Homeಮುಖಪುಟಇಟಲಿಯಲ್ಲೇಕೆ ಹಾಗಾಯಿತು? : ಯೂರೋಪ್ ವೈದ್ಯರೊಬ್ಬರ ಸಂದರ್ಶನ

ಇಟಲಿಯಲ್ಲೇಕೆ ಹಾಗಾಯಿತು? : ಯೂರೋಪ್ ವೈದ್ಯರೊಬ್ಬರ ಸಂದರ್ಶನ

ಇಟಲಿಯ ಜನರು ಮತ್ತು ಸರ್ಕಾರದ ಮೇಲಿರುವ ಆರೋಪವೆಂದರೆ, ಕೊರೊನಾ ಸೋಂಕು ಬಂದಿದೆ ಎಂದು ಗೊತ್ತಾದ ನಂತರವೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿಲ್ಲ.

- Advertisement -
- Advertisement -

ನಮ್ಮ ಪತ್ರಿಕೆಯ ಬಳಗದಲ್ಲಿನ ವೈದ್ಯರೊಬ್ಬರು ಇಂಗ್ಲೆಂಡಿನಲ್ಲಿದ್ದು, ಸ್ವತಃ ಕೊರೊನಾ ಶಂಕಿತರ ಆರೈಕೆಯಲ್ಲಿದ್ದಾರೆ ಮತ್ತು ಇಟಲಿಯ ಸಮಸ್ಯೆಯ ಕುರಿತು ಹತ್ತಿರದ ತಿಳುವಳಿಕೆಯನ್ನು ಹೊಂದಿದ್ದಾರೆ. ಈ ಸದ್ಯ ಪ್ರಪಂಚದಲ್ಲಿ ಅತೀ ಹೆಚ್ಚು ಸೋಂಕು ಮತ್ತು ಸಾವುಗಳು ಸಂಭವಿಸುತ್ತಿರುವುದು ಇಟಲಿಯಲ್ಲಾದ್ದರಿಂದ ಅವರನ್ನು ಮಾತಾಡಿಸಲಾಯಿತು. ಅವರ ಜೊತೆಗಿನ ಚರ್ಚೆಯ ಸಂಗತಿಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ. ಸದರಿ ವೈದ್ಯರು ಅವರ ಹೆಸರನ್ನು ಉಲ್ಲೇಖಿಸಿದಿರಲು ಸೂಚಿಸಿದ್ದಾರೆ.

ಇಟಲಿಯಲ್ಲಿ ಕೊರೊನಾ ಸೋಂಕು ಮತ್ತು ಸಾವುಗಳು ಇಷ್ಟೊಂದು ಏಕೆ ಹೆಚ್ಚಾಗಿದೆ?

ಬಹಳ ನಿರ್ದಿಷ್ಟವಾಗಿ ಹೀಗೆಯೇ ಎಂದು ಹೇಳುವುದು ಸಾಧ್ಯವಿಲ್ಲ. ಇನ್ನೂ ಪೂರ್ಣ ಗೊತ್ತಾಗಿಲ್ಲ ಎಂತಲೇ ಹೇಳಬಹುದು. ಆದರೆ, ಈ ಸಂಬಂಧ ಇರುವ ಮರ‍್ನಾಲ್ಕು ಥಿಯರಿಗಳನ್ನು ನಿಮಗೆ ಹೇಳಬಹುದು ಅಷ್ಟೇ.

