Homeಕರ್ನಾಟಕಉತ್ತರ ಕನ್ನಡ ಬಿಜೆಪಿಗೆ ಯಾರಾಗ್ತಾರೆ ಅಧ್ಯಕ್ಷ?!

ಉತ್ತರ ಕನ್ನಡ ಬಿಜೆಪಿಗೆ ಯಾರಾಗ್ತಾರೆ ಅಧ್ಯಕ್ಷ?!

- Advertisement -
- Advertisement -

ಉತ್ತರ ಕನ್ನಡದ ಕೇಸರಿ ಪಾಳೆಯದ ಒಳರಾಜಕಾರಣಕ್ಕೆ ಒಂದೇ ಸಮನೆ ಕಾವೇರುತ್ತಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರಿ ಶಿವರಾಮ ಹೆಬ್ಬಾರರನ್ನು ಗೆಲ್ಲಿಸುವುದಕ್ಕಿಂತಲೂ ನಿಷ್ಠಾವಂತ ಅನುಯಾಯಿ ಒಬ್ಬರನ್ನು ಜಿಲ್ಲಾ ಬಿಜೆಪಿ ಪೀಠದಲ್ಲಿ ಪ್ರತಿಷ್ಠಾಪಿಸುವ ತಂತ್ರಗಾರಿಕೆ ಬಗ್ಗೆಯೇ ಸಂಘಿ ಸರದಾರರು ತಲೆಕೆಡಿಸಿಕೊಂಡಿದ್ದಾರೆ. ಹೆಬ್ಬಾರ್ ಗೆಲ್ಲಬೇಕಾಗಿರುವುದು ಸಿಎಂ ಯಡ್ಡಿ ಮಹಾತ್ಮರಿಗೆ ಮಾತ್ರ. ನಿಷ್ಠಾವಂತ ಸಂಘ ಸೈನಿಕರಿಗೆ ಆತ ಗೆದ್ದರೂ ಸೋತರೂ ಫರಕೇನೂ ಬೀಳುವುದಿಲ್ಲ. ಸ್ಪೀಕರ್ ಕಾಗೇರಿ, ಸಂಸದ ಅನಂತ್ಮಾಣಿ, ಎಡಬಿಡಂಗಿ ವಕ್ತಾರ ಪ್ರಮೋದ್ ಹೆಗಡೆ ವಗೈರೆ ಬಿಜೆಪಿಯ ಘಟಾನುಘಟಿಗಳಿಗೆ ಹೆಬ್ಬಾರ್ ಸೋತರೇನೇ ಸುಗ್ಗಿ ಸಂಭ್ರಮ!!

ಬಿಜೆಪಿಯಲ್ಲೀಗ ಸಾಂಸ್ಥಿಕ ಚುನಾವಣೆ ನಡೆಯುತ್ತಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹಿಂದೂತ್ವದ ಗುಣಧರ್ಮದ ಜತೆಗೆ ದುಡ್ಡು ದಂಡಿಯಾಗಿರುವ ಆಸಾಮಿಯನ್ನು ತರಲು ಆರೆಸ್ಸೆಸ್‍ನ ಹಿರಿ ತಲೆಗಳು ತಲಾಶ್ ನಡೆಸಿದ್ದಾರೆ. ವಿಧಾನಸಭಾಧ್ಯಕ್ಷ, ಸಂಸದ, ಭಾವಿ ಮಂತ್ರಿಗಿರಿಯಂಥ ಆಯಕಟ್ಟಿನ ಸ್ಥಾನ ಮತ್ತು ನಿಗಮ-ಮಂಡಳಿ ಅಧಿಕಾರವೆಲ್ಲ ಹವ್ಯಕ ಬ್ರಾಹ್ಮಣ ಬಳಗಕ್ಕೇ ದಕ್ಕುತ್ತಿರುವುದು ಹಿಂದುಳಿದ ವರ್ಗದ ಕಾರ್ಯಕರ್ತರಲ್ಲಿ ರೊಚ್ಚು ಮೂಡಿಸಿದೆ. ಬಿಜೆಪಿಯ ಹಾರವ ಲೀಡರ್‍ಗಳು ಧರ್ಮ, ದೇವರ ಹೆಸರಲ್ಲಿ ಶೂದ್ರರನ್ನು ಮುಂದೆ ನಿಲ್ಲಿಸಿ ಹಿಂದಿನಿಂದ ಅಧಿಕಾರ-ಸುಖ ಸಂಪತ್ತು ಪಡೆಯುತ್ತಿದ್ದಾರೆಂಬ ‘ತಿಳಿವಳಿಕೆ’ ಈಗೀಗ ಹಿಂದುಳಿದ ವರ್ಗದ ಮುಖಂಡರಿಗೆ ಬರತೊಡಗಿದೆ. ಈ ಆತೃಪ್ತ ಶೂದ್ರ ಸಂಕುಲ ಒಂದಾಗದಂತೆ ಜನಿವಾರ ಮಂತ್ರ ಪ್ರಯತ್ನಿಸುತ್ತಿದೆ.

