Homeಮುಖಪುಟಚುನಾವಣಾ ಬಾಂಡ್ ವಿವರ: ಸುಪ್ರೀಂ ಕೋರ್ಟ್ ಕೇಳಿದರೆ ತಿಂಗಳುಗಳು ಬೇಕು, ಸರ್ಕಾರ ಕೇಳಿದರೆ ಗಂಟೆಗಳು ಸಾಕು!

ಚುನಾವಣಾ ಬಾಂಡ್ ವಿವರ: ಸುಪ್ರೀಂ ಕೋರ್ಟ್ ಕೇಳಿದರೆ ತಿಂಗಳುಗಳು ಬೇಕು, ಸರ್ಕಾರ ಕೇಳಿದರೆ ಗಂಟೆಗಳು ಸಾಕು!

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಕಳ್ಳಾಟ ಬಯಲು ಮಾಡಿದ ದಾಖಲೆಗಳು

- Advertisement -
- Advertisement -

ಚುನಾವಣಾ ಬಾಂಡ್‌ಗಳ ಕುರಿತ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಲು ಜೂನ್ 30ರವರೆಗೆ ಸಮಯ ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಎ ಅರ್ಜಿ ಸಲ್ಲಿಸಿದೆ. ರಾಜಕೀಯ ಪಕ್ಷಗಳಿಗೆ ಗುಟ್ಟಾಗಿ ದೇಣಿಗೆ ನೀಡಿದವರ ಮಾಹಿತಿ ಒದಗಿಸುವುದು ಕಷ್ಟದ ಕೆಲಸ ಎಂದಿದೆ.

ಎಸ್‌ಬಿಐ ಈ ಹಿಂದೆಯೂ ಸರ್ಕಾರಿ ವಿಚಾರಣೆಗಳ ಸಂದರ್ಭಗಳಲ್ಲಿ ಈ ರೀತಿ ನಿಧಾನಗತಿ ಮತ್ತು ಚಾಣಾಕ್ಷತೆಯನ್ನು ಪ್ರದರ್ಶಿಸಿದೆ.

ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ನಂತರ ನ್ಯಾಯಾಲಯ ಬಾಂಡ್‌ ವಿವರಗಳನ್ನು ಬಹಿರಂಗಪಡಿಸಲು ಎಸ್‌ಬಿಐಗೆ ಸೂಚಿಸಿತ್ತು. ಆ ಕೆಲಸ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ ಎಂಬುವುದು ಈಗ ಎಸ್‌ಬಿಐ ನ್ಯಾಯಾಲಯ ನೀಡುತ್ತಿರುವ ಸಬೂಬು.

ಆದರೆ, ಸಾಮಾಜಿಕ ಹೋರಾಟಗಾರ ಕೊಮೋಡೋರ್ ಲೋಕೇಶ್ ಬಾತ್ರಾ ಅವರು ‘ರಿಪೋರ್ಟರ್ಸ್ ಕಲೆಕ್ಟಿವ್‌’ ಜೊತೆ ಹಂಚಿಕೊಂಡ ದಾಖಲೆಗಳ ಪ್ರಕಾರ, ಸರ್ಕಾರಕ್ಕೆ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಅತಿ ಕಡಿಮೆ ಸಮಯದಲ್ಲಿ, ಅಂದರೆ ಕೆಲವೊಮ್ಮೆ ಬರೀ 48 ಗಂಟೆಗಳಲ್ಲಿ ಒದಗಿಸಿರುವುದನ್ನು ಸಾಬೀತುಪಡಿಸುವ ಹಲವು ಪ್ರಮುಖ ಪುರಾವೆಗಳಿವೆ.

ಕೇಂದ್ರ ಹಣಕಾಸು ಸಚಿವಾಲಯದ ಸೂಚನೆಯ ಮೇರೆಗೆ ಎಸ್‌ಬಿಐ ಬಾಂಡ್‌ಗಳನ್ನು ನಗದುಗೊಳಿಸುವ ಗಡುವು ಮುಗಿದ 48 ಗಂಟೆಗಳ ಒಳಗೆ ದೇಶದಾದ್ಯಂತ ಚುನಾವಣಾ ಬಾಂಡ್‌ಗಳ ಡೇಟಾವನ್ನು ಒಟ್ಟುಗೂಡಿಸಿದ್ದಿದೆ ಎಂದು ದಾಖಲೆಗಳು ಬಹಿರಂಗಪಡಿಸುತ್ತವೆ.

