Homeಮುಖಪುಟಸೀಟು ಹಂಚಿಕೆ ವಿವಾದ: ಅಪಾಯದ ಅಂಚಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ?

ಸೀಟು ಹಂಚಿಕೆ ವಿವಾದ: ಅಪಾಯದ ಅಂಚಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ?

- Advertisement -
- Advertisement -

ತಮಿಳುನಾಡಿನಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಕೇಳುತ್ತಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮತ್ತು ಪ್ರಬಲ ಪ್ರಾದೇಶಿಕ ಪಕ್ಷ ಡಿಎಂಕೆ ನಡುವಿನ ಸ್ಥಾನ ಹಂಚಿಕೆ ಮಾತುಕತೆ ಸ್ಥಗಿತಗೊಂಡಿದೆ.
ಡಿಎಂಕೆ-ಕಾಂಗ್ರೆಸ್ ಮೈತ್ರಿ ಮುರಿಯುವ ಹಂತದಲ್ಲಿದೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.

2018 ರ ಡಿಸೆಂಬರ್‌ನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ತಮ್ಮ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರಿಂದ ಪಕ್ಷದ ಆಡಳಿತವನ್ನು ವಹಿಸಿಕೊಂಡಿದ್ದರು, ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು 2019 ರ ಸಾರ್ವತ್ರಿಕ ಚುನಾವಣೆಗಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಿದಾಗ ದೇಶವನ್ನು ಅಚ್ಚರಿಗೊಳಿಸಿತು. ಅದು ಅಚ್ಚರಿ ಉಂಟು ಮಾಡಿತ್ತು.

ಕಾಂಗ್ರೆಸ್‌ನ ಸುದೀರ್ಘ ಮಿತ್ರಪಕ್ಷಗಳಲ್ಲಿ ಒಬ್ಬರಾದ ಡಿಎಂಕೆಯ ಸ್ಟಾಲಿನ್ ರಾಹುಲ್ ಗಾಂಧಿಯವರ ಹೆಸರನ್ನು ಪ್ರಸ್ತಾಪಿಸಿದ ಮೊದಲ ಯುಪಿಎ ನಾಯಕರಾಗಿದ್ದರು.
ಈಗ, ಎರಡು ವರ್ಷಗಳ ನಂತರ, ಡಿಎಂಕೆ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಮುರಿಯುವ ಅಂಚಿನಲ್ಲಿದೆ! 2006, 2011 ಮತ್ತು 2016 ರಲ್ಲಿ ಸತತ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಅದರ ಅತಿದೊಡ್ಡ ಪಾಲುದಾರ ಮಿತ್ರಪಕ್ಷವಾಗಿದ್ದ ಕಾಂಗ್ರೆಸ್‌ನೊಂದಿಗೆ ಡಿಎಂಕೆ ಸ್ವಲ್ಪ ಕಠಣವಾಗಿ ವರ್ತಿಸುತ್ತಿದೆ. ಇದನ್ನು ಸೈಕಾಲಿಜಿಕಲ್ ಮೂವ್ (ಮಾನಸಿಕ ನಡೆ) ಎನ್ನಲಾಗುತ್ತಿದೆ.

2021 ರ ವಿಧಾನಸಭಾ ಚುನಾವಣೆಗೆ ಮುನ್ನ, ಡಿಎಂಕೆ ಸ್ಪಷ್ಟವಾಗಿ ಕಾಂಗ್ರೆಸ್ ಕೇವಲ 20 ಸ್ಥಾನಗಳನ್ನು ಮಾತ್ರ ನೀಡಬಲ್ಲೆವು ಎಂದು ಹೇಳಿದೆ. ಮೊದಲಿಗೆ 18 ಸ್ಥಾನ ನೀಡುವುದಾಗಿ ಹೇಳಿದ ಅದು ಆರಂಭಿಕ ಮಾತುಕತೆಗಳ ನಂತರ 20 ಸ್ಥಾನದ ಆಫರ್ ಮಾಡಿದೆ.

