Homeಥೂತ್ತೇರಿನೆಹರೂ ಬಗ್ಗೆ ನೀಚರಿಗೇನು ಗೊತ್ತು?: ಯಾಹೂ ರವರ ಥೂತ್ತೇರಿ ಓದಿ

ನೆಹರೂ ಬಗ್ಗೆ ನೀಚರಿಗೇನು ಗೊತ್ತು?: ಯಾಹೂ ರವರ ಥೂತ್ತೇರಿ ಓದಿ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರವನ್ನ ಯುದ್ಧಮಾಡಿ ಗೆದ್ದಂತೆ ಬಿಂಬಿಸುತ್ತಿರುವ ಜಾಲತಾಣದ ಜನಿವಾರಿಗಳು 370ನೇ ವಿಧಿಯನ್ನು ನೆಹರು ಮಾಡಿದ ನೀಚ ಕೆಲಸವೆಂದು ಬಿಂಬಿಸುತ್ತಿವೆಯಲ್ಲಾ. ಅಂದು ನೆಹರೂ, ಹರಿಸಿಂಗ್ ಮುಂದಿಟ್ಟ 370ರ ಸವಲತ್ತನ್ನು ಒಪ್ಪದಿದ್ದರೆ, ಕಾಶ್ಮೀರ ಪಾಕಿಸ್ತಾನದ ಪಾಲಾಗುತ್ತಿತ್ತು ಎಂಬುದನ್ನು ಈ ಮಂದಮತಿಗಳಿಗೆ ಹೇಳುವರಾರು. ಈ ನೀಚರಿಗೆ ಮನವರಿಕೆ ಮಾಡಿಕೊಡುವ ಸಂಗತಿಗಳಾವು ಎಂದರೆ, 17 ವರ್ಷ ಜೈಲಿನಲ್ಲಿದ್ದ ನೆಹರು, ಪ್ರಧಾನಿಯಾಗಿಯೂ 17 ವರ್ಷ ಆಡಳಿತ ನಡೆಸಿದರು. ಆ ಅವಧಿಯಲ್ಲಿ ಪಂಚವಾರ್ಷಿಕ ಯೋಜನೆಗಳು ಪೂರ್ಣಗೊಂಡು ಕೈಗಾರಿಕೆ, ಆಣೆಕಟ್ಟು, ಕೃಷಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಬುನಾದಿ ಹಾಕಿದರು. ಜೊತೆಗೆ ಪ್ರಜಾಪ್ರಭುತ್ವ ಕಾಲೂರಿತು. ಅವರ ಅವಧಿಯಲ್ಲಿ ಆಗ ಲಡ್ಡಿಡಿದ ಲಾಠಿ ಬೀಸಿಕೊಂಡು ಅರೆಹೊಟ್ಟೆಯಲ್ಲೇ ಬದುಕಿದ್ದ ಬಡಜೀವಿಗಳು ಇಂದು ಭಾರತದ ಪ್ರಗತಿಯಲ್ಲಿ ಸ್ಫೋಟಿಸಿದ ಹೊಸ ಆವಿಷ್ಕಾರಗಳ ಫಲವಾದ ಜಾಲತಾಣದಲ್ಲಿ ಮುತ್ತಿಕೊಂಡು ಎಷ್ಟೇ ಮಸಲತ್ತು ನಡೆಸಿದರೂ ಪ್ರಜಾಪ್ರಭುತ್ವವಾದಿ ನಾಯಕರ ಹೆಸರನ್ನ ಅಳಿಸಲಾರವು. ಆದರೂ, ಅಂತಹ ಕೆಲಸವನ್ನ ನಿಲ್ಲಿಸಲಾರವಂತಲ್ಲಾ ಥೂತ್ತೇರಿ.

