Homeಕರ್ನಾಟಕಹಸಿವಿನಿಂದ ಮಕ್ಕಳ ಸಾವು: ನಾವು ‘ನಾರ್ಮಲ್’ ಆಗಿರಬಹುದೇ?

ಹಸಿವಿನಿಂದ ಮಕ್ಕಳ ಸಾವು: ನಾವು ‘ನಾರ್ಮಲ್’ ಆಗಿರಬಹುದೇ?

- Advertisement -
| ಮುತ್ತುರಾಜ್ |
ಚಿಕ್ಕಬಳ್ಳಾಪುರ ಜಿಲ್ಲೆಯ ಕಂದಮ್ಮಗಳೆರಡು ತಿನ್ನಲು ಆಹಾರವಿಲ್ಲದೇ ಮಣ್ಣು ತಿಂದ ಪರಿಣಾಮ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜರುಗಿದೆ. ಈ ಮಕ್ಕಳ ಪೋಷಕರಿಬ್ಬರೂ ಸಹ ಕುಡುಕರಾಗಿದ್ದ ಕಾರಣಕ್ಕಾಗಿ ಗಮನಹರಿಸದೇ ಹೋದದ್ದರಿಂದ ಈ ದುರ್ಘಟನೆ ನಡೆದು ಹೋಗಿದೆ ಹೇಳಲಾಗುತ್ತಿದೆ. ಇದರ ಕುರಿತು ಬಹಳಷ್ಟು ಜನರು ಕಂಬನಿ ಮಿಡಿದಿದ್ದು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ರೀತಿಯ ಘಟನೆಗಳು ನಡೆದಾಗ ಸಹಜವಾಗಿಯೇ ಬಹುತೇಕ ಮಂದಿ ಮರುಗುತ್ತಾರೆ. ಆದರೆ ದುರಂತದ ಸಂಗತಿಯೆಂದರೆ ಈ ರೀತಿಯ ದುರ್ಘಟನೆಗಳು ಪ್ರತಿನಿತ್ಯವೂ ನಡೆಯುತ್ತಲೇ ಇವೆ.
ಕಳೆದ ವರ್ಷ ಜುಲೈನಲ್ಲಿ ದೆಹಲಿಯಲ್ಲಿ ಇದೇ ರೀತಿ ಹಸಿವಿನಿಂದ ಬಳಲಿ ಮೂವರು ಮಕ್ಕಳು ಅಸುನೀಗಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕಳೆದ ಹಲವು ದಿನಗಳಿಂದ ಮಕ್ಕಳು ಏನನ್ನು ತಿಂದಿಲ್ಲದ ಕಾರಣಕ್ಕೆ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದರು. ವಿಚಾರಣೆಗಾಗಿ ಆ ಮಕ್ಕಳ ತಾಯಿಯನ್ನು ಪೋಲಿಸರು ಪ್ರಶ್ನಿಸಿದರೆ ಆಕೆ ಹೇಳಿದ್ದು ‘ಮೊದಲು ನನಗೆ ಊಟ ಕೊಡಿ’ ಎಂದು.. ಆ ಮಕ್ಕಳ ತಂದೆ ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿ ದೆಹಲಿಗೆ ಬಂದಿದ್ದು ಯಾವುದೇ ಉದ್ಯೋಗ ಸಿಗದೇ ಕೊನೆಗೆ ರಿಕ್ಷಾಗಾಡಿ ತಳ್ಳಲು ಸೇರಿದ್ದರು. ಅಲ್ಲಿಯೂ ಸ್ಥಳೀಯ ರೌಡಿಗಳು ಆತನ ಗಾಡಿಯನ್ನು ವಶಪಡಿಸಿಕೊಂಡು ಕಿರುಕುಳ ಕೊಟ್ಟ ಕಾರಣದಿಂದ ಆತ ದಿಕ್ಕುತೋಚದೆ ಅಲೆಯುತ್ತಿದ್ದನು.. ಈ ಘಟನೆಗೆ ಯಾರು ಹೊಣೆ?
