ಎಐಸಿಸಿಟಿಯು ಅಡಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ ಸಂಘಟನೆ ನಡೆಸಿದ ಹೋರಾಟಕ್ಕೆ ಸರ್ಕಾರ ಮಣಿದಿದ್ದು, ಎಲ್ಲಾ 16,000 ಪೌರಕಾರ್ಮಿಕರನ್ನು ಖಾಯಂಗೊಳಿಸಲು ಒಂದೆರಡು ವಾರದೊಳಗೆ ಮಂಜೂರಾತಿ ಅಧಿಸೂಚನೆ ಹೊರಡಿಸುವುದಾಗಿ ಭರವಸೆ ನೀಡಿದೆ ಎಂದು ಎಂ ನಿರ್ಮಲಾರವರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, “ಕಳೆದ ವರ್ಷ ಜುಲೈ ತಿಂಗಳಿನಲ್ಲಿ ನಡೆದ 4 ದಿನಗಳ ಮುಷ್ಕರದಲ್ಲಿ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಲಿಖಿತ ಭರವಸೆ ನೀಡಿದ್ದರು. ಅದನ್ನು ಈಡೇರಿಸುವಂತೆ ಫೆಬ್ರವರಿ 27 ರಿಂದ ಬಿಬಿಎಂಪಿಯ ಕೇಂದ್ರ ಕಚೇರಿ ಮುಂದೆ ಹೋರಾಟ ಆರಂಭಿಸಿದೆವು. ಈಗ ನಮಗೆ ಮುಖ್ಯಮಂತ್ರಿ ಕಾರ್ಯದರ್ಶಿಯವರು ಒಂದು ವಾರದೊಳಗೆ ಅಧಿಸೂಚನೆ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
2/3 The workers unitedly demand for justice! pic.twitter.com/FpVm9h9gC6
— AICCTU Karnataka (@aicctukar) February 27, 2023
ಬಿಬಿಎಂಪಿಯಲ್ಲಿ ಸುಮಾರು 16,000 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಕೇವಲ 3673 ಕಾರ್ಮಿಕರನ್ನು ಮಾತ್ರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಉಳಿದ ಸುಮಾರು 12500 ಪೌರಕಾರ್ಮಿಕರಿಗೆ ಅನ್ಯಾಯವೆಸಗಿದ್ದನ್ನು ಖಂಡಿಸಿದ್ದೆವು. ಇಂದು ಮುಖ್ಯಮಂತ್ರಿಗಳ ಕಾರ್ಯದರ್ಶಿಯವರಾದ ಜಯರಾಮ್ ರೈಪುರ್ ರವರು ಪ್ರತಿಭಟನಾ ನಿರತ ಪೌರಕಾರ್ಮಿಕರನ್ನು ಉದ್ದೇಶಿಸಿ ಮಾತಾನಾಡಿ, ‘ಈಗಾಗಲೇ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಕ್ಕೆ ಸಂಬಂಧಿಸಿದಂತ ಕಡತವು ಮುಖ್ಯಮಂತ್ರಿಗಳ ಪರಿಶೀಲನೆಯಲ್ಲಿದ್ದು, ಇನ್ನೂ ಒಂದೆರೆಡು ದಿನಗಳಲ್ಲಿ ಒಪ್ಪಿಗೆ ಸಿಗುವುದೆಂದು ಮತ್ತು ಒಂದೆರಡು ವಾರದೊಳಗೆ ಮಂಜೂರಾತಿ ಅಧಿಸೂಚನೆ ಹೋರಡಿಸಲಾಗುವುದೆಂದು ಹಾಗೂ ಪ್ರಸ್ತುತ ಚಾಲನೆಯಲ್ಲಿರುವ 3,673 ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದು, ಎಲ್ಲಾ 16000 ಪೌರಕಾರ್ಮಿಕರನ್ನು ಏಕ ಕಾಲಕ್ಕೆ ಖಾಯಂಗೊಳಿಸುವುದಾಗಿ’ ತಿಳಿಸಿದ್ದಾರೆ ಎಂದಿದ್ದಾರೆ.
ಸದ್ಯದ ಭರವಸೆಯಂತೆ ಹೋರಾಟವನ್ನು ಹಿಂಪಡೆಯಲಾಗಿದೆ. ಈಗಿನ ಭರವಸೆಯಂತೆ ಸರ್ಕಾರ ಎಲ್ಲಾ ಪೌರಕಾರ್ಮಿಕರ ಖಾಯಾಮಾತಿಗೆ ಒಂದೆರೆಡು ವಾರದೊಳಗೆ ಮಂಜೂರಾತಿ ಅಧಿಸೂಚನೆ ಹೊರಡಿಸದೆ ಹೋದಲ್ಲಿ ಸಂಘಟನೆಯ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಸರ್ಕಾರ ಮತ್ತು ಬಿಬಿಎಂಪಿಗೆ ಈ ಮೂಲಕ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘ ಅಧ್ಯಕ್ಷರಾದ ನಿರ್ಮಲರವರು ತಿಳಿಸಿದ್ದಾರೆ.
ಪೌರಕಾರ್ಮಿಕರ ಹೋರಾಟಕ್ಕೆ ಜಯ: 16,000 ಪೌರಕಾರ್ಮಿಕರ ಖಾಯಂಗೆ ವಾರದೊಳಗೆ ಮಂಜುರಾತಿ ಅಧಿಸೂಚನೆ ಭರವಸೆ – ಅಪ್ಪಣ್ಣ, @aicctukar ಮುಖಂಡರು. pic.twitter.com/zjdXdt3W7e
— Naanu Gauri (@naanugauri) February 28, 2023
ಇದನ್ನೂ ಓದಿ; ಒಬಿಸಿ ಸಚಿವಾಲಯ, ಜಾತಿಗಣತಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ: ಕಾಂಗ್ರೆಸ್ ನಿರ್ಣಯಗಳಿವು