ತೆರಿಗೆ ವಂಚಿಸುವ ಹಾಗೂ ರಹಸ್ಯ ಹೂಡಿಕೆಯನ್ನು ಬಯಲು ಮಾಡುವ ಪಂಡೋರಾ ಪೇಪರ್ಸ್ ಅನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಿಕೋದ್ಯಮ ಒಕ್ಕೂಟ (ಸಿಐಸಿಜೆ) ಬಯಲು ಮಾಡಿದ್ದು ಭಾರತೀಯ ದಿಗ್ಗಜರ ಹೆಸರುಗಳು ಅದರಲ್ಲಿವೆ.
ವಿಶ್ವದ ಮಹಾನ್ ನಾಯಕರು, ಸಾರ್ವಜನಿಕ ಅಧಿಕಾರಿಗಳು, ಖ್ಯಾತನಾಮರ ಹೆಸರುಗಳು ಬಯಲಾಗಿವೆ. ಉದ್ಯಮಿಗಳ ಅನಿಲ್ ಅಂಬಾನಿ, ಕಿರಣ್ ಮಜುಂದಾರ್ ಷಾ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರು ಪಂಡೋರ ಹಗಣರಣದಲ್ಲಿ ಸೇರಿವೆ.
ತೆರಿಗೆ ವಂಚಿಸಲು ಇರುವ ಜಾಗತಿಕ ಅವಕಾಶಗಳನ್ನು ಇವರು ಬಳಸಿದ್ದಾರೆ. ಸರ್ಕಾರದ ಕಣ್ಣು ತಪ್ಪಿಸಿ ನಡೆಯುವ ವ್ಯವಹಾರಗಳ ಮಾಹಿತಿಯನ್ನು ತನಿಖಾ ಸಂಸ್ಥೆಗಳ ಭಾಗವಾದ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ಬಯಲು ಮಾಡಿದೆ. ಹಣ ಹೂಡಿಕೆ ಮಾಡಿದ್ದಾರೆ ಎಂಬುದನ್ನು ಕಡಲಾಚೆಯ 14 ಸಂಸ್ಥೆಗಳು ಮಾಹಿತಿ ನೀಡಿದ್ದು, ಒಟ್ಟು 11.9 ಮಿಲಿಯನ್ ದಾಖಲೆಗಳ ಆಧಾರದಲ್ಲಿ ಹಗರಣವನ್ನು ಬಯಲಿಗೆಳೆಯಲಾಗಿದೆ.
ಈ ದಾಖಲೆಗಳು ವಾಷಿಂಗ್ಟನ್ ಮೂಲದ ಅಂತಾರಾಷ್ಟ್ರೀಯ ತನಿಖಾ ಪತ್ರಿಕೋದ್ಯಮ ಒಕ್ಕೂಟದಿಂದ (ಸಿಐಸಿಜೆ) ಪಡೆಯಲಾಗಿದೆ. ಜಾಗತಿಕ ತನಿಖಾ ಪತ್ರಿಕೋದ್ಯಮ ಪಾಲುದಾರರಾದ ದಿ ಗಾರ್ಡಿಯನ್, ಬಿಬಿಸಿ ಪನೋರಮಾ ಮತ್ತು ವಾಷಿಂಗ್ಟನ್ ಪೋಸ್ಟ್, ಇಂಡಿಯನ್ ಎಕ್ಸ್ಪ್ರೆಸ್ ಸೇರಿದಂತೆ ಇತರ ಸಂಸ್ಥೆಗಳು ಪನೋಮ ಪೇಪರ್ಸ್ ಬಳಿಕ ಬಹುದೊಡ್ಡ ಹಗರಣವನ್ನು ಬಯಲಿಗೆಳೆದಿವೆ. ಇದನ್ನು ಸಿಐಸಿಜೆ ‘ಪಂಡೋರ ಪೇಪರ್ಸ್’ ಎಂದು ಕರೆಯಲಾಗಿದೆ. ಕಡಲಾಚೆಯ ಘಟಕಗಳೆಲ್ಲ ಕಾನೂನು ಬಾಹಿರವೇನಲ್ಲ. ಆದರೆ ತೆರಿಗೆ ವಂಚಕರು ಈ ಸ್ವರ್ಗಗಳನ್ನು ಹುಡುಕುತ್ತಾರೆ. ಈ ನಿಟ್ಟಿನಲ್ಲಿ ಪಂಡೋರ ಪೇಪರ್ಸ್, 2014ರ ಬಳಿಕ ಬಯಲಾದ ಅತಿದೊಡ್ಡ ದಾಖಲೆಯಾಗಿದೆ.
