Homeಮುಖಪುಟಚುನಾವಣಾ ಬಾಂಡ್ ವಿವರ: ಸುಪ್ರೀಂ ಕೋರ್ಟ್ ಕೇಳಿದರೆ ತಿಂಗಳುಗಳು ಬೇಕು, ಸರ್ಕಾರ ಕೇಳಿದರೆ ಗಂಟೆಗಳು ಸಾಕು!

ಚುನಾವಣಾ ಬಾಂಡ್ ವಿವರ: ಸುಪ್ರೀಂ ಕೋರ್ಟ್ ಕೇಳಿದರೆ ತಿಂಗಳುಗಳು ಬೇಕು, ಸರ್ಕಾರ ಕೇಳಿದರೆ ಗಂಟೆಗಳು ಸಾಕು!

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಕಳ್ಳಾಟ ಬಯಲು ಮಾಡಿದ ದಾಖಲೆಗಳು

- Advertisement -
- Advertisement -

ಚುನಾವಣಾ ಬಾಂಡ್‌ಗಳ ಕುರಿತ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಲು ಜೂನ್ 30ರವರೆಗೆ ಸಮಯ ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಎ ಅರ್ಜಿ ಸಲ್ಲಿಸಿದೆ. ರಾಜಕೀಯ ಪಕ್ಷಗಳಿಗೆ ಗುಟ್ಟಾಗಿ ದೇಣಿಗೆ ನೀಡಿದವರ ಮಾಹಿತಿ ಒದಗಿಸುವುದು ಕಷ್ಟದ ಕೆಲಸ ಎಂದಿದೆ.

ಎಸ್‌ಬಿಐ ಈ ಹಿಂದೆಯೂ ಸರ್ಕಾರಿ ವಿಚಾರಣೆಗಳ ಸಂದರ್ಭಗಳಲ್ಲಿ ಈ ರೀತಿ ನಿಧಾನಗತಿ ಮತ್ತು ಚಾಣಾಕ್ಷತೆಯನ್ನು ಪ್ರದರ್ಶಿಸಿದೆ.

ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ನಂತರ ನ್ಯಾಯಾಲಯ ಬಾಂಡ್‌ ವಿವರಗಳನ್ನು ಬಹಿರಂಗಪಡಿಸಲು ಎಸ್‌ಬಿಐಗೆ ಸೂಚಿಸಿತ್ತು. ಆ ಕೆಲಸ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ ಎಂಬುವುದು ಈಗ ಎಸ್‌ಬಿಐ ನ್ಯಾಯಾಲಯ ನೀಡುತ್ತಿರುವ ಸಬೂಬು.

ಆದರೆ, ಸಾಮಾಜಿಕ ಹೋರಾಟಗಾರ ಕೊಮೋಡೋರ್ ಲೋಕೇಶ್ ಬಾತ್ರಾ ಅವರು ‘ರಿಪೋರ್ಟರ್ಸ್ ಕಲೆಕ್ಟಿವ್‌’ ಜೊತೆ ಹಂಚಿಕೊಂಡ ದಾಖಲೆಗಳ ಪ್ರಕಾರ, ಸರ್ಕಾರಕ್ಕೆ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಅತಿ ಕಡಿಮೆ ಸಮಯದಲ್ಲಿ, ಅಂದರೆ ಕೆಲವೊಮ್ಮೆ ಬರೀ 48 ಗಂಟೆಗಳಲ್ಲಿ ಒದಗಿಸಿರುವುದನ್ನು ಸಾಬೀತುಪಡಿಸುವ ಹಲವು ಪ್ರಮುಖ ಪುರಾವೆಗಳಿವೆ.

ಕೇಂದ್ರ ಹಣಕಾಸು ಸಚಿವಾಲಯದ ಸೂಚನೆಯ ಮೇರೆಗೆ ಎಸ್‌ಬಿಐ ಬಾಂಡ್‌ಗಳನ್ನು ನಗದುಗೊಳಿಸುವ ಗಡುವು ಮುಗಿದ 48 ಗಂಟೆಗಳ ಒಳಗೆ ದೇಶದಾದ್ಯಂತ ಚುನಾವಣಾ ಬಾಂಡ್‌ಗಳ ಡೇಟಾವನ್ನು ಒಟ್ಟುಗೂಡಿಸಿದ್ದಿದೆ ಎಂದು ದಾಖಲೆಗಳು ಬಹಿರಂಗಪಡಿಸುತ್ತವೆ.

