Homeನಿಜವೋ ಸುಳ್ಳೋಇಲ್ಲಿರುವುದು ಬಾಲಕ ಅಬ್ದುಲ್ ಕಲಾಂರೋ? ಅಥವಾ ಬಾಲಕ ಮೋದಿಯೋ? ಗುರುತಿಸಬಲ್ಲಿರಾ?

ಇಲ್ಲಿರುವುದು ಬಾಲಕ ಅಬ್ದುಲ್ ಕಲಾಂರೋ? ಅಥವಾ ಬಾಲಕ ಮೋದಿಯೋ? ಗುರುತಿಸಬಲ್ಲಿರಾ?

- Advertisement -
- Advertisement -

ಇಲ್ಲಿ ತಾಯಿ ಮತ್ತು ಬಾಲಕ ಇರುವ ಫೋಟೊ ನೋಡಿ. ಅದರಲ್ಲಿರುವ ಬಾಲಕ ಮಾಜಿ ರಾಷ್ಟ್ರಪತಿ, ಕ್ಷಿಪಣಿ ವಿಜ್ಞಾನಿ ಅಬ್ದುಲ್ ಕಲಾಂ ಅಂತ ಒಂದು ವಾದ ತೇಲಿ ಬಂತು. ನಂತರ ಇದೇ ಫೋಟೊ ಹಾಕಿದ ಕೆಲವು ಸಾಮಾಜಿಕ ಜಾಲತಾಣಗಳ ಗುಂಪುಗಳು ‘ದೇಶಕ್ಕೆ ಇವತ್ತು ಅಪದ್ಭಾವಂತನಾಗಿ ಬಂದಿದ್ದು ಇದೇ ಬಾಲಕ.. ಇದು ಮೋದಿಯ ಬಾಲ್ಯದ ಫೋಟೋ ಎಂದು ಪ್ರಚಾರ ಮಾಡಿದ್ದವು.

ಈ ಫೋಟೊದಲ್ಲಿರುವುದು ಬಾಲ ಮೋದಿಯೋ ಅಥವಾ ಬಾಲ ಕಲಾಂರೋ ಎನ್ನುವುದಂತೂ ಆರೋಗ್ಯಕರ ಮನಸ್ಸುಗಳಿಗೆ ಗಂಭೀರ ವಿಷಯವಂತೂ ಅಲ್ಲವೇ ಅಲ್ಲ. ನಮ್ಮ ತಂಡಕ್ಕೂ ಅದೇ ಅಭಿಪ್ರಾಯವಿದ್ದರೂ, ಇಂತಹ ಸಣ್ಣ ವಿಷಯಗಳ ಹಿಂದಿನ ಸತ್ಯಾಸತ್ಯತೆ ತಿಳಿಸುವುದು ನಮ್ಮ ಜವಾಬ್ದಾರಿ. ಅದೆಲ್ಲಕ್ಕಿಂತ ಮುಖ್ಯವಾಗಿ ಫೇಕ್ ಸುದ್ದಿಗಳ ಈ ಕಾಲದಲ್ಲಿ ಸಾಮಾನ್ಯ ಕುಟುಂಬವೊಂದರ ಗ್ರೂಪ್ ಫೋಟೊವನ್ನೂ ಹೇಗೆ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಜನರ ಗಮನಕ್ಕೆ ತರುವುದಷ್ಟೇ ನಮ್ಮ ಉದ್ದೇಶ. ಜನಸಾಮಾನ್ಯರ ಖಾಸಗಿ ಬದುಕಿನ ಫೋಟೊಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಅಸಹ್ಯ ಚಾಳಿಯನ್ನು ತೋರಿಸಲು ಇದನ್ನು ಪ್ರಕಟಿಸುತ್ತಿದ್ದೇವೆ.

