Homeಕರ್ನಾಟಕಹಸಿವಿನಿಂದ ಮಕ್ಕಳ ಸಾವು: ನಾವು ‘ನಾರ್ಮಲ್’ ಆಗಿರಬಹುದೇ?

ಹಸಿವಿನಿಂದ ಮಕ್ಕಳ ಸಾವು: ನಾವು ‘ನಾರ್ಮಲ್’ ಆಗಿರಬಹುದೇ?

- Advertisement -
| ಮುತ್ತುರಾಜ್ |
ಚಿಕ್ಕಬಳ್ಳಾಪುರ ಜಿಲ್ಲೆಯ ಕಂದಮ್ಮಗಳೆರಡು ತಿನ್ನಲು ಆಹಾರವಿಲ್ಲದೇ ಮಣ್ಣು ತಿಂದ ಪರಿಣಾಮ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜರುಗಿದೆ. ಈ ಮಕ್ಕಳ ಪೋಷಕರಿಬ್ಬರೂ ಸಹ ಕುಡುಕರಾಗಿದ್ದ ಕಾರಣಕ್ಕಾಗಿ ಗಮನಹರಿಸದೇ ಹೋದದ್ದರಿಂದ ಈ ದುರ್ಘಟನೆ ನಡೆದು ಹೋಗಿದೆ ಹೇಳಲಾಗುತ್ತಿದೆ. ಇದರ ಕುರಿತು ಬಹಳಷ್ಟು ಜನರು ಕಂಬನಿ ಮಿಡಿದಿದ್ದು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ರೀತಿಯ ಘಟನೆಗಳು ನಡೆದಾಗ ಸಹಜವಾಗಿಯೇ ಬಹುತೇಕ ಮಂದಿ ಮರುಗುತ್ತಾರೆ. ಆದರೆ ದುರಂತದ ಸಂಗತಿಯೆಂದರೆ ಈ ರೀತಿಯ ದುರ್ಘಟನೆಗಳು ಪ್ರತಿನಿತ್ಯವೂ ನಡೆಯುತ್ತಲೇ ಇವೆ.
ಕಳೆದ ವರ್ಷ ಜುಲೈನಲ್ಲಿ ದೆಹಲಿಯಲ್ಲಿ ಇದೇ ರೀತಿ ಹಸಿವಿನಿಂದ ಬಳಲಿ ಮೂವರು ಮಕ್ಕಳು ಅಸುನೀಗಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕಳೆದ ಹಲವು ದಿನಗಳಿಂದ ಮಕ್ಕಳು ಏನನ್ನು ತಿಂದಿಲ್ಲದ ಕಾರಣಕ್ಕೆ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದರು. ವಿಚಾರಣೆಗಾಗಿ ಆ ಮಕ್ಕಳ ತಾಯಿಯನ್ನು ಪೋಲಿಸರು ಪ್ರಶ್ನಿಸಿದರೆ ಆಕೆ ಹೇಳಿದ್ದು ‘ಮೊದಲು ನನಗೆ ಊಟ ಕೊಡಿ’ ಎಂದು.. ಆ ಮಕ್ಕಳ ತಂದೆ ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿ ದೆಹಲಿಗೆ ಬಂದಿದ್ದು ಯಾವುದೇ ಉದ್ಯೋಗ ಸಿಗದೇ ಕೊನೆಗೆ ರಿಕ್ಷಾಗಾಡಿ ತಳ್ಳಲು ಸೇರಿದ್ದರು. ಅಲ್ಲಿಯೂ ಸ್ಥಳೀಯ ರೌಡಿಗಳು ಆತನ ಗಾಡಿಯನ್ನು ವಶಪಡಿಸಿಕೊಂಡು ಕಿರುಕುಳ ಕೊಟ್ಟ ಕಾರಣದಿಂದ ಆತ ದಿಕ್ಕುತೋಚದೆ ಅಲೆಯುತ್ತಿದ್ದನು.. ಈ ಘಟನೆಗೆ ಯಾರು ಹೊಣೆ?
