Homeಅಂಕಣಗಳುಜಾತಿಕೂಪದ ವಿರಾಟ್‌ರೂಪವನ್ನು ಬಿಚ್ಚಿಟ್ಟ ಹಂಸಲೇಖ ಘಟನೆ!

ಜಾತಿಕೂಪದ ವಿರಾಟ್‌ರೂಪವನ್ನು ಬಿಚ್ಚಿಟ್ಟ ಹಂಸಲೇಖ ಘಟನೆ!

- Advertisement -
- Advertisement -

ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರುಗಳಲ್ಲಿ ಒಬ್ಬರಾದ ಹಂಸಲೇಖರವರು ಆಡಿದ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಗೆ ಕಾರಣವಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಜಾತಿಗ್ರಸ್ತ ಟ್ರೋಲ್ ಪಡೆ ಎಷ್ಟು ಸಕ್ರಿಯವಾಗಿದೆ ಮತ್ತು ಭಾರತೀಯ ಸಮಾಜದ ಕೆಟ್ಟ ಜಾತಿ ಶ್ರೇಣೀಕರಣ ವ್ಯವಸ್ಥೆ ಇನ್ನೂ ಎಷ್ಟು ಸದೃಢವಾಗಿದೆ ಹಾಗೂ ಸಾಮಾಜಿಕ ಚಲನೆ ಇಲ್ಲಿ ಇನ್ನೂ ಎಷ್ಟು ದೂರದ ಮಾತಾಗಿದೆ ಎಂಬುದಕ್ಕೆ ಸಾಕ್ಷಿಯಾಯಿತಲ್ಲದೆ, ಸಾರ್ವಜನಿಕ ಸಂವಾದದ ಮಟ್ಟ ಕುಸಿತಗೊಂಡಿರುವುದನ್ನೂ ಮತ್ತೊಮ್ಮೆ ಮನಗಾಣಿಸಿತು.

