Homeಮುಖಪುಟಇಟಲಿಯಲ್ಲೇಕೆ ಹಾಗಾಯಿತು? : ಯೂರೋಪ್ ವೈದ್ಯರೊಬ್ಬರ ಸಂದರ್ಶನ

ಇಟಲಿಯಲ್ಲೇಕೆ ಹಾಗಾಯಿತು? : ಯೂರೋಪ್ ವೈದ್ಯರೊಬ್ಬರ ಸಂದರ್ಶನ

ಇಟಲಿಯ ಜನರು ಮತ್ತು ಸರ್ಕಾರದ ಮೇಲಿರುವ ಆರೋಪವೆಂದರೆ, ಕೊರೊನಾ ಸೋಂಕು ಬಂದಿದೆ ಎಂದು ಗೊತ್ತಾದ ನಂತರವೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿಲ್ಲ.

- Advertisement -
- Advertisement -

ನಮ್ಮ ಪತ್ರಿಕೆಯ ಬಳಗದಲ್ಲಿನ ವೈದ್ಯರೊಬ್ಬರು ಇಂಗ್ಲೆಂಡಿನಲ್ಲಿದ್ದು, ಸ್ವತಃ ಕೊರೊನಾ ಶಂಕಿತರ ಆರೈಕೆಯಲ್ಲಿದ್ದಾರೆ ಮತ್ತು ಇಟಲಿಯ ಸಮಸ್ಯೆಯ ಕುರಿತು ಹತ್ತಿರದ ತಿಳುವಳಿಕೆಯನ್ನು ಹೊಂದಿದ್ದಾರೆ. ಈ ಸದ್ಯ ಪ್ರಪಂಚದಲ್ಲಿ ಅತೀ ಹೆಚ್ಚು ಸೋಂಕು ಮತ್ತು ಸಾವುಗಳು ಸಂಭವಿಸುತ್ತಿರುವುದು ಇಟಲಿಯಲ್ಲಾದ್ದರಿಂದ ಅವರನ್ನು ಮಾತಾಡಿಸಲಾಯಿತು. ಅವರ ಜೊತೆಗಿನ ಚರ್ಚೆಯ ಸಂಗತಿಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ. ಸದರಿ ವೈದ್ಯರು ಅವರ ಹೆಸರನ್ನು ಉಲ್ಲೇಖಿಸಿದಿರಲು ಸೂಚಿಸಿದ್ದಾರೆ.

ಇಟಲಿಯಲ್ಲಿ ಕೊರೊನಾ ಸೋಂಕು ಮತ್ತು ಸಾವುಗಳು ಇಷ್ಟೊಂದು ಏಕೆ ಹೆಚ್ಚಾಗಿದೆ?

ಬಹಳ ನಿರ್ದಿಷ್ಟವಾಗಿ ಹೀಗೆಯೇ ಎಂದು ಹೇಳುವುದು ಸಾಧ್ಯವಿಲ್ಲ. ಇನ್ನೂ ಪೂರ್ಣ ಗೊತ್ತಾಗಿಲ್ಲ ಎಂತಲೇ ಹೇಳಬಹುದು. ಆದರೆ, ಈ ಸಂಬಂಧ ಇರುವ ಮರ‍್ನಾಲ್ಕು ಥಿಯರಿಗಳನ್ನು ನಿಮಗೆ ಹೇಳಬಹುದು ಅಷ್ಟೇ.