ಬಾಂಡ್ ಮಾರಾಟದ ಪ್ರತಿ ವಿಂಡೋ ಅವಧಿಯ ನಂತರ ಅಂತಹ ಮಾಹಿತಿಯನ್ನು ಅದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳಿಸಿದೆ. 2020ರವರೆಗಿನ ಅಂತಹ ದಾಖಲೆಗಳನ್ನು ರಿಪೋರ್ಟರ್ಸ್ ಕಲೆಕ್ಟಿವ್ ಡಾಟ್ ಇನ್ ಪರಿಶೀಲಿಸಿದೆ. ಮಾರಾಟವಾದ ಮತ್ತು ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡ ಬಾಂಡ್‌ಗಳ ಆಡಿಟ್ ಟ್ರಯಲ್ ಅನ್ನು ಎಸ್‌ಬಿಐ ನಿರ್ವಹಿಸುವುದರ ಬಗ್ಗೆ ದಾಖಲೆಗಳು ಹೇಳುತ್ತವೆ.

ಪ್ರತಿ ಬಾಂಡ್‌ನ ಸೀರಿಯಲ್ ನಂಬರ್ ಬಳಸಿ ಅದರ ಜಾಡನ್ನು ಎಸ್‌ಬಿಐ ನಿರ್ವಹಿಸುತ್ತದೆ. ಇದು, 2018ರಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಯೋಜನೆ ಪ್ರಾರಂಭಿಸಿದಾಗಲೇ ಎಸ್‌ಬಿಐ ಸ್ವತಃ ಬೇಡಿಕೆಯಿಟ್ಟು ಮಾಡಿಕೊಂಡಿರುವ ವ್ಯವಸ್ಥೆ.

ಆಗ ಇಂತಹ ಜಾಣತನ ತೋರಿದ್ದ ಎಸ್‌ಬಿಐ, ಈಗ ಮಾತ್ರ ಖರೀದಿ ಸಮಯದಲ್ಲಿ ಬಾಂಡ್ ಖರೀದಿಸಿದ ದಾನಿಗಳ ವಿವರಗಳನ್ನು, ಅವನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಕೋರ್ಟ್‌ಗೆ ಹೇಳುತ್ತಿದೆ.

ಬಾಂಡ್‌ಗಳ ಮಾರಾಟದ ಕುರಿತ ಡೇಟಾವನ್ನು ನಿಗದಿತ ಶಾಖೆಗಳು ಮುಚ್ಚಿದ ಕವರ್‌ಗಳಲ್ಲಿ ಮುಂಬೈ ಪ್ರಧಾನ ಕಚೇರಿಗೆ ಕಳುಹಿಸುತ್ತವೆ ಎಂಬುದು ಎಸ್‌ಬಿಐ ಹೇಳಿಕೆ. ಅದೇ ರೀತಿ, ಬಾಂಡ್‌ಗಳನ್ನು ನಗದು ಮಾಡಿಕೊಂಡ ರಾಜಕೀಯ ಪಕ್ಷಗಳ ಡೇಟಾವನ್ನು ಕೂಡ ಸೀಲ್ ಮಾಡಿದ ಕವರ್‌ನಲ್ಲಿ ಮುಂಬೈ ಕಚೇರಿಗೆ ಕಳಿಸಲಾಗುತ್ತದೆ.

