Homeಮುಖಪುಟಬೆಂಕಿ ಹಚ್ಚಿ ಯುವತಿಯ ಕೊಲೆ; ವಿಡಿಯೋದಲ್ಲಿ ದುಷ್ಕರ್ಮಿಗಳ ಹೆಸರು ಹೇಳಿದರೂ ಆರೋಪಿಗಳ ಬಂಧನವಿಲ್ಲ!

ಬೆಂಕಿ ಹಚ್ಚಿ ಯುವತಿಯ ಕೊಲೆ; ವಿಡಿಯೋದಲ್ಲಿ ದುಷ್ಕರ್ಮಿಗಳ ಹೆಸರು ಹೇಳಿದರೂ ಆರೋಪಿಗಳ ಬಂಧನವಿಲ್ಲ!

ಬಿಹಾರದಲ್ಲೊಂದು ಅಮಾನವೀಯ ಘಟನೆ, ಅನ್ಯಾಯ

- Advertisement -
- Advertisement -

ನಾಲ್ಕು ತಿಂಗಳಲ್ಲಿ ಮದುವೆಯಾಬೇಕಿದ್ದ 20 ವರ್ಷದ ಯುವತಿಯನ್ನು ದುಷ್ಕರ್ಮಿಗಳು ಕಿರುಕುಳ ನೀಡಿ ಸುಟ್ಟು ಹಾಕಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ದೆಸಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಯುವತಿಯು ತನ್ನ ಮೇಲೆ ದೌರ್ಜನ್ಯ ಎಸಗಿದವರು ಸತೀಶ್ ರಾಯ್ ಹಾಗೂ ಚಂದನ್ ಕುಮಾರ್‌ ರಾಯ್ ಎಂದು ಹೇಳಿರುವ ವಿಡಿಯೋ ವೈರಲಾಗಿದ್ದರೂ, ಆರೋಪಿಗಳ ಬಂಧನ ಇದುವರೆಗೂ ನಡೆದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಕಾಶ್ಮೀರಿಗಳ 600 ಹೇಬಿಯಸ್ ಕಾರ್ಪಸ್ ವರ್ಷದಿಂದ ಬಾಕಿ, ಅರ್ನಬ್ ಅರ್ಜಿ ಒಂದೇ ದಿನದಲ್ಲಿ ವಿಚಾರಣೆ; ಅನ್ಯಾಯ!

“ಅವಳಿಗೆ ನಾಲ್ಕು ತಿಂಗಳಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಸತೀಶ್ ಕುಮಾರ್ ರಾಯ್ ಮತ್ತು ಚಂದನ್ ಕುಮಾರ್ ರಾಯ್ ನನ್ನ ಮಗಳನ್ನು ಸುಟ್ಟುಹಾಕಿದರು. ಅವಳು ಕೊನೆಯುಸಿರೆಳೆಯುವ ಮುನ್ನ ವೀಡಿಯೊದಲ್ಲಿ ದುಷ್ಕರ್ಮಿಳ ಹೆಸರು ಹೇಳಿದ್ದಾಳೆ. ಆದರೆ ನಮ್ಮ ಪರವಾಗಿ ಧ್ವನಿ ಎತ್ತುವವರು ಯಾರೂ ಇಲ್ಲ” ಎಂದು ದುಷ್ಕರ್ಮಿಗಳಿಂದ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಗುಲ್ನಾಜ್ ಖತೂನ್ ಅವರ ತಾಯಿ ಹೇಳುತ್ತಾರೆ.

“ಅವರು ಮೂರು ತಿಂಗಳಿನಿಂದ ಅವಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಮತ್ತು ಹಿಂಬಾಲಿಸುತ್ತಿದ್ದರು” ಎಂದು ಅವರು ಹೇಳಿದರೆ, ಸಂತ್ರಸ್ತೆಯ ತಂಗಿ ಗುಲ್ಶನ್ ಪರ್ವೇಜ್ ಆರೋಪಿಗಳ ಹೆಸರುಗಳನ್ನು ಹೇಳುತ್ತಾರೆ.

