನ್ನು ಕೊಳ್ಳುವುದು ಮತ್ತು ಮಾರಾಟ ಮಾಡುವುದನ್ನು  ಮುಂದುವರೆಸಿತ್ತು. ಬೆಲೆಗಳು ಪ್ರತಿದಿನ ಇಳಿಯುತ್ತಿದ್ದವು.

ಆದರೆ ಸಂಸ್ಥೆಯ ಲೆಕ್ಕ ಪತ್ರಗಳ ವಿಭಾಗದ ಕಂಪ್ಯೂಟರ್‌ನಲ್ಲಿ ಆದ ಸಣ್ಣದೆಂದು ತೋರುವ ತಪ್ಪಿನಿಂದಾಗಿ ನಷ್ಟವೆಲ್ಲವೂ ಲಾಭವೆಂಬಂತೆ ತೋರುತ್ತಿತ್ತು. ಇದನ್ನು ನಂಬಿ ಮತ್ತಷ್ಟು ವ್ಯಾಪಾರ ಮುಂದುವರೆಸಿದರು. ಇದೆಲ್ಲವೂ ಗಮನಕ್ಕೆ ಬರುವಾಗ ಕೆಲವು ತಿಂಗಳು ಕಳೆದಿತ್ತು. ಆ ವೇಳೆಗೆ  ಕೊಮಾರ್ಕ್ ಕೋಟಿಗಟ್ಟಲೆ  ನಷ್ಟ ಅನುಭವಿಸಿತ್ತು. ಬೆಳೆಗಾರರರಿಗೆ ಹಣ ಪಾವತಿ ಮಾಡುವುದೇ ಕಷ್ಟವಾಯಿತು.

ಸಂಸ್ಥೆಯ ಉಳಿವಿಗಾಗಿ ಪ್ರಯತ್ನಗಳು ಪ್ರಾರಂಭವಾಗಿದ್ದವು. ದೊಡ್ಡ ಪ್ರಮಾಣದಲ್ಲಿ ಠೇವಣಿ ಹಣ ಸಂಗ್ರಹ ಮಾಡಿ ಸಂಸ್ಥೆಯನ್ನು ಉಳಿಸುವ ಪ್ರಯತ್ನ ನಡೆಯಿತು. ರವೀಂದ್ರನಾಥರು ಆ ವರ್ಷದ ತಮ್ಮ ಹೆಚ್ಚಿನ ಕಾಫಿಯ ಹಣವನ್ನೆಲ್ಲ ಸಂಸ್ಥೆಯಲ್ಲಿ ಠೇವಣಿಯನ್ನಾಗಿಟ್ಟರು. ಅದು ಅಂದಿನ ದಿನಗಳಲ್ಲಿಯೇ ಸುಮಾರು ಎಪ್ಪತ್ತು ಲಕ್ಷ ರೂಪಾಯಿಗಳಷ್ಟಿತ್ತು. ಇನ್ನೂ ಹಲವರು ಬೆಳೆಗಾರರು ಠೇವಣಿ ಹಣ ನೀಡಿದರು. ವಿಚಾರ ತಿಳಿದ ಕೂಡಲೇ ಇಡೀ ವ್ಯವಹಾರಗಳ ತಪಾಸಣೆಗೆ ಮತ್ತು ವರದಿ ನೀಡಲು ಸರ್ಕಾರಕ್ಕೆ ಕೊಮಾರ್ಕ್ ಸಂಸ್ಥೆಯಿಂದಲೇ ಮನವಿ ಸಲ್ಲಿಸಲಾಯಿತು. ಸಹಕಾರೀ ಸಂಸ್ಥೆಗಳ ಲೆಕ್ಕ ತಪಾಸಿಗರು ಬಂದು ಎಲ್ಲವನ್ನೂ ಪರಿಶೀಲಿಸಿ ವರದಿ ನೀಡಿದರು.

ಈ ಸಂದರ್ಭದಲ್ಲಿ ಕೆಲವರು ಕೊಮಾರ್ಕ್‌ನ ಆಂತರಿಕ ಹಿತಶತ್ರುಗಳೂ ಇದ್ದರು. ಅಂತವರಿಂದ ಕೆಲವು ಸುಳ್ಳು ಸುದ್ದಿಗಳು ಹರಡಿದವು. ಕೊಮಾರ್ಕ್ ಮುಳುಗುತ್ತಿದೆ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಯಿತು.

