Homeಮುಖಪುಟಒಂದೊಳ್ಳೆ ಅವಕಾಶ ಕಳೆದುಕೊಂಡ ಒಕ್ಕೂಟ ಬಜೆಟ್ 2021: ಪ್ರೊ. ಅಮಿತ್ ಬಾಸೋಲೆ

ಒಂದೊಳ್ಳೆ ಅವಕಾಶ ಕಳೆದುಕೊಂಡ ಒಕ್ಕೂಟ ಬಜೆಟ್ 2021: ಪ್ರೊ. ಅಮಿತ್ ಬಾಸೋಲೆ

- Advertisement -
- Advertisement -

ಭಾರತೀಯ ಕಾರ್ಮಿಕರ ಮೇಲೆ ಕೊರೊನಾ ಸಾಂಕ್ರಾಮಿಕ ತಂದ ಅತ್ಯಂತ ಸಂಕಷ್ಟಕರ ದಿನಗಳ ನಂತರ ಬಂದ ಈ ಬಜೆಟ್ ಮೇಲೆ ಅನೇಕರಿಗೆ ಅನೇಕ ನಿರೀಕ್ಷೆಗಳಿದ್ದವು. ಈ ಬಜೆಟ್‌ನಿಂದ ಇದ್ದ ಕೆಲವು ನಿರೀಕ್ಷೆಗಳು; ನರೇಗಾ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಗೆ ಹೆಚ್ಚಿನ ಬೆಂಬಲವನ್ನು ಮುಂದುವರೆಸುವುದು, ಕನಿಷ್ಠ ಇನ್ನೊಂದು ವರ್ಷದ ತನಕ ಹೆಚ್ಚುವರಿ ಆಹಾರ ಸಬ್ಸಿಡಿಗಳನ್ನು ಮುಂದುವರೆಸುವುದು, ಇನ್ನೊಂದು ಸುತ್ತಿನ ಹಣ ವರ್ಗಾವಣೆ ಹಾಗೂ ಹೊಸ ನಗರಪ್ರದೇಶಗಳಿಗೆ ಅನ್ವಯಿಸುವ ಒಂದು ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಾರಂಭಿಸುವ ಸಾಧ್ಯತೆ. ಇವೆಲ್ಲವುಗಳನ್ನು ಅಥವಾ ಇವುಗಳಲ್ಲಿ ಕೆಲವನ್ನಾದರೂ ಮಾಡಿದ್ದರೆ, ಅದರಿಂದ ಎರಡು ಅತ್ಯಂತ ಮಹತ್ವಪೂರ್ಣ ಪರಿಣಾಮಗಳು ಆಗುತ್ತಿದ್ದವು- ಮೊದಲನೆಯದಾಗಿ, ಯಾರೆಲ್ಲ ಹಲವಾರು ತಿಂಗಳುಗಳ ಕಾಲ ಕೆಲಸ ಮತ್ತು ಆದಾಯವನ್ನು ಕಳೆದುಕೊಂಡಿದ್ದಾರೋ, ಅವರಿಗೆ ಪರಿಹಾರ ನೀಡುವಲ್ಲಿ ಇವುಗಳು ನೇರವಾಗಿ ಸಹಕಾರಿಯಾಗುತ್ತಿದ್ದವು ಹಾಗೂ ಎರಡನೆಯದು ಪರೋಕ್ಷವಾದದ್ದು – ಮೇಲಿನ ಎಲ್ಲವನ್ನು ಒಳಗೊಳ್ಳುವ ಒಂದು ರೀತಿಯಲ್ಲಿ, ಇವುಗಳಿಂದ ಬೇಡಿಕೆ ಹೆಚ್ಚಿಸಬಹುದಾಗಿತ್ತು.

