Homeಡೇಟಾ ಖೋಲಿಕೊರೊನಾಗೆ ಔಷಧಿ: ಏಳು ಕೋಟೆಯ ರಾಜದುರ್ಗದಲ್ಲಿ ಲಸಿಕಾಯಣದ ರಹಸ್ಯ

ಕೊರೊನಾಗೆ ಔಷಧಿ: ಏಳು ಕೋಟೆಯ ರಾಜದುರ್ಗದಲ್ಲಿ ಲಸಿಕಾಯಣದ ರಹಸ್ಯ

ಅದರ ನಮ್ಮವರು ಲಸಿಕೆ ಮಾಡತೇನಿ ಅಂತ ಹೇಳಿ ಟೂ ಮಿನಿಟ್ ಮ್ಯಾಗಿ ಮಾಡಾಕ ಹೊಂಟಾರ.

- Advertisement -
- Advertisement -

“ಕುಂಟ ಕುಂಟ ಕುರವತ್ತಿ, ರಂಟಿ ಹೊಡಿಯೋ ಬಾಳಪ್ಪ’’ ಅನ್ನೋದು ನಮ್ಮ ಬಾಲ್ಯದ ಫೇವರಿಟ್ ಹಾಡು. ಅದನ್ನ ಯಾರನ್ನರ ರೇಗಿಸಲಿಕ್ಕೆ ಹಾಡುತ್ತಾ ಇದ್ವಿ. ಯಾಕ ಅಂದ್ರ ನಮ್ಮ ಸಾಲಿಯೊಳಗ ಪ್ರತಿ ಕ್ಲಾಸ್‍ದಾಗು ಒಬ್ಬ ಕುಂಟ ಇರತಿದ್ದ.

ಅವರೆಲ್ಲರೂ ಪೋಲಿಯೋದಿಂದ ಕುಂಟತಿದ್ದರು.

ಈಗ ನೀವು ಯಾವುದರ ಶಹರ ಅಥವಾ ಹಳ್ಳಿಯ ಸರ್ಕಾರಿ ಸಾಲಿಗೆ ಹೋಗಿ ಹುಡುಕಿದರ ಒಬ್ಬನ ಒಬ್ಬ ಪೋಲಿಯೋ ರೋಗಿ ಸಿಗಂಗಿಲ್ಲ.

ಅದಕ್ಕ ಕಾರಣ ಎನಪಾ ಅಂದ್ರ, ಸುಮಾರು 25 ವರ್ಷದಿಂದ ನಮ್ಮ ದೇಶದಾಗ ನಡದುಕೊಂಡು ಬಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ.

ಭಾರತ ಸರಕಾರ, ವಿಶ್ವ ಆರೋಗ್ಯ ಸಂಸ್ಥೆ, ರೋಟರಿ ಕ್ಲಬ್, ಗೇಟ್ಸ್ ಫೌಂಡೇಶನ್ ಇತ್ಯಾದಿ ಸಂಸ್ಥೆಗಳ ಪ್ರಯತ್ನದಿಂದ ನಮ್ಮ ದೇಶದ ಎಲ್ಲಾ ಮಕ್ಕಳಿಗೂ ಉಚಿತವಾಗಿ ಇಷ್ಟು ವರ್ಷಗಟ್ಟಲೆ ಲಸಿಕೆ ಸಿಕ್ಕದ.

ಅದಕ್ಕ ಎರಡು ಕಾರಣ ಅದಾವು. ಆ ರೋಗ ಬರದಂಗ ಒಬ್ಬ ಪುಣ್ಯಾತ್ಮ ಲಸಿಕೆ ಕಂಡು ಹಿಡದ. ಮತ್ತು ಅದನ್ನು ಪೇಟೆಂಟು ಮಾಡಿ ರೊಕ್ಕ ಹೊಡಿಯೋ ವಿಚಾರ ಮಾಡಲಿಲ್ಲ.

ಭಾರತದಂತಹ ಬಡ, ಹಿಂದುಳಿದ ಅಸಂಖ್ಯ ದೇಶಗಳ ಕೋಟ್ಯಾಂತರ ಜನ ತಂಪ ಹೊತ್ತಿನಾಗ ನೆನೆಸಬೇಕಾದ ಆ ಮನುಷ್ಯನ ಹೆಸರು ಜೋನಾಸ ಸಾಲ್ಕ.

