Homeಮುಖಪುಟಭಿನ್ನಮತ ದಮನಕ್ಕೆ ಕೇಂದ್ರ ಸರಕಾರದಿಂದ ಕೋವಿಡ್- 19 ಅಸ್ತ್ರ ಬಳಕೆ

ಭಿನ್ನಮತ ದಮನಕ್ಕೆ ಕೇಂದ್ರ ಸರಕಾರದಿಂದ ಕೋವಿಡ್- 19 ಅಸ್ತ್ರ ಬಳಕೆ

ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ಮುಖವಾಡದಲ್ಲಿರುವ ಎಲ್ಲಾ ಸರ್ವಾಧಿಕಾರಗಳಂತೆ ಭಾರತದಲ್ಲಿ ನರೇಂದ್ರ ಮೋದಿ ಸರಕಾರವೂ ಕೋವಿಡ್- 19 ಪಿಡುಗನ್ನು ಭಿನ್ನಮತದ ದಮನಕ್ಕೆ ಅಸ್ತ್ರವಾಗಿ ಬಳಸುತ್ತಿದೆ.

- Advertisement -
- Advertisement -

ಸರಕಾರವು ಈ ಪಿಡುಗಿನ ನೆಪದಲ್ಲಿ ಭಿನ್ನಮತ ಅಡಗಿಸಲು ಯತ್ನಿಸುತ್ತಿದೆ ಮತ್ತು ಭಾರತದ ಪೌರತ್ವ ಕಾಯಿದೆ ತಿದ್ದುಪಡಿ ವಿರುದ್ಧ  ಹೋರಾಟವೇ ದೇಶದ್ರೋಹದ ಕೆಲಸವೆಂಬ ಮಿಥ್ಯೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಇದನ್ನು ಈಗಲೇ ನಿಲ್ಲಿಸದಿದ್ದಲ್ಲಿ ಪ್ರಜಾಪ್ರಭುತ್ವ ಮತ್ತು ಈ ಪಿಡುಗಿನ ವಿರುದ್ಧ ಹೋರಾಟಗಳೆರಡೂ ದಯನೀಯವಾಗಿ ದುರ್ಬಲಗೊಳ್ಳುವುದು ಖಂಡಿತ.

ಮೂಲ: ಹರ್ಷ್ ಮಂದರ್ ಮತ್ತು ಅಮಿತಾಂಶು

ಭಾವಾನುವಾದ: ನಿಖಿಲ್ ಕೋಲ್ಪೆ

ದಿಲ್ಲಿಯಲ್ಲಿ ದೊಡ್ಡ ಸಂಖ್ಯೆಯ ಜನರನ್ನು- ಮುಖ್ಯವಾಗಿ ಮುಸ್ಲಿಮರನ್ನು- ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಪಿಎ) ವಿರೋಧಿ ಪ್ರತಿಭಟನೆಗಳು ಮತ್ತು ಇತ್ತೀಚಿನ ಕೋಮುಗಲಭೆಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಭಾರತದ ಕರಾಳ ಲಾಕ್‌ಡೌನ್ ನೆರಳಿನ ಅಡಿಯಲ್ಲಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ದಿಲ್ಲಿ ಪೊಲೀಸ್ ಇಲಾಖೆ ಕೋವಿಡ್-19 ಪಿಡುಗಿನ ನಿಯಂತ್ರಣಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿರದ ಕೆಲಸಗಳಲ್ಲಿ ವ್ಯಸ್ತವಾಗಿದೆ.

ಅದರ ಘನ ಕಾರ್ಯಗಳಲ್ಲಿ- ಕಚೇರಿ ಮತ್ತು ಮನೆಗಳಿಗೆ ಬೀಗಮುದ್ರೆ ಜಡಿಯುವುದು, ಫೋನ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳುವುದು, ದೊಡ್ಡ ಸಂಖ್ಯೆಯಲ್ಲಿ ಜನರನ್ನು ಬಂಧಿಸುವುದು ಸೇರಿದೆ. ಕೊರೋನ ವೈರಸ್ ಹರಡದಂತೆ ತಡೆಯಲು ಜೈಲುಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಸರಕಾರಗಳಿಗೆ ನೀಡಿರುವ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಇದು ನಡೆಯುತ್ತಿದೆ ಎಂಬುದು ಬೇರೆಯೇ ಕತೆಯನ್ನು ಹೇಳುತ್ತದೆ.