ಮಿಲಾನ್ ಸುತ್ತಮುತ್ತ ಹೆಚ್ಚಿದೆ (ಅದೇ ಇಟಲಿಯ ಕೊರೊನಾದ ಕೇಂದ್ರ – ಎಪಿಸೆಂಟರ್). ಅದು ಇಟಲಿಯ ಶ್ರೀಮಂತ ಭಾಗ. ಆ ಭಾಗವು ಪ್ರಪಂಚದ ಬೇರೆ ಭಾಗಗಳ ಜೊತೆಗೆ ಹತ್ತಿರದ ಸಂಬಂಧ ಹೊಂದಿದೆ ಮತ್ತು ಅಲ್ಲಿಂದ ಅಕ್ಕಪಕ್ಕದ ಭಾಗಗಳಿಗೂ ಪ್ರತಿನಿತ್ಯ ದೊಡ್ಡ ಪ್ರಮಾಣದಲ್ಲಿ ಜನರು ಓಡಾಡುತ್ತಾರೆ. ಚೀನಾದ ಜೊತೆಗೂ ಈ ಭಾಗಕ್ಕೆ ಸಂಬಂಧವಿದೆ. (2018ರಲ್ಲಿ ಚೀನಾ ಮತ್ತು ಮಿಲಾನ್ ನಗರದ ನಡುವೆ ವಿಮಾನ ಪ್ರಯಾಣ ಮಾಡಿದವರ ಸಂಖ್ಯೆ 8,97,000 ಆಗಿತ್ತು. ವಾರದಲ್ಲಿ 24 ವಿಮಾನಗಳು ಈ ಮಾರ್ಗದಲ್ಲಿ ಹಾರಾಡಿದ್ದು ಸಾಲದೆಂದು ಹೊಸ ಒಪ್ಪಂದಗಳನ್ನು ಮಾಡಿಕೊಂಡು ಈ ಸಂಖ್ಯೆ ಇನ್ನಷ್ಟು ಹೆಚ್ಚಿತು.- ಸಂದರ್ಶಕ)

ಇಟಲಿಯು ಮಿಕ್ಕ ಯೂರೋಪ್ ದೇಶಗಳಿಗಿಂತ ಭಿನ್ನವಾಗಿರುವ ಇನ್ನೊಂದು ಅಂಶವೂ ಇದೆ. ಅಲ್ಲಿ ಜನರು ಪರಸ್ಪರ ಬೆರೆಯುವಿಕೆಯೂ ಹೆಚ್ಚು. ಕೌಟುಂಬಿಕ ಸಂಬಂಧಗಳೂ ಹತ್ತಿರದವು. ಅಂದರೆ ಇಂಗ್ಲೆಂಡ್ ಅಥವಾ ಅಮೆರಿಕಾದಂತಲ್ಲದೇ, ತಂದೆ-ತಾಯಿ, ಅಜ್ಜ-ಅಜ್ಜಿಯರ ಜೊತೆಗೆ ಮಕ್ಕಳು ಸಂಬಂಧ ಇಟ್ಟುಕೊಂಡಿರುತ್ತಾರೆ; ಪ್ರತಿದಿನವೂ ಭೇಟಿ ಮಾಡುವಷ್ಟು.

ಇನ್ನೊಂದು ಮುಖ್ಯವಾದ ಸಂಗತಿಯೇನೆಂದರೆ ವಯಸ್ಸಾದವರು (ಅದರಲ್ಲೂ 80 ವರ್ಷಕ್ಕೂ ಹೆಚ್ಚು ವಯಸ್ಸಿನವರು) ಅತೀ ಹೆಚ್ಚು. ಇದರಲ್ಲಿ ಜಗತ್ತಿನಲ್ಲೇ ಎರಡನೆಯ ಸ್ಥಾನದಲ್ಲಿದೆ ಮತ್ತು ಈ ವಯಸ್ಸಾದವರೂ ಸಕ್ರಿಯವಾಗಿರುತ್ತಾರೆ. ಉಳಿದ ದೇಶಗಳಿಗಿಂತ ಹೆಚ್ಚು ಜನಸಾಂದ್ರತೆಯೂ ಅಲ್ಲಿದೆ.

ಇಟಲಿಯ ಜನರು ಮತ್ತು ಸರ್ಕಾರದ ಮೇಲಿರುವ ಆರೋಪವೆಂದರೆ, ಕೊರೊನಾ ಸೋಂಕು ಬಂದಿದೆ ಎಂದು ಗೊತ್ತಾದ ನಂತರವೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿಲ್ಲ. ಉತ್ತರ ಇಟಲಿಯ ಮಿಲಾನ್, ಲೊಂಬಾರ್ಡಿ ಮತ್ತು ವೆನಿಸ್‌ಗಳ ಲಾಕ್‌ಡೌನ್ ಮಾಡುವುದಕ್ಕೆ ಮುಂಚೆ ಸುದ್ದಿ ಲೀಕ್ ಆಗಿ, ಜನರು ಇಲ್ಲಿಂದ ಬೇರೆ ಕಡೆಗೆ ಹೊರಡಲು ಶುರು ಮಾಡಿದರು. ಅದೂ ಸಹಾ ಸೋಂಕು ಹರಡಲು ಕಾರಣವಾಯಿತು.