ಅಸಮಾಧಾನಗೊಂಡಿರುವ ಹಿಂದುಳಿದವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ಕೊಟ್ಟು ಬಾಯಿ ಮುಚ್ಚಿಸಿ ತಾವು ನಿಗಮ-ಮಂಡಳಿ-ಮಂತ್ರಿ-ಸಂಸದರಂತಹ ಲಾಭದಾಯಕ ಹುದ್ದೆಯಲ್ಲಿ ಮುಂದುವರಿಯಬೇಕೆಂಬ ಹಿಕಮತ್ತು ಸಂಘಪರಿವಾರದ ರಿಂಗ್‍ಮಾಸ್ಟರ್‍ಗಳು ಹೊಸ ಪ್ಲಾನು ಮಾಡಿದ್ದಾರೆ. ಈಚೆಗೆ ನೇಮಕವಾದ ಎರಡು ನಿಗಮ-ಮಂಡಳಿ ಮುಖ್ಯಸ್ಥರು ಹವ್ಯಕ ಬ್ರಾಹ್ಮಣರು. ಜೀವ ವೈವಿಧ್ಯ ಮಂಡಳಿಗೆ ಅನಂತ ಅಶೀಸರ ನೆಗೆದು ಕೂತಿದ್ದಾರೆ. ಎಂ.ಎ.ಹೆಗಡೆ ಎರಡನೇ ಅವಧಿಗೆ ಯಕ್ಷಗಾನ ಮಂಡಳಿಗೆ ವಕ್ಕರಿಸಿದ್ದಾರೆ. ಮಜಾ ಎಂದರೆ ಈ ಎಂ.ಎ.ಹೆಗಡೆ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಯಕ್ಷಗಾನ ಮಂಡಳಿಗೆ ಗದ್ದುಗೆ ಗಿಟ್ಟಿಸಿದ್ದರು. ಈಗ ಚೆಡ್ಡಿಬಿಡಾರದಲ್ಲಿರುವ ಕುಲಬಂಧು ಭೂತದ ಮೂಲಕ ಲಾಬಿ ಮಾಡಿಸಿ ಅದೇ ಕುರ್ಚಿಯಲ್ಲಿ ಫೆವಿಕಾಲ್ ಹಾಕಿ ಕುಂತಿದ್ದಾರೆ. ಇದು ಅಬ್ರಾಹ್ಮಣರ ಕಣ್ಣು ಕುಕ್ಕುತ್ತಿದೆ ಎಂಬ ವಾಸ್ತವ ಅರಿತಿರುವ ಚೆಡ್ಡಿ ಚೆತುರರು ಜಿಲ್ಲಾ ಬಿಜೆಪಿ ಅಧ್ಯಕ್ಷತೆಗೆ ಹಿಂದುಳಿದವರ ತರಲು ಹವಣಿಸುತ್ತಿದ್ದಾರೆ.

