Homeಮುಖಪುಟಕಾನೂನುಬಾಹಿರವಾಗಿ ಸಿಂಹ ಘರ್ಜನೆ ಮಾಡುವ ಕೆಂಪೇಗೌಡ ಬೇಕಿಲ್ಲ – ಮಾನವೀಯ ಸ್ಪಂದನೆಯ ಪೊಲೀಸ್ ಪಾತ್ರಗಳು ಮೂಡಲಿ

ಕಾನೂನುಬಾಹಿರವಾಗಿ ಸಿಂಹ ಘರ್ಜನೆ ಮಾಡುವ ಕೆಂಪೇಗೌಡ ಬೇಕಿಲ್ಲ – ಮಾನವೀಯ ಸ್ಪಂದನೆಯ ಪೊಲೀಸ್ ಪಾತ್ರಗಳು ಮೂಡಲಿ

- Advertisement -
- Advertisement -

”ಸಿಂಹನ ಫೋಟೋದಲ್ಲಿ ನೋಡಿರ್ತೀಯಾ.. ಸಿನಿಮಾದಲ್ಲಿ ನೋಡಿರ್ತೀಯಾ… ಟಿವಿಯಲ್ಲಿ ನೋಡಿರ್ತೀಯಾ… ಅಷ್ಟೆ ಯಾಕೆ ಝೂನಲ್ಲಿ ನೋಡಿರ್ತೀಯಾ… ರಾಜಗಾಂಭೀರ್ಯದಿಂದ ಯಾವತ್ತಾದರೂ ಕಾಡಲ್ಲಿ ಓಡಾಡುವುದನ್ನ ನೋಡಿದ್ಯಾ? ಒಂಟಿಯಾಗಿ ರೋಷದಿಂದ ಯಾವತ್ತಾದರೂ ಬೇಟೆ ಆಡುವುದನ್ನ ನೋಡಿದ್ಯಾ?….. ತೊಂದರೆ ಕೊಡೋರಿಗೆ ಈ ಕೆಂಪೇಗೌಡ ಬಿಡಲ್ಲ!” ಕನ್ನಡ ಸಿನೆಮಾವೊಂದರ ಈ ಡೈಲಾಗ್ ಅನ್ನು ಎಷ್ಟು ಟಿವಿ ಶೋಗಳಲ್ಲಿ ಮಕ್ಕಳಿಂದ ಹಿಡಿದು ಉದಯೋನ್ಮುಖ ನಟರವರೆಗೂ ಅದೆಷ್ಟು ಬಾರಿ ಪುನರುಚ್ಛರಿಸಿದ್ದಾರೋ! ಸಾಮಾನ್ಯವಾಗಿ ನಾಯಕನಟನನ್ನು ವಿಜೃಂಭಿಸುವ ಯಾವುದೇ ಪಾತ್ರವಾದರೂ ಇಂತಹ ಅತಿ ಎನ್ನಿಸುವ “ಪಂಚಿಂಗ್” ಡೈಲಾಗ್‌ಗಳನ್ನು ಹೊಡೆಯುವುದು ಕನ್ನಡ ಮತ್ತು ಭಾರತೀಯ ಚಲನಚಿತ್ರಗಳಿಗೆ ಹೊಸದೇನಲ್ಲ. ಕನ್ನಡ ಚಿತ್ರರಂಗವೂ ಒಳಗೊಂಡಂತೆ ಭಾರತ ಚಿತ್ರರಂಗದಲ್ಲಿ ಕಮರ್ಶಿಯಲ್ ಅಥವಾ ಮಸಾಲ ಸಿನೆಮಾಗಳು ಎಂಬ ವರ್ಗದಲ್ಲಿ ಮೂಡಿಬರುವ ಚಲನಚಿತ್ರಗಳ ಇಂತಹ ಪಾತ್ರಗಳು ಮತ್ತು ಅವು ಪ್ರೇಕ್ಷಕರಿಗೆ ಕಟ್ಟಿಕೊಡುವ ಬದಲಿ ವಾಸ್ತವ ಮತ್ತು ಅದು ಒಟ್ಟಾರೆಯಾಗಿ ಸಮಾಜದ ಮೇಲೆ ಬೀರಬಹುದಾದ ಪರಿಣಾಮ, ಅಧ್ಯಯನಕ್ಕೆ ಒಳಪಟ್ಟಿರುವುದು ಮತ್ತು ಜನಸಾಮಾನ್ಯರ ಮಟ್ಟದಲ್ಲಿ ಗಂಭೀರ ಚರ್ಚೆ ಆಗಿರುವುದು ಬಹಳ ಕಡಿಮೆ ಎನ್ನಬಹುದು. (ಕೆಲವೇ ಕೆಲವು ಅಕಾಡೆಮಿಕ್ ಸಿನೆಮಾ ಅಧ್ಯಯನಗಳನ್ನು ಹೊರತುಪಡಿಸಿ).

