Homeಚಳವಳಿಕಾನೂನಿನ ಯೋಧ ಶಮ್ನಾಡ್ ಬಶೀರ್ ಅವರ ಗೌರವಾರ್ಥ ಅವರ ಪರಂಪರೆಯನ್ನು ಮುಂದುವರಿಸೋಣ

ಕಾನೂನಿನ ಯೋಧ ಶಮ್ನಾಡ್ ಬಶೀರ್ ಅವರ ಗೌರವಾರ್ಥ ಅವರ ಪರಂಪರೆಯನ್ನು ಮುಂದುವರಿಸೋಣ

ಶಮ್ನಾಡ್ ಬಶೀರ್ ಅವರು, ಕೇವಲ ಬೌದ್ಧಿಕ ಆಸ್ತಿ ಹಕ್ಕುಗಳ ಪರಿಣತರು ಮಾತ್ರ ಆಗಿರಲಿಲ್ಲ; ಅವರು ವಕೀಲ ವೃತ್ತಿಯಲ್ಲಿ ಕಡೆಗಣಿಸಲ್ಪಟ್ಟ ವರ್ಗಗಳ ವೈವಿಧ್ಯತೆ ಮತ್ತು ಪ್ರಾತಿನಿಧ್ಯಕ್ಕಾಗಿ ದಣಿವಿರದೆ ದುಡಿಯುತ್ತಿದ್ದ ಒಬ್ಬ ಕಾರ್ಯಕರ್ತರೂ ಆಗಿದ್ದರು.

- Advertisement -
- Advertisement -

ಕೃಪೆ: ಮಹ್ತಾಬ್ ಆಲಂ, ದಿ ವೈರ್.ಇನ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊಫೆಸರ್ ಶಮ್ನಾಡ್ ಬಶೀರ್ ಅವರ ಅಕಾಲಿಕ ಮತ್ತು ದುರಂತಮಯ ಮರಣವು ನಮ್ಮಲ್ಲಿ ಅನೇಕರಿಗೆ ಸಿಡಿಲೆರಗಿದಂತೆ ಆಘಾತ ತಂದಿದೆ. ನಂಬಲು ಅಸಾಧ್ಯವಾದುದರ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಾನು ಓಡಾಡುತ್ತಿರುವಾಗ ನನಗೆ ಮನವರಿಕೆಯದುದೇನೆಂದರೆ, ಗೆಳೆಯನೊಬ್ಬನನ್ನು ಕಳೆದುಕೊಂಡದ್ದು ಮಾತ್ರವಲ್ಲ; ದೇಶವು ಅತ್ಯುತ್ತಮವಾದ ಕಾನೂನು ತಜ್ಞರೊಬ್ಬರನ್ನು ಕಳೆದುಕೊಂಡಿದೆ ಎಂಬುದು. ಬೌದ್ಧಿಕ ಆಸ್ತಿ ಹಕ್ಕು ( Intellectual Property Right-ಐಪಿಆರ್)ಗಳ ವಿಷಯದಲ್ಲಿ ಜಾಗತಿಕವಾಗಿ ಪ್ರಸಿದ್ಧರಾಗಿದ್ದ ಅವರ ಮೃತದೇಹವು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯಲ್ಲಿ ತನ್ನ ಕಾರಿನ ಬಳಿ ಪತ್ತೆಯಾಯಿತು.

