Homeಮುಖಪುಟಒಂದೇ ರೀತಿಯ ಪ್ರಕರಣ ಮೂರು ಭಿನ್ನ ತೀರ್ಪುಗಳು: ಅರ್ನಾಬ್ ಗೋಸ್ವಾಮಿಗೆ ಸಿಕ್ಕ ಅವಕಾಶ ಶಾರ್ಜೀಲ್ ಇಮಾಮ್,...

ಒಂದೇ ರೀತಿಯ ಪ್ರಕರಣ ಮೂರು ಭಿನ್ನ ತೀರ್ಪುಗಳು: ಅರ್ನಾಬ್ ಗೋಸ್ವಾಮಿಗೆ ಸಿಕ್ಕ ಅವಕಾಶ ಶಾರ್ಜೀಲ್ ಇಮಾಮ್, ಪೂನಿಯಾಗೇಕಿಲ್ಲ?

ಇದು ಅರ್ನಾಬ್, ಪೂನಿಯಾ ಮತ್ತು ಇಮಾಮ್ ಪ್ರಕರಣದಲ್ಲಿ ಇದ್ದ ಮೂರು ಬೇರೆಬೇರೆ ನ್ಯಾಯಪೀಠಗಳ ಸಮಸ್ಯೆಯಲ್ಲ. ಇದು ಇಡೀ ಸುಪ್ರೀಂಕೋರ್ಟ್ ಎದುರಿಸುತ್ತಿರುವ ರಾಚನಿಕ ಸಮಸ್ಯೆ.

- Advertisement -
- Advertisement -

ಇತ್ತೀಚಿನ ಮೂರು ಪ್ರಕರಣಗಳು ತೋರಿಸಿಕೊಟ್ಟಿರುವುದು ಏನೆಂದರೆ, ಕಾನೂನಿನ ಅನ್ವಯವು ಪ್ರಕರಣದಿಂದ ಪ್ರಕರಣಕ್ಕೆ ಬದಲಾಗಬಹುದಾದರೂ, ನ್ಯಾಯಾಧೀಶರಿಂದ ನ್ಯಾಯಾಧೀಶರಿಗೆ ತೀರ್ಪುಗಳು ಬದಲಾಗುವಾಗ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು.

ಸರೀಂ ನವೇದ್

ಸಾರಾನುವಾದ: ನಿಖಿಲ್ ಕೋಲ್ಪೆ

ಕಳೆದ ಮೇ 19ರಂದು ಸುಪ್ರೀಂಕೋರ್ಟ್ ಅರ್ನಾಬ್ ಗೋಸ್ವಾಮಿ ಪ್ರಕರಣದಲ್ಲಿ ಒಂದು ತೀರ್ಪು ನೀಡಿತು ಮತ್ತು ಒಂದು ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸುವಂತಿಲ್ಲ ಎಂಬುದನ್ನು ಎತ್ತಿಹಿಡಿಯಿತು. ಹಾಗಾಗಿ ಸಾರ್ವಜನಿಕ ಕ್ಷೋಭೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಎಫ್‌ಐಆರ್‌ಗಳಲ್ಲಿ ಆರೋಪಿಸಲಾಗಿರುವಂತಹ ಒಂದು ಪ್ರಕರಣದಲ್ಲಿ ಮೊದಲ ಎಫ್‌ಐಆರ್ ದಾಖಲಾದ ಸಂಬಂಧ ವಿಚಾರಣೆಯನ್ನು ಹೊರತುಪಡಿಸಿ, ಉಳಿದ ನ್ಯಾಯಾಲಯಗಳಲ್ಲಿ ವಿಚಾರಣೆಯಿಂದ ಆತ ಪಾರಾಗುವಂತಾಯಿತು.

Arnab Goswami, Maharashtra government, Supreme Court ,ರಿಪಬ್ಲಿಕ್ ಟಿವಿ, ಅರ್ನಾಬ್ ಗೋಸ್ವಾಮಿ
ಅರ್ನಾಬ್‌ ಗೋಸ್ವಾಮಿ

ಕೇವಲ ಹತ್ತು ದಿನಗಳ ನಂತರ, ಅಂದರೆ ಮೇ 29ರಂದು ಸುಪ್ರೀಂಕೋರ್ಟ್‌ನಲ್ಲಿ ಕಾಂಗ್ರೆಸ್ ನಾಯಕ ಪಂಕಜ್ ಪೂನಿಯಾ ದಾಖಲಿಸಿದಂತಹಾ ಇಂತದ್ದೇ ಅರ್ಜಿಯು ಮುಂದೆ ಬಂತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮಾಡಿದ ಹೇಳಿಕೆಯ ಆರೋಪದಲ್ಲಿ ಅವರ ಮೇಲೆ ಹಲವಾರು ಕಡೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಈ ವಿಷಯದ ಕುರಿತು ವಿಚಾರಣೆ ನಡೆಸಲು ನಿರಾಕರಿಸಿ, ಪರಿಹಾರಕ್ಕಾಗಿ ಸಂಬಂಧಿತ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸುವಂತೆ ಪೂನಿಯಾ ಅವರಿಗೆ ಸೂಚಿಸಿತು.

