Homeಕರ್ನಾಟಕ‘ಬಾಳಿಗ ಕೊಲೆಯ ಬಗ್ಗೆ ಬಾಯಿಬಿಡದವರು, ದಲಿತ ವ್ಯಕ್ತಿ ಕೊಲೆಯಾದದ್ದು ಖಂಡಿಸುತ್ತಾರಾ?’

‘ಬಾಳಿಗ ಕೊಲೆಯ ಬಗ್ಗೆ ಬಾಯಿಬಿಡದವರು, ದಲಿತ ವ್ಯಕ್ತಿ ಕೊಲೆಯಾದದ್ದು ಖಂಡಿಸುತ್ತಾರಾ?’

- Advertisement -
- Advertisement -

“ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರು ಕೊಲೆಯಾಗಿದ್ದರ ಬಗ್ಗೆ ಇಲ್ಲಿಯ (ಕರಾವಳಿ) ಮುಖಂಡರು ಇದುವರೆಗೂ ಬಾಯಿ ತೆರೆದಿಲ್ಲ. ಇನ್ನು ಧರ್ಮಸ್ಥಳದ ದಲಿತ ವ್ಯಕ್ತಿ ದಿನೇಶ ಅವರು ಕೊಲೆಯಾಗಿರುವುದನ್ನು ಖಂಡಿಸುತ್ತಾರಾ?” ಎಂದು ಸಂಘ ಪರಿವಾರದ ಮಾಜಿ ನಾಯಕ ಸುನಿಲ್ ಬಜಿಲಕೇರಿ ಪ್ರಶ್ನಿಸಿದ್ದಾರೆ.

‘ನಾನುಗೌರಿ.ಕಾಂ’ನೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಅವರು, “ನಮ್ಮಲ್ಲಿ ಕೊಲೆಯಾದವರು ಮುಖ್ಯವಲ್ಲ, ಯಾರು ಕೊಲೆ ಮಾಡಿದ್ದೆನ್ನುವುದು ಮುಖ್ಯ. ಹಾಗಾಗಿ ಶರತ್ ಮಡಿವಾಳನ ಜೀವಕ್ಕಿರುವ ಬೆಲೆ ವಿನಾಯಕ ಬಾಳಿಗರ ಜೀವಕ್ಕಿಲ್ಲ. ಹರ್ಷನ ಜೀವಕ್ಕಿರುವ ಬೆಲೆ ದಿನೇಶರ ಜೀವಕ್ಕಿಲ್ಲ” ಎಂದು ವಿಷಾದಿಸಿದ್ದಾರೆ.

“ಅಷ್ಟೇ ಯಾಕೆ ಪಾಕ್ ಸೈನಿಕರಿಂದ ಹತರಾದ ಯೋಧರಿಗಿರುವ ಬೆಲೆ ಗಾಲ್ವಾನ್‍ನಲ್ಲಿ ಚೀನೀ ಸೈನಿಕರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗಿಲ್ಲ. ಅದೇ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಅಪಹರಿಸಿದ ಹತ್ತು ಮಂದಿ ಭಾರತೀಯ ಸೈನಿಕರ ಬಗ್ಗೆ ನಮ್ಮಲ್ಲಿ ಯಾವತ್ತಾದರೂ ಚರ್ಚೆ ನಡೆದಿದೆಯೇ? ಊಹುಂ! ನಮ್ಮಲ್ಲಿ ನೀರವ ಮೌನ” ಎಂದು ಹೇಳಿದ್ದಾರೆ.

ಸಂಘ ಪರಿವಾರದ ಮಾಜಿ ನಾಯಕ ಸುನಿಲ್ ಬಜಿಲಕೇರಿ

“ನಮ್ಮ ದೇಶಭಕ್ತಿ ಉಕ್ಕಿ ಹರಿಯಬೇಕಾದರೆ, ನಮ್ಮ ಘೋಷಣೆಗಳು ಮುಗಿಲು ಮುಟ್ಟಬೇಕಾದರೆ, ನಮ್ಮ ಜನರ ಹಾಗೂ ನಾಯಕರ ಎದೆಯ ವಿಸ್ತೀರ್ಣ ಜಗತ್ತಿಗೆ ತಿಳಿಯಬೇಕಾದರೆ ನಮ್ಮ ಶತ್ರು ಮುಸ್ಲಿಮನಾಗಿರಬೇಕು ಇಲ್ಲವೇ ನಮ್ಮ ಸಂತ್ರಸ್ತರು ಸಮಾಜದ ಗಣ್ಯ ವರ್ಗದವರಾಗಿರಬೇಕು” ಎಂದು ಅವರು ಟೀಕಿಸಿದ್ದಾರೆ.