ಯಡಿಯೂರಪ್ಪನವರನ್ನು ಯಡ್ಡಿ ಎಂದು ಬರೆದವನು ಲಂಕೇಶರ ಮೆಚ್ಚಿನ ವರದಿಗಾರನಾಗಿದ್ದ ತ್ಯಾಗರಾಜ್. ನಿಜವಾಗಿ ಯಡ್ಡಿ ಎಂದರೆ ಸ್ತ್ರೀಲಿಂಗದ ಸಂಬೋಧನೆ. ಆದ್ದರಿಂದ ಯಡೂರಪ್ಪನನ್ನ ಯಡ್ಡ ಎನ್ನಬೇಕು. ಈ ಯಡ್ಡನ ಅವಧಿಯಲ್ಲಿ ಮುಗಿಲೇ ಕುಸಿದುಕೊಂಡು ಜಲಪ್ರಳಯವಾಗಿದೆ. ಇಂತಹ ಸಮಯದಲ್ಲಿ ಯಡ್ಡನ ಜಿಲ್ಲೆಯಾದ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಜನಾನುರಾಗಿ ಅಧಿಕಾರಿಯ ಎತ್ತಂಗಡಿಯಾಗಿದೆಯಲ್ಲಾ. ಹಳ್ಳಿ ತಿರುಗುತ್ತಾ ಜನರ ಕಷ್ಟಸುಖ ಕೇಳುತ್ತ ನೆರವು ನೀಡುತ್ತಿದ್ದ ಅಧಿಕಾರಿಯನ್ನು ಎತ್ತಂಗಡಿ ಮಾಡಲು ಯಡ್ಡನ ಸೇಡೇ ಕಾರಣವಂತಲ್ಲಾ. ಸೇಡಿಗೆ ತುತ್ತಾದವನು ಯಾವ ಕಾಲವನ್ನ ಪರಿಗಣಿಸುವುದಿಲ್ಲ. ಅವನ ಸೇಡಿನ ಕಾಲವನ್ನಷ್ಟೇ ಪರಿಗಣಿಸುತ್ತಾನೆ. ಜನರ ಬದುಕಿನ ಬಗ್ಗೆ ಕಾಳಜಿಯಿದ್ದವನಾರು ಈ ಯಡ್ಡನ ಕೃತ್ಯ ಎಸಗಲಾರ. ಹಿಂದೊಮ್ಮೆ ಚಿಕ್ಕಮಗಳೂರು ಜಿಲ್ಲೆ ರಕ್ಷಣಾಧಿಕಾರಿಯಾಗಿದ್ದ ಮಧುಕರ ಶೆಟ್ಟರನ್ನು ಕುಮಾರಣ್ಣನ ಸರಕಾರ ಕರ್ನಾಟಕದ ಸಮಸ್ಯೆಯಂತಿದ್ದ ರಾಜ್ಯಪಾಲನ ರಕ್ಷಣಾ ಕಾರ್ಯಕ್ಕೆ ನಿಯೋಜಿಸಿತ್ತು. ಅಂತ ಕುಮಾರಣ್ಣನ ಸರಕಾರ ಹೋಗಿ ಯಡ್ಡನ ಸರಕಾರ ಬಂದಿರೋದು, ಊದುವುದನ್ನ ಬಿಸಾಕಿ ಬಡಿಯುವುದನ್ನ ಹೆಗಲಿಗೆ ನೇತಾಕಿಕೊಂಡಂತಾಗಿದೆಯಲ್ಲಾ, ಥೂತ್ತೇರಿ!

