Homeಮುಖಪುಟ4 ವರ್ಷದ ಹುಡುಗಿಯ ಕ್ಯಾನ್ಸರ್ ಔಷಧಿಗಾಗಿ ವ್ಯಕ್ತಿಯೊಬ್ಬ 150 ಕಿ.ಮೀ ಪ್ರಯಾಣಿಸಿದ ಕಥೆ.

4 ವರ್ಷದ ಹುಡುಗಿಯ ಕ್ಯಾನ್ಸರ್ ಔಷಧಿಗಾಗಿ ವ್ಯಕ್ತಿಯೊಬ್ಬ 150 ಕಿ.ಮೀ ಪ್ರಯಾಣಿಸಿದ ಕಥೆ.

- Advertisement -
- Advertisement -

21 ದಿನಗಳ ಲಾಕ್‌ಡೌನ್ ನಮ್ಮಲ್ಲಿ ಹಲವರ ಮೇಲೆ ಕಠಿಣ ಪರಿಣಾಮ ಬೀರಿರಬಹುದು. ಏಕೆಂದರೆ ಒಂದು ದಿನ ಹೊರಗಡೆ ಹೋಗದೆ ಬದುಕುವುದು ಹೇಗೆ ಎಂದು ನಾವು ಆಶ್ಚರ್ಯ ಪಡುತ್ತೇವೆ. ಆದರೆ ಕೆಲವು ಕಾಯಿಲೆಗಳಿಂದಾಗಿ ಅಕ್ಷರಶಃ ಇನ್ನೊಂದು ಹೆಚ್ಚು ದಿನ ಬದುಕಲು ಹೋರಾಡುತ್ತಿರುವವರಿಗೆ ಈ ಲಾಕ್‌ಡೌನ್‌ ವಿಶೇಷವಾಗಿ ಕ್ರೂರವಾಗಬಹುದು. ರಕ್ತದ ಕ್ಯಾನ್ಸರ್ ಹೊಂದಿರುವ ನಾಲ್ಕು ವರ್ಷದ ನೂರ್ (ಹೆಸರು ಬದಲಾಯಿಸಲಾಗಿದೆ) ಆ ಎರಡನೇ ವಿಭಾಗದಲ್ಲಿ ಸೇರುತ್ತಾಳೆ. ಈ ಕುರಿತು ದಿ ನ್ಯೂಸ್‌ ಮಿನಿಟ್‌ ಪ್ರಕಟಿಸಿದ ಬರಹದ ಕನ್ನಡ ಅನುವಾದ ಇಲ್ಲಿದೆ.

ಪ್ರತಿ ತಿಂಗಳು ನೂರ್‌ಳನ್ನು ತಿರುವನಂತಪುರಂನ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಕ್ಕೆ, ತನ್ನ ಊರಾದ ಆಲಪ್ಪುಳದಿಂದ ಕೀಮೋಥೆರಪಿ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಚ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಲಾಗಿದ್ದರಿಂದ ಆಸ್ಪತ್ರೆಯು ನೂರ್‌ಳ ಚಿಕಿತ್ಸೆಯನ್ನು ರದ್ದುಗೊಳಿಸಿದ್ದಲ್ಲದೆ, ಅವರ ಕುಟುಂಬವು ಔಷಧಿಗಳನ್ನು ಖರೀದಿಸಲು ದೂರದ ತಿರುವನಂತಪುರಂಗೆ ಪ್ರಯಾಣಿಸಲಾಗದೆ ಚಿಂತಿತರಾಗಿತ್ತು.

ಇಂತಹ ಕಷ್ಟಕರ ಸಮಯದಲ್ಲಿ ಅವರ ನೆರೆಮನೆಯಲ್ಲಿದ್ದ ವ್ಯಕ್ತಿ ಮತ್ತು ಪೊಲೀಸ್‌ ಅಧಿಕಾರಿಯೊಬ್ಬ ಮಾನವೀಯತೆಯ ರೂಪದಲ್ಲಿ ಒದಗಿಬಂದಿದ್ದಾರೆ. ಆ ಮಗುವಿನೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಆಕೆಯ ಜೀವ ಉಳಿಸುವ ಸಲುವಾಗಿ ಮಾರ್ಚ್ 31 ರಂದು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಸಾರ್ಜೆಂಟ್ ಆಗಿರುವ ಕೆ.ಪಿ.ವಿಷ್ಣು ಅವರು ತಮ್ಮ ಬೈಕ್‌ನಲ್ಲಿ 150 ಕಿ.ಮೀ ಪ್ರಯಾಣಿಸಿ ತಮ್ಮ ಕೈಯಿಂದ ಹಣ ಹಾಕಿ ಔಷಧಿ ಖರೀದಿಸಿ ಆ ಕುಟುಂಬಕ್ಕೆ ನೀಡಿದ್ದಾರೆ. ಔಷಧಿ ಕೈಸೇರುವವರೆಗೂ ವಿಷ್ಣುವಿನ ಈ ಸಾಹಸ ನೂರ್‌ಳ ಕುಟುಂಬಕ್ಕೆ ತಿಳಿದಿರಲಿಲ್ಲ.