ಕೆಲವು ಪತ್ರಿಕೆಗಳು ವಿಷಯವನ್ನು ಸರಿಯಾಗಿ ತಿಳಿದುಕೊಳ್ಳದೆ ಏನೋ ಭಾರೀ ಪ್ರಮಾಣದ ವಂಚನೆ ನಡೆದಿದೆ ಎಂಬಂತೆ ಚಿತ್ರಿಸಿ ಬರೆದವು. ಇದನ್ನೇ ನಂಬಿ ಕೊಮಾರ್ಕ್‌ನ ಹಣಕಾಸು ವ್ಯವಹಾರಗಳು ನಡೆಯುತ್ತಿದ್ದ ಬ್ಯಾಂಕು ಕೊಮಾರ್ಕ್ ಸಂಸ್ಥೆಯ ಮೇಲೆ ಕೇಸು ದಾಲಿಸಿತು.

ಆಗ ಕೊಮಾರ್ಕ್‌ನ ನಿರ್ದೇಶಕ ಮಂಡಳಿ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿತು. ನಂತರ ತನಿಖೆ ನಡೆದು ವರದಿ ಬಂತು. ಅದನ್ನು ಗಮನಿಸದೆ ಅಥವಾ ಅದನ್ನು ನಿರ್ಲಕ್ಷಿಸಿ ಕೆಲವು ಪತ್ರಿಕೆಗಳು ಮತ್ತೆ ಗುಲ್ಲೆಬ್ಬಿಸಿದವು.

ಮಡಿಕೇರಿಯ ಸಹಕಾರಿ ತರಬೇತಿ ಡಿಪ್ಲೊಮಾ ಕೇಂದ್ರ ಮತ್ತು ಸಹಕಾರಿ ಬ್ಯಾಂಕ್

ತನಿಖಾ ಸಂಸ್ಥೆಯ ವರದಿಯಲ್ಲಿ ಎಲ್ಲಿಯೂ ಹಣದ ದುರುಪಯೋಗದ ಅಥವಾ ಇನ್ನಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ ಆಡಳಿತದ ವೈಫಲ್ಯ ಮತ್ತು ಲೆಕ್ಕ ಪತ್ರಗಳನ್ನು ಸರಿಯಾಗಿ ಗಮನಿಸದೆ ಹೋದುದು ಭಾರೀ ನಷ್ಟಕ್ಕೆ ಕಾರಣವಾಯಿತು ಎಂದು ಹೇಳಲಾಗಿತ್ತು.

ಇದರೊಂದಿಗೆ ಇನ್ನೊಂದು ವಾಕ್ಯವೂ ಇತ್ತು. ಅದೆಂದರೆ “ಸಾರ್ವಜನಿಕ ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಇಟ್ಟುಕೊಂಡ ವ್ಯಕ್ತಿಯೊಬ್ಬರು, ಒಂದು ಸಂಸ್ಥೆಯ ಉಳಿವಿಗಾಗಿ ವೈಯಕ್ತಿಕವಾಗಿ ತನ್ನನ್ನು ತಾನು ಬಹಳ ದೊಡ್ಡ ಆರ್ಥಿಕ ನಷ್ಟವಾಗಬಹುದಾದಂತಹ ಗಂಡಾಂತರಕ್ಕೆ ಒಡ್ಡಿಕೊಳ್ಳುವುದು ಸಮಾಜದ ಹಿತದೃಷ್ಟಿಯಿಂದ ಸರಿಯಾದುದಲ್ಲವೆನಿಸುತ್ತದೆ.” ಈ ವಾಕ್ಯವನ್ನವರು ರವೀಂದ್ರನಾಥರನ್ನು ಉದ್ದೇಶಿಸಿ ಬರೆದಿದ್ದರು. ಮತ್ತು ಮುಂದಿನ ದಿನಗಳಲ್ಲಿ ಅದು ನಿಜವೂ ಆಯಿತು. ಕೊಮಾರ್ಕ್ ಸಂಸ್ಥೆಯಲ್ಲಿ ಹಲವರು ಹೂಡಿದ್ದ ಠೇವಣಿ ಹಣವನ್ನು ನಿಧಾನವಾಗಿಯಾದರೂ ಹಿಂದಿರುಗಿಸಲಾಯಿತು. ಆದರೆ ರವೀಂದ್ರನಾಥರು ವೈಯಕ್ತಿಕವಾಗಿ ಸಂಸ್ಥೆಯಲ್ಲಿ ಹೂಡಿದ್ದ ಲಕ್ಷಗಟ್ಟಲೆ ಹಣವನ್ನು ಕಳೆದುಕೊಂಡರು.