ಚೀನಾಗಿಂತ ಇಟಲಿಯಲ್ಲಿ ಇಷ್ಟೊಂದು ಹೆಚ್ಚಾಗಿದೆಯಲ್ಲಾ, ಚೀನಾದಲ್ಲಿ ಈಗ ಇಳಿಯಲು ಕಾರಣವೇನು?

ಚೀನಾವು ಒಂದು ರೀತಿಯ ಸರ್ವಾಧಿಕಾರಿ ದೇಶವಾಗಿದೆ. ಎರಡು ವಾರಗಳಲ್ಲಿ ಅವರು ಎರಡು ಸ್ಟೇಡಿಯಂಗಳಷ್ಟು ಗಾತ್ರದ ಆಸ್ಪತ್ರೆಗಳನ್ನು ಕಟ್ಟಿಬಿಟ್ಟರು. ಮೊದಲು ಅವರೂ ನಿರ್ಲಕ್ಷ್ಯ ಮಾಡಿದ್ದರು. ಅವರ ಹೊಸ ವರ್ಷದ ಸಂಭ್ರಮಕ್ಕೆ ಮುಂಚೆ ಲಾಕ್ ಮಾಡುವುದು ಬೇಡ ಎಂದುಕೊಂಡಿದ್ದರಂತೆ. ನಂತರ ತಮಗೆ ಜಾಗತಿಕವಾಗಿ ಕೆಟ್ಟ ಹೆಸರು ಬರುವುದು ಬೇಡ ಎಂದು ಲಾಕ್‌ಡೌನ್ ಮಾಡಿದರು. ಓಡಾಟ ನಿರ್ಬಂಧಿಸಿದರು. ಆ ಹೊತ್ತಿಗಾಗಲೇ ಡ್ಯಾಮೇಜ್ ಆಗಿಬಿಟ್ಟಿತ್ತು. ಶಂಕಿತರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದರು; ಪಾಸಿಟಿವ್ ಬಂದ ಎಲ್ಲರನ್ನೂ ಆಸ್ಪತ್ರೆಯೊಳಗೆ ಸೇರಿಸಿ ನಿರ್ಬಂಧ ಹಾಕಿದರು, ಮನೆಯಲ್ಲಲ್ಲ. (ಇಲ್ಲೂ ಸಹಾ ಅದನ್ನು ಮಾಡಲಾಗಿಲ್ಲ).

ವಯಸ್ಸಾದವರು ಮಾತ್ರ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ, ಸಾಯುತ್ತಾರೆ ಎಂಬುದು ನಿಜವೇ?

ಹೌದು ಬಹುಮಟ್ಟಿಗೆ ನಿಜ. ಆದರೆ ಈಚೆಗೆ ಕಡಿಮೆ ವಯಸ್ಸಿನವರೂ ತೊಂದರೆಗೊಳಗಾಗುತ್ತಿದ್ದಾರೆ. ಇದಕ್ಕೆ ಒಂದು ಕಾರಣವೆಂದರೆ ಅಷ್ಟು ತೊಂದರೆಯಿಲ್ಲದಿದ್ದರೂ ಭಯದ ಕಾರಣಕ್ಕೆ ಹೆಚ್ಚೆಚ್ಚು ಆಸ್ಪತ್ರೆಗೆ ಸೇರಿ, ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ಬದುಕುಳಿಯಬಲ್ಲವರೂ ತೊಂದರೆಗೆ ಸಿಲುಕುತ್ತಿದ್ದಾರೆ. ಉಳಿದಂತೆ ವಯಸ್ಸಾದವರು ಮತ್ತು ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರೇ ಹೆಚ್ಚು ಸಾಯುತ್ತಿದ್ದಾರೆ.

ಸೋಂಕಿಗೆ ಒಳಗಾದವರಲ್ಲಿ ಐದರಲ್ಲಿ ನಾಲ್ಕು ಭಾಗಕ್ಕೆ ತೊಂದರೆಯಾಗುವುದಿಲ್ಲ ಎಂಬ ಕುರಿತು ನಿಮ್ಮ ಅಭಿಪ್ರಾಯವೇನು?