ವೈರಲ್ ಆದ ಹಂಸಲೇಖ ಅವರ ಆ ವಿಡಿಯೋ ತುಣುಕಿನಲ್ಲಿ ಮುಖ್ಯವಾಗಿ ಎರಡು ಅಂಶಗಳು ಪ್ರಸ್ತಾಪವಾಗಿದ್ದವು. ಒಂದು, ವಿಶ್ವೇಶತೀರ್ಥ ಸ್ವಾಮಿಗಳಾಗಲೀ (ದಿವಂಗತ), ಕುಮಾರಸ್ವಾಮಿ, ಅಶೋಕ್, ಅಶ್ವಥ್‌ನಾರಾಯಣರಂತಹ ರಾಜಕಾರಣಿಗಳಾಗಲೀ, ತಾವು ದಲಿತರ ಮನೆಗಳಿಗೆ ಹೋದರಷ್ಟೇ ಸಾಲದು, ದಲಿತರನ್ನು ತಮ್ಮ ಮನೆಗಳಿಗೆ ಕರೆದುಕೊಂಡುಹೋಗುವುದು ಮುಖ್ಯ ಎಂದು ಹಂಸಲೇಖ ಅವರು ಜನಪ್ರಿಯ ಧಾಟಿಯಲ್ಲಿ ಹೇಳಿದ್ದು. ಇದಕ್ಕೆ ಬಿಳಿಗಿರಿರಂಗನ ಉದಾಹರಣೆಯನ್ನು ನೀಡಿದ್ದರು. ಎರಡನೆಯದ್ದು, ದಲಿತರ ಮನೆಗೆ ಹೋಗಿ ಅವರು ತಯಾರಿಸಿದ ಮಾಂಸಾಹಾರವನ್ನು ತಿನ್ನಬೇಕು, ಕುರಿಯ ರಕ್ತ ಹುರಿದು ಒಗ್ಗರಣೆ ಹಾಕಿದ ಖಾದ್ಯವನ್ನು ಅಲ್ಲಿಗೆ ಹೋದವರು ತಿನ್ನುತ್ತಾರೆಯೇ ಎಂದು ಪ್ರಶ್ನಿಸಿದ್ದರು. ಇದು ವಿಶ್ವೇಶತೀರ್ಥರನ್ನು ಕುರಿತು ಹೇಳಿದ್ದು ಒಂದು ಕಡೆಯಾದರೆ, ರಾಜಕಾರಣಿಗಳು ದಲಿತರ ಮನೆಗಳಿಗೆ ಹೋಗಿ ಬೇರೆ ಎಲ್ಲಿಂದಲೋ ತಂದ ಆಹಾರವನ್ನು ಅಲ್ಲಿ ಫೋಟೋಶೂಟ್‌ಗಾಗಿ ತಿನ್ನುವ ಬಳವಳಿಯನ್ನು ಕೂಡ ಪ್ರಶ್ನಿಸುವಂತೆ ಇತ್ತು. ಇದನ್ನು ಹಂಸಲೇಖರವರು ಬದ್ಧತೆಯಿಂದ ನುಡಿದರೋ ಅಥವಾ ಆ ಕ್ಷಣದ ಆವೇಶದಲ್ಲಿ ಹೇಳಿದರೋ ಅಥವಾ ಜನಪ್ರಿಯತೆಯ ಹಪಾಹಪಿಯಲ್ಲಿ ನುಡಿದರೋ ಎಂಬಂತಹ ಪ್ರಶ್ನೆಗಳನ್ನು ಅವರನ್ನು ಹತ್ತಿರದಿಂದ ಬಲ್ಲ ಹತ್ತಾರು ಜನರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಲೇ ಇದ್ದಾರೆ. ಆದರೆ ಮಾಂಸಾಹಾರ ಸಂಸ್ಕೃತಿಯ ಬಗ್ಗೆ ಒಂದು ಸಣ್ಣ ವರ್ಗದ ಜನ ತಮ್ಮ ಅಸಹನೆಯನ್ನು ಇನ್ನಿಲ್ಲದಂತೆ ತೋರ್ಪಡಿಸಿದ್ದು, ಇದೇ ಕಾರಣಕ್ಕೆ ಹಂಸಲೇಖರವರ ಮೇಲೆ ಮುಗಿಬಿದ್ದು, ಎಲ್ಲೆ ಮೀರಿ ವೈಯಕ್ತಿಕ ದಾಳಿ ನಡೆಸಿದ್ದು, ಹಂಸಲೇಖ ಅವರು ಮರುದಿನವೇ ತಾವು ನೀಡಿದ್ದ ಹೇಳಿಕೆಗೆ ಸ್ಪಷ್ಟೀಕರಣ ನೀಡಿ, ಹಿಂದಿನ ಹೇಳಿಕೆಯಿಂದ ದೂರ ನಡೆಯುವಂತೆ ಮಾಡಿತ್ತು. ಈ ನಿಲುವು ಬದಲಾವಣೆ ಕೂಡ ಹಲವರಿಗೆ ಆಕ್ರೋಶ ತರಿಸಿದ್ದು ನಿಜವೇ!