ಬಂಧಿತರ ವಿರುದ್ಧ ಹೇರಲಾಗುತ್ತಿರುವ ಆರೋಪಗಳೆಂದರೆ, ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದುದು ಮತ್ತು ಈಶಾನ್ಯ ದಿಲ್ಲಿಯ ಕಾರ್ಮಿಕರ ವಸತಿ ಪ್ರದೇಶಗಳಲ್ಲಿ ನಡೆದ 1947ರ ದೇಶ ವಿಭಜನೆಯ ಬಳಿಕದ ಅತ್ಯಂತ ಭೀಕರ ಹಿಂದೂ- ಮುಸ್ಲಿಂ ಗಲಭೆಗಳನ್ನು ಪ್ರಚೋದಿಸಿದ್ದು ಅಥವಾ ಭಾಗವಹಿಸಿದ್ದು.

ಗೃಹ ಸಚಿವಾಲಯದ ಆದೇಶ

ಲಾಕ್‌ಡೌನ್ ಬಳಿಕದ ಸ್ವಲ್ಪ ಮಟ್ಟಿನ ಹಿಂಜರಿಕೆಯ ನಂತರ ಏಕಾಏಕಿಯಾಗಿ ಏರಿದ ಈ ಬಂಧನ ಹಿಂದೆ ಕೇಂದ್ರ ಗೃಹ ಸಚಿವಾಲಯವು ದಿಲ್ಲಿ ಕ್ರೈಂ ಬ್ರಾಂಚಿಗೆ ನೀಡಿದ ಆದೇಶ ಇದೆಯೆಂದು ವರದಿಯಾಗಿದೆ.

ಮಾರ್ಚ್ 22ರಿಂದ ಎಪ್ರಿಲ್ ಮಧ್ಯಭಾಗದ ತನಕ ಈಶಾನ್ಯ ದಿಲ್ಲಿಯ ಗಲಭೆಪೀಡಿತ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ 25ರಿಂದ 30 ಮಂದಿಯನ್ನು ಬಂಧಿಸಲಾಗಿದೆ ಎಂದು “ದಿ ಹಿಂದೂ” ವರದಿ ಮಾಡಿದೆ. “ಇಂಡಿಯನ್ ಎಕ್ಸ್‌ಪ್ರೆಸ್” ಪ್ರಕಾರ 802 ಬಂಧನಗಳು ನಡೆದಿದ್ದು, ಇವುಗಳಲ್ಲಿ ಕನಿಷ್ಟ 50 ಲಾಕ್‌ಡೌನ್ ಅವಧಿಯಲ್ಲಿ ನಡೆದಂತವುಗಳು. ಆದರೆ, ಕೆಲವು ವರದಿಗಳು ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳುತ್ತವೆ. ಅವುಗಳ ಪ್ರಕಾರ ದಿನಕ್ಕೆಆರರಿಂದ ಏಳು ಬಂಧನಗಳು ನಡೆಯುತ್ತಿದ್ದು, ಲಾಕ್‌ಡೌನ್ ಅವಧಿಯಲ್ಲಿ ಮಾಧ್ಯಮ ಮತ್ತು ಕಾನೂನು ಸೇವೆಗಳ ಮೆಲೆ ಹೊರಿಸಲಾಗಿರುವ ತೀವ್ರತರವಾದ ನಿರ್ಬಂಧಗಳಿಂದಾಗಿ ನಿರ್ದಿಷ್ಟ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಅಸಾಧ್ಯವಾಗಿದೆ.

