Homeಮುಖಪುಟಸೀಟು ಹಂಚಿಕೆ ವಿವಾದ: ಅಪಾಯದ ಅಂಚಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ?

ಸೀಟು ಹಂಚಿಕೆ ವಿವಾದ: ಅಪಾಯದ ಅಂಚಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ?

- Advertisement -
- Advertisement -

ತಮಿಳುನಾಡಿನಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಕೇಳುತ್ತಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮತ್ತು ಪ್ರಬಲ ಪ್ರಾದೇಶಿಕ ಪಕ್ಷ ಡಿಎಂಕೆ ನಡುವಿನ ಸ್ಥಾನ ಹಂಚಿಕೆ ಮಾತುಕತೆ ಸ್ಥಗಿತಗೊಂಡಿದೆ.
ಡಿಎಂಕೆ-ಕಾಂಗ್ರೆಸ್ ಮೈತ್ರಿ ಮುರಿಯುವ ಹಂತದಲ್ಲಿದೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.

2018 ರ ಡಿಸೆಂಬರ್‌ನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ತಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರಿಂದ ಪಕ್ಷದ ಆಡಳಿತವನ್ನು ವಹಿಸಿಕೊಂಡಿದ್ದರು, ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು 2019 ರ ಸಾರ್ವತ್ರಿಕ ಚುನಾವಣೆಗಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಿದಾಗ ದೇಶವನ್ನು ಅಚ್ಚರಿಗೊಳಿಸಿತು. ಅದು ಅಚ್ಚರಿ ಉಂಟು ಮಾಡಿತ್ತು.

ಕಾಂಗ್ರೆಸ್‌ನ ಸುದೀರ್ಘ ಮಿತ್ರಪಕ್ಷಗಳಲ್ಲಿ ಒಬ್ಬರಾದ ಡಿಎಂಕೆಯ ಸ್ಟಾಲಿನ್ ರಾಹುಲ್ ಗಾಂಧಿಯವರ ಹೆಸರನ್ನು ಪ್ರಸ್ತಾಪಿಸಿದ ಮೊದಲ ಯುಪಿಎ ನಾಯಕರಾಗಿದ್ದರು.
ಈಗ, ಎರಡು ವರ್ಷಗಳ ನಂತರ, ಡಿಎಂಕೆ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಮುರಿಯುವ ಅಂಚಿನಲ್ಲಿದೆ! 2006, 2011 ಮತ್ತು 2016 ರಲ್ಲಿ ಸತತ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಅದರ ಅತಿದೊಡ್ಡ ಪಾಲುದಾರ ಮಿತ್ರಪಕ್ಷವಾಗಿದ್ದ ಕಾಂಗ್ರೆಸ್‌ನೊಂದಿಗೆ ಡಿಎಂಕೆ ಸ್ವಲ್ಪ ಕಠಣವಾಗಿ ವರ್ತಿಸುತ್ತಿದೆ. ಇದನ್ನು ಸೈಕಾಲಿಜಿಕಲ್ ಮೂವ್ (ಮಾನಸಿಕ ನಡೆ) ಎನ್ನಲಾಗುತ್ತಿದೆ.

2021 ರ ವಿಧಾನಸಭಾ ಚುನಾವಣೆಗೆ ಮುನ್ನ, ಡಿಎಂಕೆ ಸ್ಪಷ್ಟವಾಗಿ ಕಾಂಗ್ರೆಸ್ ಕೇವಲ 20 ಸ್ಥಾನಗಳನ್ನು ಮಾತ್ರ ನೀಡಬಲ್ಲೆವು ಎಂದು ಹೇಳಿದೆ. ಮೊದಲಿಗೆ 18 ಸ್ಥಾನ ನೀಡುವುದಾಗಿ ಹೇಳಿದ ಅದು ಆರಂಭಿಕ ಮಾತುಕತೆಗಳ ನಂತರ 20 ಸ್ಥಾನದ ಆಫರ್ ಮಾಡಿದೆ.