ಈಗ ಚಿಕ್ಕಬಳ್ಳಾಪುರದ ಕಂದಮ್ಮಗಳ ವಿಚಾರಕ್ಕೆ ಬರುವುದಾದರೆ ಇವರ ಪೋಷಕರು ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ವಲಸೆ ಹೋಗಿದ್ದರು. ತಮ್ಮ 5 ಮಕ್ಕಳ ಜೊತೆಗೆ ತನ್ನ ತಂಗಿಯ ಮಗಳನ್ನು ಸಾಕಿಕೊಂಡಿದ್ದ ನಾಗಮಣಿ ಮತ್ತು ಗಿರೀಶ್ ಇಬ್ಬರು ತೀವ್ರ ಮದ್ಯಪಾನ ವ್ಯಸನಿಗಳಾಗಿದ್ದರು. ಇವರು ದಿನ ಕುಡಿದು ಕೆಲಸ ಅರಸಿ ಹೋಗುತ್ತಿದ್ದರಿಂದ ಮಕ್ಕಳ ಊಟದ ಬಗ್ಗೆ ಯೋಚಿಸಿಲ್ಲ. ಇದರಿಂದ ಕಂಗೆಟ್ಟ ಮಕ್ಕಳು ವಿಧಿಯಿಲ್ಲದೇ ಎರಡು ಮೂರು ದಿನ ಮಣ್ಣು ತಿಂದ ಕಾರಣ ಸಾವನಪ್ಪಿವೆ. ಆರು ತಿಂಗಳ ಹಿಂದೆಯು ಸಹ ಇವರ ಸಂತೋಷ್ ಎಂಬ ಮಗುವು ಸಹ ಹಸಿವಿನಿಂದಲೇ ಸಾವನ್ನಪ್ಪಿತ್ತು ಎಂದು ತಿಳಿದು ಬಂದಿದೆ. ಆ ಕುಟುಂಬದ ಇನ್ನುಳಿದ ಮೂರು ಮಕ್ಕಳನ್ನು ಜಿಲ್ಲಾಡಳಿತದ ವತಿಯಿಂದ ಸ್ಥಳೀಯ ಅಂಗನವಾಡಿಗೆ ಸೇರಿಸಲಾಗಿದೆಯಂತೆ.
ಈ ಘಟನೆಯನ್ನು ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆ. ಈಗ ಈ ಘಟನೆಗೆ ಯಾರನ್ನು ಹೊಣೆ ಮಾಡೋಣ? ಈ ರೀತಿಯ ಘಟನೆಗಳು ನಮ್ಮನ್ನು ಅಲ್ಲಾಡಿಸುತ್ತವೆ. ಆದರೆ ಭಾರತದಲ್ಲಿ ದಿನವೊಂದಕ್ಕೆ 3000 ಮಕ್ಕಳು ಅಪೌಷ್ಟಿಕತೆಯಿಂದ ಸಾವನಪ್ಪುತ್ತಿದ್ದಾರೆ. ಹಸಿವಿನಿಂದ ಸಾಯುವುದಕ್ಕೂ, ಅಪೌಷ್ಟಿಕತೆಯಿಂದ ಸಾಯುವುದಕ್ಕೂ ಏನಾದರೂ ವ್ಯತ್ಯಾಸವಿದೆಯೇ? ನಮ್ಮ ಕುತಂತ್ರಿ ಸರ್ಕಾರಗಳು ಅಪೌಷ್ಟಿಕತೆಯಿಂದ ಸಾವು ಎಂದು ಹೇಳುತ್ತವೆಯೇ ಹೊರತು ಹಸಿವಿನಿಂದ ಸಾವು ಎನ್ನುವುದಿಲ್ಲ.
ಈ ದೇಶದಲ್ಲಿ 1000ಕ್ಕೆ 34 ಮಕ್ಕಳು ತಾಯಿಯ ಅಪೌಷ್ಠಿಕತೆಯ ಕಾರಣದಿಂದ ಗರ್ಭದಲ್ಲೇ ಅಸುನೀಗುತ್ತಿವೆ. ಈ ಅಪೌಷ್ಠಿಕತೆಯಿಂದ 9ಲಕ್ಷಕ್ಕೂ ಹೆಚ್ಚು ಮಕ್ಕಳು 5 ವರ್ಷ ತುಂಬುವ ಮೊದಲೇ ಮರಣಹೊಂದಿವೆ. ಈಗಲೂ ಭಾರತದಲ್ಲಿ ಸುಮಾರು 19 ಕೋಟಿ ಜನರು ಹಸಿವಿನಿಂದ ಜೀವನ ದೂಡುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಇದರ ಬಗ್ಗೆ ಯಾರು ಯೋಚಿಸಬೇಕು? ಇವರ ಕುರಿತು ಆಳುವ ಸರ್ಕಾರಗಳ ಕ್ರಮವೇನು? ಅದೆಷ್ಟೋ ಸಾವಿರ ಟನ್‍ಗಳಷ್ಟು ಆಹಾರ ಗೋದಾಮುಗಳಲ್ಲಿ ಕೊಳೆಯುತ್ತಿದೆ ಎಂದು ವರದಿಗಳು ಹೇಳುತ್ತಿವೆ, ಈ ವಿರೋಧಾಭಾಸಕ್ಕೆ ಏನು ಮಾಡೋಣ?