ಆದರೆ, ಈ ನಿರೀಕ್ಷೆಗಳು ಹುಸಿಯಾಗಿವೆ. ಈ ಸಾಲಿನ ಬಜೆಟ್, ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಸವಾಲನ್ನು ಒಪ್ಪಿಕೊಂಡಿದೆ ಆದರೆ ಈ ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚಿದ ಅಸಮಾನತೆ ಮತ್ತು ಕ್ಷೀಣಿಸುತ್ತಿರುವ ಕಲ್ಯಾಣ ಪರಿಹಾರವನ್ನು ಉದ್ದೇಶಿಸಲು ವಿಫಲವಾಗಿದೆ. ಅನೇಕ ಸಮೀಕ್ಷೆಗಳು ಸೂಚಿಸಿದಂತೆ, ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಉದ್ಯೋಗ ಭದ್ರತೆ ಇಲ್ಲದ ಅಸಂಘಟಿಕ ವಲಯದ ಕಾರ್ಮಿಕರು ಮತ್ತು ವೇತನ ಪಡೆಯುತ್ತಿದ್ದ ನೌಕರರು ಉದ್ಯೋಗ ಕಳೆದುಕೊಂಡಿದ್ದರು. ಹಾಗೂ ಇವೇ ವರದಿಗಳ ಪ್ರಕಾರ ಕಳೆದ ನವೆಂಬರ್ 2020ರ ತನಕ ಇದರಲ್ಲಿ ಹೆಚ್ಚಿನವರು ಇನ್ನೂ ಚೇತರಿಸಿಕೊಂಡಿಲ್ಲ. ರಾಷ್ಟ್ರೀಯ ಪ್ರಾತಿನಿಧ್ಯ ಹೊಂದಿದ ಸಿಎಮ್‌ಐಇಯ (ಸೆಂಟರ್ ಫಾರ್ ಮೊನಿಟರಿಂಗ್ ಇಂಡಿಯನ್ ಎಕಾನಮಿ) ಅಂಕಿಅಂಶಗಳೂ ಕೂಡ ಹೇಳುವುದೂ ಇದೆ ಆಗಿದೆ; ಬೃಹತ್ ಸಂಖ್ಯೆಯಲ್ಲಿ ಜೀವನೋಪಾಯದ ನಷ್ಟ ಮತ್ತು ದಿಢೀರನೆ ಹೆಚ್ಚಿದ ಅಸಮಾನತೆ. ಈ ಬಜೆಟ್‌ನಲ್ಲಿ ಈ ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ಯಾವುದೇ ಪರಿಣಾಮಕಾರಿಯಾದ ಪರಿಹಾರ ಕಾಣುತ್ತಿಲ್ಲ.