ಮೊದಲು ಎರಡನೇ ಸಂಗತಿಯನ್ನೇ ನೋಡೋಣ. ಎರಡು ದಿನಗಳ ಹಿಂದೆಯಷ್ಟೇ ಗುಜರಾತ್‌ನ ವಡೋಧರದಲ್ಲಿ ಬೀದಿಬದಿಯ ಮಾಂಸಾಹಾರ ಮಳಿಗೆಗಳನ್ನು ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಸ್ಥಳಾಂತರಿಸಬೇಕೆಂಬ ಮೌಖಿಕ ಆದೇಶವನ್ನು ಅಲ್ಲಿನ ಪಾಲಿಕೆ ಅಧಿಕಾರಿಗಳು ನೀಡಿದ್ದರು. ಸದ್ಯಕ್ಕೆ ಅದಕ್ಕೆ ತಾತ್ಕಾಲಿಕವಾಗಿ ತಡೆಬಿದ್ದಿದೆಯಾದರೂ, ಈಗಾಗಲೇ ಗುಜರಾತ್ ರಾಜಧಾನಿಯಲ್ಲಿಯೂ ಇಂತಹ ನಿಷೇಧ ಕ್ರಮ ತೆಗೆದುಕೊಳ್ಳಲು ಕೂಗೆದ್ದಿದೆ. ಇದು ಶತಮಾನಗಳಿಂದ ಈ ದೇಶದ ಬಹುಸಂಖ್ಯಾತರ ಮಾಂಸಾಹಾರ ಪದ್ಧತಿಯ ಮೇಲೆ, ಒಂದು ಚಿಕ್ಕ ಸಂಖ್ಯೆಯ ಬ್ರಾಹ್ಮಣ ಸಮುದಾಯದ ದಬ್ಬಾಳಿಕೆಗೆ ಸಣ್ಣ ಉದಾಹರಣೆಯಷ್ಟೇ. ಮಕ್ಕಳ ಪೌಷ್ಟಿಕತೆಗೆ ಅತಿ ಅಗತ್ಯವಾದ ಬಿಸಿಯೂಟದಲ್ಲಿ ಮೊಟ್ಟೆ ಸೇರಿಸುವ ಬಗ್ಗೆ ತಕರಾರುಗಳು, ದೇಶದ ಅಸಂಖ್ಯಾತ ಕ್ಯಾಂಟೀನ್‌ಗಳಲ್ಲಿ ಮಾಂಸಾಹಾರದ ನಿಷೇಧ, ಜನಪ್ರಿಯ ರಾಜಕಾರಣಿ ಸಿದ್ದರಾಮಯ್ಯನವರು ಮೀನು ತಿಂದು ದೇವಸ್ಥಾನಕ್ಕೆ ಹೋದರೆಂದು ಅವರ ವಿರುದ್ಧ ವಾರಾನುಗಟ್ಟಲೆ ಪ್ರಹಾರ ನಡೆಸುವ ಮಾಧ್ಯಮಗಳು, ಮಾಂಸಾಹಾರಿಗಳಿಗೆ ಕೊರೊನಾ ತೀವ್ರವಾಗುತ್ತದೆ ಎಂಬ ಹೀಗಳೆಯುವ ಸಂದೇಶಗಳು ಹೀಗೆ ಈ ಆಹಾರ ಶ್ರೇಷ್ಠತೆಯ ಹಿಂಸೆಗೆ ತುದಿಮೊದಲಿಲ್ಲ. ತರ್ಕಗಳಂತೂ ಕೇಳುವಂತೆಯೇ ಇಲ್ಲ. ಇಂತಹ ’ಬ್ರಾಹ್ಮಣೀಕರಣ’ಗೊಂಡಿರುವ ಸಮಾಜದಲ್ಲಿ ಹಂಸಲೇಖ ಅವರ ಮೇಲೆ ವೈಯಕ್ತಿಕವಾಗಿ ಮುಗಿಬಿದ್ದದ್ದು ಇವುಗಳ ವಿಸ್ತರಣೆಯಷ್ಟೇ ಎಂದು ತಳ್ಳಿಹಾಕಿಬಿಡಬೇಕೇ? ವಿವಿಧ ಆಹಾರ ಸಂಸ್ಕೃತಿಗಳನ್ನು ಕೇವಲ ಟಿವಿ ಷೋಗಳಲ್ಲಿ ಆರಾಧಿಸಿ, ನಮ್ಮ ನಡುವೆ ಅವುಗಳ ಮೇಲು-ಕೀಳುಗಳ ಕಂದಕ ಕಟ್ಟಿ, ಮಾಂಸಾಹಾರಕ್ಕೆ ಕಳಂಕ ಕಟ್ಟಿ, ಮಾಂಸಾಹಾರ ಸೇವಿಸುವವರಿಗೆ ಕೀಳರಿಮೆ ಮೂಡುವಂತೆ ಮಾಡುವ ವಿದ್ಯಮಾನವನ್ನು ಮೆಟ್ಟಿನಿಲ್ಲುವುದು ಅಸಾಧ್ಯವೇ?

