Homeಕರ್ನಾಟಕ‘ನಾನೇಕೆ ಹಿಂದೂ ಅಲ್ಲ’: ನಟ, ಚಿಂತಕ ಕಿರಣ್‌ ಶ್ರೀನಿವಾಸ ಪತ್ರ

‘ನಾನೇಕೆ ಹಿಂದೂ ಅಲ್ಲ’: ನಟ, ಚಿಂತಕ ಕಿರಣ್‌ ಶ್ರೀನಿವಾಸ ಪತ್ರ

- Advertisement -
- Advertisement -

“ನಾನೇಕೆ ಹಿಂದೂವಲ್ಲ ಮತ್ತು ಹಿಂದೂಯಿಸಂಗೆ ಅದರಿಂದ ಅಪಚಾರವಾಗುವುದಿಲ್ಲ ಏಕೆ?” ಎಂಬ ಶೀರ್ಷಿಕೆಯಲ್ಲಿ ಚಿಂತಕ, ನಟ ಕಿರಣ್‌ ಶ್ರೀನಿವಾಸ ಅವರು ಪತ್ರ ಬರೆದಿದ್ದಾರೆ. “ನಿಜವಾದ ಹಿಂದೂವಾಗಿಲ್ಲದಿದ್ದರೆ ಅದಕ್ಕಾಗಿ ಹೋರಾಡುವುದನ್ನು ನಿಲ್ಲಿಸಿ” ಎಂದು ಮನವಿಯನ್ನೂ ಮಾಡಿದ್ದಾರೆ.

ಫೇಸ್‌ಬು‌ಕ್‌ನಲ್ಲಿ ಈ ಕುರಿತು ಎರಡು ಪುಟಗಳ ಟಿಪ್ಪಣಿಯನ್ನು ಅವರು ಪೋಸ್ಟ್‌ ಮಾಡಿದ್ದಾರೆ.

ಕಿರಣ್ ಶ್ರೀನಿವಾಸ್ ಅವರ ಪತ್ರ:

ಪ್ರೀತಿಯ ಹಿಂದೂಗಳೇ,

ನಾನು ಹಿಂದೂ ಅಲ್ಲ ಎಂದು ಆಸಕ್ತಿ ಅಥವಾ ಕಾಳಜಿ ಇರುವ ಯಾರಿಗಾದರೂ ತಿಳಿಸಲು ನಾನು ಇದನ್ನು ಬರೆಯುತ್ತಿದ್ದೇನೆ. ನಾನು ಹಿಂದೂ ಅಲ್ಲ ಎಂದು ನಾನು ಭಾವಿಸಲು ಇರುವ ಕಾರಣಗಳನ್ನು ಪಟ್ಟಿ ಮಾಡುತ್ತೇನೆ. ನಾನು ಪಟ್ಟಿ ಮಾಡುತ್ತಿರುವ ಕಾರಣಗಳನ್ನು ಚೆನ್ನಾಗಿ ಚಿಂತಿಸಿದ್ದೇನೆ, ಸೂಕ್ಷ್ಮವಾಗಿ, ತರ್ಕಬದ್ಧ ವಿಚಾರಣೆಯ ಮೂಲಕ ಪರಿಶೀಲಿಸಿದ್ದೇನೆ. ನೀವು ಇದನ್ನು ಓದಿದ ನಂತರ, ನೀವು ಹಿಂದೂ ಆಗಿರಲು ಅರ್ಹರಾಗಿದ್ದೀರಾ, ಇಲ್ಲವಾ ಎಂದು ಪರಿಶೀಲಿಸುವಂತೆ ನನ್ನ ವಿನಮ್ರ ಮತ್ತು ಪ್ರಾಮಾಣಿಕ ಮನವಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನನ್ನ ಅಭಿಪ್ರಾಯದಲ್ಲಿ ಹಿಂದೂ ಆಗಿರುವುದು ಎಂದರೆ ಗೀತೆ, ವೇದ, ಉಪನಿಷತ್‌, ಪುರಾಣ ಪವಿತ್ರ ಗ್ರಂಥಗಳನ್ನು ಅಥವಾ ಹಿಂದೂ ಧರ್ಮದ ಪವಿತ್ರ ತತ್ವಗಳನ್ನು ಪಾಲಿಸುವವನು ಎಂದರ್ಥ. ಹಿಂದೂ ಆಗಿರಲು ಬೇಕಾದ ಮೂಲ, ಪ್ರವೇಶ ಮಟ್ಟದ ಅರ್ಹತೆ ಇದೆಂದು ನಾನು ಭಾವಿಸುತ್ತೇನೆ.