ಮಿಲಾನ್ ಸುತ್ತಮುತ್ತ ಹೆಚ್ಚಿದೆ (ಅದೇ ಇಟಲಿಯ ಕೊರೊನಾದ ಕೇಂದ್ರ – ಎಪಿಸೆಂಟರ್). ಅದು ಇಟಲಿಯ ಶ್ರೀಮಂತ ಭಾಗ. ಆ ಭಾಗವು ಪ್ರಪಂಚದ ಬೇರೆ ಭಾಗಗಳ ಜೊತೆಗೆ ಹತ್ತಿರದ ಸಂಬಂಧ ಹೊಂದಿದೆ ಮತ್ತು ಅಲ್ಲಿಂದ ಅಕ್ಕಪಕ್ಕದ ಭಾಗಗಳಿಗೂ ಪ್ರತಿನಿತ್ಯ ದೊಡ್ಡ ಪ್ರಮಾಣದಲ್ಲಿ ಜನರು ಓಡಾಡುತ್ತಾರೆ. ಚೀನಾದ ಜೊತೆಗೂ ಈ ಭಾಗಕ್ಕೆ ಸಂಬಂಧವಿದೆ. (2018ರಲ್ಲಿ ಚೀನಾ ಮತ್ತು ಮಿಲಾನ್ ನಗರದ ನಡುವೆ ವಿಮಾನ ಪ್ರಯಾಣ ಮಾಡಿದವರ ಸಂಖ್ಯೆ 8,97,000 ಆಗಿತ್ತು. ವಾರದಲ್ಲಿ 24 ವಿಮಾನಗಳು ಈ ಮಾರ್ಗದಲ್ಲಿ ಹಾರಾಡಿದ್ದು ಸಾಲದೆಂದು ಹೊಸ ಒಪ್ಪಂದಗಳನ್ನು ಮಾಡಿಕೊಂಡು ಈ ಸಂಖ್ಯೆ ಇನ್ನಷ್ಟು ಹೆಚ್ಚಿತು.- ಸಂದರ್ಶಕ)

ಇಟಲಿಯು ಮಿಕ್ಕ ಯೂರೋಪ್ ದೇಶಗಳಿಗಿಂತ ಭಿನ್ನವಾಗಿರುವ ಇನ್ನೊಂದು ಅಂಶವೂ ಇದೆ. ಅಲ್ಲಿ ಜನರು ಪರಸ್ಪರ ಬೆರೆಯುವಿಕೆಯೂ ಹೆಚ್ಚು. ಕೌಟುಂಬಿಕ ಸಂಬಂಧಗಳೂ ಹತ್ತಿರದವು. ಅಂದರೆ ಇಂಗ್ಲೆಂಡ್ ಅಥವಾ ಅಮೆರಿಕಾದಂತಲ್ಲದೇ, ತಂದೆ-ತಾಯಿ, ಅಜ್ಜ-ಅಜ್ಜಿಯರ ಜೊತೆಗೆ ಮಕ್ಕಳು ಸಂಬಂಧ ಇಟ್ಟುಕೊಂಡಿರುತ್ತಾರೆ; ಪ್ರತಿದಿನವೂ ಭೇಟಿ ಮಾಡುವಷ್ಟು.

ಇನ್ನೊಂದು ಮುಖ್ಯವಾದ ಸಂಗತಿಯೇನೆಂದರೆ ವಯಸ್ಸಾದವರು (ಅದರಲ್ಲೂ 80 ವರ್ಷಕ್ಕೂ ಹೆಚ್ಚು ವಯಸ್ಸಿನವರು) ಅತೀ ಹೆಚ್ಚು. ಇದರಲ್ಲಿ ಜಗತ್ತಿನಲ್ಲೇ ಎರಡನೆಯ ಸ್ಥಾನದಲ್ಲಿದೆ ಮತ್ತು ಈ ವಯಸ್ಸಾದವರೂ ಸಕ್ರಿಯವಾಗಿರುತ್ತಾರೆ. ಉಳಿದ ದೇಶಗಳಿಗಿಂತ ಹೆಚ್ಚು ಜನಸಾಂದ್ರತೆಯೂ ಅಲ್ಲಿದೆ.

ಇಟಲಿಯ ಜನರು ಮತ್ತು ಸರ್ಕಾರದ ಮೇಲಿರುವ ಆರೋಪವೆಂದರೆ, ಕೊರೊನಾ ಸೋಂಕು ಬಂದಿದೆ ಎಂದು ಗೊತ್ತಾದ ನಂತರವೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿಲ್ಲ. ಉತ್ತರ ಇಟಲಿಯ ಮಿಲಾನ್, ಲೊಂಬಾರ್ಡಿ ಮತ್ತು ವೆನಿಸ್‌ಗಳ ಲಾಕ್‌ಡೌನ್ ಮಾಡುವುದಕ್ಕೆ ಮುಂಚೆ ಸುದ್ದಿ ಲೀಕ್ ಆಗಿ, ಜನರು ಇಲ್ಲಿಂದ ಬೇರೆ ಕಡೆಗೆ ಹೊರಡಲು ಶುರು ಮಾಡಿದರು. ಅದೂ ಸಹಾ ಸೋಂಕು ಹರಡಲು ಕಾರಣವಾಯಿತು.

