Homeಚಳವಳಿಕಾನೂನಿನ ಯೋಧ ಶಮ್ನಾಡ್ ಬಶೀರ್ ಅವರ ಗೌರವಾರ್ಥ ಅವರ ಪರಂಪರೆಯನ್ನು ಮುಂದುವರಿಸೋಣ

ಕಾನೂನಿನ ಯೋಧ ಶಮ್ನಾಡ್ ಬಶೀರ್ ಅವರ ಗೌರವಾರ್ಥ ಅವರ ಪರಂಪರೆಯನ್ನು ಮುಂದುವರಿಸೋಣ

ಶಮ್ನಾಡ್ ಬಶೀರ್ ಅವರು, ಕೇವಲ ಬೌದ್ಧಿಕ ಆಸ್ತಿ ಹಕ್ಕುಗಳ ಪರಿಣತರು ಮಾತ್ರ ಆಗಿರಲಿಲ್ಲ; ಅವರು ವಕೀಲ ವೃತ್ತಿಯಲ್ಲಿ ಕಡೆಗಣಿಸಲ್ಪಟ್ಟ ವರ್ಗಗಳ ವೈವಿಧ್ಯತೆ ಮತ್ತು ಪ್ರಾತಿನಿಧ್ಯಕ್ಕಾಗಿ ದಣಿವಿರದೆ ದುಡಿಯುತ್ತಿದ್ದ ಒಬ್ಬ ಕಾರ್ಯಕರ್ತರೂ ಆಗಿದ್ದರು.

- Advertisement -
- Advertisement -

ಕೃಪೆ: ಮಹ್ತಾಬ್ ಆಲಂ, ದಿ ವೈರ್.ಇನ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊಫೆಸರ್ ಶಮ್ನಾಡ್ ಬಶೀರ್ ಅವರ ಅಕಾಲಿಕ ಮತ್ತು ದುರಂತಮಯ ಮರಣವು ನಮ್ಮಲ್ಲಿ ಅನೇಕರಿಗೆ ಸಿಡಿಲೆರಗಿದಂತೆ ಆಘಾತ ತಂದಿದೆ. ನಂಬಲು ಅಸಾಧ್ಯವಾದುದರ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಾನು ಓಡಾಡುತ್ತಿರುವಾಗ ನನಗೆ ಮನವರಿಕೆಯದುದೇನೆಂದರೆ, ಗೆಳೆಯನೊಬ್ಬನನ್ನು ಕಳೆದುಕೊಂಡದ್ದು ಮಾತ್ರವಲ್ಲ; ದೇಶವು ಅತ್ಯುತ್ತಮವಾದ ಕಾನೂನು ತಜ್ಞರೊಬ್ಬರನ್ನು ಕಳೆದುಕೊಂಡಿದೆ ಎಂಬುದು. ಬೌದ್ಧಿಕ ಆಸ್ತಿ ಹಕ್ಕು ( Intellectual Property Right-ಐಪಿಆರ್)ಗಳ ವಿಷಯದಲ್ಲಿ ಜಾಗತಿಕವಾಗಿ ಪ್ರಸಿದ್ಧರಾಗಿದ್ದ ಅವರ ಮೃತದೇಹವು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯಲ್ಲಿ ತನ್ನ ಕಾರಿನ ಬಳಿ ಪತ್ತೆಯಾಯಿತು.