ಈಗ ಕಾಂಗ್ರೆಸ್ ಮೇಲೆ ಜವಾಬ್ದಾರಿ ಇದೆ, ಮೈತ್ರಿಯಲ್ಲಿ ಮುಂದುವರಿಯಬೇಕೋ, ಇಲ್ಲವೋ ಎಂಬುದನ್ನು ಅದು ನಿರ್ಧರಿಸುವ ಕಾಲ ಬಂದಿದೆ. 2016 ಕ್ಕೆ ಹೋಲಿಸಿದರೆ ಕೇವಲ ಅರ್ಧದಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಬೇಕು ಅಥವಾ ಮೈತ್ರಿಯಿಂದ ಹೊರನಡೆಯಲು ಸಿದ್ಧವಾಗಬೇಕು.

ಹಾಗಾದರೆ ಡಿಎಂಕೆ ಈ ಆಕ್ರಮಣಕಾರಿ ನಿಲುವನ್ನು ಏಕೆ ಅಳವಡಿಸಿಕೊಂಡಿದೆ? “ಇದು ಮಾನಸಿಕ ನಡೆ” ಎಂದು ಡಿಎಂಕೆಯ ಉನ್ನತ ಮೂಲವೊಂದು ಹೇಳುತ್ತಿದೆ.. “ಕಾಂಗ್ರೆಸ್ ಹೊರನಡೆದರೆ ನಮಗೆ ಬೇಸರವಿಲ್ಲ. ವಾಸ್ತವವಾಗಿ ಅವರು ಮೈತ್ರಿಯಿಂದ ಹೊರಗುಳಿಯಬೇಕು ಎಂದು ಹಲವರು ಪ್ರತಿಪಾದಿಸುತ್ತಾರೆ. ಪಕ್ಷವು ದೊಡ್ಡ ಮೈತ್ರಿಯ ಭಾಗವಾಗಿದ್ದರೆ ಮಾತ್ರ ಡಿಎಂಕೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂದು ಅನೇಕ ಮತದಾರರು ಭಾವಿಸುತ್ತಾರೆ, ನಾವು ಆ ಕಲ್ಪನೆಯನ್ನು ಮುರಿಯಬೇಕಾಗಿದೆ. ಕಾಂಗ್ರೆಸ್ಸಿನಂತಹ ಮೈತ್ರಿ ಪಾಲುದಾರರಿಲ್ಲದೆ ಡಿಎಂಕೆ ಭರ್ಜರಿ ಜಯ ಸಾಧಿಸಬಹುದು ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪಕ್ಷದ ಕಾರ್ಯತಂತ್ರ ತಂಡದ ಅನೇಕ ನಾಯಕರು ಮತ್ತು ಸದಸ್ಯರು ಮಾತನಾಡುತ್ತಾ, ಕಾಂಗ್ರೆಸ್ಸಿನ ಉಪಸ್ಥಿತಿಯು ಡಿಎಂಕೆ ಭವಿಷ್ಯವನ್ನು ಹಾನಿಗೊಳಿಸುತ್ತದೆ ಮತ್ತು ಡಿಎಂಕೆಯ ಒಟ್ಟಾರೆ ಪ್ರಮಾಣವನ್ನು ತಗ್ಗಿಸುತ್ತದೆ ಎಂಬುದು ಅವರ ಅಂದಾಜಾಗಿದೆ.

“ದಕ್ಷಿಣ ತಮಿಳುನಾಡಿನ ಜೊತೆಗೆ, ಕನ್ಯಾಕುಮಾರಿಯಂತಹ ಜಿಲ್ಲೆಗಳಲ್ಲಿ, ಕಾಂಗ್ರೆಸ್‌ಗೆ ಎಲ್ಲಿಯೂ ಗಮನಾರ್ಹವಾದ ಮತ ಬ್ಯಾಂಕ್ ಇಲ್ಲ. ವಾಸ್ತವವಾಗಿ ಪ್ರತಿ ಚುನಾವಣೆಯಲ್ಲೂ ನಾವು ಸ್ಥಳೀಯ ಡಿಎಂಕೆ ನಾಯಕರ ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡುವ ಮೂಲಕ ಡಿಎಂಕೆ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸುತ್ತಿದ್ದೆವೆ. ಅವರು ಅಂತಿಮವಾಗಿ ಪಕ್ಷದ ವಿರುದ್ಧ ದಂಗೆ ಏಳುತ್ತಾರೆ ” ಎಂದು ಡಿಎಂಕೆ ಮೂಲವೊಂದು ತಿಳಿಸಿದೆ.

