Homeಅಂತರಾಷ್ಟ್ರೀಯWhatsApp ಮೂಲಕ ಗೂಢಚರ್ಯೆ: ದಂಗುಬಡಿಸುವ ಅಪಾಯಕಾರಿ ವಿದ್ಯಮಾನ ಬಯಲು!

WhatsApp ಮೂಲಕ ಗೂಢಚರ್ಯೆ: ದಂಗುಬಡಿಸುವ ಅಪಾಯಕಾರಿ ವಿದ್ಯಮಾನ ಬಯಲು!

ಭಾರತೀಯ ಬುದ್ಧಿಜೀವಿಗಳ ವಿರುದ್ಧ ಗೂಢಚರ್ಯೆಗೆ ಇಸ್ರೇಲಿ ಸ್ಪೈವೇರ್ ಉಪಯೋಗ: ದೃಢಪಡಿಸಿದ WhatsApp!

- Advertisement -
- Advertisement -

ನಿರೂಪಣೆ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಸರಕಾರದ ವಿರುದ್ಧ ಧ್ವನಿಯೆತ್ತಿದ ಭಾರತೀಯ ಪತ್ರಕರ್ತರು, ಪ್ರಾಧ್ಯಾಪಕರು, ದಲಿತ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ಗುಪ್ತಚರ್ಯೆ ನಡೆಸಲು ಇಸ್ರೇಲಿ ಮೂಲದ ಅತ್ಯಾಧುನಿಕ ಸ್ಪೈವೇರ್ (ಗುಪ್ತಚರ ಸಾಫ್ಟ್‌ವೇರ್) ಬಳಸಲಾಗಿತ್ತು ಎಂದು ಫೇಸ್‌ಬುಕ್ ಮಾಲಕತ್ವದ ವಾಟ್ಸ್ಆಪ್ ದೃಢಪಡಿಸಿದೆ. ಮೇ 2019ರ ತನಕ ಅವರ ಮೊಬೈಲ್ ಫೋನ್‌ಗಳು ಕಣ್ಗಾವಲಲ್ಲಿದ್ದವು ಎಂದು ಅದು ಕನಿಷ್ಟ ಎರಡು ಡಜನ್ ಬಳಕೆದಾರರನ್ನು ಎಚ್ಚರಿಸಿತ್ತು.

ಭಾರತೀಯರೂ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳ 1,400ರಷ್ಟು ಬಳಕೆದಾರರ ಮೇಲೆ ಇಸ್ರೇಲಿನ ಪಿಗಾಸಸ್ (Pegasus) ಎಂಬ ಸ್ಪೈವೇರ್ ಬಳಸಿ ಅದೇ ದೇಶದ ಎನ್ಎಸ್‌ಓ ಗುಂಪು ಗುಪ್ತಚರ್ಯೆ ನಡೆಸಿತ್ತು ಎಂದು ವಾಟ್ಸ್ಆಪ್ ಸಂಸ್ಥೆಯು ಯುಎಸ್ಎಯ ಸಾನ್‌ಫ್ರಾನ್ಸಿಸ್ಕೋ ಫೆಡರಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ ಬಳಿಕ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ.

ಆದರೆ, ಭಾರತದಲ್ಲಿ ಗುಪ್ತಚರ್ಯೆಗೆ ಒಳಾಗಿರುವವರ ಗುರುತು ಮತ್ತು ನಿರ್ದಿಷ್ಟ ಸಂಖ್ಯೆಯನ್ನು ಬಹಿರಂಗಪಡಿಸಲು ವಾಟ್ಸ್ಆಪ್ ನಿರಾಕರಿಸಿದೆ. ಆದರೆ, ಈ ವಿಷಯ ತನಗೆ ಗೊತ್ತಿದ್ದು, ಅವರನ್ನು ತಾನು ಈ ವಿಷಯದಲ್ಲಿ ಸಂಪರ್ಕಿಸಿ ಎಚ್ಚರಿಸಿರುವುದಾಗಿ ಅದು ಹೇಳಿದೆ. ವಾಟ್ಸ್ಆಪ್ ವಕ್ತಾರರ ಪ್ರಕಾರ ಇಂತವರ ಸಂಖ್ಯೆ ಕಡೆಗಣಿಸುವಂತದ್ದೇನಲ್ಲ.

