Homeಮುಖಪುಟ4 ವರ್ಷದ ಹುಡುಗಿಯ ಕ್ಯಾನ್ಸರ್ ಔಷಧಿಗಾಗಿ ವ್ಯಕ್ತಿಯೊಬ್ಬ 150 ಕಿ.ಮೀ ಪ್ರಯಾಣಿಸಿದ ಕಥೆ.

4 ವರ್ಷದ ಹುಡುಗಿಯ ಕ್ಯಾನ್ಸರ್ ಔಷಧಿಗಾಗಿ ವ್ಯಕ್ತಿಯೊಬ್ಬ 150 ಕಿ.ಮೀ ಪ್ರಯಾಣಿಸಿದ ಕಥೆ.

- Advertisement -
- Advertisement -

21 ದಿನಗಳ ಲಾಕ್‌ಡೌನ್ ನಮ್ಮಲ್ಲಿ ಹಲವರ ಮೇಲೆ ಕಠಿಣ ಪರಿಣಾಮ ಬೀರಿರಬಹುದು. ಏಕೆಂದರೆ ಒಂದು ದಿನ ಹೊರಗಡೆ ಹೋಗದೆ ಬದುಕುವುದು ಹೇಗೆ ಎಂದು ನಾವು ಆಶ್ಚರ್ಯ ಪಡುತ್ತೇವೆ. ಆದರೆ ಕೆಲವು ಕಾಯಿಲೆಗಳಿಂದಾಗಿ ಅಕ್ಷರಶಃ ಇನ್ನೊಂದು ಹೆಚ್ಚು ದಿನ ಬದುಕಲು ಹೋರಾಡುತ್ತಿರುವವರಿಗೆ ಈ ಲಾಕ್‌ಡೌನ್‌ ವಿಶೇಷವಾಗಿ ಕ್ರೂರವಾಗಬಹುದು. ರಕ್ತದ ಕ್ಯಾನ್ಸರ್ ಹೊಂದಿರುವ ನಾಲ್ಕು ವರ್ಷದ ನೂರ್ (ಹೆಸರು ಬದಲಾಯಿಸಲಾಗಿದೆ) ಆ ಎರಡನೇ ವಿಭಾಗದಲ್ಲಿ ಸೇರುತ್ತಾಳೆ. ಈ ಕುರಿತು ದಿ ನ್ಯೂಸ್‌ ಮಿನಿಟ್‌ ಪ್ರಕಟಿಸಿದ ಬರಹದ ಕನ್ನಡ ಅನುವಾದ ಇಲ್ಲಿದೆ.

ಪ್ರತಿ ತಿಂಗಳು ನೂರ್‌ಳನ್ನು ತಿರುವನಂತಪುರಂನ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಕ್ಕೆ, ತನ್ನ ಊರಾದ ಆಲಪ್ಪುಳದಿಂದ ಕೀಮೋಥೆರಪಿ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಚ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಲಾಗಿದ್ದರಿಂದ ಆಸ್ಪತ್ರೆಯು ನೂರ್‌ಳ ಚಿಕಿತ್ಸೆಯನ್ನು ರದ್ದುಗೊಳಿಸಿದ್ದಲ್ಲದೆ, ಅವರ ಕುಟುಂಬವು ಔಷಧಿಗಳನ್ನು ಖರೀದಿಸಲು ದೂರದ ತಿರುವನಂತಪುರಂಗೆ ಪ್ರಯಾಣಿಸಲಾಗದೆ ಚಿಂತಿತರಾಗಿತ್ತು.

ಇಂತಹ ಕಷ್ಟಕರ ಸಮಯದಲ್ಲಿ ಅವರ ನೆರೆಮನೆಯಲ್ಲಿದ್ದ ವ್ಯಕ್ತಿ ಮತ್ತು ಪೊಲೀಸ್‌ ಅಧಿಕಾರಿಯೊಬ್ಬ ಮಾನವೀಯತೆಯ ರೂಪದಲ್ಲಿ ಒದಗಿಬಂದಿದ್ದಾರೆ. ಆ ಮಗುವಿನೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಆಕೆಯ ಜೀವ ಉಳಿಸುವ ಸಲುವಾಗಿ ಮಾರ್ಚ್ 31 ರಂದು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಸಾರ್ಜೆಂಟ್ ಆಗಿರುವ ಕೆ.ಪಿ.ವಿಷ್ಣು ಅವರು ತಮ್ಮ ಬೈಕ್‌ನಲ್ಲಿ 150 ಕಿ.ಮೀ ಪ್ರಯಾಣಿಸಿ ತಮ್ಮ ಕೈಯಿಂದ ಹಣ ಹಾಕಿ ಔಷಧಿ ಖರೀದಿಸಿ ಆ ಕುಟುಂಬಕ್ಕೆ ನೀಡಿದ್ದಾರೆ. ಔಷಧಿ ಕೈಸೇರುವವರೆಗೂ ವಿಷ್ಣುವಿನ ಈ ಸಾಹಸ ನೂರ್‌ಳ ಕುಟುಂಬಕ್ಕೆ ತಿಳಿದಿರಲಿಲ್ಲ.

