Homeಮುಖಪುಟಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?

ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?

ಹತ್ರಾಸ್ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ‘ನ್ಯೂಸ್‌ ಲಾಂಡ್ರಿ’ ಸುದ್ದಿ ಜಾಲತಾಣ ಗ್ರೌಂಡ್ ರಿಪೋರ್ಟ್ ಮಾಡಿದೆ. ಇಲ್ಲಿನ ನಿರ್ಣಾಯಕ ಮತದಾರರಾಗಿರುವ ದಲಿತರಿಗೆ ಹತ್ರಾಸ್ ಅತ್ಯಾಚಾರ ಪ್ರಕರಣ ಮರೆಯಲಾಗದ ಘಟನೆಯಾಗಿದೆ.

- Advertisement -
- Advertisement -

“ನಾವು 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದೇವೆ. ಏಕೆಂದರೆ ಅದು ರಾಷ್ಟ್ರೀಯವಾದಿ ಪಕ್ಷವೆಂದು ತೋರಿದೆ. ನಮಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಯಾವುದೇ ಸಮಸ್ಯೆ ಇಲ್ಲ; ಇಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ನಮ್ಮ ಸಹೋದರಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ನಮ್ಮ ಅಸಮಾಧಾನವಿದೆ” ಎಂದು ರವಿ ಕುಮಾರ್ ವಾಲ್ಮೀಕಿ ಅವರು 2020ರ ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ಹೇಳುತ್ತಾರೆ. ಅತ್ಯಾಚಾರಕ್ಕೆ ಒಳಗಾದ ದಲಿತ ಅಪ್ರಾಪ್ತ ಹೆಣ್ಣು ಮಗಳು ಸಾವಿಗೀಡಾದ ಬಳಿಕ, ಆ ಹೆಣ್ಣುಮಗಳ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ರಾತ್ರೋ ರಾತ್ರಿ ಮೃತದೇಹವನ್ನು ಸುಡಲಾಗಿತ್ತು.

ಸ್ವೀಪರ್ ಆಗಿರುವ 36 ವರ್ಷದ ರವಿಕುಮಾರ್ ಅವರು, ಹತ್ರಾಸ್ ರೈಲು ನಿಲ್ದಾಣದ ಪಕ್ಕದ ಮೊಹಲ್ಲಾ ಕಾರ್ರ್‌ನಲ್ಲಿರುವ ಬಾಲಕಿಯ ನಿವಾಸದಿಂದ 7 ಕಿಮೀ ದೂರದಲ್ಲಿ ವಾಸಿಸುತ್ತಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷಗಳು ಬಿಜೆಪಿಯ ಮೇಲೆ ತಿರುಗಿಬಿದ್ದಿವೆ. ಆಡಳಿತಾರೂಢ ಬಿಜೆಪಿಯು “ಶಾಂತಿ” ಮತ್ತು “ಸುರಕ್ಷತೆ” ಬಗ್ಗೆ ಮಾತನಾಡುತ್ತಿದೆ.

2020ರ ಪ್ರಕರಣವು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ವಿಶ್ಲೇಷಿಸಲು ‘ನ್ಯೂಸ್‌ಲಾಂಡ್ರಿ’ ಸುದ್ದಿ ಜಾಲತಾಣವು ಇಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ಸುತ್ತಾಡಿದೆ.

ಇದನ್ನೂ ಓದಿರಿ: ಯುಪಿ ಕೇರಳವಾದರೆ ಅತ್ಯುತ್ತಮ ಶಿಕ್ಷಣ, ಆರೋಗ್ಯ, ಜೀವನಮಟ್ಟ ಸಿಗಲಿದೆ: ಆದಿತ್ಯನಾಥ್‌ಗೆ ಪಿಣರಾಯಿ ತಿರುಗೇಟು

ಜಿಲ್ಲೆಯು ಮೂರು ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಹತ್ರಾಸ್ (SC), ಸದಾಬಾದ್ ಮತ್ತು ಸಿಕಂದರಾ ರಾವ್ – ಈ ಕ್ಷೇತ್ರಗಳ ಪೈಕಿ ಹತ್ರಾಸ್ ಮತ್ತು ಸಿಕಂದರಾ ರಾವ್ ಭಾಗದಲ್ಲಿ ದಲಿತರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. 2017ರ ಚುನಾವಣೆಯಲ್ಲಿ, ಬಿಎಸ್‌ಪಿಯ ರಾಮ್‌ವೀರ್ ಉಪಾಧ್ಯಾಯ ಅವರು ಸದಾಬಾದ್‌ನಲ್ಲಿ ಗೆದ್ದಿದ್ದರು. ಉಳಿದ ಎರಡನ್ನು ಬಿಜೆಪಿ ಗೆದ್ದಿತ್ತು. ಉಪಾಧ್ಯಾಯ ಅವರು ಈಗ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದಾರೆ.

ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡ ಪ್ರತಿಪಕ್ಷಗಳಾದ ಎಸ್‌ಪಿ ಮತ್ತು ಆರ್‌ಎಲ್‌ಡಿಯು 2020ರ ಘಟನೆಯನ್ನು ಉಲ್ಲೇಖಿಸಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳುತ್ತಿವೆ. ಅದಕ್ಕೆ ಬಿಜೆಪಿ ಬಿರುಸಾಗಿ ಪ್ರತಿಕ್ರಿಯೆ ನೀಡುತ್ತಿದೆ.

ಯೋಗಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಮಹಿಳೆಯರು ಆಭರಣದೊಂದಿಗೆ ಹೊರಬರಲು ಸಾಧ್ಯವಿರಲಿಲ್ಲ ಎಂದು ಮಥುರಾ ಶಾಸಕ ಮತ್ತು ಯುಪಿ ಸಚಿವ ಚೌಧರಿ ಲಕ್ಷ್ಮೀನಾರಾಯಣ ಸಿಂಗ್ ಇತ್ತೀಚೆಗೆ ಹೇಳಿದ್ದರು. ಹತ್ರಾಸ್ ಮತ್ತು ಉನ್ನಾವೋ ಪ್ರಕರಣಗಳ ಕುರಿತು ಪ್ರಶ್ನಿಸಿದಾಗ ನ್ಯೂಸ್‌ಲಾಂಡ್ರಿ ಸಂದರ್ಶನವನ್ನು ನಿಲ್ಲಿಸಲು ಪ್ರಯತ್ನಿಸಿದರು. ಬಿಜೆಪಿಯ ದಲಿತ ಮುಖ ಮತ್ತು ಆಗ್ರಾ ದೇಹತ್ ಅಭ್ಯರ್ಥಿ ಬೇಬಿ ರಾಣಿ ಮೌರ್ಯ ಕೂಡ ಹತ್ರಾಸ್ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದ ತಕ್ಷಣ ನ್ಯೂಸ್‌ಲಾಂಡ್ರಿಯ ಸಂದರ್ಶನವನ್ನು ಮೊಟಕುಗೊಳಿಸಿದ್ದರು.

ದಲಿತರಾದ ಜಾತವ್‌ಗಳು ಅತಿ ಹೆಚ್ಚು ಜನಸಂಖ್ಯೆಯಲ್ಲಿರುವ ಹತ್ರಾಸ್ ಜಿಲ್ಲೆಯಲ್ಲಿ, 2020ರ ಪ್ರಕರಣವು ಅನೇಕರನ್ನು ಕಾಡುತ್ತಲೇ ಇದೆ ಎಂದು ಕುಮಾರ್ ಹೇಳುತ್ತಾರೆ. “ಸಂತ್ರಸ್ತೆಯನ್ನು ಪೋಲೀಸರು ಅಂತ್ಯಸಂಸ್ಕಾರ ಮಾಡಿದರು… ಸಮೀಪದಲ್ಲಿ ವಾಸಿಸುವ ವಾಲ್ಮೀಕಿ ಸಮುದಾಯದ ಎಲ್ಲಾ ಸದಸ್ಯರು ಅಲ್ಲಿಗೆ ಹೋಗಿದ್ದರು. ಪೊಲೀಸರು ಎಲ್ಲರನ್ನೂ ಥಳಿಸಿದರು; ನನಗೂ ಪೆಟ್ಟಾಯಿತು” ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿರಿ: ಯುಪಿ ಚುನಾವಣೆ: ಕಾಂಗ್ರೆಸ್, ಎಸ್‌ಪಿ ಮೈತ್ರಿಯಾಗಿದ್ದರೇ ಮತವಿಭಜನೆ ತಡೆಯಬಹುದಿತ್ತು- ಮಮತಾ ಬ್ಯಾನರ್ಜಿ