ಬಾಂಡ್ ಮಾರಾಟದ ಪ್ರತಿ ವಿಂಡೋ ಅವಧಿಯ ನಂತರ ಅಂತಹ ಮಾಹಿತಿಯನ್ನು ಅದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳಿಸಿದೆ. 2020ರವರೆಗಿನ ಅಂತಹ ದಾಖಲೆಗಳನ್ನು ರಿಪೋರ್ಟರ್ಸ್ ಕಲೆಕ್ಟಿವ್ ಡಾಟ್ ಇನ್ ಪರಿಶೀಲಿಸಿದೆ. ಮಾರಾಟವಾದ ಮತ್ತು ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡ ಬಾಂಡ್‌ಗಳ ಆಡಿಟ್ ಟ್ರಯಲ್ ಅನ್ನು ಎಸ್‌ಬಿಐ ನಿರ್ವಹಿಸುವುದರ ಬಗ್ಗೆ ದಾಖಲೆಗಳು ಹೇಳುತ್ತವೆ.

ಪ್ರತಿ ಬಾಂಡ್‌ನ ಸೀರಿಯಲ್ ನಂಬರ್ ಬಳಸಿ ಅದರ ಜಾಡನ್ನು ಎಸ್‌ಬಿಐ ನಿರ್ವಹಿಸುತ್ತದೆ. ಇದು, 2018ರಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಯೋಜನೆ ಪ್ರಾರಂಭಿಸಿದಾಗಲೇ ಎಸ್‌ಬಿಐ ಸ್ವತಃ ಬೇಡಿಕೆಯಿಟ್ಟು ಮಾಡಿಕೊಂಡಿರುವ ವ್ಯವಸ್ಥೆ.

ಆಗ ಇಂತಹ ಜಾಣತನ ತೋರಿದ್ದ ಎಸ್‌ಬಿಐ, ಈಗ ಮಾತ್ರ ಖರೀದಿ ಸಮಯದಲ್ಲಿ ಬಾಂಡ್ ಖರೀದಿಸಿದ ದಾನಿಗಳ ವಿವರಗಳನ್ನು, ಅವನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಕೋರ್ಟ್‌ಗೆ ಹೇಳುತ್ತಿದೆ.

ಬಾಂಡ್‌ಗಳ ಮಾರಾಟದ ಕುರಿತ ಡೇಟಾವನ್ನು ನಿಗದಿತ ಶಾಖೆಗಳು ಮುಚ್ಚಿದ ಕವರ್‌ಗಳಲ್ಲಿ ಮುಂಬೈ ಪ್ರಧಾನ ಕಚೇರಿಗೆ ಕಳುಹಿಸುತ್ತವೆ ಎಂಬುದು ಎಸ್‌ಬಿಐ ಹೇಳಿಕೆ. ಅದೇ ರೀತಿ, ಬಾಂಡ್‌ಗಳನ್ನು ನಗದು ಮಾಡಿಕೊಂಡ ರಾಜಕೀಯ ಪಕ್ಷಗಳ ಡೇಟಾವನ್ನು ಕೂಡ ಸೀಲ್ ಮಾಡಿದ ಕವರ್‌ನಲ್ಲಿ ಮುಂಬೈ ಕಚೇರಿಗೆ ಕಳಿಸಲಾಗುತ್ತದೆ.

