Homeಮುಖಪುಟನನ್ನ ನೆನಪ ಹೂದೋಟದಲ್ಲಿ ಕವಿ ಸಿದ್ಧಲಿಂಗಯ್ಯನವರು

ನನ್ನ ನೆನಪ ಹೂದೋಟದಲ್ಲಿ ಕವಿ ಸಿದ್ಧಲಿಂಗಯ್ಯನವರು

- Advertisement -
- Advertisement -

ಕೆಲವೊಮ್ಮೆ ಮುತ್ತುಗಳನ್ನು ಅಕಸ್ಮಾತ್ ಒಡೆದು ಹಾಕುತ್ತೇವೆ, ಅಯ್ಯೋ, ಮತ್ತೆ ಸಿಗುತ್ತದಲ್ಲವಾ ಎಂಬ ಉಢಾಪೆಯಲ್ಲಿ. ಆದರೆ ಕಾಲ ಮಿಂಚಿರುತ್ತದೆ. ಅದು ನಮಗೆ ಮತ್ತೆ ಸಿಗುವುದಿಲ್ಲ ಅಥವಾ ಸಿಗದ ಲೋಕಕ್ಕೆ ಅದು ಹೋಗಿರುತ್ತದೆ. ಕವಿ ಸಿದ್ಧಲಿಂಗಯ್ಯನವರಿಗೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ.

ನನ್ನ ಮತ್ತು ಕವಿ ಸಿದ್ದಲಿಂಗಯ್ಯನವರ ಸಂಬಂಧ ಬಹಳ ಹಿಂದಿನದು. ದಲಿತ ಕವಿ ಎಂಬುದಕ್ಕಿಂತಲೂ ಮಹತ್ತರ ಹಿನ್ನೆಲೆಯದು. ಬಹುಶಃ 1987-88ರ ಸಮಯವದು. ಸಿದ್ಧಲಿಂಗಯ್ಯನವರು ವಿಧಾನಪರಿಷತ್ ಸದಸ್ಯರಾಗಿದ್ದರು. ಪ್ರತಿ ದಿನ ರೇಡಿಯೋದಲ್ಲಿ ಸಂಜೆ 7:35ಕ್ಕೆ ವಾರ್ತೆಗಳು ಮುಗಿದನಂತರ 8 ಗಂಟೆಗೆ ವಿಧಾನಮಂಡಲದ ಕಲಾಪಗಳು ಪ್ರಸಾರವಾಗುತ್ತಿತ್ತು. ರಾಜಕೀಯದಲ್ಲಿ ಬಹು ಆಸಕ್ತಿ ಹೊಂದಿದ್ದ ನನ್ನ ಅಪ್ಪ ಬಸವಯ್ಯ ಕಡ್ಡಾಯವಾಗಿ ಆ ಕಲಾಪವನ್ನು ಕೇಳುತ್ತಿದ್ದರು. ಅವರ ಜೊತೆ ನಾನು ಕೂಡ ಅದನ್ನು ಕೇಳುತ್ತಿದ್ದಾಗ ಪ್ರತಿದಿನ ಆ ಕಲಾಪದಲ್ಲಿ ಪ್ರಸ್ತಾಪವಾಗುತ್ತಿದ್ದದ್ದು ಸಿದ್ಧಲಿಂಗಯ್ಯನವರ ಹೆಸರು! ಸಿದ್ಧಲಿಂಗಯ್ಯ ಆ ಪ್ರಶ್ನೆ ಕೇಳಿದರು, ಈ ಪ್ರಶ್ನೆ ಕೇಳಿದರು, ಸಚಿವರು ಉತ್ತರಿಸಿದರು… ಹೀಗೆ.