ಅವರ ಸಾವಿನ ಸುದ್ದಿಯು ಹರಡುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪದ ಮಹಾಪೂರವೇ ಆರಂಭವಾಗುತ್ತಿದ್ದಂತೆಯೇ ಅವರ ಹಠಾತ್ ಮರಣವು ಜಾಗತಿಕ ಕಾನೂನು ಸಮುದಾಯಕ್ಕೆ ಮಾತ್ರವಲ್ಲ; ಶೈಕ್ಷಣಿಕ ಸಮುದಾಯಕ್ಕೂ ತುಂಬಲಾರದ ನಷ್ಟವಾಗಿದೆ ಎಂಬ ಬಗ್ಗೆ ಯಾವ ಸಂಶಯವೂ ಉಳಿಯುವುದಿಲ್ಲ. ದಣಿವರಿಯದ ಹೋರಾಟಗಾರರಾಗಿದ್ದ ಅವರು, ದಿನರಾತ್ರಿಯೆನ್ನದೆ, ಕಡೆಗಣಿಸಲ್ಪಟ್ಟ ವರ್ಗಗಳ ವೈವಿಧ್ಯತೆ ಮತ್ತು ಪ್ರಾತಿನಿಧ್ಯಕ್ಕಾಗಿ ದುಡಿಯುತ್ತಿದ್ದರು. ಬೆಂಗಳೂರಿನ ರಾಷ್ಟ್ರೀಯ  ಕಾನೂನು ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದ ಅವರು, ಇಂಟರ್ನೆಟ್ ಸಮಾನತೆ, ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿ ನ್ಯಾಯಬದ್ಧತೆ, ಸಾರ್ವಜನಿಕ ಹಿತಾಸಕ್ತಿ, ನ್ಯಾಯಾಂಗದ ಉತ್ತರದಾಯಿತ್ವ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು, ಅಂಧರು, ಮತ್ತು ವಿಶೇಷಚೇತನರ ಹಕ್ಕುಗಳು ಇತ್ಯಾದಿಯಾಗಿ ಹಲವಾರು ಕ್ಷೇತ್ರಗಳಲ್ಲಿ ಸಮರೋಪಾದಿಯಲ್ಲಿ ದುಡಿಯುತ್ತಿದ್ದ ಮನುಷ್ಯರಾಗಿದ್ದರು.

ನನ್ನ ಮಟ್ಟಿಗೆ ಅವರು ಜಾಗತಿಕ ಖ್ಯಾತಿಯ ಭೌದ್ಧಿಕ ಆಸ್ತಿ ಹಕ್ಕುಗಳ ತಜ್ಞರಷ್ಟೇ ಅಲ್ಲ ಅವರೊಬ್ಬರು ಕಾನೂನಿನ ಯೋಧ. ಅವರು ಇನ್‌ಕ್ರೀಸಿಂಗ್ ಡೈವರ್ಸಟಿ ಬೈ ಇನ್‌ಕ್ರೀಸಿಂಗ್ ಎಕ್ಸೆಸ್ ಟು ಲೀಗಲ್ ಎಜುಕೇಶನ್ (IDIA) ಮತ್ತು ಎಕ್ಸೆಸ್ ಟು ಲೀಗಲ್ ಎಜುಕೇಶನ್ ಫಾರ್ ಮುಸ್ಲಿಮ್ಸ್ ಇನ್ ಇಂಡಿಯಾ (ALEM) ಸಂಸ್ಥೆಗಳ ಹಿಂದಿನ ಶಕ್ತಿ ಮಾತ್ರವೇ ಆಗಿರಲಿಲ್ಲ.

ನಾನು ಅವರ ಬಗ್ಗೆ ಮೊದಲ ಬಾರಿಗೆ ಕೇಳಿದ್ದು 2009ರಲ್ಲಿ. ಅದು ಅವರು ಆಗಿನ ಸುಪ್ರೀಂಕೋರ್ಟ್ ನ್ಯಾಯಾಧೀಶ ನ್ಯಾ. ಮಾರ್ಕಾಂಡೇಯ ಕಟ್ಜು ಅವರು ಆಡಿದ ಮಾತೊಂದರ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದಾಗ. ಕಟ್ಜು ಅವರು ನ್ಯಾಯಾಲಯದಲ್ಲಿ ಎಲ್ಲರ ಎದುರಲ್ಲೇ ಗಡ್ಡಧಾರಿ ಮುಸ್ಲಿಮ್ ಯುವಕನೊಬ್ಬನನ್ನು ತಾಲಿಬಾನ್ ಉಗ್ರಗಾಮಿಗೆ ಹೋಲಿಸಿದ್ದರು. ಆ ವರ್ಷ ತನ್ನ ಕಾನ್ವೆಂಟ್ ಶಾಲೆಯಲ್ಲಿ ಗಡ್ಡ ಬಿಡಲು ಅನುಮತಿ ನೀಡಬೇಕೆಂಬ ಮುಸ್ಲಿಂ ಯುವಕನೊಬ್ಬನ ಅರ್ಜಿಯನ್ನು ತಿರಸ್ಕರಿಸಿದ್ದರು. “ನಮಗೆ ದೇಶದಲ್ಲಿ ತಾಲಿಬಾನ್ ಬೇಕಿಲ್ಲ. ನಾಳೆ ಒಬ್ಬಳು ವಿದ್ಯಾರ್ಥಿನಿ ಬಂದು ನನಗೆ ಬುರ್ಖಾ ಧರಿಸಲು ಅನುಮತಿ ನೀಡಬೇಕೆಂದು ಕೋರಬಹುದು. ನಾವು ಅದಕ್ಕೆ ಅವಕಾಶ ನೀಡಲು ಸಾಧ್ಯವೇ?” ಎಂದು ಖಟ್ಜು ಕೇಳಿದ್ದರು.