ಹಂಸಲೇಖ ಅವರನ್ನು ವೈಯಕ್ತಿಕ ಟ್ರೋಲ್ ಮಾಡುವುದರ ಜೊತೆಗೆ ಎಲ್ಲ ಮಾಂಸಾಹಾರಿಗಳನ್ನು ರಾಕ್ಷಸರೆನ್ನುವ ಒಂದು ವಿಡಿಯೋ ಕೂಡ ಸದ್ದುಮಾಡಿತು. ಎಷ್ಟೋ ಜನ ಕುರಿಯ ರಕ್ತದಿಂದ ಖಾದ್ಯ ಮಾಡುತ್ತಾರೆಯೇ ಎಂದು ಹುಬ್ಬೇರಿಸಿದರು. ಕನ್ನಡ ರಾಜ್ಯೋತ್ಸವಕ್ಕೆ ಲೇಖಕರಾದ ವಿಕಾಸ್ ಅವರು ನ್ಯಾಯಪಥ ಪತ್ರಿಕೆಗೆ ಒಂದು ಸಣ್ಣ ಕವನವೊಂದನ್ನು ಬರೆದಿದ್ದರು. “ಕನ್ನಡವೆಂದರೆ ಕೊರಬಾಡು ಇದ್ದಂಗೆ.. ಇರೋ ಮೂರು ಗೇಣೂ ದಾಟಿ ಸ್ವರ್ಗಾನೇ ಕಂಡಂಗೆ” ಎಂದು ಪ್ರಾರಂಭವಾಗುವ ಈ ಪದ್ಯದಲ್ಲಿ “ಕರಿಬೇವು ಈರುಳ್ಳಿ ಜೊತೆ ಬೆರೆತ ಲಾಖಿ.. ಸವಿದೊಡನೆ ನಾಲಿಗೆಯ ಮೊಗ್ಗಿಗೆ ಸಂದಾಯ ಋಣ” ಎಂಬ ಸಾಲುಗಳು ಬರುತ್ತವೆ. ಅಲ್ಲಿ ಕನ್ನಡನಾಡಿನ ಹಲವು ಮಾಂಸಾಹಾರ ಖಾದ್ಯಗಳು ಕನ್ನಡದ ಸಂಸ್ಕೃತಿಯಲ್ಲಿ ಬೆರೆತುಹೋದ ವರ್ಣನೆಯಿದೆ. ಇದೇ ಲಾಖಿಯ ಬಗ್ಗೆಯೇ ಹಂಸಲೇಖ ಅವರು ಪ್ರಸ್ತಾಪಿಸಿದ್ದು. ಇದು ಬಹುಸಂಖ್ಯಾತ ಕನ್ನಡ ನಾಡಿನ ಜನರ ಆಹಾರದ ಭಾಗ.

