Homeದಲಿತ್ ಫೈಲ್ಸ್ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ 'ಸಾರ್ವಜನಿಕ ವೀಕ್ಷಣೆ' ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

- Advertisement -
- Advertisement -

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುವುದಾಗಿ ಸುಪ್ರೀಂ ಕೋರ್ಟ್ ಮೇ 11 ರಂದು ತೀರ್ಪು ನೀಡಿದೆ ಎಂದು ವರದಿಯಾಗಿದೆ.

ನ್ಯಾಯಮೂರ್ತಿಗಳಾದ ಎನ್.ವಿ. ಅಂಜಾರಿಯಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಗುಂಜನ್ ಅಲಿಯಾಸ್ ಗಿರಿಜಾ ಕುಮಾರಿ ಮತ್ತು ಇತರರು ವಿರುದ್ಧ ರಾಜ್ಯ ಸರ್ಕಾರ (ಎನ್‌ಸಿಟಿ ದೆಹಲಿ) ಪ್ರಕರಣದಲ್ಲಿ ನೀಡಿದ ಈ ತೀರ್ಪು, ಸಾರ್ವಜನಿಕ ವಲಯದಲ್ಲಿ ಚರ್ಚಾ ವಿಷಯವಾಗಿದೆ ಮತ್ತು ಬಹುಜನ ಸಮುದಾಯವನ್ನು ಆತಂಕಕ್ಕೆ ತಳ್ಳಿದೆ.

ದೆಹಲಿಯ ರಮೇಶ್ ನಗರ ಪ್ರದೇಶದಲ್ಲಿ ಕುಟುಂಬದ ಸದಸ್ಯರ ನಡುವೆ ನಡೆದ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಪರಿಶಿಷ್ಟ ಜಾತಿಗೆ ಸೇರಿದ ದೂರುದಾರರು, ಜನವರಿ 28, 2021ರಂದು ಪ್ರಬಲ ಜಾತಿಗೆ ಸೇರಿದ ಮೊದಲ ಆರೋಪಿ ಗುಂಜನ್ ಅಲಿಯಾಸ್ ಗಿರಿಜಾ ಕುಮಾರಿ ತಮ್ಮನ್ನು ಮತ್ತು ತಮ್ಮ ಪತ್ನಿಯನ್ನು ‘ಚುರಾ’, ‘ಚಮಾರ್’ ಮತ್ತು ‘ಹರಿಜನ್’ ಮುಂತಾದ ಜಾತಿ ನಿಂದನೆ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು. ಹಾಗೆಯೇ ಇತರ ಆರೋಪಿಗಳು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದರು. 

ಈ ಸಂಬಂಧ ಕೀರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 42/2021 ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯವು ಮುಖ್ಯ ಆರೋಪಿಯ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3(1)(r) ಮತ್ತು 3(1)(s) ಅಡಿಯಲ್ಲಿ ಹಾಗೂ ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 506 ರೊಂದಿಗೆ ಓದಿಕೊಳ್ಳಲಾದ ಸೆಕ್ಷನ್ 34 ರ ಅಡಿಯಲ್ಲಿ ದೋಷಾರೋಪಣೆ ಪಟ್ಟಿ ಸಿದ್ಧಪಡಿಸಿತ್ತು. ದೆಹಲಿ ಹೈಕೋರ್ಟ್ ಕೂಡ ಈ ಆರೋಪಗಳನ್ನು ಎತ್ತಿಹಿಡಿದಿತ್ತು. ಆ ನಂತರ ಈ ಪ್ರಕರಣವು ಸುಪ್ರೀಂ ಕೋರ್ಟ್‌ಗೆ ತಲುಪಿತ್ತು.