ಜಗತ್ತಿನಾದ್ಯಂತ ಕೋಟ್ಯಾಂತರ ಜನರ ಅಂಗವೈಕಲ್ಯ ತಪ್ಪಿಸಿದ ಈ ವಿಜ್ಞಾನಿಗೆ ಸಾವಿರಾರು ಪ್ರಶಸ್ತಿ ಬಂದವು. ಆದರ ಪ್ರಚಾರದಿಂದ ದೂರ ಇರಲು ಇಷ್ಟ ಪಡುತ್ತಾ ಇದ್ದ ಜೋನಾಸ, ‘ಈ ಕೀರ್ತಿ ಶನಿ ನನ್ನ ಕೆಲಸಕ್ಕೆ ಅಡ್ಡವಾಗುತ್ತಾನೆ’ ಅಂತ ಹೇಳುತ್ತಿದ್ದರು. ಈ ಲಸಿಕೆಗೆ ಪೇಟೆಂಟು ಮಾಡಿಸೋದಿಲ್ಲವೇ ಅಂತ ಕೇಳಿದರೆ ‘ಸೂರ್ಯನಿಗೆ ಪೇಟೆಂಟು ಮಾಡಬಹುದೇ’ ಅಂತ ಉತ್ತರ ಕೊಟ್ಟರು.

ಅರೆ ಶಿಕ್ಷಣ ಪಡೆದ ವಲಸೆ ಕಾರ್ಮಿಕರ ಮಗನಾಗಿದ್ದ ಜೋನಾಸ ಅವರು ಕಷ್ಟಪಟ್ಟು ಕಾಲೇಜಿಗೆ ಸೇರಿದರು.

ವೈದ್ಯ ಪದವಿಯ ನಂತರ ಸಂಶೋಧನೆ ನಡೆಸಬೇಕು ಅಂತ ಆಸ್ಪತ್ರೆ ಸೇರದೆ ಪ್ರಯೋಗಶಾಲೆ ಸೇರಿಕೊಂಡರು. ಅಮೇರಿಕದ ಮಕ್ಕಳಲ್ಲಿ ಹೆಚ್ಚು ಆಗ್ತಾ ಇರೋ ಪೋಲಿಯೋ ಪಿಡುಗು ನೋಡಿ ಬೇಸತ್ತು ಇದಕ್ಕ ಏನರ ಮಾಡ್ಬೇಕಲೇ ಅಂತ ಹೇಳಿ ಪೋಲಿಯೋ ವೈರಸ್ಸಿನ ಹಿಂದ ಬಿದ್ದರು.

ಸುಮಾರು ಒಂಬತ್ತು ವರ್ಷ ಸಂಶೋಧನೆ ಮಾಡಿದ ಮ್ಯಾಲೆ ಆ ವೈರಸ್ಸಿನ ನಿರ್ಜೀವ ಜೀವಾಣು ಹೊರಗ ತಗದು ಅದನ್ನ ಆರೋಗ್ಯವಂತ ಪ್ರಾಣಿ ಹಾಗೂ ಮನುಷ್ಯರ ದೇಹದೊಳಗ ಹಾಕಿ, ಅದನ್ನ ಸೋಲಿಸಿದ ಯಾಂಟೀಬಾಡಿ ಜೀವಕೋಶಗಳನ್ನ ತಗದು ಸಣ್ಣ ಮಕ್ಕಳಿಗೆ ಕೊಟ್ಟಾಗ ಲಸಿಕೆ ತಯಾರು ಆತು.