ಇಲ್ಲಿ ಮಹಿಳೆಯಬ್ಬರು ಬಾಲಕನ ಜೊತೆ ಇರುವ ಫೋಟೊ ಗಮನಿಸಿ. ಕಳೆದ ವಾರದಿಂದಲೂ ಕೆಲವು ಸಾಮಾಜಿಕ ಜಾಲತಾಣಗಳ ಗುಂಪುಗಳು ಈ ಫೋಟೊ ಬಳಸಿ, ತಾಯಿ ಹಿರಾಬೆನ್ ಜೊತೆಗೆ ಬಾಲಕ ಮೋದಿ ಎಂದು ಪ್ರಚಾರ ಮಾಡಿದ್ದಾರೆ. ಇದರಿಂದ ದೇಶಕ್ಕೇನೂ ನಷ್ಟವಿಲ್ಲ ಅಂತ ಅನಿಸಬಹುದು. ಆದರೆ ಫೇಸ್‍ಬುಕ್ ಬಳಕೆದಾರರೊಬ್ಬರು ಈ ಫೋಟೊ ಹಾಕಿ, ಅದರ ಮೇಲೆ ಹಿಂದಿಯಲ್ದಿ, ‘ 132 ಕೋಟಿ ಜನರನ್ನು ಶಾಕ್ ಮಾಡಿದ್ದು ಇದೇ ಬಾಲಕ…’ ಎಂಬ ಸಾಲು ಲಗತ್ತಿಸಿ, ‘ಜೈದೇವ್, ತಾಯಿಯೊಂದಿಗೆ ನರೇಂದ್ರ ಮೋದಿಯ ಬಾಲ್ಯದ ಫೋಟೋ’ ಎಂದು ಪೋಸ್ಟ್ ಹಾಕಿದ್ದರು. ಸಾವಿರಾರು ಟ್ವೀಟರ್ ಮತ್ತು ವ್ಯಾಟ್ಸಾಪ್ ಬಳಕೆದಾರರು ಇದೇ ಸಂದೇಶದೊಂದಿಗೆ ಈ ಫೋಟೊವನ್ನು ಶೇರ್ ಮಾಡಿದರು, ಮಾಡುತ್ತಲೇ ಇದ್ದಾರೆ.

ನಿಜಕ್ಕೂ ಇದು ಬಾಲಕ ಮೋದಿ ಮತ್ತು ತಾಯಿಯ ಫೋಟೊವೇ?
ಈ ಕುರಿತು ಅಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದಾಗ, ಫೋಟೊದಲ್ಲಿರುವ ಬಾಲಕ ಮೋದಿ ಅಲ್ಲ ಎಂಬುದು ಖಾತ್ರಿಯಾಗಿತು. ಜೊತೆಗೆ ಇನ್ನಷ್ಟು ವಿಚಿತ್ರ ಸಂಗತಿಗಳು ಹೊರಬಂದವು. ಇದೇ ಫೋಟೊವನ್ನು ಪ್ರಕಟಿಸಿ ಹಲವಾರು ಮಾಧ್ಯಮಗಳು ತಪ್ಪು ಎಸಗಿದ್ದವು. ಮೇ8, 2016ರಲ್ಲಿ ಇಂಡಿಯಾ ಟುಡೇ ಪ್ರಕಟಿಸಿದ ಒಂದು ಬರಹದಲ್ಲಿ ಇದೇ ಫೋಟೊ ಹಾಕಿ, ‘ಐಶಿಯಮ್ಮ ಜೈನಿಲುಬುದ್ದಿನ್, ಕಲಾಂ ತಾಯಿ’ ಎಂದು ಕ್ಯಾಪ್ಸನ್ ನೀಡಲಾಗಿತ್ತು.

ಶೋಧ ಮುಂದುವರೆಸಿದಾಗ, ಮೇಲೆ ಬಳಸಿದ ಆ ಎರಡು ಫೋಟೊಗಳು ಒಂದೇ ಎಂಬುದು ಪಕ್ಕಾ ಆಗಿತು. ಆದರೆ, ಒಂದು ಗ್ರೂಪ್ ಫೋಟೊದಿಂದ ಕತ್ತರಿಸಿ ಈ ಅರೆಬರೆ ಫೋಟೊವನ್ನು ಬಳಸಲಾಗಿತ್ತು.

ಈ ಫೋಟೊದ ಮೂಲ ಯಾವುದು?
2013ರ ಆಗಸ್ಟ್ ನಲ್ಲಿ ಈ ಫೋಟೊವನ್ನು ಬ್ಲಾಗ್ ಒಂದರಲ್ಲಿ ಬಳಸಲಾಗಿತ್ತು. ಜುಲೈ 2018ರಲ್ಲಿ ಕಲಾಂರ ಜಯಂತಿಯಂದು ಜಾಗೃಣ್ ಸಮೂಹ ಎಂಬ ಶೈಕ್ಷಣಿಕ ಸಂಸ್ಥೆಯ ಜಾಗೃಣ್ ಪೋರ್ಟಲ್‍ನಲ್ಲ್ಲಿ ಇದೇ ಫೋಟೊ ಬಳಸಿ, ತಾಯಿಯೊಂದಿಗೆ ಬಾಲಕ ಕಲಾಂ ಎಂದು ಬರೆಯಲಾಗಿತ್ತು.