en.themooknayak.com ವರದಿಯ ಪ್ರಕಾರ, ಸುಪ್ರೀಂ ಕೋರ್ಟ್ ಈ ಪ್ರಕರಣದ ಎಫ್‌ಐಆರ್ ಮತ್ತು ಚಾರ್ಜ್‌ಶೀಟ್‌ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಜಾತಿ ನಿಂದನೆಯು ‘ಸಾರ್ವಜನಿಕರು ನೋಡುವ ಜಾಗದಲ್ಲಿ’ ನಡೆದಿರಬೇಕು ಎಂಬ ಅಗತ್ಯ ಶಾಸನಬದ್ಧ ಅಂಶ ಎಫ್‌ಐಆರ್‌ನಲ್ಲಿ ಇಲ್ಲ. ಘಟನೆ ನಡೆದ ಜಾಗ ಸ್ಪಷ್ಟವಾಗಿ ಒಂದು ಖಾಸಗಿ ವಾಸದ ಮನೆಯಾಗಿದೆ. ಎಫ್‌ಐಆರ್‌ನ ಹಲವು ಕಡೆಗಳಲ್ಲಿ ಘಟನೆ ನಡೆದ ಸ್ಥಳ ಎಂದು ಮನೆಯ ವಿಳಾಸವನ್ನು ಬರೆಯಲಾಗಿದೆ. ಅಲ್ಲದೆ, ಘಟನೆ ನಡೆದಾಗ ಅಲ್ಲಿ ಯಾವುದೇ ಹೊರಗಿನ ಸಾರ್ವಜನಿಕರು ಅಥವಾ ಸ್ವತಂತ್ರ ಸಾಕ್ಷಿಗಳು ಇರಲಿಲ್ಲ ಎಂದು ಹೇಳಿದೆ.

ಈ ಪ್ರಕರಣದಲ್ಲಿ ತನ್ನದೇ ಹಿಂದಿನ ಪ್ರಮುಖ ತೀರ್ಪುಗಳಾದ ಸ್ವರಣ್ ಸಿಂಗ್ (2008), ಹಿತೇಶ್ ವರ್ಮಾ (2020) ಮತ್ತು ಕರುಪ್ಪುದಯಾರ್ (2025) ಪ್ರಕರಣಗಳನ್ನು ಆಧರಿಸಿ ಸುಪ್ರೀಂ ಕೋರ್ಟ್ ತನ್ನ ಕಾನೂನು ನಿಲುವನ್ನು ಸ್ಪಷ್ಟಪಡಿಸಿದೆ. ನ್ಯಾಯಾಲಯದ ಪ್ರಕಾರ, ಆರೋಪಿಯು ಸಂತ್ರಸ್ತನಿಗೆ ಮಾಡಿದ ಜಾತಿ ನಿಂದನೆಯನ್ನು ಸಾರ್ವಜನಿಕರು ನೋಡಲು ಅಥವಾ ಕೇಳಲು ಸಾಧ್ಯವಿದ್ದಾಗ ಮಾತ್ರ ಅದನ್ನು ‘ಸಾರ್ವಜನಿಕ ವೀಕ್ಷಣೆ’ ಎಂದು ಪರಿಗಣಿಸಬಹುದು. ಒಂದು ವೇಳೆ ಈ ಘಟನೆಯು ಸಾರ್ವಜನಿಕರು ಇಲ್ಲದ ನಾಲ್ಕು ಗೋಡೆಗಳ ಮಧ್ಯೆ ನಡೆದರೆ, ಕಾನೂನಿನ ಈ ಮುಖ್ಯ ನಿಯಮವು ಅನ್ವಯಿಸುವುದಿಲ್ಲ. ಇದಲ್ಲದೆ, ಸಂತ್ರಸ್ತರಲ್ಲಿ ‘ಭಯ ಹುಟ್ಟಿಸುವ ಉದ್ದೇಶ’ ಇರಲಿಲ್ಲ ಎಂಬ ಕಾರಣಕ್ಕೆ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿದ್ದ ಆರೋಪ ಮತ್ತು ಸೆಕ್ಷನ್ 34 (ಸಮಾನ ಉದ್ದೇಶ) ಅಡಿಯಲ್ಲಿದ್ದ ಆರೋಪಗಳೂ ಸಹ ಇಲ್ಲಿ ಸಾಬೀತಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