ಕೋಮಾರ್ಕ ಸಂಸ್ಥೆಯ ಬಗೆಗಿನ ಲೆಕ್ಕ ಪತ್ರ ತಪಾಸಣಾ ವರದಿ ಮತ್ತು ತನಿಖಾ ವರದಿ ಇಂಗ್ಲಿಷಿನಲ್ಲಿತ್ತು. ಅದನ್ನು ಕನ್ನಡಕ್ಕೆ ಅನುವಾದಿಸಿ ಕೊಡುವ ಕೆಲಸವೂ ನನ್ನ ಪಾಲಿಗೆ ಬಂದಿತ್ತು.

ರವೀಂದ್ರನಾಥ್ ಮತ್ತು ಕೆಲವರು ಕೊಮಾರ್ಕ್ ಸಂಸ್ಥೆಯ ನಿರ್ದೇಶಕರು ಸೇರಿ ಕೆಲವು ಪತ್ರಿಕೆಗಳ ಸಂಪಾದಕರನ್ನು ಭೇಟಿಯಾಗಿ ಈ ವಿಚಾರಗಳನ್ನು ತಿಳಿಸಿದರು. ಅಂತಹ ಒಂದೆರಡು ಭೇಟಿಗಳನ್ನು ನಾನು ವ್ಯವಸ್ಥೆ ಮಾಡಿದ್ದೆ. ನಂತರ ಪತ್ರಿಕೆಗಳಲ್ಲಿ ಸಾಕಷ್ಟು ವಿವರವಾಗಿ ನಿಜ ಸಂಗತಿಗಳು ಬಂದವು. ಆದರೆ ಕೋಮಾರ್ಕ್ ಸಂಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವಲ್ಲಿ ಆ ಕೆಲವರು ಯಶಸ್ವಿಯಾಗಿದ್ದರು.

ಕೊಮಾರ್ಕ್‌ನ ವ್ಯವಹಾರಗಳು ಹೆಚ್ಚೂ ಕಡಿಮೆ ನಿಂತಂತಾಗಿದ್ದವು. ಸರ್ಕಾರದ ಸಹಾಯಕ್ಕಾಗಿ ಸಾಕಷ್ಟು ಪ್ರಯತ್ನಗಳಾದವು. ಆದರೆ ಯಾವುದೂ ನಿಶ್ಚಿತ ಫಲಿತಾಂಶ ನೀಡಲಿಲ್ಲ. ಕಾಫಿಬೆಳೆಗಾರರರಿಗೆ ಅತ್ಯಂತ ಅವಶ್ಯವಿದ್ದ ಸಹಕಾರಿ ಸಂಸ್ಥೆಯೊಂದು ಪ್ರಥಮ ಪ್ರಯತ್ನದಲ್ಲಿಯೇ ಸೋತು ಹೋಗಿತ್ತು.

ಈ ವಿಚಾರದಲ್ಲಿ ಇನ್ನೂ ಕೆಲವು ಸಂಗತಿಗಳಿವೆ. ಮುಖ್ಯವಾಗಿ ಕಾಫಿವಲಯದ ಜನರ ಮನೋಭಾವನೆ ಮತ್ತು ವ್ಯವಹಾರಿಕವಾಗಿ ಅತಿ ಎನ್ನಿಸುವ ವೈಯಕ್ತಿಕ ಪ್ರತಿಷ್ಟೆ. ಇದು ಸಹಕಾರಿ ವಲಯದ ಬೆಳವಣಿಗೆಗೆ ಬಹಳ ತೊಡಕಾಗುವ ಸಂಗತಿಗಳು.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಕರಾವಳಿ ಮತ್ತು ಉತ್ತರದ ಜಿಲ್ಲೆಗಳಲ್ಲಿ ಸಹಕಾರಿ ವಲಯದಲ್ಲಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಿವೆ. ಕಾಫಿವಲಯವನ್ನು ಹೊರತು ಪಡಿಸಿದ ಮಲೆನಾಡಿನ ಜಿಲ್ಲೆಗಳಲ್ಲಿಯೂ ದಶಕಗಳ ಕಾಲದಿಂದ ಯಶಸ್ವಿಯಾಗಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿವೆ.  ಆದರೆ ಕಾಫಿವಲಯದಲ್ಲಿ ಸಹಕಾರಿ ಸಂಸ್ಥೆಗಳೇ ಅತ್ಯಂತ ಕಡಿಮೆ ಮತ್ತು ಯಶಸ್ವಿಯಾದವು ಮತ್ತೂ ಕಡಿಮೆಯೇ.

ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಕರ ಸಹಕಾರ ಸಂಘಗಳು ನಾಮಕಾವಸ್ಥೆಯಲ್ಲಿ ಇವೆ. ಕಾಫಿವಲಯದಲ್ಲಿ ಕೆಲವು ಜೇನು ವ್ಯವಸಾಯ ಸಹಕಾರಿ ಸಂಘಗಳಿವೆ. ಅವುಗಳಲ್ಲಿ ಕೆಲವು ಇಂದಿಗೂ ಯಶಸ್ವಿಯಾಗಿ ಕೆಲಸಮಾಡುತ್ತಿವೆ. ಆದರೆ ಇವೆಲ್ಲ ಹೆಚ್ಚಾಗಿ ನಗರ ಕೇಂದ್ರಿತವಾಗಿದ್ದು ಕೆಲವರು ವ್ಯಕ್ತಿಗಳ ವೈಯಕ್ತಿಕ ಶ್ರದ್ಧೆ ಮತ್ತು ಆಸಕ್ತಿಗಳಿಂದ ಉಳಿದುಕೊಂಡಿವೆ.

ಇಂತಹ ಒಂದು ಜೇನು ವ್ಯವಸಾಯ ಸಂಘ ಸಕಲೇಶಪುರದ “ಜೇನು ಸೊಸೈಟಿ”. ಇದು ರಾಷ್ಟ್ರ ಮಟ್ಟದಲ್ಲಿಯೇ ಗುರುತಿಸಲ್ಪಟ್ಟ ಸಹಕಾರಿ ಸಂಘ. ಇದು 1947ರಲ್ಲಿ ಸ್ಥಾಪಿತವಾದುದು. ಇದರ ಚಾಲಕ ಶಕ್ತಿಯಾಗಿ ತಮ್ಮ ಜೀವಮಾನದ ಕೊನೆಯವರೆಗೂ ದುಡಿದವರು ಎಸ್.ಬಿ.ಅಣ್ಣೇಗೌಡರು. 1917ರಲ್ಲಿ ಜನಿಸಿದ ಅಣ್ಣೇಗೌಡರು ಆ ಕಾಲದಲ್ಲಿಯೇ ಬಿ.ಎ.ತನಕ ವಿದ್ಯಾಭ್ಯಾಸ ಪಡೆದವರು. 1925ರಲ್ಲಿ ಇವರ ತಂದೆ ಬಸವೇಗೌಡರು ಸಕಲೇಶಪುರ ಉಪಾಧ್ಯಕ್ಷರಾಗಿದ್ದರು. ಆದರೆ ಗಾಂಧಿ ಅನುಯಾಯಿಯಾಗಿದ್ದ ಅಣ್ಣೇಗೌಡರನ್ನು ಆಕರ್ಷಿಸಿದ್ದು ಸಹಕಾರಿ ತತ್ವ. ಸಕಲೇಶಪುರ ಜೇನು ಸಹಕಾರ ಸಂಘವನ್ನು ಸ್ಥಾಪಿಸಿದ ನಂತರ ಅದರೊಂದಿಗೆ ನಿರಂತರ ಅವಿನಾಭಾವ ಸಂಬಂಧ.

ಇವರ ಮಕ್ಕಳು ಮುಂದೆ ಸಕಲೇಶಪುರದ ಪುರಸಭಾಧ್ಯಕ್ಷರಾದರು.

ಹಿರಿಯ ಮಗ ಮದುವೆಯಾಗಿ ತಿಂಗಳಾಗುವಷ್ಟರಲ್ಲಿಯೇ ಅನಾರೋಗ್ಯದಿಂದ ಮೃತರಾದಾಗ ಎಳೆಯ ವಯಸ್ಸಿನ ಸೊಸೆಯ ಬಗ್ಗೆ ಚಿಂತಿಸಿ. ಕೆಲವು ತಿಂಗಳಲ್ಲೇ ತಮ್ಮ ಎರಡನೆಯ ಮಗನೊಂದಿಗೆ ಆಕೆಯ ಮದುವೆಯನ್ನು ನೆರವೇರಿಸಿದ ವಿಶಾಲ ಹೃದಯಿ ಅಣ್ಣೇಗೌಡರು.

