ಕರ್ನಾಟಕ ನೆರೆಸಂತ್ರಸ್ತರ ಬಗ್ಗೆ ಪಿ.ಎಂ ಮೋದಿ ಮಾಹಾತ್ಮನಿಗೆಷ್ಟು ತಿರಸ್ಕಾರವೋ ಅಷ್ಟೇ ಅಸಡ್ಡೆ ಉತ್ತರ ಕನ್ನಡದ ಬದುಕು ನಲುಗಿದ ಮಂದಿಯ ಬಗ್ಗೆ ಯಡ್ಡಿಗಿದೆ. ಮೋದಿಗೆ ಯಡ್ಡಿಯ ಪಠಾಲಮ್ ಮೇಲೆ ಪೂರ್ವಾಗ್ರಹವಾದರೆ ಯಡ್ಡಿಗೆ ಉತ್ತರ ಕನ್ನಡದ ಸಂಸದಶಿಖಾಮಣಿ ಅನಂತಕುಮಾರ ಹೆಗಡೆ ಎಂದರೆ ನಿಗಿನಿಗಿ ಕೋಪ. ಒಟ್ಟಿನಲ್ಲಿ ನೊಂದವರಿಗೆ ಇನ್ನಷ್ಟೂ ನೋವು ಅಧಿಕಾರಸ್ಥರಿಗೆ ದ್ವೇಷಾಸೂಯೆಯ ಮೋಜು..
ಉತ್ತರಕನ್ನಡದಲ್ಲಿ ಅಗಸ್ಟ್ 5 ರಿಂದ 10 ರವರಗೆ ಪ್ರಳಯಾಂತಕ ಮಳೆಸುರಿದು ಹೆಚ್ಚು ಕಮ್ಮಿ 750 ಕೋಟಿ ರೂ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಸಮಿಕ್ಷೆ ನೆಡೆಸಿದೆ. ಮೂರ್ನಾಲ್ಕು ಜೀವ ಹರಣವಾಗಿವೆ. ನೂರಾರು ಜಾನುವಾರಗಳು ಸತ್ತು ಹೋಗಿವೆ. ಸಾವಿರಾರು ಎಕೆರೆ ತೋಟ-ಗದ್ದೆ ಕೊಚ್ಚಿಕೊಂಡು ಹೋಗಿವೆ. ಬರೋಬ್ಬರಿ 2,500 ಮನೆಗಳು ಮುರಿದು ಬಿದ್ದಿವೆ. ನೆರೆ ಹಾವಳಿ ಸಂತ್ರಸ್ತರಿಗೆ ಎರಡು ತಿಂಗಳಾದರೂ ಬದುಕು ಕಟ್ಟಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ. ಸಿಎಂ ಸಾಹೇಬರು ಬಂದು ತಮ್ಮ ಕಣ್ಣಿರು ಒರೆಸುತ್ತಾರೆಂಬ ನಿರೀಕ್ಷೆಯಲ್ಲಿದ್ದ ನೆರೆಪಿಡಿತ ಜನತೆಗೆ ಮೂರು ಬಾರಿ ಯಡ್ಡಿ ಮೋಸಮಾಡಿದ್ದಾರೆ.
ವಾರದಲ್ಲಿ ಎರಡು ಮೂರು ಬಾರಿ ಸಿಎಂ ನೆರೆ ಪೀಡಿತ ಪ್ರದೇಶಗಳಿಗೆ ಬರುತ್ತಾರೆಂದು ಜಿಲ್ಲಾಡಳಿತ ಎಲ್ಲಾ ಸಿದ್ದತೆ ಮಾಡಿತ್ತು. ಕಳೆದ ತಿಂಗಳು ಸಿಎಂ ಬರುವುದು ಗ್ಯಾರಂಟಿಯೆಂದು ನೆರೆ ಸಂತ್ರಸ್ತರು ಕಾದು ಕುಳಿತ್ತಿದ್ದರು. ಎಂಮ್ಮೆಲ್ಲೆಗಳು, ಸಂಸದರು ಯಡ್ಡಿ ಸ್ವಾಗತಿಸಲು ಅಲ್ಲಿ ನೆರದಿದ್ದರು. ಅಧಿಕಾರಿಗಳ ದಂಡಂತು ನಡುವತ್ತಿಗೆ ಬಂದಿತ್ತು. ಆದರೆ ಪಕ್ಕದ ಶಿವಮೊಗ್ಗದಲ್ಲಿದ ಯಡ್ಡಿ ಧಿಡೀರ್ ಉತ್ತರಕನ್ನಡಕ್ಕೆ ಬರಲಾರೇನೆಂದು ಸಂದೇಶ ಕಳುಹಿಸಿದರು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ತನ್ನ ಹಿತಶತ್ರುವೂ ಆದ ಈಶ್ವರಪ್ಪ ಕರೆದಿದ್ದ ಅಧಿಕಾರಿಗಳ ಸಭೆಗೆ ನುಗ್ಗಿ ನಿಭಾಯಿಸಿದ್ದರು. ಶಿವಮೊಗ್ಗೆಯ ಚೆಡ್ಡಿ ರಾಜಕಾರಣದ ಮೇಲಾಟಕ್ಕೆ ಉತ್ತರಕನ್ನಡ ಕಡೆಗಣಿಸ ಬೇಕಾಯಿತು.