ಇದು ಮೂವರು ಸದಸ್ಯರ ಪೀಠದ ತೀರ್ಮಾನವಾಗಿದ್ದು, ಅದಕ್ಕೆ ಇಬ್ಬರು ಸದಸ್ಯರ ಪೀಠದ ಅರ್ನಾಬ್ ಗೋಸ್ವಾಮಿ ಪ್ರಕರಣದ ತೀರ್ಮಾನವನ್ನು ಬದಿಗೆ ಸರಿಸುವ ಅಧಿಕಾರವಿತ್ತು ಎಂಬುದು ನಿಜ. ಆದರೆ, ಈ ಪೀಠವು ಸಾರಾಸಗಟಾಗಿ ಪೂನಿಯಾ ಅವರ ಅರ್ಜಿಯನ್ನು ಮೇಲ್ನೋಟಕ್ಕೇ ತಿರಸ್ಕರಿಸಿತು. ಅದು ಏನು ಹೇಳಿತು:

ಪೂನಿಯಾ

“ಸಂವಿಧಾನದ ವಿಧಿ 32ರ ಅನ್ವಯ ಸಲ್ಲಿಸಲಾದ ಈ ಅರ್ಜಿಯ ವಿಚಾರಣೆ ನಡೆಸಲು ನಮಗೆ ಮನಸ್ಸಿಲ್ಲ. ಅದಕ್ಕನುಗುಣವಾಗಿ ಈ ರಿಟ್ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆದರೆ ಅರ್ಜಿದಾರರಿಗೆ ಸಂಬಂಧಿತ ಹೈಕೋರ್ಟ್‌ಗಳು/ ವೇದಿಕೆಗಳಿಗೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯವಿದೆ”.

ಮೇ 1ರಂದು ಸುಪ್ರೀಂಕೋರ್ಟ್ ಅದೇ ರೀತಿಯ ಭಾಷಣಗಳನ್ನು ಮಾಡಿದ್ದಕ್ಕಾಗಿ ಬೇರೆಬೇರೆ ಕಡೆ ಹೂಡಲಾದ ದಾವೆಗಳನ್ನು ಒಂದೆಡೆ ಸೇರಿಸಲು ಶಾರ್ಜೀಲ್ ಇಮಾಮ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತ್ತು. ಇಮಾಮ್ ಪ್ರಕರಣದಲ್ಲಿ ಇರುವ ವ್ಯತ್ಯಾಸವೆಂದರೆ, ತಕ್ಷಣದ ಪರಿಹಾರ ಇರಲಿಲ್ಲ. ಅದೆಂದರೆ, ಗೋಸ್ವಾಮಿಗೆ ಮಾಡಿದಂತೆ ಮೊದಲ ಎಫ್‌ಐಆರ್ ಪ್ರಕರಣ ಹೊರತುಪಡಿಸಿ ಬೇರೆ ಎಫ್‌ಐಆರ್‌ಗಳಲ್ಲಿ ತನಿಖೆಗೆ ತಡೆ ಇರಲಿಲ್ಲ.

ಶಾರ್ಜೀಲ್ ಇಮಾಮ್

ಈ ಮೂರೂ ಪ್ರಕರಣಗಳನ್ನು ಮೂರು ಬೇರೆಬೇರೆ ಪೀಠಗಳು ವಿಚಾರಣೆ ನಡೆಸಿದ್ದವು. ಪ್ರಕರಣದಿಂದ ಪ್ರಕರಣಕ್ಕೆ ಕಾನೂನಿನ ಅನ್ವಯವು ಬದಲಾಗುತ್ತದೆ ಎಂಬುದು ಕಾನೂನು ರೂಢಿಯಲ್ಲಿ ಅರ್ಥವಾಗುವ ವಿಷಯ. ಆದರೆ, ಪ್ರತಿಯೊಂದು ಪ್ರಕರಣದ ವಿಶಿಷ್ಟತೆಗಳನ್ನು ಪರಿಗಣಿಸದೆಯೇ ಯಾಂತ್ರಿಕವಾಗಿ ಕಾನೂನನ್ನು ಅನ್ವಯಿಸುವ ಪರಿಸ್ಥಿತಿಯು ಅಪೇಕ್ಷಿತವಲ್ಲ ಮತ್ತು ಇದು ಸಾಕಷ್ಟು ಅನ್ಯಾಯದಲ್ಲಿ ಕೊನೆಗೊಳ್ಳುತ್ತದೆ.