“ನಮ್ಮ ಜನರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಹಾಕಲಾಯಿತು. ಅವರ ಮೇಲೆ ಲಾಠಿಚಾರ್ಜ್ ಮಾಡಲಾಯಿತು. ಇಂದಿಗೂ ಅವರು ಪ್ರಕರಣಗಳ ವಿರುದ್ಧ ಹೋರಾಡುತ್ತಿದ್ದಾರೆ. ಇದೆಲ್ಲವೂ ನಮಗೆ ತುಂಬಾ ನೋವನ್ನುಂಟು ಮಾಡಿದೆ… ನಮಗೆ ಏನಾಗಿದೆಯೋ ಅದು ಅಕ್ಷಮ್ಯ… ಬಿಜೆಪಿಯ ಕೆಲವು ಕಟ್ಟಾ ಬೆಂಬಲಿಗರನ್ನು ಹೊರತುಪಡಿಸಿ, ನಾವೆಲ್ಲರೂ (ಎಸ್‌ಪಿ ನಾಯಕ) ಅಖಿಲೇಶ್ ಯಾದವ್‌ಗೆ ಮತ ಹಾಕುತ್ತೇವೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

1,200 ವಾಲ್ಮೀಕಿ ಮತದಾರರನ್ನು ಹೊಂದಿರುವ ಮೊಹಲ್ಲಾ ಕರ್‌ನಲ್ಲಿ, 57 ವರ್ಷದ ರಾಜು ವಾಲ್ಮೀಕಿ ಕೂಡ 2020ರ ಪ್ರಕರಣದತ್ತ ಬೊಟ್ಟು ಮಾಡಿದರು. “ಇಲ್ಲಿನ ಜನರು ಸಾಮೂಹಿಕವಾಗಿ ಬಿಜೆಪಿಗೆ ಮತ ಹಾಕುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜನರಲ್ಲಿ ಅಸಮಾಧಾನವಿದ್ದು, ಅದರ ಭಾರವನ್ನು ಬಿಜೆಪಿಯೇ ಅನುಭವಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು. ಕೆಲವರಿಗೆ, ಇದು ಕೇವಲ 2020ರ ಪ್ರಕರಣವಲ್ಲ, ಸಬಲೀಕರಣದ ಸಮಸ್ಯೆಯೂ ಹೌದು.

“ನೀವು ಸಂಪಾದಿಸದಿದ್ದರೆ, ಹೇಗೆ ಹಸಿವು ನೀಗುತ್ತೀರಿ? ನಮಗೆ ಮಾತನಾಡುವ ಹಕ್ಕು ಕೂಡ ಇಲ್ಲ. ನಾನು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತೇನೆ. ನಗರದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಆದರೆ ನಾನು ಹಳ್ಳಿಗೆ ಕೆಲಸಕ್ಕೆ ಹೋದಾಗ, ನನ್ನ ಬೂಟುಗಳನ್ನು ಹೊರಗೆ ಬಿಡಲು ಹೇಳುತ್ತಾರೆ. ಬೂಟುಗಳಿಲ್ಲದೆ ಎಲೆಕ್ಟ್ರಿಷಿಯನ್ ಹೇಗೆ ಕೆಲಸ ಮಾಡಬಹುದು?” ಎಂದು ಭೂರಾ ಕಾ ನಾಗ್ಲಾದ ನಿವಾಸಿ 22 ವರ್ಷದ ಸನ್ನಿ ಕುಮಾರ್‌ ಕೇಳುತ್ತಾರೆ. ಸನ್ನಿ ಕುಮಾರ್‌‌ ಜಾತವ್ ಸಮುದಾಯದವರಾಗಿದ್ದು, ಈ ಭಾಗದಲ್ಲಿ ಜಾತವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. “ನಾವು ಬೆಹೆನ್‌ಜಿ (ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ) ಅವರ ಮತದಾರರು… ಅವರೂ ನಮ್ಮ ಗ್ರಾಮಕ್ಕೆ ಬಂದಿದ್ದರು” ಎನ್ನುತ್ತಾರೆ ಕುಮಾರ್‌.