ಆರೆಸ್ಸೆಸ್ ಆಯ್ಕೆ ಕುಮಟಾ ಮೂಲದ ಬೆಳಗಾವಿ-ಮುಂಬೈನ ನಿಗೂಢ ಉದ್ಯಮಿ ಸುಬ್ರಿಯ ವಾಳ್ಕೆ. ಈತ ಸಂಘಪರಿವಾರದ ಸಿದ್ಧಾಂತಿಯೆಂದು ಆರೆಸ್ಸೆಸ್ ಸೂತ್ರಧಾರರು ಹೇಳುತ್ತಿದ್ದಾರೆ. ಆದರೆ ಕಳೆದ ಬಾರಿಯ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಕುಮಟೆಯಿಂದ ಬಿಜೆಪಿ ಹುರಿಯಾಳಾಗಲು ತಿಪ್ಪರಲಾಗ ಹಾಕಿದ್ದ ವಾಳ್ಕೆ ಆರೆಸೆಸ್ ಹಿನ್ನಲೆಯಾತನಲ್ಲ. ಬಡ ಮಾಲ್ಕರಿ (ಹೋಟೇಲುಗಳ ತಿಂಡಿ ಕರಿಯುವವ) ಮಗನಾದ ವಾಳ್ಕೆ ಬದುಕಲು ಕಷ್ಟಪಟ್ಟವನು. ಹೊಟ್ಟೆ ಪಾಡಿಗಾಗಿ ಬೆಳಗಾವಿ ಸೇರಿದ್ದ ವಾಳ್ಕೆ ಪರಿಚಯ ಹೀಗಿದೆ. ಕುಮಟೆಯಲ್ಲಿ ಆತನ ಹೆಂಡತಿ ನಿಗೂಢ ಅಪಘಾತದಲ್ಲಿ ಸತ್ತು ಹೋದಾಗ ಮತ್ತು ಆತ ತನ್ನ ಉದ್ಯಮದಲ್ಲಿ ಸಹಾಯಕಿಯಾಗಿದ್ದ ಹುಡುಗಿಯನ್ನೇ ಮರುಮದುವೆ ಆದಾಗ ವಾಳ್ಕೆ ‘ಪ್ರಸಿದ್ಧಿ’ ಕುಮಟೆಯಲ್ಲಾಗಿತ್ತು!! ಆತನಲ್ಲಿರುವ ಅಪಾರ ಹಣದ ಗಂಟಿನ ಮೇಲೆ ಕಣ್ಣು ಹಾಕಿದ ಚೆಡ್ಡಿ ದೊರೆಗಳು ಆತನೇ ಜಿಲ್ಲಾ ಬಿಜೆಪಿ ಅಧ್ಯಕ್ಷತೆಗೆ ಯೋಗ್ಯನೆಂದು ಬಿಂಬಿಸುತ್ತಿದ್ದಾರೆ.

ಮುಂಬೈನ ಬಿಜೆಪಿಯ ಟಾಪ್ ಲೀಡರ್‍ಗಳನ್ನು ಹಿಡಿದು ಲಾಬಿ ಮಾಡಿದರೂ ಕುಮಟೆ ಎಮ್ಮೆಲ್ಲೆಗಿರಿಗೆ ನಿಲ್ಲುವ ಛಾನ್ಸ್ ವಾಳ್ಕೆಗೆ ಸಿಕ್ಕಿರಲಿಲ್ಲ. ಈಗ ತನ್ನ ಮೇಲೆ ಏಕಾಏಕಿ ಜಿಲ್ಲಾಧ್ಯಕ್ಷನಾಗಿ ಮಾಡುವ ಮಮಕಾರ ಬಿಜೆಪಿ ಹಿರಿಯರಿಗೆ ಬಂದಿದ್ದೇಕೆಂಬುದು ವಾಳ್ಕೆಗೆ ಅರ್ಥವಾಗಿದೆ. ತನ್ನಲ್ಲಿರುವ ಹಣ ಪಕ್ಷದ ಸಂಘಟನೆಗೆ ಬಳಸಿ ಕಡೆಗೊಂದು ದಿನ ಈ ದೊಡ್ಡವರು ಕೈಗೆ ಗೆರಟೆ ಕೊಟ್ಟು ಕಳಿಸುತ್ತಾರೆಂಬ ಅರಿವು ಪಕ್ಕಾ ವ್ಯಾಪಾರಿಯಾದ ವಾಳ್ಕೆಗಿದೆ. ಹಾಗಾಗಿ ಆತ ಅಧ್ಯಕ್ಷತೆ ತಾನೊಲ್ಲೆ ಅಂತಿದ್ದಾನೆ. ಬೇಕಿದ್ದರೆ ಮುಂದಿನ ಸಾರಿ ಕುಮಟೆಯಲ್ಲಿ ಕ್ಯಾಂಡಿಡೇಟ್ ಮಾಡಿ; ಈ ಖಾಲಿ ಪುಕ್ಕಟ್ಟೆ ಅಧ್ಯಕ್ಷತೆ ನಂಗೆ ಬೇಡ ಎಂದು ಖಡಾಖಂಡಿತ ವಾಳ್ಕೆ ಹೇಳಿದ್ದಾನೆ. ಎಮ್ಮೆಲ್ಲಿಗಿರಿ ಆಸೆ ತೋರಿಸಿ ಈ ಹಿಂದುಳಿದ ವೈಶ್ಯ ಸಮುದಾಯದ ಬಿಸ್ನೆಸ್‍ಮನ್‍ನ ಹಿಂಡುವ ಪ್ಲಾನು ಹಾಕಿದ್ದ ಚೆಡ್ಡಿಗಳೀಗ ಹೊಸ ಹಣವಂತ ಶೂದ್ರನ ಹುಡುಕಾಟಕ್ಕೆ ಇಳಿದಿದ್ದಾರೆ.