ಇದನ್ನು ಸವಿಯುವುದರ ಬಗ್ಗೆ, ನಮಗೆ ಪರಿಚಿತವಿಲ್ಲದ ಆಹಾರ ಸಂಸ್ಕೃತಿಯ ಜೊತೆ ಸಂಬಂಧ ಬೆಸೆದುಕೊಳ್ಳುವ, ಆ ಮೂಲಕ ನಮ್ಮ ಬದುಕಿನ-ತಿಳಿವಿನ ವಿಸ್ತಾರವನ್ನು ಹಿಗ್ಗಿಸಿಕೊಳ್ಳುವ, ಆಹಾರದ ಹುಸಿ ಶ್ರೇಷ್ಠತೆಯನ್ನು ತ್ಯಜಿಸುವ ಬಗ್ಗೆ ಹಂಸಲೇಖ ಅವರು ಆಡಿದ ಮಾತುಗಳನ್ನು ಓತಪ್ರೇತವಾಗಿ ವ್ಯಾಖ್ಯಾನಿಸಿ ಮಾಂಸಾಹಾರದ ಬಗ್ಗೆ ಶತಮಾನಗಳಿಂದ ಜನಿತವಾದ ಸುಳ್ಳಿನ ಕಂತೆಗೆ ಮತ್ತೆ ಪುಷ್ಟಿ ಕೊಡಲಾಯಿತು. ಆದರೆ ಹಲವರು ಲಾಖಿಯ ವಿಶಿಷ್ಟ ರುಚಿಯ ಬಗ್ಗೆ, ಇದರ ವಿವಿಧ ರೆಸಿಪಿಗಳ ಬಗ್ಗೆ ಬರೆದು ಇದಕ್ಕೆ ಅಗತ್ಯವಿದ್ದ ಪ್ರತಿರೋಧವನ್ನು ದಾಖಲಿಸಿದ್ದು ಕನ್ನಡನಾಡಿನಲ್ಲಿ ಇರುವ ಎಚ್ಚೆತ್ತ ಪ್ರಜ್ಞೆಗೂ ಸಾಕ್ಷಿಯಾಯಿತು. ಅನ್ಯ ದೇಶಗಳಿಂದ ಪರಿಚಿತವಾಗುವ, ಕೆಲವು ವರ್ಷಗಳ ಹಿಂದೆ ಹೆಸರೇ ಕೇಳಿಲ್ಲದ ಪಿಜ್ಜಾ, ಪಾಸ್ತಾ, ಸ್ಪಗೆಟ್ಟಿಗಳಂತಹ ಎಷ್ಟೋ ಖಾದ್ಯಗಳು ಇಂದು ಇಲ್ಲಿಯವೇನೋ ಎಂಬಂತೆ ಅವಕ್ಕೆ ಹೊಂದಿಕೊಳ್ಳಬಹುದಾದರೆ, ಲಾಖಿ ಮತ್ತು ಇತರ ಮಾಂಸಾಹಾರಗಳಿಗೆ ತೆರೆದುಕೊಳ್ಳುವುದು ಕಷ್ಟವಾಗಬಾರದಲ್ಲವೇ? ಬಳವಳಿಯಾಗಿ ಬಂದಿರುವ ಮಾಂಸಾಹಾರದ ಬಗೆಗಿನ ’ವ್ಯಾಕರಿಕೆ’, ಅಸಡ್ಡೆ ಮನೋಭಾವಗಳನ್ನು ತೊರೆದು ಅವುಗಳಿಗೆ ತೆರೆದುಕೊಂಡರೆ ನಮ್ಮ ಲೋಕವೂ, ಲೋಕದೃಷ್ಟಿಯೂ ವಿಸ್ತಾರ ವಾಗುವುದರಲ್ಲಿ ಸಂಶಯವೇ ಇಲ್ಲ.