ಗ್ರಾಮದ ಇತರರಿಗೆ ಚುನಾವಣೆಯ ವಿಷಯವೇ ಉದ್ಯೋಗ. “ನಾನು ಬಿಎಸ್ಸಿ ಪದವಿ ಪಡೆದಿದ್ದೇನೆ. ನನಗೆ ಕೆಲಸ ಸಿಗುತ್ತಿಲ್ಲ. ಹಾಗಾಗಿ ಬಡಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಎಷ್ಟು ಹುಡುಗರು ತಿರುಗಾಡುತ್ತಿದ್ದಾರೆಂದು ನೀವು ನೋಡುತ್ತೀರಿ. ನಾವು ದಿನಗೂಲಿಗಳಾಗಿದ್ದು, ಈಗ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ” ಎಂದು ಅಮರ್ ಕುಮಾರ್ ಹೇಳಿದ್ದಾರೆ. ಹತ್ರಾಸ್ ಪ್ರಕರಣದ ಬಗ್ಗೆ “ಅಸಮಾಧಾನ” ಇದೆ. ಆದರೆ ಇದು “ಗೌರವದ ವಿಷಯ” ಮತ್ತು ಚುನಾವಣಾ ವಿಷಯವಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ. ಸಂತ್ರಸ್ತ ಬಾಲಕಿ ಮೇಲ್ಜಾತಿಯವರಾಗಿದ್ದರೆ, ಅವರು (ಅಧಿಕಾರಿಗಳು) ಈ ರೀತಿ ವರ್ತಿಸುತ್ತಿರಲಿಲ್ಲ ಎನ್ನುವ ಅಮರ್ ಕುಮಾರ್ ಅವರಿಗೆ ಉದ್ಯೋಗವೇ ಮುಖ್ಯ ಸಮಸ್ಯೆ.

ಇದನ್ನೂ ಓದಿರಿ: ಉತ್ತರ ಪ್ರದೇಶ ಚುನಾವಣೆ ಪೂರ್ವ ವಿಶ್ಲೇಷಣೆ: ಭಾಗ-2; ತಲೆಕೆಳಗಾಗುತ್ತಿರುವ ಕೇಸರಿಕೂಟದ ಲೆಕ್ಕಾಚಾರ

ಹತ್ರಾಸ್ ಕ್ಷೇತ್ರದ ಸಮೀಪದ ಜಾತವ್ ಪ್ರಾಬಲ್ಯದ ತಮಾನಗಢಿ ಗ್ರಾಮದಲ್ಲಿ ಮಾತಿಗೆ ಸಿಕ್ಕ ವಕೀಲ ಕುಲದೀಪ್ ಸಿಂಗ್, “ಈ (2020) ಘಟನೆಯು ಹತ್ರಾಸ್‌ಗೆ ಕಳಂಕದಂತಿದೆ. 2017ರಲ್ಲಿ ಪರಿಸ್ಥಿತಿ ಬದಲಾಗಬಹುದು ಎಂದು ನಾವು ಭಾವಿಸಿ ಬಿಜೆಪಿಗೆ ಮತ ಹಾಕಿದ್ದೇವೆ. ಆದರೆ ನಮಗೆ ಮತ್ತಷ್ಟು ಕಿರುಕುಳ ನೀಡಲಾಯಿತು. ಆಡಳಿತದಲ್ಲಿ ನಮ್ಮ ಮಾತು ಕೇಳುವವರಿಲ್ಲ. ಇದಕ್ಕೆ ವಿರುದ್ಧವಾಗಿ ಯಾರಾದರೂ ದೂರು ನೀಡಲು ಹೋದರೆ, ಅವರನ್ನು ಬೆದರಿಸಿ ಬೆದರಿಕೆ ಹಾಕಲಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ನ್ಯೂಸ್‌ಲಾಂಡ್ರಿ ಹತ್ರಾಸ್ ಸಂತ್ರಸ್ತೆಯ ಗ್ರಾಮಕ್ಕೆ ಭೇಟಿ ನೀಡಿದೆ. ಇಲ್ಲಿ ಹೆಚ್ಚಿನ ಜನರು ಮೇಲ್ವರ್ಗದವರಾಗಿದ್ದು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಬೆಂಬಲಿಸುತ್ತಾರೆ. 76 ವರ್ಷದ ರಘುವೀರ್ ಸಿಂಗ್ ಮಾತನಾಡುತ್ತಾ “ಅವರು (ಅಪ್ರಾಪ್ತೆಯ ಕುಟುಂಬ) ಹುಡುಗಿಯ ಮದುವೆ ಮಾಡಿದ್ದರೆ, ಹಣವನ್ನು ಖರ್ಚು ಮಾಡಬೇಕಾಗಿತ್ತು … ಆ ಹಣವೂ ಉಳಿತಾಯವಾಗಿದೆ ಮತ್ತು ಅವರು ಸರ್ಕಾರದಿಂದ ಸಾಕಷ್ಟು ಹಣವನ್ನು ಸಹ ಪಡೆದರು. ನಾವು ಯಾವುದರ ಬಗ್ಗೆ ದುಃಖಪಡಬೇಕು? ನಾವು ಯೋಗಿಯವರ ಸರ್ಕಾರವನ್ನು ರಚಿಸುತ್ತೇವೆ… ಯೋಗಿ ಆದಿತ್ಯನಾಥ್ ನಮ್ಮ ಸಮುದಾಯಕ್ಕೆ ಸೇರಿದವರು” ಎಂದಿದ್ದಾರೆ.