ನರೇಗ
PC: PTI

ಈ ಬಿಕ್ಕಟ್ಟಿನಲ್ಲಿ ನರೇಗಾ ಯೋಜನೆಯು ನಿರ್ಣಾಯಕವಾದ ಒಂದು ಸುರಕ್ಷಾ ಜಾಲವಾಗಿತ್ತು ಆದರೆ ಅದಕ್ಕಿರುವ ಹಂಚಿಕೆಯನ್ನು 1.1 ಲಕ್ಷ ಕೋಟಿಯಿಂದ 73 ಸಾವಿರ ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ. ಅದೇ ರೀತಿಯಲ್ಲಿ, ಈ ಸಾಂಕ್ರಾಮಿಕದ ಅವಧಿಯಲ್ಲಿ 42 ಸಾವಿರ ಕೋಟಿ ರೂಪಾಯಿಗಳನ್ನು ವಿತರಿಸಿದ ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮಕ್ಕೆ, (National Social Assistance Programme) (ಇದು ಹಿರಿಯ ನಾಗರಿಕರ, ವಿಕಲಚೇತನರ ಮತ್ತು ವಿಧವೆಯರ ಪಿಂಚಣಿ ಒಳಗೊಂಡಿದೆ.), ಹಂಚಿಕೆಯನ್ನು ಈ ಮುಂಚೆ ಇದ್ದ 9 ಸಾವಿರ ಕೋಟಿಗೆ ಮರುಕಳಿಸಲಾಗಿದೆ. ಪಡಿತರ ವ್ಯವಸ್ಥೆಗೆ ಹಂಚಿಕೆಯು 2019-20 ರಲ್ಲಿ 75 ಸಾವಿರ ಕೋಟಿ ಇತ್ತು, ಅದು ಗಣನೀಯವಾಗಿ ಹೆಚ್ಚಳವಾಗಿ ಮರುವರ್ಷ 2 ಲಕ್ಷ ಕೋಟಿ ಆಯಿತು ಹಾಗೂ 20-21ರಲ್ಲಿ 3.4 ಲಕ್ಷ ಕೋಟಿ ತಲುಪಿತು. ಆದರೆ ಇದು, ಪಡಿತರವನ್ನು ವಿಸ್ತರಿಸಿದ್ದರ ಪರಿಣಾಮವಾಗಿ ಆಗಿಲ್ಲ, ಇದು ಆಗಿದ್ದು ಏಕೆಂದರೆ ಸರಕಾರವು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಮಾಡುತ್ತಿದ್ದ ಪೇಮೆಂಟ್‌ಅನ್ನು ಕೊನೆಗೂ ಪಾವತಿಸಿದ್ದರಿಂದ. ಮುಂಚಿನಂತೆ ಕಡಿಮೆ ಮೊತ್ತದ ವಿತ್ತೀಯ ಕೊರತೆಯ ಸಂಖ್ಯೆಗಳನ್ನು ಬಿಂಬಿಸಲು ಅದನ್ನು ಉಳಿಸಿಕೊಂಡಿಲ್ಲ. ಇದು ಒಳ್ಳೆಯ ವಿಷಯವೇ ಆದರೆ, ಇದರರ್ಥ ಹೆಚ್ಚುವರಿ ಆಹಾರ ಪರಿಹಾರ ಎಂತಲ್ಲ.

ಒಟ್ಟಾರೆಯಾಗಿ, ಈ ಬಜೆಟ್ ಬಹಿರಂಗಪಡಿಸುವುದೇನೆಂದರೆ, ಕಳೆದ ವರ್ಷ ಕೇಂದ್ರ ಸರಕಾರ ನೀಡಿದ ವಿತ್ತೀಯ ಬೆಂಬಲದ ನಿಜವಾದ ವ್ಯಾಪ್ತಿಯು ಈ ಮುಂಚೆ ಏನು ಬಿಂಬಿಸಿಕೊಂಡಿತ್ತೋ, ಅದಕ್ಕಿಂತಲೂ ತುಂಬಾ ಕಡಿಮೆ ಇದೆ ಹಾಗೂ ನಾವು ಹೋಲಿಸಬಹುದಾದ ಇತರ ರಾಷ್ಟ್ರಗಳಿಗಿಂತಲೂ ತುಂಬಾ ಕಡಿಮೆ ಇದೆ. ವಿತ್ತೀಯ ಕೊರೆತೆ- ಜಿಡಿಪಿಗೆ ಇರುವ ಅನುಪಾತ 9.5%ಗೆ ಜಿಗಿದಿದ್ದರೂ, ಇದನ್ನು ಒಂದು ಸ್ಟಿಮ್ಯುಲಸ್ ಅಥವಾ ಉತ್ತೇಜನದ ಅಂಶ ಎಂದು ಎರಡು ಕಾರಣಗಳಿಂದ ಪರಿಗಣಿಸಬಾರದು; ಒಂದು, ಈ ಹೆಚ್ಚುವರ ಖರ್ಚಿನ ದೊಡ್ಡ ಭಾಗ ವಾಸ್ತವದಲ್ಲಿ ಒಂದು ರೀತಿಯ ಕ್ಲೀನ್ ಅಪ್ ಕಸರತ್ತಾಗಿದೆ. ಅಂದರೆ ಈ ಮುಂಚೆ ಪುಸ್ತಕದ ಹೊರಗೆ ಇಟ್ಟಿದ್ದ ಲೆಕ್ಕಗಳನ್ನು ಅಧಿಕೃತವಾಗಿ ಪುಸ್ತಕದಲ್ಲಿ ತರುವುದರಿಂದ ಆಗಿರುವುದು, ಉದಾಹರಣೆಗೆ ಮೇಲೆ ಹೇಳಿದಂತೆ ಎಫ್‌ಸಿಐಗೆ ಪಾವತಿ ಮಾಡಿದ್ದು.