ಇನ್ನು ಇದೇ ವಾದ ಮುಂದುವರೆದು, ಉಡುಪಿ ಮಠದ ದಿವಂಗತ ವಿಶ್ವೇಶತೀರ್ಥ ಸ್ವಾಮಿಗಳ ಗುಣಗಾನವೂ ಪುಂಖಾನುಪುಂಖವಾಗಿ ನಡೆದುಹೋಯಿತು. ಅವರು ಬದಲಾವಣೆ, ಸಂವಾದದಲ್ಲಿ ನಂಬಿಕೆ ಇಟ್ಟಿದ್ದವರು, ಅವರ ಬಗ್ಗೆ ಇಂತಹ ಆರೋಪಗಳು ಸಲ್ಲದು ಎಂಬಿತ್ಯಾದಿ ಚರ್ಚೆಗಳು ಹಾದುಹೋದವು. ಇಡೀ ದಕ್ಷಿಣ ಕನ್ನಡದಲ್ಲಿ ಇಂದು ವಿಕೋಪಕ್ಕೆ ತಿರುಗಿರುವ ಕೋಮು ವೈಷಮ್ಯತೆಗೆ ವಿಶ್ವೇಶತೀರ್ಥ ಸ್ವಾಮಿಗಳ ಕೊಡುಗೆ ಇಲ್ಲವೇ? ಅಡ್ವಾನಿ ರಥಯಾತ್ರೆಗೆ, ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣವಾದ ಕರಸೇವೆ ಬಗೆಗೆ ವಿಶ್ವೇಶತೀರ್ಥರ ನಿಲುವೇನಿತ್ತು ಎಂಬುದರ ಬಗ್ಗೆ ತಿಳಿದಿಲ್ಲವೇ? ದಲಿತರ ಕೇರಿಗೆ ಹೋಗಿದ್ದು, ಮಠದ ಆವರಣದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದನ್ನು ಭಾರಿ ಸುಧಾರಣಾ ನಿಲುವುಗಳು ಎಂದು ಬಿಂಬಿಸುವವರು, ಕೋಮು ದಳ್ಳುರಿ ಸೃಷ್ಟಿಸಿದ ಬಾಬ್ರಿ ಮಸೀಸಿ ಧ್ವಂಸದ ಬಗೆಗೆ ಮೌನವಾಗಿದ್ದ, ರಾಮಮಂದಿರ ನಿರ್ಮಾಣಕ್ಕೆ
ಕೊನೆಯ ಉಸಿರಿನವರೆಗೂ ಉತ್ಸುಕರಾಗಿದ್ದ ವಿಶ್ವೇಶತೀರ್ಥರ ಮತ್ತೊಂದು ಬದಿಯ ವ್ಯಕ್ತಿತ್ವದ ಬಗ್ಗೆ ಮೌನವಾಗಿರುವುದೇಕೆ? ಇದೇ ಕಾರಣಕ್ಕಲ್ಲವೇ, ದಲಿತರ ಮನೆಗಷ್ಟೇ ಹೋದರೆ ಸಾಲದು, ನಿಮ್ಮ ಮನೆಗೆ ಅವರನ್ನು ಕರೆಯಬೇಕು ಎಂದು ಹಂಸಲೇಖ ಅವರು ಹೇಳಿದ್ದು. ಆಗ ದಮನಿತ ಸಮುದಾಯಗಳಿಗೆ ಇರುವ ಹೃದಯ ವೈಶಾಲ್ಯತೆ, ಅವರಿಗೆ ಇರುವ ಸಹನೆಯ, ಒಳಗೊಳ್ಳುವ, ವಿಶಾಲ ಆಧ್ಯಾತ್ಮದ ತತ್ವದ ಒಂದಂಶವಾದರೂ ವಿಶ್ವೇಶತೀರ್ಥರಿಗೆ ದಕ್ಕುತ್ತಿಲ್ಲವೇ? ಶತಶತಮಾನಗಳ ಮೌಢ್ಯಗಳನ್ನು ತೊರೆದು ಸಮಸಮಾಜದ ಪರಿಕಲ್ಪನೆ ಅವರಿಗೆ ಅರ್ಥವಾಗುತ್ತಿದ್ದುದು ಅಂತಹ ಸಮಯದಲ್ಲಿಯೇ ಅನ್ನುವ ಸಾಮಾನ್ಯ ಅಂಶ ಈ ಜಾತಿಗ್ರಸ್ತ ಮನಸ್ಸುಗಳಿಗೆ ತಿಳಿಯದೇ ಹೋಯಿತು. ಇದು ದಲಿತರ ಮನೆಗೆ ಹೋಗಿ ಊಟ ಮಾಡುವ ಫೋಟೋ ಆಪ್ ರಾಜಕಾರಣಿಗಳಿಗೂ ಅನ್ವಯವಾಗುವ ಅಂಶ.