ಅಪ್ರಾಪ್ತರ ಶವಸಂಸ್ಕಾರದ ಬಗ್ಗೆ ಕೇಳಿದಾಗ ಸಿಂಗ್, “ಪೊಲೀಸರು ಹಾಗೆ ಮಾಡದಿದ್ದರೆ, ಇಲ್ಲಿ ರಜಪೂತ ಸಮುದಾಯದ ಯಾರೂ ಉಳಿಯುತ್ತಿರಲಿಲ್ಲ. ಅಕ್ಕಪಕ್ಕದ ವಾಲ್ಮೀಕಿಗಳು ಈ ಗ್ರಾಮಕ್ಕೆ ಬಂದಿದ್ದರು. ಯೋಗಿ ಆಡಳಿತವು ಸಂಪೂರ್ಣವಾಗಿ ಸರಿಯಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಹತ್ರಾಸ್‌ ಕ್ಷೇತ್ರದಿಂದ ಎರಡು ಬಾರಿ ಬಿಎಸ್ಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಗೆಂದಾಲಾಲ್ ಚೌಧರಿ ಅವರ ಪುತ್ರ,  ಜಿಲ್ಲಾ ಪಂಚಾಯತ್ ಸದಸ್ಯ ಪಂಕಜ್ ಚೌಧರಿ ಪ್ರತಿಕ್ರಿಯಿಸಿ, “ಮೇಲ್ವರ್ಗದ ಜನರು ಈಗಾಗಲೇ ಅದರ ಬಗ್ಗೆ (2020ರ ಪ್ರಕರಣ) ಮರೆತಿದ್ದಾರೆ. ಇದು ಅವರಿಗೆ ಮುಖ್ಯವಾಗಲಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌‌ ಅಯೋಧ್ಯೆಯಲ್ಲಿ ಸ್ಪರ್ಧಿಸುವ ಕನಸು ಭಗ್ನವಾಗಿದ್ದೇಕೆ?

“ಹತ್ರಾಸ್ ಮತ್ತು ಭಾರತಕ್ಕೆ ವಿಶ್ವಾದ್ಯಂತ ಅವಮಾನಗಳಾಗಿದ್ದು ಸಾಮೂಹಿಕ ಅತ್ಯಾಚಾರದ ಕಾರಣದಿಂದಾಗಿ ಅಲ್ಲ. ಕೆಟ್ಟ ಆಡಳಿತಾತ್ಮಕ ಕ್ರಮದಿಂದ. ಯಾರು ತಪ್ಪಿತಸ್ಥರು ಎಂಬುದನ್ನು ನಿರ್ಧರಿಸುವುದು ನ್ಯಾಯಾಂಗಕ್ಕೆ ಬಿಟ್ಟದ್ದು… ಆದರೆ ಅಧಿಕಾರದಲ್ಲಿ ಬಿಎಸ್‌ಪಿ ಸರ್ಕಾರ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ನಿರ್ಭಯಾಳ ಜಾತಿ ಯಾವುದೆಂದು ನೋಡದೆ ಜನರು ಬೀದಿಗೆ ಬಂದಿದ್ದರು. ಆದರೆ ಇದು ದೆಹಲಿಯಲ್ಲ, ಇದು ಯೂಪಿ” ಎಂದು ಪಂಕಜ್ ಚೌಧರಿ ಹೇಳಿದ್ದಾರೆ.