ದೇಣಿಗೆ ನೀಡಿದವರ ಮತ್ತು ಪಡೆದ ರಾಜಕೀಯ ಪಕ್ಷಗಳ ಹೆಸರು ಬಹಿರಂಗವಾಗದಂತೆ ನೋಡಿಕೊಳ್ಳಲು ಹೀಗೆ ಡೇಟಾವನ್ನು ಬೇರ್ಪಡಿಸಲಾಗಿರುತ್ತದೆ ಎಂದು ಬ್ಯಾಂಕ್ ಹೇಳಿದೆ. ಹೀಗಾಗಿ, 2019ರಿಂದ ನೀಡಲಾದ ಒಟ್ಟು 22,217 ಚುನಾವಣಾ ಬಾಂಡ್‌ಗಳ ಖರೀದಿದಾರರ ವಿವರಗಳನ್ನು ಫಲಾನುಭವಿ ಪಕ್ಷಗಳ ವಿವರಗಳೊಂದಿಗೆ ಜೋಡಿಸಲು ತಿಂಗಳುಗಟ್ಟಲೆ ಸಮಯ ಬೇಕು ಎಂದು ಎಸ್‌ಬಿಐ ಹೇಳುತ್ತಿದೆ.

ಆದರೆ ದಾಖಲೆಗಳು ಪ್ರಕಾರ, 2017ರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಕೊಂಡಂತೆ, ಚುನಾವಣಾ ಬಾಂಡ್‌ಗಳು ಬ್ಯಾಂಕ್‌ಗೆ ನಗದೀಕರಣಕ್ಕಾಗಿ ಬಂದಾಗ ಆ ರಾಜಕೀಯ ಪಕ್ಷದೊಂದಿಗೆ ದಾನಿಯ ವಿವರವನ್ನು ನೈಜ ಸಮಯದಲ್ಲೇ ಸಂಪರ್ಕಿಸುವ ವ್ಯವಸ್ಥೆಯನ್ನು ಎಸ್‌ಬಿಐ ಹೊಂದಿದೆ. ಬಾಂಡ್‌ಗಳ ಖರೀದಿ ಮತ್ತು ನಗದೀಕರಣ ಎಲೆಕ್ಟ್ರಾನಿಕ್ ಆಗಿ ನಡೆದದ್ದೆ ಅಥವಾ ನೇರವಾಗಿ ನಡೆದದ್ದೆ ಎಂಬುದು ಕೂಡ ಇಲ್ಲಿ ಗಣನೆಗೆ ಬರುವುದಿಲ್ಲ.

ಖರೀದಿದಾರರನ್ನು ಗುರುತಿಸಲು ಕೆವೈಸಿ ಪ್ರಕ್ರಿಯೆ ಮತ್ತು ಬಾಂಡ್‌ಗಳ ಮೇಲೆ ರಹಸ್ಯ ಸೀರಿಯಲ್ ನಂಬರ್ ಹಾಕಿದ ಬಳಿಕವೇ ನಿಗದಿತ ಎಸ್‌ಬಿಐ ಶಾಖೆಗಳು ಬಾಂಡ್ ಮಾರಾಟವನ್ನು ಪೂರ್ಣಗೊಳಿಸುವ ಕ್ರಮವನ್ನು ಅನುಸರಿಸಿವೆ.

ಪಾರದರ್ಶಕವಾಗಿಲ್ಲ ಎಂಬ ಆರೋಪಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಉತ್ತರಿಸುವಾಗಲೂ ಕೇಂದ್ರ ಸರ್ಕಾರ ಕೆವೈಸಿ ಮತ್ತು ಆಡಿಟ್ ಟ್ರಯಲ್ ಮೂಲಕ ಈ ಯೋಜನೆ ಪಾರದರ್ಶಕತೆ ಹೊಂದಿದ್ದಾಗಿ ಹೇಳಿಕೊಂಡಿತ್ತು.

ನ್ಯಾಯಾಲಯದಲ್ಲಿ ಯೋಜನೆಯನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂಬುದರ ಕುರಿತ ತನ್ನ ಆಂತರಿಕ ಚರ್ಚೆಗಳಲ್ಲಿಯೂ ಹಣಕಾಸು ಸಚಿವಾಲಯ, ಬಾಂಡ್ ಖರೀದಿದಾರರ ದಾಖಲೆಗಳು ಬ್ಯಾಂಕ್ ಬಳಿ ಲಭ್ಯವಿದ್ದು, ಜಾರಿ ಏಜನ್ಸಿಗಳು ತಮಗೆ ಬೇಕಿರುವಾಗ ಪರಿಶೀಲಿಸಬಹುದೆಂದು ಖಾತರಿಪಡಿಸಿದ್ದಿದೆ.