ಇಂತಹ ಹಲವರು ಮಲೆನಾಡಿನಲ್ಲಿ ಅಲ್ಲಲ್ಲಿ ಇದ್ದರು. ಸ್ಥಳೀಯವಾಗಿ ಕೆಲವು ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಇಷ್ಟೇ ಅಲ್ಲದೆ ಜೊತೆಗೆ ಕಾಫಿವಲಯದ ಮಡಿಕೇರಿಯಲ್ಲಿಯೇ ಒಂದು ಸಹಕಾರಿ ಡಿಪ್ಲೊಮಾ ಕಾಲೇಜು ದಶಕಗಳ ಹಿಂದೆಯೇ ಸ್ಥಾಪಿತವಾಗಿ ನೂರಾರು ಜನರು ಸಹಕಾರಿ ತರಬೇತಿ ಪಡೆದವರಿದ್ದರು. ಆದರೂ ಸಹ ಇಂದಿಗೂ ಕಾಫಿ ವಲಯದಲ್ಲಿ ಸಹಕಾರಿ ವ್ಯವಸ್ಥೆ ಒಂದು ಸಾಮಾಜಿಕವಾಗಿ ಸ್ವೀಕೃತವಾದ ವ್ಯವಸ್ಥೆ ಆಗಲೇ ಇಲ್ಲ.

ಇಲ್ಲಿನ ಬೆಟ್ಟ ಸೀಮೆ, ಪ್ರಾಕೃತಿಕ ಹಿನ್ನೆಲೆ, ವ್ಯವಸಾಯ ಮತ್ತು ಬೆಳೆ ಪದ್ಧತಿಗಳು ಜೊತೆಗೆ ಎರಡು ಶತಮಾನಗಳ ಬ್ರಿಟಿಷ್ ಪ್ರಭಾವ ಎಲ್ಲವೂ ಸೇರಿ ಇಲ್ಲಿನ ಜನರನ್ನು ಹೆಚ್ಚು ವೈಯಕ್ತಿಕ ಸಾಹಸಿಗಳನ್ನಾಗಿ ಮಾಡಿರಬೇಕು. ಇಲ್ಲವೇ ತನ್ನ ಪಾಡು ತನಗೆ ಎಂಬ ನಿರ್ಲಿಪ್ತ ಮನೋಭಾವಕ್ಕೆ ದೂಡಿರಬೇಕು. ಇದಕ್ಕೆ ಕಳೆದ ಶತಮಾನದಲ್ಲಿ ಇನ್ನಷ್ಟು ಉತ್ತೇಜನ ನೀಡಿದ್ದು ಬೆಳೆಗಾರನ ಹಲವು ಜವಾಬ್ದಾರಿಗಳನ್ನು ತಾನೇ ವಹಿಸಿಕೊಂಡ ಕಾಫಿ ಬೋರ್ಡ್ ಎಂಬ ಸಂಸ್ಥೆ.

ಇವಿಷ್ಟೇ ಅಲ್ಲದೆ ಇನ್ನೂ ಕೆಲವು ವಿಷಯಗಳನ್ನು ಇಲ್ಲಿ ಹೇಳಲೇಬೇಕಾಗಿದೆ. ಈ ಮೇಲಿನ ಎಲ್ಲ ಕಾರಣಗಳಿಂದಲೋ ಅಥವಾ ಮನುಷ್ಯನ ದುರಾಸೆಯಿಂದಲೋ. ಕೊಮಾರ್ಕ್ ಎಂಬ ಬೆಳೆಗಾರರ ಸಂಸ್ಥೆ ಇದ್ದಾಗಲೂ ಮೊದಲಿನ ವರ್ಷಗಳಲ್ಲಿ ಕೆಲವರು ಕಾಫಿ ಕೊಳ್ಳುವ ಏಜಂಟರುಗಳು ಕೊಮಾರ್ಕ್ ಹೆಸರಲ್ಲಿ ಕಾಫಿಯನ್ನು ಪಡೆದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರೂ ತಮಗೆ ಲಾಭವಾಗುವ ಹತ್ತು ರೂಪಾಯಿಯನ್ನು ನೋಡಿ ಸುಮ್ಮನಿದ್ದರೇ ವಿನಃ ಆ ರೀತಿಯ ಅನೈತಿಕ ವ್ಯವಹಾರಗಳನ್ನು ಪ್ರಶ್ನೆ ಮಾಡಲೇ ಇಲ್ಲ. ಇದು ಅನೇಕ ಬೆಳೆಗಾರರ ಬೇಜವಾಬ್ದಾರಿ ಮತ್ತು ದುರಾಸೆಯ ನಡೆಯಾಗಿತ್ತು. ಇದೂ ಕೂಡಾ ಸಂಸ್ಥೆಗೆ ಹಾನಿಯುಂಟು ಮಾಡಿತ್ತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಾಫಿ, ಯಾಲಕ್ಕಿ, ಮೆಣಸು, ವೆನಿಲ್ಲಾ, ಶುಂಠಿಯಂತಹ ಬೆಳೆ ಬದಲಾವಣೆಗಳು ಮತ್ತು ಕಷ್ಟನಷ್ಟಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...