ಈಗ ನಮ್ಮ ಪಾತ್ರಕ್ಕೆ ಬರೋಣ. ಆಹಾರ ಎಂಬ ಮೂಲಭೂತ ಅಗತ್ಯದ ಹಕ್ಕಿನ ಕುರಿತು ನಾವೆಷ್ಟು ಚರ್ಚಿಸಿದ್ದೇವೆ? ಇದಕ್ಕೆ ಹೊಂದಿಕೊಂಡಿರುವ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ವಿಚಾರಕ್ಕಾಗಿ ಎಷ್ಟು ಹೋರಾಡಿದ್ದೇವೆ? ಜನರ ನೈಜ ಸಮಸ್ಯೆಗಳನ್ನು ಮರೆಮಾಚಿ ಜಾತಿ, ಧರ್ಮ, ಸೈನ್ಯ ಇತ್ಯಾದಿ ಭಾವನಾತ್ಮಕ ವಿಚಾರಗಳಿಗೆ ಎಳೆಯುವ ಕಪಟ ಸರ್ಕಾರಗಳ ಜಾಲದಲ್ಲಿಯೇ ನಾವಿದ್ದೇವೆಯೇ? ಈ ದೇಶದ 73% ಸಂಪತ್ತನ್ನು ಕೇವಲ 1% ಬಂಡವಾಳಶಾಹಿ ಶ್ರೀಮಂತರು ಲೂಟಿ ಹೊಡೆಯುತ್ತಿರುವಾಗ ನಾವು ದನಿ ಎತ್ತಿದ್ದೇವೆಯೇ? ಓಟು ಹಾಕುವ ಮುನ್ನ ಬಡಜನರ ಪರ ಈ ನೀತಿ ತನ್ನಿ ಎಂದು ರಾಜಕಾರಣಿಗಳಿಗೆ ಒತ್ತಡ ತಂದಿದ್ದೇವೆಯೇ?
ಅದೆಲ್ಲಾ ಹೋಗಲಿ ಕೇರಳದಲ್ಲಿ ಮಧು ಎಂಬಾತ ಹಸಿವು ತಾಳಲಾರದೇ 2 ಕೆ.ಜಿ ಅಕ್ಕಿ ಕದ್ದ ಎಂಬ ಕಾರಣಕ್ಕೆ ಆತನನ್ನು ಹೊಡೆದು ಸಾಯಿಸಿಯೇಬಿಟ್ಟರು. ಊಟ ಡೆಲಿವರಿ ಮಾಡುವ ಹುಡುಗನೊಬ್ಬ ಸ್ವಲ್ಪ ಆಹಾರ ತಿಂದಿದ್ದಕ್ಕೆ ಪ್ರಪಂಚವೇ ಮುಳುಗಿ ಹೋಯಿತು ಎಂಬು ಬೊಬ್ಬಿರದಲ್ಲ? ಆತನನ್ನ ಹೇಗೆ ನಡೆಸಿಕೊಂಡಿತು ನಮ್ಮ ಸಮಾಜ? ಇದೆಲ್ಲವನ್ನು ಎಷ್ಟು ಜನ ಪ್ರಶ್ನಿಸಿದ್ದೇವೆ?
ಇಲ್ಲದಿದ್ದಲ್ಲಿ ಈ ಮಕ್ಕಳ ಸಾವಿಗೆ ಮರುಗಲು ನಮಗೆ ಅರ್ಹತೆ ಇದೆಯೇ? ಎಲ್ಲಿಯವರೆಗೂ ಆಳುವ ವರ್ಗಗಳ ಜನಪರವಾಗಿ ಕೆಲಸ ಮಾಡುವಂತೆ ನಾವು ಒತ್ತಾಯಿಸುವುದಿಲ್ಲವೋ ಅಲ್ಲಿಯವರೆಗೆ ಚಿಕ್ಕಬಳ್ಳಾಪುರದಿಂದ ದೆಹಲಿಯವರೆಗೂ ಈ ಸಾವುಗಳು ನಡೆಯುತ್ತಲೇ ಇರುತ್ತವೆ. ನಾವು ಒಂದಷ್ಟು ಕಂಬನಿ ಸುರಿಸಿ ನಂತರ ನಾರ್ಮಲ್ ಆಗಿ ಇದ್ದುಬಿಡುತ್ತೇವೆ. ಇನ್ನು ಮುಂದೆ ತುಂಬಾ ನಾರ್ಮಲ್ ಆಗಿರುವುದು ಬೇಡ; ಏಕೆಂದರೆ ಈ ದೇಶ ನಾರ್ಮಲ್ ಆಗಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...