2018ರಲ್ಲಿ ಸುಪ್ರೀಂ ಕೋರ್ಟ್ ಇದೇ ಕಾಯ್ದೆಯಡಿಯಲ್ಲಿದ್ದ ಬಂಧನ ನಿಯಮಗಳನ್ನು ಸಡಿಲಗೊಳಿಸಿತ್ತು. ಇದು ದೇಶದಾದ್ಯಂತ ತೀವ್ರ ಪ್ರತಿಭಟನೆಗಳು, ‘ಭಾರತ್ ಬಂದ್’ ಮತ್ತು ಹಲವು ಪ್ರತಿಭಟನಾಕಾರರ ಸಾವಿಗೆ ಕಾರಣವಾಗಿತ್ತು. ಆ ನಂತರ, ಸಂಸತ್ತು ಮಧ್ಯಪ್ರವೇಶಿಸಿ ಕಾನೂನು ತಿದ್ದುಪಡಿಯ ಮೂಲಕ ಕಾಯ್ದೆಯ ಮೂಲ ಕಠಿಣ ನಿಯಮಗಳನ್ನು ಯಥಾಸ್ಥಿತಿಗೆ ತಂದಿತ್ತು. 

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಕ್ಷದ ಪಾಲಿಟ್‌ ಬ್ಯೂರೋ ಈ ತೀರ್ಪಿನ ವಿರುದ್ಧ ತೀವ್ರ ಕಳವಳ ವ್ಯಕ್ತಪಡಿಸಿ ಪ್ರಬಲ ಹೇಳಿಕೆ ನೀಡಿದೆ. ಎಫ್‌ಐಆರ್ ಮತ್ತು ಚಾರ್ಜ್‌ಶೀಟ್‌ ಅನ್ನು ರದ್ದುಗೊಳಿಸುವಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಕಿರಿದಾದ ಮತ್ತು ಕೇವಲ ತಾಂತ್ರಿಕ ಕಾನೂನಾತ್ಮಕ ದೃಷ್ಟಿಕೋನವನ್ನು ಬಳಸಿದೆ ಎಂದು ಪಕ್ಷವು ಟೀಕಿಸಿದೆ. ದೇಶದ ಬಹುತೇಕ ಭಾಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳು ದಿನೇ ದಿನೇ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಈ ತೀರ್ಪು ಬಂದಿರುವುದು ಆತಂಕಕಾರಿ ಎಂದು ಹೇಳಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಈ ಸಮುದಾಯಗಳ ಹಕ್ಕುಗಳಿಗೆ ಧಕ್ಕೆ ತರುತ್ತಿರುವ ಸುಪ್ರೀಂ ಕೋರ್ಟ್‌ನ ಸರಣಿ ತೀರ್ಪುಗಳಲ್ಲಿ ಇದು ಅತ್ಯಂತ ಹೊಸದಾಗಿದೆ ಎಂದು ಸಿಪಿಐ(ಎಂ) ಕಳವಳ ವ್ಯಕ್ತಪಡಿಸಿದೆ.

ಪಕ್ಷವು ಮುಂದುವರಿದು ಈ ರೀತಿ ಎಚ್ಚರಿಸಿದೆ: “ಅಪರಾಧಿಗಳು ತಮಗೆ ಕಾನೂನಿನಿಂದ ವಿನಾಯಿತಿ ಸಿಕ್ಕಿದೆ ಎಂದು ನಂಬುವಂತಾದರೆ, ಅದು ಮನೆಗಳು, ಕಚೇರಿಗಳು, ಶಾಲೆಗಳು, ಕಾಲೇಜುಗಳು ಮತ್ತು ಇಂತಹ ಇತರ ಸಾರ್ವಜನಿಕ ಸ್ಥಳಗಳ ಖಾಸಗಿತನದಲ್ಲಿ ಎಸ್‌ಸಿ ಮತ್ತು ಎಸ್‌ಟಿ ವ್ಯಕ್ತಿಗಳ ಮೇಲಿನ ಅವಮಾನ ಮತ್ತು ದೌರ್ಜನ್ಯದ ಘಟನೆಗಳನ್ನು ಹೆಚ್ಚಿಸಬಹುದು. ಇದು ಅತ್ಯಂತ ದುರಂತದ ಸಂಗತಿಯಾಗಲಿದೆ.” ಇದರೊಂದಿಗೆ, ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ, ಈ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.