ಈಗ ಚಿಕ್ಕಬಳ್ಳಾಪುರದ ಕಂದಮ್ಮಗಳ ವಿಚಾರಕ್ಕೆ ಬರುವುದಾದರೆ ಇವರ ಪೋಷಕರು ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ವಲಸೆ ಹೋಗಿದ್ದರು. ತಮ್ಮ 5 ಮಕ್ಕಳ ಜೊತೆಗೆ ತನ್ನ ತಂಗಿಯ ಮಗಳನ್ನು ಸಾಕಿಕೊಂಡಿದ್ದ ನಾಗಮಣಿ ಮತ್ತು ಗಿರೀಶ್ ಇಬ್ಬರು ತೀವ್ರ ಮದ್ಯಪಾನ ವ್ಯಸನಿಗಳಾಗಿದ್ದರು. ಇವರು ದಿನ ಕುಡಿದು ಕೆಲಸ ಅರಸಿ ಹೋಗುತ್ತಿದ್ದರಿಂದ ಮಕ್ಕಳ ಊಟದ ಬಗ್ಗೆ ಯೋಚಿಸಿಲ್ಲ. ಇದರಿಂದ ಕಂಗೆಟ್ಟ ಮಕ್ಕಳು ವಿಧಿಯಿಲ್ಲದೇ ಎರಡು ಮೂರು ದಿನ ಮಣ್ಣು ತಿಂದ ಕಾರಣ ಸಾವನಪ್ಪಿವೆ. ಆರು ತಿಂಗಳ ಹಿಂದೆಯು ಸಹ ಇವರ ಸಂತೋಷ್ ಎಂಬ ಮಗುವು ಸಹ ಹಸಿವಿನಿಂದಲೇ ಸಾವನ್ನಪ್ಪಿತ್ತು ಎಂದು ತಿಳಿದು ಬಂದಿದೆ. ಆ ಕುಟುಂಬದ ಇನ್ನುಳಿದ ಮೂರು ಮಕ್ಕಳನ್ನು ಜಿಲ್ಲಾಡಳಿತದ ವತಿಯಿಂದ ಸ್ಥಳೀಯ ಅಂಗನವಾಡಿಗೆ ಸೇರಿಸಲಾಗಿದೆಯಂತೆ.
ಈ ಘಟನೆಯನ್ನು ನೆನೆಸಿಕೊಂಡರೆ ಮೈ ಜುಂ ಎನ್ನುತ್ತದೆ. ಈಗ ಈ ಘಟನೆಗೆ ಯಾರನ್ನು ಹೊಣೆ ಮಾಡೋಣ? ಈ ರೀತಿಯ ಘಟನೆಗಳು ನಮ್ಮನ್ನು ಅಲ್ಲಾಡಿಸುತ್ತವೆ. ಆದರೆ ಭಾರತದಲ್ಲಿ ದಿನವೊಂದಕ್ಕೆ 3000 ಮಕ್ಕಳು ಅಪೌಷ್ಟಿಕತೆಯಿಂದ ಸಾವನಪ್ಪುತ್ತಿದ್ದಾರೆ. ಹಸಿವಿನಿಂದ ಸಾಯುವುದಕ್ಕೂ, ಅಪೌಷ್ಟಿಕತೆಯಿಂದ ಸಾಯುವುದಕ್ಕೂ ಏನಾದರೂ ವ್ಯತ್ಯಾಸವಿದೆಯೇ? ನಮ್ಮ ಕುತಂತ್ರಿ ಸರ್ಕಾರಗಳು ಅಪೌಷ್ಟಿಕತೆಯಿಂದ ಸಾವು ಎಂದು ಹೇಳುತ್ತವೆಯೇ ಹೊರತು ಹಸಿವಿನಿಂದ ಸಾವು ಎನ್ನುವುದಿಲ್ಲ.
ಈ ದೇಶದಲ್ಲಿ 1000ಕ್ಕೆ 34 ಮಕ್ಕಳು ತಾಯಿಯ ಅಪೌಷ್ಠಿಕತೆಯ ಕಾರಣದಿಂದ ಗರ್ಭದಲ್ಲೇ ಅಸುನೀಗುತ್ತಿವೆ. ಈ ಅಪೌಷ್ಠಿಕತೆಯಿಂದ 9ಲಕ್ಷಕ್ಕೂ ಹೆಚ್ಚು ಮಕ್ಕಳು 5 ವರ್ಷ ತುಂಬುವ ಮೊದಲೇ ಮರಣಹೊಂದಿವೆ. ಈಗಲೂ ಭಾರತದಲ್ಲಿ ಸುಮಾರು 19 ಕೋಟಿ ಜನರು ಹಸಿವಿನಿಂದ ಜೀವನ ದೂಡುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಇದರ ಬಗ್ಗೆ ಯಾರು ಯೋಚಿಸಬೇಕು? ಇವರ ಕುರಿತು ಆಳುವ ಸರ್ಕಾರಗಳ ಕ್ರಮವೇನು? ಅದೆಷ್ಟೋ ಸಾವಿರ ಟನ್‍ಗಳಷ್ಟು ಆಹಾರ ಗೋದಾಮುಗಳಲ್ಲಿ ಕೊಳೆಯುತ್ತಿದೆ ಎಂದು ವರದಿಗಳು ಹೇಳುತ್ತಿವೆ, ಈ ವಿರೋಧಾಭಾಸಕ್ಕೆ ಏನು ಮಾಡೋಣ?