ಕೊನೆಗೆ ಆಲ್ಟ್ ನ್ಯೂಸ್ ಕಲಾಂರ ಸಮೀಪದ ಸಂಬಂಧಿಕ ಅಜ್ಜನ ಕಡೆಯವರು, ಹಾಗೆಯೇ ಕಲಾಂ ಇಂಟರ್‍ನ್ಯಾಷನಲ್ ಫೌಂಡೇಷನ್ನಿನ ಮ್ಯಾನೇಜಿಂಗ್ ಟ್ರಸ್ಟಿಯೂ ಆಗಿರುವ ಶೇಖ ಸಲೀಮರನ್ನು ಸಂಪರ್ಕಿಸಿದಾಗ, ‘ಇದರಲ್ಲಿರುವುದು ಕಲಾಂ ಅಥವಾ ತಾಯಿ ಅಲ್ಲವೇ ಅಲ್ಲ, ಕಲಾಂ ಆ ವಯಸ್ಸಿನವರು ಆಗಿರುವ ಸಂದರ್ಭದಲ್ಲಿನ ಯಾವ ಫೋಟೊವೂ ಲಭ್ಯ ಇಲ್ಲ. ಆ ಸಂದರ್ಭದಲ್ಲಿ ಕಲಾಂ ತಾವು ಫೋಟೊ ತೆಗಿಸಿಕೊಳ್ಳಲು ಹಿಂಜರಿಯುತ್ತಿದ್ದ ಮುಗ್ಧ ಆಗಿದ್ದರು. ‘ಹೌಸ್ ಆಫ್ ಕಲಾಂ’ನಲ್ಲಿ ಇರುವ ಫೋಟೊಗಳ ಪೈಕಿ ಕಲಾಂರ ಚಿಕ್ಕಂದಿನ ಫೋಟೊ ಎಂದರೆ ಅವರು ಕಾಲೇಜು ಸೇರುವಾಗ ತೆಗೆಸಿದ್ದು’ ಎಂದು ಸತ್ಯದ ಅನಾವರಣ ಮಾಡಿದರು..

ಯುವಕ ಕಲಾಂ ಫೋಟೊ

ಅಂದರೆ ಯಾವುದೋ ಒಂದು ಅಪರಿಚಿತ ಸಾಮಾನ್ಯ ಕುಟುಂಬದ ಗ್ರೂಪ್ ಫೋಟೊ ಈ ತಂತ್ರಜ್ಷಾನ ಕಾಲದಲ್ಲಿ ಹೇಗೆ ದುರುಪಯೋಗವಾಗುತ್ತಿದೆ ಎಂಬುದನ್ನು ತೋರಿಸಲು ಈ ಬರಹವನ್ನು ನಾನುಗೌರಿ.ಕಾಮ್ ಪ್ರಕಟಿಸುತ್ತಿದೆ.

ಇಲ್ಲಿ ಇಂಡಿಯಾಟುಡೇ ಕಣ್ತಪ್ಪನಿಂದ, ಜಾಗೃಣ ಸಂಸ್ಥೆ ಅಜ್ಞಾನದಿಂದ ತಪ್ಪು ಮಾಡಿರಬಹುದು, ಆದರೆ ಇದು ಬಾಲಕ ಮೋದಿ ಎಂದು ಹಬ್ಬಿಸಿರುವುದರ ಜನರನ್ನು ಕ್ಷಮಿಸಲಾಗದು. ‘ಇದೇ ಬಾಲಕ ನೋಡಿ 130 ಕೋಟಿ ಗೆದ್ದಿರುವುದು’ ಎಂದು ಹಾಕುವಾಗ ನಿಜವಾದ ಬಾಲಕ ಮೊದಿಯ ಫೋಟೊ ಹಾಕಿದ್ದರೆ ನಮ್ಮ ಅಭ್ಯಂತರ ಇರಲಿಲ್ಲ.

ಪಾಪ, ಮೋದಿಯವರೆ ಅವರ ಬಾಲ್ಯದ ಕುರಿತು ಕನಫ್ಯೂಸ್ ಮಡುತ್ತ ಬಂದಿದ್ದಾರಲ್ಲ? ಭಕ್ತರೇ ಮೋದಿಯ ಬಾಲ್ಯದ ಫೋಟೊ ಸಿಗಲ್ಲ, ಆದರೆ ಯಾವುದೋ ಮಗುವಿನ, ಕುಟುಂಬದ ಫೋಟೊ ಬಳಸಬೇಡಿ. ಅಷ್ಟಾದರೂ ಸೂಕ್ಷ್ಮ ಕಲಿಯಿರಿ.
(ಆಧಾರ: ಅಲ್ಟ್ ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...