ಮತ್ತೊಂದೆಡೆ, ಸಿಪಿಐ ಪಕ್ಷವೂ ಸಹ ಈ ಆದೇಶವನ್ನು ಖಂಡಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರು ತಮ್ಮ ಹೇಳಿಕೆಯಲ್ಲಿ, “ಸಾರ್ವಜನಿಕ ವೀಕ್ಷಣೆಯಲ್ಲಿ ನಡೆಯುವ ಜಾತಿ ನಿಂದನೆಗಳಿಗೆ ಮಾತ್ರ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ಸೀಮಿತಗೊಳಿಸಿರುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ. ಇಂತಹ ವ್ಯಾಖ್ಯಾನವು ಭಾರತದಲ್ಲಿನ ಜಾತಿ ದೌರ್ಜನ್ಯಗಳ ನೈಜ ಪರಿಸ್ಥಿತಿಯನ್ನು ಕಡೆಗಣಿಸುವ ಅಪಾಯವನ್ನು ತಂದೊಡ್ಡುತ್ತದೆ. ಜಾತಿ ತಾರತಮ್ಯ ಮತ್ತು ಹಿಂಸಾಚಾರಗಳು ಕೇವಲ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ನಡೆಯುವುದಿಲ್ಲ. ಆಳವಾಗಿ ಬೇರೂರಿರುವ ಜಾತಿ ಶ್ರೇಣೀಕೃತ ವ್ಯವಸ್ಥೆಯಿಂದಾಗಿ ಮೌಖಿಕ ಅವಮಾನ, ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ ಆಚರಣೆಗಳು ಮತ್ತು ದೈಹಿಕ ಹಿಂಸಾಚಾರಗಳು ಹೆಚ್ಚಾಗಿ ಮನೆಗಳು, ಕೆಲಸದ ಸ್ಥಳಗಳು ಹಾಗೂ ಇತರ ಖಾಸಗಿ ಜಾಗಗಳಲ್ಲೇ ನಡೆಯುತ್ತವೆ. ಕೇವಲ ಸಾರ್ವಜನಿಕರ ಕಣ್ಣಿಗೆ ಕಾಣದ ಜಾಗದಲ್ಲಿ ನಡೆದ ತಕ್ಷಣಕ್ಕೆ ಒಂದು ಅಪರಾಧವು ಅಪರಾಧವಲ್ಲದೇ ಹೋಗುವುದಿಲ್ಲ” ಎಂದು ಹೇಳಿದ್ದಾರೆ.