ಮುಂದೆ ನನ್ನ ಪದವಿ ಮತ್ತು ಬಿಎಡ್‌ನಲ್ಲಿ ಸಾಹಿತ್ಯ ಓದುವ ಸಂದರ್ಭ ಸಿಕ್ಕಿತಾದರೂ, ಆಗ ಬಹುಜನ ಚಳವಳಿಯಲ್ಲಿ ಹೊಮ್ಮಿದ ಒಂದು ಕೆಟ್ಟ ವಿಮರ್ಶೆ ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಹೀಗೆ ಈ ಎಲ್ಲರ ಬರಹಗಳನ್ನು ನಮ್ಮಿಂದ ಕಿತ್ತುಕೊಂಡಿತು ಅಥವಾ ದೂರ ತಳ್ಳಿತು. ಆ ವಿಮರ್ಶೆ ಯಾವುದೆಂದರೆ “ದಲಿತ ಸಾಹಿತ್ಯ ಅದು, ಹಾರಾಟದ ಸಾಹಿತ್ಯ, ಚೀರಾಟದ ಸಾಹಿತ್ಯ… ಹಾಗೆ ಹೀಗೆ” ಎಂದು. ಈ ಕೆಟ್ಟ ವಿಮರ್ಶೆಯ ಪ್ರಭಾವ ಎಷ್ಟರ ಮಟ್ಟಿಗಿತ್ತೆಂದರೆ, ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಹೀಗೆ ಅನೇಕ ಹಿರಿಯರ ಬರಹಗಳನ್ನು ನಾನು ಮತ್ತು ನನ್ನ ತಲೆಮಾರಿನ ಅನೇಕ ಸಾಹಿತ್ಯ ಪ್ರೇಮಿಗಳು ಓದುವ ಅವಕಾಶ ಕಳೆದುಕೊಂಡೆವು. ಈ ನಿಟ್ಟಿನಲ್ಲಿ ನಮಗೆ ನಾವೇ ಈ ಬಗ್ಗೆ ಶಪಿಸಿಕೊಳ್ಳಬೇಕಿದೆ. ಆದರೆ ಅದೃಷ್ಟವಶಾತ್ ಒಮ್ಮೆ ಸಿದ್ಧಲಿಂಗಯ್ಯನವರು ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹ ದೊಡ್ಡುಹುಲ್ಲೂರು ರುಕ್ಕೋಜಿಯವರು ಸಂಪಾದಿಸಿದ್ದ ’ಸದನದಲ್ಲಿ ಸಿದ್ಧಲಿಂಗಯ್ಯ’ ಕೃತಿ ಸಿಕ್ಕಿತು. ಅದನ್ನು ಓದಿದ ನನಗೆ ಸಿದ್ಧಲಿಂಗಯ್ಯನವರ ಅಗಾಧ ಜ್ಞಾನ, ತಳ ಸಮುದಾಯಗಳ ಹಕ್ಕುಗಳ ಬಗ್ಗೆ ಅವರಿಗಿದ್ದ ಕೆಚ್ಚು, ಹೋರಾಟದ ಶಕ್ತಿ ಅಕ್ಷರಶಃ ಪರಿಚಯ ಆಯಿತು. ಈ ಬಗ್ಗೆ ನಾನು ಸಾಮಾಜಿಕ ಜಾಲತಾಣದಲ್ಲಿ ಬರಹವೊಂದನ್ನು ಕೂಡ ಹಂಚಿಕೊಂಡಿದ್ದೆ. ಈ ಮೂಲಕ ಸಿದ್ಧಲಿಂಗಯ್ಯನವರ ಬಗ್ಗೆ ನನಗೆ ವಿಚಿತ್ರ ಪ್ರೀತಿ ಮತ್ತು ಕುತೂಹಲ ಮೂಡುತ್ತಾ ಹೋಯಿತು.

