Homeಬಹುಜನ ಭಾರತಜನಕೋಟಿಯ ಮಿದುಳು ಹೊಕ್ಕಿರುವ ವೈರಸ್ ಕತೆಯೇನು? - ಡಿ.ಉಮಾಪತಿ

ಜನಕೋಟಿಯ ಮಿದುಳು ಹೊಕ್ಕಿರುವ ವೈರಸ್ ಕತೆಯೇನು? – ಡಿ.ಉಮಾಪತಿ

ಮನುಷ್ಯನ ಭಾವ ಮತ್ತು ಬುದ್ಧಿಯ ಮೇಲೆ ದಾಳಿ ನಡೆಸುವ ದ್ವೇಷ- ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳು ಕೂಡ ಥೇಟ್ ಕೊರೋನಾ ರೀತಿಯೇ ಕೆಲಸ ಮಾಡುತ್ತವೆ.

- Advertisement -
- Advertisement -

ಪುನರುತ್ಪಾದನೆಯಾಗಿ ಹರಡಲು ವೈರಸ್‌ಗಳಿಗೆ ಜೀವಿ ದೇಹವೊಂದು ಬೇಕೇ ಬೇಕಂತೆ. COVID-19 ಕೂಡ ಈ ಮಾತಿಗೆ ಹೊರತಲ್ಲ. ಮೂಲಭೂತವಾಗಿ ವೈರಸ್ ಒಂದು ಆನುವಂಶಿಕ ವಸ್ತು. ತಂತಾನೇ ಏನನ್ನೂ ಮಾಡಲು ಸಾಧ್ಯವಿಲ್ಲ. ಪುನರುತ್ಪಾದನೆ ಮಾಡಲು ಅದು ಜೀವಿಯೊಂದರ ದೇಹಕ್ಕೆ ಲಗ್ಗೆ ಹಾಕಲೇಬೇಕು. ಜೀವಿಯ ದೇಹ ಸಿಗದಿದ್ದರೆ ಇಂತಿಷ್ಟು ದಿನಗಳೊಳಗಾಗಿ ಸತ್ತು ಹೋಗುತ್ತದೆ. ವೈರಸ್ ಬ್ಯಾಕ್ಟೀರಿಯಾದಂತಲ್ಲ. ಅದಕ್ಕೆ ತಿನ್ನಲು, ಕುಡಿಯಲು ಏನೂ ಬೇಕಿಲ್ಲ. ಏನನ್ನೂ ವಿಸರ್ಜಿಸಬೇಕಿಲ್ಲ, ಬಿಡುವು ಇಲ್ಲವೇ ವಿಶ್ರಾಂತಿಯ ಅಗತ್ಯ ಮೊದಲೇ ಇಲ್ಲ. ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ತನ್ನ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತ ಹೋಗುವುದೊಂದೇ ಅದರ ಏಕೈಕ ಕೆಲಸ. ಹೀಗಾಗಿ ಅದಕ್ಕೆ ಬೇಕಾದದ್ದೆಲ್ಲ ಜೀವಿಯೊಂದರ ದೇಹ.

ಕೊರೋನ ವೈರಸ್ ಲಗ್ಗೆ ಹಾಕಿದ್ದು ಮನುಷ್ಯ ದೇಹಕ್ಕೆ. ಮನುಷ್ಯ ದೇಹ ಪ್ರವೇಶಿಸಿ ಜೀವಕೋಶವೊಂದಕ್ಕೆ ಅಂಟಿಕೊಂಡು ಪುನರುತ್ಪಾದನೆಯಾಗುತ್ತವೆ ಈ ವೈರಸ್. ವೈರಸ್‌ಗಳ ಸಂಖ್ಯೆಯು ನಿರ್ದಿಷ್ಟ ಜೀವಕೋಶವು ಸಲಹಲಾರದಷ್ಟು ಹೆಚ್ಚಿದ ನಂತರ ಪಕ್ಕದ ಮತ್ತೊಂದು ಜೀವಕೋಶದ ಮೇಲೆ ದಾಳಿ ಮಾಡುತ್ತವೆ ಎನ್ನುತ್ತಾರೆ ಜೀವಿ ವಿಜ್ಞಾನಿಗಳು.