ಹೆಚ್ಚಿನ ಸಮಯ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಬಿಐ ಅರ್ಜಿ ಸಲ್ಲಿಸಿರುವ ಬಗ್ಗೆ ಸಿಕ್ಕಾಪಟ್ಟೆ ಮೀಮ್ ಗಳು ಹರಿದಾಡತೊಡಗಿವೆ. ಗ್ರಾಹಕರೊಂದಿಗೆ ವ್ಯವಹರಿಸುವಾಗ ಹೇಗೆ ಎಸ್‌ಬಿಐ ತನ್ನದೇ ವಿಶೇಷತೆಯಾದ ನಿಧಾನಗತಿಯನ್ನು ತೋರಿಸುತ್ತದೆಯೊ ಹಾಗೆಯೇ ಸುಪ್ರೀಂ ಕೋರ್ಟ್ ಎದುರಲ್ಲಿಯೂ ತೋರಿಸುತ್ತಿದೆ ಎಂದು ಅವು ಅಣಕಿಸಿವೆ.

ಸರ್ಕಾರಕ್ಕೆ ಮಾಹಿತಿಯನ್ನು ಕೊಡಬೇಕಾದಾಗ ಮಾತ್ರ ಎಸ್‌ಬಿಐ ಬಹಳ ಬೇಗ ಸ್ಪಂದಿಸಿದ್ದಿದೆ. ಕೆಲವೊಮ್ಮೆ ಒಂದು ಫೋನ್ ಕರೆಯಲ್ಲೇ ಅದು ಕೆಲಸ ಮುಗಿಸಿರುವುದೂ ಇದೆ.

ಉದಾಹರಣೆಗೆ, ಒಮ್ಮೆ 2018ರಲ್ಲಿ ರಾಜಕೀಯ ಪಕ್ಷವೊಂದು ತನ್ನ ಶೆಲ್ಫ್ ಲೈಫ್ ಕಳೆದ ಬಾಂಡ್‌ಗಳನ್ನು ನಗದೀಕರಿಸಲು ಎಸ್‌ಬಿಐನ ಹೊಸದಿಲ್ಲಿ ಶಾಖೆಯನ್ನು ಸಂಪರ್ಕಿಸಿತ್ತು. ಆಗ, ಚುನಾವಣಾ ಬಾಂಡ್‌ನ ಕಾಲಾವಧಿಯ ಬಗ್ಗೆ ನೋಡಿಕೊಳ್ಳುವುದಕ್ಕೆಂದೇ ಇರುವ ಮುಂಬೈನಲ್ಲಿನ ಎಸ್‌ಬಿಐ ಕಾರ್ಪೊರೇಟ್ ಕಚೇರಿಯಲ್ಲಿನ ನಿರ್ದಿಷ್ಟ ತಂಡವಾದ ಟ್ರಾನ್ಸಾಕ್ಷನ್ ಬ್ಯಾಂಕಿಂಗ್ ಘಟಕಕ್ಕೆ ದೆಹಲಿ ಶಾಖೆ ಕೆಲವೇ ಗಂಟೆಗಳೊಳಗೆ ಮಾಹಿತಿ ನೀಡಿತ್ತು.

ಆ ತಂಡ ಅಲ್ಪಾವಧಿಯಲ್ಲಿಯೇ ಮಾಹಿತಿಯನ್ನು ಸಂಗ್ರಹಿಸಿತ್ತು ಮತ್ತು ಅದರ ಬಗ್ಗೆ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಎಲೆಕ್ಟೋರಲ್ ಬಾಂಡ್ ಕೇವಲ 15 ದಿನಗಳ ಶೆಲ್ಫ್ ಲೈಫ್ ಹೊಂದಿರುತ್ತದೆ ಎಂದು ಕಾನೂನಿನಲ್ಲಿ ಇದ್ದುದರಿಂದ ಎಸ್‌ಬಿಐ ಕಾರ್ಪೊರೇಟ್ ಕಚೇರಿ ಹಣಕಾಸು ಸಚಿವಾಲಯದ ಸಲಹೆ ಕೇಳಿತ್ತು.