“ಈ ಪ್ರಕರಣದ ಅರ್ಹತೆ ಏನೇ ಇರಲಿ, ಅದರ ಹೊರತಾಗಿಯೂ ನ್ಯಾ ಕಟ್ಜು ಅವರ ಹೇಳಿಕೆ ನಿರ್ದಯಿ ಮತ್ತು ಅಸೂಕ್ಷ್ಮತೆಯದ್ದಾಗಿದೆ. ಅವರು ಒಬ್ಬ ನಿಷ್ಪಕ್ಷಪಾತಿ ನ್ಯಾಯಾಧೀಶರಾಗಲು ಅನರ್ಹರು” ಎಂದು ಶಮ್ನಾಡ್ ಬರೆದಿದ್ದರು. ಆ ಹೊತ್ತಿಗೆ ಶಮ್ನಾಡ್ ಅವರು ಕೋಲ್ಕತಾರ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯ (NUJS)ದಲ್ಲಿ ಬೌದ್ದಿಕ ಆಸ್ತಿಗಳ ಹಕ್ಕುಗಳ ಕುರಿತು ಪಾಠ ಮಾಡುತ್ತಿದ್ದ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಯ ಪ್ರೊಫೆಸರರಾಗಿದ್ದರು. ತನ್ನ ಬ್ಲಾಗ್‌ನ ಕೊನೆಯಲ್ಲಿ ಅವರು ಹೀಗೆ ಬರೆದಿದ್ದರು:

“ಸಲೀಮನ ಎಸ್‌ಎಲ್‌ಪಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟಿನ ನಿರ್ಧಾರ ಸರಿ ಇದ್ದಿರಬಹುದು. ಎಲ್ಲರ ಮಂದೆ ನ್ಯಾ. ಕಟ್ಜು ಅವರು ಎಲ್ಲಾ ಗಡ್ಡಧಾರಿ ಮುಸ್ಲಿಮರನ್ನು ತಾಲಿಬಾನ್ ಜೊತೆ ಸಮೀಕರಿಸಿದ ಹಿನ್ನೆಲೆಯಲ್ಲಿ ಒಂದು ಸಮುದಾಯದ ವಿರುದ್ಧ ಅವರ ತಾರತಮ್ಯವನ್ನು ನಿರಾಕರಿಸಲಾಗದು. ಮುಖ್ಯ ನ್ಯಾಯಾಧೀಶರ ಈ ಹೇಳಿಕೆಗೆ ವಾಗ್ದಂಡನೆ ವಿಧಿಸಬೇಕು ಮಾತ್ರವಲ್ಲ; ಈ ಪ್ರಕರಣದ ವಿಚಾರಣೆಯನ್ನು ಇನ್ನೊಂದು ಪೀಠದ ಮುಂದೆ ನಡೆಸಬೇಕು. ನ್ಯಾಯ ತೀರ್ಮಾನ ಆಗಬೇಕು ಮಾತ್ರವಲ್ಲ; ನ್ಯಾಯ ತೀರ್ಮಾನ ಆಗಿದೆ ಎಂಬಂತೆ ಕಾಣಲೂಬೇಕು!”