ಅಂದಹಾಗೆ ಅದೊಂದು ದಿನ 2014ರಲ್ಲಿ ಇರಬೇಕು. ಬೆಂಗಳೂರಿನ ಒಂದು ಕಾರ್ಯಕ್ರಮದಲ್ಲಿ ನಾನು ನನ್ನ ’ಎದೆಗೆ ಬಿದ್ದ ಗಾಂಧಿ’ ಕೃತಿಯನ್ನು ಸಭೆಯ ಹೊರಗಡೆ ಮಾರಾಟ ಮಾಡುತ್ತಿದ್ದೆ. ಅಲ್ಲಿಗೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಸಿದ್ಧಲಿಂಗಯ್ಯನವರು ಕಾರ್ಯಕ್ರಮ ಮುಗಿದ ನಂತರ ಪುಸ್ತಕ ಕೊಳ್ಳಲು ನನ್ನ ಬಳಿ ಬಂದಾಗ ನಾನೇ ಅವರಿಗೆ ಪುಸ್ತಕ ಕೊಡುಗೆಯಾಗಿ ನೀಡಲು ಮುಂದಾದೆ. ಆಗ ಸಿದ್ಧಲಿಂಗಯ್ಯನವರು, “ರಘೋತ್ತಮ್ ನೀವೇನಾ? ಈ ಪುಸ್ತಕ ನಾನು ಓದಿದ್ದೇನೆ. ಏನ್ ಚೆನ್ನಾಗಿ ಬರೆದಿದ್ದೀಯ. ಹೇ, ಬ್ಯೂಟಿಫುಲ್ ರೈಟಿಂಗ್. ಅದರಲ್ಲೂ ಈ ಕೃತಿಯಲ್ಲಿ ಪೌರಕಾರ್ಮಿಕರ ಕುರಿತು, ದಲಿತರು ಮತ್ತು ಕೀಳು ವೃತ್ತಿಗಳು ಎಂದು ಬರೆದಿದ್ದೀಯಲ್ಲ ಅದಂತು ಗ್ರೇಟ್” ಅಂದರು. ನನಗೆ ಆಶ್ಚರ್ಯ! ನಾನು ಪುಸ್ತಕ ಕೊಡೋಣ ಎಂದು ಹೋದರೆ ಅವರು ಆಗಲೇ ಆ ಪುಸ್ತಕ ಓದಿ ಅದರ ಲೇಖನವನ್ನು ಸಹ ಉಲ್ಲೇಖ ಮಾಡುತ್ತಿದ್ದಾರೆ! ಹಾಗೆ ಹೋಗುವಾಗ ಸಿದ್ಧಲಿಂಗಯ್ಯನವರು “ಬರಿ, ಎಷ್ಟು ಸಾಧ್ಯವೋ ಅಷ್ಟು ಬರಿ” ಎಂದು ಬೆನ್ನುತಟ್ಟಿಹೋದರು.

ಮತ್ತೊಮ್ಮೆ, ಅದು ಈ ವರ್ಷ ಫೆಬ್ರವರಿ ತಿಂಗಳು. ನಾನು ನನ್ನದೆ ’ಜೈಭೀಮ್ ಬಿಸಿನೆಸ್ ಫೋರಂ’ ಎಂಬ ಸಂಸ್ಥೆಯ ಉದ್ಘಾಟನೆಗೆ ಸಾಹಿತಿ ದೇವನೂರ ಮಹಾದೇವರವರ ಸಹೋದರ ಬಸವರಾಜ ದೇವನೂರ ಅವರನ್ನು ಕರೆಯಲು ಹೋದಾಗ ಬಸವರಾಜುರವರು ಸಿದ್ಧಲಿಂಗಯ್ಯನವರ ಜೊತೆ ದೂರವಾಣಿ ಕರೆಯಲ್ಲಿ ಮಾತಾಡುತ್ತಿದ್ದರು. ಆಗ ಅವರು ನನ್ನ ಕೈಲಿ ಫೋನ್ ಇಟ್ಟು ಸಿದ್ಧಲಿಂಗಯ್ಯನವರ ಜೊತೆ ಮಾತಾಡುವಂತೆ ಹೇಳಿದರು. ನಾನು “ಸರ್, ಚೆನ್ನಾಗಿದಿರ. ಆರೋಗ್ಯನಾ ಸರ್. ನಮ್ಮದೊಂದು ಕಾರ್ಯಕ್ರಮ ಇದೆ, ನೀವು ಬರಬೇಕಿತ್ತು” ಎಂದಾಗ ಸಿದ್ಧಲಿಂಗಯ್ಯನವರು “ಇರಲಿ ರಘೋತ್ತಮ್, ಮುಂದೆ ಒಂದು ದಿನ ಬರೋಣ. ಆದರೆ
ನೀನು ತುಂಬಾ ಚೆನ್ನಾಗಿ ಬರೆಯುತ್ತೀಯ ಕಣಪ್ಪ. ಅದರಲ್ಲೂ ಸಂಘ ಪರಿವಾರದವರಿಗೆ, ಅದು ಸಾಮಾಜಿಕ ಮಾಧ್ಯಮ ಇರಬಹುದು, ಪತ್ರಿಕೆ ಇರಬಹುದು ಸರಿಯಾಗಿ ಉತ್ತರ ಕೊಡುತ್ತಿದ್ದೀಯ. ನಮ್ಮಲ್ಲು ಒಬ್ಬ ಈ ಥರ ಬರೆಯುತ್ತಿರುವುದು, ಅದರಲ್ಲೂ ನಮ್ಮೆಲ್ಲರ ಪರವಾಗಿ ಬರೆಯುತ್ತಿದೀಯಲ್ಲ ಇದು ನಿಜಕ್ಕೂ ಒಳ್ಳೆಯದು. ಬರೆ, ಒಂಚೂರು ತಲೆ ಕೆಡಿಸಿಕೊಳ್ಳಬೇಡ, ಬರೆ” ಎಂದರು. ಅಂದಹಾಗೆ ಕೆಲವು ದಿನಗಳ ಹಿಂದೆ ಸಾಮರಸ್ಯ ವೇದಿಕೆಯ ವಾದಿರಾಜ್‌ರವರ ಲೇಖನವೊಂದಕ್ಕೆ ಪ್ರತಿಕ್ರಿಯೆಯಾಗಿ ವಾಚಕರವಾಣಿಯ ನನ್ನ ಒಂದು ಪತ್ರ ಉಲ್ಲೇಖಿಸಿ ಸಿದ್ಧಲಿಂಗಯ್ಯನವರು ಹಾಗೆ ಹೇಳಿದ್ದರು. ಆ ನಿಟ್ಟಿನಲ್ಲಿ ಸಿದ್ಧಲಿಂಗಯ್ಯನವರ ಆ ಮೆಚ್ಚುಗೆಯ ಮಾತುಗಳು, ಅದರಲ್ಲೂ ಸಾಮಾಜಿಕ ಮಾಧ್ಯಮದ ನನ್ನ ಬರಹಗಳನ್ನು ಗಮನಿಸಿ ಅವರು ನೀಡಿದ್ದ ಪ್ರತಿಕ್ರಿಯೆ ಅಕ್ಷರಶಃ ನನಗೆ ಹೊಸ ಚೈತನ್ಯ, ಶಕ್ತಿ ನೀಡಿತ್ತು.