ಮೇಲಿನ ಸಂಭಾಷಣೆ ಇರುವ ಕೆಂಪೇಗೌಡ ಸಿನೆಮಾ ಬಿಡುಗಡೆಯ ದಿನಾಂಕ ಮತ್ತು ಮುಂದಿನ ಕೆಲವು ದಿನಗಳಲ್ಲಿ ಈ ಚಲನಚಿತ್ರದ ಬಗ್ಗೆ ಜನಪ್ರಿಯ ಮಾಧ್ಯಮಗಳಲ್ಲಿ ಮಾಡಿರಬಹುದಾದ ವಿಮರ್ಶೆಗಳನ್ನು ಹುಡುಕಿ ನೋಡಿದರೆ, ಅವುಗಳಲ್ಲಿ ಬಹುತೇಕ ಮಾಧ್ಯಮಗಳು ಅಥವಾ ಎಲ್ಲವೂ ಕೆಂಪೇಗೌಡನ ಪಾತ್ರವನ್ನು ಮತ್ತು ಇಡಿಯಾಗಿ ಆ ಸಿನೆಮಾವನ್ನು ವಿಮರ್ಶಾತೀತವಾಗಿ ಹೊಗಳಿ ಅಟ್ಟಕ್ಕೆ ಏರಿಸಿರುತ್ತವೆ.

ಜುಲೈ ಮೊದಲ ವಾರದಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಚಿಕ್ಕ ಪಟ್ಟಣವಾಗಿರುವ ಸಾತಾನ್‌ಕುಳಂನಲ್ಲಿ, ಕೊರೊನ ನಿರ್ಬಂಧಿತ ಸಮಯದಲ್ಲಿ ಅಂಗಡಿ ಮುಚ್ಚಲು ವಿಳಂಬ ಮಾಡಿದರು ಎಂಬ ಕಾರಣಕ್ಕೆ ಜಯರಾಜ್ ಮತ್ತು ಬೆನಿಕ್ಸ್ (ಅಪ್ಪ-ಮಗ) ಅವರನ್ನು ಬಂಧಿಸಿ ಲಾಕಪ್‌ನಲ್ಲಿ ಪೊಲೀಸರು ನಡೆಸಿದ ದೌರ್ಜನ್ಯಕ್ಕೆ ಅವರಿಬ್ಬರೂ ನಿಧನರಾಗಿದ್ದರು. ಇದಕ್ಕೆ ತಮಿಳುನಾಡಿನಾದ್ಯಂತ ನಡೆದ ಪ್ರತಿಭಟನೆಗಳಿಂದ ಎಚ್ಚೆತ್ತು ಆ ಪೊಲೀಸರನ್ನು ವಜಾಗೊಳಿಸಿ, ತನಿಖೆಗೆ ಆದೇಶಿಸಲಾಗಿದೆ. ಇದು ಪೊಲೀಸ್ ವ್ಯವಸ್ಥೆ ಮತ್ತು ರಾಜಕೀಯ ಮಾತ್ರವಲ್ಲದೆ ಹಲವು ಕ್ಷೇತ್ರಗಳಲ್ಲಿ ಆತ್ಮಾವಲೋಕನಕ್ಕೆ ಕಾರಣವಾಗಿದೆ.