ಡಾ. ಆನಂದ್‌ ತೇಲ್‌ತುಂಬ್ಡೆ

ಆದರೂ ಭೀಮಾ ಕೋರೆಗಾಂವ್‌ ಹೋರಾಟದ ಆರೋಪಿ ಖ್ಯಾತ ದಲಿತ ಲೇಖಕ ಡಾ. ಆನಂದ್‌ ತೇಲ್‌ತುಂಬ್ಡೆ, ವಕೀಲ ನಿಹಾಲ್‌ ಸಿಂಹ, ಅಂಕಿತ್‌ ಗ್ರೇವಾಲ್‌, ಡೇಗ್ರಿ ಪ್ರಸಾದ್‌ ಚೌಹಾಣ್, ಬುಡಕಟ್ಟು ಹೋರಾಟಗಾರ್ತಿ ಬೇಲಾ ಭಾಟಿಯಾರವರ ವಾಟ್ಸಾಪ್‌ ಸಂದೇಶಗಳನ್ನು ಗೂಢಚರ್ಯೆ ಪರಿಶೀಲಿಸಿದೆ ಎಂದು ಹೇಳಲಾಗುತ್ತಿದೆ.
 
ಪಿಗಾಸಸ್ ಕಾರ್ಯವಿಧಾನ

ಗುಪ್ತಚರ್ಯೆಗೆ ಗುರಿಯಾಗುವವರ ಮೇಲೆ ಕಣ್ಗಾವಲು ಇಡಲು ಅವರು ಒಂದು ನಿರ್ದಿಷ್ಟ ಮತ್ತು ವಿಶಿಷ್ಟವಾಗಿ ನಿರ್ಮಿಸಲಾದ ‘ಎಕ್ಸ್‌ಪ್ಲಾಯ್ಟ್ ಲಿಂಕ್’ ಮೇಲೆ ಕ್ಲಿಕ್ ಮಾಡುವಂತೆ ಪಿಗಾಸಸ್ ಅಪರೇಟರ್ ಮನವೊಲಿಸಬೇಕಾಗುತ್ತದೆ ಇಲ್ಲವೇ ವಂಚಿಸಬೇಕಾಗುತ್ತದೆ. ಒಮ್ಮೆ ಈ ಲಿಂಕ್ ಕ್ಲಿಕ್ ಮಾಡಿದರೆ, ಪಿಗಾಸಸ್ ಸ್ಪೈವೇರ್ ಗೊತ್ತಾಗದಂತೆ ಮೊಬೈಲ್ ಒಳಗೆ ಸೇರಿಕೊಳ್ಳುತ್ತದೆ. ಮೊಬೈಲ್‌ನ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಮೂಲಕ ಪಿಗಾಸಸ್ ಇನ್ಸ್ಟಾಲ್ ಆಗುತ್ತದೆ. ಇದು ಗ್ರಾಹಕರಿಗೆ ಗೊತ್ತಾಗುವುದು ಬಿಡಿ, ಅದು ಅವರ ಅನುಮತಿಯನ್ನೂ ಕೇಳುವುದಿಲ್ಲ.

ಒಮ್ಮೆ ಇದು ನಡೆದ ಬಳಿಕ ಪಿಗಾಸಸ್ ತನ್ನ ಅಪರೇಟರ್ ಕಮಾಂಡ್ ಮತ್ತು ಕಂಟ್ರೋಲ್ ಸರ್ವರ್‌ಗಳನ್ನು (ನಿಯಂತ್ರಣ ವ್ಯವಸ್ಥೆಗಳು) ಸಂಪರ್ಕಿಸಲು ಆರಂಭಿಸುತ್ತದೆ. ಅದು ನಿಯಂತ್ರಕರ ಆದೇಶ ಪಾಲಿಸುತ್ತಾ, ಗುಪ್ತಚರ್ಯೆಗೆ ಒಳಗಾದವರ ಪಾಸ್‌ವರ್ಡ್, ಕಾಂಟ್ಯಾಕ್ಟ್ ಲಿಸ್ಟ್,  ಖಾಸಗಿ ಮಾಹಿತಿ, ಕ್ಯಾಲೆಂಡರ್ ಟಿಪ್ಪಣಿಗಳು, ಟೈಕ್ಸ್ಟ್ ಮೇಸೇಜ್‌ಗಳು, ಜನಪ್ರಿಯ ಮೆಸೇಜ್ ಸಾಫ್ಟ್ವೇರ್‌ಗಳಿಂದ ಮಾಡುವ ಕರೆಗಳು ಇತ್ಯಾದಿಗಳನ್ನು ಕಳುಹಿಸಿಕೊಡುತ್ತದೆ.