ಅವರ ಸಾವಿನ ಸುದ್ದಿಯು ಹರಡುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪದ ಮಹಾಪೂರವೇ ಆರಂಭವಾಗುತ್ತಿದ್ದಂತೆಯೇ ಅವರ ಹಠಾತ್ ಮರಣವು ಜಾಗತಿಕ ಕಾನೂನು ಸಮುದಾಯಕ್ಕೆ ಮಾತ್ರವಲ್ಲ; ಶೈಕ್ಷಣಿಕ ಸಮುದಾಯಕ್ಕೂ ತುಂಬಲಾರದ ನಷ್ಟವಾಗಿದೆ ಎಂಬ ಬಗ್ಗೆ ಯಾವ ಸಂಶಯವೂ ಉಳಿಯುವುದಿಲ್ಲ. ದಣಿವರಿಯದ ಹೋರಾಟಗಾರರಾಗಿದ್ದ ಅವರು, ದಿನರಾತ್ರಿಯೆನ್ನದೆ, ಕಡೆಗಣಿಸಲ್ಪಟ್ಟ ವರ್ಗಗಳ ವೈವಿಧ್ಯತೆ ಮತ್ತು ಪ್ರಾತಿನಿಧ್ಯಕ್ಕಾಗಿ ದುಡಿಯುತ್ತಿದ್ದರು. ಬೆಂಗಳೂರಿನ ರಾಷ್ಟ್ರೀಯ  ಕಾನೂನು ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದ ಅವರು, ಇಂಟರ್ನೆಟ್ ಸಮಾನತೆ, ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿ ನ್ಯಾಯಬದ್ಧತೆ, ಸಾರ್ವಜನಿಕ ಹಿತಾಸಕ್ತಿ, ನ್ಯಾಯಾಂಗದ ಉತ್ತರದಾಯಿತ್ವ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು, ಅಂಧರು, ಮತ್ತು ವಿಶೇಷಚೇತನರ ಹಕ್ಕುಗಳು ಇತ್ಯಾದಿಯಾಗಿ ಹಲವಾರು ಕ್ಷೇತ್ರಗಳಲ್ಲಿ ಸಮರೋಪಾದಿಯಲ್ಲಿ ದುಡಿಯುತ್ತಿದ್ದ ಮನುಷ್ಯರಾಗಿದ್ದರು.

ನನ್ನ ಮಟ್ಟಿಗೆ ಅವರು ಜಾಗತಿಕ ಖ್ಯಾತಿಯ ಭೌದ್ಧಿಕ ಆಸ್ತಿ ಹಕ್ಕುಗಳ ತಜ್ಞರಷ್ಟೇ ಅಲ್ಲ ಅವರೊಬ್ಬರು ಕಾನೂನಿನ ಯೋಧ. ಅವರು ಇನ್‌ಕ್ರೀಸಿಂಗ್ ಡೈವರ್ಸಟಿ ಬೈ ಇನ್‌ಕ್ರೀಸಿಂಗ್ ಎಕ್ಸೆಸ್ ಟು ಲೀಗಲ್ ಎಜುಕೇಶನ್ (IDIA) ಮತ್ತು ಎಕ್ಸೆಸ್ ಟು ಲೀಗಲ್ ಎಜುಕೇಶನ್ ಫಾರ್ ಮುಸ್ಲಿಮ್ಸ್ ಇನ್ ಇಂಡಿಯಾ (ALEM) ಸಂಸ್ಥೆಗಳ ಹಿಂದಿನ ಶಕ್ತಿ ಮಾತ್ರವೇ ಆಗಿರಲಿಲ್ಲ.

ನಾನು ಅವರ ಬಗ್ಗೆ ಮೊದಲ ಬಾರಿಗೆ ಕೇಳಿದ್ದು 2009ರಲ್ಲಿ. ಅದು ಅವರು ಆಗಿನ ಸುಪ್ರೀಂಕೋರ್ಟ್ ನ್ಯಾಯಾಧೀಶ ನ್ಯಾ. ಮಾರ್ಕಾಂಡೇಯ ಕಟ್ಜು ಅವರು ಆಡಿದ ಮಾತೊಂದರ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದಾಗ. ಕಟ್ಜು ಅವರು ನ್ಯಾಯಾಲಯದಲ್ಲಿ ಎಲ್ಲರ ಎದುರಲ್ಲೇ ಗಡ್ಡಧಾರಿ ಮುಸ್ಲಿಮ್ ಯುವಕನೊಬ್ಬನನ್ನು ತಾಲಿಬಾನ್ ಉಗ್ರಗಾಮಿಗೆ ಹೋಲಿಸಿದ್ದರು. ಆ ವರ್ಷ ತನ್ನ ಕಾನ್ವೆಂಟ್ ಶಾಲೆಯಲ್ಲಿ ಗಡ್ಡ ಬಿಡಲು ಅನುಮತಿ ನೀಡಬೇಕೆಂಬ ಮುಸ್ಲಿಂ ಯುವಕನೊಬ್ಬನ ಅರ್ಜಿಯನ್ನು ತಿರಸ್ಕರಿಸಿದ್ದರು. “ನಮಗೆ ದೇಶದಲ್ಲಿ ತಾಲಿಬಾನ್ ಬೇಕಿಲ್ಲ. ನಾಳೆ ಒಬ್ಬಳು ವಿದ್ಯಾರ್ಥಿನಿ ಬಂದು ನನಗೆ ಬುರ್ಖಾ ಧರಿಸಲು ಅನುಮತಿ ನೀಡಬೇಕೆಂದು ಕೋರಬಹುದು. ನಾವು ಅದಕ್ಕೆ ಅವಕಾಶ ನೀಡಲು ಸಾಧ್ಯವೇ?” ಎಂದು ಖಟ್ಜು ಕೇಳಿದ್ದರು.