ಇದೂ ಸಹಾ ಪ್ರಶ್ನೆಗೊಳಗಾಗುತ್ತಿದೆ. ಏಕೆಂದರೆ ನೀವು ಅಷ್ಟೊಂದು ಜನರನ್ನು ಪರೀಕ್ಷೆಗೇ ಒಳಪಡಿಸುತ್ತಿಲ್ಲ. ಹಾಗಾಗಿ ಸೋಂಕಿಗೆ ಒಳಗಾಗಿಯೂ ಖಾಯಿಲೆ ಹೆಚ್ಚಾಗುತ್ತಿಲ್ಲ ಅಥವಾ ಸಾಯುತ್ತಿಲ್ಲ ಎಂದು ಹೇಗೆ ಹೇಳುವುದು? ಅದಕ್ಕೆ ಆಧಾರಗಳಿಲ್ಲ. ಅದರ ಅರ್ಥ ಸೋಂಕಿಗೆ ಒಳಗಾದವರೆಲ್ಲರಿಗೂ ಸಮಸ್ಯೆ ಹೆಚ್ಚಾಗಿಬಿಡುತ್ತದೆ ಎಂತಲೂ ಅಲ್ಲ. ಅದರ ಬಗ್ಗೆ ಇನ್ನೂ ಸರಿಯಾದ ಡೇಟಾ ಬೇಕು.

ಈ ಗೊಂದಲಕ್ಕೆ ಕಾರಣವೇನು?

ಇದರಲ್ಲಿನ ಕ್ಲಿಷ್ಟತೆಯನ್ನು ಅರ್ಥ ಮಾಡಿಕೊಳ್ಳಬೇಕು. ವೈದ್ಯರು ಮತ್ತು ತಜ್ಞರು ಡೇಟಾ (ಅಂಕಿ ಅಂಶಗಳು) ಏನಿದೆ ಅದರ ಪ್ರಕಾರ ಮಾತಾಡಬೇಕು. ಆ ರೀತಿ ಮಾತಾಡಿದರೆ ಜನರು ಭಯಗ್ರಸ್ತರಾಗಿಬಿಡುತ್ತಾರೆ. ರಾಜಕಾರಣಿಗಳಿಗೆ ಅದನ್ನು ಮೀರಿದ ಆದ್ಯತೆಗಳಿರುತ್ತವೆ. ನೀವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮಾಡಬೇಕು, ಆದರೆ ಭಯಕ್ಕೊಳಗಾಗಬಾರದು. ಇವೆರಡರ ನಡುವೆ ಬ್ಯಾಲೆನ್ಸ್ ಮಾಡಬೇಕು. ಅದನ್ನು ಮೀರಿ ರಾಜಕಾರಣಿಗಳು ತುರ್ತಾಗಿ ತಾತ್ಕಾಲಿಕ ಆಸ್ಪತ್ರೆಗಳನ್ನು ಕಟ್ಟುವುದು, ಒಳ್ಳೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ತಕ್ಷಣದಲ್ಲಿ ಮಾಡಬಹುದಾದ ಇತರ ಸಂಗತಿಗಳೇನಿವೆ ಎಂದು ಪರಿಶೀಲಿಸುವುದು, ಲಾಕ್‌ಡೌನ್ ಆದಾಗ ಅದನ್ನು ತಡೆದುಕೊಳ್ಳಲಾಗದವರಿಗೆ ಅವರ ಅಗತ್ಯಗಳನ್ನು ಪೂರೈಸುವುದು ಇಂತಹವನ್ನು ಮಾಡಬೇಕು. ಆಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಭಯಭೀತರಾಗದಂತೆ ನೋಡುವುದು ಎರಡೂ ಸಾಧ್ಯವಾಗುತ್ತದೆ.

ಕಾಮನ್ ಫ್ಲೂಗೂ ಇದಕ್ಕೂ ಏನು ವ್ಯತ್ಯಾಸವಿದೆ?