ಅಷ್ಟು ಮಾತ್ರವಲ್ಲದೆ, ಪಿಗಾಸಸ್ ಅಪರೇಟರ್ ಫೋನಿನ ಕ್ಯಾಮೆರಾ ಮತ್ತು ಮೈಕ್ರೋಫೋನನ್ನು ಆನ್ ಮಾಡಿ ಸುತ್ತಮುತ್ತಲಿನ ಚಟುವಟಿಕೆಗಳನ್ನು ಗಮನಿಸಿ ರೆಕಾರ್ಡ್ ಮಾಡಬಹುದು. ವಾಟ್ಸ್ಆಪ್ ನ್ಯಾಯಾಲಯಕ್ಕೆ ಸಲ್ಲಿಸಿದ ಇನ್ನಷ್ಟು ಮಾಹಿತಿ ದಂಗುಬಡಿಸುವಂತಿದೆ. ಇತ್ತೀಚಿನ ತಂತ್ರಜ್ಞಾನದಲ್ಲಿ ಫೋನ್ ಮಾಲಕರು ‘ಎಕ್ಸ್‌ಪ್ಲಾಯ್ಟ್ ಲಿಂಕ್’ ಮೇಲೆ ಕ್ಲಿಕ್ ಕೂಡಾ ಮಾಡಬೇಕಾಗಿಲ್ಲ. ವಾಟ್ಸ್ಆಪ್ ಮೂಲಕ ಕಳಿಸಿದ ಒಂದು ಮಿಸ್ಡ್ ವಿಡಿಯೋ ಕಾಲ್ ಮೂಲಕ ಬಲಿಪಶು ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಕೂಡಾ ಈ ಸ್ಪೈವೇರನ್ನು ಫೋನಿನೊಳಗೆ ನುಗ್ಗಿಸಬಹುದು.

ಈ ರೀತಿಯ ವಂಚನೆಯು ಯುಎಸ್‌ಎ ಮತ್ತು ಕ್ಯಾಲಿಫೋರ್ನಿಯಾದ ಕಾನೂನುಗಳು, ವಾಟ್ಸ್ಆಪ್ ಸೇವಾ ಶರತ್ತುಗಳನ್ನು ಉಲ್ಲಂಘಿಸುತ್ತದೆ ಎಂದು ವಾಟ್ಸ್ಆಪ್, ಇಸ್ರೇಲಿನ ಎನ್‌ಎಸ್‌ಓ ಮತ್ತು ಕ್ಯೂ ಸೈಬರ್ ಟೆಕ್ನಾಲಜಿ ಸಂಸ್ಥೆಗಳ ಮೇಲೆ ಹೂಡಿರುವ ದಾವೆಯಲ್ಲಿ ಹೇಳಿದೆ.

ಇದನ್ನು ಅಲ್ಲಗೆಳೆದಿರುವ ಎನ್ಎಸ್ಓ, ಈ ಸ್ಪೈವೇರನ್ನು ಖಾಸಗಿ ವ್ಯಕ್ತಿಗಳ ಮೇಲೆ ಗುಪ್ತಚರ್ಯೆಗಾಗಿ ವಿನ್ಯಾಸಗೊಳಿಸಲಾಗಿಲ್ಲ ಮತ್ತು ಅದು ಮಾರಾಟದ ವೇಳೆ ಪತ್ರಕರ್ತರು, ಮಾನವಹಕ್ಕು ಕಾರ್ಯಕರ್ತರು ಮುಂತಾದವರ ವಿರುದ್ಧ ಗುಪ್ತಚರ್ಯೆಗೆ ಪರವಾನಿಗೆಯನ್ನೂ ನೀಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದೆ. ಇದು ಹೌದಾದರೆ, ಭಾರತ ಸರಕಾರ ಸಹಿತ ಅದರ ಬಳಕೆದಾರರು ಪರವಾನಿಗೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದಾಗುತ್ತದೆ.