ಹೆಸರು ಹೇಳಲಿಚ್ಛಿಸದ ರಜಪೂತ ಸಮುದಾಯದ 35 ವರ್ಷದ ರೈತ, “ನಾವು ಬಿಜೆಪಿಗೆ ಮತ ಹಾಕುತ್ತೇವೆ. ಆದರೆ ಸರ್ಕಾರದ ಮೇಲೆ ನನಗೆ ಅಸಮಾಧಾನವಿದೆ. ನನ್ನನ್ನು ಜೈಲಿನಲ್ಲಿ ಇರಿಸಲಾಗಿತ್ತು… ನನ್ನ ಜಮೀನನ್ನು ಬಿಜೆಪಿ ಮುಖಂಡರೊಬ್ಬರ ಆಪ್ತರು ವಶಪಡಿಸಿಕೊಂಡಿದ್ದಾರೆ. ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ಶಾಸಕರ ಬಳಿ ಹೋದೆ, ಯಾರೂ ಕೇಳಲಿಲ್ಲ … ನನ್ನ ಹೆಂಡತಿ ಮತ್ತು ನನ್ನನ್ನು ಜೈಲಿಗೆ ಹಾಕಲಾಯಿತು … ನಾವು ಬಿಜೆಪಿಗೆ ಮತ ಹಾಕುತ್ತೇವೆ … ಇಲ್ಲಿನ ವಾಲ್ಮೀಕಿಗಳೂ ಬಿಜೆಪಿಗೆ ಮತ ಹಾಕುತ್ತಾರೆ” ಎಂದಿದ್ದಾರೆ.

ಆದರೆ, ಹತ್ರಾಸ್‌ನಲ್ಲಿರುವ ಸಂತ್ರಸ್ತೆಯ ಚಿಕ್ಕಪ್ಪ ಬೇಸರಗೊಂಡಿದ್ದಾರೆ. “ನಮಗೆ ಸರಿಯಾದ ಮನೆಯೂ ಇಲ್ಲ. ನಮಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಯಿತು. ಆದರೆ ಅದು ಈಗ ಮುಗಿದಿದೆ. ನಾವು ಒಲೆಯ ಮೇಲೆ ಅಡುಗೆ ಮಾಡುತ್ತೇವೆ. ಹೌದು, ಸರ್ಕಾರ ರೇಷನ್ ನೀಡುತ್ತದೆ, ಆದರೆ ಇದು ಸಾಕೇ? ಸರ್ಕಾರದಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ.

ಹತ್ರಾಸ್‌ನ ಹಲವಾರು ವ್ಯಾಪಾರಿಗಳು 2020ರ ಪ್ರಕರಣವು ದಲಿತ ಸಮುದಾಯಗಳಿಗೆ ಮಾತ್ರ ದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ. “ನಿರ್ಭಯಾಳ ಜಾತಿ ತಿಳಿಯದೆ ಜನರು ಬೀದಿಗೆ ಬರುವುದಕ್ಕೆ ಇದು ದೆಹಲಿಯಲ್ಲ, ಯುಪಿ” ಎಂದು ಪಂಕಜ್ ಚೌಧರಿ ಅಭಿಪ್ರಾಯಪಡುತ್ತಾರೆ.

ವರದಿ ಕೃಪೆ: ನ್ಯೂಸ್‌ಲಾಂಡ್ರಿ


ಇದನ್ನೂ ಓದಿರಿ: ಸಿಂಧೂರ ಧರಿಸುವುದು ನನ್ನ ಆಯ್ಕೆ, ಹಿಜಾಬ್ ಧರಿಸುವುದು ಮುಸ್ಕಾನ್ ಆಯ್ಕೆ: ’ಹಮ್ ಸಬ್ ಹಿಂದೂಸ್ತಾನಿ’ ಎಂದ ತೆಲಂಗಾಣ ಸಿಎಂ ಪುತ್ರಿ ಕವಿತಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...