“ಈ ತೀರ್ಪು ನಾಗರಿಕ ಹಕ್ಕುಗಳ ರಕ್ಷಣೆ ಕಾಯ್ದೆ, 1955ರ ಆಶಯವನ್ನು ಕಡೆಗಣಿಸಿದಂತೆ ತೋರುತ್ತದೆ. ಈ ಕಾಯ್ದೆಯು ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯಿಂದ ಉಂಟಾಗುವ ಎಲ್ಲಾ ರೀತಿಯ ತಾರತಮ್ಯಗಳನ್ನು ಅಪರಾಧ ಎಂದು ಪರಿಗಣಿಸಿದೆ. ಜಾತಿ ದೌರ್ಜನ್ಯದ ವಿರುದ್ಧದ ಹೋರಾಟಕ್ಕೆ, ದೈನಂದಿನ ಜೀವನದಲ್ಲಿ ಜಾತಿಯ ಪ್ರಭಾವ ಮತ್ತು ಅಧಿಕಾರವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಗುರುತಿಸುವುದು ಅಗತ್ಯವಾಗಿದೆ. ಪ್ರಮುಖವಾಗಿ ಸಂತ್ರಸ್ತರು ಅತ್ಯಂತ ಅಸಹಾಯಕರಾಗಿ ಮತ್ತು ಒಂಟಿಯಾಗಿರುವ ಖಾಸಗಿ ಜಾಗಗಳಲ್ಲೂ ಇದು ಹೇಗೆ ನಡೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ದೇಶದಾದ್ಯಂತ ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ, ಕಾನೂನಿನ ವ್ಯಾಖ್ಯಾನಗಳು ಸಂವಿಧಾನಿಕ ರಕ್ಷಣೆಗಳನ್ನು ಹಾಗೂ ಘನತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಹೋರಾಟವನ್ನು ಬಲಪಡಿಸಬೇಕೇ ಹೊರತು, ಅವುಗಳನ್ನು ಸಂಕುಚಿತಗೊಳಿಸಬಾರದು” ಎಂದಿದ್ದಾರೆ.

ಎಸ್‌ಸಿ/ಎಸ್‌ಟಿ ಕಾಯ್ದೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ತೀರ್ಪು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿರುವುದು ಇದೇ ಮೊದಲೇನಲ್ಲ. 2018ರಲ್ಲಿ ಇದೇ ಕಾಯ್ದೆಯಡಿಯಲ್ಲಿದ್ದ ಕಠಿಣ ಬಂಧನ ನಿಯಮಗಳನ್ನು ನ್ಯಾಯಾಲಯವು ಸಡಿಲಗೊಳಿಸಿದಾಗ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ಮತ್ತು ‘ಭಾರತ್ ಬಂದ್’ ನಡೆದಿದ್ದವು. ಈ ಸಂಘರ್ಷದಲ್ಲಿ ಹಲವು ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡಿದ್ದರು. ಆ ನಂತರ, ಪರಿಸ್ಥಿತಿ ತಿಳಿಗೊಳಿಸಲು ಸಂಸತ್ತು ಮಧ್ಯಪ್ರವೇಶಿಸಿ ಕಾನೂನು ತಿದ್ದುಪಡಿಯ ಮೂಲಕ ಕಾಯ್ದೆಯ ಮೂಲ ನಿಯಮಗಳನ್ನು ಮರುಸ್ಥಾಪಿಸಿತ್ತು. ಆ ಸಂದರ್ಭದಲ್ಲೂ ಸಿಪಿಐ(ಎಂ) ಪಕ್ಷವು ಸುಪ್ರೀಂ ಕೋರ್ಟ್ ತೀರ್ಪನ್ನು ‘ಹಿನ್ನಡೆ’ ಎಂದು ಕರೆದು, ತಕ್ಷಣವೇ ಮರುಪರಿಶೀಲನಾ ಅರ್ಜಿ ಸಲ್ಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಸದ್ಯದ 2026ರ ಈ ಹೊಸ ತೀರ್ಪನ್ನು ಸಹ, ಕಾಯ್ದೆಯ ರಕ್ಷಣಾತ್ಮಕ ನಿಯಮಗಳ ವ್ಯಾಪ್ತಿಯನ್ನು ಕುಗ್ಗಿಸುತ್ತಾ ಬರುತ್ತಿರುವ ನ್ಯಾಯಾಂಗದ ಸರಣಿ ಧೋರಣೆಯ ಒಂದು ಭಾಗವಾಗಿ ವಿಮರ್ಶಕರು ನೋಡುತ್ತಿದ್ದಾರೆ.