ಚೀನಾಗಿಂತ ಇಟಲಿಯಲ್ಲಿ ಇಷ್ಟೊಂದು ಹೆಚ್ಚಾಗಿದೆಯಲ್ಲಾ, ಚೀನಾದಲ್ಲಿ ಈಗ ಇಳಿಯಲು ಕಾರಣವೇನು?

ಚೀನಾವು ಒಂದು ರೀತಿಯ ಸರ್ವಾಧಿಕಾರಿ ದೇಶವಾಗಿದೆ. ಎರಡು ವಾರಗಳಲ್ಲಿ ಅವರು ಎರಡು ಸ್ಟೇಡಿಯಂಗಳಷ್ಟು ಗಾತ್ರದ ಆಸ್ಪತ್ರೆಗಳನ್ನು ಕಟ್ಟಿಬಿಟ್ಟರು. ಮೊದಲು ಅವರೂ ನಿರ್ಲಕ್ಷ್ಯ ಮಾಡಿದ್ದರು. ಅವರ ಹೊಸ ವರ್ಷದ ಸಂಭ್ರಮಕ್ಕೆ ಮುಂಚೆ ಲಾಕ್ ಮಾಡುವುದು ಬೇಡ ಎಂದುಕೊಂಡಿದ್ದರಂತೆ. ನಂತರ ತಮಗೆ ಜಾಗತಿಕವಾಗಿ ಕೆಟ್ಟ ಹೆಸರು ಬರುವುದು ಬೇಡ ಎಂದು ಲಾಕ್‌ಡೌನ್ ಮಾಡಿದರು. ಓಡಾಟ ನಿರ್ಬಂಧಿಸಿದರು. ಆ ಹೊತ್ತಿಗಾಗಲೇ ಡ್ಯಾಮೇಜ್ ಆಗಿಬಿಟ್ಟಿತ್ತು. ಶಂಕಿತರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದರು; ಪಾಸಿಟಿವ್ ಬಂದ ಎಲ್ಲರನ್ನೂ ಆಸ್ಪತ್ರೆಯೊಳಗೆ ಸೇರಿಸಿ ನಿರ್ಬಂಧ ಹಾಕಿದರು, ಮನೆಯಲ್ಲಲ್ಲ. (ಇಲ್ಲೂ ಸಹಾ ಅದನ್ನು ಮಾಡಲಾಗಿಲ್ಲ).

ವಯಸ್ಸಾದವರು ಮಾತ್ರ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ, ಸಾಯುತ್ತಾರೆ ಎಂಬುದು ನಿಜವೇ?

ಹೌದು ಬಹುಮಟ್ಟಿಗೆ ನಿಜ. ಆದರೆ ಈಚೆಗೆ ಕಡಿಮೆ ವಯಸ್ಸಿನವರೂ ತೊಂದರೆಗೊಳಗಾಗುತ್ತಿದ್ದಾರೆ. ಇದಕ್ಕೆ ಒಂದು ಕಾರಣವೆಂದರೆ ಅಷ್ಟು ತೊಂದರೆಯಿಲ್ಲದಿದ್ದರೂ ಭಯದ ಕಾರಣಕ್ಕೆ ಹೆಚ್ಚೆಚ್ಚು ಆಸ್ಪತ್ರೆಗೆ ಸೇರಿ, ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ಬದುಕುಳಿಯಬಲ್ಲವರೂ ತೊಂದರೆಗೆ ಸಿಲುಕುತ್ತಿದ್ದಾರೆ. ಉಳಿದಂತೆ ವಯಸ್ಸಾದವರು ಮತ್ತು ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರೇ ಹೆಚ್ಚು ಸಾಯುತ್ತಿದ್ದಾರೆ.

ಸೋಂಕಿಗೆ ಒಳಗಾದವರಲ್ಲಿ ಐದರಲ್ಲಿ ನಾಲ್ಕು ಭಾಗಕ್ಕೆ ತೊಂದರೆಯಾಗುವುದಿಲ್ಲ ಎಂಬ ಕುರಿತು ನಿಮ್ಮ ಅಭಿಪ್ರಾಯವೇನು?