ಈಗ ನಮ್ಮ ಪಾತ್ರಕ್ಕೆ ಬರೋಣ. ಆಹಾರ ಎಂಬ ಮೂಲಭೂತ ಅಗತ್ಯದ ಹಕ್ಕಿನ ಕುರಿತು ನಾವೆಷ್ಟು ಚರ್ಚಿಸಿದ್ದೇವೆ? ಇದಕ್ಕೆ ಹೊಂದಿಕೊಂಡಿರುವ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ವಿಚಾರಕ್ಕಾಗಿ ಎಷ್ಟು ಹೋರಾಡಿದ್ದೇವೆ? ಜನರ ನೈಜ ಸಮಸ್ಯೆಗಳನ್ನು ಮರೆಮಾಚಿ ಜಾತಿ, ಧರ್ಮ, ಸೈನ್ಯ ಇತ್ಯಾದಿ ಭಾವನಾತ್ಮಕ ವಿಚಾರಗಳಿಗೆ ಎಳೆಯುವ ಕಪಟ ಸರ್ಕಾರಗಳ ಜಾಲದಲ್ಲಿಯೇ ನಾವಿದ್ದೇವೆಯೇ? ಈ ದೇಶದ 73% ಸಂಪತ್ತನ್ನು ಕೇವಲ 1% ಬಂಡವಾಳಶಾಹಿ ಶ್ರೀಮಂತರು ಲೂಟಿ ಹೊಡೆಯುತ್ತಿರುವಾಗ ನಾವು ದನಿ ಎತ್ತಿದ್ದೇವೆಯೇ? ಓಟು ಹಾಕುವ ಮುನ್ನ ಬಡಜನರ ಪರ ಈ ನೀತಿ ತನ್ನಿ ಎಂದು ರಾಜಕಾರಣಿಗಳಿಗೆ ಒತ್ತಡ ತಂದಿದ್ದೇವೆಯೇ?
ಅದೆಲ್ಲಾ ಹೋಗಲಿ ಕೇರಳದಲ್ಲಿ ಮಧು ಎಂಬಾತ ಹಸಿವು ತಾಳಲಾರದೇ 2 ಕೆ.ಜಿ ಅಕ್ಕಿ ಕದ್ದ ಎಂಬ ಕಾರಣಕ್ಕೆ ಆತನನ್ನು ಹೊಡೆದು ಸಾಯಿಸಿಯೇಬಿಟ್ಟರು. ಊಟ ಡೆಲಿವರಿ ಮಾಡುವ ಹುಡುಗನೊಬ್ಬ ಸ್ವಲ್ಪ ಆಹಾರ ತಿಂದಿದ್ದಕ್ಕೆ ಪ್ರಪಂಚವೇ ಮುಳುಗಿ ಹೋಯಿತು ಎಂಬು ಬೊಬ್ಬಿರದಲ್ಲ? ಆತನನ್ನ ಹೇಗೆ ನಡೆಸಿಕೊಂಡಿತು ನಮ್ಮ ಸಮಾಜ? ಇದೆಲ್ಲವನ್ನು ಎಷ್ಟು ಜನ ಪ್ರಶ್ನಿಸಿದ್ದೇವೆ?
ಇಲ್ಲದಿದ್ದಲ್ಲಿ ಈ ಮಕ್ಕಳ ಸಾವಿಗೆ ಮರುಗಲು ನಮಗೆ ಅರ್ಹತೆ ಇದೆಯೇ? ಎಲ್ಲಿಯವರೆಗೂ ಆಳುವ ವರ್ಗಗಳ ಜನಪರವಾಗಿ ಕೆಲಸ ಮಾಡುವಂತೆ ನಾವು ಒತ್ತಾಯಿಸುವುದಿಲ್ಲವೋ ಅಲ್ಲಿಯವರೆಗೆ ಚಿಕ್ಕಬಳ್ಳಾಪುರದಿಂದ ದೆಹಲಿಯವರೆಗೂ ಈ ಸಾವುಗಳು ನಡೆಯುತ್ತಲೇ ಇರುತ್ತವೆ. ನಾವು ಒಂದಷ್ಟು ಕಂಬನಿ ಸುರಿಸಿ ನಂತರ ನಾರ್ಮಲ್ ಆಗಿ ಇದ್ದುಬಿಡುತ್ತೇವೆ. ಇನ್ನು ಮುಂದೆ ತುಂಬಾ ನಾರ್ಮಲ್ ಆಗಿರುವುದು ಬೇಡ; ಏಕೆಂದರೆ ಈ ದೇಶ ನಾರ್ಮಲ್ ಆಗಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....