ಆಶ್ಚರ್ಯ ಎಂದರೆ ಇದೇ ಮಾರ್ಚ್‌ನಲ್ಲಿ ಸಿದ್ಧಲಿಂಗಯ್ಯನವರು ಪುಸ್ತಕ ಬಿಡುಗಡೆ ಸಮಾರಂಭವೊಂದಕ್ಕೆ ಮೈಸೂರಿಗೆ ಬಂದರು. ಕಾರ್ಯಕ್ರಮದ ಅವರ ಭಾಷಣವನ್ನು ನನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದೆ. ಸಿದ್ಧಲಿಂಗಯ್ಯನವರು ಸುಮಾರು ಅರ್ಧ ಗಂಟೆ ಬಿಡುಗಡೆಗೊಂಡ ಆ ಕೃತಿ ಕುರಿತು ಮಾತಾಡಿದರು. ಹಾಗೆ ಕಾರ್ಯಕ್ರಮದ ಕೊನೆಯಲ್ಲಿ ಸಿದ್ಧಲಿಂಗಯ್ಯನವರನ್ನು ಭೇಟಿಮಾಡಿ ಒಂದು ಸೆಲ್ಫಿ ತೆಗೆಸಿಕೊಂಡೆ. ಅವರು ಅಷ್ಟೇ ಪ್ರೀತಿಯಿಂದ “ಬೆಂಗಳೂರಿಗೆ ಬನ್ನಿ ರಘೋತ್ತಮ್ ನನ್ನ ಮನೆಗೆ. ಅನೇಕ ಕೃತಿಗಳನ್ನು ನಿಮಗೆ ಕೊಡಬೇಕು. ಓದಿ, ಬರೆಯಿರಿ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ” ಎಂದರು. ಅಕ್ಷರಶಃ, ನೇರ ಭೇಟಿಯ ಮೂಲಕ ಅವರು ನುಡಿದ ಈ ಸ್ಫೂರ್ತಿಯ ನುಡಿಗಳು ನನ್ನಲ್ಲಿ ಮತ್ತಷ್ಟು ಚೈತನ್ಯ ತಂದಿತ್ತು. ಕೊರೊನಾ ಮುಗಿದನಂತರ ಒಮ್ಮೆ ಅವರ ಮನೆಗೆ ಹೋಗಿ ಅವರ ಸಂಗ್ರಹದ ಎಲ್ಲಾ ಪುಸ್ತಕಗಳನ್ನು ಕಣ್ತುಂಬಿಕೊಂಡು ಒಂದಷ್ಟು ಪಡೆದುಕೊಂಡು ಬರಬೇಕು ಎಂದುಕೊಂಡೆ. ದುರಂತ ಆ ಸಮಯ ಬರಲೇ ಇಲ್ಲ. ಸಿದ್ಧಲಿಂಗಯ್ಯನವರು ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರ ಸ್ಪೂರ್ತಿ ತುಂಬುವ ಮಾತುಗಳು, ಚೈತನ್ಯದಾಯಕ ಆ ನುಡಿಗಳು, ಜೊತೆಗೆ ತೆಗೆಸಿಕೊಂಡ ಒಂದಷ್ಟು ಸೆಲ್ಫಿ ಇಷ್ಟೇ ನನಗೆ ಉಳಿದದ್ದು.