“ಈ ಪ್ರಕರಣದ ಅರ್ಹತೆ ಏನೇ ಇರಲಿ, ಅದರ ಹೊರತಾಗಿಯೂ ನ್ಯಾ ಕಟ್ಜು ಅವರ ಹೇಳಿಕೆ ನಿರ್ದಯಿ ಮತ್ತು ಅಸೂಕ್ಷ್ಮತೆಯದ್ದಾಗಿದೆ. ಅವರು ಒಬ್ಬ ನಿಷ್ಪಕ್ಷಪಾತಿ ನ್ಯಾಯಾಧೀಶರಾಗಲು ಅನರ್ಹರು” ಎಂದು ಶಮ್ನಾಡ್ ಬರೆದಿದ್ದರು. ಆ ಹೊತ್ತಿಗೆ ಶಮ್ನಾಡ್ ಅವರು ಕೋಲ್ಕತಾರ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯ (NUJS)ದಲ್ಲಿ ಬೌದ್ದಿಕ ಆಸ್ತಿಗಳ ಹಕ್ಕುಗಳ ಕುರಿತು ಪಾಠ ಮಾಡುತ್ತಿದ್ದ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಯ ಪ್ರೊಫೆಸರರಾಗಿದ್ದರು. ತನ್ನ ಬ್ಲಾಗ್‌ನ ಕೊನೆಯಲ್ಲಿ ಅವರು ಹೀಗೆ ಬರೆದಿದ್ದರು:

“ಸಲೀಮನ ಎಸ್‌ಎಲ್‌ಪಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟಿನ ನಿರ್ಧಾರ ಸರಿ ಇದ್ದಿರಬಹುದು. ಎಲ್ಲರ ಮಂದೆ ನ್ಯಾ. ಕಟ್ಜು ಅವರು ಎಲ್ಲಾ ಗಡ್ಡಧಾರಿ ಮುಸ್ಲಿಮರನ್ನು ತಾಲಿಬಾನ್ ಜೊತೆ ಸಮೀಕರಿಸಿದ ಹಿನ್ನೆಲೆಯಲ್ಲಿ ಒಂದು ಸಮುದಾಯದ ವಿರುದ್ಧ ಅವರ ತಾರತಮ್ಯವನ್ನು ನಿರಾಕರಿಸಲಾಗದು. ಮುಖ್ಯ ನ್ಯಾಯಾಧೀಶರ ಈ ಹೇಳಿಕೆಗೆ ವಾಗ್ದಂಡನೆ ವಿಧಿಸಬೇಕು ಮಾತ್ರವಲ್ಲ; ಈ ಪ್ರಕರಣದ ವಿಚಾರಣೆಯನ್ನು ಇನ್ನೊಂದು ಪೀಠದ ಮುಂದೆ ನಡೆಸಬೇಕು. ನ್ಯಾಯ ತೀರ್ಮಾನ ಆಗಬೇಕು ಮಾತ್ರವಲ್ಲ; ನ್ಯಾಯ ತೀರ್ಮಾನ ಆಗಿದೆ ಎಂಬಂತೆ ಕಾಣಲೂಬೇಕು!”