ಇದೂ ಸಹಾ ಪ್ರಶ್ನೆಗೊಳಗಾಗುತ್ತಿದೆ. ಏಕೆಂದರೆ ನೀವು ಅಷ್ಟೊಂದು ಜನರನ್ನು ಪರೀಕ್ಷೆಗೇ ಒಳಪಡಿಸುತ್ತಿಲ್ಲ. ಹಾಗಾಗಿ ಸೋಂಕಿಗೆ ಒಳಗಾಗಿಯೂ ಖಾಯಿಲೆ ಹೆಚ್ಚಾಗುತ್ತಿಲ್ಲ ಅಥವಾ ಸಾಯುತ್ತಿಲ್ಲ ಎಂದು ಹೇಗೆ ಹೇಳುವುದು? ಅದಕ್ಕೆ ಆಧಾರಗಳಿಲ್ಲ. ಅದರ ಅರ್ಥ ಸೋಂಕಿಗೆ ಒಳಗಾದವರೆಲ್ಲರಿಗೂ ಸಮಸ್ಯೆ ಹೆಚ್ಚಾಗಿಬಿಡುತ್ತದೆ ಎಂತಲೂ ಅಲ್ಲ. ಅದರ ಬಗ್ಗೆ ಇನ್ನೂ ಸರಿಯಾದ ಡೇಟಾ ಬೇಕು.

ಈ ಗೊಂದಲಕ್ಕೆ ಕಾರಣವೇನು?

ಇದರಲ್ಲಿನ ಕ್ಲಿಷ್ಟತೆಯನ್ನು ಅರ್ಥ ಮಾಡಿಕೊಳ್ಳಬೇಕು. ವೈದ್ಯರು ಮತ್ತು ತಜ್ಞರು ಡೇಟಾ (ಅಂಕಿ ಅಂಶಗಳು) ಏನಿದೆ ಅದರ ಪ್ರಕಾರ ಮಾತಾಡಬೇಕು. ಆ ರೀತಿ ಮಾತಾಡಿದರೆ ಜನರು ಭಯಗ್ರಸ್ತರಾಗಿಬಿಡುತ್ತಾರೆ. ರಾಜಕಾರಣಿಗಳಿಗೆ ಅದನ್ನು ಮೀರಿದ ಆದ್ಯತೆಗಳಿರುತ್ತವೆ. ನೀವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮಾಡಬೇಕು, ಆದರೆ ಭಯಕ್ಕೊಳಗಾಗಬಾರದು. ಇವೆರಡರ ನಡುವೆ ಬ್ಯಾಲೆನ್ಸ್ ಮಾಡಬೇಕು. ಅದನ್ನು ಮೀರಿ ರಾಜಕಾರಣಿಗಳು ತುರ್ತಾಗಿ ತಾತ್ಕಾಲಿಕ ಆಸ್ಪತ್ರೆಗಳನ್ನು ಕಟ್ಟುವುದು, ಒಳ್ಳೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ತಕ್ಷಣದಲ್ಲಿ ಮಾಡಬಹುದಾದ ಇತರ ಸಂಗತಿಗಳೇನಿವೆ ಎಂದು ಪರಿಶೀಲಿಸುವುದು, ಲಾಕ್‌ಡೌನ್ ಆದಾಗ ಅದನ್ನು ತಡೆದುಕೊಳ್ಳಲಾಗದವರಿಗೆ ಅವರ ಅಗತ್ಯಗಳನ್ನು ಪೂರೈಸುವುದು ಇಂತಹವನ್ನು ಮಾಡಬೇಕು. ಆಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಭಯಭೀತರಾಗದಂತೆ ನೋಡುವುದು ಎರಡೂ ಸಾಧ್ಯವಾಗುತ್ತದೆ.

ಕಾಮನ್ ಫ್ಲೂಗೂ ಇದಕ್ಕೂ ಏನು ವ್ಯತ್ಯಾಸವಿದೆ?

