Homeಕರ್ನಾಟಕಕೊರೋನಾಲಜಿ ಏನೆಂದು ಬಲ್ಲಿರಾ, ನೀವು ಬಲ್ಲಿರಾ?

ಕೊರೋನಾಲಜಿ ಏನೆಂದು ಬಲ್ಲಿರಾ, ನೀವು ಬಲ್ಲಿರಾ?

- Advertisement -
- Advertisement -

ಇದೇ ಎಪ್ರಿಲ್ 13 ನೇ ತಾರೀಕಿನಂಗ ವಿಶ್ವದಾಗ 18 ಲಕ್ಷ 95 ಸಾವಿರ ಜನರಿಗೆ ಕೊರೊನಾ ಸೋಂಕು ಹಬ್ಬೇದ. ಅದರಾಗ ಸುಮಾರು. 1 ಲಕ್ಷ 17 ಸಾವಿರ ಜನ ನಿಧನ ಹೊಂದಿದಾರ ಮತ್ತು ಸುಮಾರು 4 ಲಕ್ಷ 38 ಸಾವಿರ ಜನ ಆರಾಮಾಗಿದಾರ. ಹಿಂದೂಸ್ತಾನದಾಗ 9,635 ಜನರಿಗೆ ರೋಗ ಬಂದು 331 ಜನ ಸತ್ತಾರ. ಸತ್ತವರಿಗಿಂತ ಉಳದವರ ಸಂಖ್ಯ ಸುಮಾರು ನಾಲ್ಕು ಪಟ್ಟು ಅನ್ನೋದನ್ನ ನಾವು ಮರಿಯೋದು ಬ್ಯಾಡ.

ಆದರ ನಮ್ಮ ಭಾರತದಾಗ ಒಂದು ಮಜಾ ಆಗೇತಿ. ಸಿಂಧೂ ನದಿಯ ದೊಣ್ಣೆ ನಾಯಕರೂ, ಕೇಂದ್ರ ಗೃಹ ಸಚಿವರೂ ಆದ ಮಿತಿಯಿಲ್ಲದ ಮಹಿಪತಿ ಅಮಿತ ಷಾ ಅವರು ಇಲ್ಲಿಯವರೆಗೂ ಹೊರಗ ಕಾಣಿಸಿಕೊಂಡಿಲ್ಲ.

ಈ ಕೊರೋನಾದ ಬಗ್ಗೆ `ಕುಛ ಕರೋ ನಾ’ ಅಂತ ಅವರಿಗೆ ಅವರ ನಾಯಕರು ಹೇಳಿರಬಹುದು. ಅಥವಾ ಅವರಿಗೆ ಮೈಗೆ ಹುಷಾರಿಲ್ಲದಂಗ ಆಗಿರಬಹುದು. ಅಥವಾ ಅವರು ಸುಂಕದಕಟ್ಟಿಯೊಳಗ ಕುತಗೊಂಡು `ನಾನು ಎದ್ದು ಬಂದರ ನೋಡು’ ಅಂತ ಹೆದರಸೋ ಕುಂಟನಂಗ ಸುಮ್ಮನೇ ಕೂತಿರಬಹದು. ಏಲ್ಲಾ ಅಸ್ತ್ರಗಳು ಮುಗದ ಮ್ಯಾಲೆ ಬ್ರಹ್ಮಾಸ್ತ್ರ ಬರೋಹಂಗ ಅವರು ಸೈನ್ಯ, ಅರೆ ಸ್ಯನ್ಯ, ಪೊಲೀಸೋ, ಅರೆ ಪೊಲೀಸೋ, ಅವರ್ಯಾರು ಸಿಗಲಿಲ್ಲ ಅಂದರ ಕಡೀಕೆ ಪೊಲೀಗಳ ಸೈನ್ಯ ಕಟಗೊಂಡು ರೋಡಿಗೆ ಇಳಿಯಬಹುದು. ಹಂಗ ಮಾಡಿದರನ ನನಗೆ ಮುಂದ ಕಿರೀಟ ಸಿಗಬಹುದು ಅಂದುಕೊಂಡಿರಬಹುದು.