ನಾನು ಹಿಂದೂ ಕುಟುಂಬದಲ್ಲಿ ಜನಿಸಿದರೂ, ನನ್ನ ಪೂರ್ವಜರೆಲ್ಲರೂ ಮೇಲೆ ತಿಳಿಸಿದ ಎಲ್ಲಾ ಸಾಹಿತ್ಯವನ್ನು ಓದದ ಹೊರತು ನಾನು ನಿಜವಾದ ಹಿಂದೂ ಎನ್ನಲು ಸಾಧ್ಯವಿಲ್ಲ. ನನ್ನ ತಂದೆ ತಾಯಿಯರಿಬ್ಬರೂ ಇದನ್ನು ಮಾಡಿಲ್ಲವೆಂದು ನನಗೆ ಚೆನ್ನಾಗಿ ತಿಳಿದಿದೆ. ನಾನು ಈ ಗ್ರಂಥಗಳನ್ನು ಸಂಪೂರ್ಣವಾಗಿ ಓದಿಲ್ಲ. ಇದರಿಂದಾಗಿ ನಾನು ಹಿಂದೂ ಅಲ್ಲ ಎಂದು ಸ್ವಯಂ ಭಾವಿಸುತ್ತೇನೆ.

ಹಿಂದೂ ಎಂಬ ನಿಜವಾದ ಸಾರವನ್ನು ವಿವರಿಸಲು ಪ್ರಯತ್ನಿಸುವ ಬಹಳಷ್ಟು ವ್ಯಾಖ್ಯಾನಗಳಿವೆ. ಇದು ನೀವು ಯಾರನ್ನು ಕೇಳುತ್ತಿದ್ದೀರಿ ಮತ್ತು ಅದರ ಹಿಂದಿನ ಅಜೆಂಡಾವನ್ನು ಅವಲಂಬಿಸಿರುತ್ತದೆ. ಆದರೆ ಹಿಂದೂ ಎಂಬ ಒಂದೇ ಒಂದು ಮಾರ್ಗವಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಅದು ಆಳವಾದ, ಅರ್ಥಪೂರ್ಣ, ಆಧ್ಯಾತ್ಮಿಕ, ಸಂಕೀರ್ಣ, ಧಾರ್ಮಿಕ ಮತ್ತು ಚಿಂತನಾ ಪ್ರಚೋದಕ ಜೀವನ ಕಲ್ಪನೆಗಳಲ್ಲಿ ಸಂಪೂರ್ಣವಾಗಿ ಅಂತರ್ಗತವಾಗಿರುವ ಜೀವನ ವಿಧಾನವನ್ನು ಮುನ್ನಡೆಸುತ್ತದೆ. ಆದ್ದರಿಂದ “ಹಿಂದೂ ಧರ್ಮ ಒಂದು ಜೀವನ ವಿಧಾನ” ಮತ್ತು ಆದ್ದರಿಂದ ನಾನು ಇಲ್ಲಿ ಪ್ರಾಮಾಣಿಕವಾಗಿರಬೇಕು. ನಾನು ಹಿಂದೂ ಅಲ್ಲ ಎಂದು ಒಪ್ಪಿಕೊಳ್ಳಬೇಕು.

