ಜನರಿಗೆ ರಾಮರಾಜ್ಯದ ಭರವಸೆ ನೀಡಲಾಗಿತ್ತಾದರೂ ಲಭಿಸಿದ್ದು ಮಾತ್ರ ಗೂಂಡ ರಾಜ್ಯ ಎಂದು ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಆದಿತ್ಯನಾಥ್ ಸರ್ಕಾರದ ವಿರುದ್ದ ಪತ್ರಕರ್ತರ ವಿಕ್ರಮ್ ಜೋಶಿಯನ್ನು ಗುಂಡಿಕ್ಕಿ ಸಾಯಿಸಿರುವ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾತ್ರಿ ದುಷ್ಕರ್ಮಿಗಳ ಗುಂಡೇಟಿಗೆ ಒಳಗಾಗಿ ಇಂದು ಆಸ್ಪತ್ರೆಯಲ್ಲಿ ನಿಧನರಾದ ಪತ್ರಕರ್ತನ ಕುಟುಂಬಕ್ಕೆ ರಾಹುಲ್ ಸಾಂತ್ವನ ಹೇಳಿದರು.
“ತನ್ನ ಸೊಸೆಗೆ ಆಗುತ್ತಿರುವ ಕಿರುಕುಳವನ್ನು ಪ್ರತಿಭಟಿಸಿದ್ದಕ್ಕೆ ಪತ್ರಕರ್ತ ವಿಕ್ರಂ ಜೋಶಿಯನ್ನು ಹತ್ಯೆಗೈಯಲಾಗಿದೆ. ದುಃಖತಪ್ತ ಕುಟುಂಬಕ್ಕೆ ನಾನು ಸಂತಾಪ ವ್ಯಕ್ತಪಡಿಸುವೆ. ರಾಮರಾಜ್ಯದ ಭರವಸೆ ನೀಡಿತ್ತು. ಆದರೆ, ಅಲ್ಲೀಗ ಗೂಂಡಾರಾಜ್ಯ ಇದೆ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
अपनी भांजी के साथ छेड़छाड़ का विरोध करने पर पत्रकार विक्रम जोशी की हत्या कर दी गयी। शोकग्रस्त परिवार को मेरी सांत्वना।
वादा था राम राज का, दे दिया गुंडाराज।
— Rahul Gandhi (@RahulGandhi) July 22, 2020
ಜುಲೈ 16 ರಂದು ವಿಕ್ರಂ ತನ್ನ ಸೋದರ ಸೊಸೆಗೆ ಕಿರುಕುಳ ನೀಡುತ್ತಿರುವವರ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಈ ದಾಳಿ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ದೂರಿನಲ್ಲಿ ವಿಕ್ರಂ ಅವರ ಕುಟುಂಬ ಛೋಟು, ರವಿ ಮತ್ತು ಆಕಾಶ್ ಬಿಹಾರಿ ಎಂಬ ಮೂರು ಜನರನ್ನು ಹೆಸರಿಸಿದೆ. ಮೂವರು ಆರೋಪಿಗಳು ಪತ್ರಕರ್ತನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಪಾದಿತ ಎಫ್ಐಆರ್ ತಿಳಿಸಿದೆ.
ಓದಿ: ಪುತ್ರಿಯರ ಮುಂದೆಯೇ ಗುಂಡೇಟಿಗೊಳಗಾಗಿದ್ದ ಪತ್ರಕರ್ತ ನಿಧನ