ವರ್ಷಗಳು ಕಳೆದಂತೆ ನಾನು ಬೇರೆಬೇರೆ ಪತ್ರಿಕೆಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ ಅವರ ಲೇಖನಗಳು ಮತ್ತು ವಿಶ್ಲೇಷಣೆಗಳನ್ನು ಓದುತ್ತಲೇ ಇದ್ದೆ. ಅವರು ನಿಷ್ಣಾತರಾಗಿದ್ದರು ಮತ್ತು ಕಾನೂನು, ಧೋರಣೆಗಳು ಮತ್ತು ಸಾರ್ವಜನಿಕ ಒಳಿತಿನ ಕುರಿತು ವಿವಿಧ ವಿಷಯಗಳ ಬಗ್ಗೆ ಬರೆಯುತ್ತಿದ್ದರು. 2015ರಲ್ಲಿ ಸಮಾನ ಗೆಳೆಯ ತರುಣಬ್ ಖೈತಾನ್ ನಮ್ಮ ನಡುವಿನ ಕೊಂಡಿಯಾದರು. ಮುಸ್ಲಿಂ ಸಮುದಾಯದತ್ತ ಕೈಚಾಚುವಲ್ಲಿ ಐಡಿಐಎಗೆ ಅವರ ತಂಡದೊಂದಿಗೆ ನೆರವಾಗುವಿರಾ ಎಂದು ಕೇಳಿದರು. ಶಮ್ನಾಡ್ ಅವರ ಬರಹಗಳ ಅಭಿಮಾನಿಯಾಗಿದ್ದ ನನಗೆ ಅವರ ಜೊತೆಗೆ ಕೆಲಸ ಮಾಡುವುದು, ಕನಸು ನನಸಾದಂತೆ ಇತ್ತು. ನಾನು ತಕ್ಷಣ ಒಪ್ಪಿಕೊಂಡೆ ಮತ್ತು ನಾವು ಕ್ರಮೇಣ ಉತ್ತಮ ಗೆಳೆಯರಾದೆವು. ಎಲ್ಲಕ್ಕಿಂತ ಹೆಚ್ಚಾಗಿ ಅವರು ದೇಶದ ಮೂಲೆಮೂಲೆಗಳಿಗೆ ಐಡಿಐಎಯನ್ನು ತಲಪಿಸುವ ದಾರಿಯ ಹುಡುಕಾಟದಲ್ಲಿ ಯಾವತ್ತೂ ಇರುತ್ತಿದ್ದರು.‌

ಇಷ್ಟೆಲ್ಲಾ ಹೋರಾಡಲು ಅವರಿಗೆ ಪ್ರೇರಣೆಯಾಗಿದ್ದ ಅಂಶಗಳು ಯಾವುದಾಗಿರಬಹುದು ಎಂಬ ಬಗ್ಗೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನಿಟ್ಟುಕೊಂಡು 2016ರಲ್ಲಿ ತಯಾರಿಸಿದ ವರದಿಯ ಕೆಲವು ಮುಖ್ಯಾಂಶಗಳನ್ನಷ್ಟೇ ಇಲ್ಲಿ ನೋಡಬಹುದು.