ವರ್ಷಗಳು ಕಳೆದಂತೆ ನಾನು ಬೇರೆಬೇರೆ ಪತ್ರಿಕೆಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ ಅವರ ಲೇಖನಗಳು ಮತ್ತು ವಿಶ್ಲೇಷಣೆಗಳನ್ನು ಓದುತ್ತಲೇ ಇದ್ದೆ. ಅವರು ನಿಷ್ಣಾತರಾಗಿದ್ದರು ಮತ್ತು ಕಾನೂನು, ಧೋರಣೆಗಳು ಮತ್ತು ಸಾರ್ವಜನಿಕ ಒಳಿತಿನ ಕುರಿತು ವಿವಿಧ ವಿಷಯಗಳ ಬಗ್ಗೆ ಬರೆಯುತ್ತಿದ್ದರು. 2015ರಲ್ಲಿ ಸಮಾನ ಗೆಳೆಯ ತರುಣಬ್ ಖೈತಾನ್ ನಮ್ಮ ನಡುವಿನ ಕೊಂಡಿಯಾದರು. ಮುಸ್ಲಿಂ ಸಮುದಾಯದತ್ತ ಕೈಚಾಚುವಲ್ಲಿ ಐಡಿಐಎಗೆ ಅವರ ತಂಡದೊಂದಿಗೆ ನೆರವಾಗುವಿರಾ ಎಂದು ಕೇಳಿದರು. ಶಮ್ನಾಡ್ ಅವರ ಬರಹಗಳ ಅಭಿಮಾನಿಯಾಗಿದ್ದ ನನಗೆ ಅವರ ಜೊತೆಗೆ ಕೆಲಸ ಮಾಡುವುದು, ಕನಸು ನನಸಾದಂತೆ ಇತ್ತು. ನಾನು ತಕ್ಷಣ ಒಪ್ಪಿಕೊಂಡೆ ಮತ್ತು ನಾವು ಕ್ರಮೇಣ ಉತ್ತಮ ಗೆಳೆಯರಾದೆವು. ಎಲ್ಲಕ್ಕಿಂತ ಹೆಚ್ಚಾಗಿ ಅವರು ದೇಶದ ಮೂಲೆಮೂಲೆಗಳಿಗೆ ಐಡಿಐಎಯನ್ನು ತಲಪಿಸುವ ದಾರಿಯ ಹುಡುಕಾಟದಲ್ಲಿ ಯಾವತ್ತೂ ಇರುತ್ತಿದ್ದರು.‌

ಇಷ್ಟೆಲ್ಲಾ ಹೋರಾಡಲು ಅವರಿಗೆ ಪ್ರೇರಣೆಯಾಗಿದ್ದ ಅಂಶಗಳು ಯಾವುದಾಗಿರಬಹುದು ಎಂಬ ಬಗ್ಗೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನಿಟ್ಟುಕೊಂಡು 2016ರಲ್ಲಿ ತಯಾರಿಸಿದ ವರದಿಯ ಕೆಲವು ಮುಖ್ಯಾಂಶಗಳನ್ನಷ್ಟೇ ಇಲ್ಲಿ ನೋಡಬಹುದು.