ಅದನ್ನ ಪರೀಕ್ಷೆ ಮಾಡಲಾರದೇ ಜನ ಸಾಮಾನ್ಯರಿಗೆ ಕೊಡಬಾರದು ಅಂತ ಹೇಳಿ ಪ್ರಾಯೋಗಿಕ ಪರೀಕ್ಷೆ ಮಾಡಿದರು. ಅದರಾಗ ಸುಮಾರು 18 ಲಕ್ಷ ಶಾಲಾ ವಿದ್ಯಾರ್ಥಿಗಳು, ಎರಡೂ ಕಾಲು ಲಕ್ಷ ಇತರೆ ವಿದ್ಯಾರ್ಥಿಗಳು, 65 ಸಾವಿರ ಶಿಕ್ಷಕರು, 20 ಸಾವಿರ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಇಂಥದೇ ಕೆಲಸ ಮಾಡಿದ ಇನ್ನೊಬ್ಬ ದೊಡ್ಡ ಮನುಷ್ಯ ಅಂದ್ರ ಆಲ್ಬರ್ಟ್ ಸಾಬಿನ. ಪೋಲಂಡ್ ದೇಶದಾಗ ಹುಟ್ಟಿದ ಈ ಮನುಷ್ಯ ಅಮೇರಿಕದಾಗ ಸಂಶೋಧನೆ ಮಾಡಿ ಔಷದಿ ತರ ನುಂಗೋ ಲಸಿಕೆ ಕಂಡು ಹಿಡದರು. ಈಗ ಎಲ್ಲಾ ದೇಶದಾಗ ಕೊಡೋ ಲಸಿಕೆ ಇದ ಸಾಬಿನ ಲಸಿಕೆ. ಇವರ ಓಪಿವಿ ಅಥವಾ ಬಾಯಿಯಿಂದ ತೊಗೊಳಲೋ ಲಸಿಕೆಯನ್ನು ಕಮ್ಮಿ ಅಂದರೂ ಹತ್ತು ಕೋಟಿ ಜನರ ಮ್ಯಾಲೆ ಪರೀಕ್ಷೆ ಮಾಡಲಾಯಿತು.

ಇಂತಹ ದುರಿತ ಕಾಲದಾಗ ಈ ಪುಣ್ಯವಂತರ ನೆನಪು ಯಾಕ ಆತಪ ಅಂದ್ರ ನಮ್ಮ ಸರಕಾರದವರು ಕೊರೊನಾ ವೈರಾಣು ವಿರುದ್ಧ ಒಂದು ಲಸಿಕೆ ರೆಡಿ ಮಾಡಾಕ ಹೊಂಟಾರು. ಅದು ಇನ್ನೂ ಕಾದು ಬೆಂದು ತಯಾರು ಆಗೋಕಿಂತಾ ಮೊದಲಿಗೆ ನಮ್ಮ ಮೂಗು ಬಾಯಿ ಹಿಡದು ಅದನ್ನ ಕೂಡಸಾಕ ತಯಾರಿ ಮಾಡಾಕ ಹತ್ಯಾರ್.

ಅದು ಹೆಂಗಪಾ ಅಂದ್ರ ಮದುವಿ ಮನಿಯೊಳಗ ದೊಡ್ಡ ಅಡಿಗಿ ತಯಾರು ಆಗೋ ಮುಂದ ಅಡಿಗಿ ಭಟ್ಟರಿಗೆ ಎನರ ಸಂಶಯ ಬಂದರ್ ಕಲ್ಯಾಣಮಂಟಪದ ಹೊರಗ ಕೂತಿರೋ ಭಿಕ್ಷ ಬೇಡುವರಿಗೆ ಕೊಟ್ಟು ನೋಡತಾರಲ್ಲಾ, ಹಂಗ.

ನಿಮಗ ಒಂದು ಲೆಕ್ಕ ಕೊಡತೇನಿ. ಜೋನಾಸ ಅವರ ಪರೀಕ್ಷೆಗೆ ಒಳಗಾದವರು ಸುಮಾರು 20 ಲಕ್ಷ ಮಂದಿ. ಅದು 1946 ರ ಸುಮಾರಿಗೆ ಅಮೇರಿಕಾದ ಜನ ಸಂಖ್ಯೆಯ ಶೇಕಡಾ ಒಂದರಷ್ಟು. ಇನ್ನ ಸಾಬಿನ ಅವರ ಪರೀಕ್ಷೆ ಯೊಳಗ 1960 ರಾಗ ಪಾಲುಗೊಂಡವರು ಸುಮಾರು 10 ಕೋಟಿ, ಅದು ಆವಾಗಿನ ವಿಶ್ವದ ಜನಸಂಖ್ಯೆಯ ಶೇಕಡಾ 3 ರಷ್ಟು.

ಅದರ ನಮ್ಮವರು ಲಸಿಕೆ ಮಾಡತೇನಿ ಅಂತ ಹೇಳಿ ಟೂ ಮಿನಿಟ್ ಮ್ಯಾಗಿ ಮಾಡಾಕ ಹೊಂಟಾರ.

