2018ರ ಟ್ವೀಟ್ ಒಂದಕ್ಕೆ ಸಂಬಂಧಿಸಿ ದಿಟ್ಟ ಪತ್ರಕರ್ತ, ಆಲ್ಟ್ನ್ಯೂಸ್ ಸಹ ಸಂಪಾದಕ ಮೊಹಮ್ಮದ್ ಜುಬೇರ್ರನ್ನು ಬಂಧಿಸಿರುವ ದೆಹಲಿ ಪೊಲೀಸರ ಕ್ರಮಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜುಬೇರ್ರನ್ನು ಬಂಧಿಸುವ ಮೂಲಕ ಸತ್ಯವನ್ನು ಬಂಧಿಸಿಡಲು ಸಾಧ್ಯವಿಲ್ಲ ಎಂದಿರುವ ಜನರು ಟ್ವಿಟರ್ ನಲ್ಲಿ #IStandWithZubair ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ಮಾಡಿದ್ದಾರೆ.
ಸೋಮವಾರ ರಾತ್ರಿಯಿಂದಲೂ #IStandWithZubair ಹ್ಯಾಷ್ಟ್ಯಾಗ್ ಭಾರತದ ಟ್ರೆಂಡಿಂಗ್ನಲ್ಲಿ ಮೊದಲ ಸ್ಥಾನದಲ್ಲಿದೆ. 5,83,000 ಟ್ವೀಟ್ಗಳಾಗಿವೆ.
ಜುಬೇರ್ ಬಂಧನವನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಬಿಜೆಪಿಯ ದ್ವೇಷ, ಮತಾಂಧತೆ ಮತ್ತು ಸುಳ್ಳನ್ನು ಬೆತ್ತಲು ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಅವರಿಗೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ. ಸತ್ಯದ ಒಂದು ಧ್ವನಿಯನ್ನು ಬಂಧಿಸಿದರೆ ಅದು ಸಾವಿರಾರು ದನಿಗಳಾಗಿ ಮೊಳಗುತ್ತದೆ. ಯಾವಾಗಲೂ ದೌರ್ಜನ್ಯದ ಮೇಲೆ ಸತ್ಯವೇ ಜಯಗಳಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
“ಪತ್ರಿಕೋದ್ಯಮ ಎಂದರೆ ಪಟ್ಟಭದ್ರ ಹಿತಾಶಕ್ತಿಗಳು ಏನನ್ನು ಪ್ರಕಟಿಸಲು ಬಯಸುವುದಿಲ್ಲವೋ ಅದನ್ನು ಪ್ರಕಟಿಸುವುದು; ಉಳಿದಿದ್ದ ಸಾರ್ವಜನಿಕ ಸಂಪರ್ಕವಷ್ಟೆ” (ಜಾರ್ಜ್ ಆರ್ವೆಲ್, ಎಡಿಟ್ ಮಾಡಲಾಗಿದೆ) ಎಂದು ಹೋರಾಟಗಾರ ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.
Journalism is publishing what someone powerful does not want published; everything else is public relations.
(George Orwell, edited)#IStandWithZubair pic.twitter.com/zvpyFDXvjZ— Yogendra Yadav (@_YogendraYadav) June 27, 2022
“ಯಾರು ಸುಳ್ಳು ಸಂದೇಶ ಹರಡಿದರೂ ಅದನ್ನು ಆಲ್ಟ್ನ್ಯೂಸ್ ಬಹಿರಂಗಗೊಳಿಸುತ್ತದೆ. ಸತ್ಯದ ಪರ ಅತ್ಯುತ್ತಮ ಕೆಲಸ ಮಾಡುತ್ತಿರುವ ಮೊಹಮ್ಮದ್ ಜುಬೇರ್ ಬಂಧನ ಖಂಡನೀಯ. ಕೂಡಲೇ ಅವರನ್ನು ಬಿಡುಗಡೆ ಮಾಡಿ” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಒತ್ತಾಯಿಸಿದ್ದಾರೆ.
“ಒಬ್ಬರನ್ನಷ್ಟೇ ಫಾಲೋಯರ್ ಹೊಂದಿರುವ ಅನಾಮಧೇಯ ಟ್ವಿಟರ್ ಖಾತೆಯು ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿದ ಕಾರಣ ಜುಬೈರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆದರೆ ಹಿಂಸಾಚಾರದ ವಿಡಿಯೋ ಸಾಕ್ಷ್ಯಗಳ ಹೊರತಾಗಿಯೂ ಕೋಮಲ್ ಶರ್ಮಾ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಈ ಇಡೀ ವ್ಯವಸ್ಥೆ ಎಷ್ಟು ಹಸ್ಯಾಸ್ಪದವಾಗಿದೆ” ಎಂದು ಹೋರಾಟಗಾರ ಧ್ರುವ್ ರಾಥೆ ಟ್ವೀಟ್ ಮಾಡಿದ್ದಾರೆ.
According to Delhi Police, Zubair is arrested because an anonymous Twitter account with 1 folllower complained that his sentiments are hurt.