ಈ ಘಟನೆಯ ಬೆನ್ನಲ್ಲಿಯೇ ‘ಸಿಂಗಂ’ ತಮಿಳು ಸಿನೆಮಾದ ನಿರ್ದೇಶಕ ಹರಿ ಅವರು ತೂತುಕುಡಿಯ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ತನ್ನ ಐದು ಸಿನೆಮಾಗಳಲ್ಲಿ ಪೋಲೀಸರನ್ನು ವೈಭವೀಕರಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ನಟ ಸುದೀಪ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ನಟಿಸಿರುವ ಈ ಕೆಂಪೇಗೌಡ ಹರಿ ನಿರ್ದೇಶನದ ಸಿಂಗಂನ ರಿಮೇಕ್.

ಸುಮಾರು ಎರಡೂವರೆ ಘಂಟೆಯ ಈ ಸಿನೆಮಾವನ್ನು ಪೂರ್ತಿಯಾಗಿ ನೋಡಲು ಸಾಧ್ಯವಾದರೆ, 90ರ ದಶಕದ ನಂತರ ಕನ್ನಡ-ಭಾರತೀಯ ಸಿನೆಮಾದಲ್ಲಿ ಸಾಮಾನ್ಯವಾಗಿ ಪೊಲೀಸ್ ಪಾತ್ರವನ್ನು ಕಟ್ಟಿಕೊಡುವ ಎಲ್ಲ ಬಗೆಗಳನ್ನು ಕಾಣಬಹುದು. ಒಂದು: ಲಾರ್ಜರ್ ದ್ಯಾನ್ ಲೈಫ್ ಅನ್ನಲಾಗುವ ದಕ್ಷ ಅಧಿಕಾರಿ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಸಮಾಜವನ್ನು ರಕ್ಷಿಸಬಲ್ಲ ಏಕೈಕ ವ್ಯಕ್ತಿ ಈತ. ಈತನಿಗೆ ಕಾನೂನು-ಸಂವಿಧಾನದ ಯಾವುದೇ ಅಂಕುಶ ಇಲ್ಲ. ವೈಯಕ್ತಿಕ ನೆಲೆಯಲ್ಲಿ ಭ್ರಷ್ಟ ಅಲ್ಲ ಅನ್ನುವ ನೈತಿಕತೆ ಒಂದೇ ಮಾನದಂಡ. ಪುರುಷಾಹಂಕಾರದ ಮೇರು ಶಿಖರದ ಪಾತ್ರ. ಕೇಂಪೇಗೌಡ ಚಲನಚಿತ್ರದಲ್ಲಿ ನಟ ಸುದೀಪ್ ಇಂತಹ ಪಾತ್ರವನ್ನು (ಕೆಂಪೇಗೌಡ) ಪೋಷಿಸಿದ್ದಾರೆ. ಎರಡು: ಪಕ್ಕಾ ಭ್ರಷ್ಟ ಅಧಿಕಾರಿ. ಆತನಿಗೆ ರೌಡಿಗಳು ಮತ್ತು ಭ್ರಷ್ಟ ರಾಜಕಾರಿಣಿಗಳ ಜೊತೆಗೆ ಶಾಮೀಲಾಗುವುದರ ಹೊರತು ಬೇರೇ ಜೀವನವೇ ಇಲ್ಲ. ಇಂತಹ ಪಾತ್ರವನ್ನು ಕೆಂಪೇಗೌಡ ಸಿನೆಮಾದಲ್ಲಿ ಜೈಜಗದೀಶ್ ಪೋಷಿಸಿದ್ದಾರೆ. ಮೂರನೆಯದು: ಪೆದ್ದ ಪೇದೆ. ಕೆಟ್ಟ ಪೋಲಿ ಜೋಕುಗಳನ್ನು ಮಾಡಿಕೊಂಡು, ಜನಸಾಮಾನ್ಯರ ಕೈಲಿ ಯಾವಾಗಲು ಬೈಸಿಕೊಳ್ಳುವ, ಸಣ್ಣ ಪುಟ್ಟ ಚಿಲ್ಲರೆ ಕಳ್ಳರ ಕೈಲಿ ಚಳ್ಳೆಹಣ್ಣು ತಿನ್ನಿಸಿಕೊಳ್ಳುವ, ಗಿಂಬಳಕ್ಕೆ ಕೈಯ್ಯೊಡ್ಡುವ, ನಾಯಕ ಪಾತ್ರಕ್ಕೆ ಸೈಡ್ ಕಿಕ್‌ನಂತಿರುವ ಪಾತ್ರ ಇದು. ಇಂತಹ ಪಾತ್ರವನ್ನು ಕೆಂಪೇಗೌಡ ಚಲನಚಿತ್ರದಲ್ಲಿ ಶರಣ್ ಪೋಷಿಸಿದ್ದಾರೆ (ಬಹುಶಹ ‘ಪ್ಯಾದೆ’ ಎನ್ನುವ ಹೀಯಾಳಿಸುವ ವಾಚಕ ಇದರಿಂದಲೇ ಹುಟ್ಟಿರಬೇಕು).