ನೆರೆ ಹಾನಿಯ ಪರಿಶೀಲನೆಗೆಂದು ಪಕ್ಕದ ಧಾರವಾಡದ ಮಂತ್ರಿ ಜಗದೀಶ್ ಶೆಟ್ಟರ್ ಜಿಲ್ಲೆಗೊಮ್ಮೆ ಬಂದು ಹಾಗೆ ಹೋಗಿದ್ದರು. ಜಿಲ್ಲಾ ಉಸ್ತುವಾರಿ ಮಂತ್ರಿ ಶಶಿಕಲಾ ಜೊಲ್ಲೆ ಮೊನ್ನೆ ಬಂದು ಬೈ ಹೇಳಿದ್ದಾರೆ. ಜಿಲ್ಲೆಯ ಭೌಗೋಳಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಒಂಚೂರು ಗೊತ್ತಿಲ್ಲದ ಈ ಮಂತ್ರಿ, ಅಧಿಕಾರಿ ಹೇಳಿದ್ದಕೆ ಗೋಣು ಆಡಿಸಿದ್ದಾರೆ. ತಾವು ಬಂದಿದ್ದು ಬರೀ ಮಾಹಿತಿಯನ್ನು ಬಾಯಲ್ಲಿ ಸಿಎಂಗೆ ತಲುಪಿಸುವ ಪೋಸ್ಟ್ ಮ್ಯಾನ್ ಚಾಕರಿಗಷ್ಟೇ ಎಂಬಂತೆ ಹೊಣಗೆಡಿ ಮಾತನಾಡಿದ್ದಾರೆ. ಸಿಎಂ ಜೊತೆ ಚರ್ಚಿಸುತೇನೆಂದು ಮಂತ್ರಿಗಳು ಹೇಳಿದ್ದಾರೆಯೇ ಹೊರತು ಇಂತಿಷ್ಟು ಪರಿಹಾರಕ್ಕೆ ಬೇಡಿಕೆ ಇಡುತ್ತೇವೆಂದಾಗಲಿ, ನೊಂದವರಿಗೆ ಸೂಕ್ತ ಪರಿಹಾರ ಕೊಡುತ್ತೇವೆ ಎಂದಾಲಿ ಧೈರ್ಯದಿಂದ ಹೇಳಿಲ್ಲ. ಈ ಮಂತ್ರಿಗಳ ದಂಡಿನ “ದಂಡ” ಯಾತ್ರೆಗೆ ಮತ್ತು ಸಿಎಂ ಬರ್ತಾರೆಂದು ಮಾಡಿದ ಸಿದ್ದತೆಗೆ ಲಕ್ಷಾಂತರ ಹಾನಿಯಾಗಿದೆ ಹೊರತು ನೆರೆ ಪಿಡಿತರಿಗೆ ಪೈಸೆ ಫಾಯ್ದೆ ಆಗಿಲ್ಲ.
ಹನ್ನೊಂದು ಸಾವಿರಕ್ಕೂ ಹೆಚ್ಚು ಮಂದಿ ಪರಿಹಾರ ಕೇಂದ್ರಗಳನ್ನು ಸೇರಿದ್ದರು. ಇದಕ್ಕಿಂತಲು ಹೆಚ್ಚು ಮಂದಿ ನೆರೆಯಿಂದ ದಿಕ್ಕೆಟ್ಟು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಕೆಲವರಿಗೆ ಪಂಚಕಜ್ಜಾಯ ಕೊಟ್ಟಂತೆ ಹನಿ ಹನಿ ಹಣ ‘ಪರಿಹಾರ’ ಹಂಚಿದ್ದಾರೆ. ಇದು ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗಿಲ್ಲ. ರಸ್ತೆ, ಕಾಲು ಸುಂಕ, ಬ್ರಿಡ್ಜ್, ವಿದ್ಯುತ್ ಕಂಬ, ಡ್ಯಾಮು, ಕೆರೆ, ಬಾವಿ ಕೊಚ್ಚಿ ಹೋಗಿವೆ. ನೆರೆಬಂದ ಪ್ರದೇಶಗಳಂತೂ ನರಕವಾಗಿವೆ. ಜನರಿಗಾದ ಆಘಾತವನ್ನು ಆಳುವವರ ಎದುರು ಸಮರ್ಥವಾಗಿ ಮಂಡಿಸಿ ಪರಿಹಾರ ತರುವ ನಾಯಕತ್ವ ಉತ್ತರಕನ್ನಡದಲ್ಲಿ ಇಲ್ಲ. ಬಿಜೆಪಿಯಿಂದ ಆರರಲ್ಲಿ ನಾಲ್ಕುಜನ ಶಾಸಕರಾಗಿದ್ದಾರೆ. ಒಬ್ಬ ಅನರ್ಹನು ಬಿಜೆಪಿ ಪಾಲಾಗಿದ್ದಾನೆ. ತಾನು ಹುಟ್ಟಿದೇ ದೇಶಉದ್ದಾರಕೆಂದು ಎಂಬಂತೆ ನಾಲಿಗೆ ಹರಿಬಿಡುವ ಸಂಸದ ಆರನೇ ಭಾರಿ ಪಾರ್ಲಿಮೆಂಟಿನ ಕುರ್ಚಿ ಬಿಸಿ ಮಾಡಲು ಆಯ್ಕೆಯಾಗಿದ್ದಾನೆ.