ಈಗ ಕಾಂಗ್ರೆಸ್ ಮೇಲೆ ಜವಾಬ್ದಾರಿ ಇದೆ, ಮೈತ್ರಿಯಲ್ಲಿ ಮುಂದುವರಿಯಬೇಕೋ, ಇಲ್ಲವೋ ಎಂಬುದನ್ನು ಅದು ನಿರ್ಧರಿಸುವ ಕಾಲ ಬಂದಿದೆ. 2016 ಕ್ಕೆ ಹೋಲಿಸಿದರೆ ಕೇವಲ ಅರ್ಧದಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಬೇಕು ಅಥವಾ ಮೈತ್ರಿಯಿಂದ ಹೊರನಡೆಯಲು ಸಿದ್ಧವಾಗಬೇಕು.

ಹಾಗಾದರೆ ಡಿಎಂಕೆ ಈ ಆಕ್ರಮಣಕಾರಿ ನಿಲುವನ್ನು ಏಕೆ ಅಳವಡಿಸಿಕೊಂಡಿದೆ? “ಇದು ಮಾನಸಿಕ ನಡೆ” ಎಂದು ಡಿಎಂಕೆಯ ಉನ್ನತ ಮೂಲವೊಂದು ಹೇಳುತ್ತಿದೆ.. “ಕಾಂಗ್ರೆಸ್ ಹೊರನಡೆದರೆ ನಮಗೆ ಬೇಸರವಿಲ್ಲ. ವಾಸ್ತವವಾಗಿ ಅವರು ಮೈತ್ರಿಯಿಂದ ಹೊರಗುಳಿಯಬೇಕು ಎಂದು ಹಲವರು ಪ್ರತಿಪಾದಿಸುತ್ತಾರೆ. ಪಕ್ಷವು ದೊಡ್ಡ ಮೈತ್ರಿಯ ಭಾಗವಾಗಿದ್ದರೆ ಮಾತ್ರ ಡಿಎಂಕೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂದು ಅನೇಕ ಮತದಾರರು ಭಾವಿಸುತ್ತಾರೆ, ನಾವು ಆ ಕಲ್ಪನೆಯನ್ನು ಮುರಿಯಬೇಕಾಗಿದೆ. ಕಾಂಗ್ರೆಸ್ಸಿನಂತಹ ಮೈತ್ರಿ ಪಾಲುದಾರರಿಲ್ಲದೆ ಡಿಎಂಕೆ ಭರ್ಜರಿ ಜಯ ಸಾಧಿಸಬಹುದು ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪಕ್ಷದ ಕಾರ್ಯತಂತ್ರ ತಂಡದ ಅನೇಕ ನಾಯಕರು ಮತ್ತು ಸದಸ್ಯರು ಮಾತನಾಡುತ್ತಾ, ಕಾಂಗ್ರೆಸ್ಸಿನ ಉಪಸ್ಥಿತಿಯು ಡಿಎಂಕೆ ಭವಿಷ್ಯವನ್ನು ಹಾನಿಗೊಳಿಸುತ್ತದೆ ಮತ್ತು ಡಿಎಂಕೆಯ ಒಟ್ಟಾರೆ ಪ್ರಮಾಣವನ್ನು ತಗ್ಗಿಸುತ್ತದೆ ಎಂಬುದು ಅವರ ಅಂದಾಜಾಗಿದೆ.

“ದಕ್ಷಿಣ ತಮಿಳುನಾಡಿನ ಜೊತೆಗೆ, ಕನ್ಯಾಕುಮಾರಿಯಂತಹ ಜಿಲ್ಲೆಗಳಲ್ಲಿ, ಕಾಂಗ್ರೆಸ್‌ಗೆ ಎಲ್ಲಿಯೂ ಗಮನಾರ್ಹವಾದ ಮತ ಬ್ಯಾಂಕ್ ಇಲ್ಲ. ವಾಸ್ತವವಾಗಿ ಪ್ರತಿ ಚುನಾವಣೆಯಲ್ಲೂ ನಾವು ಸ್ಥಳೀಯ ಡಿಎಂಕೆ ನಾಯಕರ ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡುವ ಮೂಲಕ ಡಿಎಂಕೆ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸುತ್ತಿದ್ದೆವೆ. ಅವರು ಅಂತಿಮವಾಗಿ ಪಕ್ಷದ ವಿರುದ್ಧ ದಂಗೆ ಏಳುತ್ತಾರೆ ” ಎಂದು ಡಿಎಂಕೆ ಮೂಲವೊಂದು ತಿಳಿಸಿದೆ.

