Homeಕರ್ನಾಟಕ‘ನಾನೇಕೆ ಹಿಂದೂ ಅಲ್ಲ’: ನಟ, ಚಿಂತಕ ಕಿರಣ್‌ ಶ್ರೀನಿವಾಸ ಪತ್ರ

‘ನಾನೇಕೆ ಹಿಂದೂ ಅಲ್ಲ’: ನಟ, ಚಿಂತಕ ಕಿರಣ್‌ ಶ್ರೀನಿವಾಸ ಪತ್ರ

- Advertisement -
- Advertisement -

“ನಾನೇಕೆ ಹಿಂದೂವಲ್ಲ ಮತ್ತು ಹಿಂದೂಯಿಸಂಗೆ ಅದರಿಂದ ಅಪಚಾರವಾಗುವುದಿಲ್ಲ ಏಕೆ?” ಎಂಬ ಶೀರ್ಷಿಕೆಯಲ್ಲಿ ಚಿಂತಕ, ನಟ ಕಿರಣ್‌ ಶ್ರೀನಿವಾಸ ಅವರು ಪತ್ರ ಬರೆದಿದ್ದಾರೆ. “ನಿಜವಾದ ಹಿಂದೂವಾಗಿಲ್ಲದಿದ್ದರೆ ಅದಕ್ಕಾಗಿ ಹೋರಾಡುವುದನ್ನು ನಿಲ್ಲಿಸಿ” ಎಂದು ಮನವಿಯನ್ನೂ ಮಾಡಿದ್ದಾರೆ.

ಫೇಸ್‌ಬು‌ಕ್‌ನಲ್ಲಿ ಈ ಕುರಿತು ಎರಡು ಪುಟಗಳ ಟಿಪ್ಪಣಿಯನ್ನು ಅವರು ಪೋಸ್ಟ್‌ ಮಾಡಿದ್ದಾರೆ.

ಕಿರಣ್ ಶ್ರೀನಿವಾಸ್ ಅವರ ಪತ್ರ:

ಪ್ರೀತಿಯ ಹಿಂದೂಗಳೇ,

ನಾನು ಹಿಂದೂ ಅಲ್ಲ ಎಂದು ಆಸಕ್ತಿ ಅಥವಾ ಕಾಳಜಿ ಇರುವ ಯಾರಿಗಾದರೂ ತಿಳಿಸಲು ನಾನು ಇದನ್ನು ಬರೆಯುತ್ತಿದ್ದೇನೆ. ನಾನು ಹಿಂದೂ ಅಲ್ಲ ಎಂದು ನಾನು ಭಾವಿಸಲು ಇರುವ ಕಾರಣಗಳನ್ನು ಪಟ್ಟಿ ಮಾಡುತ್ತೇನೆ. ನಾನು ಪಟ್ಟಿ ಮಾಡುತ್ತಿರುವ ಕಾರಣಗಳನ್ನು ಚೆನ್ನಾಗಿ ಚಿಂತಿಸಿದ್ದೇನೆ, ಸೂಕ್ಷ್ಮವಾಗಿ, ತರ್ಕಬದ್ಧ ವಿಚಾರಣೆಯ ಮೂಲಕ ಪರಿಶೀಲಿಸಿದ್ದೇನೆ. ನೀವು ಇದನ್ನು ಓದಿದ ನಂತರ, ನೀವು ಹಿಂದೂ ಆಗಿರಲು ಅರ್ಹರಾಗಿದ್ದೀರಾ, ಇಲ್ಲವಾ ಎಂದು ಪರಿಶೀಲಿಸುವಂತೆ ನನ್ನ ವಿನಮ್ರ ಮತ್ತು ಪ್ರಾಮಾಣಿಕ ಮನವಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನನ್ನ ಅಭಿಪ್ರಾಯದಲ್ಲಿ ಹಿಂದೂ ಆಗಿರುವುದು ಎಂದರೆ ಗೀತೆ, ವೇದ, ಉಪನಿಷತ್‌, ಪುರಾಣ ಪವಿತ್ರ ಗ್ರಂಥಗಳನ್ನು ಅಥವಾ ಹಿಂದೂ ಧರ್ಮದ ಪವಿತ್ರ ತತ್ವಗಳನ್ನು ಪಾಲಿಸುವವನು ಎಂದರ್ಥ. ಹಿಂದೂ ಆಗಿರಲು ಬೇಕಾದ ಮೂಲ, ಪ್ರವೇಶ ಮಟ್ಟದ ಅರ್ಹತೆ ಇದೆಂದು ನಾನು ಭಾವಿಸುತ್ತೇನೆ.