…ಸತ್ಯವಾಗಿ ನಡೆದುಕೊಂಡಿರುವ ಎಲ್ಲ ಹಿಂದೂಗಳ ಬಗ್ಗೆ ನನಗೆ ಅತ್ಯುನ್ನತ ಗೌರವ ಹೊರತುಪಡಿಸಿ ಬೇರೇನೂ ಇಲ್ಲ. ನಾನು ಈ ಹಿಂದೆ ಹೇಳಿರುವ ಯಾವುದೇ ಅಸೂಕ್ಷ್ಮ, ಅಪಹಾಸ್ಯ, ನೋವುಂಟುಮಾಡುವ ವಿಷಯಗಳಿಗಾಗಿ ನಿಜವಾದ ಹಿಂದೂಗಳಲ್ಲಿ (ಪವಿತ್ರ ಗ್ರಂಥಗಳನ್ನು ಓದಿದವರಲ್ಲಿ) ಕ್ಷಮೆಯಾಚಿಸುತ್ತೇನೆ. ನನ್ನ ಅಜ್ಞಾನಕ್ಕಾಗಿ ನೀವೆಲ್ಲರೂ ನನ್ನನ್ನು ಕ್ಷಮಿಸುತ್ತೀರಿ ಎಂದು ನನಗೆ ತಿಳಿದಿದೆ.

ಇದನ್ನೂ ಓದಿರಿ: ಬೆಂಗಳೂರಿನ ಗುಂಡಿಗಳನ್ನು ತುಂಬುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ: ರಾಜ್ಯ ಹೈಕೋರ್ಟ್ ಕಿಡಿ

ಹಾಗಾದರೆ ಈಗ ಉಳಿದಿರುವುದು ಈ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳುವುದು. ನೀವು ಹಿಂದೂ ಧರ್ಮದ ಎಲ್ಲಾ ಪವಿತ್ರ ಪುಸ್ತಕಗಳನ್ನು ಓದಿದ್ದೀರಾ? ಏಕೆಂದರೆ ಅಲ್ಲಿಯೇ ಮೊದಲ ಹೆಜ್ಜೆ ಪ್ರಾರಂಭವಾಗುತ್ತದೆ. ಅದು ಹಿಂದೂವಾಗಲು ಅಥವಾ ಹಿಂದೂ ಜೀವನ ವಿಧಾನವನ್ನು ಮುನ್ನಡೆಸಲು ಇರುವ ಪ್ರವೇಶವಾಗಿದೆ. ಈ ಮೂಲಭೂತ ಹಂತಗಳನ್ನು ಹಾದುಹೋಗದಿದ್ದರೆ ಉಳಿದವುಗಳು ನಗಣ್ಯ. ಆದ್ದರಿಂದ ನಿಲ್ಲಿಸಿ, ಅದರ ಬಗ್ಗೆ ಯೋಚಿಸಿ. ನಾನು ಇಲ್ಲಿ ಹೇಗೆ ಇದ್ದೇನೆಯೋ ಹಾಗೆ ನೀವು ನಿಮ್ಮ ಬಗ್ಗೆ ಪ್ರಾಮಾಣಿಕರಾಗಿದ್ದರೆ, ನೀವು ಒಂದು ತೀರ್ಮಾನಕ್ಕೆ ಬರುತ್ತೀರಿ. ನೀವು ನಿಜವಾದ ಹಿಂದೂ ಆಗಿದ್ದರೆ ನಿಮಗೆ ಗೌರವ, ಪ್ರೀತಿ ಮತ್ತು ವಂದನೆಗಳು. ಆದರೆ ನೀವು ಹಿಂದೂವಾಗಿಲ್ಲದಿದ್ದರೆ ಅದಕ್ಕಾಗಿ ಹೋರಾಡುವುದನ್ನು ನಿಲ್ಲಿಸಿ, ಅದನ್ನು ಉಳಿಸುವುದನ್ನು ನಿಲ್ಲಿಸಿ, ಅದನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಿ, ಅದರೊಳಗೆ ಕೋಮುವಾದ ಮಾಡುವುದನ್ನು ನಿಲ್ಲಿಸಿ! ಈಗಲೇ ನಿಲ್ಲಿಸಿ. ಏಕೆಂದರೆ ನೀವು ಹಿಂದೂ ಎಂಬ ಹೆಸರಿನಲ್ಲಿ ಸಂಪೂರ್ಣವಾಗಿ ಹಿಂದೂ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದೀರಿ.

-ನಿಮ್ಮ ವಿಶ್ವಾಸಿ,
ಕಿರಣ್ ಶ್ರೀನಿವಾಸ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...