ಎರಡನೆಯದಾಗಿ, ವಿತ್ತೀಯ ಕೊರತೆಯಲ್ಲಿ ಆದ ಹೆಚ್ಚಳಕ್ಕೆ ಕಾರಣ ಖರ್ಚು ಮಾಡುವಲ್ಲಿ ಆಗುವ ಹೆಚ್ಚಳದ ಜೊತೆಗೆ ಆದಾಯದಲ್ಲಿ (ರೆವೆನ್ಯೂ)ನಲ್ಲಿ ಆದ ಕುಸಿತವೂ ಕಾರಣವಾಗಿವೆ. 2019-20ರಲ್ಲಿ ಇದ್ದ 10.2 ಲಕ್ಷ ಕೋಟಿಯ ವಿತ್ತೀಯ ಕೊರತೆಯು ಹೆಚ್ಚಳವಾಗಿ 2020-21ರಲ್ಲಿ 18.9 ಲಕ್ಷ ಕೋಟಿಯಾಗಿದೆ. ಇದರಲ್ಲಿ 4.6 ಲಕ್ಷ ಕೋಟಿ ಕೊರತೆ, ಆರ್ಥಿಕ ಚಟುವಟಿಕೆಗಳು ನಿಧಾನಗೊಂಡಿದ್ದರಿಂದ ಆದಾಯದಲ್ಲಿ ಆದ ಕೊರತೆಯಿಂದ ಆದದ್ದು ಹಾಗೂ ಇನ್ನೂ 4.1 ಲಕ್ಷ ಕೋಟಿ ಕೊರತೆ ಆಗಿದ್ದು ಬಜೆಟ್ ಅಂದಾಜಿನ ಮೇಲಿನ ಖರ್ಚಿನಲ್ಲಿ ಆದ ಹೆಚ್ಚಳದಿಂದ.

ಹಾಗಾಗಿ, ನಿಜವಾದ ವಿತ್ತೀಯ ಉತ್ತೇಜನ ಅಂಶ, ಅಂದರೆ 2020-21ರ ಬಜೆಟ್‌ಗೆ ಇರುವುದಕ್ಕಿಂತ ಹೆಚ್ಚಿನ ಖರ್ಚು ಕೇವಲ ಜಿಡಿಪಿಯ 2% ರಷ್ಟು ಮಾತ್ರ, ಇದು ಸರಕಾರ ತನ್ನ ಜಾಹಿರಾತಿನಲ್ಲಿ ಹೇಳಿದ 10% ಹೆಡ್‌ಲೈನ್ ಸಂಖ್ಯೆಗಿಂತ ತುಂಬಾ ಕಡಿಮೆಯಾಗಿದೆ. ಇನ್ನು ಮಿಕ್ಕಿದ್ದು, ಮೊದಲೇ ಒಪ್ಪಿಕೊಂಡ ಖರ್ಚುಗಳು (ಉದಾ, ಪಿಎಂ ಕಿಸಾನ್ ಪಾವತಿಗಾಗಿ) ಹಾಗೂ ಎಂಎಸ್‌ಎಂಇಗಳಿಗೆ ತುರ್ತು ಸಾಲದ ಯೋಜನೆಯಂತಹ ವಿತ್ತೀಯ ಕ್ರಮಗಳಿಗಾಗಿ.

ಇದಲ್ಲದೆ, 2020-21ರ ಪರಿಷ್ಕೃತ ಅಂದಾಜನ್ನು ಹೋಲಿಸಿದರೆ 2021-22ರಲ್ಲಿ ಪ್ರಸ್ತಾಪಿಸಿದ ಹೆಚ್ಚುವರಿ ಖರ್ಚು ಕೇವಲ 33 ಸಾವಿರ ಕೋಟಿಯಾಗಿದೆ, ಅಂದರೆ, ಮುಂದಿನ ವರ್ಷಕ್ಕೆ ಪ್ರಸ್ತಾಪಿಸಲಾದ ಖರ್ಚು, ಈ ವರ್ಷದ ಖರ್ಚಿನಷ್ಟೇ ಇದೆ ಎಂದು ಹೇಳಬಹುದು.