ಇವರ್ಯಾರಿಗೂ ಸಿಎಂ ಎದುರು ನಿಂತು ಸಮಸ್ಯ ವಿವರಿಸುವ ಧೈರ್ಯವಿಲ್ಲ. ಕಾರವಾರ ಶಾಸಕಿ ರೂಪಾಲಿ ನಾಯ್ಕಳಂತೂ ಹೆಜ್ಜೆ-ಹೆಜ್ಜೆಗೆ ಶೋ ಮಾಡುವುದೆ ಶಾಸಕಿಯ ಕರ್ತವ್ಯ ಎಂದುಕೊಂಡಿದ್ದಾಳೆ. ನೆರೆ ಬಂದಾಗ ಸಮ್ಮಿಶ್ರ ಸರ್ಕಾರ ಉರುಳಿಸುವ ಬಿಜೆಪಿ ರೆಸಾರ್ಟ್ ಸರ್ಕಸ್ನಲ್ಲಿದ ಈಕೆ ತಾನು ಅನಿವಾರ್ಯವಾಗಿ ರೆಸಾರ್ಟ್ ಸೇರಿದ್ಧೇನೆ… ನೊಂದ ನೆರೆ ಪೀಡಿತರ ಬಳಿ ಬರಲಾಗುತ್ತಿಲ್ಲವೆಂದು ಜಾಹಿರಾತು ಪತ್ರಿಕೆಗಳಿಗೆ ಕೊಟ್ಟು ತಾನೆಂತಹ ನಾಲಾಯಕ್ ಜನಪ್ರತಿನಿಧಿ ಎಂದು ತೋರಿಸಿಕೊಂಡಿದ್ದಾಳೆ. ಬಟ್ಕಳದ ಬಚ್ಚಾ ಶಾಸಕ ಸುನಿಲನಾಯ್ಕ್ ಸಿಎಂ ಇರಲಿ ಸಂಸರ ಮುಂದೆನಿಂತು ಮಾತನಾಡುವ ಧೈರ್ಯವಿಲ್ಲ. ಕುಮುಟೆಯ ಶಾಸಕ ದಿನಕರ್ ಶೆಟ್ಟಿಗೆ ಕಿಕ್ಬ್ಯಾಕ್ ಕಮಾಯಿಯೇ ನೆರೆ ಪೀಡಿತರ ಸೇವೆ ಎಂಬ ಭಾವನೆ.
ಈಗ ಎರಡನೆ ಸುತ್ತಿನ ನೆರೆ ವಿಕ್ಷಣೆಗೆ ಸಿಎಂ ಯಡ್ಡಿ ರೆಡಿಯಾಗಿದ್ದಾರೆ. ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತಿತರ ಕಡೆ ಸಿಎಂ ಸಂಚಾರ ಮಾಡುತ್ತಿದ್ದಾರೆ. ಆದರೆ ಆತನ ಟೂರ್ ಲಿಸ್ಟ್ ನಲ್ಲಿ ಉತ್ತರಕನ್ನಡ ಇಲ್ಲ.!! ಸಿಎಂ ಕಾಲರ್ ಹಿಡಿದು ಜಿಲ್ಲೆಗೆ ಕರೆತಬೇಕಿದ್ದ ಶಾಸಕರಿಗೆ ಆ ತಾಕತು ಇಲ್ಲ. ಸಿಎಂ ಕೆಂಗಣ್ಣಿಗೆ ಸಿಲುಕಿದರೆ ನಿಗಮ ಮಂಡಳಿ, ಗೂಟದ ಕಾರಿಗೆ ಸಂಚಕಾರ ಎಂಬ ಅಂಜಿಕೆ. ಸಿಎಂ ಮುಂದೆ ವಿರಾವೇಷದ ಮಾತಾಡುವ ಸಂಸದ ಅನಂತ್ಮಾಣಿಗೆ ಜನರೆಂದರೆ ಯಾವಾಗಲೂ ಅಲರ್ಜಿ. ಅತನಿಗೆ ಹಿಂದುತ್ವ ಗೊಂದಲಗಳಿಗಷ್ಟೆ ಕಾಲಾಳುಗಳು ಬೇಕು.
ಒಟ್ಟಿನಲ್ಲಿ ಉತ್ತರಕನ್ನಡದ ಸಮಸ್ಯಗಂತೂ ಉತ್ತರವಿಲ್ಲ.!!!