ನೋಡಿ, ಆಸ್ಪತ್ರೆಗೆ ಸೇರುವುದು ಮತ್ತು ಸಾವಿನ ಪ್ರಮಾಣದಲ್ಲಿ ಕಾಮನ್ ಫ್ಲೂಗೂ ಈ ಕೊರೊನಾ ವೈರಸ್‌ಗೂ ಹೆಚ್ಚಿನ ವ್ಯತ್ಯಾಸ ಇಲ್ಲ. ಇದನ್ನು ಈಗಾಗಲೇ ತಜ್ಞರು ಪ್ರಮಾಣಿಸಿ ನೋಡಿ ಅಭಿಪ್ರಾಯ ಹೇಳಿದ್ದಾರೆ. ಆದರೆ ಸಮಸ್ಯೆ ಇರುವುದು ಎಲ್ಲಿ ಗೊತ್ತೇ? ಕೊರೊನಾ ವೈರಸ್ ಬೇಗನೇ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಫ್ಲೂ ಅಷ್ಟು ಬೇಗ ಅಷ್ಟೊಂದು ಜನರಿಗೆ ಹರಡುವುದಿಲ್ಲ. ಇದು ಮುಖ್ಯ ವ್ಯತ್ಯಾಸ. ಖಾಯಿಲೆ ಬಂದವರಲ್ಲಿ ಬಹಳ ಕಡಿಮೆ ಜನರು ಸಾಯುತ್ತಾರಾದರೂ, ಖಾಯಿಲೆ ಬರುವವರ ಸಂಖ್ಯೆಯೇ ಬಹಳ ಹೆಚ್ಚಾಗುವುದರಿಂದ ಒಟ್ಟಾರೆ ಸಾವಿನ ಸಂಖ್ಯೆ ಹೆಚ್ಚಿರುತ್ತದೆ.

ಸಾರ್ಸ್ ಮತ್ತು ಎಬೋಲಾಗಳ ವಿಚಾರದಲ್ಲಿ ಖಾಯಿಲೆ ಬಂದವರಲ್ಲಿ ಸಿಕ್ಕಾಪಟ್ಟೆ ಜನರು ಸಾಯುತ್ತಿದ್ದರು. ಆ ಖಾಯಿಲೆಗಳು ಹೆಚ್ಚೆಚ್ಚು ಜನರಿಗೆ ಹರಡಲೂ ಇಲ್ಲ. ರೋಗಿಗಳು ಸಾಯುತ್ತಿದ್ದುದರಿಂದಲೂ ಜೊತೆಗೆ ಆ ವೈರಸ್‌ನ ಹರಡುವಿಕೆಯ ಪ್ರಮಾಣ ಕಡಿಮೆಯಿದ್ದುದರಿಂದಲೂ ಒಟ್ಟಾರೆ ಜನಸಂಖ್ಯೆಯಲ್ಲಿ ಕಡಿಮೆ ಜನರು ಸಾಯುತ್ತಿದ್ದರು.

ಹಾಗಾದರೆ ಈಗ ಏನು ಮಾಡಬೇಕು?

ಎಷ್ಟರ ಮಟ್ಟಿಗೆ ಲಾಕ್‌ಡೌನ್ ಮಾಡಲು ಸಾಧ್ಯ ಎಂಬುದನ್ನು ಸರ್ಕಾರಗಳು ತೀರ್ಮಾನ ತೆಗೆದುಕೊಳ್ಳಬೇಕು. ಆ ರೀತಿ ಮಾಡಿದಾಗ ಜನರು ಒತ್ತಡಕ್ಕೊಳಗಾಗಿ ಹೊರಗೆ ಬಂದು ಬಿಡದಂತೆ ಮಾಡಲು ಅವರ, ವಿಶೇಷವಾಗಿ ಬಡಜನರ ಅಗತ್ಯಗಳನ್ನು ಪೂರೈಸಬೇಕು. ಇದರ ಸಾಧ್ಯಾಸಾಧ್ಯತೆಗಳು ಎಷ್ಟು ಎನ್ನುವುದನ್ನು ಆಯಾ ದೇಶಗಳು ನೋಡಿ ತೀರ್ಮಾನಿಸಬೇಕು. ಉಳಿದಂತೆ ಈಗಾಗಲೇ ಹೇಳಿರುವಂತೆ ಸಾಧ್ಯವಾದಷ್ಟೂ ತುರ್ತಾಗಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಜನರು ಸೋಂಕು ಹರಡದಂತೆ ಏನು ಮಾಡಬೇಕೆಂಬುದರ ಕುರಿತು ಸಾಕಷ್ಟು ಹೇಳಲಾಗಿದೆ. ಅವನ್ನು ಪಾಲಿಸಿದರೆ ಒಳ್ಳೆಯದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...