ಇಂತಹವೇ ಹೇರಳ ವಿಕ್ಷಿಪ್ತ ಪಾತ್ರಗಳನ್ನು ಸೃಷ್ಟಿಸಿಕೊಂಡು ವಿಜೃಂಭಿಸಿರುವ ಕನ್ನಡ ಚಲನಚಿತ್ರರಂಗ, ತೂತುಕುಡಿ ಘಟನೆಯ ನಂತರ ಸಿಂಗಂ ನಿರ್ದೇಶಕ ಹರಿ ಕೊಟ್ಟಿರುವ ವಿಷಾದದ ಹೇಳಿಕೆಯಂತೆಯಾದರೂ ಆತ್ಮವಿಮರ್ಶೆ ಮಾಡಿಕೊಂಡಿರುವ ಸನ್ನಿವೇಶ ನಮಗೆ ಕಾಣಸಿಗುವುದಿಲ್ಲ. ಪೊಲೀಸರ ಜೀವನದಲ್ಲಿಯೂ ಇರಬಹುದಾದ ಒಳ ಬೇಗುದಿಯನ್ನು ಪ್ರತಿನಿಧಿಸುವ, ಅವರಿಗೆ ಇರಬೇಕಾದ ಮಾನವೀಯತೆ, ಮಾನವ ಹಕ್ಕುಗಳ ಬಗ್ಗೆ ಕಾಳಜಿ, ಅಡ್ಡಿ ಆತಂಕಗಳನ್ನು ನೈಜ್ಯವಾಗಿ ತೋರಿಸಿ-ಪ್ರತಿನಿಧಿಸುವ ಅಥವಾ ಆದರ್ಶಮಯವಾಗಿ ಕಟ್ಟಿಕೊಡುವ ಪಾತ್ರಗಳನ್ನು ಕನ್ನಡ ಚಿತ್ರರಂಗ ಸೃಷ್ಟಿಮಾಡಿದ್ದು ವಿರಳಾತಿವಿರಳ.