ಈಗಿನ ಅಧ್ಯಕ್ಷ ಕೆ.ಜಿ.ನಾಯ್ಕನಂಥ ದುಡ್ಡಿಲ್ಲದವರು ಸಿಗುತ್ತಿದ್ದಾರೆಯೇ ವಿನಃ ಹಣಕಾಸು ಹರಿಸುವ ಪುಢಾರಿ ಕಾಣಿಸುತ್ತಿಲ್ಲ. ಜಿಲ್ಲಾಧ್ಯಕ್ಷನಾಗುವ ಉಮೇದಿನಲ್ಲಿರುವ ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ ಆರೆಸ್ಸೆಸ್ ರಿಂಗ್‍ಮಾಸ್ತರ್‍ಗಳಿಗೆ ಒಪ್ಪಿಗೆ ಆಗುತ್ತಿಲ್ಲ. ಊರು ತುಂಬ ಸಾಲ ಮಾಡಿಕೊಂಡು ಪಾಪರ್ ಆಗಿರುವ ಜಿಲ್ಲಾ ಹೈಕಮಾಂಡ್ ವಿನೋದ್ ಪ್ರಭು, ಅನಂತ್ಮಾಣಿ, ಹನ್ಮಂತ ಶಾನಭಾಗ್ ವಗೈರೆ ಪರಮು ಚೆಡ್ಡಿಗಳದು. ಆದರೆ ಸುನಿಲ್ ಪಟ್ಟು ಸಡಿಲಿಸುತ್ತಿಲ್ಲ. ದೇಶಪಾಂಡೆ ಕ್ಷೇತ್ರದವನಾದ ತಾನು ಜಿಲ್ಲಾ ಬಿಜೆಪಿ ಅಧ್ಯಕ್ಷನಾದರೆ ಹಳಿಯಾಳದಲ್ಲೂ ಕಮಲ ಅರಳಿಸಬಹುದೆಂದು ಕೇಶವಕೃಪಾದಲ್ಲಿ ರಚ್ಚೆ ಹಿಡಿದು ಕುಂತಿದ್ದಾನೆ ಸುನೀಲ್. ಹಣ ಮತ್ತು ಹಿಂದೂತ್ವದ ಕಾಂಬಿನೇಷನ್ ಇರುವಾತ ಸಿಗದೆ ಆರೆಸ್ಸೆಸ್ ಗ್ಯಾಂಗ್ ಗೊಂದಲಕ್ಕೆ ಬಿದ್ದಿದೆ; ಗತಿಯಿಲ್ಲದೆ ಸುನೀಲ್ ಹೆಗಡೆಗೆ ಅಧ್ಯಕ್ಷಗಿರಿ ದೀಕ್ಷೆ ಕೊಡಬೇಕಾದ ಅನಿವಾರ್ಯಕ್ಕೆ ಬಿದ್ದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...