“ಇಲ್ಲಿ ಮುಸ್ಲಿಮರ ಜೀವಕ್ಕೆ ಬೆಲೆಯಿಲ್ಲ. ಆದರೆ ಮುಸ್ಲಿಮರಿಂದ ಕೊಲೆಯಾದ ದೇಹಕ್ಕೆ ಬೆಲೆಯಿದೆ. ಇದು ಸಿರಿವಂತರ ಸಮಾಜ, ಇದು ಗಣ್ಯರ ಸಮಾಜ, ಇದು ಮೇಲ್ವರ್ಗದವರ ಸಮಾಜ. ಇಲ್ಲಿ ದೊಡ್ಡವರ, ಉಳ್ಳವರ ಪ್ರಾಣಕ್ಕೆ ಬೆಲೆಯೇ ಹೊರತು, ತಳವರ್ಗದ, ಬಡವರ ಪ್ರಾಣಕ್ಕಲ್ಲ. ಇದು ಇಂದಿನ ವಿದ್ಯಾಮಾನ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕರಾವಳಿಯ ಸಾಮಾನ್ಯರು ಬುದ್ಧಿವಂತರಾಗುತ್ತಿದ್ದಾರೆ’

“ನಮ್ಮ ಕರಾವಳಿ ಯಾಕೆ ಶಾಂತವಾಗಿದೆ? ಮಂಗಳೂರಿನಲ್ಲಿ ನಾಗವನ ದೇವಸ್ಥಾನಕ್ಕೆ ಅಪಚಾರವಾದರೂ ಕೂಡ ನಮ್ಮವರು ಶಾಂತವಾಗಿದ್ದಾರೆ. ದೂರದ ಶಿವಮೊಗ್ಗದಲ್ಲಿ ಸಂಘಟನೆಯ ಯುವಕರನ್ನು ಕೊಲೆ ಮಾಡಿದರೂ ನಮ್ಮ ಮಂಗಳೂರು ಶಾಂತವಾಗಿದೆ. ಕರಾವಳಿಯ ಜನ ಬುದ್ಧಿವಂತರು. ಇದಕ್ಕೆಲ್ಲ ಮುಖ್ಯ ಕಾರಣ- ಕರಾವಳಿ ಜನ ತಮ್ಮ ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡುತ್ತಿರುವುದು” ಎಂದು ಸುನಿಲ್ ಬಜಿಲಕೇರಿ ತಿಳಿಸಿದ್ದಾರೆ.

“ಒಂದು ಸಂದರ್ಭದಲ್ಲಿ ಕರಾವಳಿಯ ಹಿಂದುಳಿದ ವರ್ಗದ ಮನೆಗಳಲ್ಲಿ ಕಾರ್ಪೆಂಟರ್, ಮೆಕಾನಿಕ್, ಪ್ಲಂಬರ್ ಪೇಂಟರ್ ಮತ್ತು ಕೂಲಿ ಕೆಲಸ, ಮೇಸ್ತ್ರಿ ಕೆಲಸ ಮಾಡುವವರೇ ಹೆಚ್ಚಾಗಿದ್ದರು. ಈ ಹಿಂದುಳಿದ ವರ್ಗದ ಇಂಥ ಯುವಕರನ್ನು ಪ್ರಚೋದಿಸಲು ಸುಲಭವಾಗುತ್ತಿತ್ತು. ಸುರತ್ಕಲ್ ಪ್ರದೇಶದಲ್ಲಿ ಸತ್ಯಜಿತ್ ಹಿಡಿತವಿದ್ದು ಅವರು ತನ್ನ ಯುವಕರನ್ನು ಯಾವುದೇ ಗಲಭೆಗೆ ಹೋಗದಂತೆ ನಿಯಂತ್ರಿಸಿದ್ದಾರೆ. ಕಾರಣ ಅವರಿಗೆ ಬಿಜೆಪಿಯ ಕುತಂತ್ರ ತಿಳಿದದ್ದು, ಕುದ್ರೋಳಿ ಬಜಿಲಕೇರಿ ಇವತ್ತು ತುಂಬಾ ಶಾಂತವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಬಲಿದಾನಿಗಳ ಕುಟುಂಬಕ್ಕೆ ಎಂಎಲ್‌ಎ ಟಿಕೆಟ್ ನೀಡಿ’

ಹಿಂದುತ್ವ ಹೆಸರಲ್ಲಿ, ಮತೀಯ ರಾಜಕಾರಣದ ಹೆಸರಲ್ಲಿ ಬಡವರ ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ ಎಂಬ ಜಾಗೃತಿ ಮೂಡಿಸಲಾಗುತ್ತಿದ್ದು, ಅದರ ಭಾಗವಾಗಿ ಕೊಲೆಯಾದ ಕಾರ್ಯಕರ್ತರ ಕುಟುಂಬದವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಈ ಸಂಬಂಧ ಶಿಕ್ಷಣ ತಜ್ಞ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆಯವರು ದನಿಗೂಡಿಸಿದ್ದಾರೆ.


ಇದನ್ನೂ ಓದಿರಿ: ಧರ್ಮಸ್ಥಳ: ಬಜರಂಗದಳ ಮುಖಂಡನಿಂದ ದಲಿತ ಯುವಕನ ಹತ್ಯೆ – ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬಡವರ ಮಕ್ಕಳ ಆ ವೇಷಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ದಾಹ ತೀರಿಸಿಕೊಳ್ಳುತ್ತಿರುವ ದಲ್ಬಾಜಿ ನಾಯಕರಿಗೆ ಮುಂದಿದೆ ಮಾರಿ ಹಬ್ಬ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...