ಒಂದು ವೇಳೆ ಇದನ್ನು ನಾವು, ಬಂಡವಾಳ ವೆಚ್ಚ ಅಥವಾ ಮೂಲಸೌಕರ್ಯದಲ್ಲಿ ಸೂಚಿಸಿದ ಖರ್ಚಿನಲ್ಲಿ ದೊಡ್ಡ ಏರಿಕೆಯಾಗಿದ್ದನ್ನು ಸೇರಿಸಿ ನೋಡಿದರೆ, ಈ ಹೆಚ್ಚಳ ಬಂಡವಾಳೇತರ ಯೋಜನೆಗಳಲ್ಲಿ ಆಗಬೇಕಾದ ಖರ್ಚಿನ ಬದಲಿಗೆ ಆಗಿದ್ದು ಎಂಬುದು ತಿಳಿಯುತ್ತದೆ, ಹಾಗೂ ಇದರ ಸರಾಸರಿ ಖರ್ಚು ಹೆಚ್ಚಳವಾಗದೇ, ಅಷ್ಟೇ ಇದೆ ಎಂಬುದೂ ತಿಳಿಯುತ್ತದೆ. ಈ ಬದಲಾವಣೆ ಸಾಮಾನ್ಯ ಸಂದರ್ಭದಲ್ಲಿ ಸ್ವಾಗತಾರ್ಹ ಎನಿಸಬಹುದು. ಏಕೆಂದರೆ, ಇದರರ್ಥ ಸರಕಾರವು ಕೇವಲ ವೇತನ ಪಾವತಿಸಲು ಅಥವಾ ಇತರ ಮರುಕಳಿಸುವ ವೆಚ್ಚಗಳಿಗೆ ಹೂಡಿಕೆ ಮಾಡದೇ ಆರ್ಥಿಕತೆಯಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂದಾಗುತ್ತದೆ. ಆದರೆ, ಈಗ ನಾವಿರುವುದು ಅಸಾಧಾರಣ ಸಮಯದಲ್ಲಿ ಮತ್ತು ಈಗ ತಮ್ಮ ಆದಾಯವನ್ನು ಕಳೆದುಕೊಂಡ ಕುಟುಂಬಗಳಿಗೆ ನಷ್ಟ ಭರ್ತಿ ಮಾಡಲು ಅನೇಕ ಕ್ರಮಗಳು ಅಗತ್ಯವಿದ್ದವು ಹಾಗೂ ಅವರ ಸಾಲದ ಹೊರೆಯನ್ನು ಕಡಿಮೆ ಮಾಡಲೂ ಹೆಚ್ಚಿನದನ್ನು ಮಾಡಬಹುದಾಗಿತ್ತು. ಈ ಬಜೆಟ್ ಜೀವನೋಪಾಯದ ಒಂದು ಬೃಹತ್ ಬಿಕ್ಕಟ್ಟನ್ನು ಉದ್ದೇಶಿಸದೆ ಕೈಬಿಟ್ಟಿದೆ.

ಅಮಿತ್ ಬಾಸೋಲೆ

ಅಮಿತ್ ಬಾಸೋಲೆ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ, ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಪ್ರಾಧ್ಯಾಪಕರು. ಬಡತನ, ಅಸಮಾನತೆ, ಅಸಂಘಟಿತ ಕಾರ್ಮಿಕ ವಲಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಅಮಿತ್ ಅವರು ಈ ವಿಷಯಗಳ ಬಗ್ಗೆ ಹಲವು ವರದಿಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು – ಬಜೆಟ್ ವಿಶ್ಲೇಷಣೆ ಮಾಡಿದ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...