ಈ ಪ್ರದೇಶಗಳ ಮುಸ್ಲಿಮರನ್ನು ಗುರಿಪಡಿಸಲಾಗುತ್ತಿದ್ದು, ಯುವ ನಾಯಕ ಉಮರ್ ಖಾಲಿದ್, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ನಾಯಕರಾದ ಮೀರಾನ್ ಹೈದರ್, ಗರ್ಭಿಣಿಯಾಗಿರುವ ಸಫೂರಾ ಝರ್ಗಾರ್ ಸಹಿತ ಯುವಕರ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊರಿಸಲಾಗುತ್ತಿದೆ. ಅವರ ವಿರುದ್ಧ ಕರಾಳವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅನ್ವಯ ಕೇಸು ದಾಖಲಿಸಲಾಗಿದೆ. ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ)ನ ಎಡಪಂಥೀಯ ನಾಯಕಿ ಕನ್ವಲ್ಜಿತ್ ಕೌರ್ ಅವರ ಮನೆಗೆ ದಾಳಿ ನಡೆಸಿ ಅವರ ಫೋನನ್ನು ವಶಪಡಿಸಿಕೊಳ್ಳಲಾಗಿದೆ.

ಭಿನ್ನಮತ, ದಮನಕ್ಕೆ ಕೇಂದ್ರ ಸರಕಾರದಿಂದ, ಕೋವಿಡ್- 19 ಅಸ್ತ್ರ ಬಳಕೆ

ಈ ಯದ್ವಾತದ್ವಾ ಬಂಧನಗಳನ್ನು ವಿರೋಧಿಸಿ ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ದಿಲ್ಲಿ ಪೊಲೀಸ್ ಕಮೀಷನರ್‌ಗೆ ಪತ್ರ ಬರೆದಿದ್ದರು. ಆದರೆ ಪೊಲೀಸರು ಅವರ ಮೇಲೆಯೇ ಪಿಡುಗು ಹರಡುವಿಕೆ ಕುರಿತು ನೀಡಿದ ಹೇಳಿಕೆಯನ್ನು ಹಿಡಿದುಕೊಂಡು ರಾಷ್ಟ್ರದ್ರೋಹದ ಕೇಸು ದಾಖಲಿಸಿದ್ದಾರೆ.

ಕಾನೂನು ಸೇವೆಗಳಿಗೆ ಕತ್ತರಿ

ಪೊಲೀಸರು ತಮ್ಮ ಬಂಧನ ಸತ್ರವನ್ನು ಹೆಚ್ಚಿಸಿರುವಂತೆಯೇ ಲಾಕ್‌ಡೌನ್ ಅಡಿಯಲ್ಲಿ ಅನುಮತಿಸಲಾಗಿರುವ ಅಗತ್ಯ ಸೇವೆಗಳಲ್ಲಿ ಕಾನೂನು ಸೇವೆಗಳನ್ನು ಸೇರಿಸದೇ ಇರುವುದು ಗಮನಾರ್ಹ. ಇದರ ಅರ್ಥವೆಂದರೆ, ಆರೋಪಿತ ವ್ಯಕ್ತಿಗಳ ಮೂಲಭೂತ ಹಕ್ಕುಗಳ ದಮನವಾಗಿದೆ. ಎಲ್ಲಾ ರೀತಿಯ ಕಾನೂನು ಪ್ರಕ್ರಿಯೆಗಳನ್ನು ಉಲ್ಲಂಘಿಸಲಾಗುತ್ತಿದ್ದು, ಬಂಧಿತರ ಕುಟುಂಬಗಳಿಗೆ ಎಫ್‌ಐಆರ್ ಪ್ರತಿಗಳನ್ನೂ ನೀಡಲಾಗುತ್ತಿಲ್ಲ. ಮೇಲಾಗಿ ಅವರೆಲ್ಲಾ ಕೂಲಿ ಕಾರ್ಮಿಕರು ಅಥವಾ ಚಿಕ್ಕ ವ್ಯಾಪಾರಿ ಕುಟುಂಬಗಳಿಗೆ ಸೇರಿದವರಾಗಿರುವುದರಿಂದ ಲಾಕ್‌ಡೌನ್‌ನಿಂದ ಆದಾಯ ಸಂಪೂರ್ಣ ನಿಂತುಹೋಗಿ, ಕಾನೂನು ಸೇವೆಯನ್ನೂ ಪಡೆಯಲಾಗದೆ ಇನ್ನಷ್ಟು ಭಯಭೀತರಾಗಿದ್ದಾರೆ.