ನ್ಯಾಯಾಧೀಶರು ಮತ್ತು ಕಾನೂನಿನ ಅನ್ವಯ

ಆದರೆ, ನ್ಯಾಯಾಧೀಶರಿಂದ ನ್ಯಾಯಾಧೀಶರಿಗೆ ತೀರ್ಪುಗಳು ಬದಲಾದಾಗ ಕಾನೂನಿನ ಅನ್ವಯದ ವಿಷಯವನ್ನು ಗಂಭೀರವಾಗಿ ಪರಿಶೀಲಿಸಬೇಕು. ಬೇರೆಬೇರೆ ನ್ಯಾಯಾಧೀಶರು ಕಾನೂನಿನ ಬಗ್ಗೆ ಬೇರೆಬೇರೆ ದೃಷ್ಟಿಕೋನ ಹೊಂದಿರುತ್ತಾರೆ ಎಂಬುದು ನಿಜ. ಅವರು ಬೇರೆ ವ್ಯಾಖ್ಯಾನಗಳನ್ನೂ ಹೊಂದಿರುತ್ತಾರೆ.

ಮೇಲಿನ ಮೂರೂ ಪ್ರಕರಣಗಳು ಸಂವಿಧಾನದ ವಿಧಿ 32ರ ಪ್ರಕಾರ ಸಲ್ಲಿಸಲಾದ ರಿಟ್ ಅರ್ಜಿಗಳಾಗಿವೆ. ಅದು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ನೇರವಾಗಿ ಸುಪ್ರೀಂಕೋರ್ಟಿನ ಬಾಗಿಲು ತಟ್ಟುವ ಅವಕಾಶ ನೀಡುತ್ತದೆ. ಇದರ ವಿಚಾರಣೆ ನಡೆಸಬೇಕೋ ಬೇಡವೋ ಎಂಬುದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಷಯ ಎಂಬುದು ಸರ್ವವಿಧಿತ. ಆದರೆ, ಈ ಕುರಿತು ಏಕರೂಪದ ನಿಲುಮೆ ಇರಬೇಕೆಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ.

ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹಲವು ಎಫ್‌ಐಆರ್‌ಗಳಲ್ಲಿ ಮೊದಲ ಎಫ್‌ಐಆರ್ ಹೊರತುಪಡಿಸಿ ಉಳಿದವುಗಳಲ್ಲಿ ತಡೆ ನೀಡುವುದಾದಲ್ಲಿ (ಗೋಸ್ವಾಮಿ ಪ್ರಕರಣ), ಇಂತದ್ದೇ ಪ್ರಕರಣಗಳಲ್ಲಿ ಇತರ ವ್ಯಕ್ತಿಗಳಿಗೆ ಅಂತದ್ದೇ ಪರಿಹಾರ ನೀಡಬೇಕು- ಒಂದು ವೇಳೆ ಪರಿಸ್ಥಿತಿಯು ಬೇರೆಯಾಗಿದೆ ಎಂದು ನ್ಯಾಯಾಲಯವು ಭಾವಿಸಿದ ಸಂದರ್ಭವನ್ನು ಹೊರತುಪಡಿಸಿ. ಈ ನಿರ್ಧಾರವನ್ನು ತೀರ್ಪಿನಲ್ಲೇ ದಾಖಲಿಸಬೇಕು. ಇಲ್ಲವಾದಲ್ಲಿ ಕಾನೂನಿನ ಅನ್ವಯವು ಮನಸೋಇಚ್ಛೆ ನಡೆಯುತ್ತಿದೆ ಎಂಬಂತೆ ಕಾಣುತ್ತದೆ.