ದೇಣಿಗೆ ನೀಡಿದವರ ಮತ್ತು ಪಡೆದ ರಾಜಕೀಯ ಪಕ್ಷಗಳ ಹೆಸರು ಬಹಿರಂಗವಾಗದಂತೆ ನೋಡಿಕೊಳ್ಳಲು ಹೀಗೆ ಡೇಟಾವನ್ನು ಬೇರ್ಪಡಿಸಲಾಗಿರುತ್ತದೆ ಎಂದು ಬ್ಯಾಂಕ್ ಹೇಳಿದೆ. ಹೀಗಾಗಿ, 2019ರಿಂದ ನೀಡಲಾದ ಒಟ್ಟು 22,217 ಚುನಾವಣಾ ಬಾಂಡ್‌ಗಳ ಖರೀದಿದಾರರ ವಿವರಗಳನ್ನು ಫಲಾನುಭವಿ ಪಕ್ಷಗಳ ವಿವರಗಳೊಂದಿಗೆ ಜೋಡಿಸಲು ತಿಂಗಳುಗಟ್ಟಲೆ ಸಮಯ ಬೇಕು ಎಂದು ಎಸ್‌ಬಿಐ ಹೇಳುತ್ತಿದೆ.

ಆದರೆ ದಾಖಲೆಗಳು ಪ್ರಕಾರ, 2017ರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಕೊಂಡಂತೆ, ಚುನಾವಣಾ ಬಾಂಡ್‌ಗಳು ಬ್ಯಾಂಕ್‌ಗೆ ನಗದೀಕರಣಕ್ಕಾಗಿ ಬಂದಾಗ ಆ ರಾಜಕೀಯ ಪಕ್ಷದೊಂದಿಗೆ ದಾನಿಯ ವಿವರವನ್ನು ನೈಜ ಸಮಯದಲ್ಲೇ ಸಂಪರ್ಕಿಸುವ ವ್ಯವಸ್ಥೆಯನ್ನು ಎಸ್‌ಬಿಐ ಹೊಂದಿದೆ. ಬಾಂಡ್‌ಗಳ ಖರೀದಿ ಮತ್ತು ನಗದೀಕರಣ ಎಲೆಕ್ಟ್ರಾನಿಕ್ ಆಗಿ ನಡೆದದ್ದೆ ಅಥವಾ ನೇರವಾಗಿ ನಡೆದದ್ದೆ ಎಂಬುದು ಕೂಡ ಇಲ್ಲಿ ಗಣನೆಗೆ ಬರುವುದಿಲ್ಲ.

ಖರೀದಿದಾರರನ್ನು ಗುರುತಿಸಲು ಕೆವೈಸಿ ಪ್ರಕ್ರಿಯೆ ಮತ್ತು ಬಾಂಡ್‌ಗಳ ಮೇಲೆ ರಹಸ್ಯ ಸೀರಿಯಲ್ ನಂಬರ್ ಹಾಕಿದ ಬಳಿಕವೇ ನಿಗದಿತ ಎಸ್‌ಬಿಐ ಶಾಖೆಗಳು ಬಾಂಡ್ ಮಾರಾಟವನ್ನು ಪೂರ್ಣಗೊಳಿಸುವ ಕ್ರಮವನ್ನು ಅನುಸರಿಸಿವೆ.

ಪಾರದರ್ಶಕವಾಗಿಲ್ಲ ಎಂಬ ಆರೋಪಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಉತ್ತರಿಸುವಾಗಲೂ ಕೇಂದ್ರ ಸರ್ಕಾರ ಕೆವೈಸಿ ಮತ್ತು ಆಡಿಟ್ ಟ್ರಯಲ್ ಮೂಲಕ ಈ ಯೋಜನೆ ಪಾರದರ್ಶಕತೆ ಹೊಂದಿದ್ದಾಗಿ ಹೇಳಿಕೊಂಡಿತ್ತು.

ನ್ಯಾಯಾಲಯದಲ್ಲಿ ಯೋಜನೆಯನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂಬುದರ ಕುರಿತ ತನ್ನ ಆಂತರಿಕ ಚರ್ಚೆಗಳಲ್ಲಿಯೂ ಹಣಕಾಸು ಸಚಿವಾಲಯ, ಬಾಂಡ್ ಖರೀದಿದಾರರ ದಾಖಲೆಗಳು ಬ್ಯಾಂಕ್ ಬಳಿ ಲಭ್ಯವಿದ್ದು, ಜಾರಿ ಏಜನ್ಸಿಗಳು ತಮಗೆ ಬೇಕಿರುವಾಗ ಪರಿಶೀಲಿಸಬಹುದೆಂದು ಖಾತರಿಪಡಿಸಿದ್ದಿದೆ.