ಜಲಪ್ರಳಯದೆದುರು ಏಕಾಂಗಿ ವೀರನಾಗಿ ಈಜುತ್ತಿರುವ ಎಡೂರಪ್ಪನವರು ಕಷ್ಟಪಟ್ಟು ಸೈರಣಿಯನ್ನ ಕಾಪಾಡಿಕೊಂಡು ಬರುತ್ತಿದ್ದಾರಂತಲ್ಲಾ. ಗೃಹ ಸಚಿವರು ಮತ್ತು ಹಣಕಾಸಿನ ಸಚಿವರು ಬಂದುಹೋದರೂ, ಬಿಡಿಗಾಸಿನ ನೆರವಿನ ಆಶ್ವಾಸನೆಯೂ ಬಾರದಿರುವಾಗ ನಮ್ಮ ರಾಘವೇಂದ್ರ ಮಠದ ಜಗದ್ಗುರುಗಳು “ಹೆದರಬೇಡಿ ಚಾತುರ್ಮಾಸ ಮುಗಿಸಿ ಪ್ರತ್ಯಕ್ಷನಾಗುತ್ತೇನೆ, ಅಷ್ಟರವರೆಗೂ ಯಾರೂ ಮುಳುಗಬೇಡಿ. ಅಕಸ್ಮಾತ್ ಮುಳುಗಿದರೂ ತೇಲುತ್ತಿರಿ, ನಾನು ಬರುತ್ತೇನೆ” ಎಂದು ಆಶ್ವಾಸನೆ ಕೊಟ್ಟಿದ್ದಾರಲ್ಲಾ. ಸಾವುಗಳ ಸಂದರ್ಭದಲ್ಲಿ ಹಾಸ್ಯ ಮಾಡುವುದು ಅಮಾನವೀಯವಾದರೂ ಇಲ್ಲೊಂದು ಪ್ರಕರಣ ನೋಡಿ ಹೇಗೆ ಸುಮ್ಮನಿರುವುದು. ಕೇವಲ ಒಂದೂವರೆ ಅಡಿ ಮೊಳಕಾಲುದ್ದ ನೀರಿನಲ್ಲಿ ಬೋಟಿನಲ್ಲಿ ಹುಟ್ಟು ಹಾಕುತ್ತಾ ಆ ಬೋಟನ್ನ ಎಳೆಸಿಕೊಂಡು ಬಂದು ಟಿವಿಗಳ ಕಡೆ ನೋಡಿ “ಸಾಕ” ಎಂದು ಕೇಳಿದ ಹೊನ್ನಾಳಿ ರೇಣುಕಾಚಾರಿ ಇಡೀ ನಾಡಿನಲ್ಲಿ ನಗೆಯುಕ್ಕಿಸಿದ್ದಾನಲ್ಲಾ. ಅಂದು ಯಡ್ಡಿಯನ್ನ ಬ್ಲಾಕ್‍ಮೇಲ್ ಮಾಡಿ ಮಂತ್ರಿಯಾಗಿದ್ದ ರೇಣುಕಾಚಾರಿ ಇಂದು ಮೊಣಕಾಲುದ್ದ ನೀರಿನಲ್ಲಿ ಹುಟ್ಟುಹಾಕಿ ದೋಣಿ ನಡಿಸಿ ಅದನ್ನ ಮಂತ್ರಿಗಿರಿ ಯೋಗ್ಯತೆಗೆ ಸರ್ಟಿಫಿಕೇಟ್ ಮಾಡಿಕೊಳ್ಳಲಿದ್ದಾನಂತಲ್ಲಾ, ಥೂತ್ತೇರಿ!