ಸಂವಿಧಾನದ ಚೌಕಟ್ಟಿನಲ್ಲಿ, ಐಪಿಸಿ ಕಾಯ್ದೆಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ, ಕಾನೂನು ವ್ಯವಸ್ಥೆಗಳನ್ನು ತಿಳಿಹೇಳಿ ಕರ್ತವ್ಯ ನಿರ್ವಹಿಸುವ ರೀತಿಯ ಪೊಲೀಸ್ ಪಾತ್ರಗಳು ನಮಗೆ ಬೇಕೇ ಹೊರತು ಕಾನೂನನ್ನು ಗಾಳಿಗೆ ತೂರಿ ಉತ್ಪ್ರೇಕ್ಷೆಯೇ ಸಾಮಾನ್ಯ ಎಂಬುವಂತೆ ಪುರುಷ ಅಹಂಕಾರದ ಅಧಿಪತ್ಯವನ್ನು ಮೆರೆದು ಸಾಧಿಸುವ ಕೆಂಪೇಗೌಡನಂತಹ ಪಾತ್ರಗಳಲ್ಲ. ಅಥವಾ ಟಗರು ಸಿನೆಮಾದಲ್ಲಿ ಕಾನೂನುಬಾಹಿರವಾಗಿ ರೌಡಿಯನ್ನು ಕೊಂದುಹಾಕುವ ಪೊಲೀಸ್ ಅಧಿಕಾರಿಯ ಪಾತ್ರವೂ ಅಲ್ಲ.

ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಧಾರಾವಾಹಿ ಪಾತಾಳ್‌ಲೋಕ್‌ನ ಮುಖ್ಯ ಪೊಲೀಸ್ ಅಧಿಕಾರಿಯ ಪಾತ್ರದ ಬೆಳವಣಿಗೆಯನ್ನು, ಅಥವಾ ಆ ಪಾತ್ರದ ಬದಲಾವಣೆಯನ್ನು ಆ ನಿಟ್ಟಿನಲ್ಲಿ ನಿರ್ದೇಶಕ ಕಟ್ಟಿಕೊಡಲು ಪ್ರಯತ್ನಿಸಿದ್ದಾನೆ ಎನ್ನಬಹುದು. (ತನ್ನ ಗೆಳೆಯರಿಗೆ ಥಳಿಸಿದಾಗ ಅಪ್ಪನ ಮೇಲಿದ್ದ ಉದಾಸೀನ ಭಾವನೆ ತೊಲಗಿ ಮಗನಿಗೆ ಪ್ರೀತಿ ಮೂಡುವ ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿದರೆ).

2019ರಲ್ಲಿ ಮೂಡಿಬಂದ ಅನುಭವ್ ಸಿನ್ಹಾ ಅವರ ನಿರ್ದೇಶನದ ‘ಆರ್ಟಿಕಲ್ 15’ನ ಐಪಿಎಸ್ ಅಧಿಕಾರಿ ಮುಖ್ಯ ಪಾತ್ರಕ್ಕೂ ಅಂತಹ ಸಾಧ್ಯತೆಯನ್ನು ನಿರ್ದೇಶಕ ಮೂಡಿಸಿದ್ದಾರೆ. ಕಾನೂನು ಮತ್ತು ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ನಿರ್ವಹಿಸುವ ಪೊಲೀಸ್ ಅಧಿಕಾರಿ, ತನ್ನೆಲ್ಲಾ ಸವಾಲುಗಳ ನಡುವೆ ಮಾನವೀಯ ನೆಲಯಲ್ಲಿ ಕಾರ್ಯನಿರ್ವಹಿಸುವ ಚಿತ್ರಣಕ್ಕೆ ‘ಲಾರ್ಜರ್ ದ್ಯಾನ್ ಲೈಫ್’ ಪಾತ್ರದಂತೆ ಕಾಣಿಸಿಕೊಳ್ಳುವ ಶಕ್ತಿಯೂ ಇದೆ.