“ನನ್ನ ತಂಗಿ ಹೋಗಿ ಕಸವನ್ನು ಎಸೆಯುತ್ತಿದ್ದಾಗ ಆರೋಪಿಗಳು ಅವಳಿಗೆ ಕಿರುಕುಳ ನೀಡುತ್ತಿದ್ದರು. ಅಕ್ಟೋಬರ್ 30 ರಂದು ಸಂಜೆ 5 ಗಂಟೆಗೆ ಚಂದನ್ ಕುಮಾರ್ ಮತ್ತು ಸತೀಶ್ ಕುಮಾರ್ ಅವಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು” ಎಂದು ಪಾಟ್ನಾದಲ್ಲಿ ಕೆಲಸ ಮಾಡುತ್ತಿರುವ ಯುವತಿಯ ಸಹೋದರ ಹೇಳುತ್ತಾರೆ.

ಇದನ್ನೂ ಓದಿ: ಅನ್ಯಾಯದ ಈ ಘೋರ ಸಾವು ಯಾವ ಹೆಣ್ಣಿಗೂ ಬರದಿರಲಿ: ಎಚ್.ಎಸ್.ಅನುಪಮ

ಟೈಲರ್‌ ಆಗಿದ್ದ ತನ್ನ ತಾಯಿಗೆ ಸಂತ್ರಸ್ಥೆ ಗುಲ್ನಾಜ್ ಸಹಾಯ ಮಾಡುತ್ತಿದ್ದರು. ಅವರ ಮೇಲೆ ದೌರ್ಜನ್ಯ ನಡೆಸಿ ಕೊಲೆ ಮಾಡಿದ ಆರೋಪಿಗಳ ಹೆಸರನ್ನು ಸಂತ್ರಸ್ತೆ ಯುವತಿ ವಿಡಿಯೋದಲ್ಲಿ ಹೇಳಿದ್ದು, ಅಲ್ಲದೆ ಅವರ ಕುಟುಂಬ ಕೂಡಾ ಸ್ಪಷ್ಟವಾಗಿ ಆರೋಪಿಗಳನ್ನು ಹೆಸರಿಸಿದರೂ ಆರೋಪಿಗಳ ಬಂಧನ ಇನ್ನೂ ಆಗಿಲ್ಲ ಎಂದು ಸಬ್‌ರಂಗ್‌ ವರದಿ ಮಾಡಿದೆ.

ಅಷ್ಟೇ ಅಲ್ಲದೆ ಜಸ್ಟಿಸ್ ಫಾರ್ ಗುಲ್ನಾಝ್ (#JusticeForGulnaz) ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದ್ದು, ಗುಲ್ನಾಜ್ ಅವರ ತಾಯಿ ತಮ್ಮ ಕುಟುಂಬದೊಂದಿಗೆ ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿರುವ ವೀಡಿಯೊಗಳು ವೈರಲ್ ಆಗಿದೆ. ಇಷ್ಟಾಗಿಯೂ ಬಿಹಾರದ ಮರು ಚುನಾಯಿತ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಥವಾ ಬಿಹಾರ ಪೊಲೀಸರಿಂದ ಇನ್ನೂ ಯಾವುದೇ ಹೇಳಿಕೆಗಳು ಹೊರ ಬಂದಿಲ್ಲ.

ಎಬಿಪಿ ನ್ಯೂಸ್ ವರದಿಯ ಪ್ರಕಾರ “ಸತೀಶ್ ಯಾದವ್ ಹಳ್ಳಿಯ ಕುಖ್ಯಾತ ಗೂಂಡಾ ಆಗಿದ್ದು, ಯುವತಿಗೆ ಕಿರುಕುಳ ನಿಡುತ್ತಿದ್ದ. ಯುವತಿಯು ಈ ಬಗ್ಗೆ ದೂರಿದಾಗ ನೀಡಿದಾಗ ಸತೀಶ್ ಮತ್ತು ಅವನ ಇಬ್ಬರು ಸಹಚರರು ಗುಲ್ನಾಜ್ ಅವರನ್ನು ಅವರ ಮನೆಯ ಬಳಿ ಜೀವಂತವಾಗಿ ಸುಟ್ಟುಹಾಕಿದರು” ಎಂದು ಹೇಳಿದೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮೀಸಲಾತಿ ಮಸಲತ್ತು! ನೈಜ ಹಿಂದುಳಿದವರಿಗೆ ಸಾಮಾಜಿಕ ಅನ್ಯಾಯ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...