ಹೆಚ್ಚಿನ ಸಮಯ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಬಿಐ ಅರ್ಜಿ ಸಲ್ಲಿಸಿರುವ ಬಗ್ಗೆ ಸಿಕ್ಕಾಪಟ್ಟೆ ಮೀಮ್ ಗಳು ಹರಿದಾಡತೊಡಗಿವೆ. ಗ್ರಾಹಕರೊಂದಿಗೆ ವ್ಯವಹರಿಸುವಾಗ ಹೇಗೆ ಎಸ್‌ಬಿಐ ತನ್ನದೇ ವಿಶೇಷತೆಯಾದ ನಿಧಾನಗತಿಯನ್ನು ತೋರಿಸುತ್ತದೆಯೊ ಹಾಗೆಯೇ ಸುಪ್ರೀಂ ಕೋರ್ಟ್ ಎದುರಲ್ಲಿಯೂ ತೋರಿಸುತ್ತಿದೆ ಎಂದು ಅವು ಅಣಕಿಸಿವೆ.

ಸರ್ಕಾರಕ್ಕೆ ಮಾಹಿತಿಯನ್ನು ಕೊಡಬೇಕಾದಾಗ ಮಾತ್ರ ಎಸ್‌ಬಿಐ ಬಹಳ ಬೇಗ ಸ್ಪಂದಿಸಿದ್ದಿದೆ. ಕೆಲವೊಮ್ಮೆ ಒಂದು ಫೋನ್ ಕರೆಯಲ್ಲೇ ಅದು ಕೆಲಸ ಮುಗಿಸಿರುವುದೂ ಇದೆ.

ಉದಾಹರಣೆಗೆ, ಒಮ್ಮೆ 2018ರಲ್ಲಿ ರಾಜಕೀಯ ಪಕ್ಷವೊಂದು ತನ್ನ ಶೆಲ್ಫ್ ಲೈಫ್ ಕಳೆದ ಬಾಂಡ್‌ಗಳನ್ನು ನಗದೀಕರಿಸಲು ಎಸ್‌ಬಿಐನ ಹೊಸದಿಲ್ಲಿ ಶಾಖೆಯನ್ನು ಸಂಪರ್ಕಿಸಿತ್ತು. ಆಗ, ಚುನಾವಣಾ ಬಾಂಡ್‌ನ ಕಾಲಾವಧಿಯ ಬಗ್ಗೆ ನೋಡಿಕೊಳ್ಳುವುದಕ್ಕೆಂದೇ ಇರುವ ಮುಂಬೈನಲ್ಲಿನ ಎಸ್‌ಬಿಐ ಕಾರ್ಪೊರೇಟ್ ಕಚೇರಿಯಲ್ಲಿನ ನಿರ್ದಿಷ್ಟ ತಂಡವಾದ ಟ್ರಾನ್ಸಾಕ್ಷನ್ ಬ್ಯಾಂಕಿಂಗ್ ಘಟಕಕ್ಕೆ ದೆಹಲಿ ಶಾಖೆ ಕೆಲವೇ ಗಂಟೆಗಳೊಳಗೆ ಮಾಹಿತಿ ನೀಡಿತ್ತು.

ಆ ತಂಡ ಅಲ್ಪಾವಧಿಯಲ್ಲಿಯೇ ಮಾಹಿತಿಯನ್ನು ಸಂಗ್ರಹಿಸಿತ್ತು ಮತ್ತು ಅದರ ಬಗ್ಗೆ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಎಲೆಕ್ಟೋರಲ್ ಬಾಂಡ್ ಕೇವಲ 15 ದಿನಗಳ ಶೆಲ್ಫ್ ಲೈಫ್ ಹೊಂದಿರುತ್ತದೆ ಎಂದು ಕಾನೂನಿನಲ್ಲಿ ಇದ್ದುದರಿಂದ ಎಸ್‌ಬಿಐ ಕಾರ್ಪೊರೇಟ್ ಕಚೇರಿ ಹಣಕಾಸು ಸಚಿವಾಲಯದ ಸಲಹೆ ಕೇಳಿತ್ತು.