ಪೊಲೀಸ್ ಪಾತ್ರಗಳನ್ನು ಕಟ್ಟಿಕೊಡುವುದು ಒಂದು ಸಮಸ್ಯೆ ಆದರೆ, ಕಲಾವಿದನಾದವನು ತನ್ನ ಸುತ್ತಲಿನ ಸಂಗತಿಗಳಿಗೆ ಸ್ಪಂದಿಸುವ ಬಗ್ಗೆಯೂ ತೂತುಕುಡಿ ಘಟನೆ ಚರ್ಚೆಯನ್ನು ಎತ್ತಿದೆ. ತಮಿಳುನಾಡಿನ ಘಟನೆಯನ್ನು ಖಂಡಿಸಿ ಹಲವು ಪ್ರಾಜ್ಞ ತಮಿಳು ನಟ – ನಿರ್ದೇಶಕರು ಧ್ವನಿ ಎತ್ತಿದ್ದಾರೆ. ಪೊಲೀಸ್ ಸುಧಾರಣೆಗೆ ಕರೆಕೊಟ್ಟಿದ್ದಾರೆ. ತಮಿಳು ನಿರ್ದೇಶಕ ಪ.ರಂಜಿತ್ ಸೇರಿದಂತೆ ಮುಂತಾದವರು ಇದರ ಬಗ್ಗೆ ಮಾತನಾಡಿದ್ದಾರೆ. 2015 ರ ವೆಟ್ರಿಮಾರನ್ ನಿರ್ದೇಶನದ ತಮಿಳು ಚಲನಚಿತ್ರ ವಿಸಾರಣೈ ಪೊಲೀಸ್ ದೌರ್ಜನ್ಯದ ಕಥಾಹಂದರ ಹೊಂದಿದೆ. ಈ ಚಿತ್ರಕಥೆಗೆ ತಮಿಳು ಬರಹಗಾರ ಚಂದ್ರಶೇಖರ್ ಅವರ ‘ಲಾಕಪ್’ ಮೂಲ. ಚಂದ್ರಶೇಖರ್ ಸ್ವತಃ ಪೊಲೀಸ್ ದೌರ್ಜನ್ಯಕ್ಕೆ ಗುರಿಯಾಗಿದ್ದ ಸತ್ಯ ಘಟನೆಯ ಆಧಾರಿತ ಸಿನೆಮಾ ಇದು. ಚಂದ್ರಶೇಖರ್ ಅವರು ಇಂದಿಗೂ ಗಟ್ಟಿಯಾಗಿ ಇಂತಹ ಪೊಲೀಸ್ ದೌರ್ಜನ್ಯಗಳನ್ನು ಖಂಡಿಸುತ್ತಲೇ ಬಂದಿದ್ದಾರೆ.

ಇದೇ ಕೆಲವು ತಿಂಗಳ ಹಿಂದೆ ಮಂಗಳೂರಿನಲ್ಲಿ ಸಿಎಎ – ಎನ್‌ಆರ್‌ಸಿ ಪ್ರತಿಭಟನೆಯ ಸಮಯದಲ್ಲಿ ಆದ ಗೋಲೀಬಾರ್‌ನಲ್ಲಿ ಇಬ್ಬರು ನಾಗರಿಕರು ಮೃತಪಟ್ಟಾಗ, ಅದಕ್ಕೆ ಸ್ಪಂದಿಸಿದ, ಘಟನೆಯನ್ನು ಖಂಡಿಸಿದ ಕನ್ನಡ ಚಲನಚಿತ್ರರಂಗದ ಮಂದಿ ಎಷ್ಟು? ಹಾಗೆಯೇ ಕನ್ನಡ ಚಲನಚಿತ್ರಗಳ ಆಯ್ಕೆಯ ವಸ್ತುವಿನಲ್ಲಿ ವಿಸಾರಣೈನಂತಹ ಕಥಾವಸ್ತು ಮೂಡುವುದು ಅಸಾಧ್ಯ ಅಥವಾ ಅಪರೂಪ ಅನ್ನುವ ಮಟ್ಟಕ್ಕೆ ಬಂದಿಳಿದಿರುವುದು ಏಕೆ ಮತ್ತು ಹೇಗೆ? ಇವೆಲ್ಲಾ ಪ್ರಶ್ನೆಗಳು ತೂತುಕುಡಿ ಘಟನೆಯ ಹಿನ್ನಲೆಯಲ್ಲಿ ಮುಖ್ಯವಾಗುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...