ಕಾನೂನು ವಿದ್ಯಾರ್ಥಿಗಳು ಲಿಂಗ, ಜಾತಿ, ಧರ್ಮ, ಆದಾಯಗಳ ವಿಷಯದಲ್ಲಿ ಬಹುತೇಕ ಸಮಾನ ಸ್ಥಾನಗಳನ್ನು ಪಡೆದಿದ್ದರೂ, 50 ಶೇಕಡಾ ಜನರು ಮಾತ್ರ ತಮ್ಮ ಕುಟುಂಬದ ಆದಾಯವು ವಾರ್ಷಿಕ 12 ಲಕ್ಷ ರೂ. ಮೀರಿದೆ ಎಂದವರು. ಇವರಲ್ಲಿ 15 ಶೇಕಡಾ ಮಾತ್ರ ತಮ್ಮ ಕುಟುಂಬದ ಆದಾಯ 36 ಲಕ್ಷ ರೂ. ಮೀರಿದೆ ಎಂದವರು. ರಾಷ್ಟ್ರೀಯ ಕಾನೂನ ಶಾಲೆಯಲ್ಲಿ 82% ಶೇಕಡಾ ಹಿಂದೂಗಳಾಗಿದ್ದರೆ, ಶೇ.5% ರಷ್ಟು ಜೈನ ಸಮುದಾಯದವರಾಗಿದ್ದರು.  ಭಾರತದ ಕೇವಲ 0.5 ಶೇಕಡಾ ಜನಸಂಖ್ಯೆ ಹೊಂದಿರುವ ಶ್ರೀಮಂತ ಜೈನರು ಇಲ್ಲಿ ಶೇ.5% ಇದ್ದರು. ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಶೇ. 14& ಪ್ರಾತಿನಿಧ್ಯ ಹೊಂದಿರುವ ಮುಸ್ಲಿಮರು ಈ ಕಾನೂನು ಶಾಲೆಯಲ್ಲಿ ಕೇವಲ  ಶೇ. 0.5% ಮಾತ್ರ ಇದ್ದರು.  ಇಲ್ಲಿ ಮೇಲ್ಜಾತಿಯವರು 65 ಶೇಕಡಾ ಆಗಿದ್ದು, ಇವರಲ್ಲಿ 27 ಶೇಕಡಾ ಬ್ರಾಹ್ಮಣರಿದ್ದಾರೆ.

ಇಲ್ಲಿ ಇನ್ನೂ ಕೆಲವು ಅಂಶಗಳನ್ನು ಗಮನಿಸಬಹುದಾದರೆ, 2000ದ ಇಸವಿಯಿಂದ ಈಚೆಗೆ, ಸುಪ್ರೀಂಕೋರ್ಟ್ ಕೇವಲ ಒಬ್ಬ ದಲಿತ ವಕೀಲರನ್ನು ಮಾತ್ರ ಹಿರಿಯ ವಕೀಲ ಎಂದು ಘೋಷಿಸಿದೆ. ಮುಸ್ಲಿಂ ಸಮುದಾಯದಿಂದ ಇಬ್ಬರು ಮಾತ್ರ! ಹಿಂದುಳಿದ ರಾಜ್ಯಗಳಾದ ಉತ್ತರ ಪ್ರದೇಶ, ಛತ್ತೀಸ್ ಘಡ, ಜಾರ್ಖಂಡ್ ಅಥವಾ ಬಿಹಾರದ ವಕೀಲರನ್ನು ನೇಮಿಸಲಾಗಿಲ್ಲ. ಗ್ರಾಮೀಣ ಹಿನ್ನೆಲೆಯ ವಕೀಲರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತದೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳಲ್ಲೂ  ಕಳೆದ 25 ವರ್ಷಗಳ ಅವಧಿಯಲ್ಲಿ ಒಬ್ಬರನ್ನು ಮಾತ್ರ ನೇಮಿಸಲಾಗಿದೆ. ಕೊನೆಯ ಸುತ್ತಿನ ಹುದ್ದೆಯಲ್ಲಿ, ಗೊತ್ತುಪಡಿಸಿದ ಐದು ವಕೀಲರಲ್ಲಿ, ಅವರಲ್ಲಿ ನಾಲ್ವರು ಒಂದು ಜಾತಿಗೆ ಸೇರಿದವರು…

ಈ ಹಿನ್ನೆಲೆಯಲ್ಲಿ ಬಹುತ್ವಕ್ಕಾಗಿ ಕೆಲಸ ಮಾಡಿದ ಶಮ್ನಾಡ್ ಅವರಿಗೆ ಶ್ರದ್ಧಾಂಜಲಿ! ಈಗ ಶಮ್ನಾಡ್ ಇಲ್ಲವಾಗಿದ್ದಾರೆ ಮತ್ತು ನಾವು ಅವರ ಸ್ಮರಣೆಯನ್ನು ಗೌರವಿಸುತ್ತೇವೆ. ಅವರು ಪ್ರಾರಂಭಿಸಿದ ಕೆಲಸವನ್ನು ಅದೇ ಸ್ಫೂರ್ತಿಯೊಂದಿಗೆ ನಾವು ಯಾವಾಗಲೂ ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಮತ್ತು ಅದು ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ನಾನು ನಂಬುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...