ತಕ್ಷಣ ಪ್ರತಿಕ್ರಿಯಿಸಿದ್ದ ಹಣಕಾಸು ಸಚಿವಾಲಯ, ಬಾಂಡ್‌ಗಳು ಅವಧಿ ಮೀರಿದ್ದರೂ ರಾಜಕೀಯ ಪಕ್ಷ ಅವುಗಳನ್ನು ನಗದೀಕರಿಸಲು ಅವಕಾಶ ನೀಡುವಂತೆ ಸೂಚಿಸಿತ್ತು. ಆ ಸೂಚನೆ ಬಳಿಕ ಮಿಂಚಿನ ವೇಗದಲ್ಲಿ ಕಾರ್ಯೋನ್ಮುಖವಾದ ಕಾರ್ಪೊರೇಟ್ ಕಚೇರಿ, ದೆಹಲಿ ಕಚೇರಿಗೆ ಆ ವಿಚಾರವನ್ನು ಮುಟ್ಟಿಸಿತ್ತು.

ಇವೆಲ್ಲವೂ 24 ಗಂಟೆಗಳ ಅವಧಿಯಲ್ಲಿ ನಡೆದಿದ್ದವು ಮತ್ತು ಅವಧಿ ಮೀರಿದ್ದ ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಲು ಆ ರಾಜಕೀಯ ಪಕ್ಷಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಹಣಕಾಸು ಸಚಿವಾಲಯವಾಗಲೀ ಅಥವಾ ಎಸ್‌ಬಿಐ ಆಗಲೀ ಅಧಿಕೃತ ದಾಖಲೆಗಳಲ್ಲಿ ಯಾವ ರಾಜಕೀಯ ಪಕ್ಷದ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ಆ ಪಕ್ಷ ತಲಾ 1 ಕೋಟಿಯ 10 ಅವಧಿ ಮೀರಿದ ಬಾಂಡ್‌ಗಳನ್ನು ಹೊಂದಿತ್ತು ಮತ್ತು ದೆಹಲಿಯಲ್ಲಿ ಅವುಗಳನ್ನು ಖರೀದಿಸಿದ ನಿರ್ದಿಷ್ಟ ದಿನಾಂಕಗಳ ಬಗ್ಗೆ ಎಸ್‌ಬಿಐ ಬಳಿ ಮಾಹಿತಿ ಇತ್ತು ಮತ್ತು ಅದನ್ನೇ ಅದು ಹಣಕಾಸು ಸಚಿವಾಲಯದ ಗಮನಕ್ಕೆ ತಂದಿತ್ತು.

ಸ್ವತಂತ್ರ ಸಂಸ್ಥೆಯಾಗಿದ್ದರೂ ಎಸ್‌ಬಿಐ ಹಲವಾರು ಸಂದರ್ಭಗಳಲ್ಲಿ ಸರ್ಕಾರದ ಭಾಗವಾಗಿ ಕಾರ್ಯನಿರ್ವಹಿಸಿದೆ. 2018 ರಲ್ಲಿ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಾಂಡ್‌ಗಳ ಡೇಟಾವನ್ನು ಹಂಚಿಕೊಳ್ಳಲು ಹಣಕಾಸು ಸಚಿವಾಲಯದಿಂದ ಅದು ಅನುಮತಿಯನ್ನು ಪಡೆದುಕೊಂಡಿತ್ತು.

ಎಸ್‌ಬಿಐನ ಈ ಹಿಂದಿನ ಕಾರ್ಯನಿರ್ವಹಣೆಯ ಈ ಇತಿಹಾಸವನ್ನು ಗಮನಿಸಿದರೆ, ಅದು ಈಗ ಸುಪ್ರೀಂ ಕೋರ್ಟ್ ಕೇಳಿರುವ ವಿವರಗಳನ್ನು ಒದಗಿಸಲು ಸಮಯ ಬೇಕೆನ್ನುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