ದಲಿತ ಮತ್ತು ಬಹುಜನ ಹಕ್ಕುಗಳ ಸಂಘಟನೆಗಳು ನ್ಯಾಯಾಲಯವು ಕಡೆಗಣಿಸಿರುವ ಒಂದು ಪ್ರಮುಖ ವಾಸ್ತವಿಕ ಪರಿಸ್ಥಿತಿಯನ್ನು ಎತ್ತಿ ತೋರಿಸಿವೆ. ಅದೇನೆಂದರೆ, ಜಾತಿ ಆಧಾರಿತ ಅವಮಾನಗಳು ಹೆಚ್ಚಾಗಿ ಸಾರ್ವಜನಿಕರ ಕಣ್ಣಿಗೆ ಬೀಳದ ಜಾಗಗಳಲ್ಲಿ, ಅಂದರೆ ಮನೆಗಳ ಒಳಗೆ, ಕೆಲಸದ ಸ್ಥಳಗಳಲ್ಲಿ, ಶಾಲೆಗಳಲ್ಲಿ ಮತ್ತು ಕುಟುಂಬಗಳ ಮಧ್ಯೆಯೇ ನಡೆಯುತ್ತವೆ. ಇಂತಹ ದೈನಂದಿನ ಜಾತಿ ತಾರತಮ್ಯದ ಸಂದರ್ಭಗಳಲ್ಲಿ, ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯಿಸಲು ಒಬ್ಬ ಸ್ವತಂತ್ರ ಸಾರ್ವಜನಿಕ ಸಾಕ್ಷಿ ಇರಲೇಬೇಕು ಎಂಬ ನಿಯಮವನ್ನು ಪಾಲಿಸುವುದು ಅಸಾಧ್ಯದ ಮಾತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ತೀರ್ಪು ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಸರಿಯಾಗಿದ್ದರೂ ಸಹ, ಖಾಸಗಿ ಜಾಗಗಳಲ್ಲಿ ದೌರ್ಜನ್ಯ ಎಸಗುವ ಅಪರಾಧಿಗಳು ಕಾನೂನಿನಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಇದು ದಾರಿ ಮಾಡಿಕೊಡುತ್ತದೆ ಎಂದು ಸಾಮಾಜಿಕ ಹೋರಾಟಗಾರರು ವಾದಿಸುತ್ತಿದ್ದಾರೆ.

en.themooknayak.com ಪ್ರಕಾರ, ಅಂಬೇಡ್ಕರ್‌ವಾದಿ ಹೋರಾಟಗಾರ ರವಿ ಪರ್ಮಾರ್ ತೀರ್ಪಿನ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾ ಹೀಗೆ ಹೇಳಿದ್ದಾರೆ, “ಮೈಲಾರ್ಡ್, ದಲಿತರು ಮತ್ತು ಆದಿವಾಸಿಗಳ ಘನತೆಗೆ ಯಾವುದೇ ಬೆಲೆಯಿಲ್ಲವೇ? ನಾಳೆ ಯಾರಾದರೂ ಮನುವಾದಿ ಒಬ್ಬ ದಲಿತ ವ್ಯಕ್ತಿಯನ್ನು ಬಲವಂತವಾಗಿ ಅಪಹರಿಸಿ, ತನ್ನ ಖಾಸಗಿ ಮನೆಗೆ ಕರೆದೊಯ್ದು ಜಾತಿ ನಿಂದನೆ ಪದಗಳಿಂದ ಅವಮಾನಿಸಿದರೆ, ಅದನ್ನು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲವೇ? ಇದು ನಿಜಕ್ಕೂ ಆಘಾತಕಾರಿ! ಕೊಲಿಜಿಯಂ ವ್ಯವಸ್ಥೆ ಇರುವವರೆಗೂ ದಲಿತರು ಮತ್ತು ಆದಿವಾಸಿಗಳ ಹಕ್ಕುಗಳ ಮೇಲಿನ ಇಂತಹ ದಾಳಿಗಳು ನಡೆಯುತ್ತಲೇ ಇರುತ್ತವೆ ಎಂಬುದು ಖಚಿತ.”

ನ್ಯಾಯಾಂಗದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಹಿಂದುಳಿದ ವರ್ಗಗಳ (ಒಬಿಸಿ) ಪ್ರಾತಿನಿಧ್ಯ ಕಡಿಮೆ ಇರಲು ಈ ಕೊಲಿಜಿಯಂ ಪದ್ಧತಿಯೇ ಕಾರಣ ಎಂದು ರವಿ ಪರ್ಮಾರ್ ಅವರಂತಹ ಅಂಬೇಡ್ಕರ್‌ವಾದಿ ಹೋರಾಟಗಾರರು ವಾದಿಸುತ್ತಾರೆ. ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದ ಕಾರಣ ಉನ್ನತ ನ್ಯಾಯಾಲಯಗಳಲ್ಲಿ ಬಹುಜನ ಸಮುದಾಯದ ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆಯಾಗಿದೆ ಮತ್ತು ಇದರಿಂದಾಗಿಯೇ ಇಂತಹ ತೀರ್ಪುಗಳು ಬರುತ್ತಿವೆ ಎಂಬುದು ಅವರ ಕಳವಳವಾಗಿದೆ.

en.themooknayak.com ಪ್ರಕಾರ, ಜಾತಿ ವಿರೋಧಿ ಹೋರಾಟಗಾರ್ತಿ ರೆಹನಾ ರವೀಂದ್ರನ್ ತಮ್ಮ ಆಕ್ರೋಶವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ, “ಖಾಸಗಿ ಮನೆಯೊಳಗೆ ಕೊಲೆ ನಡೆದರೆ ಅದು ಅಪರಾಧವಲ್ಲ, ಖಾಸಗಿ ಮನೆಯೊಳಗೆ ಅತ್ಯಾಚಾರ ನಡೆದರೆ ಅದು ಅಪರಾಧವಲ್ಲ, ಗಂಡ ಹೆಂಡತಿಯನ್ನು ಖಾಸಗಿ ಮನೆಯೊಳಗೆ ಹೊಡೆದರೆ ಅದು ಅಪರಾಧವಲ್ಲ ಎಂದು ಹೇಳಿದಂತೆ ಈ ತೀರ್ಪು ಕಾಣಿಸುತ್ತಿದೆ. ಈ ಮಾತುಗಳ ಹಿಂದೆ ಇರುವ ಮೂರ್ಖತನ ನಿಮಗೆ ಅರ್ಥವಾಗುತ್ತಿದೆಯೇ? ಪೂರ್ವಾಗ್ರಹ ಪೀಡಿತ ಜಾತಿವಾದಿ ಮನಸ್ಸುಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಕಾನೂನು ರಕ್ಷಣೆಯನ್ನು ದುರ್ಬಲಗೊಳಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲವು.”

ಮುಂದುವರಿದು, “ಇತರ ಸಂಸ್ಥೆಗಳು ಖಾಸಗಿ ವಲಯಗಳಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲಿನ ಅವಮಾನ ಮತ್ತು ಹಿಂಸಾಚಾರವನ್ನು ಮಾನ್ಯ ಮಾಡುವುದನ್ನು ತಡೆಯಲು, ಸಂಸತ್ತು ತಕ್ಷಣವೇ ದೌರ್ಜನ್ಯ ತಡೆ ಕಾಯ್ದೆಗೆ ತಿದ್ದುಪಡಿ ತಂದು ‘ಖಾಸಗಿ’ ಜಾಗವನ್ನೂ ಇದರ ವ್ಯಾಪ್ತಿಗೆ ಸೇರಿಸಬೇಕು. ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳನ್ನು ಅತ್ಯಂತ ಗಂಭೀರತೆ, ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಯಾವುದೇ ಸರಿಯಾದ ಅಧ್ಯಯನ ಮತ್ತು ಸಂಶೋಧನೆ ಇಲ್ಲದೆ ಜಾತಿ ಹಿಂಸಾಚಾರದ ಬಗ್ಗೆ ಇಂತಹ ನಿರ್ಲಕ್ಷ್ಯದ ಅವಲೋಕನಗಳನ್ನು ಮಾಡುವುದು ಅತ್ಯಂತ ಕಳವಳಕಾರಿ ಪ್ರವೃತ್ತಿಯಾಗಿದೆ” ಎಂದು ಹೇಳಿದ್ದಾರೆ.