ಪತ್ರಕರ್ತರು, ವಕೀಲರು ಮತ್ತು ಮಾನವಹಕ್ಕು ಹೋರಾಟಗಾರರಿಗೂ ಪೊಲೀಸ್ ಕಾರ್ಯಾಚರಣೆಗಳ ಬಲಿಪಶುಗಳನ್ನು ಭೇಟಿಯಾಗಲು ಅವಕಾಶವಿಲ್ಲವಾದುದರಿಂದ ಭಯ ಮತ್ತು ಗೌಪ್ಯದ ಪರದೆಯಿಂದೀಚೆಗೆ ಸ್ವಲ್ಪವೇ ಮಾಧ್ಯಮ ಸುದ್ದಿಗಳು ಹೊರಗೆ ಬರುತ್ತಿವೆ.

ಈ ಆರೋಗ್ಯ ತುರ್ತುಸ್ಥಿತಿಯಲ್ಲಿ ನ್ಯಾಯವೇ ಅಗತ್ಯ ಸೇವೆಯಾಗದೇ ಇರುವುದರಿಂದ, “ಕಾನೂನಿನ ಎದುರು ಸಮಾನತೆ“ಯ ತತ್ವವೇ ಲಾಕ್‌ಡೌನ್‌ನಲ್ಲಿದೆ.

ಕಾನೂನು ಪ್ರಕಾರ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡ 24 ಗಂಟೆಗಳ ಒಳಗಾಗಿ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಬೇಕು. ಆದರೆ, ಇದನ್ನು ಗಾಳಿಗೆ ತೂರಿರುವ ಪೊಲೀಸರು, ನೇರವಾಗಿ ಜೈಲಿನ ಒಳಗೆಯೇ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸುತ್ತಿದ್ದಾರೆ. ಲಾಕ್‌ಡೌನ್ ನೆಪದಲ್ಲಿ ವಕೀಲರಿಗೂ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿದೆ. ಕೆಳಗಿನ ನ್ಯಾಯಾಲಯಗಳಲ್ಲಿ ವಿಡಿಯೋ ವಿಚಾರಣೆಯ ಸೌಲಭ್ಯವೂ ಇಲ್ಲವಾದುದರಿಂದ ಬಂಧಿತರು ಜಾಮೀನಿನ ಅವಕಾಶವಿಲ್ಲದೆ ಜೈಲುಪಾಲಾಗಬೇಕಾಗುತ್ತಿದೆ.

ಸರಕಾರವು ಈ ಪಿಡುಗಿನ ನೆಪದಲ್ಲಿ ಭಿನ್ನಮತವನ್ನು ಅಡಗಿಸಲು ಯತ್ನಿಸುತ್ತಿದೆ ಮತ್ತು ಭಾರತದ ಪೌರತ್ವ ಕಾಯಿದೆ ತಿದ್ದುಪಡಿ ವಿರುದ್ಧ  ಹೋರಾಟವೇ ದೇಶದ್ರೋಹದ ಕೆಲಸವೆಂಬ ಮಿಥ್ಯೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಇದನ್ನು ಈಗಲೇ ನಿಲ್ಲಿಸದಿದ್ದಲ್ಲಿ ಪ್ರಜಾಪ್ರಭುತ್ವ ಮತ್ತು ಈ ಪಿಡುಗಿನ ವಿರುದ್ಧ ಹೋರಾಟಗಳೆರಡೂ ದಯನೀಯವಾಗಿ ದುರ್ಬಲಗೊಳ್ಳುವುದು ಖಂಡಿತ.


ಓದಿ: ಮೇ 16(ಇಂದು) ನ್ಯಾಯದ ದಿನ: ಡಾ. ಆನಂದ್ ತೇಲ್ತುಂಬ್ಡೆ ಪರ ದನಿ


ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...