ಏನರ ಇರಲಿ.

ಅವರ ಮನಸಿನೊಳಗ ಪರಮನ ಪ್ರವೇಶ ಮಾಡಿದರ ಏನಿರಬಹುದು ಅಂತ ನೋಡಿದರ ಒಂದು ಕೊರೊನೋಲೋಜಿ ಸ್ಪಷ್ಟವಾಗಿ ಕಾಣತದ.
ನವಂಬರ ಎರಡನೇ ವಾರದೊಳಗ ಚೈನಾದ ವುಹಾನ ಪ್ರಾಂತದಾಗ ಕೊರೋನಾ ಬಂತು. ಮಾರವಾಡಿಗಳ ಮನಿ ದೇವರುಗಳಾದ ಚೀನಾದವರು “ಅದೇನು ಬರೇ ಫ್ಲೂ…ಪಿಸ್ಯಾ” ಅಂತ ಅಲಕ್ಷ ಮಾಡಿದರು. ಈ ಅಲಕ್ಷದಿಂದ ಎಪ್ರಿಲ ತನಕಾ ಲಕ್ಷ ಜನ ಜೀವ ಕಳಕೊಳ್ಳೋಹಂಗಾತು.

ಅದಾಗಿ ಒಂದು ತಿಂಗಳಿಗೆ ಚೈನಾದವರು ಅಮೇರಿಕದವರ ಜೊತಿಗಿ ವ್ಯಾಪಾರ ಒಪ್ಪಂದ ಮಾಡಿಕೊಂಡರು. ಅದರಾಗ `ದೇವರ ಕೈಚಳಕ’ ದಿಂದಾಗಿ ಏನರ ಅಮೇರಿಕಾ ಕಂಪನಿಗಳಿಗೆ ನಷ್ಟ ಆದರ ನಾವು ಜವಾಬುದಾರರಲ್ಲ ಅಂತ ಒಂದು ಸಾಲು ಹಾಕಿದರು.

ಅದಾಗಿ ಒಂದು ತಿಂಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾದ ಟೆಡ್ರೋಸ್ ಅಧಾನಾಮ ಅನ್ನೋ ಅರ್ಧ ಹೆಸರಿನ ಮನುಷ ಇದು ಪ್ರಾದೇಶಿಕ ಸಮಸ್ಯೆ. ಇದನ್ನ ಜಾಗತಿಕ ಸಮಸ್ಯೆ ಅನ್ನಲಿಕ್ಕೆ ನಾವು ತಯಾರು ಇಲ್ಲ ಅಂತಂದರು. ಇದರ ಮುಂದಿನ ತಿಂಗಳ ಏನೇನೂ ಆಗಲಿಲ್ಲ. ಬರೇ ಚೈನಾದ ಸುದ್ದಿ, ಅಲ್ಲಿನ ಸಾವು – ನೋವು ಇಷ್ಟ. ಬ್ಯಾರೆ ದೇಶದೊಳಗ ಅಂದರ ಇರಾನು- ಇರಾಕು- ಕೋರಿಯಾದಾಗ ಹಿಂಗದ – ಹಂಗದ ಅನ್ನೋ ಮಾತು. ಯುರೋಪಿನ – ಅಮೇರಿಕಾದ ಮಾತು ಬರಲಿಲ್ಲ.

ಫೆಬ್ರವರಿಯೊಳಗ ಇಟಲಿಯ ಸಾವಿನ ಸನ್ನಿ. ಅದಕ್ಕ ಹತ್ತಿಕೊಂಡ ಇದ್ದ ಇತರ ಯುರೋಪಿನ ದೇಶಗಳ ಬಗ್ಗೆ ಯಾರೂ ಮಾತಾಡಲಿಲ್ಲ. ನಾವು ಮಾತಾಡಲಿಲ್ಲ ಅಂದರ ವೈರಸ್ಸು ಏನು ಬಿಡತಾವ? ಅವು ಸಾವಿನ ಸೈನಿಕರಹಂಗ ಬೆನ್ನು ಹತ್ತಿ ಬಂದವು.