ಡಿಎಂಕೆ ಅಂದಾಜೆಂದರೆ, ಪಶ್ಚಿಮ ತಮಿಳುನಾಡು ಎಐಎಡಿಎಂಕೆ ಭದ್ರಕೋಟೆಯಾಯಿತು. ಇದಕ್ಕೆ ಕಾರಣ, ಪಕ್ಷವು ಈ ಪ್ರದೇಶದ ಸ್ಥಾನಗಳನ್ನು ಕೇವಲ ಮೈತ್ರಿಯ ಕಾರಣಕ್ಕೆ ಕಾಂಗ್ರೆಸ್‌ಗೆ ಬಿಟ್ಟುಕೊಡುತ್ತ ಬಂದಿದ್ದು. ಪಕ್ಷವು ಈಗ ತನ್ನದೇ ಆದ ನಾಯಕರು ಸ್ಪರ್ಧಿಸಿ ಈ ಭಾಗದಲ್ಲಿ ಒಂದು ಶಕ್ತಿಯಾಗಿ ಪುನರುಜ್ಜೀವನಗೊಳ್ಳಬೇಕೆಂದು ಬಯಸಿದೆ.

ಮತ್ತೊಂದು ಡಿಎಂಕೆ ಮೂಲವು, 2021 ಡಿಎಂಕೆ ಚುನಾವಣೆಯಾಗಿದೆ ಮತ್ತು ಕಾಂಗ್ರೆಸ್ ಕೂಡ ಅದನ್ನು ಅರ್ಥಮಾಡಿಕೊಂಡಿದೆ ಎಂದು ಹೇಳಿದರು. “ನಮ್ಮ ಲೆಕ್ಕಾಚಾರಗಳನ್ನು ಆಧರಿಸಿ, ನಾವು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುತ್ತೇವೆ, ಕಾಂಗ್ರೆಸ್ ಅರ್ಥಮಾಡಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ಇದು ಅಗ್ರಿಸ್ಸಿವ್ ವಿಚಾರ ಅಲ್ಲ, ವಾಸ್ತವದ ಲೆಕ್ಕಾಚಾರ” ಎಂದು ತಿಳಿಸಿದೆ.

ತಿರುಮವಾಲವನ್ ನೇತೃತ್ವದ ವಿಸಿಕೆ ಎಂಬ ಮತ್ತೊಂದು ಮೈತ್ರಿ ಪಾಲುದಾರರೊಂದಿಗಿನ ಮಾತುಕತೆಗಳಲ್ಲಿ ಡಿಎಂಕೆ ಕಠಿಣವಾಗಿದೆ. ವಿಸಿಕೆ 10 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದರೂ, ಡಿಎಂಕೆ ಕೇವಲ ಆರು ಸ್ಥಾನಗಳಲ್ಲಿ ಸ್ಪರ್ಧಿಸಲು ಸೂಚಿಚಿದೆ. ಮಾತುಕತೆಯ ನಂತರ, ಗುರುವಾರ ಮಧ್ಯಾಹ್ನ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ತಿರುಮವಾಲವನ್ ಅವರ ಮೈತ್ರಿಯಲ್ಲಿ ಪಕ್ಷವು ಕಾರ್ಯತಂತ್ರದ ಪ್ರಯೋಜನವನ್ನು ಹೊಂದಿದೆ, ಕಾಂಗ್ರೆಸ್‌ಗೆ ಅದರ ಕೊರತೆಯಿದೆ ಎಂಬ ಕಾರಣದಿಂದಾಗಿ ಪಕ್ಷವು ವಿಸಿಕೆಯನ್ನು ಮಿತ್ರಪಕ್ಷವಾಗಿ ಇಟ್ಟುಕೊಳ್ಳಲು ಬಯಸುತ್ತದೆ ಎಂದು ಡಿಎಂಕೆ ನಾಯಕರು ಹೇಳಿದರು. ಎಐಎಡಿಎಂಕೆ ಮೈತ್ರಿಕೂಟದ ಭಾಗವಾಗಿರುವ ವನ್ನಿಯಾರ್ ನೇತೃತ್ವದ ಪಿಎಂಕೆ ವಿರುದ್ಧ ದಲಿತ ಸಮುದಾಯದ ಮತಗಳನ್ನು ಕ್ರೂಢೀಕರಿಸಲು ವಿಸಿಕೆ ಸಹಾಯ ಮಾಡುತ್ತದೆ.