ಆಲಪ್ಪುಳಾ ನಾರ್ತ್ ಸ್ಟೇಷನ್‌ನ ನಾಗರಿಕ ಪೊಲೀಸ್ ಅಧಿಕಾರಿ ಮತ್ತು ವಿಷ್ಣುವಿನ ನೆರೆಹೊರೆಯ ಆಂಟನಿ ರತೀಶ್, “ನಾನು ನೂರ್‌ನ ಕುಟುಂಬವನ್ನು ಕೆಲವು ತಿಂಗಳುಗಳಿಂದ ತಿಳಿದಿದ್ದೇನೆ. ಮಾರ್ಚ್ 30 ರಂದು, ಆಕೆಯ ತಾಯಿ ನನಗೆ ಕರೆ ಮಾಡಿ, ತನ್ನ ಮಗಳ ಕೀಮೋಥೆರಪಿಯನ್ನು ರದ್ದುಪಡಿಸಲಾಗಿದೆ ಮತ್ತು ವೈದ್ಯರು ಔಷಧಿ ತೆಗೆದುಕೊಳ್ಳುವುದನ್ನು ಮುಂದುವರೆಸಬೇಕೆಂದು ಕೇಳಿಕೊಂಡಿದ್ದಾರೆ. ಆದರೆ ಅವರ ಮನೆಯಲ್ಲಿ ಔಷಧಿ ಖಾಲಿಯಾಗಿತ್ತಲ್ಲದೇ ಆಲಪ್ಪುಳದಲ್ಲಿ ಎಲ್ಲಿಯೂ ಔಷಧಿಯನ್ನು ಸಿಗಲಿಲ್ಲ. ಅವರು ಲಾಕ್‌ಡೌನ್‌ ಸಮಯದಲ್ಲಿ ಔಷಧಿ ತರಲು ತಿರುವನಂತಪುರಂಗೆ ಕ್ಯಾಬ್ ತೆಗೆದುಕೊಳ್ಳುವಷ್ಟು ಹಣ ಹೊಂದಿಲ್ಲ” ಎಂದು ತಿಳಿಸಿದ್ದರು.

ಆ ನಂತರ ಅವರಿಗೆ ಹೇಗೆ ಸಹಾಯ ಮಾಡಬೇಕೆಂದು ಆಶ್ಚರ್ಯಪಟ್ಟ ರತೀಶ್, ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ನೆರೆಹೊರೆಯ ವಿಷ್ಣುವನ್ನು ಸಂಪರ್ಕಿಸಿದರು. ಆದರೆ ವಿಷ್ಣು ಆ ರಾತ್ರಿ ತಾನೇ ತಿರುವನಂತಪುರಕ್ಕೆ ತೆರಳಿದ್ದರು ಮತ್ತು ಅವರು ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸುವವರೆಗೆ ಒಂದು ವಾರ ಅಲ್ಲಿಯೇ ಇರಲು ಯೋಜಿಸಿದ್ದರು.

“ನಾನು ಅವರಿಗೆ ಕರೆ ಮಾಡಿದಾಗ ಅವರು ತಿರುವನಂತಪುರಂ ತಲುಪಿದ್ದರು. ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದಿಂದ ಔಷಧಿಯನ್ನು ಖರೀದಿಸಿ ಕೊಲ್ಲಂ ಜಿಲ್ಲೆಯವರೆಗೆ ಮಾತ್ರ ತಲುಪಿಸಬಹುದು ಎಂದು ಹೇಳಿದರು. ಆದರೆ ಮರುದಿನ ಬೆಳಿಗ್ಗೆ ಅವರು ಮನಸ್ಸು ಬದಲಿಸಿ 150 ಕಿಲೋಮೀಟರ್ ಸವಾರಿ ಮಾಡಿ, ನೂರ್‌ನ ಮನೆ ಬಾಗಿಲಿಗೆ ಹೋಗಿ ಔಷಧಿಗಳನ್ನು ತಲುಪಿಸಿದನು. ಆ ರಾತ್ರಿ ಅವನು ಮಲಗಿದ್ದನೆಂದು ನಾನು ಭಾವಿಸುವುದಿಲ್ಲ” ಎಂದು ರತೀಶ್ ಹೇಳುತ್ತಾರೆ.

ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ 32 ವರ್ಷದ ಸಾರ್ಜೆಂಟ್ ವಿಷ್ಣು, ಔಷಧಿಗಳನ್ನು ವಿತರಿಸಿದ ನಂತರ ಆಲಪ್ಪುಳದಲ್ಲಿ ಒಂದು ದಿನ ಇದ್ದು ನಂತರ ತಿರುವನಂತಪುರಂಗೆ ಹಿಂತಿರುಗಿದ್ದಾರೆ.

ಲಾಕ್‌ಡೌನ್ ಹೊರತಾಗಿಯೂ ನೂರ್‌ಗೆ ಈಗ ಅಗತ್ಯ ಔಷಧಿಗಳು ಲಭ್ಯವಾದ್ದರಿಂದ, ಅವರ ಕುಟುಂಬವು ಸಂತೋಷದಲ್ಲಿದೆ. ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಸಹಾಯ ಒದಗಿದ್ದಕ್ಕೆ ಅವರು ಕೃತಜ್ಞರಾಗಿದ್ದಾರೆ.

“ನಾನು ಪ್ರತಿ ಬಾರಿ ನನ್ನ ನಮಾಜ್ ಮಾಡುವಾಗ ಈ ಇಬ್ಬರು ಪುರುಷರ ಬಗ್ಗೆ ಯೋಚಿಸುತ್ತೇನೆ. ಅಲ್ಲಾಹನು ಯಾವಾಗಲೂ ಅವರನ್ನು ಆಶೀರ್ವದಿಸುವನು ”ಎಂದು ನೂರ್ ತಾಯಿ ಮಲಯಾಳಂ ಪತ್ರಿಕೆಗೆ ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...