ಇದೇ ಬೆನ್ನಲ್ಲಿ ಕುವೆಂಪು ಇತ್ಯಾದಿಯಾಗಿ ಮಾಧ್ವ ಪರಂಪರೆಯ ತಾರತಮ್ಯದ ಆಚರಣೆಗಳನ್ನು ಬಯಲು ಮಾಡಿ ಬರೆದ ಬರೆಹಗಳು ಮತ್ತೆಮತ್ತೆ ಮುನ್ನಲೆಗೆ ಬರುತ್ತಿವೆ. ಕುವೆಂಪು ಅವರ ಭಾಷಣದ ತುಣುಕೊಂದನ್ನು ಇಲ್ಲಿ ನೆನೆಸಿಕೊಳ್ಳುವುದಾದರೆ “… ಅದಕ್ಕೆ ನಮ್ಮ ದೊಡ್ಡ ದೊಡ್ಡ ಆಚಾರ್ಯವರ್ಗದವರು, ಹಿಂದಿನವರು ಮಾತ್ರವಲ್ಲ ಇಪ್ಪತ್ತನೆಯ ಶತಮಾನದ ಇಂದಿನವರೂ, ಸ್ವಜಾತಿ ಸ್ವಾರ್ಥದೃಷ್ಟಿಯಿಂದ ತಪ್ಪು ತಪ್ಪು ವ್ಯಾಖ್ಯಾನಗಳನ್ನೆಲ್ಲ ಮಾಡಿ, ತಮ್ಮ ಜಾತಿಶ್ರೇಷ್ಠತೆಯನ್ನು ರಕ್ಷಿಸಿಕೊಂಡು ಬಾಕಿಯವರನ್ನೆಲ್ಲ ಊಳಿಗರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಆ ರೀತಿ ಮಾಡಿಕೊಂಡು ಹೋಗಿದ್ದಾರೆ. ಒಬ್ಬ ಆಚಾರ್ಯರಂತೂ ಎಲ್ಲಿಯವರೆಗೆ ಹೋಗಿದ್ದಾರೆಂದರೆ, ಈಗಾಗಲೆ ಇರುವ ಜಾತಿಭೇದಗಳು ಸಾಲದೆಂದು ಜೀವಗಳನ್ನೆಲ್ಲಾ ಮುಕ್ತಿಯೋಗ್ಯರು, ತಮೋಯೋಗ್ಯರು ಮತ್ತು ನಿತ್ಯನಾರಕಿಗಳು ಅಂತ ವಿಭಜಿಸಿಬಿಟ್ಟಿದ್ದಾರೆ”. ಇಂತಹ ವಿಭಜನೆಯನ್ನು ಕಾಪಾಡಿಕೊಂಡು ಬರಲು ಇಂದಿಗೂ ಶ್ರಮಿಸುತ್ತಿರುವ ಪರಂಪರೆಯವರ ಬಗ್ಗೆ ಈಗ ಮತ್ತೊಬ್ಬರು ಮಾತನಾಡಿದ್ದಾರೆ. ಅದನ್ನು ಅವರು ಯಾವುದಕ್ಕಾಗಿ ಹೇಳಿದ್ದರೂ, ಮರುದಿನ ಹಿಂಜರಿದಿದ್ದರೂ, ಒಟ್ಟಾರೆ ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಇಂತಹ ತಿಳಿವಳಿಕೆಯ ಮಾತುಗಳ ಬೆನ್ನಿಗೆ ನಿಲ್ಲುವುದು ಒಳ್ಳೆಯದು.