ಮುನಿರತ್ನನ ಮಹತ್ವಾಕಾಂಕ್ಷೆಯ ಕುರುಕ್ಷೇತ್ರ ಬಿಡುಗಡೆಯಾಗಿದೆ. ಪರಿಣಾಮ ಮಂಡ್ಯ, ಮದ್ದೂರು, ಮಳವಳ್ಳಿ, ರಾಮನಗರದಲ್ಲಿ ಡಿ ಬಾಸ್ ದರ್ಶನ್ ಕಟೌಟುಗಳನ್ನು ಹಗಲುರಾತ್ರಿ ನಮ್ಮ ಪೊಲೀಸರು ಕಾಯ್ದರಂತಲ್ಲಾ! ಯಾಕೆಂದು ವಿಚಾರಿಸಿದರೆ, ಕುಮಾರಣ್ಣನ ಅಭಿಮಾನಿಗಳು ಡಿ.ಬಾಸ್‍ನ ಕಟೌಟುಗಳನ್ನು ಪುಡಿಮಾಡಿಯಾರೆಂಬ ಮುನ್ನೆಚ್ಚರಿಕೆಯಾಗಿತ್ತು. ಮಂಡ್ಯದ ಚುನಾವಣಾ ಅಖಾಡಕ್ಕೆ ಕುಮಾರಣ್ಣ ಮಗ ನಿಖಿಲ್‍ನನ್ನ ನಿಲ್ಲಿಸಿದ್ದರು. ಎದುರಾಳಿ ಸುಮಲತಾ ಪರವಾಗಿ ದರ್ಶನ್ ಬಂದಿದ್ದರು. ಆಗ ಸಿಟ್ಟಾದ ಕುಮಾರಣ್ಣ `ಯೆಂತದದು ಡಿಬಾಸ್, ಸಿನುಮಾದಲ್ಲಿ ಡಿಬಾಸಾಗಬವುದು, ಜನಗಳ ಮಧ್ಯೆ ಡಿಬಾಸಾಗಕ್ಕಾಗಲ್ಲ’ ಎಂದು ಮೂದಲಿಸಿದ್ದರು. ಈ ಮಾತಿನ ಪರಿಣಾಮ ಏನಾಗಿದೆಯೆಂದರೆ ಕುಮಾರಣ್ಣನ ಅಭಿಮಾನಿಗಳಿರುವ ಕಡೆ ದರ್ಶನ್, ಯಶ್ ನಟಿಸಿರುವ ಚಿತ್ರಗಳ ಹಾಡನ್ನು ಕೇಳಲು ಅಡ್ಡಿಯಾಗಿದೆಯಂತಲ್ಲಾ. ಕನ್ನಡ ಚಿತ್ರರಂಗ ಮತ್ತು ಸಿನಿಮಾರಂಗ ಜೊತೆಯಾಗಿಯೇ ಹೆಜ್ಜೆ ಹಾಕಿದ ಇತಿಹಾಸ ನಮ್ಮದು. ರಾಜಕಾರಣಿಗಳು, ಅದರಲ್ಲೂ ಮುಖ್ಯಮಂತ್ರಿಯಾದವರು ನಾಲ್ಕು ದಿಕ್ಕನ್ನು ಯೋಚಿಸಿ ಮಾತನಾಡಬೇಕು. ಇಲ್ಲವಾದರೆ ಜಾತ್ಯತೀತರ ಅಭಿಮಾನಿಗಳು ಫ್ಯಾಸಿಸ್ಟ್ ಪುರೋಹಿತರಾಗುವ ಅಪಾಯವಿದೆಯಂತಲ್ಲಾ, ಥೂತ್ತೇರಿ!

ಹಳ್ಳಿಕಡೆ ನಾಟಕ ಆಡಲು ತೀರ್ಮಾನ ಮಾಡಿದಾಗ ನಾನೇ ಕೌರವ, ನೀನೇ ಕಿಸ್ಣ, ಅವುನೇ ಅರ್ಜುನ, ಯಾರ ತಂಟಿಗೂ ಹೋಗದಂಗಿರೋ ಇವುನೇ ಧರ್ಮರಾಯ ಎಂದು ಪಾತ್ರ ಹಂಚಿಕೊಂಡು ಪ್ರಾಕ್ಟಿಸ್ ಶುರುಮಾಡಿದಂತೆ, ನಮ್ಮ ಮುನಿರತ್ನನ ಕುರುಕ್ಷೇತ್ರ ಕಂಗೊಳಿಸಿದೆಯಲ್ಲಾ. ಮುಖ್ಯವಾಗಿ ಶ್ರಮಜೀವಿಯಲ್ಲದ ಸೋಮಾರಿ ದೇಹಾಕೃತಿಯ ಕೃಷ್ಣ, ಮುನಿರತ್ನನ ಕುರುಕ್ಷೇತ್ರದಲ್ಲಿ ಬ್ಲೋ ಹೊಡೆಸಿಕೊಂಡಂತೆ ಊದಿಕೊಂಡಿದ್ದಾನಲ್ಲಾ. ನೋಡಿದಕೂಡಲೇ ನಗೆಯುಕ್ಕಿಸುವ ಈ ಭಗವಂತ ರವಿಚಂದ್ರನಂತೆ! ಈ ಕೃಷ್ಣನ ಕುರಿತು ಯೋಚಿಸುವಾಗ ಮುನಿರತ್ನನ ರಾಜಕಾರಣದ ವರಸೆ ಅರಿವಾಗತೊಡಗಿತು. ರಾಜರಾಜೇಶ್ವರಿನಗರದಲ್ಲಿ ಚುನಾವಣೆಗೆ ನಿಂತಿದ್ದಾಗ ವಿಪರೀತ ಅಕ್ರಮವೆಸಗಿದ ಆಪಾದನೆಯಲ್ಲಿ ಚುನಾವಣೆ ಮುಂದೆಹೋಯ್ತು. ನಂತರದ ಚುನಾವಣೆಯಲ್ಲಿ ಜೆಡಿಎಸ್‍ನವರು ಈತನೆದುರು ಕಾಂಡೇಟ್ ಹಾಕಿದ್ದರು. ಆದರೆ ಮುನಿರತ್ನ ಮಂಡ್ಯದಲ್ಲಿ ಕುಮಾರಣ್ಣನ ಜೊತೆ ಕಾಣಿಸಿಕೊಂಡರು. ಅದಾದ ನಂತರ ಕುಮಾರಣ್ಣನನ್ನ ಇಳಿಸುವ ಸಂಚಿನ ಟೀಮಿನ ಮೂಂಚೂಣಿಯಲ್ಲಿ ಕಾಣಿಸಿಕೊಂಡರು. ವಾಸ್ತವದಲ್ಲಿ ಮುನಿರತ್ನನೇ ಕುರುಕ್ಷೇತ್ರದಲ್ಲಿ ಶಕುನಿ ಪಾತ್ರ ಮಾಡಬಹುದಿತ್ತಲ್ಲಾ, ಥೂತ್ತೇರಿ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. According to kumarsway and devegowda and neharu done lot of thing my dear come and ask our narth karnataka people what neharu did if sharada patel is not there where we would be, writing black letter is easy understand the inner pain why such words comes,