ಕನ್ನಡ ಸಾರಸ್ವತ ಲೋಕ ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ. ಅದು ಗುಡಿಸಲಲ್ಲಿ ಹುಟ್ಟಿ ಮುಗಿಲೆತ್ತರಕೆ ಬೆಳೆದು ನಿಂತ ರತ್ನ. ಅದನ್ನು ದಲಿತ ಕವಿ ಎಂತಲೊ ಅಥವಾ ಬರೀ ಕವಿ ಎಂತಲೊ ಹೇಗಾದರೂ ಕರೆಯಿರಿ. ಆದರೆ ಅದು ಹುಟ್ಟು ಹಾಕಿದ ಸಾಹಿತ್ಯ ಕ್ರಾಂತಿ “ಇಕ್ರರ್ಲಾ ವದಿರ್‍ಲಾ” ಎಂಬ ಅದರ ಗಟ್ಟಿ ದನಿ ಎಂದೂ ಕೂಡ ಆರುವುದಿಲ್ಲ. ಸ್ಫೂರ್ತಿಯ ಸೆಲೆಯಾಗಿ ಚೈತನ್ಯದ ಹೊಳೆಯಾಗಿ ಸದಾ ನಮ್ಮಲ್ಲಿ ಅದು ನೆಲೆಗೊಂಡಿರುತ್ತದೆ. ಸಿದ್ಧಲಿಂಗಯ್ಯ ಸರ್, ಹೋಗಿ ಬನ್ನಿ. ನಿಮ್ಮ ಪರಂಪರೆಯನ್ನು ನಾವು ಉಳಿಸುತ್ತೇವೆ. ದಲಿತ ಸಾಹಿತ್ಯವನ್ನು ಮುಗಿಲೆತ್ತರಕೆ ಕೊಂಡೊಯ್ಯುತ್ತೇವೆ. ಎಲ್ಲರಿಗೂ ಉತ್ತರ ಕೊಡುತ್ತ ನಮ್ಮ ಜನರಿಗೂ ದನಿಯಾಗುತ್ತ ನಿಮ್ಮ ಆಶಯದಂತೆ ನಡೆಯುತ್ತೇವೆ.

ಜೈಭೀಮ್.

ರಘೋತ್ತಮ ಹೊ.ಬ

ರಘೋತ್ತಮ ಹೊ.ಬ
ಹೊಸ ತಲೆಮಾರಿನ ಪ್ರಖರ ಚಿಂತಕರಲ್ಲಿ ರಘೋತ್ತಮ ಸಹಾ ಒಬ್ಬರು. ಬಹುಜನ ಚಳವಳಿಯ ಭಾಗವಾಗಿ ಗಟ್ಟಿದನಿಯಲ್ಲಿ ವಿಚಾರ ಮಂಡಿಸುತ್ತಾ ಗಮನ ಸೆಳೆದ ಅವರು, ಅಂಬೇಡ್ಕರ್‌ನ್ನು ಆಳವಾಗಿ ಓದಿಕೊಂಡಿದ್ದು ತಮ್ಮ ನಿಷ್ಠುರ ಅನಿಸಿಕೆಗಳನ್ನು ಹೇಳಲು ಹಿಂಜರಿಯದ ವ್ಯಕ್ತಿತ್ವವುಳ್ಳವರು


ಇದನ್ನೂ ಓದಿ: ಬಿಜೆಪಿಯ ಅಧಿಕಾರ ದಾಹದ ವರ್ತನೆ ಜನರನ್ನು ಗೇಲಿ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...