ಮಾರ್ಚ್ 23 ರ ಸರಕಾರದವರು ವಿಧಿಸಿ, ಜನತಾ ಕರಫ್ಯೂ ಅಂತ ಹೆಸರು ಇಟ್ಟ ದಿನದ ನಂತರ ನಮ್ಮ ದೇಶದ 11 ಖಾಸಗಿ ಕಂಪನಿಗಳು ಲಸಿಕೆ ತಯಾರಿಕೆ ಆರಂಭ ಮಾಡಿದವು. ಆದರಾಗ ಇಬ್ಬರು ಭಾರಿ ಜೋರಾಗಿ ಓಡಿ ಮುಂದ ಹೋಗಿ ನಾವು ಕೋರೋನಾ ಲಸಿಕೆ ತಯಾರು ಮಾಡಿದೇವು. ನಮಗ ಜನರ ಮ್ಯಾಲೆ ಅದನ ಪ್ರಯೋಗ ಮಾಡಾಕ ಅನುಮತಿ ಕೊಡರಿ ಅಂತ ಸರ್ಕಾರದ ಮುಂದ ಕೂತರು. ಈ ವಿಷಮ ಸ್ಥಿತಿಯೊಳಗ ಸರಕಾರ ಎನ್ನೂ ಮಾಡಿಲ್ಲ ಅಂತ ಬೈಸಿಕೊಂಡು ಸಾಕಾಗಿದ್ದ ಸರ್ಕಾರದ ಮಂತ್ರಿ ಹಾಗೂ ಅವರ ಬಾಬುಗಳು ಅವರಿಗೆ ಹೂಂ ಅಂತ ಸೀಟಿ ಹೊಡದುಬಿಟ್ಟರು. ದೇಶದ 12 ಪ್ರಯೋಗಶಾಲೆಗಳಲ್ಲಿ ಸುಮಾರು ಎರಡೂವರೆ ಸಾವಿರ ಆರೋಗ್ಯವಂತ ಯುವಕರ ಮೇಲೆ ಪ್ರಯೋಗ ನಡೆಸಿದ ನಂತರ ಈ ಲಸಿಕೆ ಬಿಡುಗಡೆ ಆಗತದ ಅಂತ ಹೇಳಿದರು.

ಅಷ್ಟ ಅಲ್ಲ, ಅದರ ಪರೀಕ್ಷೆ ಮುಗದು ಆಗಸ್ಟ್ 15 ರ ಸ್ವತಂತ್ರ ದಿನದ ದಿವಸ ಈ ದೇಶಕ್ಕ ಕೋರೋನಾದಿಂದ ಮುಕ್ತಿ ಸಿಗತದ ಅಂತ ಘೋಷಿಸಿ ಬಿಟ್ಟರು.

ಅಂದ್ರ ಅದು ಕೇವಲ 40 ದಿನದಾಗ ಬೆಳೆದು ಪರಿಪಕ್ವವಾಗಬೇಕಾದ ಲಸಿಕೆ. ಜೋನಾಸ ಸಾಹೇಬರ ಒಂಬತ್ತು ವರ್ಷ, ಇಪ್ಪತ್ತು ಲಕ್ಷ ಜನರ ಪರೀಕ್ಷೆ ಹಾಗೂ ಸಾಬಿನ ಸಾಹೇಬರ 10 ಕೋಟಿ ಜನರ ಪರೀಕ್ಷೆ ಇಲ್ಲೇ ನೆನಸಿಕೋರಿ.

ಅದೂ ಅಲ್ಲದ, ಹೈದರಾಬಾದು ಮತ್ತು ಅಹ್ಮದಾಬಾದು ನಗರದ ಎರಡು ಖಾಸಗಿ ಕಂಪನಿಗಳು ತಾವು ಲಸಿಕೆ ತಯಾರು ಮಾಡಿದರೂ ಕೂಡ ಭಾರತ ಸರ್ಕಾರದ ವೈದ್ಯ ಸಂಶೋಧನಾ ಪರಿಷತ್ತು, ನಮ್ಮ ಸಹಭಾಗಿತ್ವದಾಗ ಇದನ್ನ ತಯಾರು ಮಾಡಿದೆ ಅಂತ ಹೇಳಿಕೊಂಡವು.