ಮನುಷ್ಯನ ಭಾವ ಮತ್ತು ಬುದ್ಧಿಯ ಮೇಲೆ ದಾಳಿ ನಡೆಸುವ ದ್ವೇಷ- ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳು ಕೂಡ ಥೇಟ್ ಹೀಗೆಯೇ ಕೆಲಸ ಮಾಡುತ್ತವೆ. ಬುದ್ಧಿ ಮತ್ತು ಭಾವವನ್ನು ಭ್ರಷ್ಟಗೊಳಿಸುವ ಈ ವೈರಾಣುಗಳು ಮನುಷ್ಯನಲ್ಲಿನ ಮನುಷ್ಯತ್ವವನ್ನು ತಿಂದು ಹಾಕುತ್ತವೆ. ಮನುಷ್ಯತ್ವವನ್ನು ಕಳೆದುಕೊಂಡ ಮೆದುಳುಗಳ ದೂರನಿಯಂತ್ರಣ ಮಾಡುವುದು ಸಲೀಸು.

ಕಳೆದ ಐದಾರು ವರ್ಷಗಳಿಂದ ನಮ್ಮ ಪ್ರಚಂಡ ಜನನಾಯಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಸಂಗತಿಯನ್ನು ಒಂದಲ್ಲ ಹಲವು ಸಲ ಆಗು ಮಾಡಿ ತೋರಿದ್ದಾರೆ. ಮೊನ್ನೆ ಭಾನುವಾರ ಸಂಜೆ ನಡೆದ ವಿದ್ಯಮಾನ ಈ ಮಾತಿಗೆ ಮತ್ತೊಂದು ಉದಾಹರಣೆ. ಭಯಾನಕ ಸಾಂಕ್ರಾಮಿಕ ಕೊರೋನಾ ಮಹಾಮಾರಿಯನ್ನು ಮೆದುಳುರಹಿತ ಜನಕೋಟಿ ಹಬ್ಬದಂತೆ ಆಚರಿಸಿತು. ಶಾರೀರಿಕ ದೂರದ ನಿಯಮವನ್ನು ಬಿಗಿಯಾಗಿ ಪಾಲಿಸಬೇಕಿರುವ ಈ ಹೊತ್ತಿನಲ್ಲಿ ಜನ ಗುಂಪು ಗುಂಪಾಗಿ ಬೀದಿಗಿಳಿದು ಸಂಭ್ರಮಿಸಿದರು. ತಟ್ಟೆ, ಜಾಗಟೆ ಬಾರಿಸಿ, ಶಂಖ ಊದಿ, ಚಪ್ಪಾಳೆ ತಟ್ಟಿ ಕೊರೋನ ಪರಾರಿಯಾಯಿತೆಂದು ಗೆಲುವಿನಿಂದ ಬೀಗಿದರು.

ನೋಟುರದ್ದಿನಂತ ಮೂರ್ಖ ಮತ್ತು ಅಮಾನವೀಯ ಕ್ರಮವನ್ನು ಕೂಡ ಜನ ಹೀಗೆಯೇ ಸಾಮೂಹಿಕ ಸನ್ನಿಗೊಳಗಾಗಿ ಸ್ವಾಗತಿಸಿದ್ದರು. ತಮ್ಮ ಬದುಕುಗಳ ಮೇಲೆ ಬಿದ್ದ ಈ ಮಾರಣಾಂತಿಕ ಹೊಡೆತದಿಂದ ಕೋಟ್ಯಂತರ ಜನ ಈಗಲೂ ಚೇತರಿಸಿಕೊಂಡಿಲ್ಲ.