ಮಾರ್ಚಿನ್ಯಾಗಂತೂ ಸುದ್ದಿಯ ಹಂಗು ಇಲ್ಲದನ ಸಾವಿನ ಆಟ ಜೋರಾತು.

ಅದು ತೀರ ಕೈ ಮೀರಿ ಹೋದ ಮ್ಯಾಲೆ, ಮಾರ್ಚ 19 ಕ್ಕ ಘನ ಸರಕಾರ ವಿಮಾನ ನಿಲ್ದಾಣಗಳನ್ನ ಬಂದು ಮಾಡಿತು. ಜನವರಿಯಿಂದ ಮಾರ್ಚ ಒಳಗ ಸುಮಾರು 15 ಲಕ್ಷ ಜನ ಭಾರತದೊಳಗ ಹಾರಿಕೊಂಡು ಬಂದಾರ ಅಂತ ಕೇಂದ್ರ ವಿಮಾನಯಾನ ಕಾರ್ಯದರ್ಶಿ ಹೇಳಿದರು. ಅವರನ್ನ ಯಾರನ್ನೂ ಸರಿಯಾಗಿ ತಪಾಸಣೆ ಮಾಡಿಲ್ಲ. ಅವರೊಳಗ ಎಷ್ಟು ಮಂದಿಗೆ ಸೋಂಕು ಇತ್ತೋ, ಅವರು ಎಷ್ಟು ಮಂದಿಗೆ ಅದನ್ನ ಖುಷಿಯಿಂದ ಹಂಚಿದರೋ ಗೊತ್ತಿಲ್ಲ.

ಈಗ ಏನಾಗೇದ ಅಂದರ ನಮ್ಮ ಸುದ್ದಿ ಭಯೋತ್ಪಾದಕರು ತಬ್ಲೀಘಿ ಜಮಾತಿನವರನ್ನ ಕರೊನಾ ಜಿಹಾದಿಗಳು ಅಂತ ಹಣೆ ಪಟ್ಟಿ ಕಟ್ಟಿ ಬಿಟ್ಟಾರ. ಅವರು ಬೇಜವಾಬ್ದಾರಿಯಿಂದ ಇದ್ದಾರ, ಇಷ್ಟೆಲ್ಲಾ ಭಾನಗಡಿ ಇದ್ದರೂ ದೆಹಲಿಗೆ ಹೋದರು ಅನ್ನೋದು ಬ್ಯಾರೆ. ಆದರ ಅವರು ಬೇಕಂತ ಮಾಡಲಿಕ್ಕೆ ಹತ್ಯಾರ. ಬ್ಯಾರೆಯವರ ಜೀವ ತಗೀಲಿಕ್ಕೆ ಸೋಂಕು ಹಂಚಲಿಕ್ಕೆ ಹತ್ಯಾರ ಅಂತ ಅಪಪ್ರಚಾರ ನಡದದ.

ಸಾಮಾನ್ಯ ಜ್ಞಾನ ಇದ್ದವರು ಯಾರೂ ಇದನ್ನ ಒಪ್ಪಲಿಕ್ಕೆ ಸಾಧ್ಯ ಇಲ್ಲ. ಬ್ಯಾರೆ ಅವರಿಗೆ ಹಂಚಲಿಕ್ಕೆ ಸಂಚು ಮಾಡೋರು ತಮ್ಮವರನ್ನ ಮೂರುವರೆ ಸಾವಿರ ಜನರನ್ನ ದೆಹಲಿಯೊಳಗ ಒಂದ ಕಡೆ ಕೂಡಿಸಿ ಸೋಂಕು ಹಂಚಿಕೊಳತಿದ್ದರೇನು? ಹೋಗಲಿ ಅಲ್ಲಿಂದ ಬಂದ ಮ್ಯಾಲೆ ಅವರು ಯಾರಿಗೆ ಸೋಂಕಿಸಲಿಕ್ಕೆ ಹತ್ಯಾರ? ತಮ್ಮ ಕುಟುಂಬದವರನ್ನ- ನೆರೆ ಹೊರೆಯವರನ್ನ. ಅವರು ಮುಸ್ಲಿಮ ಕಾಲನಿ ಬಿಟ್ಟು ಬ್ಯಾರೆ ಕಡೆ ಮನಿ ಮಾಡಲಿಕ್ಕೆ ನಾವು ಅವರನ್ನ ಬಿಟ್ಟರಲ್ಲಾ ಅವರು ಹಂಗ ಮಾಡೋದು?