ಕೊನೆಯ ಮಾತು: ಇತ್ತೀಚೆಗೆ ಬಿಡುಗಡೆಯಾದ ತಮಿಳು ಚಿತ್ರ ’ಜೈ ಭೀಮ್’ ಬಗ್ಗೆ ಒಂದು ಸಮುದಾಯದವರು ಹುರುಳಿಲ್ಲದ ತಗಾದೆ ತೆಗೆದಿರುವುದನ್ನು ವಿರೋಧಿಸಿ ಆ ಚಿತ್ರರಂಗದ ಪ್ರಾಜ್ಞರು, ನಿರ್ದೇಶಕ ಜ್ಞಾನವೇಲ್ ಮತ್ತು ನಟ ಸೂರ್ಯನ ಬೆಂಬಲಕ್ಕೆ ನಿಂತರು. ಇಲ್ಲಿ ಹಂಸಲೇಖ ಅವರ ಬೆನ್ನಿಗೆ ನಿಂತ ಕನ್ನಡ ಚಿತ್ರರಂಗದವರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇದರ ಹೊರತಾಗಿಯೂ, ಹಂಸಲೇಖರಂತಹ ಜನಪ್ರಿಯ ವ್ಯಕ್ತಿಗಳು ಈ ಟ್ರಾಲ್‌ಗಳನ್ನು ಎದುರಿಸಲಾಗದಷ್ಟು ಧೃತಿಕೆಡಬಾರದು ಎಂಬುದು ನಮ್ಮೆಲ್ಲರ ಅಭಿಲಾಷೆ. ಅವರ ಬೆಂಬಲಕ್ಕೆ ಎಷ್ಟೋ ಕನ್ನಡ ಮನಸ್ಸುಗಳು ನಿಂತಿದ್ದವು. ಅವರ ವಿರುದ್ಧ ಆದ ಟ್ರಾಲ್‌ಗಳಿಗೆ, ಅವರವರ ಮಟ್ಟಕ್ಕೆ ಇರುವ ರಿಸ್ಕ್‌ಗಳನ್ನು ಮೀರಿ ಈ ಕನ್ನಡ ಮನಸ್ಸುಗಳು ಉತ್ತರಿಸುತ್ತಿದ್ದಾರೆ, ಪ್ರತಿರೋಧ ತೋರಿಸುತ್ತಿದ್ದಾರೆ. ಇಂತಹ ಬೆಂಬಲವನ್ನು ಗಮನಿಸಿ ಹಂಸಲೇಖ ತಾವು ಮೊದಲು ಹೇಳಿದ ಮಾತುಗಳಿಗೆ ಬದ್ಧರಿರಬೇಕಿತ್ತು ಎಂಬ ಅಪೇಕ್ಷೆ ಕೊನೆಗೆ ಉಳಿದೇ ಉಳಿಯುತ್ತದೆ.


ಇದನ್ನೂ ಓದಿ: ‘ಬಾಡು ಸಪ್ತಾಹ’: ಸಾಮಾಜಿಕ ಜಾಲತಾಣದಲ್ಲಿ #ಬಾಡೇ_ನಮ್_ಗಾಡು ಅಭಿಯಾನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಸಸ್ಯಾಹಾರಿಗಳನ್ನು ದನಗಳಂತೆ ಸೊಪ್ಪು ಸದೆ ತಿನ್ನುವ ವರು ಎಂದು ಮಾಂಸಾಹಾರಿಗಳು ಗೇಲಿ ಮಾಡಿದ್ದನ್ನು ಕೇಳಿದ್ದೇನೆ.

  2. Nindu ons side story aytu guru. Nin non veg thinnu. Yaru beda anta helilla. Huli yavattu hullu thinnalla. Dana hullnne thinnodu. Oota thindi namma swanta nirdhaara. Namge nammade paddati. First avamana madiddu neevu swamijige. Don’t write this type of story.sumne kelsa illa anta eneno baribeda.

LEAVE A REPLY

Please enter your comment!
Please enter your name here

- Advertisment -

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...