ಸಂವಿಧಾನದ ವಿಧಿ 141 ಹಿಂದಿನ ತೀರ್ಪುಗಳಿಂದ ಬೇರೆಯಾದ ತೀರ್ಪುಗಳನ್ನು ನೀಡಲು ಸುಪ್ರೀಂಕೋರ್ಟಿಗೆ ಅವಕಾಶ ನೀಡುತ್ತದೆ ಎಂಬುದು ನಿಜ. ಆದರೆ, ಚಿಕ್ಕ ಅವಧಿಯಲ್ಲಿ ಬೇರೆ ಬೇರೆ ನ್ಯಾಯಾಧೀಶರುಗಳು ಪೀಠದಲ್ಲಿ ಇದ್ದರು ಎಂಬ ಕಾರಣಕ್ಕಾಗಿ ಬೇರೆಬೇರೆ ತೀರ್ಪುಗಳು ಬರುವುದು ಅಪೇಕ್ಷಣೀಯವಲ್ಲ.

ಇದು ಅರ್ನಾಬ್, ಪೂನಿಯಾ ಮತ್ತು ಇಮಾಮ್ ಪ್ರಕರಣದಲ್ಲಿ ಇದ್ದ ಮೂರು ಬೇರೆಬೇರೆ ನ್ಯಾಯಪೀಠಗಳ ಸಮಸ್ಯೆಯಲ್ಲ. ಇದು ಇಡೀ ಸುಪ್ರೀಂಕೋರ್ಟ್ ಎದುರಿಸುತ್ತಿರುವ ರಾಚನಿಕ ಸಮಸ್ಯೆ. ಸುಪ್ರೀಂಕೋರ್ಟ್‌ನಲ್ಲಿ ಎಲ್ಲಾ ನ್ಯಾಯಾಧೀಶರು ಸಮನರು; ಆದುದರಿಂದ ಒಂದು ಸುಪ್ರೀಂಕೋರ್ಟ್ ತೀರ್ಮಾನಕ್ಕೆ ಮೇಲ್ಮನವಿ ಸಲ್ಲಿಸುವುದು ಆ ನಿಟ್ಟಿನಲ್ಲಿ ಸಾಧ್ಯವಿಲ್ಲ. ಯಾವ ಪೀಠದ ಮುಂದೆ ಪ್ರಕರಣ ಇದೆಯೋ, ಅದರ ತೀರ್ಪಿನಂತೆ ಪ್ರಕರಣದ ಕತೆ ಮುಗಿಯುತ್ತದೆ.

ಉದಾಹರಣೆಗೆ ಕೆಲವು ನ್ಯಾಯಾಧೀಶರು ಉಳಿದ ನ್ಯಾಯಾಧೀಶರುಗಳಿಗಿಂತ ಹೆಚ್ಚಾಗಿ ಜಾಮೀನು ನೀಡುತ್ತಾರೆ. ಕೆಲವರು ಕೆಲವು ಕಾನೂನುಗಳಲ್ಲಿ- ಉದಾಹರಣೆಗೆ ತೆರಿಗೆ ಕಾನೂನುಗಳಲ್ಲಿ ನಿಷ್ಣಾತರಾಗಿರುತ್ತಾರೆ. ಇದರ ಅರ್ಥವೆಂದರೆ, ಸುಪ್ರೀಂಕೋರ್ಟ್ ಒಂದೇ ನ್ಯಾಯಾಲಯವಲ್ಲ. ಅದು 16 ಬೇರೆಬೇರೆ ನ್ಯಾಯಾಲಯಗಳು. ಪೀಠದಲ್ಲಿರುವ ನ್ಯಾಯಾಧೀಶರುಗಳ ಸಂಖ್ಯೆಗೆ ಅನುಗುಣವಾಗಿ ಅವರವರು ಕಾನೂನನ್ನು ಮತ್ತು ಹಿಂದಿನ ತೀರ್ಪುಗಳನ್ನು ಹೇಗೆಹೇಗೆ ವ್ಯಾಖ್ಯಾನ ಮಾಡುತ್ತಾರೋ, ಅವುಗಳಿಗೆ ಅನುಗುಣವಾಗಿಯೇ ತೀರ್ಪುಗಳು ಇರುತ್ತವೆ! ಇದಕ್ಕೆ ಪರಿಹಾರವನ್ನೂ ಸುಪ್ರೀಂಕೋರ್ಟೇ ಕಂಡುಕೊಳ್ಳಬೇಕು.

(ಲೇಖಕ ಸರೀಂ ನವೇದ್ ಅವರು ದಿಲ್ಲಿಯಲ್ಲಿ ವಕೀಲರು)

ಕೃಪೆ: ದಿ ವೈರ್


ಇದನ್ನೂ ಓದಿ: ಎರಡು ವಾರಗಳಲ್ಲಿ ಪಿಎಂ ಕೇರ್ಸ್ ವಿವರ ನೀಡಿ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ತಾಕೀತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...