ಪರಿಷತ್ತಿನ ಯಾವ ಅಧಿಕಾರಿಯೂ ಕೂಡ ಒಂದು ಪತ್ರಿಕಾ ಪ್ರಕಟಣೆ ಕೊಡಲಿಲ್ಲ, ಕೇಂದ್ರದ ಆರೋಗ್ಯ ಇಲಾಖೆ ಹೊರಡಿಸಿದ ಪ್ರಕಟಣೆಯೊಳಗ ಒಬ್ಬ ವಿಜ್ಞಾನಿಯ ಹೆಸರು ಇಲ್ಲ. ವಿವರ ತಿಳಿಸಲಿಕ್ಕೆ ಯಾರೂ ಒಂದು ಪತ್ರಿಕಾಗೋಷ್ಟಿ ಕರಿಯಲಿಲ್ಲ. ಗರ್ಭ ಗುಡಿಯ ದೇವರೇ ಕರೆಯದೇ ಇದ್ದಾಗ ದ್ವಾರಪಾಲಕರು ಯಾಕ ಕರೀತಾರ?, ಅದೂ ಖರೇನ.

ಸಮ ಪರೀಕ್ಷೆ ಆಗದೇ ಲಸಿಕೆ ಹೊರಗ ಬಂದು ಅದನ್ನು ನಮ್ಮ ಜನ ತೊಗೊಂಡು, ಕೆಲವರು ಉಳದು, ಕೆಲವರು ಸತ್ತು ಹೋದರ ಯಾವಾಗ ಏನು ಆಗತದ?

ಅಷ್ಟು ದೊಡ್ಡ ದೇಶದಾಗ ಅಷ್ಟು ದೊಡ್ಡ ಕೆಲಸ ಆಗೋವಾಗ ಅಷ್ಟು ಜನ ಸಾಯೋರ, ಅಂತ ಸರ್ಕಾರದ ಪ್ರತಿ ಕ್ರಮವನ್ನು ಕಣ್ಣು ಮುಚ್ಚಿ ಬೆಂಬಲಿಸೋರು ಅನ್ನಬಹುದು. ವಿರೋಧ ಪಕ್ಷದವರು ಇಲ್ಲ ನಾವು ಮೊದಲ ಹೇಳಿದ್ದೀವಿ, ಇವರು ಕೈ ಹಾಕೋ ಎಲ್ಲಾ ಕೆಲಸನೂ ಹಿಂಗ, ಪಿಷಕಿ, ಅಂತ ಮೂಗು ಮುರೀಬಹುದು. ವಸ್ತುನಿಷ್ಟವಾಗಿ ಮಾತಾಡೋ ವಿಜ್ಞಾನಿಗಳಿಗಂತೂ ಇಲ್ಲಿ ಜಾಗಾ ಇಲ್ಲಾ, ಹಿಂಗಾಗಿ ಸರ್ಕಾರಕ್ಕ ಅಂತೂ ಯಾವುದೇ ವ್ಯತ್ಯಾಸ ಆಗಂಗಿಲ್ಲ.

ಅದಕ್ಕ ಹೇಳೋದು, ಈ ಲಸಿಕಾ ಪರೀಕ್ಷೆ ಅನ್ನೋದು ಏಳು ಕೋಟೆಯ ರಾಜದುರ್ಗದಲ್ಲಿ ಲಸಿಕಾಯಣದ ರಹಸ್ಯ ಅಂತ.

  • ಡೇಟಾಮ್ಯಾಟಿಕ್ಸ್‌

ಇದನ್ನು ಓದಿ: ಕೊರೊನಾ: ವ್ಯಾಕ್ಸೀನ್ ಎಂದರೇನು? ಜಾಗತಿಕ ಸ್ಪರ್ಧೆಯು ಬೇಗ ವ್ಯಾಕ್ಸೀನ್ ಒದಗಿಸುತ್ತದೆಯೇ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಡೇಟಾಮ್ಯಾಟಿಕ್ಸ್ ಚೆನ್ನಾಗಿದೆ.
    ಐಸಿಎಂಆರ್ನಿಂದ 2-ಮಿನಿಟ್ ಮ್ಯಾಗಿ: ಚಟಾಪಟ್ ಲಸಿಕೆ
    ಅಗಸ್ಟ್ 15ಕ್ಕ ಪಿಎಂ ಮ್ಯಾಲ ಪ್ರಯೋಗ ಮಾಡ್ಲಿ. ಅದಕ್ಕೂ ಮೊದ್ಲ ಅವ್ರಿಗೆ ಸೋಂಕು ತಗುಲಿಸಬೇಕು ಅಲ್ಲವಾ? ಅವಾಗ ಫಸ್ಟ್ ಕ್ಲಿನಿಕಲ್ ಮ಻ತ್ತು ಕ್ಲೀನ್ ಟೆಸ್ಟು ಆಕ್ಕೈತಿ ನೋಡ್ರಿ.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...