ದೆಹಲಿ ನಿಜಾಮುದ್ದಿನಿಗೆ ಹೋದವರನ್ನ ಹೆಂಗ ಹಿಡಕೊಂಡು ಹಿಡಕೊಂಡು ತಪಾಸಣೆ ಮಾಡಲಿಕ್ಕೆ ಹತ್ಯಾರಲ್ಲಾ ಹಂಗ ಬ್ಯಾರೆ ಜಾತ್ರೆ- ಮದುವಿ- ಹುಟ್ಟಿದ ಹಬ್ಬ- ಗುರುದ್ವಾರ- ಚರ್ಚು ಭಜನಿ ಯೊಳಗ ಸೇರಿಕೊಂಡವರನ್ನ ತಪಾಸಣೆ ಮಾಡಲಿಲ್ಲ.

ಪಂಜಾಬಿನ ಗುರುದ್ವಾರದೊಳಗ ಒಂದು ವಾರ ನಡೆದ ಕಾರ್ಯಕ್ರಮದಿಂದಾಗಿ 20 ಸಾವಿರ ಜನ ಕ್ವಾರಂಟೈನಿಗೆ ಒಳಗಾಗಿದಾರ. ಅದರಾಗ ಹಾಡಿದ ರಾಗಿ ಸಂತರೊಬ್ಬರು ತೀರಿಕೊಂಡು ಹೋದ ಮ್ಯಾಲೆ ಇದು ಬೆಳಕಿಗೆ ಬಂತು. ಇನ್ನು ಬ್ಯಾರೆ ಕಡೆ, ಇಡೀ ದೇಶದ ತುಂಬಾ ಎಷ್ಟು ಇಂಥಾ ಜನ ಜಂಗುಳಿ ಕಾರ್ಯಕ್ರಮ ಆಗ್ಯಾವೋ ಯಾವಾನಿಗೆ ಗೊತ್ತು? ಆದರ ನಮ್ಮ ಸರಕಾರದ ಹೆಕ್ಕಿ – ಹೆಕ್ಕಿ ತೆಗೆದ ನಿರ್ಧಾರಗಳಿಂದ ಬರೆ ಜಮಾತಿನವರನ್ನ ತಪಾಸಣೆ ಮಾಡಿ ಅವರಿಗೆ ಕೆಟ್ಟ ಹೆಸರು ಬರೋಹಂಗಾತು. ಇದು ಕೇಂದ್ರದ ಬೇಜವಾಬುದಾರಿ ಇರಬಹುದು, ಅಥವಾ ಅವರು ಬೇಕಂತ ಮಾಡಿರಬಹುದು. ಅದನ್ನ ಅವರೇ ಹೇಳಬೇಕು.

ಇಡೀ ವಿಶ್ವದೊಳಗ ಅತಿ ಕಡಿಮಿ ತಪಾಸಣೆ ನಡಿಯೋ ದೇಶ ಭಾರತ. ಒಂದು ನೂರಾ ಮೂವತ್ತು ಕೋಟಿ ಜನರ ತಪಾಸಣೆಗೆ 160 ಸರಕಾರಿ ಹಾಗೂ 50 ಖಾಸಗಿ ಪ್ರಯೋಗಾಲಯ ಅದಾವು. ಎಲ್ಲಾ ಸೇರಿ ಒಂದು ದಿನಕ್ಕ ಬರೇ 5,000 ತಪಾಸಣೆ ನಡೀಬಹುದು.