en.themooknayak.com ಪ್ರಕಾರ, ಮತ್ತೊಬ್ಬ ಹೋರಾಟಗಾರ ರವಿ ರತನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ, “ಖೈರ್ಲಾಂಜಿ ದೌರ್ಜನ್ಯವು ಎಲ್ಲರ ಸಾರ್ವಜನಿಕ ವೀಕ್ಷಣೆಯ ಮುಂದೆಯೇ ನಡೆದಿತ್ತು. ಸಂತ್ರಸ್ತೆ ಮತ್ತು ಆಕೆಯ ಮಗಳನ್ನು ಅತ್ಯಾಚಾರ ಮಾಡಿ, ಜಾತಿ ನಿಂದನೆ ಪದಗಳನ್ನು ಬಳಸಿ ನಗ್ನವಾಗಿ ಮೆರವಣಿಗೆ ನಡೆಸಿ ಕೊಲ್ಲಲಾಗಿತ್ತು. ಆಕೆಯ ಅಂಧ ಮಗ ಮತ್ತು ಮತ್ತೊಬ್ಬ ಯುವಕನನ್ನು ಹಾಡಹಗಲೇ ಕೊಲೆ ಮಾಡಲಾಗಿತ್ತು. ಆದರೆ, ಈ ಕೊಲೆಗಳು ಪ್ರತಿಕಾರ ತೀರಿಸಿಕೊಳ್ಳುವ ಉದ್ದೇಶದಿಂದ ನಡೆದಿವೆಯೇ ಹೊರತು ಜಾತಿ ಕಾರಣದಿಂದಲ್ಲ ಎಂದು ಹೇಳಿದ ನ್ಯಾಯಾಲಯವು, ಈ ಪ್ರಕರಣಕ್ಕೆ ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯಿಸುವುದಿಲ್ಲ ಎಂದು ತೀರ್ಪು ನೀಡಿತ್ತು.”

ಪ್ರಕರಣದ ಹಿನ್ನೆಲೆ : ಸುಪ್ರೀಂ ಕೋರ್ಟ್ ಆಗಸ್ಟ್ 22, 2024ರ ದೆಹಲಿ ಹೈಕೋರ್ಟ್ ಆದೇಶವನ್ನು ಮತ್ತು ನವೆಂಬರ್ 26 ಹಾಗೂ 30, 2022ರ ವಿಚಾರಣಾ ನ್ಯಾಯಾಲಯದ ಆದೇಶಗಳನ್ನು ರದ್ದುಗೊಳಿಸಿದೆ. ಕೀರ್ತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಸಂಖ್ಯೆ 42/2021 ಮತ್ತು ಎಲ್ಲಾ ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆ ಹಾಗೂ ಐಪಿಸಿ ಅಡಿಯಲ್ಲಿ ಸಲ್ಲಿಸಲಾಗಿದ್ದ ಚಾರ್ಜ್‌ಶೀಟ್‌ ಅನ್ನು ಸಂಪೂರ್ಣವಾಗಿ ವಜಾಗೊಳಿಸಿದೆ. ಈ ಮೂಲಕ ಮೇಲ್ಮನವಿಯನ್ನು ಪೂರ್ಣವಾಗಿ ಪುರಸ್ಕರಿಸಿದೆ.

Courtesy : en.themooknayak.com





 



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...