But Komal Sharma couldn’t be arrested despite video evidence of violence. What a joke this whole system is!
#IStandWithZubair pic.twitter.com/36V9O3CVXj
— Dhruv Rathee 🇮🇳 (@dhruv_rathee) June 27, 2022
“ಭಾರತೀಯ ಮುಸ್ಲಿಮರು ಮತ್ತು ಇತರ 15 ದೇಶಗಳ ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿದ ಬಿಜೆಪಿಯ ವಕ್ತಾರರನ್ನು ದೆಹಲಿ ಪೊಲೀಸರು ಬಂಧಿಸಲಿಲ್ಲ. ಆದರೆ ಜುಬೈರ್ ಅವರನ್ನು ಬಂಧಿಸಲು ಯಾವುದೇ ಸಮಯ ತೆಗೆದುಕೊಳ್ಳಲಿಲ್ಲ” ಎಂದು ಕಾಂಗ್ರೆಸ್ ನಾಯಕರಾದ ಜಾವೇದ್ ವಿಷಾದಿಸಿದ್ದಾರೆ.
Delhi police did not arrest BJP’s spokesperson who hurt the sentiments of Indian Muslims and Muslims of over 15 other countries but took absolute no time to arrest @zoo_bear. Law should be equal for all. #IStandWithZubair https://t.co/2rNhPMemNQ
— Dr Md Jawaid (@DrMdJawaid1) June 27, 2022
“ಜುಬೇರ್ ಒಬ್ಬ ಹೀರೋ. ಬಲಪಂಥೀಯರ ದ್ವೇಷದ ಭಾಷಣಗಳು ಮತ್ತು ದ್ವೇಷದ ಅಪರಾಧಗಳನ್ನು ಏಕಾಂಗಿಯಾಗಿ ಬಹಿರಂಗಪಡಿಸಿದ ವ್ಯಕ್ತಿ ಜುಬೈರ್” ಎಂದು ಪತ್ರಕರ್ತ ಕೌಶಿಕ್ ರಾಜ್ ಬಣ್ಣಿಸಿದ್ದಾರೆ.
Zubair is a hero. One man who single handedly exposed the hate speeches and hate crimes of the RW.#FreeZubair#IStandWithZubair
Poster by @smishdesigns pic.twitter.com/e4nrzyIhH3
— Kaushik Raj (@kaushikrj6) June 27, 2022
“ಸುದ್ದಿ ವಾಹಿನಿಗಳಲ್ಲಿ ಪ್ರತಿದಿನ ದ್ವೇಷವನ್ನು ಹರಡುವವರನ್ನು ರಕ್ಷಿಸಲಾಗಿದೆ. ಪ್ರತಿನಿತ್ಯ ಸುಳ್ಳು ಸುದ್ದಿ ಬಯಲಿಗೆಳೆಯುವವರನ್ನು ಬಂಧಿಸಲಾಗುತ್ತದೆ. ದೆಹಲಿ ಪೋಲೀಸ್ ಇಲ್ಲಿಯವರೆಗೆ ಕೋಮಲ್ ಶರ್ಮಾ ಅವರನ್ನು ಬಂಧಿಸಲು ವಿಫಲವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೊಳಗಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ದೆಹಲಿ ಪೊಲೀಸರು ಟಚ್ ಮಾಡಲೂ ಆಗಿಲ್ಲ” ಎಂದು ಸ್ವತಂತ್ರ ಪತ್ರಕರ್ತೆ ಸಾಕ್ಷಿ ಜೋಷಿ ಬೇಸರ ವ್ಯಕ್ತಪಡಿಸಿದ್ದಾರೆ.
Those spreading enmity every day on news channels are protected whereas @zoo_bear who busts fake news On a daily basis is arrested@DelhiPolice failed to arrest Komal Sharma till date.
International shame mascot Nupur Sharma and Naveen Jindal are untouched. #IStandWithZubair— Sakshi Joshi (@sakshijoshii) June 27, 2022
ಯಾರು ಜುಬೇರ್?
ಪ್ರತಿ ನಿತ್ಯ ಸುಳ್ಳು ಸುದ್ದಿಗಳನ್ನು ಬೆತ್ತಲು ಮಾಡುತ್ತಿರುವ ‘Altnews’ ವೆಬ್ ಸೈಟ್ ಸಹ ಸಂಪಾದಕರಾದ ಜುಬೇರ್ ಮೂಲತಃ ಕರ್ನಾಟಕದವರು. ಅಲ್ಪಸಂಖ್ಯಾತರ ಮೇಲಿನ ಕಲ್ಪಿತ ಆರೋಪಗಳನ್ನು, ತಪ್ಪ ಸಂದೇಶಗಳನ್ನು ಅವರು ಸಾಕ್ಷಿ ಸಮೇತ ಬಯಲುಗೊಳಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಮುಖ್ಯವಾಹಿನಿ ಮಾಧ್ಯಮಗಳು ಹರಡುವ ಸುಳ್ಳುಗಳು, ದ್ವೇಷಪೂರಿತ ಕಾರ್ಯಕ್ರಮಗಳನ್ನು ಇವರು ಬೆತ್ತಲುಗೊಳಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಟೈಮ್ಸ್ ನೌ ಚಾನೆಲ್ನಲ್ಲಿ ಪ್ರವಾದಿಯವರಿಗೆ ಅವಮಾನ ಮಾಡಿದ ವಿಡಿಯೋವನ್ನು ಟೈಮ್ಸ್ ನೌ ಚಾನೆಲ್ ಡಿಲೀಟ್ ಮಾಡಿದ್ದರೂ ಸಹ ಅದನ್ನು ಡೌನ್ಲೌಡ್ ಮಾಡಿಟ್ಟು ಜಗತ್ತಿಗೆ ತಿಳಿಯುವಂತೆ ಮಾಡಿದ್ದು ಇದೇ ಜುಬೇರ್.