ತಾನು ಈ ಕುರಿತು ಭಾರತದ ಗೃಹ ಕಾರ್ಯದರ್ಶಿ ಎ.ಕೆ. ಭಲ್ಲಾ ಮತ್ತು ಇಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಎ.ಪಿ. ಸಾವ್ನಿ ಅವರಿಗೆ ಮಾಡಿದ ಕರೆ, ಸಂದೇಶ, ಇ-ಮೈಲ್ ಯಾವುದಕ್ಕೂ ಪ್ರತಿಕ್ರಿಯೆ ಬಂದಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯೊಂದು ಹೇಳುತ್ತದೆ.

ಕೆನಡಾ ಮೂಲದ ಸೈಬರ್ ಭದ್ರತಾ ಗುಂಪಾದ ‘ಸಿಟಿಜನ್’ ಲ್ಯಾಬ್’ 2018ರ ಸೆಪ್ಟೆಂಬರ್‌ನಲ್ಲಿಯೇ ತನ್ನ ವರದಿಯ ಮೂಲಕ ಪಿಗಾಸಸ್ ಕುರಿತು ಎಚ್ಚರಿಕೆ ನೀಡಿತ್ತು. ಅರಬ್ ಮಾನವಹಕ್ಕು ಕಾರ್ಯಕರ್ತರ ದೂರಿನ ಬಳಿಕ ಈ ವರದಿ ಬಿಡುಗಡೆಯಾಗಿತ್ತು.

ಇನ್ನೊಂದು ವಿಷಯವೆಂದರೆ, ಎನ್‌ಎಸ್ಓ ಸಂಸ್ಥೆಯು ಸರಕಾರಗಳು ಅಲ್ಲದೆ ಬೇರೆಯವರಿಗೆ ತನ್ನ ಉತ್ಪನ್ನ ಅಥವಾ ಸೇವೆಯನ್ನು ಮಾರುವುದಿಲ್ಲ. ಇತ್ತೀಚೆಗೆ ಸೌದಿ ಅರೇಬಿಯಾದ ಪತ್ರಕರ್ತ ಜಮಾಲ್ ಖಷೋಗ್ಗಿಯವರನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಉಪ ರಾಯಭಾರ ಕಚೇರಿಯಲ್ಲಿ ಕೊಲೆ ಮಾಡಲಾದ ಬಳಿಕ ಈ ಸಂಸ್ಥೆಯು ಸೌದಿಯೊಂದಿಗೆ ತನ್ನ ಒಪ್ಪಂದವನ್ನು ರದ್ದುಪಡಿಸಿತ್ತು. ಖಷೋಗ್ಗಿಯ ಕೊಲೆಗೆ ಮುನ್ನ ಅವರ ಇರವನ್ನು ಪತ್ತೆಹಚ್ಚಲು ತನ್ನ ಸ್ಪೈವೇರನ್ನು ಸೌದಿ ಸರಕಾರ ಬಳಸಿತ್ತು ಎಂಬುದೇ ಇದಕ್ಕೆ ಕಾರಣ. ಸಂಸ್ಥೆಯು ಈ ಕುರಿತು ಇಷ್ಟು ಕಟ್ಟುನಿಟ್ಟಾಗಿರುವುದೇ ಹೌದಾದಲ್ಲಿ, ಮೋದಿ ಸರಕಾರವು ಸೌದಿಯಂತೆಯೇ ತನ್ನದೇ ಪ್ರಜೆಗಳ ಮೇಲೆ ಗುಪ್ತಚರ್ಯೆಗೆ ಈ ಸ್ಪೈವೇರನ್ನು ದುರುಪಯೋಗಪಡಿಸಿಕೊಂಡು ತನ್ನ ವಿರೋಧಿಗಳನ್ನು ಬಗ್ಗುಬಡಿಯುತ್ತಿದೆಯೇ ಎಂಬ ಸಂಶಯ ಏಳುತ್ತದೆ.

ಮಾಹಿತಿ: ವಿವಿಧ ಮೂಲಗಳಿಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...