ಡಿಎಂಕೆ ಅಂದಾಜೆಂದರೆ, ಪಶ್ಚಿಮ ತಮಿಳುನಾಡು ಎಐಎಡಿಎಂಕೆ ಭದ್ರಕೋಟೆಯಾಯಿತು. ಇದಕ್ಕೆ ಕಾರಣ, ಪಕ್ಷವು ಈ ಪ್ರದೇಶದ ಸ್ಥಾನಗಳನ್ನು ಕೇವಲ ಮೈತ್ರಿಯ ಕಾರಣಕ್ಕೆ ಕಾಂಗ್ರೆಸ್‌ಗೆ ಬಿಟ್ಟುಕೊಡುತ್ತ ಬಂದಿದ್ದು. ಪಕ್ಷವು ಈಗ ತನ್ನದೇ ಆದ ನಾಯಕರು ಸ್ಪರ್ಧಿಸಿ ಈ ಭಾಗದಲ್ಲಿ ಒಂದು ಶಕ್ತಿಯಾಗಿ ಪುನರುಜ್ಜೀವನಗೊಳ್ಳಬೇಕೆಂದು ಬಯಸಿದೆ.

ಮತ್ತೊಂದು ಡಿಎಂಕೆ ಮೂಲವು, 2021 ಡಿಎಂಕೆ ಚುನಾವಣೆಯಾಗಿದೆ ಮತ್ತು ಕಾಂಗ್ರೆಸ್ ಕೂಡ ಅದನ್ನು ಅರ್ಥಮಾಡಿಕೊಂಡಿದೆ ಎಂದು ಹೇಳಿದರು. “ನಮ್ಮ ಲೆಕ್ಕಾಚಾರಗಳನ್ನು ಆಧರಿಸಿ, ನಾವು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುತ್ತೇವೆ, ಕಾಂಗ್ರೆಸ್ ಅರ್ಥಮಾಡಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ಇದು ಅಗ್ರಿಸ್ಸಿವ್ ವಿಚಾರ ಅಲ್ಲ, ವಾಸ್ತವದ ಲೆಕ್ಕಾಚಾರ” ಎಂದು ತಿಳಿಸಿದೆ.

ತಿರುಮವಾಲವನ್ ನೇತೃತ್ವದ ವಿಸಿಕೆ ಎಂಬ ಮತ್ತೊಂದು ಮೈತ್ರಿ ಪಾಲುದಾರರೊಂದಿಗಿನ ಮಾತುಕತೆಗಳಲ್ಲಿ ಡಿಎಂಕೆ ಕಠಿಣವಾಗಿದೆ. ವಿಸಿಕೆ 10 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದರೂ, ಡಿಎಂಕೆ ಕೇವಲ ಆರು ಸ್ಥಾನಗಳಲ್ಲಿ ಸ್ಪರ್ಧಿಸಲು ಸೂಚಿಚಿದೆ. ಮಾತುಕತೆಯ ನಂತರ, ಗುರುವಾರ ಮಧ್ಯಾಹ್ನ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ತಿರುಮವಾಲವನ್ ಅವರ ಮೈತ್ರಿಯಲ್ಲಿ ಪಕ್ಷವು ಕಾರ್ಯತಂತ್ರದ ಪ್ರಯೋಜನವನ್ನು ಹೊಂದಿದೆ, ಕಾಂಗ್ರೆಸ್‌ಗೆ ಅದರ ಕೊರತೆಯಿದೆ ಎಂಬ ಕಾರಣದಿಂದಾಗಿ ಪಕ್ಷವು ವಿಸಿಕೆಯನ್ನು ಮಿತ್ರಪಕ್ಷವಾಗಿ ಇಟ್ಟುಕೊಳ್ಳಲು ಬಯಸುತ್ತದೆ ಎಂದು ಡಿಎಂಕೆ ನಾಯಕರು ಹೇಳಿದರು. ಎಐಎಡಿಎಂಕೆ ಮೈತ್ರಿಕೂಟದ ಭಾಗವಾಗಿರುವ ವನ್ನಿಯಾರ್ ನೇತೃತ್ವದ ಪಿಎಂಕೆ ವಿರುದ್ಧ ದಲಿತ ಸಮುದಾಯದ ಮತಗಳನ್ನು ಕ್ರೂಢೀಕರಿಸಲು ವಿಸಿಕೆ ಸಹಾಯ ಮಾಡುತ್ತದೆ.