ತಕ್ಷಣ ಪ್ರತಿಕ್ರಿಯಿಸಿದ್ದ ಹಣಕಾಸು ಸಚಿವಾಲಯ, ಬಾಂಡ್‌ಗಳು ಅವಧಿ ಮೀರಿದ್ದರೂ ರಾಜಕೀಯ ಪಕ್ಷ ಅವುಗಳನ್ನು ನಗದೀಕರಿಸಲು ಅವಕಾಶ ನೀಡುವಂತೆ ಸೂಚಿಸಿತ್ತು. ಆ ಸೂಚನೆ ಬಳಿಕ ಮಿಂಚಿನ ವೇಗದಲ್ಲಿ ಕಾರ್ಯೋನ್ಮುಖವಾದ ಕಾರ್ಪೊರೇಟ್ ಕಚೇರಿ, ದೆಹಲಿ ಕಚೇರಿಗೆ ಆ ವಿಚಾರವನ್ನು ಮುಟ್ಟಿಸಿತ್ತು.

ಇವೆಲ್ಲವೂ 24 ಗಂಟೆಗಳ ಅವಧಿಯಲ್ಲಿ ನಡೆದಿದ್ದವು ಮತ್ತು ಅವಧಿ ಮೀರಿದ್ದ ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಲು ಆ ರಾಜಕೀಯ ಪಕ್ಷಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಹಣಕಾಸು ಸಚಿವಾಲಯವಾಗಲೀ ಅಥವಾ ಎಸ್‌ಬಿಐ ಆಗಲೀ ಅಧಿಕೃತ ದಾಖಲೆಗಳಲ್ಲಿ ಯಾವ ರಾಜಕೀಯ ಪಕ್ಷದ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ಆ ಪಕ್ಷ ತಲಾ 1 ಕೋಟಿಯ 10 ಅವಧಿ ಮೀರಿದ ಬಾಂಡ್‌ಗಳನ್ನು ಹೊಂದಿತ್ತು ಮತ್ತು ದೆಹಲಿಯಲ್ಲಿ ಅವುಗಳನ್ನು ಖರೀದಿಸಿದ ನಿರ್ದಿಷ್ಟ ದಿನಾಂಕಗಳ ಬಗ್ಗೆ ಎಸ್‌ಬಿಐ ಬಳಿ ಮಾಹಿತಿ ಇತ್ತು ಮತ್ತು ಅದನ್ನೇ ಅದು ಹಣಕಾಸು ಸಚಿವಾಲಯದ ಗಮನಕ್ಕೆ ತಂದಿತ್ತು.

ಸ್ವತಂತ್ರ ಸಂಸ್ಥೆಯಾಗಿದ್ದರೂ ಎಸ್‌ಬಿಐ ಹಲವಾರು ಸಂದರ್ಭಗಳಲ್ಲಿ ಸರ್ಕಾರದ ಭಾಗವಾಗಿ ಕಾರ್ಯನಿರ್ವಹಿಸಿದೆ. 2018 ರಲ್ಲಿ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಾಂಡ್‌ಗಳ ಡೇಟಾವನ್ನು ಹಂಚಿಕೊಳ್ಳಲು ಹಣಕಾಸು ಸಚಿವಾಲಯದಿಂದ ಅದು ಅನುಮತಿಯನ್ನು ಪಡೆದುಕೊಂಡಿತ್ತು.

ಎಸ್‌ಬಿಐನ ಈ ಹಿಂದಿನ ಕಾರ್ಯನಿರ್ವಹಣೆಯ ಈ ಇತಿಹಾಸವನ್ನು ಗಮನಿಸಿದರೆ, ಅದು ಈಗ ಸುಪ್ರೀಂ ಕೋರ್ಟ್ ಕೇಳಿರುವ ವಿವರಗಳನ್ನು ಒದಗಿಸಲು ಸಮಯ ಬೇಕೆನ್ನುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