ಸಾಂಕ್ರಾಮಿಕ ರೋಗಗಳ ತಜ್ಞರು ಹೇಳುವಂತೆ ಕೊರೋನಾ ಮಹಾಮಾರಿಯನ್ನು ಭಾರತ ಎಷ್ಟು ಗಂಭೀರವಾಗಿ ಪರಿಗಣಿಸಬೇಕೋ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಕೋಟಿಗಟ್ಟಲೆ ಸಾವು ನೋವು ಸಂಭವಿಸಿದರೆ ಆಶ್ಚರ್ಯವಿಲ್ಲ. ಭಾರೀ ಬಾಂಬೊಂದು ಸ್ಫೋಟಿಸಲಿದೆ ಎಂಬ ಅವರ ಎಚ್ಚರಿಕೆಯ ನಂತರವೂ ಜನಸಮೂಹ ಮೊನ್ನೆ ಭಾನುವಾರ ಬೀದಿಗಿಳಿದು ಮೂಢನಂಬಿಕೆಯನ್ನು ಮೆರೆಯಿತು.

ಭಾನುವಾರ ಸಂಜೆ ತಟ್ಟೆ ಜಾಗಟೆ ಚಪ್ಪಾಳೆ ಬಾರಿಸುವಂತೆ ಕರೆ ನೀಡಿದ ಮಹಾನ್ ನಾಯಕರಿಗೆ ಜನಸಮೂಹಗಳ ವರ್ತನೆಯ ವೈಖರಿ ತಿಳಿಯದ್ದೇನಲ್ಲ. ಆದರೆ ಅವರಿಗೆ ಬೊಮ್ಮನಹಳ್ಳಿಯ ಕಿಂದರಿ ಜೋಗಿಯಾಗುವ ವಿಕೃತ ಸಂಭ್ರಮ. ಅವರ ಮಡಿಲ ಮುದ್ದಿನ ನಾಯಿಯಾಗಿ ಬದಲಾಗಿದೆ ಸಮೂಹಮಾಧ್ಯಮ ಎಂಬ ಜನತಂತ್ರದ ಕಾವಲು ನಾಯಿ. ಅದು ಮಹಾನ್ ನಾಯಕರ ಸಂದೇಶದ ಡಂಗುರವನ್ನು ಹಗಲಿರುಳು ಬಾರಿಸಿ ನಿಷ್ಠೆ ಮೆರೆಯಿತು. ಮೆದುಳನ್ನು ಒತ್ತೆ ಇರಿಸಿರುವ ಜನಸಮೂಹ ಕೀಲುಬೊಂಬೆಯಂತೆ ಕುಣಿಯಿತು.