ಡಿಎಂಕೆ ಪರವಾಗಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಭಾರತೀಯ ರಾಜಕೀಯ ಕ್ರಿಯಾ ಸಮಿತಿ (ಐಪಿಎಸಿ) ಕಾರ್ಯತಂತ್ರ ರೂಪಿಸುತ್ತಿದೆ. ಸಲಹಾ ಸಂಸ್ಥೆಯ ದೈನಂದಿನ ಅಂದಾಜು ಪಕ್ಷಕ್ಕೆ ಭರ್ಜರಿ ಜಯವನ್ನು ಊಹಿಸುತ್ತಲೇ ಇವೆ. ಇದು ಮೂಡಿಸಿದ ವಿಶ್ವಾಸದಿಂದಾಗಿ, ಅಗತ್ಯಬಿದ್ದರೆ ಕಾಂಗ್ರೆಸ್‌ಗೆ ವಿದಾಯ ಹೇಳುವ ಡಿಎಂಕೆ ಸಿದ್ಧವಾಗಿದೆ.
ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು, ತಮ್ಮ ಸಂಶೋಧನೆ ಅಥವಾ ರಾಜಕೀಯ ತಿಳುವಳಿಕೆಯ ಆಧಾರದ ಮೇಲೆ ಪ್ರಶಾಂತ್ ಅವರ ಐಪಿಎಸಿ ಸಲಹೆಗಳನ್ನು ನೀಡಬಹುದು. ಆದರೆ ಈ ಜೂಜು ವರ್ಕ್ಔಟ್ ಆಗದಿದ್ದರೆ ಸ್ಟಾಲಿನ್ ರಾಜಕೀಯ ಪರಿಣಾಮಗಳನ್ನು ಭರಿಸಬೇಕಾಗುತ್ತದೆ’ ಎಂದಿದ್ದಾರೆ.

“ಕರುಣಾನಿಧಿ ಅವರು ಮಹಾ ಮೈತ್ರಿ ಬಯಸಿದ ರಾಜಕಾರಣಿಯಾಗಿದ್ದರೆ ಮತ್ತು ಅನೇಕ ರಾಜಕೀಯ ಪಕ್ಷಗಳು ಒಪ್ಪಿಕೊಂಡಿದ್ದ ನಾಯಕರಾಗಿದ್ದರೆ, ಸ್ಟಾಲಿನ್‌ಗಾಗಿ ರೂಪಿಸಲಾಗಿರುವ ಮಾರ್ಗವು ವಿಭಿನ್ನವಾಗಿದೆ. ಅದು ‘ಏಕಾಂಗಿಯಾಗಿ ಗೆಲ್ಲಬಲ್ಲ ಡಿಎಂಕೆ ಮಾರ್ಗ” ಎಂದು ಡಿಎಂಕೆ ಮೂಲಗಳು ವಾದಿಸುತ್ತಿವೆ. ಏಪ್ರಿಲ್ 6 ರ ಚುನಾವಣೆಯಲ್ಲಿ ಈ ಹೆಚ್ಚಿನ ಪಾಲಿನ, ರಿಸ್ಕ್ ಜೂಜು ಲಾಭ ತರುತ್ತದೆಯೇ ಎಂಬುದನ್ನು ಕಾದು ನೊಡಬೇಕಿದೆ.


ಇದನ್ನೂ ಓದಿ: ಗುಜರಾತ್: ಮಗಳ ಕಣ್ಣ ಮುಂದೆಯೆ ದಲಿತ ಹೋರಾಟಗಾರನನ್ನು ಕೊಂದ ಮೇಲ್ಜಾತಿಯ ದುಷ್ಕರ್ಮಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...