ಧರಮ್ ಸಂಸದ್ ಹೆಸರಿನಲ್ಲಿ ಯತಿನರಸಿಂಗಾನಂದ ಸರಸ್ವತಿ ಸೇರಿದಂತೆ ಇತರ ಧಾರ್ಮಿಕ ನಾಯಕರು ಮಾಡಿದ ದ್ವೇಷ ಭಾಷಣಗಳನ್ನು ಜುಬೇರ್ ನಿರಂತರವಾಗಿ ಪ್ರಚಾರ ಮಾಡಿ ಅವರ ಮೇಲೆ ಎಫ್ಐಆರ್ ದಾಖಲಾಗುವಂತೆ ಮಾಡಿದ್ದರು. ಅಲ್ಲದೇ ಎಲ್ಲೆ ತಪ್ಪು ಮಾಹಿತಿಗಳು, ದ್ವೇಷ ಭಾಷಣಗಳು ಕಂಡರೂ ಅವುಗಳನ್ನು ಸ್ಥಳೀಯ ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಜುಬೇರ್ ನಿಂದಾಗಿ ಹಲವಾರು ಜನರು ತಮ್ಮ ತಪ್ಪು ಮಾಹಿತಿಗಳ ಟ್ವೀಟ್ಗಳನ್ನು ಡಿಲೀಟ್ ಮಾಡಿದ್ದರು.
ಜುಬೇರ್ರವರ ಈ ಜನಪರ, ಪ್ರಜಾಪ್ರಭುತ್ವದ ಪರವಾಗಿನ ಕೆಲಸಗಳನ್ನು ಪರಿಗಣಿಸಿ ಅವರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಾಂತಿ ಸಂಶೋಧನಾ ಸಂಸ್ಥೆ ಓಸ್ಲೊ (PRIO) ನಾಮನಿರ್ದೇಶನ ಮಾಡಿತ್ತು. “ಸತ್ಯ ಪರಿಶೀಲನೆಯ ವೆಬ್ಸೈಟ್ ಮೂಲಕ ಗಮನಾರ್ಹ ಕೊಡುಗೆ ನೀಡಿದ ಪ್ರತೀಕ್ ಸಿನ್ಹಾ ಮತ್ತು ಜುಬೈರ್ ಅವರನ್ನು ‘ಯೋಗ್ಯ ಅಭ್ಯರ್ಥಿಗಳು’ ಎಂದು ಪರಿಗಣಿಸಲಾಗಿದೆ. ಆಲ್ಟ್ ನ್ಯೂಸ್ ಬರೆದ ಸತ್ಯಶೋಧನಾ ಲೇಖನಗಳು ಹಲವು ನಕಲಿ ಸುದ್ದಿಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ನಿಂದಿಸುವ ನಿಟ್ಟಿನಲ್ಲಿ ಹಬ್ಬುತ್ತಿರುವ ಹಲವು ಸುಳ್ಳುಸುದ್ದಿಗಳ ಸತ್ಯ ಪರಿಶೀಲನೆ ನಡೆಸಿದ ಹಿರಿಮೆ ಅವರಿಗಿದೆ” ಎಂದು ತಿಳಿಸಿತ್ತು.
ತನ್ನ ಈ ಜವಾಬ್ದಾರಿಯುತ ಕೆಲಸಗಳಿಗಾಗಿ ಬಲಪಂಥೀಯರಿಂದ ತನ್ನ ಜೀವಕ್ಕೆ ಬೆದರಿಕೆ ಎಂದು ಇತ್ತೀಚೆಗೆ ಜುಬೇರ್ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಇದೀಗ ಅವರನ್ನೆ ದೆಹಲಿ ಪೊಲೀಸರು ಬಂಧಿಸಿರುವುದು ವಿಪರ್ಯಾಸವಾಗಿದೆ. ಆದರೆ ಜನರು ಜುಬೇರ್ ಪರ ನಿಂತು ಸತ್ಯದ ಜೊತೆ ನಾವಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ; ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಗಲಭೆಗಳಿಗೆ ಪ್ರಚೋದನೆ ಆರೋಪ: ಆಲ್ಟ್ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್ ಬಂಧನ
ದಿಟ್ಟ ಪತ್ರಕರ್ತ ಜುಬೇರ್ ಬಂದನ ಕಂಡನಾರ್ಹ.
#istandwithjubair