ನಾನು ಹಿಂದೂ ಕುಟುಂಬದಲ್ಲಿ ಜನಿಸಿದರೂ, ನನ್ನ ಪೂರ್ವಜರೆಲ್ಲರೂ ಮೇಲೆ ತಿಳಿಸಿದ ಎಲ್ಲಾ ಸಾಹಿತ್ಯವನ್ನು ಓದದ ಹೊರತು ನಾನು ನಿಜವಾದ ಹಿಂದೂ ಎನ್ನಲು ಸಾಧ್ಯವಿಲ್ಲ. ನನ್ನ ತಂದೆ ತಾಯಿಯರಿಬ್ಬರೂ ಇದನ್ನು ಮಾಡಿಲ್ಲವೆಂದು ನನಗೆ ಚೆನ್ನಾಗಿ ತಿಳಿದಿದೆ. ನಾನು ಈ ಗ್ರಂಥಗಳನ್ನು ಸಂಪೂರ್ಣವಾಗಿ ಓದಿಲ್ಲ. ಇದರಿಂದಾಗಿ ನಾನು ಹಿಂದೂ ಅಲ್ಲ ಎಂದು ಸ್ವಯಂ ಭಾವಿಸುತ್ತೇನೆ.

ಹಿಂದೂ ಎಂಬ ನಿಜವಾದ ಸಾರವನ್ನು ವಿವರಿಸಲು ಪ್ರಯತ್ನಿಸುವ ಬಹಳಷ್ಟು ವ್ಯಾಖ್ಯಾನಗಳಿವೆ. ಇದು ನೀವು ಯಾರನ್ನು ಕೇಳುತ್ತಿದ್ದೀರಿ ಮತ್ತು ಅದರ ಹಿಂದಿನ ಅಜೆಂಡಾವನ್ನು ಅವಲಂಬಿಸಿರುತ್ತದೆ. ಆದರೆ ಹಿಂದೂ ಎಂಬ ಒಂದೇ ಒಂದು ಮಾರ್ಗವಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಅದು ಆಳವಾದ, ಅರ್ಥಪೂರ್ಣ, ಆಧ್ಯಾತ್ಮಿಕ, ಸಂಕೀರ್ಣ, ಧಾರ್ಮಿಕ ಮತ್ತು ಚಿಂತನಾ ಪ್ರಚೋದಕ ಜೀವನ ಕಲ್ಪನೆಗಳಲ್ಲಿ ಸಂಪೂರ್ಣವಾಗಿ ಅಂತರ್ಗತವಾಗಿರುವ ಜೀವನ ವಿಧಾನವನ್ನು ಮುನ್ನಡೆಸುತ್ತದೆ. ಆದ್ದರಿಂದ “ಹಿಂದೂ ಧರ್ಮ ಒಂದು ಜೀವನ ವಿಧಾನ” ಮತ್ತು ಆದ್ದರಿಂದ ನಾನು ಇಲ್ಲಿ ಪ್ರಾಮಾಣಿಕವಾಗಿರಬೇಕು. ನಾನು ಹಿಂದೂ ಅಲ್ಲ ಎಂದು ಒಪ್ಪಿಕೊಳ್ಳಬೇಕು.