ಡಿಎಂಕೆ ಪರವಾಗಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐಪಿಎಸಿ) ಕಾರ್ಯತಂತ್ರ ರೂಪಿಸುತ್ತಿದೆ. ಸಲಹಾ ಸಂಸ್ಥೆಯ ದೈನಂದಿನ ಅಂದಾಜು ಪಕ್ಷಕ್ಕೆ ಭರ್ಜರಿ ಜಯವನ್ನು ಊಹಿಸುತ್ತಲೇ ಇವೆ. ಇದು ಮೂಡಿಸಿದ ವಿಶ್ವಾಸದಿಂದಾಗಿ, ಅಗತ್ಯಬಿದ್ದರೆ ಕಾಂಗ್ರೆಸ್‌ಗೆ ವಿದಾಯ ಹೇಳುವ ಡಿಎಂಕೆ ಸಿದ್ಧವಾಗಿದೆ.
ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು, ತಮ್ಮ ಸಂಶೋಧನೆ ಅಥವಾ ರಾಜಕೀಯ ತಿಳುವಳಿಕೆಯ ಆಧಾರದ ಮೇಲೆ ಪ್ರಶಾಂತ್ ಅವರ ಐಪಿಎಸಿ ಸಲಹೆಗಳನ್ನು ನೀಡಬಹುದು. ಆದರೆ ಈ ಜೂಜು ವರ್ಕ್ಔಟ್ ಆಗದಿದ್ದರೆ ಸ್ಟಾಲಿನ್ ರಾಜಕೀಯ ಪರಿಣಾಮಗಳನ್ನು ಭರಿಸಬೇಕಾಗುತ್ತದೆ’ ಎಂದಿದ್ದಾರೆ.

“ಕರುಣಾನಿಧಿ ಅವರು ಮಹಾ ಮೈತ್ರಿ ಬಯಸಿದ ರಾಜಕಾರಣಿಯಾಗಿದ್ದರೆ ಮತ್ತು ಅನೇಕ ರಾಜಕೀಯ ಪಕ್ಷಗಳು ಒಪ್ಪಿಕೊಂಡಿದ್ದ ನಾಯಕರಾಗಿದ್ದರೆ, ಸ್ಟಾಲಿನ್‌ಗಾಗಿ ರೂಪಿಸಲಾಗಿರುವ ಮಾರ್ಗವು ವಿಭಿನ್ನವಾಗಿದೆ. ಅದು ‘ಏಕಾಂಗಿಯಾಗಿ ಗೆಲ್ಲಬಲ್ಲ ಡಿಎಂಕೆ ಮಾರ್ಗ” ಎಂದು ಡಿಎಂಕೆ ಮೂಲಗಳು ವಾದಿಸುತ್ತಿವೆ. ಏಪ್ರಿಲ್ 6 ರ ಚುನಾವಣೆಯಲ್ಲಿ ಈ ಹೆಚ್ಚಿನ ಪಾಲಿನ, ರಿಸ್ಕ್ ಜೂಜು ಲಾಭ ತರುತ್ತದೆಯೇ ಎಂಬುದನ್ನು ಕಾದು ನೊಡಬೇಕಿದೆ.


ಇದನ್ನೂ ಓದಿ: ಗುಜರಾತ್: ಮಗಳ ಕಣ್ಣ ಮುಂದೆಯೆ ದಲಿತ ಹೋರಾಟಗಾರನನ್ನು ಕೊಂದ ಮೇಲ್ಜಾತಿಯ ದುಷ್ಕರ್ಮಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....