ನಿವೃತ್ತ ಸರ್ಕಾರಿ ಅಧಿಕಾರಿ ಸುಭಾಷ್ ಚಂದ್ರ ಗಾರ್ಗ್ ಅವರಲ್ಲಿ ಬಹುಶಃ ಇದಕ್ಕೆ ಉತ್ತರ ಇರಬಹುದು. ಹಣಕಾಸು ಮತ್ತು ಅರ್ಥಶಾಸ್ತ್ರ ವ್ಯವಹಾರಗಳ ಕಾರ್ಯದರ್ಶಿಯಾಗಿ ಅವರು 2017 ಮತ್ತು 2018ರಲ್ಲಿ ಚುನಾವಣಾ ಬಾಂಡ್‌ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ಪಾತ್ರ ವಹಿಸಿದ್ದರು ಎಂದು ರಿಪೋಟರ್ಸ್‌ ಕಲೆಕ್ಟಿವ್ ಹೇಳಿದೆ.

ಎಸ್‌ಬಿಐ ಹೆಚ್ಚು ಸಮಯ ಕೇಳಲು ನಿರ್ದಿಷ್ಟ ಕಾರಣಗಳಿವೆಯೆ ಎಂದು ಮಾರ್ಚ್ 6ರಂದು ಮೋಜೋ ಸ್ಟೋರಿ ಗಾರ್ಗ್ ಅವರನ್ನು ಕೇಳಿದ್ದಕ್ಕೆ, ಅವರು ಹೇಳಿರುವುದು ಹೀಗೆ:

“ನನಗೆ ಅನ್ನಿಸುವುದು ಇದೊಂದು ಕುಂಟು ನೆಪವಷ್ಟೆ. ಈ ಮಾಹಿತಿಯನ್ನು ಒದಗಿಸಲು ಎಸ್‌ಬಿಐಗೆ ಸಮಯವೇ ಬೇಕಾಗಿಲ್ಲ. ಬಾಂಡ್‌ಗಳ ಖರೀದಿದಾರರು ಮತ್ತು ಬಾಂಡ್‌ಗಳನ್ನು ಸ್ವೀಕರಿಸುವವರ ವಿವರ ಜೋಡಿಸಬೇಕಿದೆ ಎಂದು ಅದು ಹೇಳುತ್ತಿದೆ. ಅದರ ಅಗತ್ಯವೇ ಇಲ್ಲ ಮತ್ತು ಅದಕ್ಕೆ ಸಮಯವೇ ಬೇಕಿಲ್ಲ. ನಾನು ಮೊದಲೇ ಹೇಳಿದಂತೆ, ಪ್ರತಿ ಬಾಂಡ್‌ಗೆ ಒಂದು ಸಂಖ್ಯೆ ಇರುತ್ತದೆ. ಆ ಸಂಖ್ಯೆಯ ಮಾಹಿತಿಯನ್ನು ಬೇರ್ಪಡಿಸಿದರೆ ಅಗತ್ಯ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಬಹುಶಃ ಹೀಗೊಂದು ಅರ್ಜಿ ಸಲ್ಲಿಸುವಂತೆ ಎಸ್‌ಬಿಐ ಅನ್ನು ಪ್ರಚೋದಿಸಿದಂತೆ ಕಾಣುತ್ತದೆ”.

ಗಾರ್ಗ್ ಅವರಿಗೆ ಖಂಡಿತ ಗೊತ್ತಿರುತ್ತದೆ. ಎಸ್‌ಬಿಐ ಬೇಡಿಕೆಯಂತೆ ಚುನಾವಣಾ ಬಾಂಡ್‌ಗಳಲ್ಲಿ ರಹಸ್ಯ ಸೀರಿಯಲ್ ನಂಬರ್‌ಗಳ ಜೋಡಣೆಯನ್ನು ನೋಡಿಕೊಂಡಿದ್ದವರೇ ಅವರು ಎಂದು ರಿಪೋಟರ್ಸ್‌ ಕಲೆಕ್ಟಿವ್ ತಿಳಿಸಿದೆ.

ಮಾಹಿತಿ ಕೃಪೆ: https://www.reporters-collective.in/

ಇದನ್ನೂ ಓದಿ : ಚುನಾವಣಾ ಬಾಂಡ್ ಮಾಹಿತಿ ಒದಗಿಸದ ಎಸ್‌ಬಿಐ: ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಸುಪ್ರೀಂ ಮೊರೆ ಹೋದ ಎಡಿಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...