ಕಾನೂನು ವಿದ್ಯಾರ್ಥಿಗಳು ಲಿಂಗ, ಜಾತಿ, ಧರ್ಮ, ಆದಾಯಗಳ ವಿಷಯದಲ್ಲಿ ಬಹುತೇಕ ಸಮಾನ ಸ್ಥಾನಗಳನ್ನು ಪಡೆದಿದ್ದರೂ, 50 ಶೇಕಡಾ ಜನರು ಮಾತ್ರ ತಮ್ಮ ಕುಟುಂಬದ ಆದಾಯವು ವಾರ್ಷಿಕ 12 ಲಕ್ಷ ರೂ. ಮೀರಿದೆ ಎಂದವರು. ಇವರಲ್ಲಿ 15 ಶೇಕಡಾ ಮಾತ್ರ ತಮ್ಮ ಕುಟುಂಬದ ಆದಾಯ 36 ಲಕ್ಷ ರೂ. ಮೀರಿದೆ ಎಂದವರು. ರಾಷ್ಟ್ರೀಯ ಕಾನೂನ ಶಾಲೆಯಲ್ಲಿ 82% ಶೇಕಡಾ ಹಿಂದೂಗಳಾಗಿದ್ದರೆ, ಶೇ.5% ರಷ್ಟು ಜೈನ ಸಮುದಾಯದವರಾಗಿದ್ದರು.  ಭಾರತದ ಕೇವಲ 0.5 ಶೇಕಡಾ ಜನಸಂಖ್ಯೆ ಹೊಂದಿರುವ ಶ್ರೀಮಂತ ಜೈನರು ಇಲ್ಲಿ ಶೇ.5% ಇದ್ದರು. ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಶೇ. 14& ಪ್ರಾತಿನಿಧ್ಯ ಹೊಂದಿರುವ ಮುಸ್ಲಿಮರು ಈ ಕಾನೂನು ಶಾಲೆಯಲ್ಲಿ ಕೇವಲ  ಶೇ. 0.5% ಮಾತ್ರ ಇದ್ದರು.  ಇಲ್ಲಿ ಮೇಲ್ಜಾತಿಯವರು 65 ಶೇಕಡಾ ಆಗಿದ್ದು, ಇವರಲ್ಲಿ 27 ಶೇಕಡಾ ಬ್ರಾಹ್ಮಣರಿದ್ದಾರೆ.

ಇಲ್ಲಿ ಇನ್ನೂ ಕೆಲವು ಅಂಶಗಳನ್ನು ಗಮನಿಸಬಹುದಾದರೆ, 2000ದ ಇಸವಿಯಿಂದ ಈಚೆಗೆ, ಸುಪ್ರೀಂಕೋರ್ಟ್ ಕೇವಲ ಒಬ್ಬ ದಲಿತ ವಕೀಲರನ್ನು ಮಾತ್ರ ಹಿರಿಯ ವಕೀಲ ಎಂದು ಘೋಷಿಸಿದೆ. ಮುಸ್ಲಿಂ ಸಮುದಾಯದಿಂದ ಇಬ್ಬರು ಮಾತ್ರ! ಹಿಂದುಳಿದ ರಾಜ್ಯಗಳಾದ ಉತ್ತರ ಪ್ರದೇಶ, ಛತ್ತೀಸ್ ಘಡ, ಜಾರ್ಖಂಡ್ ಅಥವಾ ಬಿಹಾರದ ವಕೀಲರನ್ನು ನೇಮಿಸಲಾಗಿಲ್ಲ. ಗ್ರಾಮೀಣ ಹಿನ್ನೆಲೆಯ ವಕೀಲರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತದೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳಲ್ಲೂ  ಕಳೆದ 25 ವರ್ಷಗಳ ಅವಧಿಯಲ್ಲಿ ಒಬ್ಬರನ್ನು ಮಾತ್ರ ನೇಮಿಸಲಾಗಿದೆ. ಕೊನೆಯ ಸುತ್ತಿನ ಹುದ್ದೆಯಲ್ಲಿ, ಗೊತ್ತುಪಡಿಸಿದ ಐದು ವಕೀಲರಲ್ಲಿ, ಅವರಲ್ಲಿ ನಾಲ್ವರು ಒಂದು ಜಾತಿಗೆ ಸೇರಿದವರು…

ಈ ಹಿನ್ನೆಲೆಯಲ್ಲಿ ಬಹುತ್ವಕ್ಕಾಗಿ ಕೆಲಸ ಮಾಡಿದ ಶಮ್ನಾಡ್ ಅವರಿಗೆ ಶ್ರದ್ಧಾಂಜಲಿ! ಈಗ ಶಮ್ನಾಡ್ ಇಲ್ಲವಾಗಿದ್ದಾರೆ ಮತ್ತು ನಾವು ಅವರ ಸ್ಮರಣೆಯನ್ನು ಗೌರವಿಸುತ್ತೇವೆ. ಅವರು ಪ್ರಾರಂಭಿಸಿದ ಕೆಲಸವನ್ನು ಅದೇ ಸ್ಫೂರ್ತಿಯೊಂದಿಗೆ ನಾವು ಯಾವಾಗಲೂ ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಮತ್ತು ಅದು ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ನಾನು ನಂಬುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...