ನಿವೃತ್ತ ಸರ್ಕಾರಿ ಅಧಿಕಾರಿ ಸುಭಾಷ್ ಚಂದ್ರ ಗಾರ್ಗ್ ಅವರಲ್ಲಿ ಬಹುಶಃ ಇದಕ್ಕೆ ಉತ್ತರ ಇರಬಹುದು. ಹಣಕಾಸು ಮತ್ತು ಅರ್ಥಶಾಸ್ತ್ರ ವ್ಯವಹಾರಗಳ ಕಾರ್ಯದರ್ಶಿಯಾಗಿ ಅವರು 2017 ಮತ್ತು 2018ರಲ್ಲಿ ಚುನಾವಣಾ ಬಾಂಡ್‌ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ಪಾತ್ರ ವಹಿಸಿದ್ದರು ಎಂದು ರಿಪೋಟರ್ಸ್‌ ಕಲೆಕ್ಟಿವ್ ಹೇಳಿದೆ.

ಎಸ್‌ಬಿಐ ಹೆಚ್ಚು ಸಮಯ ಕೇಳಲು ನಿರ್ದಿಷ್ಟ ಕಾರಣಗಳಿವೆಯೆ ಎಂದು ಮಾರ್ಚ್ 6ರಂದು ಮೋಜೋ ಸ್ಟೋರಿ ಗಾರ್ಗ್ ಅವರನ್ನು ಕೇಳಿದ್ದಕ್ಕೆ, ಅವರು ಹೇಳಿರುವುದು ಹೀಗೆ:

“ನನಗೆ ಅನ್ನಿಸುವುದು ಇದೊಂದು ಕುಂಟು ನೆಪವಷ್ಟೆ. ಈ ಮಾಹಿತಿಯನ್ನು ಒದಗಿಸಲು ಎಸ್‌ಬಿಐಗೆ ಸಮಯವೇ ಬೇಕಾಗಿಲ್ಲ. ಬಾಂಡ್‌ಗಳ ಖರೀದಿದಾರರು ಮತ್ತು ಬಾಂಡ್‌ಗಳನ್ನು ಸ್ವೀಕರಿಸುವವರ ವಿವರ ಜೋಡಿಸಬೇಕಿದೆ ಎಂದು ಅದು ಹೇಳುತ್ತಿದೆ. ಅದರ ಅಗತ್ಯವೇ ಇಲ್ಲ ಮತ್ತು ಅದಕ್ಕೆ ಸಮಯವೇ ಬೇಕಿಲ್ಲ. ನಾನು ಮೊದಲೇ ಹೇಳಿದಂತೆ, ಪ್ರತಿ ಬಾಂಡ್‌ಗೆ ಒಂದು ಸಂಖ್ಯೆ ಇರುತ್ತದೆ. ಆ ಸಂಖ್ಯೆಯ ಮಾಹಿತಿಯನ್ನು ಬೇರ್ಪಡಿಸಿದರೆ ಅಗತ್ಯ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಬಹುಶಃ ಹೀಗೊಂದು ಅರ್ಜಿ ಸಲ್ಲಿಸುವಂತೆ ಎಸ್‌ಬಿಐ ಅನ್ನು ಪ್ರಚೋದಿಸಿದಂತೆ ಕಾಣುತ್ತದೆ”.

ಗಾರ್ಗ್ ಅವರಿಗೆ ಖಂಡಿತ ಗೊತ್ತಿರುತ್ತದೆ. ಎಸ್‌ಬಿಐ ಬೇಡಿಕೆಯಂತೆ ಚುನಾವಣಾ ಬಾಂಡ್‌ಗಳಲ್ಲಿ ರಹಸ್ಯ ಸೀರಿಯಲ್ ನಂಬರ್‌ಗಳ ಜೋಡಣೆಯನ್ನು ನೋಡಿಕೊಂಡಿದ್ದವರೇ ಅವರು ಎಂದು ರಿಪೋಟರ್ಸ್‌ ಕಲೆಕ್ಟಿವ್ ತಿಳಿಸಿದೆ.

ಮಾಹಿತಿ ಕೃಪೆ: https://www.reporters-collective.in/

ಇದನ್ನೂ ಓದಿ : ಚುನಾವಣಾ ಬಾಂಡ್ ಮಾಹಿತಿ ಒದಗಿಸದ ಎಸ್‌ಬಿಐ: ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಸುಪ್ರೀಂ ಮೊರೆ ಹೋದ ಎಡಿಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...

ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆ: ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲಿಸಿ, ಅವುಗಳನ್ನು ಹಿಂಪಡೆಯುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸರ್ಕಾರವು ಆರು ಮಂದಿ ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿಯನ್ನು ರಚಿಸಿದೆ. ಸರ್ಕಾರದ ಅಧಿಕೃತ...

ಉದ್ಯಾನವನ ನುಂಗುವ ಕಾಯ್ದೆ ತಿದ್ದುಪಡಿ : ಸರ್ಕಾರದ ವಿರುದ್ಧ ಸಿಡಿದೆದ್ದ ಬೆಂಗಳೂರಿಗರು

ಕರ್ನಾಟಕ ವಿಧಾನಮಂಡಲವು ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಕೆಲವು ಭಾಗಗಳನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ಬಳಸಲು ಅನುಮತಿಸುವ ಕಾಯ್ದೆ ತಿದ್ದುಪಡಿಯನ್ನು ಅಂಗೀಕರಿಸಿದ ನಂತರ, ಬೆಂಗಳೂರಿನ ಉದ್ಯಾನವನಗಳು ಹೊಸ ರಾಜಕೀಯ ಮತ್ತು ಪರಿಸರ ವಿವಾದದ...

ನೇಪಾಳ–ಟಿಬೆಟ್ ಭೀಕರ ಪ್ರವಾಹ: ನೇಪಾಳದಲ್ಲಿ 734 ಸಾವು, 2,498 ಮಂದಿ ನಾಪತ್ತೆ; ಒಟ್ಟು ಸಾವಿನ ಸಂಖ್ಯೆ 750ಕ್ಕೆ ಏರಿಕೆ!

ನೇಪಾಳ–ಚೀನಾ ಗಡಿ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹ ಮತ್ತು ಅವಶೇಷ ಪ್ರವಾಹದಲ್ಲಿ ನೇಪಾಳದಲ್ಲಿ ಇದುವರೆಗೆ 734 ಮಂದಿ ಮೃತಪಟ್ಟಿದ್ದು, 2,498 ಮಂದಿ ನಾಪತ್ತೆಯಾಗಿದ್ದಾರೆ. ಚೀನಾದ ಟಿಬೆಟ್ ಪ್ರದೇಶದಲ್ಲಿ 16 ಮಂದಿ...

“ಇಂತಹ ಸೌಹಾರ್ದತೆಯ ಮಾತುಗಳನ್ನು ಅಮೆರಿಕಾದಲ್ಲಲ್ಲ, ಭಾರತಕ್ಕೆ ಬಂದು ಇಲ್ಲಿನ ಜನರಿಗೆ ಹೇಳಿ!” – ಭಾಗವತ್‌ಗೆ ವಿರೋಧ ಪಕ್ಷಗಳ ಸವಾಲು

ನ್ಯೂಯಾರ್ಕ್/ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನೀಡಿರುವ ಸೌಹಾರ್ದತೆಯ ಹೇಳಿಕೆ ಈಗ ಭಾರತೀಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿದೇಶಿ ಮಣ್ಣಿನಲ್ಲಿ ಮುಸ್ಲಿಂ ಸಮುದಾಯದ ಪರವಾಗಿ...

ಸ್ವದೇಶದಲ್ಲಿ ಹಿಂದೂ ರಾಷ್ಟ್ರ, ವಿದೇಶದಲ್ಲಿ ಒಳಗೊಳ್ಳುವಿಕೆ ಮಂತ್ರ : ಆರ್‌ಎಸ್‌ಎಸ್‌ ದ್ವಂದ್ವ ನಿಲುವು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

"ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂ ಅಲ್ಲ" ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿದಲ್ಲಿ ನೀಡಿರುವ ಹೇಳಿಕೆಯ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ...

ಮಹಾರಾಷ್ಟ್ರ | ಬುಡಕಟ್ಟು ವಿದ್ಯಾರ್ಥಿಗಳ ಹೋರಾಟಕ್ಕೆ ಜಯ : ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒಪ್ಪಿದ ಸರ್ಕಾರ

ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಆದ್ಯತೆ ಹಾಗೂ ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ...

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...