ನೋಡಿ, ಆಸ್ಪತ್ರೆಗೆ ಸೇರುವುದು ಮತ್ತು ಸಾವಿನ ಪ್ರಮಾಣದಲ್ಲಿ ಕಾಮನ್ ಫ್ಲೂಗೂ ಈ ಕೊರೊನಾ ವೈರಸ್‌ಗೂ ಹೆಚ್ಚಿನ ವ್ಯತ್ಯಾಸ ಇಲ್ಲ. ಇದನ್ನು ಈಗಾಗಲೇ ತಜ್ಞರು ಪ್ರಮಾಣಿಸಿ ನೋಡಿ ಅಭಿಪ್ರಾಯ ಹೇಳಿದ್ದಾರೆ. ಆದರೆ ಸಮಸ್ಯೆ ಇರುವುದು ಎಲ್ಲಿ ಗೊತ್ತೇ? ಕೊರೊನಾ ವೈರಸ್ ಬೇಗನೇ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಫ್ಲೂ ಅಷ್ಟು ಬೇಗ ಅಷ್ಟೊಂದು ಜನರಿಗೆ ಹರಡುವುದಿಲ್ಲ. ಇದು ಮುಖ್ಯ ವ್ಯತ್ಯಾಸ. ಖಾಯಿಲೆ ಬಂದವರಲ್ಲಿ ಬಹಳ ಕಡಿಮೆ ಜನರು ಸಾಯುತ್ತಾರಾದರೂ, ಖಾಯಿಲೆ ಬರುವವರ ಸಂಖ್ಯೆಯೇ ಬಹಳ ಹೆಚ್ಚಾಗುವುದರಿಂದ ಒಟ್ಟಾರೆ ಸಾವಿನ ಸಂಖ್ಯೆ ಹೆಚ್ಚಿರುತ್ತದೆ.

ಸಾರ್ಸ್ ಮತ್ತು ಎಬೋಲಾಗಳ ವಿಚಾರದಲ್ಲಿ ಖಾಯಿಲೆ ಬಂದವರಲ್ಲಿ ಸಿಕ್ಕಾಪಟ್ಟೆ ಜನರು ಸಾಯುತ್ತಿದ್ದರು. ಆ ಖಾಯಿಲೆಗಳು ಹೆಚ್ಚೆಚ್ಚು ಜನರಿಗೆ ಹರಡಲೂ ಇಲ್ಲ. ರೋಗಿಗಳು ಸಾಯುತ್ತಿದ್ದುದರಿಂದಲೂ ಜೊತೆಗೆ ಆ ವೈರಸ್‌ನ ಹರಡುವಿಕೆಯ ಪ್ರಮಾಣ ಕಡಿಮೆಯಿದ್ದುದರಿಂದಲೂ ಒಟ್ಟಾರೆ ಜನಸಂಖ್ಯೆಯಲ್ಲಿ ಕಡಿಮೆ ಜನರು ಸಾಯುತ್ತಿದ್ದರು.

ಹಾಗಾದರೆ ಈಗ ಏನು ಮಾಡಬೇಕು?

ಎಷ್ಟರ ಮಟ್ಟಿಗೆ ಲಾಕ್‌ಡೌನ್ ಮಾಡಲು ಸಾಧ್ಯ ಎಂಬುದನ್ನು ಸರ್ಕಾರಗಳು ತೀರ್ಮಾನ ತೆಗೆದುಕೊಳ್ಳಬೇಕು. ಆ ರೀತಿ ಮಾಡಿದಾಗ ಜನರು ಒತ್ತಡಕ್ಕೊಳಗಾಗಿ ಹೊರಗೆ ಬಂದು ಬಿಡದಂತೆ ಮಾಡಲು ಅವರ, ವಿಶೇಷವಾಗಿ ಬಡಜನರ ಅಗತ್ಯಗಳನ್ನು ಪೂರೈಸಬೇಕು. ಇದರ ಸಾಧ್ಯಾಸಾಧ್ಯತೆಗಳು ಎಷ್ಟು ಎನ್ನುವುದನ್ನು ಆಯಾ ದೇಶಗಳು ನೋಡಿ ತೀರ್ಮಾನಿಸಬೇಕು. ಉಳಿದಂತೆ ಈಗಾಗಲೇ ಹೇಳಿರುವಂತೆ ಸಾಧ್ಯವಾದಷ್ಟೂ ತುರ್ತಾಗಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಜನರು ಸೋಂಕು ಹರಡದಂತೆ ಏನು ಮಾಡಬೇಕೆಂಬುದರ ಕುರಿತು ಸಾಕಷ್ಟು ಹೇಳಲಾಗಿದೆ. ಅವನ್ನು ಪಾಲಿಸಿದರೆ ಒಳ್ಳೆಯದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...