ದಕ್ಷಿಣ ಕರ್ನಾಟಕದಾಗ ಐದು ಇದ್ದರ ಉತ್ತರದಾಗ ಮೂರು. ಬಳ್ಳಾರಿ ಜಿಲ್ಲಾಧಿಕಾರಿ ಪ್ರಯೋಗಾಲಯದ ಪಿಸಿಆರ್ ಯಂತ್ರ ಖರೀದಿ ಮಾಡಿ ಇಟಗೊಂಡರ ಸಹಿತ ಅವರಿಗೆ ಜಲ್ದಿ ಪರವಾನಗಿ ಸಿಗಲಿಲ್ಲ. ಬೆಳಗಾವಿಯೊಳಗ ಕೇಂದ್ರ ಸರಕಾರದ ಪ್ರಯೋಗಾಲಯ, ಜವಾಹರಲಾಲ ನೆಹರೂ ವೈದ್ಯ ವಿಜ್ಞಾನ ಕಾಲೇಜಿನ ವರು ಕೇಳಿದರೂ ಸಹ ಪರವಾನಗಿ ಸಿಗಲಿಲ್ಲ.

ಈ ರೀತಿಯ ಚುನಾಯಿತ ತಪಾಸಣೆಯನ್ನ, ಧರ್ಮಾಧಾರಿತ ನಿರ್ಧಾರಗಳನ್ನ ವೈಜ್ಞಾನಿಕ ಅನ್ನಬೇಕೋ, ಹುಷಾರು ಅನ್ನಬೇಕೋ, ಕುತಂತ್ರ ಅನ್ನಬೇಕೋ? ಇದರ ಹಿಂದ ರಾಜಕೀಯ ಐತಿ ಅಂತೀರೋ, ಇಲ್ಲಾ ಅಂತೀರೋ?

ಆಳುವ ಪಕ್ಷದ ಚಾಣಕ್ಯ ನೀತಿಯನ್ನ ಕಂಡವರು ಮಾತ್ರ ಇದು ಅವರ ಮುಂದಿನ ಚುನಾವಣಾ ತಂತ್ರ ಅನಲಿಕ್ಕೆ ಹತ್ಯಾರ.

ಮೊದಲಿನ ಚುನಾವಣೆಗೆ ಜುಮಲಾ ಆತು ಎರಡನೇ ಚುನಾವಣೆಗೆ ಪುಲವಾಮಾ ಸಾಕಾತು. ಇನ್ನ ಇದು ಈ ಕೋರೋನಾ ಪುರಾಣ ಎಷ್ಟು ಖಾರಪುಡಿ- ಮಸಾಲೆ ಕುಟ್ಟಿ ಇಟ್ಟದ ಅಂದರ ಮುಂದೆ ಬರೋ ಎಲ್ಲಾ ಚುನಾವಣೆಗಳಿಗೆ ಇದು ಸಾಕಾಗತದ ಅಂತ ಅವರಿಗೆ ಅನಸತದ. ಹೌದೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಯನ್ಸ ಬಗ್ಗೆ ಕಮ್ಮಿ ತಿಳುವಳಕೆ ಇರುವ ತಬ್ಲಿಗಿ ಹಿಂಬಾಲಕನ್ನು ಮೀಡಿಯಾಗಳು ರುಬ್ಬಿದವೇ ಹೊರತು, ಹೆಚ್ವು ಕಲಿತು ಹೊರನಾಡುಗಳಿಂದ ಕರೋನಾ ಕರೆತಂದವರನ್ನಲ್ಲ.
    ಆಳ್ವಿಕೆಯ ಹೆಡ್ಡತನವನ್ನೂ ಬಯಲುಮಾಡಲಿಲ್ಲ.

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...