ವುಹಾನ್‌ನಲ್ಲಿ ಈ ಮಹಾಮಾರಿ ಅಬ್ಬರಿಸಿದಾಗ ಚೀನಾ ಸರ್ಕಾರ ತಟ್ಟೆ ಜಾಗಟೆ ಬಾರಿಸುವ ಸರ್ಕಸ್ ಮಾಡಲಿಲ್ಲ. ಬದಲಾಗಿ ದಾಖಲೆಯ ಸಮಯದಲ್ಲಿ ದೈತ್ಯ ಆಸ್ಪತ್ರೆಯ ನಿರ್ಮಿಸಿತು. ಸಾಂಕ್ರಾಮಿಕದ ಬೇರುಗಳ ಸುಟ್ಟು ಹಾಕಲು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿತು. ಸಾರ್ವಜನಿಕ ಆರೋಗ್ಯದ ಮೇಲೆ ಭಾರತ ಸರ್ಕಾರದ ವೆಚ್ಚದ ಪ್ರಮಾಣ ಶೋಚನೀಯ ಪ್ರಮಾಣದ್ದು. ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕಿಂತಲೂ ಕಡಿಮೆ. ಜಿ.ಡಿ.ಪಿ.ಯ ಶೇ.1.28ರಷ್ಟು ಮಾತ್ರ. ಈ ಮೊತ್ತವನ್ನು ಕನಿಷ್ಠ ಶೇ.ಮೂರಕ್ಕೆ ಹೆಚ್ಚಿಸಬೇಕೆಂದು ದಶಕಗಳಿಂದ ಮುಂದಿಡುತ್ತ ಬಂದಿರುವ ಬೇಡಿಕೆಯನ್ನು ಯಾವ ಸರ್ಕಾರಗಳೂ ಕಿವಿಗೆ ಹಾಕಿಕೊಳ್ಳಲಿಲ್ಲ. ನರೇಂದ್ರ ಮೋದಿಯವರ ಸರ್ಕಾರವೂ ಈ ಮಾತಿಗೆ ಹೊರತಾಗಲಿಲ್ಲ. ಹಣವುಳ್ಳ ವರ್ಗಗಳ ಅಗತ್ಯಗಳನ್ನು ಪೂರೈಸುವ ಮಲ್ಟಿ ಸ್ಪೆಶಾಲಿಟಿ, ಸೂಪರ್ ಸ್ಪೆಶಾಲಿಟಿ ಖಾಸಗಿ ಆಸ್ಪತ್ರೆ ವ್ಯವಸ್ಥೆ ತಲೆಯೆತ್ತಿ ಬೆಳೆಯಿತೇ ವಿನಾ ಸಾರ್ವಜನಿಕ ಆರೋಗ್ಯ ಹಾಸಿಗೆ ಹಿಡಿಯುತ್ತಲೇ ಹೋಯಿತು. ಈಗ ಅದು ಕೃತಕ ಉಸಿರಾಟದಲ್ಲಿದೆ. ಸಾವು ಬದುಕಿನ ನಡುವೆ ತೂಗುಯ್ಯಾಲೆ ಆಡಿದೆ. ಅರ್ಥಾತ್ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೇ ಆಧರಿಸಿರುವ ಶೇ.80ರಷ್ಟು ಜನಸಂಖ್ಯೆ ಹಾಸಿಗೆ ಹಿಡಿದಿರುವ ಆರೋಗ್ಯ ವ್ಯವಸ್ಥೆಯನ್ನು ಅವಲಂಬಿಸಿದೆ. ಪ್ರತಿ ಹನ್ನೊಂದು ಸಾವಿರ ಮಂದಿಗೆ ಒಬ್ಬ ಸರ್ಕಾರಿ ವೈದ್ಯರಿದ್ದಾರೆ. ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ದೇಶದಲ್ಲಿರುವ ವೆಂಟಿಲೇಟರುಗಳ (ಕೃತಕ ಉಸಿರಾಟ ವ್ಯವಸ್ಥೆ) ಸಂಖ್ಯೆ ಒಂದು ಲಕ್ಷ ಮೀರುವುದಿಲ್ಲ. ಇನ್ನು ಮಹಾಮಾರಿಯು ಅಬ್ಬರಿಸಿರುವ ಈ ದಿನಗಳಲ್ಲಂತೂ ಈ ಜನವರ್ಗಗಳನ್ನು ಕೇಳುವವರು ಯಾರು? ಅವರ ಪ್ರಾಣಗಳು ಬಲು ಅಗ್ಗ.