…ಸತ್ಯವಾಗಿ ನಡೆದುಕೊಂಡಿರುವ ಎಲ್ಲ ಹಿಂದೂಗಳ ಬಗ್ಗೆ ನನಗೆ ಅತ್ಯುನ್ನತ ಗೌರವ ಹೊರತುಪಡಿಸಿ ಬೇರೇನೂ ಇಲ್ಲ. ನಾನು ಈ ಹಿಂದೆ ಹೇಳಿರುವ ಯಾವುದೇ ಅಸೂಕ್ಷ್ಮ, ಅಪಹಾಸ್ಯ, ನೋವುಂಟುಮಾಡುವ ವಿಷಯಗಳಿಗಾಗಿ ನಿಜವಾದ ಹಿಂದೂಗಳಲ್ಲಿ (ಪವಿತ್ರ ಗ್ರಂಥಗಳನ್ನು ಓದಿದವರಲ್ಲಿ) ಕ್ಷಮೆಯಾಚಿಸುತ್ತೇನೆ. ನನ್ನ ಅಜ್ಞಾನಕ್ಕಾಗಿ ನೀವೆಲ್ಲರೂ ನನ್ನನ್ನು ಕ್ಷಮಿಸುತ್ತೀರಿ ಎಂದು ನನಗೆ ತಿಳಿದಿದೆ.

ಇದನ್ನೂ ಓದಿರಿ: ಬೆಂಗಳೂರಿನ ಗುಂಡಿಗಳನ್ನು ತುಂಬುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ: ರಾಜ್ಯ ಹೈಕೋರ್ಟ್ ಕಿಡಿ

ಹಾಗಾದರೆ ಈಗ ಉಳಿದಿರುವುದು ಈ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳುವುದು. ನೀವು ಹಿಂದೂ ಧರ್ಮದ ಎಲ್ಲಾ ಪವಿತ್ರ ಪುಸ್ತಕಗಳನ್ನು ಓದಿದ್ದೀರಾ? ಏಕೆಂದರೆ ಅಲ್ಲಿಯೇ ಮೊದಲ ಹೆಜ್ಜೆ ಪ್ರಾರಂಭವಾಗುತ್ತದೆ. ಅದು ಹಿಂದೂವಾಗಲು ಅಥವಾ ಹಿಂದೂ ಜೀವನ ವಿಧಾನವನ್ನು ಮುನ್ನಡೆಸಲು ಇರುವ ಪ್ರವೇಶವಾಗಿದೆ. ಈ ಮೂಲಭೂತ ಹಂತಗಳನ್ನು ಹಾದುಹೋಗದಿದ್ದರೆ ಉಳಿದವುಗಳು ನಗಣ್ಯ. ಆದ್ದರಿಂದ ನಿಲ್ಲಿಸಿ, ಅದರ ಬಗ್ಗೆ ಯೋಚಿಸಿ. ನಾನು ಇಲ್ಲಿ ಹೇಗೆ ಇದ್ದೇನೆಯೋ ಹಾಗೆ ನೀವು ನಿಮ್ಮ ಬಗ್ಗೆ ಪ್ರಾಮಾಣಿಕರಾಗಿದ್ದರೆ, ನೀವು ಒಂದು ತೀರ್ಮಾನಕ್ಕೆ ಬರುತ್ತೀರಿ. ನೀವು ನಿಜವಾದ ಹಿಂದೂ ಆಗಿದ್ದರೆ ನಿಮಗೆ ಗೌರವ, ಪ್ರೀತಿ ಮತ್ತು ವಂದನೆಗಳು. ಆದರೆ ನೀವು ಹಿಂದೂವಾಗಿಲ್ಲದಿದ್ದರೆ ಅದಕ್ಕಾಗಿ ಹೋರಾಡುವುದನ್ನು ನಿಲ್ಲಿಸಿ, ಅದನ್ನು ಉಳಿಸುವುದನ್ನು ನಿಲ್ಲಿಸಿ, ಅದನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಿ, ಅದರೊಳಗೆ ಕೋಮುವಾದ ಮಾಡುವುದನ್ನು ನಿಲ್ಲಿಸಿ! ಈಗಲೇ ನಿಲ್ಲಿಸಿ. ಏಕೆಂದರೆ ನೀವು ಹಿಂದೂ ಎಂಬ ಹೆಸರಿನಲ್ಲಿ ಸಂಪೂರ್ಣವಾಗಿ ಹಿಂದೂ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದೀರಿ.

-ನಿಮ್ಮ ವಿಶ್ವಾಸಿ,
ಕಿರಣ್ ಶ್ರೀನಿವಾಸ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...