  2. Neharu paravaagi vakalattu vahiskondu matadta iddiralla. Nijavaglu Nehru ge Harisingh nanta ondu praantada raajana sharattugalige hediyante oppikollabekada anivaaryate ittenri? Indian military use madkollalikke aagta ilvenri? Sardar Patel Nijamara aadalita dallidda hyderabad na hengri India ge sersidru? Yuddha viraamada avashyakate itta? UNO ge tegedukond hogbekada avashyakate itta? Ulida kshetradalli Nehru madiro saadhanegalanna oppikoltene. Swatantrya bandanta sandarbha, abhivraddhi ge jasti scope irutte, abhivraddhi aagide aa time alli illa anta alla. Aadre Nehru kelavondu history kshamisalaarada tappugalannu madiddare annodu ashte satya.

  3. ವಿವೇಕಾನಂದ ಅವರೇ,
    ತಾವು ಹೇಳಿರುವಂತೆ ರಾಜಾ ಹರಿಸಿಂಗ್ ಅವರು article 370 ಯನ್ನು ಅಳವಡಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಭಾರತದಲ್ಲಿ ವಿಲೀನಗೊಳಿಸಲಿಲ್ಲ. ಬದಲಾಗಿ ಅವರು ಸ್ವತಂತ್ರ ರಾಷ್ಟ್ರವಾಗಿ ಉಳಿಯಬೇಕೆಂದಿದ್ದರು. ಆದರೆ ಪಾಕಿಸ್ತಾನ ಬುಡಕಟ್ಟು ಜನರನ್ನು ಬಳಸಿಕೊಂಡು ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು. (ಆಗಲೇ ಪಿಒಕೆ ಹುಟ್ಟಿದ್ದು.) ಆಗ ರಾಜಾ ಹರಿಸಿಂಗರು ಭಾರತದಲ್ಲಿ ವಿಲೀನವಾಗಲು ಸಮ್ಮತಿಸಿ ಪತ್ರವನ್ನು ಕೊಟ್ಟರು. ಇದು ಐತಿಹಾಸಿಕ ಸತ್ಯ.

  4. Vivekanand,Please read “My days with Nehru “& “Reminiscences of the Nehru age” by M O Mathai,Nehru’s PA for many years.You will come to know the real face of Nehru

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...