ಅಷ್ಟಿಷ್ಟು ಪ್ರಮಾಣಕ್ಕೆ ಬೆಳೆದಿದ್ದ ವೈಜ್ಞಾನಿಕ ಮನೋಧರ್ಮವನ್ನು ನಾಶ ಮಾಡುವ ಎಲ್ಲ ಪ್ರಯತ್ನಗಳು ಕಳೆದ ಆರೇಳು ವರ್ಷಗಳಿಂದ ನಡೆಯುತ್ತ ಬಂದಿವೆ. ತರ್ಕ, ಸಂಶೋಧನೆ, ವಿಜ್ಞಾನ, ವಿದ್ವತ್ತಿನ ಮಾನಹರಣ ಮಾಡಲಾಗಿದೆ. ಅಂಧ ವಿಶ್ವಾಸ ಮತ್ತು ನಕಲಿ ಸುದ್ದಿಗಳು ಮತ್ತು ಹಸೀ ಸುಳ್ಳುಗಳನ್ನು ಉತ್ಪಾದಿಸಿ ಹಬ್ಬಿಸುವ ‘ಕಾರ್ಖಾನೆ’ಗಳನ್ನು ಲಕ್ಷಗಳ ಸಂಖ್ಯೆಯಲ್ಲಿ ದೇಶದುದ್ದಗಲಕ್ಕೂ ಕಟ್ಟಿ ನಿಲ್ಲಿಸಲಾಗಿದೆ. ಭಾವ ಬುದ್ಧಿಗಳನ್ನು ಭ್ರಷ್ಟಗೊಳಿಸಿ ಮಿದುಳುಗಳನ್ನು ತಿಂದು ಹಾಕುವ ದ್ವೇಷ-ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳನ್ನು ತಿನ್ನುವ ವೈರಾಣುಗಳನ್ನು ಬಿಟ್ಟು ಬಹಳ ಕಾಲವೇ ಆಗಿದೆ. ಭಾನುವಾರ ಸಂಜೆ ಕಂಡು ಬಂದ ಭೀಭತ್ಸದ ತಳಪಾಯವಿದು.

ರೋಗಗ್ರಸ್ತ ಸಮಾಜವನ್ನು ಕಟ್ಟಿ ನಿಲ್ಲಿಸಿದರೆ ಮಹಾಮಾರಿಯನ್ನು ಎದುರಿಸುವ ಚೈತನ್ಯವಾದರೂ ಅದಕ್ಕೆ ಎಲ್ಲಿಂದ ಬರಬೇಕು? ಸಮಾಜದಲ್ಲಿ ಹಂಚಿಕೆಯಾಗಬೇಕಿರುವ ಸಂಪತ್ತನ್ನು ಬಾಚಿಕೊಂಡಿರುವ ರೆಡ್ಡಿಗಳು, ಅಂಬಾನಿಗಳು, ಅದಾನಿಗಳು ಮುಂತಾದ ಉದ್ಯಮಿಗಳು, ಮಹಾನ್ ನಟರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆಯವ ಕನಿಷ್ಠ ಮಾನವೀಯತೆಯನ್ನೂ ಮರೆತಿದ್ದಾರೆ.

ದೇಶಾದ್ಯಂತ ಜನಜೀವನ ಅನಿರ್ದಿಷ್ಟ ಕಾಲ ಸ್ತಬ್ದಗೊಳ್ಳಲಿದೆ. ನಿತ್ಯದ ದುಡಿಮೆಯನ್ನು ಆಧರಿಸಿ ಹೊಟ್ಟೆ ಹೊರೆಯುವ ಕೋಟ್ಯಂತರ ಜನರ ಬದುಕು ನೋಟು ರದ್ದಿನ ನಂತರ ಮತ್ತೊಮ್ಮೆ ಅತಂತ್ರ ಆಗಲಿದೆ. ಈ ಜನರಿಗೆ ಪ್ರಧಾನಿಯವರು ಯಾವ ಪರಿಹಾರವನ್ನೂ ನೀಡಿಲ್ಲ. ಕೇವಲ ಚಪ್ಪಾಳೆ ತಟ್ಟಲು ಹೇಳಿರುವುದು ಕ್ರೌರ್ಯದ ಪರಮಾವಧಿ.

ಜನತಾಂತ್ರಿಕವಾಗಿ ಆರಿಸಿ ಬಂದಿರುವವರು ಸರ್ವಾಧಿಕಾರಿಗಳಾಗುವ ದಿನ ದೂರವಿಲ್ಲ. ಚಿಂತಕ ಶಿವಸುಂದರ್ ಅವರು ಹೇಳುವಂತೆ ದೇಹಕ್ಕೆ ಬಿದ್ದ ಪೆಟ್ಟು ಮೆದುಳಿಗೆ ತಿಳಿಯುತ್ತಿಲ್ಲ. ಯಾಕೆಂದರೆ ಮಿದುಳನ್ನು ನಾಶ ಮಾಡಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....