ಆಲಪ್ಪುಳಾ ನಾರ್ತ್ ಸ್ಟೇಷನ್‌ನ ನಾಗರಿಕ ಪೊಲೀಸ್ ಅಧಿಕಾರಿ ಮತ್ತು ವಿಷ್ಣುವಿನ ನೆರೆಹೊರೆಯ ಆಂಟನಿ ರತೀಶ್, “ನಾನು ನೂರ್‌ನ ಕುಟುಂಬವನ್ನು ಕೆಲವು ತಿಂಗಳುಗಳಿಂದ ತಿಳಿದಿದ್ದೇನೆ. ಮಾರ್ಚ್ 30 ರಂದು, ಆಕೆಯ ತಾಯಿ ನನಗೆ ಕರೆ ಮಾಡಿ, ತನ್ನ ಮಗಳ ಕೀಮೋಥೆರಪಿಯನ್ನು ರದ್ದುಪಡಿಸಲಾಗಿದೆ ಮತ್ತು ವೈದ್ಯರು ಔಷಧಿ ತೆಗೆದುಕೊಳ್ಳುವುದನ್ನು ಮುಂದುವರೆಸಬೇಕೆಂದು ಕೇಳಿಕೊಂಡಿದ್ದಾರೆ. ಆದರೆ ಅವರ ಮನೆಯಲ್ಲಿ ಔಷಧಿ ಖಾಲಿಯಾಗಿತ್ತಲ್ಲದೇ ಆಲಪ್ಪುಳದಲ್ಲಿ ಎಲ್ಲಿಯೂ ಔಷಧಿಯನ್ನು ಸಿಗಲಿಲ್ಲ. ಅವರು ಲಾಕ್‌ಡೌನ್‌ ಸಮಯದಲ್ಲಿ ಔಷಧಿ ತರಲು ತಿರುವನಂತಪುರಂಗೆ ಕ್ಯಾಬ್ ತೆಗೆದುಕೊಳ್ಳುವಷ್ಟು ಹಣ ಹೊಂದಿಲ್ಲ” ಎಂದು ತಿಳಿಸಿದ್ದರು.

ಆ ನಂತರ ಅವರಿಗೆ ಹೇಗೆ ಸಹಾಯ ಮಾಡಬೇಕೆಂದು ಆಶ್ಚರ್ಯಪಟ್ಟ ರತೀಶ್, ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ನೆರೆಹೊರೆಯ ವಿಷ್ಣುವನ್ನು ಸಂಪರ್ಕಿಸಿದರು. ಆದರೆ ವಿಷ್ಣು ಆ ರಾತ್ರಿ ತಾನೇ ತಿರುವನಂತಪುರಕ್ಕೆ ತೆರಳಿದ್ದರು ಮತ್ತು ಅವರು ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸುವವರೆಗೆ ಒಂದು ವಾರ ಅಲ್ಲಿಯೇ ಇರಲು ಯೋಜಿಸಿದ್ದರು.

“ನಾನು ಅವರಿಗೆ ಕರೆ ಮಾಡಿದಾಗ ಅವರು ತಿರುವನಂತಪುರಂ ತಲುಪಿದ್ದರು. ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದಿಂದ ಔಷಧಿಯನ್ನು ಖರೀದಿಸಿ ಕೊಲ್ಲಂ ಜಿಲ್ಲೆಯವರೆಗೆ ಮಾತ್ರ ತಲುಪಿಸಬಹುದು ಎಂದು ಹೇಳಿದರು. ಆದರೆ ಮರುದಿನ ಬೆಳಿಗ್ಗೆ ಅವರು ಮನಸ್ಸು ಬದಲಿಸಿ 150 ಕಿಲೋಮೀಟರ್ ಸವಾರಿ ಮಾಡಿ, ನೂರ್‌ನ ಮನೆ ಬಾಗಿಲಿಗೆ ಹೋಗಿ ಔಷಧಿಗಳನ್ನು ತಲುಪಿಸಿದನು. ಆ ರಾತ್ರಿ ಅವನು ಮಲಗಿದ್ದನೆಂದು ನಾನು ಭಾವಿಸುವುದಿಲ್ಲ” ಎಂದು ರತೀಶ್ ಹೇಳುತ್ತಾರೆ.

ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ 32 ವರ್ಷದ ಸಾರ್ಜೆಂಟ್ ವಿಷ್ಣು, ಔಷಧಿಗಳನ್ನು ವಿತರಿಸಿದ ನಂತರ ಆಲಪ್ಪುಳದಲ್ಲಿ ಒಂದು ದಿನ ಇದ್ದು ನಂತರ ತಿರುವನಂತಪುರಂಗೆ ಹಿಂತಿರುಗಿದ್ದಾರೆ.

ಲಾಕ್‌ಡೌನ್ ಹೊರತಾಗಿಯೂ ನೂರ್‌ಗೆ ಈಗ ಅಗತ್ಯ ಔಷಧಿಗಳು ಲಭ್ಯವಾದ್ದರಿಂದ, ಅವರ ಕುಟುಂಬವು ಸಂತೋಷದಲ್ಲಿದೆ. ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಸಹಾಯ ಒದಗಿದ್ದಕ್ಕೆ ಅವರು ಕೃತಜ್ಞರಾಗಿದ್ದಾರೆ.

“ನಾನು ಪ್ರತಿ ಬಾರಿ ನನ್ನ ನಮಾಜ್ ಮಾಡುವಾಗ ಈ ಇಬ್ಬರು ಪುರುಷರ ಬಗ್ಗೆ ಯೋಚಿಸುತ್ತೇನೆ. ಅಲ್ಲಾಹನು ಯಾವಾಗಲೂ ಅವರನ್ನು ಆಶೀರ್ವದಿಸುವನು ”ಎಂದು ನೂರ್ ತಾಯಿ ಮಲಯಾಳಂ ಪತ್ರಿಕೆಗೆ ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...