ರಿಲಯನ್ಸ್ ಎಡಿಎ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ಅವರ ಪ್ರತಿನಿಧಿಗಳು ಜರ್ಸಿ, ಬ್ರಿಟಿಷ್ ವರ್ಜಿನ್ ದ್ವೀಪಗಳು ಮತ್ತು ಸೈಪ್ರಸ್ನಲ್ಲಿ ಕನಿಷ್ಠ 18 ಕಡಲಾಚೆಯ ಕಂಪನಿಗಳನ್ನು ಹೊಂದಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಇವುಗಳಲ್ಲಿ ಏಳು ಕಂಪನಿಗಳು ಕನಿಷ್ಠ 1.3 ಬಿಲಿಯನ್ ಡಾಲರ್ಗಳನ್ನು (ಸುಮಾರು ರೂ. 9,649 ಕೋಟಿ) ಎರವಲು ಮತ್ತು ಹೂಡಿಕೆ ಮಾಡಿವೆ ಎಂದು ವರದಿಯಾಗಿದೆ.
ಫೆಬ್ರವರಿ 2020ರಲ್ಲಿ, ಅಂಬಾನಿ ಅವರು ತಮ್ಮ ಹೂಡಿಕೆ ಕುರಿತು, “ನಿವ್ವಳ ಮೌಲ್ಯ ಶೂನ್ಯ” ಎಂದು ಲಂಡನ್ನ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದಾಗ್ಯೂ, “ಅಂಬಾನಿಯವರಿಗೆ ಯಾವುದೇ ಕಡಲಾಚೆಯ ಹಿತಾಸಕ್ತಿಗಳಿವೆ” ಎಂಬ ಪ್ರಶ್ನೆಗಳಿವೆ ಎಂದು ನ್ಯಾಯಾಲಯ ಕೇಳಿತ್ತು. ನ್ಯಾಯಾಲಯವು, ಮೂರು ಚೀನೀ ಬ್ಯಾಂಕುಗಳಿಗೆ 716 ಮಿಲಿಯನ್ ಡಾಲರ್ (ಸುಮಾರು ರೂ. 5,315 ಕೋಟಿ) ಪಾವತಿಸಲು ಆದೇಶಿಸಿತ್ತು. ಆದರೆ ಅದನ್ನು ಅಂಬಾನಿ ಪಾಲಿಸಿಲ್ಲ.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಪತಿ ವಿದೇಶದಲ್ಲಿ ಟ್ರಸ್ಟ್ ಸ್ಥಾಪಿಸಿದ್ದಾರೆ. ಅದರ ಹೊಣೆಯನ್ನು ಇನ್ಸೈಡರ್ ಟ್ರೇಡಿಂಗ್ಗಾಗಿ ಸೆಬಿಯಿಂದ ನಿಷೇಧಕ್ಕೆ ಒಳಗಾದ ವ್ಯಕ್ತಿಗೆ ನೀಡಲಾಗಿದೆ ಎಂದು ಪಂಡೋರ ಪೇಪರ್ಸ್ ವರದಿ ಮಾಡಿದೆ.
2016ರಲ್ಲಿ ಪನಾಮಾ ಪೇಪರ್ ಬಹಿರಂಗವಾದ ಬಳಿಕ ವಿದೇಶದಲ್ಲಿನ ತಮ್ಮ ಆಸ್ತಿಯನ್ನು ನಗದೀಕರಣ ಮಾಡುವಂತೆ ಸಚಿನ್ ಕೋರಿದ್ದರು ಎನ್ನಲಾಗಿದೆ. ಸಚಿನ್ ಅವರಂತೆಯೇ ಅನೇಕರು ಆಸ್ತಿ ನಗದೀಕರಣಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿರಿ: ಪೆಗಾಸಸ್ ಹಗರಣ ತನಿಖೆಗೆ ಸಮಿತಿ ರಚನೆ: ಸುಪ್ರೀಂ ಹೇಳಿಕೆ